Professional Documents
Culture Documents
ಅರಿವು-ಅರಿವಿನ ಮಾರಿತಂದೆ
ಅರಿವು-ಅರಿವಿನ ಮಾರಿತಂದೆ
ಕಲ್ಲು ಕಲ್ಲು ತಾಕಿದಲ್ಲಿ ಕಿಚ್ಚಿನ ಕಿಡಿಯಲ್ಲದೆ, ಹೆಂಟೆ ಶಿಲೆ ಹೋರಿದಲ್ಲಿವುಂಟೆ? ಅರಿದವನಲ್ಲಿ ಒಡಗೂಡುವ ಸುಖವಲ್ಲದೆ,
ಬರಿಯನಲ್ಲಿ, ಅರಿವು ಹೀನನಲ್ಲಿ, ಅರಿವಿನ ಕುರುಹ ಮರೆದಾಡುವನಲ್ಲಿ, ಸುರೆಯ ಮಡಕೆಯ ಪೂಜಿಸಿ ಕುಡಿವವನಂತಾಗಬೇಡ.
ಬರಿಯ ವಾಚಾಸಿದ್ಧಿಯಲ್ಲಿ ಅರಿದೆಹೆನೆಂದು ಅವ ಕೊಟ್ಟರಿವಿನ ಕುರುಹ ಮರೆಯಬೇಡ. ಆ ಮರೆಯಲ್ಲಿ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ ಅದೆ.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ಮಲಯಜದ ಮಧ್ಯದಲ್ಲಿ ವಂಶ ಪುದಿದಿರೆ ಮುಟ್ಟದು ಗಂಧ ಅದೇಕೆ? ಮಧ್ಯದ ದ್ವಾರದ ಲಕ್ಷಣದಿಂದ, ಪಾದಪದ
ಜಾತಿಬ್ಥಿನ್ನದಿಂದ. ಆ ತೆರನನರಿದಲ್ಲಿ ಇದಿರಿಟ್ಟು ಕುರುಹು ಬ್ಥಿನ್ನವಾಯಿತ್ತು. ಆತ್ಮಂಗೆ ಅರಿವು ಸೂಜಿಯ ಮೊನೆಯಂತೆ ಕುರುಹು
ಹಿಂಗಿದ ದ್ವಾರದಂತೆ ಉಭಯವ ಭೇದಿಸಿ ಆ ದ್ವಾರದಲ್ಲಿ ಎಯ್ದುವ ನೂಲು ಮುಂದಳ ಹರಿಯ ಮುಚ್ಚುವಂತೆ ಕರುಹಿನ ಬ್ಥಿನ್ನ
ನಾಮನಷ್ಟವಾಗುತ್ತದೆ, ನಿಜತತ್ವದ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ,
--------------
ಅರಿವಿನ ಮಾರಿತಂದೆ
×
ಅರಿವಿನ ಮಾರಿತಂದೆ
ಆದಿ ಮಧ್ಯ ಅವಸಾನವರಿಯಬೇಕೆಂಬರು, ಆದಿಯಲ್ಲಿ ನಿಂದು, ಮಧ್ಯದಲ್ಲಿ ಕಂಡು, ಅವಸಾನದಲ್ಲಿ ಅರಿದು ಇರಬೇಕೆಂಬರು.
ಅರಿವುದು ಒಂದೊ ಮೂರೊ ಎಂದಲ್ಲಿ ನಿಂದಿತ್ತು. ನಿಂದುದ ಕಳೆದು ಸಂದ ಹರಿ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ಹಾವು ಹುಲಿ ಕಳ್ಳರ ಭಯವೆಂದು ಹೇಳಿದವರ ಮೇಲೆ ನೋವುಂಟೆ? ನೋವಾದಡಾಗಲಿ, ಇದರಿಂದ ಎನಗೆ ಕೇಡಿಲ್ಲ. ಕಂಡು
ಸುಮ್ಮನಿದ್ದಡೆ, ಆ ಗುರುವಿನ ಸುಖದುಃಖ ಎನ್ನದಾಗಿ, ಸಮಯಕ್ಕಂಜಿದಡೆ ಎನ್ನ ಮಾಡುವ ಮಾಟ ಎನ್ನ ಕೇಡು, ಎನ್ನ ಅರಿವು
ಮರವೆಯಲ್ಲಿದ್ದಡೆ, ಭವದುಃಖಕ್ಕೆ ಬೀಜ. ಎನ್ನ ಕೈಯಲ್ಲಿ ಎನ್ನಂಗವ ತೊಳೆಯಬೇಕಲ್ಲದೆ ಅನ್ಯರಿಗೆ ಹೇಳಲೇಕಯ್ಯಾ? ಇಂತೀ
ಮೂರರೊದಗ ನಾ ಮಾಡಿ ಹಾನಿಯ ಪಡೆವುದಕ್ಕೇನು? ಅಂದಿಗೇನಾದಡಾಗಲಿ ಇಂದಿಗೆ ಶುದ್ಧ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ಕಲ್ಲು ಮರ ಮಣ್ಣಿನ ಮರೆಯಲ್ಲಿ ಪೂಜಿಸಿಕೊಂಬುದು ವಸ್ತುವೇರಿ ತನ್ನ ಮನಸ್ಸಿನ ಗೊತ್ತಲ್ಲದೆ. ಅಲ್ಲಿಪ್ಪುದನರಿವ ಅರಿವು ತಾನೆ
ನಿಜವಸ್ತುವಾಗಿ ಬೆಳಗುತ್ತದೆ ಸದಾಶಿವಮೂರ್ತಿಲಿಂಗವೆಯಾಗಿ.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ಅಂಬರದಲ್ಲಿ ತೋರುವ ಚಾಪದ ಬಹುವರ್ಣದ ಸಂಭ್ರಮ ಕುಂಬ್ಥಿನಿಯ ಜಲದಲ್ಲಿ ತೋರುತ್ತಿರೆ ಉಭಯದಲ್ಲಿಯೂ ಬಯಲು. ಆ
ರಂಜನೆಯಂತೆ ಚಿತ್ತದ ಕಲೆ ಚಿತ್ಶಕ್ತಿಯ ಅರಿವು ಮತ್ರ್ಯರಿಗೆ ಅಗೋಚರ. ಚಿತ್ತಜನ ಬಿಲ್ಲನೆತ್ತುವಾತ ಅನಿತ್ಯದ
ಗೊತ್ತಿನಲೈದಾನೆ. ನಿತ್ಯದ ಗೊತ್ತ ಮುಟ್ಟಿ, ಉಭಯದ ಗೊತ್ತ ಬಚ್ಚಬಯಲಾಯಿತ್ತು. ಬಯಲ ಬೆಳಗಿನಲ್ಲಿ ಹೊಳಹುದೋರುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ಮಣ್ಣಿನೊಳಗೆ ಚಿನ್ನ ಹುಟ್ಟಿ ಮಣ್ಣ ಬಿಟ್ಟಂತಿರಬೇಕು, ಕಲ್ಲಿನೊಳಗೆ ಕಾಂತಿ ಹುಟ್ಟಿ [ಕಲ್ಲ] ಬಿಟ್ಟಂತಿರಬೇಕು, ಕ್ರೀ ಭಾವದಲ್ಲಿ ಅರಿವು
ನೆಲೆಗೊಂಡು. ಸಾಳಿಸಸಿಯ ತುದಿಯಲ್ಲಿ ತುಷ ಮೇಲುಗಳೆದು ನಿಂದಂತೆ, ಕ್ರೀ ನಿಂದು ಅರಿವು ತಲೆದೋರಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ದಿನದಿನಕ್ಕೆ ಫಲರಸ ಬಲಿವಂತೆ ಮಾಡುವ ಕ್ರೀ ಸನ್ನದ್ಧನಾಗಿ, ಅರಿವ ಅರಿವು ಫಲರಸ ಬಲಿದು ಫಳವಾದಂತೆ ಕ್ರೀ ಜ್ಞಾನದಲ್ಲಿ
ನಿಂದು, ಜ್ಞಾನ ಕ್ರೀಯನವಗವಿಸಿದಲ್ಲಿ, ಉಭಯನಾಮ ನಷ್ಟವಾಯಿತ್ತು, ಸದಾಶಿವಮೂರ್ತಿಲಿಂಗವನರಿತಲ್ಲಿ.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ಹೃದಯದಲ್ಲಿ ತೋರುವ ಅರಿವು ತನ್ಮಯವಾಗಿ, ಇದಿರಿಟ್ಟ ಭಾವಕ್ಕೆ ನೆಲೆಗೊಂಡು, ಭಾವ ತುಂಬಿ ಕಂಗಳ ಮಧ್ಯದಲ್ಲಿ ಹಿಂಗದೆ
ನಿಶ್ಚೈಸಿ, ಅನಿಮಿಷನಂಗದಂತೆ, ಕೂರ್ಮನ ಸ್ನೇಹದಂತೆ, ಅಂಬು ಅಂಬುಜದಂತೆ, ಉಭಯ ಸಂಗದಲ್ಲಿ ನಿಸ್ಸಂಗನ ಬೆಳಗು
ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ಅಸಿಯ ಮೊನೆಯು ಮುರಿದಡೆ ಮಸೆದಡೆ ಮೊನೆಯಾಗದೆ ಅಯ್ಯಾ? ಅಸು ಮರೆದಡೆ ಆತ್ಮನನರಿದಡೆ ಕೇಡುಂಟೆ ಅಯ್ಯಾ?
ಮರೆವುದು ಅರಿವುದು ಎರಡುಳ್ಳನ್ನಕ್ಕ, ಮರೆಯದೆ ಪೂಜಿಸು ಸದಾಶಿವಮೂರ್ತಿಲಿಂಗವ.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ಬೇರಿಗೆ ನೀರನೆರೆದಲ್ಲಿ ಆ ಗಿಡುವಿಗೆ ಕಡೆ ನಡು ಮೊದಲೆನ್ನದೆ ಸರ್ವಾಂಗವ ವೇಧಿಸಿ ಸಂಪನ್ನಿಕೆಯ ದೃಕ್ಕಿಂಗೆ ತೋರುವಂತೆ
ಚಿತ್ತುವಿನ ಎರಕ ನಿಜತತ್ವದ ಕುರುಹಿನಲ್ಲಿ ಪರಿಪೂರ್ಣವಾಗಿ ಸಂಪದ ತೋರುತ್ತದೆ. ಕುರಿತ ಕುರುಹಿನ ಮರೆಯಲ್ಲಿ ಅರಿವು
ನಿಂದು ಕುರುಹು ನಿಷ್ಪತ್ತಿಯಾಗುತ್ತದೆ ಎಂಬ ಸಂದೇಹ ನಿಂದಿತ್ತು. ಎಂಬುದನರಿತಾಗ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ಬೇರಿಗೆ ನೀರನೆರೆದಲ್ಲಿ
ಆ ಗಿಡುವಿಗೆ ಕಡೆ ನಡು ಮೊದಲೆನ್ನದೆ
ಸರ್ವಾಂಗವ ವೇಧಿಸಿ ಸಂಪನ್ನಿಕೆಯ ದೃಕ್ಕಿಂಗೆ ತೋರುವಂತೆ
ಚಿತ್ತುವಿನ ಎರಕ ನಿಜತತ್ವದ ಕುರುಹಿನಲ್ಲಿ ಪರಿಪೂರ್ಣವಾಗಿ ಸಂಪದ ತೋರುತ್ತದೆ.
ಕುರಿತ ಕುರುಹಿನ ಮರೆಯಲ್ಲಿ ಅರಿವು ನಿಂದು
ಕುರುಹು ನಿಷ್ಪತ್ತಿಯಾಗುತ್ತದೆ ಎಂಬ ಸಂದೇಹ ನಿಂದಿತ್ತು.
ಎಂಬುದನರಿತಾಗ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ಪಂಚತತ್ವದಲ್ಲಿದ್ದು ಪರತತ್ವವನರಿಬೇಕು.
ಅದಕ್ಕೆ ದೃಷ್ಟ;
ಪಶುವಿನ ಹೊಟ್ಟೆಯಲ್ಲಿ ಕರುವಿದ್ದಡೆ ಕರೆವುದಕ್ಕೆ ಮನೋಹರವುಂಟೆ ?
ಅದು ಭಿನ್ನಭಾವವಾಗಿ ಇದಿರಿಟ್ಟು ಉಂಡಲ್ಲದೆ ಮೊಲೆ ತೊರೆಯವು.
ಆ ತೆರನನರಿದಲ್ಲಿ ಅರಿವುದಕ್ಕೊಂದು ಕುರುಹು ಬೇಕು.
ಬಲ್ಲಿದ ವೀರನೆಂದಡೂ ಅಲಗಿನ ಮೊನೆಯಿಲ್ಲದೆ ಗೆಲಬಹುದೆ ?
ಆ ಅರಿವ ಚಿತ್ತ ಕುರುಹಿನ ಘಟದಲ್ಲಿದ್ದು ಅರಿವುತಿದ್ದಿಹಿತಾದ ಕಾರಣ.
ಇದನರಿತು ಆತ್ಮವಾದವೆಂದು ಎನಲಿಲ್ಲ.
ಸದಾಶಿವಮೂರ್ತಿಲಿಂಗವನರಿವುದಕ್ಕೆ ಇದಿರಿಟ್ಟು ಕ[ಳೆ]ದುಳಿಯಬೇಕು.
ವೇದವ ನುಡಿವಲ್ಲಿ ವಿಪ್ರರು ಮತ್ತಾರೂ ಶೂದ್ರಜಾತಿ ಕೇಳದಂತೆ ನುಡಿವರದೇತಕ್ಕೆ ? ಅದು ಈಚೆಯ ಮಾತು.
ಕಂಡಕಂಡವರೊಡನೆ ಹೇಳಿಕೊಂಡಾಡುತ್ತಿಪ್ಪ ದಿವ್ಯಜ್ಞಾನ ಪರಮಪ್ರಕಾಶವ ಭಂಡರಿಗೇಕೆ ಸದಾಶಿವಮೂರ್ತಿಲಿಂಗದ ಅರಿವು ?
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ಪಾತಾಳದ ನೀರ ಹುರಿ ಸಂಚದಿಂದ ಧರೆಗೆ ತಾಹಂತೆ ಅರಿವು ಆತ್ಮನಲ್ಲಿ ಅಡಗಿದ್ದುದ ತಂದೆಯಲ್ಲಾ! ಕರದಿ ಕುರುಹಾಗಿ,
ಅಡಗಿದೆಯಲ್ಲಾ! ಶೃಂಗಾರದ ನಿಳಯದ ಮುಚ್ಚುಳು ಕೀಲಿನಿಂದ ಕಡೆಗಾಣಿಸಿದಂತೆ ಅಡಗಿದೆಯಲ್ಲಾ! ಕುರುಹು ಬಿನ್ನವಿಲ್ಲದೆ
ಎನ್ನಡಗೂಡು, ಸದಾಶಿವಮೂರ್ತಿಲಿಂಗವೆ.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ಪಾತಾಳದ ನೀರ ಹುರಿ ಸಂಚದಿಂದ ಧರೆಗೆ ತಾಹಂತೆ
ಅರಿವು ಆತ್ಮನಲ್ಲಿ ಅಡಗಿದ್ದುದ ತಂದೆಯಲ್ಲಾ!
ಕರದಿ ಕುರುಹಾಗಿ, ಅಡಗಿದೆಯಲ್ಲಾ!
ಶೃಂಗಾರದ ನಿಳಯದ ಮುಚ್ಚುಳು
ಕೀಲಿನಿಂದ ಕಡೆಗಾಣಿಸಿದಂತೆ ಅಡಗಿದೆಯಲ್ಲಾ!
ಕುರುಹು ಬಿನ್ನವಿಲ್ಲದೆ ಎನ್ನಡಗೂಡು, ಸದಾಶಿವಮೂರ್ತಿಲಿಂಗವೆ.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ವೇದವೇದಾಂತಂಗಳಿಂದ ಸಿದ್ಧಸಿದ್ಧಾಂತಂಗಳಿಂದ
ಎಲ್ಲಿ ನೋಡಿದಡೂ ವಿಚಾರವೊಂದೆ ಭೇದ.
ಅರಿದಲ್ಲಿ ಮಲಕ್ಕೆ ಹೊರಗು, ಮರೆದಲ್ಲಿ ಮಲಕ್ಕೆ ಒಳಗು.
ಅರಿವು ಮರವೆ ನಿಂದಲ್ಲಿ ಸದಾಶಿವಮೂರ್ತಿಲಿಂಗದ ಬೆಳಗು.
ಧರೆಯ ಹಾವು ಆಕಾಶದೊಳಗಳ ಕಪ್ಪೆ ಒಳಗೂಡಿ ಒರುಮೆಯಾಗಿ, ಹಾವು ಗಾರುಡನ ನುಂಗಿ, ಕಪ್ಪೆ ಹಿಡಿವ ಜೋಗಿಯ ನುಂಗಿ,
ಮತ್ತೆ ಕಪ್ಪೆಗೆ ಸರ್ಪಗೆ ವಿರೋಧವಾಗಿ, ಕಪ್ಪೆ ಜೋಗಿಯನುಗುಳಿ, ಸರ್ಪನ ನುಂಗಿತ್ತು. ಕಪ್ಪೆಯ ವಿಷ ತಾಗಿ ಜೋಗಿ ಮತ್ತನಾದ.
ಇಂತೀ ಭೇದದಿಂದ ಅರಿವು ತಾನೆ; ಸದಾಶಿವಮೂರ್ತಿಲಿಂಗವು ತಾನು ತಾನೆ.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ಧರೆಯ ಹಾವು ಆಕಾಶದೊಳಗಳ ಕಪ್ಪೆ ಒಳಗೂಡಿ ಒರುಮೆಯಾಗಿ,
ಹಾವು ಗಾರುಡನ ನುಂಗಿ, ಕಪ್ಪೆ ಹಿಡಿವ ಜೋಗಿಯ ನುಂಗಿ,
ಮತ್ತೆ ಕಪ್ಪೆಗೆ ಸರ್ಪಗೆ ವಿರೋಧವಾಗಿ,
ಕಪ್ಪೆ ಜೋಗಿಯನುಗುಳಿ, ಸರ್ಪನ ನುಂಗಿತ್ತು.
ಕಪ್ಪೆಯ ವಿಷ ತಾಗಿ ಜೋಗಿ ಮತ್ತನಾದ.
ಇಂತೀ ಭೇದದಿಂದ ಅರಿವು ತಾನೆ;
ಸದಾಶಿವಮೂರ್ತಿಲಿಂಗವು ತಾನು ತಾನೆ.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ಅರಿವಾಗ ಆ ತನುವಿನಲ್ಲಿದ್ದೆ ಅರಿಯಿತ್ತು, ಮರೆವಾಗ ಆ ತನುವಿನಲ್ಲಿದ್ದೆ ಮರೆಯಿತ್ತು. ಅರಿವು ಮರವೆ ಎರಡಾಯಿತ್ತು, ಉಭಯವ
ತಾಳಿದ ಘಟವೊಂದಾಯಿತ್ತು, ಇಂತೀ ಭೇದ. ವಿಷಬೇರಿನಂತೆ ಸಂಚಾರಕ್ಕೆ ಒಳಗಾದುದು ವಿಷಮಯವಾಯಿತ್ತು.
ಗೌಪ್ಯಕೊಳಗಾದುದು ಅಮೃತಮಯವಾಯಿತ್ತು . ಇಂತೀ ಸಂಚಾರವುಳ್ಳನ್ನಕ್ಕ ಸಂಚಿತ ಕರ್ಮ, ಸಂಚಾರ ನಿಲೆ ಆತ್ಮ
ನಿರ್ಮುಕ್ತವಾದಲ್ಲಿಯೆ ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ಮಹಾವಾರಿಧಿಯ ತೆರೆಯ ಮಧ್ಯದಲ್ಲಿ ಹುಟ್ಟುವ ಹೊಂದುವ ದಿನಮಣಿಯ ಭೇದದಂತೆ, ತನ್ನ ಚಿತ್ತದ ಅರಿವು ಮರವೆ
ಕುರುಹೆಂದು ಪ್ರಮಾಳಿಸದೆ, ಅರಿವೆಂದು ನಿರ್ಧರಿಸದೆ ಎರಡರ ಭೇದದಲ್ಲಿ ಕಂಡು ನಿಂದ ಉಳುಮೆ ಬೆಳಗುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ,
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ಭಕ್ತಂಗೆ ವಿಶ್ವಾಸ, ಗುರುವಿಂಗೆ ಅರಿವು, ಉಭಯದ ಭೇದವೊಂದೆಯಾದ ಕಾರಣ. ಕಾಯಜೀವದ ತೆರದಂತೆ, ಕಾಯದ
ರುಜೆಯ ಜೀವ ಅನುಭವಿಸುವಂತೆ, ಉಭಯ ನಿರ್ಧಾರವಾಗಿಯಲ್ಲದೆ, ಸದಾಶಿವಮೂರ್ತಿಲಿಂಗವನರಿಯಬಾರದು.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
ಹರಿವ ಸಕಟಿಂಗೆ ಕಡೆಗೀಲು ಕಡೆಯಾದಲ್ಲಿ ಆ ಗಾಲಿ ಅಡಿಯಿಡಬಲ್ಲುದೆ? ಕುರುಹಿನ ಮೂರ್ತಿಯಲ್ಲಿ ಅರಿವು ಒಡಗೂಡದಿರೆ ಆ
ಜ್ಞಾನ ಹಿಂದ ಮರೆದು ಮುಂದಕ್ಕಡಿಯಿಡಲಿಲ್ಲ. ತಡಿಯಲ್ಲಿ ನಿಂದು ಮಡುವಿನಲ್ಲಿದ್ದ ಹರುಗೋಲಕ್ಕೆ ಅಡಿಯಿಟ್ಟು ಅದುವೊಡಗೂಡಿ
ಎಯ್ದುವಂತೆ ಕುರುಹಿನ ತಡಿ, ಮರವೆಯ ಮಡು, ಮಾಡುವ ವರ್ತಕ ಹರುಗೋಲಾಗಿ, ಅರಿಕೆ ಅಂಬಿಗನಾಗಿ ಸಂಸಾರ
ಸಾಗರವ ದಾಂಟಿ, ಆ ತಡಿಯ ಮರೆಯಲದೆ ನಿಜನೆಮ್ಮುಗೆಯ ಕಳೆಬೆಳಗು ಬೆಳಗುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
--------------
ಅರಿವಿನ ಮಾರಿತಂದೆ
×
ಅರಿವಿನ ಮಾರಿತಂದೆ
ಹಾಲು ಬತ್ತಿದ ಹಸುವಿಂಗೆ ಕರುವ ಬಿಟ್ಟಡೆ ಒದೆಯುವುದಲ್ಲದೆ ಉಣಲೀಸುವುದೆ? ಅರಿವು ನಷ್ಟವಾದವ ಕ್ರೀಯ ಬಲ್ಲನೆ?
ಕ್ರೀಯೆಂಬುದೆ ಹಸು, ಅರಿವೆಂಬುದೆ ಹಾಲು, ಬಯಕೆಯೆಂಬುದೆ ಕರು. ಇಂತೀ ತ್ರಿವಿಧವನರಿದಲ್ಲಿ ಸದಾಶಿವಮೂರ್ತಿಲಿಂಗವು
ತಾನೆ.
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
--------------
ಅರಿವಿನ ಮಾರಿತಂದೆ
ಅರಿವಿನ ಮಾರಿತಂದೆ
--------------
ಅರಿವಿನ ಮಾರಿತಂದೆ