Professional Documents
Culture Documents
Basic Bible Doctrines - Kannada - October, 2021
Basic Bible Doctrines - Kannada - October, 2021
Basic Bible Doctrines - Kannada - October, 2021
ಸತ್ಯ ವೇದಸಿದ್ಧಾಂತಗಳು
ಭಾಗ - 1
ಪಾಠಗಳು
ಆರ್. ಇ. ಹಾರ್ಲೋ
ಅನುವಾದ / ಭಾಷಾಂತರ :
ಸಹೋ. ಸೈಮನ್ ಎಸ್
ಪ್ರಕಾಶಕರು
ಎಮ್ಮಾಹುಸ್ ಅಂಚೆ ತೆರಪಿನ ಶಾಲೆ
1
ಪರಿಷ್ಕ ರಿಸಲ್ಪ ಟ್ಟ ದ್ದು ೨೦೦೫ (ಎಕೆ ೦೫), ೧ ಘಟಕ
ಪರಿಷ್ಕ ರಿಸಲ್ಪ ಟ್ಟ ದ್ದು ೨೦೦೮ (ಎಕೆ ೦೮), ೧ ಘಟಕ
ಮರುಮುದ್ರಣ ೨೦೧೨ (ಎಕೆ ೦೮), ೧ ಘಟಕ
ಮರುಮುದ್ರಣ ೨೦೧೫ (ಎಕೆ ೦೮), ೧ ಘಟಕ
ಪಿ ಎಸ್ ಬಿ ಎನ್ ೯೭೮ -೦-೯೪೦೨೯೩-೨೮-೧
ಸಂಕೇಥ ಎಚ್ ಎಸ್ ಡಬ್ಲು ö್ಯ
ಕೃತಿಸ್ವಾಮ್ಯ ೧೯೫೭, ೧೯೭೨, ೨೦೦೫, ೨೦೦೮, ಇಸಿಎಸ್ ಮಿನಿಸ್ಟೀಸ್
ಈ ಎಲ್ಲಾ ವಾಕ್ಯ ಭಾಗಗಳನ್ನು (ಸೂಚಿಸಲ್ಪ ಟ್ಟಿರುವುದಾದದರೆ ಹೊರತು) ನ್ಯೂ ಕಿಂಗ್ ಜೇಮ್ಸ್ ವರ್ಷನ್
ನಿಂದ ತೆಗೆದುಕೊಳ್ಳ ಲಾಗಿದೆ. ಕೃತಿಸ್ವಾಮ್ಯ ೧೯೭೯. ೧೯೮೦, ೧೯೮೨ ಥಾಮಸ್ ನೆಲ್ ಸನ್
ಅಪ್ಪ ಣೆಯಿಂದ ಉಪಯೋಗಿಸಲ್ಪ ಟ್ಟಿದೆ. ಎಲ್ಲಾ ಹಕ್ಕು ಗಳನ್ನು ಕಾಯ್ದಿರಿಸಲಾಗಿದೆ.
ವಿದ್ಯಾರ್ಥಿಗೆ ಸೂಚನೆಗಳು
ಈ ಎಮ್ಮಾಹು ಕೋರ್ಸ್,ಸತ್ಯ ವೇದವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳು ವ ಮತ್ತು ಅದು
ನಿಮ್ಮ ಜೀವಿತಕ್ಕೆ ಹೇಗೆ ಅನ್ವ ಯಿಸುತ್ತದೆ ಎಂಬುದರ ಮೂಲಕ ನೀವು ದೇವರನ್ನು ತಿಳಿಯಲು
ಸಹಾಯವಾಗುವಂತೆ ರೂಪುಗೊಳಿಸಲಾಗಿದೆ ಹೇಗೂ, ಈ ಕೋರ್ಸ್ ಸತ್ಯ ವೇದದ ಸ್ಥಾನವನ್ನು
ಪಡೆದುಕೊಳ್ಳ ಲು ಸಾಧ್ಯ ವಿಲ್ಲ . ಸತ್ಯ ವೇದವು ಮುಗಿದು ಹೋಗದೇ ಇರವಂಥದ್ದಾಗಿದೆ ಮತ್ತು
ಯಾವ ಕೋರ್ಸ್ ಕೂಡ ಇದರ ಸತ್ಯ ದ ಪೂರ್ಣ ಅರ್ಥವನ್ನು ಕೊಡಲು ಸಾಧ್ಯ ವಿಲ್ಲ . ಈ
ಕೋರ್ಸ್ ಅಧ್ಯ ಯನ ನಿಮ್ಮ ಅಂತಿಮ ಗುರಿಯಾದರೆ, ಅದು ನಿಮ್ಮ ಬೆಳವಣಿಗೆಗೆ
ಅಡ್ಡಿಯಾಗುತ್ತದೆ; ಇದು ನಿಮ್ಮ ಸತ್ಯ ವೇದದ ವೈಯಕ್ತಿಕ ಅಧ್ಯ ಯನಕ್ಕಾಗಿ ಪ್ರೇರೇಪಿಸಿ
2
ಸಜ್ಜು ಗೊಳಿಸಿದರೆ, ಆಗ ಅದು ತನ್ನ ಗುರಿಯನ್ನು ತಲುಪುತ್ತದೆ. ಈ ಕೋರ್ಸ ಬಳಸಿ ಸತ್ಯ ವೇದ
ಅಧ್ಯ ಯನ ಮಾಡುವಾಗ, ಸತ್ಯ ವನ್ನು ನಿಮಗೆ ಪ್ರಬಲವಾಗಿ ಪ್ರಕಟಿಸುವಂತೆ ಪ್ರಾರ್ಥನಾ
ಪೂರ್ವಕವಾಗಿ ದೇವರನ್ನು ಕೇಳಿಕೊಳ್ಳಿರಿ.
ಕೋರ್ಸ್ ವಿಭಾಗಗಳು
ಈ ಕೋರ್ಸ್ನಲ್ಲಿ 3 ವಿಭಾಗಗಳಿವೆ:ಪಾಠಗಳು, ಪರೀಕ್ಷೆಗಳು ಮತ್ತು ಪರೀಕ್ಷೆಯ ಹಾಳೆ.
ಪಾಠಗಳು
ಪ್ರತೀ ಪಾಠವು ಸತ್ಯ ವೇದದ ಸತ್ಯ ಗಳನ್ನು ವಿವರಿಸಲು ಸಹಾಯವಾಗುವಂತೆ ಬರೆಯಲ್ಪ ಟ್ಟಿದೆ.
ಪ್ರತೀ ಪಾಠವನ್ನು ಕನಿಷ್ಠ ಪಕ್ಷ ಎರಡು ಬಾರಿ ಕೂಲಂ ಕುಷವಾಗಿ ಓದಿರಿ- ಅಂದರೆ ಒಮ್ಮೆ
ಸಾಮಾನ್ಯ ಅರ್ಥವನ್ನು ಪಡೆಯಲು, ತದನಂತರ, ಕೊಟ್ಟಿರುವ ಸತ್ಯ ವೇದದ ವಾಕ್ಯ ದ
ಉಲ್ಲೇಖಗಳನ್ನು ಕಂಡುಕೊಳ್ಳ ಲು ನಿಧಾನವಾಗಿ ಓದಬೇಕು. ಅಧ್ಯ ಯನ ಮಾಡಲ್ಪ ಡುತ್ತಿರುವ
ವಚನಗಳಿಗೆ ಅಥವಾ ವಾಕ್ಯ ಭಾಗಗಳಿಗಾಗಿ ನಿಮ್ಮ ಸತ್ಯ ವೇದವನ್ನು ನೀವು ಯಾವಾಗಲೂ
ತೆರೆದಿಟ್ಟು ಕೊಂಡಿರಬೇಕು.ಪರೀಕ್ಷೆಗಳಲ್ಲಿ ಕೆಲವು ಪ್ರಶ್ನೆಗಳು ಸತ್ಯ ವೇದದ ವಚನಗಳನ್ನು
ಆಧರಿಸಿರುವುದರಿಂದ ಉಲ್ಲೇಖಿಸಲ್ಪ ಟ್ಟಿರುವ ಸತ್ಯ ವೇದದ ವಾಕ್ಯ ಭಾಗಗಳನ್ನು ಓದುವದು
ಪ್ರಾಮುಖ್ಯ ವಾಗಿರುತ್ತದೆ.
ಸತ್ಯ ವೇದದ ವಚನವನ್ನು ನೋಡಲು, ಸತ್ಯ ವೇದದಲ್ಲಿನ ವಾಕ್ಯ ಭಾಗಗಳ ಪುಸ್ತಕಗಳು,
ಅಧ್ಯಾಯ ಮತ್ತು ವಚನಗಳ ರೀತಿಯಲ್ಲಿ ಇದೆ ಎಂಬುದನ್ನು ಮನಸ್ಸಿನಲ್ಲಿ
ಇಟ್ಟು ಕೊಳ್ಳ ಬೇಕು.ಉದಾಹರಣೆಗೆ, 2 ಪೇತ್ರ 1:21 ಅಂದರೆ, ಪೇತ್ರನ 2 ನೇ ಪುಸ್ತಕದ, 1 ನೇ
ಅಧ್ಯಾಯದ 21 ನೇ ವಚನ. ಪ್ರತೀ ಸತ್ಯ ವೇದದ ಪ್ರಾರಂಭದಲ್ಲಿ ಪುಸ್ತಕಗಳ ಅನುಕ್ರಮಣಿಕೆ
ಇರುತ್ತದೆ. ಅದರಲ್ಲಿ ಸತ್ಯ ವೇದದ ಪುಸ್ತಕಗಳ ಹೆಸರು ಮತ್ತು ಪ್ರತೀ ಪುಸ್ತಕವು ಪ್ರಾರಂಭವಾಗುವ
ಪುಟ ಸಂಖ್ಯೆ ಇರುತ್ತದೆ.ಅಭ್ಯಾಸಕ್ಕಾಗಿ, 2 ನೇ ಪೇತ್ರ ಪುಸ್ತಕವನ್ನು ಪುಸ್ತಕಗಳ
ಅನುಕ್ರಮಣಿಕೆಯಲ್ಲಿ ನೋಡಿರಿ. ಕೊಟ್ಟಿರುವ ಪುಟ ಸಂಖ್ಯೆಯನ್ನು ತಿರುಗಿಸಿರಿ,
ನಂತರಅಧ್ಯಾಯ ಹಾಗೂ ವಚನವನ್ನು ಹುಡುಕಿಕೊಳ್ಳಿರಿ.
ಪರೀಕ್ಷೆಗಳು
3
ಪ್ರತೀ ಪಾಠದ ಕೊನೆಯಲ್ಲಿ ಕೋರ್ಸ್ ನ ಪಠ್ಯ ಮತ್ತು ಸತ್ಯ ವೇದದ ಅಧ್ಯಾಯಗಳ ಬಗ್ಗೆ ನಿಮ್ಮ
ಜ್ಞಾನದ ಗುಣಮಟ್ಟ ವನ್ನು ಪರಿಶೀಲಿಸಲು ಒಂದು ಪರೀಕ್ಷೆಯಿದೆ. ಪರೀಕ್ಷೆಗಳು ಬಹು ಆಯ್ಕೆ
ಮತ್ತು ಸರಿ, ತಪ್ಪು ವಿಧಾನದಲ್ಲಿದೆ. ಒಂದು ಪಾಠವನ್ನು ಅಧ್ಯ ಯನ ಮಾಡಿದನಂತರ, ಕೋರ್ಸ್
ನ ಕೊನೆಯಲ್ಲಿರುವ ಪರೀಕ್ಷಾ ಹಾಳೆಯಲ್ಲಿ ಆ ಪಾಠದ ನಿಮ್ಮ ಉತ್ತರಗಳನ್ನು ಬರೆಯುವ
ಮೂಲಕ ನಿಮ್ಮ ಪರೀಕ್ಷೆಯನ್ನು ಮುಕ್ತಾಯಮಾಡಿರಿ. ಪ್ರಶ್ನೆಗಳಿಗೆ ಉತ್ತರಿಸಲು ನಿಮಗೆ
ಕಷ್ಟ ವಾದರೆ, ಪಾಠವನ್ನು ಮತ್ತೆ ಓದಿ ಅಥವಾ ಸತ್ಯ ವೇದವನ್ನು ಉಲ್ಲೇಖವಾಗಿ (ಆಧಾರವಾಗಿ)
ಬಳಸಿರಿ.
ಪರೀಕ್ಷಾ ಹಾಳೆ
ಪರೀಕ್ಷೆಗಳನ್ನು ಪೂರ್ಣಗೊಳಿಸಲು ಕೋರ್ಸ್ ನ ಕೊನೆಯಲ್ಲಿ ಸೇರಿಸಿರುವ ಪರೀಕ್ಷಾ
ಹಾಳೆಯನ್ನು ಉಪಯೋಗಿಸಿರಿ. ಒಂದು ಪರೀಕ್ಷೆಯಲ್ಲಿ ಪ್ರಶ್ನಿಸಲು ಸರಿಯಾದ ಉತ್ತರವನ್ನು
ನಿರ್ಥರಿಸಿದಾಗ, ಪರೀಕ್ಷಾ ಹಾಳೆಯಲ್ಲಿ ಅನುಗುಣವಾದ ಅಕ್ಷರವನ್ನು ಭರ್ತಿಮಾಡಿರಿ. ನೀವು
ಎಮ್ಮಾಹು ಕನೆಕ್ಟ ರ್ ರವರ ಸಂಪರ್ಕದಲ್ಲಿದ್ದ ರೆ ಮತ್ತು ಅವರು ವಿಬಿನ್ನ ವಾದ ಪರೀಕ್ಷಾ
ಹಾಳೆಯನ್ನು ಒದಗಿಸುತ್ತಿದ್ದ ರೆ, ದಯವಿಟ್ಟು ಅದನ್ನೇ ಬಳಸಿ.
4
ಬರೆಯಿರಿ!
5
ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಪರೀಕ್ಷಾ ಹಾಳೆಯಲ್ಲಿ ನಮೂದಿಸಿದರೆ, ನಿಮ್ಮ ನ್ನು ಮತ್ತು ನಿಮ್ಮ
ಅಗತ್ಯ ತೆಗಳನ್ನು ಇನ್ನೂ ಹೆಚ್ಚಾಗಿ ತಿಳಿಯಲು ಸಹಾಯವಾಗುತ್ತದೆ. ಸತ್ಯ ವೇದದ, ದೇವರ ಮತ್ತು
ಆತ್ಮೀಕವಾದ ವಿಷಯಗಳ ಬಗ್ಗೆ, ನಿಮಗೆ ಇರಬಹುದಾದ ನಿರ್ದಿಷ್ಟ ಪ್ರಶ್ನೆಗಳನ್ನು ನಮಗೆ
ದಯವಿಟ್ಟು ತಿಳಿಸಿಕೊಡಿರಿ. ನೀವು ನಿಮ್ಮ ವೈಯಕ್ತಿಕ ಪ್ರಾರ್ಥನಾ ಮನವಿಗಳನ್ನು ಸಹ
ಸೇರಿಸಿಕೊಡಬಹುದುಮತ್ತು ನಾವುನಿಮಗಾಗಿಪ್ರಾರ್ಥಿಸುತ್ತೇವೆ.
ನಿಮ್ಮ ಎಮ್ಮಾಹು ಕನೆಕ್ಟ ರ್ಯಾರೆಂಬುದು ನಿಮಗೆ ತಿಳಿದಿದ್ದ ರೆ, ನೇರವಾಗಿ ಅವರಿಗೆ ನಿಮ್ಮ
ಸಂಪೂರ್ಣ ಪರೀಕ್ಷಾ ಹಾಳೆಯನ್ನು ಕೊಡಿರಿ ಅಥವಾ ಇಲ್ಲಿ ಪಟ್ಟಿ ಮಾಡಲಾದ ವಿಳಾಸಕ್ಕೆ
ಮೇಲ್ ಮಾಡಿ (ಇದುಖಾಲಿ ಇದ್ದ ರೆ , ಆಯ್ಕೆ 2 ಕ್ಕೆಹೋಗಿ)
6
ಪರೀಕ್ಷಾಹಾಳೆಯನ್ನು ಮೇಲ್ ಮಾಡಿ
ಎಮ್ಮಾಹು ಅಂತರಾಷ್ಟ್ರೀಯ
ಅಂಚೆಪೆಟ್ಟಿಗೆಸಂಖ್ಯೆ 1028
ಡಬ್ಯು ಕ್, ಐ.ಎ 52004-1028
7
ಅಧ್ಯಾಯ
1
ಸತ್ಯ ವೇದ ಶಾಸ್ತ್ರ:
ಸತ್ಯ ವೇದದ ಅಧ್ಯ ಯನ
-ಭಾಗ 1-
ದೇವರು ತನ್ನ ಕುರಿತಾಗಿ ಮಾಡಿದ ಪ್ರಕಟಣೆಯೇ ಸತ್ಯ ವೇದವು. ತನ್ನ ಕುರಿತಾಗಿ ಸತ್ಯ ವೇದವು
ಏನನ್ನು ಬೋಧಸುತ್ತದೆಯೋ ಅದನ್ನು ಸತ್ಯ ವೇದಶಾಸ್ತ್ರ ಎಂದು ಕರೆಯಲಾಗುತ್ತದೆ.
ಪ್ರಕಟಣೆಯ ಪರಿಕಲ್ಪ ನೆ
ವಿಶ್ವ ದ ಪ್ರಕೃತಿಯನ್ನು ಅರ್ಥಮಾಡಿಕೊಳ್ಳು ವದಕ್ಕೆ ಪ್ರಯತ್ನಿಸುವುದೇ ಮಾನವ
ತತ್ವ ಶಾಸ್ತ್ರವಾಗಿದೆ. ( ಮಾನವ ತತ್ತ್ವ ಶಾಸ್ತ್ರವು ವಿಶ್ವ ದ ಸ್ವ ರೂಪವನ್ನು ಅರ್ಥಮಾಡಿಕೊಳ್ಳು ವ
ಒಂದು ಪ್ರಯತ್ನ ವಾಗಿದೆ.) ಇದು ತನ್ನ ಲ್ಲಿಯೇ ಉದಾತ್ತ ಧ್ಯೇಯವನ್ನು ಹೊಂದಿದ್ದು
ಸೃಷ್ಟಿಕರ್ತನಿಂದ ಪ್ರಕಟಣೆಯನ್ನು ತೆಗೆದು ಹಾಕುವಂತಹ ಸ್ಪ ಷ್ಟ ವಾಗಿ ತಿಳಿಸಿದ
ಉದ್ದೇಶದೊಂದಿಗೆ ಇದು ಪ್ರಾರಂಭವಾಗುತ್ತದೆ. ಈ ಸೃಷ್ಟಿಕರ್ತನಾದ ಪರಮಾತ್ಮ ನಿಗೆ
ಮಾನವರಾದ ನಾವೆಲ್ಲ ರೂ ಜವಾಬ್ದಾರರಾಗಿದ್ದೇವೆ. ಹೀಗೆ ಸ್ವ -ರದ್ದ ತಿಯ ಸಿದ್ಧಾಂತಗಳಾಗಿ
ಪರಿವರ್ತಿತವಾಗುತ್ತದೆ.
ಮನುಷ್ಯ ನು ಸೃಷ್ಟಿಮಾಡಲ್ಪ ಟ್ಟ ಜೀವಿಯಾಗಿದ್ದಾನೆ. ಮತ್ತು ನಮ್ಮ ಸೃಷ್ಟಿಕರ್ತನು
ತನ್ನ ನ್ನು ತಾನು ಪ್ರಕಟಿಸಿಕೊಳ್ಳು ವ ಸಾಮಾರ್ಥ್ಯವನ್ನು ಹೊಂದಿದ್ದಾನೆಂಬ ಪ್ರಮೆಯದೊಂದಿಗೆ
ಪ್ರಾರಂಭಿಸೋಣ. ದೇವರ ಕುರಿತು ಆತನ ಅಲೌಕಿಕ ಶಕ್ತಿಯನ್ನು ಅಲ್ಲ ಗಳೆಯುವ
ವ್ಯಾಖ್ಯಾನವು ನಿಯಮಗಳಲ್ಲಿ ವಿರುದ್ಧ ವಾದುದ್ದಾಗಿರುತ್ತದೆ. ಅಂತಹ ಶಕ್ತಿಯನ್ನು ಆತನು
ಹೊಂದಿಲ್ಲ ದಿದ್ದ ರೆ ಆತನು ದೇವರಾಗಿರುತ್ತಿರಲಿಲ್ಲ . ಆ ವಿಚಾರದ ಮೇಲೆ ಕಟ್ಟು ವದಾದರೆ ನಾವು
ಹೀಗೆ ಊಹಿಸಿಕೊಳ್ಳ ಬಹುದು. ಏನೆಂದರೆ ಮಾನವರಾದ ನಾವು ನಮ್ಮ ಮನಸ್ಸ ನ್ನು ಇತರ
8
ಮನುಷ್ಯ ರಿಗೆ ಅಥವಾ ( (ಮಾನವರಿಗಿಂತಲೂ ಅಲ್ಪ ವಾದವುಗಳಾದ ಪ್ರಾಣಿಗಳಿಗೆ ಸಹ).
ಬಹಿರಂಗ ಪಡಿಸಿಕೊಳ್ಳ ಬಹುದು ಎಂದು. ನಮ್ಮ ಸೃಷ್ಟಿಕರ್ತನು ತಾನು ಬಯಸುವದಾದರೆ
ಮನುಷ್ಯ ನಿಗೆ ತನ್ನ ನ್ನು ಪ್ರಕಟಿಸಿಕೊಳ್ಳ ಬಹುದು. ಆಗ ಉದ್ಭ ವಿಸುವ ಪ್ರಶ್ನೆ ದೇವರು ಯಾಕೆ ಹಾಗೆ
ಬಯಸುತ್ತಾನೆ?
ಉತ್ತರವಾಗಿ ನೋಡುವದಾದರೆ ತನ್ನ ಸೃಷ್ಟಿಗಳು ತನ್ನ ಕುರಿತಾಗಿ ಏನನ್ನು
ತಿಳಿದುಕೊಳ್ಳ ಬೇಕೆಂದು ಬಯಸಿದರೆ ಅವರಿಗೆ ತನ್ನ ಚಿತ್ತವನ್ನು ಖಂಡಿತವಾಗಿ ಪ್ರಕಟಿಸುತ್ತಾನೆ
ಎಂದು ನಾವು ಅಬಿಪ್ರಾಯಪಡಬಹುದು. ಇಲ್ಲ ದಿದ್ದ ರೆ ಆತನಿಗೆ ಅವಿಧೇಯರಾಗುವದಕ್ಕೆ
ಅವರನ್ನು ಹೇಗೆ ಹೊಣೆಗಾರರನ್ನಾಗಿ ಮಾಡಲು ಸಾದ್ಯ ? ಆತನ ವೈಯುಕ್ತಿಕ ಗುಣಸ್ವ ಭಾವದ
ಸಂಬಂಧವಾಗಿನ ಮತ್ತೊಂದು ಕಾರಣ ದೇವರು ತನ್ನ ನ್ನು ಹಾಗೂ ತನ್ನ ಸಂಕಲ್ಪ ಗಳನ್ನು
ಮನುಷ್ಯ ನಿಗೆ ಪ್ರಕಟಿಸಿಕೊಂಡು ಸಂತೋಷಕರವಾಗಿಯೂ, ಪ್ರಯೋಜನಕರವಾಗಿಯೂ
ಇರುವಂತೆ ಸಂಬಂಧಿಸಿಕೊಳ್ಳು ವ ಬಯಕೆ ಇಲ್ಲ ದಿದ್ದ ರೆ ಪ್ರಜ್ಞಾವಂತ ವಂಶವಾಗಿ ಯಾಕೆ
ಸೃಷ್ಟಿಸುತ್ತಿದ್ದ ನು?
ಮುಂದಿನ ತಾರ್ಕಿಕ ಪ್ರಶ್ನೆ ಎಂದರೆ ಸತ್ಯ ವೇದವೆಂದರೆ ತನ್ನ ಕುರಿತಾದ ದೇವರ
ಪ್ರಕಟಣೆಯೇ? ಪವಿತ್ರ ಗ್ರಂಥಗಳೆಂದು ಅನುಯಾಯಿಗಳಿಂದ ಪರಿಗಣಿಸಲ್ಪ ಡುವ ಕೆಲವು
ಪುಸ್ತಕಗಳು (ಕುರಾನ್, ಮರ್ಮನ್ನ ರ ಪುಸ್ತಕದಂತಹ ಪುಸ್ತಕಗಳು). ಒಬ್ಬ ನೇ ಸತ್ಯ ದೇವರಿಂದ
ಬಂದ ಪ್ರಕಟಣೆಯೆಂದು ಪರಿಗಣಿಸಲ್ಪ ಟ್ಟಿವೆ. ಸತ್ಯ ವೇದವು ದೇವರಿಂದಾದ ಏಕೈಕ ಪ್ರಕಟಣೆ
ಎಂದು ಅಂಗೀಕೃತವಾಗಿದೆ ಮತ್ತು ಪುರಾವೆ,ದಾಖಲೆಗಳ ಆಧಾರದ ಮೇಲೆ ಮಾತ್ರ, ಜಗತ್ತಿನಲ್ಲಿ
ಅಸ್ತಿತ್ವ ದಲ್ಲಿರುವ ಇತರ ಯಾವುದೇ ಧಾರ್ಮಿಕ ಪುಸ್ತಕಗಳೊಂದಿಗೆ ಹೋಲಿಕೆ ಮಾಡಲಿಕ್ಕಾಗದ
ರೀತಿಯಲ್ಲಿ ದೇವರಿಂದಾದ ಏಕೈಕ ಪ್ರಕಟಣೆಯಾಗಿದೆ.. (ಈ ವಿಷಯಕ್ಕೆ ಸಂಬಂಧಿಸಿದಂತೆ
ಇಸಿಎಸ್ ನ ದೇವರ ವಾಕ್ಯ ವೇ ಸತ್ಯ ಎಂಬ ಪುಸ್ತಕವು ಉತ್ತಮ ಸಂಪನ್ಮೂ ಲ ಪುಸ್ತಕವಾಗಿದೆ).
ಕೆಲವು ಪುರಾವೆಗಳ ಸಾಲುಗಳನ್ನು ಈಗ ಪರಿಗಣಿಸೋಣ.
9
ವ್ಯ ಕ್ತಿಗಳಿಂದ ಜೀವತದ ವಿವಿಧ ಆಯಾಮಗಳಲ್ಲಿ ಜೀವಿಸಿದ್ದ ರಿಂದ (ಕುರುಬರು, ಅರಸರು,
ಪ್ರಸಂಗಿಗಳು, ರೈತರು, ವೈದ್ಯ ರು, ಯಾಜಕರು ಹಾಗೂ ಇತರರು) ಕ್ರಿ. ಪೂ 1400 ರಿಂದ ಕ್ರಿ. ಶ.
100 ಕಾಲಾವಧಿಯೊಳಗಿನ ಸುಮಾರು 1500 ವರ್ಷಗಳ ಅಂತರದಲ್ಲಿ ಬರೆಯಲ್ಪ ಟ್ಟಿದೆ.
ಇವುಗಳು ಸ್ವ ಭಾವ ಶೈಲಿ ಹಾಗೂ ವಿಷಯಗಳಲ್ಲಿ ಭಿನ್ನ ವಾಗಿದ್ದ ರೂ ಸಹ ಅವೆಲ್ಲ ವೂ
ವಿಸ್ತಾರವಾದ ಒಂದು ವಿಷಯದ ಸುತ್ತಲೂ ಏಕೀಕರಿಸುತ್ತದೆ. ಅದೇನೆಂದರೆ ದೇವರ
ಕುಮಾರನು, ಕರ್ತನಾದ ಯೇಸುಕ್ರಿಸ್ತನು ಮತ್ತು ಆತನು ಪಾಪದಿಂದ ಮಿಮೋಚನೆಗೊಳಿಸಿದ
ಮನುಷ್ಯ ನ ಇತಿಹಾಸ.
ಪುರಾತನ ಚರಿತ್ರೆ
ಸತ್ಯ ವೇದವು ದೈವೀಕ ಪ್ರಕಟಣೆಯಾಗಿದೆಯೆಂದು ಹಕ್ಕಿ ನಿಂದ ಸಾರುವದಕ್ಕೆ
ಬೆಂಬಲಿಸುವ ಮತ್ತೊಂದು ಅಂಶವೇನೆಂದರೆ ಅದೇ ಪುರಾತನ ಚರಿತ್ರೆ. ಪುರಾತನ ಜಗತ್ತಿನ
ವಿಶ್ವಾಸರ್ಹ ಜಾತ್ಯಾತೀತ ಚರಿತ್ರೆಯು ಸತ್ಯ ವೇದದಲ್ಲಿ ದಾಖಲಾಗಿರುವದೆಲ್ಲ ವೂ
ಮಾರ್ಪಡಿಸಲ್ಪ ಡದಂತೆ ಬೆಂಬಲಿಸುತ್ತದೆ. ಪ್ರಾಚೀನ ವಸ್ತು ಶಾಸ್ತ್ರಜ್ಞ ರು ಪುರಾತನ ನಗರಗಳ
ಅವಶೇಷಗಳ ಸುತ್ತಲೂ ಅನ್ವೇಷಣೆ ಮಾಡಿದರು ಹಾಗೂ ಇದರಿಂದ ಪುರಾತನ ಚರಿತ್ರೆಯನ್ನು
ಅರ್ಥಮಾಡಿಕೊಳ್ಳ ಲು ಸಹಾಯಕವಾದ ದಾಖಲೆಗಳನ್ನು ಕಂಡುಹಿಡಿದರು. ಪ್ರಾರಂಭದಲ್ಲಿ ಈ
ಕೆಲವೊಂದು ದಾಖಲೆಗಳು ದೇವರ ವಾಕ್ಯ ದೊಂದಿಗೆ ಸಮ್ಮ ತಿ ಹೊಂದಿರಲಿಲ್ಲ . ಮತ್ತು ಅನೇಕ
ಸಾರಿ ಸತ್ಯ ವೇದ ಸುಳ್ಳೆಂದು ಪುರಾತನ ಚರಿತ್ರಾಕಾರರು ಸರಿಯೆಂದು ಭಾವಿಸಲಾಯಿತು.
ಇತ್ತೀಚಿನ. ವರ್ಷಗಳಲ್ಲಿ ಪ್ರವೃತ್ತಿ, ಆದಾಗ್ಯೂ . ಸಹ ಜಾತ್ಯಾತೀತ ನಡುವೆ ಇತಿಹಾಸಕಾರರು,
ಸತ್ಯ ವೇದವನ್ನು ಚಾರಿತ್ರಿಕವಾಗಿ ನಿಖರವಾದದ್ದೆಂದು ರುಜುವಾತು ಪಡಿಸಿರುತ್ತಾರೆ.
ಅದ್ಭು ತಗಳು
ಸತ್ಯ ವೇದದ ಚಾರಿತ್ರಿಕ ನಿಖರತೆಗೆ ಇರುವ ಅನೇಕ ಆಕ್ಷೇಪಣೆಗಳು, ಅದ್ಭು ತಗಳು
ಅಸಾಧ್ಯ ವೆಂಬ ಪೂರ್ವಾಭಿಪ್ರಾಯದ ಆಲೋಚನೆಗಳ ಮೇಲೆ ಆದಾರಗೊಂಡಿವೆ.
ಹೀಗಿದ್ದ ರೂ, ಪ್ರತಿಯೊಬ್ಬ ಚಿಂತಿನಶೀಲ ವ್ಯ ಕ್ತಿಯೂ ಒಪ್ಪಿಕೊಳ್ಳ ಲೇ ಬೇಕಾದ ಸತ್ಯ ವೆಂದರೆ
ನಿಜವಾದ ದೇವರೊಬ್ಬ ನಿದ್ದಾನೆಂದರೆ ಆತನು ಅಲೌಕಿಕ ರೀತಿಯಲ್ಲಿ ಕಾರ್ಯ
ಮಾಡಬಹುದೆಂದು ನಿರೀಕ್ಷಿಸಲ್ಪ ಡುವದು ಎಂದು ಮಾತ್ರವಲ್ಲ ದೆ ಖಂಡಿತವಾಗಿಯೂ
ಮಾಡುತ್ತಾನೆ.
10
ನೆರವೇರಿದ ಪ್ರವಾದನೆ
ನಾವು ಸತ್ಯ ವೇದವೆಂದು ಕರೆಯುವ ದೇವರವಾಕ್ಯ ದಲ್ಲಿ ದೇವರು ತನ್ನ ನ್ನು ತಾನೇ
ಪ್ರಕಟಿಸಿಕೊಂಡಿದ್ದಾನೆಂಬುದಕ್ಕೆ ಇರುವ ಮತ್ತೊಂದು ಪುರಾವೆಯು ಸತ್ಯ ವೇದದ ನೆರವೇರಿದ
ಪ್ರವಾದನೆಯಲ್ಲ ದೆ, ಯೇಸುಕ್ರಿಸ್ತನ ಆಗಮನಕ್ಕೆ ಶತಮಾನಗಳಿಗೂ ಮುಂಚೆಯೇ ಆತನು
ಯಾವಾಗ, ಎಲ್ಲಿ ಮತ್ತು ಹೇಗೆ ಹುಟ್ಟಿಬರುವನೆಂದೂ ಆತನ ಮರಣ, ಹೂಣಿಡುವಿಕೆ ಹಾಗೂ
ಆತನ ಪುನುರುತ್ಸ್ಥಾನದ ಕುರಿತು ಪ್ರವಾದಿಗಳು ಮುಂತಿಳಿಸಿದರು. ಹಳೇ ಒಡಂಬಡಿಕೆಯಲ್ಲಿ
ಹೇಳಿರುವ ಅನೇಕ ಪ್ರವಾದನೆಗಳು ಹೊಸ ಒಡಂಬಡಿಕೆಯಲ್ಲಿ ನೆರವೇರಿರುವದನ್ನು
ಕಾಣುತ್ತೇವೆ. ದೇವರು ಮಾತ್ರವೇ ಇಂತಹ ಜ್ಞಾನ ತಿಳುವಳಿಕೆಯನ್ನೂ ಶತಮಾನಗಳ
ಮುಂಚೆಯೇ ಒದಗಿಸಲು ಸಾಧ್ಯ . ಅವಿಶ್ವಾಸಿಗಳು ಈ ಗಮನಾರ್ಹ ಪುರಾವೆಗಳ ಕುರಿತಾಗಿ
ಇವುಗಳು ನೆರವೇರಿದ ನಂತರವೇ ಬರೆಯಲ್ಪ ಟ್ಟ ಪ್ರವಾದನೆಗಳು ಎಂದು ಹೇಳುತ್ತಾರೆ. ಆದರೆ
ಎಚ್ಚ ರಿಕೆಯಿಂದ ಅಧ್ಯಾಯನ ಮಾಡಿದರೆ ಇಂತಹ ಹೇಳಿಕೆಗಳು ಅಸರ್ಮಪಕ ಹಾಗೂ ಸುಳ್ಳು
ಹೇಳಿಕೆಗಳೆಂದು ಕಂಡುಬರುತ್ತವೆ.
11
ಜೀವಿತವನ್ನು ಪರಿವರ್ತಿಸುವ ಶಕ್ತಿಯೇ ಸತ್ಯ ವೇದದ ದೈವೀಕ ಮೂಲಕ್ಕೆ
ಮತ್ತೋಂದು ಪುರಾವೆಯಾಗಿದೆ. ಸತ್ಯ ವೇದವು ಅಪರಾಧಿಯೆಂಬ ದೋಷಾರೋಪಣೆಯ
ಭಾವನೆಯಲ್ಲಿ ಮಾತ್ರ ನಮ್ಮ ನ್ನು ಸುಮ್ಮ ನೆ ಬಿಟ್ಟಿದ್ದ ರೆ ನಮಗೆ ಸಂತೋಷ, ಸಮಾಧಾನ
ಇರುತ್ತಿರಲಿಲ್ಲ . ಇದು ಹೇಗಿದ್ದ ರೂ ರಕ್ಷಣೆಯ ಸಂದೇಶಕ್ಕೆ ಸಿದ್ದ ತೆಯಾಗಿತ್ತು . ಇಡೀ
ಪ್ರಪಂಚದಲ್ಲ ಯೇ ಯಾರೊಂದಿಗೂ ಹೋಲಿಸಲ್ಪ ಡದ ಹಾಗೂ ಯಾವುದೇ
ಪುಸ್ತಕದಲ್ಲಿಯೂ ಹೇಳಲ್ಪ ಡದ ಅದ್ಭು ತ ರಕ್ಷಕನ ಕುರಿತು ಸತ್ಯ ವೇದವು ತಿಳಿಸುತ್ತದೆ.
ಮೂಲಭೂತವಾಗಿ, ಎಂದೆಂದಿಗೂ ಅಥವಾ ನಿತ್ಯ ನಿರಂತರಕ್ಕೂ ಜೀವಿಸುವದಕ್ಕಾಗಿ ಮನುಷ್ಯ ನು
ಏನು ಮಾಡಬೇಕೆಂದು ಪ್ರತಿಯೊಂದು ಧಾರ್ಮಿಕ ಪುಸ್ತಕಗಳು ಹೇಳುತ್ತವೆ. ಹಾಗೆಯೇ
ಪ್ರತಿಯೊಬ್ಬ ನೂ, ಪ್ರತಿಯೊಬ್ಬ ಳೂ ಆರಾಧಿಸುವ ದೈವಕ್ಕೆ ಅಥವಾ ದೇವರನ್ನು
ಸಂತೋಷಪಡಿಸುವದಕ್ಕೆ ಏನು ಮಾಡಬೇಕೆಂದು ಸಹ ಹೇಳುತ್ತದೆ. ಆದರೆ ಕ್ರಿಸ್ತನಲ್ಲಿ
ನಂಬಿಕೆಯಿಡುವ ಪ್ರತಿಯೊಬ್ಬ ರಿಗೂ ದೇವರು ಕೃಪೆಯಿಂದ ಕೊಡುವ ನಿತ್ಯ ಜೀವ ಎಂದು
ಕ್ರೈಸ್ತತ್ವ ವು ಮಾತ್ರ ಘೋಷಿಸುತ್ತದೆ. ಪಾಪಕ್ಕೆ ತೆರಬೇಕಾದ ದಂಡವನ್ನು ಕ್ರಿಸ್ತನು ತಾನೇ ಕೊಟ್ಟ ನು.
ಇದನ್ನು ನಂಬಿ ಅಂಗೀಕರಿಸಿಕೊಂಡು ಒಪ್ಪಿಕೊಳ್ಳು ವದನ್ನು ಬಿಟ್ಟು ಪಾಪಪರಿಹಾರಕ್ಕಾಗಿ ಬೇರೆ
ಯಾವ ಮಾರ್ಗವೂ ಸಹ ಮನುಷ್ಯ ನ ಪಾಲಿಗಿಲ್ಲ . ಮನುಷ್ಯ ನು ಮಾಡಬೇಕಾದ
ಕಾರ್ಯವನ್ನು ನೋಡಿದರೆ ರಕ್ಷಣೆಗಾಗಿ ದೇವರ ಯೋಜನೆಯು ಅತ್ಯಂತ ಅದ್ಭು ತವಾದದ್ದು ,
ಅತ್ಯಂತ ಸರಳವಾದದ್ದು , ಅತ್ಯಂತ ಸುಂದರವಾದದ್ದು . ಕ್ರಿಸ್ತನ ಸಂದೇಶದ ಮುಖಾಂತರ ಅನೇಕರ
ಜೀವನಗಳು ಸಂಪೂರ್ಣವಾಗಿ ಮಾರ್ಪಾಟಾಗಿವೆ. ಸತ್ಯ ವೇದದ ಪ್ರಾಮುಖ್ಯ ವಾದ ಸಂದೇಶದ
ಮುಖಾಂತರ ಹೇಳಲಾಗದ ಲಕ್ಷಾಂತರ ಜನರು, ಬಡವ-ಶ್ರೀಮಂತ, ಧಾರ್ಮಿಕ-ಲೌಕಿಕ,
ಅನ್ಯ ನು-ನಾಸ್ತಿಕ ಹೀಗೆ ಕೋಟ್ಯಾಂತರ ಜನರು ಸಮಾಧಾನವನ್ನು ಕಂಡುಕೊಂಡಿದ್ದಾರೆ.
12
ಪ್ರಯತ್ನ ಗಳಿಂದಲೂ ಅತ್ಯಾಶ್ಚ ರ್ಯವಾಗಿ ಸಂರಕ್ಷಿಸಲ್ಪ ಟ್ಟ ಹಾಗೆ ಇತರ ಪುರಾತನ ಪುಸ್ತಕಗಳಿಗೆ
ಸಂರಕ್ಷಣೆಯ ಅಗತ್ಯ ವಿರಲಿಲ್ಲ . ದೇವರು ಇಂದಿನ ವರೆಗೂ ಇದನ್ನು ಕಾಪಾಡಿದ್ದಾನೆ.
ಯಾಕೆಂದರೆ ಮನುಕುಲಕ್ಕೋಸ್ಕ ರ ದಾಖಲಾಗಿರುವ ದೇವರ ಸಂದೇಶವಾಗಿದೆ.
ಹಾಗಾದರೆ ಇಂದಿನ ಕುರಿತೇನು? ಕೆಲವು ಜನರು ಹೇಳುವ ಹಾಗೆ ಸತ್ಯ ವೇದವು
ದಿನಾಂಕ ಮೀರಿದ ಗ್ರಂಥ, ಮತ್ತು ಇತರ ವಿಜ್ಞಾನಿಗಳ ಹೇಳಿಕೆಯ ಪ್ರಕಾರ ಸತ್ಯ ವೇದವು
ತಪ್ಪು ಗಳಿಂದ ತುಂಬಿದ್ದು ಎಂದಾದರೆ ನಾವು ಸತ್ಯ ವೇದವು ಇನ್ನೆಂದಿಗೂ ಬೇಕಾಗಿಲ್ಲ ವೆಂದು
ಊಹಿಸಿಕೊಳ್ಳ ಬಹುದು. ಆದರೂ ಸತ್ಯ ವೇದವೇ ಪ್ರಪಂಚದಲ್ಲಿ ಅತೀ ಹೆಚ್ಚು
ಮಾರಾಟವಾಗುತ್ತಿರುವ ಮೊದಲನೇ ಸ್ಥಾನದಲ್ಲಿರುವ ಪುಸ್ತಕವಾಗಿದೆ. ಸತ್ಯ ವೇದದ ಕನಿಷ್ಠ
ಕೆಲವು ಭಾಗಗಳು 2000 ಕ್ಕೂ ಹೆಚ್ಚಾದ ಭಾಷೆಗಳಿಗೆ ಅಥವಾ ನಾಡಭಾಷೆಗಳಿಗೆ ಭಾಷಾಂತರ
ಮಾಡಲ್ಪ ಟ್ಟಿವೆ. ಮತ್ತು ಪ್ರಪಂಚದ ಬಹುಪಾಲು ಜನಸಂಖ್ಯೆಯ ಜನರು ಇವುಗಳಲ್ಲಿ ಒಂದು
ಅಥವಾ ಹೆಚ್ಚು ಭಾಷೆಗಳನ್ನು ಅರ್ಥಮಾಡಿಕೊಳ್ಳ ಬಲ್ಲ ರು. ಲಕ್ಷಗಟ್ಟ ಲೇ ಸತ್ಯ ವೇದಗಳು
ಈಗಾಗಲೇ ಮುದ್ರಿಸಲ್ಪ ಟ್ಟಿವೆ. ಈ ಮೇಲಿನ ಕಾರಣಗಳಿಂದ ಹಾಗೂ ಇತರ ಕಾರಣಗಳಿಂದ
ತೆರೆದ ಮನಸ್ಸು ಳ್ಳ ಯಾವುದೇ ವ್ಯ ಕ್ತಿಯು ದೇವರ ವಾಕ್ಯ ದ ಕಡೆಗೆ ತಿರುಗಿಕೊಂಡು ದೇವರ
ವಾಕ್ಯ ದ ಮೂಲಕ ಮಾತನಾಡುವ ಸ್ವ ರವನ್ನು ಕೇಳಿಸಿಕೊಳ್ಳ ಲು ನಿರೀಕ್ಷಿಸಲ್ಪ ಡುತ್ತಾರೆ.
ದೈವಪ್ರೇರಣೆಯ ಸಿದ್ಧಾಂತ
2 ತಿಮೊ. 3:16 ರಲ್ಲಿ “ದೈವಪ್ರೇರಿವಾದ ಪ್ರತಿಯೊಂದು ಶಾಸ್ತ್ರವೂ.....”.
(ಅಕ್ಷರಶಃವಾಗಿ ದೇವರು ಉಸಿರಿದ್ದು ) ಎಂದು ಓದುತ್ತೇವೆ. ಜೀವವುಳ್ಳ ಯಾವುದೇ ವ್ಯ ಕ್ತಿಗೂ
ಅವನ ಉಸುರಿಗಿಂತ ಹತ್ತಿರವಾದದ್ದು ಯಾವದೂ ಇಲ್ಲ ಎಂದು ಹೇಳುತ್ತಾರೆ.
“ದೈವಪ್ರೇರಿತವಾದದ್ದು ” ಎಂಬ ಗ್ರೀಕ್ ಪದವು ಸಮುದ್ರದಲ್ಲಿ ಸಂಚರಿಸುವ
ಹಡಗು/ದೋಣಿಯು ಬಿರುಗಾಳಿಯ ಮೂಲಕ ತಲುಪಬೇಕಾದ ಸ್ಥ ಳಕ್ಕೆ
ಉದ್ಧೇಶಪೂರ್ವಕವಾಗಿ ಒಯ್ಯ ಲ್ಪ ಟ್ಟಿದೆ. ಎಂದರ್ಥ. ದೇವರ ವಾಕ್ಯ ದ ಪ್ರತಿಯೊಂದು
ಮಾತುಗಳು ಉದ್ದೇಶವನ್ನೂ ಉದ್ದೇಶಿತ ಗುರಿಯನ್ನು ಹೊಂದಿವೆ ಹಾಗೂ ದೇವರಿಂದಲೇ
ಬಂದವುಗಳಾಗಿವೆ. ದೈವಪ್ರೇರಣೆಯ ಸಿದ್ದಾಂತಗಳು ದೇವರ ವಾಕ್ಯ ದ ಸಂರಕ್ಷಣೆಯ ಮೇಲಿನ
ತನ್ನ ಬೋಧನೆಯ ಮೂಲಕ ಕರ್ತನಾದ ಯೇಸುಕ್ರಿಸ್ತನಿಂದಲೇ ಬೆಂಬಲಿಸಲ್ಪ ಟ್ಟಿವೆ (ಮತ್ತಾ.
5:18).
13
ಜನರು ಕೆಲವು ಸಾರಿ ದೈವಪ್ರೇರಣೆ ಮತ್ತು ದೈವಪ್ರಕಟಣೆ ಎಂಬ ಪದಗಳನ್ನು
ಅದಲು ಬದಲಾಗಿ ಉಪಯೋಗಿಸುತ್ತಾರೆ. ಆದರೆ ಅವೆರಡು ಒಂದೇ ಆಗಿಲ್ಲ . “ದೈವೀಕ
ಪ್ರಕಟಣೆ” ಎಂಬ ಪದವನ್ನು ದೇವರು ಸಂಪರ್ಕಿಸದ ಹೊರತು ಸತ್ಯ ವೇದದ ಲೇಖಕನು ಏನನ್ನು
ಅರ್ಥಮಾಡಿಕೊಳ್ಳ ಲು ಸಾಧ್ಯ ವಿಲ್ಲ ದ ದೇವರ ವಾಕ್ಯ ಭಾಗಗಳ ವಿಷಯದಲ್ಲಿ ಮಾತ್ರ
ಉಪಯೋಗಿಸಬೇಕು. ದೃಷ್ಟಾಂತವಾಗಿ ಮೋಶೆ(ಆದಿಕಾಂಡದ ಬರಹಗಾರ) ದೇವರು
ಮೋಶೆಗೆ ಪ್ರಕಟಿಸದ ಹೊರತು ದೇವರು ಈ ಲೋಕವನ್ನು ಹೇಗೆ ಸೃಷ್ಟಿಸಿದ್ದಾನೆ ಎಂಬುದನ್ನು
ಮೋಶೆಯು ತಿಳಿದುಕೊಳ್ಳ ಲು ಸಾಧ್ಯ ವಾಗುತ್ತಿರಲಿಲ್ಲ . ಮತ್ತೊಂದು ಕಡೆ ನೋಡುವುದಾದರೆ
ದೇವರ ವಾಕ್ಯ ದ ಅನೇಕ ಭಾಗಗಳು ಲೇಖಕರು ನೋಡಿದ ಅಥವಾ ಮಾಡಿದ ಅಥವಾ
ಇತರರಿಂದ ಕಲಿತುಕೊಂಡ ದಾಖಲೆಗಳಾಗಿವೆ. ಈ ಲೇಖಕರು ಚರಿತ್ರೆಯ ಕೆಲವು
ಘಟನೆಗಳನ್ನು ಬರೆಯುವದಕ್ಕೂ ಇತರ ಅನೇಕ ಸಂಗತಿಗಳನ್ನು ಬಿಟ್ಟು ಬಿಡುವದಕ್ಕೂ
ದೇವರಿಂದ ಪ್ರೇರಿಸಲ್ಪ ಟ್ಟ ರು. ಯಾಕೆ ಇಂಥಹ ಆಯ್ಕೆ? ಪವಿತ್ರಾತ್ಮ ನು ಸತ್ಯ ವೇದದಲ್ಲಿ ನಮಗೆ
ಅಗತ್ಯ ವಾದುದ್ದ ನ್ನು ಕೊಟ್ಟಿದ್ದಾನೆ. ಇನ್ನೂ ಹೆಚ್ಚಿನದಾಗಿ ಬೇರೇನೂ ಅಗತ್ಯ ವಿಲ್ಲ .
“ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ ç ವೂ….............. ಉಪಯುಕ್ತವಾಗಿದೆ.” ಹೀಗೆ
ನಾವು ಹೇಳಬಹುದು, ಸತ್ಯ ವೇದವು ದೇವರ ಅನೇಕ ಪ್ರಕಟಣೆಗಳನ್ನು ಒಳಗೊಂಡಿದೆ ಆದರೆ
ಇಡೀ ಸತ್ಯ ವೇದವೇ ಆತನಿಂದ ಅಂದರೆ ದೇವರಿಂದ ಪ್ರೇರಿತವಾದುದ್ದಾಗಿದೆ. ಸಂಪೂರ್ಣ ದೈವ
ಪ್ರೇರಣೆ ಅಂದರೆ ದೇವರ ವಾಕ್ಯ ದ ಎಲ್ಲಾ ಭಾಗಗಳು ಮತ್ತು ದೇವರ ವಾಕ್ಯ ದಲ್ಲಿ ವ್ಯ ವಹರಿಸಲ್ಪ ಟ್ಟ
ಎಲ್ಲಾ ವಿಷಯಗಳು ಸಂಪೂರ್ಣವಾಗಿ ದೈವಪ್ರೇರಿತವಾದದ್ದೇ ಆಗಿದೆ ಎಂದರ್ಥ. ಮೌಖಿಕ
ದೈವಪ್ರೇರಣೆಯೆಂದರೆ ದೇವರ ವಾಕ್ಯ ದ ಪ್ರತಿಯೊಂದು ಪದಗಳು ದೈವಪ್ರೇರಿತವಾದವುಗಳು
ಎಂದರ್ಥ. ಸತ್ಯ ವೇದವು ತನ್ನ ಕುರಿತಾಗಿ ಏನು ಹೇಳುತ್ತದೆಂದು ಪರಿಗಣಿಸುವಾಗ ಈ
ಹೇಳಿಕೆಗಳು ಸತ್ಯ ವಾದವುಗಳೆಂದು ಕಂಡುಬರುತ್ತವೆ.
14
ಕಾಣುತ್ತೇವೆ. ಯೆಶಾಯನಿಂದ ಮಲಾಕಿಯವರೆಗೆ ಎಲ್ಲಾ 16 ಪ್ರವಾದಿಗಳ ಬರವಣಿಗೆಗಳು
ದೇವರ ಓಲೆಕಾರರಾಗಿದ್ದು ದೇವರ ಸಂದೇಶಗಳನ್ನು ತನ್ನ ಜನರಿಗೆ ಸಾರುತ್ತಿದ್ದ ವು (ಕೆಲವು ಸಾರಿ
ವಿರೋಧಿಗಳಿಗೂ ಸಹ). ಇನ್ನೂ ಹೆಚ್ಚಾದದ್ದೇನು ಕ್ರಿಸ್ತನು ತಾನೇ ಹಳೆಯ
ಒಡಂಬಡಿಕೆಯೆಂದರೆ ಧರ್ಮಶಾಸ್ತ್ರ (ಮತ್ತಾ. 5:18 ; ಮಾರ್ಕ :.7:8), ಪ್ರವಾದಿಗಳು
(ಯೋಹಾ. 6:45) ಮತ್ತು ಇತರೇ ಬರವಣಿಗೆಗಳು (ಲೂಕ. 16:29-31) ದೇವರ ವಾಕ್ಯ
ಎಂದು ಕಲಿಸಿದರು. ಅಪೋಸ್ತಲರು ಸಹ ಹಳೆಯ ಒಡಂಬಡಿಕೆಯು
ದೈವಪ್ರೇರಿತವಾದದ್ದೆಂದು ನಂಬಿದ್ದ ರು. ದೃಷ್ಟಾಂತವಾಗಿ ಅಪೋಸ್ತಲನಾದ ಪೇತ್ರನು
“ಪವಿತ್ರಾತ್ಮ ನು ದಾವೀದನ ಬಾಯಿಂದ ಮಾತನಾಡಿದನು” (ಅ.ಕೃ 1:16) ಎಂದು ಹೇಳಿದನು.
ಮಾತ್ರವಲ್ಲ ದೆ “ಪರಿಶುದ್ಧ ಜನರು ದೈವಪ್ರೇರಿತರಾಗಿ ದೇವರಿಂದ ಹೊಂದಿದ್ದ ನ್ನೇ
ಮಾತನಾಡಿದರು” (2 ಪೇತ್ರ. 1:21) ಎಂದು ತಿಳಿಸಿದನು. ಹಾಗೆಯೇ ಪೌಲನು “ಪವಿತ್ರಾತ್ಮ ನು
ಪ್ರವಾದಿಯಾದ ಯೆಶಾಯನ ಬಾಯಿಂದ ನಿಮ್ಮ ಪಿತೃಗಳಿಗೆ ವಿಹಿತವಾಗಿ ಹೇಳಿದ್ದೇನೆಂದರೆ”
(ಅ.ಕೃ 28:25) ಎಂದು ಪ್ರಕಟಿಸುತ್ತಾನೆ.
15
ಪ್ರವಾದನೆಯ ವಾಕ್ಯ ಭಾಗಗಳನ್ನು ಬರೆದಾಗ ನೆರವೇರಿತು. ಹೀಗೆ ಹೊಸ ಒಡಂಬಡಿಕೆಯು
ದೈವ ಪ್ರೇರಿತವಾದದ್ದೆಂದು ನಾವು ವಿಶ್ವಾಸದಿಂದ ಹೇಳಬಹುದು.
ಹೊಸ ಒಡಂಬಡಿಕೆಯ ಲೇಖಕರು ತಮ್ಮ ಕುರಿತಾಗಿ ತಾವು ಪವಿತ್ರಾತ್ಮ ನಿಂದ
ನಿಯಂತ್ರಿಸಲ್ಪ ಟ್ಟಿದ್ದೇವೆ ಎಂಬ ಮನವರಿಕೆಯುಳ್ಳ ವರಾದರು. (ಮೇಲ್ಕಾ ಣಿಸಿದ ದೋಣಿಯ
ಚಿತ್ರದಲ್ಲಿ ಹೊತ್ತು ಕೊಂಡು ಹೋದಂತೆ). ಪೌಲನು ಹೀಗೆ ಬರೆದಿದ್ದಾನೆ “ನಮಗಾದರೋ
ದೇವರು ತನ್ನ ಆತ್ಮ ನ ಮೂಲಕ ಅದನ್ನು ಪ್ರಕಟಿಸಿದನು” (1 ಕೊರಿ. 2:10). “.....ನಾನು
ನಿಮಗೆ ಬರೆದಿರುವ ಸಂಗತಿಗಳು ಕರ್ತನ ವಿಧಿಯೇ” (1 ಕೊರಿ. 14:37). “ಇದುವರೆಗೆ
ಗುಪ್ತವಾಗಿದ್ದ ಒಂದು ಸಂಗತಿ ದೈವ ಪ್ರಕಟಣೆಯಿಂದ ನನಗೆ ತಿಳಿಸಲ್ಪ ಟ್ಟಿತೆಂಬುದನ್ನು ನೀವು
ಕೇಳಿದ್ದೀರೋ ಆ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೋಸ್ತಲರಿಗೂ
ಪ್ರವಾದಿಗಳಿಗೂ ಪವಿತ್ರಾತ್ಮ ನಿಂದ ತಿಳಿಸಲ್ಪ ಟ್ಟಿದ್ದ ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪ ಡಲಿಲ್ಲ ”
(ಎಫೆ. 3:3, 5). “ದೇವರಾತ್ಮ ನು ಸ್ಪ ಷ್ಟ ವಾಗಿ ಹೇಳುತ್ತಾನೆ” (1 ತಿಮೊ. 4:1) ಯೋಹಾನನು
ತಾನು ಬರೆದ ಸಂಗತಿಗಳನ್ನು ದೈವಪ್ರೇರಣೆಯಿಂದಲೇ ಮಾಡಿದ್ದಾಗಿ ತಿಳಿದಿದ್ದ ನು (ಪ್ರಕ. 1:1;
14:13; 19:9).
ಪೇತ್ರನು (1 ಪೇತ್ರ. 1:12), ಪೌಲನು (ಗಲಾ. 1:12) ಇಬ್ಬ ರೂ ಸುವಾರ್ತೆಯು
ದೇವರಿಂದಲೇ ಬಂದದೆಂದು ತಿಳಿದಿದ್ದ ರು ಹಳೇ ಒಡಂಬಡಿಕೆಯು ದೈವಪ್ರೇರಿವಾದದ್ದೆಂದು
ಈ ವ್ಯ ಕ್ತಿಗಳು ತಮ್ಮ ಯೌವನ ಕಾಲದಿಂದಲೂ ತಿಳಿದಿದ್ದ ರು. ಹೊಸ ಒಡಂಬಡಿಕೆಯೂ ಸಹ
ಅದೇ ರೀತಿಯಾಗಿ ದೈಪ್ರೇರಿತವಾದದ್ದೆಂದು ಪವಿತ್ರಾತ್ಮ ನು ಅವರಿಗೆ ತೋರಿಸಿಕೊಟ್ಟಿದ್ದ ನು.
ದೃಷ್ಟಾಂತವಾಗಿ 1 ಕೊರಿ. 15:3-4 ರಲ್ಲಿ ಸುವಾರ್ತೆಯ ಪುಸ್ತಕಗಳು ಹಳೆಯ
ಒಡಂಬಡಿಕೆಯಲ್ಲಿನ ವಾಕ್ಯ ಗಳೊಂದಿಗೆ ಜೊಡಿಸಲ್ಪ ಟ್ಟಿವೆ ಮತ್ತು ಅವುಗಳೊಂದಿಗೆ ಸಮತಲದ
ಮೇಲೆ ಇಡಲ್ಪ ಟ್ಟಿದೆ ಕ್ರಿಸ್ತನ ಮರಣ ಹೂಣಿಡುವಿಕೆ ಮತ್ತು ಪುನರುತ್ಥಾನಗಳು
“ಶಾಸ್ತ್ರಕ್ಕ ನುಸಾರವಾಗಿಯೇ” ಎಂದು ದಾಖಲಿಸಲ್ಪ ಟ್ಟಿವೆ. 1 ತಿಮೊ. 5:18 ರಲ್ಲಿ
ಅಪೋಸ್ತಲನಾದ ಪೌಲನು ಧರ್ಮೋಪದೇಶಕಾಂಡ ಮತ್ತು ಲೂಕನ
ಸುವಾರ್ತೆಗಳೆರಡರಿಂದಲೂ ವಾಕ್ಯ ವನ್ನು ಉಲ್ಲೇಖಿಸಿ ಅವುಗಳನ್ನು ಶಾಸ್ತ್ರಗಳೆಂದು
ಕರೆಯುತ್ತಾನೆ. 1 ಪೇತ್ರ 1:25 ರಲ್ಲಿ ಸುವಾರ್ತೆಯ ಸಂದೇಶವು ಯೆಶಾಯನ ಪ್ರವಾದನಾ
ಗ್ರಂಥದಲ್ಲಿ ಕರ್ತನ ಮಾತುಗಳೊಂದಿಗೆ ಸಮಾನ ಮಟ್ಟ ದಲ್ಲಿಯೇ ಇಡಲ್ಪ ಟ್ಟಿದೆ. ಎರಡು ವಾಕ್ಯ
ಭಾಗಗಳೂ ದೇವಪ್ರೇರಿತವಾದವುಗಳು ಮತ್ತು ಸತ್ಯ ವಾದವುಗಳು. 2 ಪೇತ್ರ. 3:2 ರಲ್ಲಿ
ಅಪೋಸ್ತಲರು ಪ್ರವಾದಿಗಳೊಂದಿಗೆ ಜೋಡಿಸಲ್ಪ ಟ್ಟಿದ್ದಾರೆ. ಮತ್ತು 16 ನೇ ವಚನದಲ್ಲಿ ಪೇತ್ರನು
16
ಪೌಲನ ಪತ್ರಿಕೆಗಳನ್ನು ಇತರ ಬರವಣಿಗೆಗಳೊಂದಿಗೆ ಜೋಡಿಸುತ್ತಾನೆ ಜ್ಞಾನೋಕ್ತಿ. 30:5 ನ್ನು
–
ಶಾಸ್ತ್ರಗಳೊಂದಿಗೆ ಪರಿಗಣಿಸಿರಿ ಕಾರಣ ಈ ವಾಕ್ಯ ಗಳು ಮೇಲಿನ ಮಾತುಗಳ ಸಾರಂಶ
ಮತ್ತು ಪ್ರಾಯೋಗಿಕ ಎಚ್ಚ ರಿಕೆಯನ್ನು ನೀಡುತ್ತವೆ.
"ದೇವರ ಪ್ರತಿಯೊಂದು ಮಾತು ಶುದ್ಧ ವಾದದ್ದು ; ಆತನು ಶರಣಾಗತರಿಗೆ
ಗುರಾಣಿಯಾಗಿದ್ದಾನೆ. ಆತನು ಮಾತುಗಳಿಗೆ ಯಾವದನ್ನು ಸೇರಿಸಬೇಡ; ಆತನು ನಿನ್ನ ನ್ನು
ಖಂಡಿಸುವಾಗ ನೀನು ಸುಳ್ಳು ಗಾರನೆಂದು ತೋರಿ ಬಂದಿಯೇ. "
17
ವಸ್ತು ವಾಗಿಬಿಡುತ್ತಿತ್ತು . (2 ಅರಸು. 18;4 ರೊಂದಿಗೆ ಹೋಲಿಸಿರಿ). ಆದಾಗ್ಯೂ , ಅತ್ಯು ತ್ತಮವಾದ
ಪ್ರತಿಗಳು ಸಂರಕ್ಷಿಸಲ್ಪ ಟ್ಟಿದ್ದು ಮೂಲ ಪ್ರತಿ ದಾಖಲೆಗಳಂತೆಯೇ ಇವೆ ಎಂಬುದನ್ನು ದೇವರು
ತನ್ನ ಸಾರ್ವಭೌಮತೆಯಲ್ಲಿ ಖಾತರಿಪಡಿಸಿದ್ದಾನೆ.
ಮೂರನೆಯದಾಗಿ ಭಾಷಾಂತರಗಳ ಸಮಸ್ಯೆ ಅಥವಾ ವಿವಾದ. ಭಾಷೆಗಳ
ನಡುವಿನ ವ್ಯ ತ್ಯಾಸಗಳ ನಿಮಿತ್ತದಿಂದ ಪರಿಪೂರ್ಣವಾದ ಭಾಷಾಂತರವನ್ನು ಹೊಂದುವದು
ಅಸಾಧ್ಯ . ಆದಾಗ್ಯೂ , ನಮ್ಮ ಲ್ಲಿರುವ ಭಾಷಾಂತರಗಳು ಓದುವದಕ್ಕೂ , ಧ್ಯಾನಿಸುವದಕ್ಕೂ
ಅಧ್ಯಾಯನ ಮಾಡುವದಕ್ಕೂ ಸಂಪೂರ್ಣವಾಗಿ ವಿಶ್ವಾಸರ್ಹವಾದವುಗಳು. ಇಸಿಎಸ್
ಸೇವಾಸಂಸ್ಥೆ ಯು ಸತ್ಯ ವೇದ ಭಾಷಾಂತರವನ್ನು ದಿ ನ್ಯೂ ಕಿಂಗ್ ಜೇಮ್ಸ್ ವರ್ಷನ್ ನಲ್ಲಿ
ಶಿಫಾರಸ್ಸು ಮಾಡುತ್ತದೆ .(ಇಸಿಎಸ್ ಕೋರ್ಸುಗಳು ಇದರ ಮೇಲೆ ಆಧಾರಿತವಾದವುಗಳು) ದಿ
ನ್ಯೂ ಅಮೇರಿಕನ್ ಸ್ಟಾಂಡರ್ಡ್ ಬೈಬಲ್,) ಇಂಗ್ಲೀಷ್ ಸ್ಟಾಂಡರ್ಡ್ ವರ್ಷನ್, ಎಇಟಿ ಬೈಬಲ್
ಮತ್ತು ಆಥರೈಸ್ಡ್ ಕಿಂಗ್ ಜೇಮ್ಸ್ ವರ್ಷನ್ಗಳನ್ನು ಶಿಫಾರಸ್ಸು ಮಾಡುತ್ತದೆ. ಕೆಲವು ಸತ್ಯ ವೇದ
ಭಾಷಾಂತರಗಳು ಭಾಷಾಂತರಕ್ಕಿಂತಲೂ ಹೆಚ್ಚಾಗಿ ಭಾವಾರ್ಥದ ಭಾಷಾಂತರಗಳಾಗಿವೆ.
ಸರಳವಾಗಿ ಅಥವಾ ಓದಲು ಸುಲಭವಾದ ಭಾಷಾಂತರಗಳು ಸಾಮಾನ್ಯ ವಾಗಿ ಕೆಲವು
ನಿಖರತೆಗಳನ್ನು ತ್ಯಾಗ ಮಾಡುತ್ತವೆ. ಕಾರಣ ಇಂಗ್ಲೀಷ್ ಪದಗಳನ್ನು ಎಷ್ಟು ಸಾಧ್ಯ ವೋ ಅಷ್ಟೂ
ಸುಲಲಿತಗೊಳಿಸುವ ಸಲುವಾಗಿಯೇ ಮಾಡುತ್ತವೆ ಎಂಬುದನ್ನು ವಿಧ್ಯಾರ್ಥಿಗಳು
ಮನಸ್ಸಿನಲ್ಲಿಟ್ಟು ಕೊಳ್ಳ ಬೇಕು.
18
ಅಧ್ಯಾಯ
2
ಸತ್ಯ ವೇದ ಶಾಸ್ತ್ರ:
ಸತ್ಯ ವೇದದ ಅಧ್ಯ ಯನ
-ಭಾಗ 2-
19
ಸತ್ಯ ವೇದವು ಹೇಗೆ ಬರೆಯಲ್ಪ ಟ್ಟಿತು?
ಹಳೆ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಯ ಅಳತೆಗೋಲು ಹೇಗೆ
ಬಂತೆಂಬುದರ ಚರಿತ್ರೆಯನ್ನು ಲೆಕ್ಕ ಕ್ಕೆ ತೆಗೆದುಕೊಳ್ಳು ವದು ಬಹಳ ಪ್ರಾಮುಖ್ಯ ವಾದದ್ದು .
ಇಬ್ರಿಯ ಮೂಲ ಪಿತೃಗಳಾದ ಅಬ್ರಹಾಮ್, ಇಸಾಕ್ ಮತ್ತು ಯಾಕೋಬರು
ಅವರಿಗಾಗಿ ದೇವರು ಕೊಡುವ ಸ್ವಂತ ದೇಶ ಹಾಗೂ ಎಣಿಸಲಾರದಷ್ಟು ಜನರಿರುವ
ಜನಾಂಗವನ್ನು ಕುರಿತಾದ ದೇವರ ವಾಗ್ದಾನಗಳನ್ನು ಅತೀ ಅಮೂಲ್ಯ ವಾದದ್ದೆಂದು,
ಶ್ರೇಷ್ಠ ವಾದದ್ದೆಂದು ಪರಿಗಣಿಸಿದ್ದ ರು. ಅವರ ಜೀವಿತದ ಪ್ರಮುಖ ಘಟನೆಗಳು ಜೇಡಿಮಣ್ಣು
ಅಥವಾ ಕಲ್ಲಿನ ಹಲಗೆಗಳ ಮೇಲೆ ಬೆಲೆಯುಳ್ಳ ಪಿತ್ರಾರ್ಜಿತ ಆಸ್ತಿಯಾಗಿ ತಂದೆಯಿಂದ
ಮಗನಿಗೆ ಮುಂದುವರೆಯಿತು. ಧರ್ಮಶಾಸ್ತ್ರದ 5 ಪುಸ್ತಕಗಳನ್ನು ಬರಯುವದರಲ್ಲಿ
(ಸತ್ಯ ವೇದದ ಮೊದಲ 5 ಪುಸ್ತಕಗಳು) ಮೋಶೆಯು ಬರೆಯಲ್ಪ ಟ್ಟ ಈ ವಿಷಯಗಳನ್ನು
ದೇವರಿಂದ ಕೊಡಲ್ಪ ಟ್ಟ ದೈವೀಕ ಪ್ರಕಟಣೆಯೆಂದು ಅಳವಡಿಸಲು ತನ್ನ ಮರಣದ
ಸಮಯದವರೆಗೂ ತನ್ನ ಸ್ವಂತ ದಾಖಲೆಗಳನ್ನು ಸೇರಿಸುತ್ತಾ ಹೋದನು. ಇಸ್ರಾಯೇಲರು
ಅರಣ್ಯ ದಲ್ಲಿ ಪ್ರಯಾಣ ಮಾಡಿ ಕಾನಾನ್ ದೇಶವನ್ನು ಪ್ರವೇಶಿಸಿದಾಗ ಈ ದಾಖಲೆಗಳನ್ನು
ಉತ್ಸಾಹದಿಂದ ಕಾಪಾಡಿದರು. ಇತರ ಪುಸ್ತಕಗಳು ಪ್ರಾರಂಭದ ಪ್ರವಾದಿಗಳಿಂದ ಬರೆಯಲ್ಪ ಟ್ಟು
ಈ ಸಂಗ್ರಹಕ್ಕೆ ಸೇರೀಸಲ್ಪ ಟ್ಟ ವು. ಯೆಹೋಶುವನಿಂದ 2 ಅರಸುಗಳವರೆಗಿನ ಪುಸ್ತಕಗಳು
ಚಾರಿತ್ರಿಕ ಪುಸ್ತಕಗಳು. ಈ ಯುಗದಲ್ಲಿ ಪದ್ಯ ರೂಪವಾದ ಪುಸ್ತಕಗಳು ಹಿರಿಯ ಮತ್ತು
ಕಿರಿಯ ಪ್ರವಾದಿಗಳು ಪುಸ್ತಕಗಳು ಸಹ ಬರೆಯಲ್ಪ ಟ್ಟ ವು. ಇದರ ನಂತರ ಹಳೆ ಒಡಂಬಡಿಕೆಯ
ಇತರ ಪುಸ್ತಕಗಳು ಬರೆಯಲ್ಪ ಟ್ಟ ವು ಮತ್ತು ಸ್ಪ ಷ್ಟ ವಾದ ನಂತರದ ಕಾಲಕ್ಕೆ ಸೇರಿದವುಗಳು.
ಪ್ರವಾದಿಯಾದ ಮಲಾಕಿಯನ ನಂತರ ಹಳೆ ಒಡಂಬಡಿಕೆಯು ಸಂಪೂರ್ಣವಾಯಿತು.
ಇದರ ನಂತರ ಸುಮಾರು 400 ವರ್ಷಗಳು ಕಳೆದು ಹೊಸ ಒಡಂಬಡಿಕೆಯ
ಪ್ರಾರಂಭದವರೆಗೂ ಇಸ್ರಾಯೇಲ್ಯ ರಲ್ಲಿ ಯಾವುದೇ ಪ್ರವಾದನಾ ಸ್ವ ರಗಳಾಲಿ ದೈವೀಕ
ಪ್ರೇರಣೆಯ ಬರವಣಿಗೆಗಳಾಗಲಿ ಇರಲಿಲ್ಲ .
ಹೊಸ ಒಡಂಬಡಿಕೆಯ 27 ಪುಸ್ತಕಗಳು ಕಡಿಮೆ ಅವಧಿಯಲ್ಲಿ ಬರೆಯಲ್ಪ ಟ್ಟು
ನಂತರ ಬೇಗನೆ ಸಂಗ್ರಹಿಸಲ್ಪ ಟ್ಟ ವು. ಸ್ನಾನಿಕನಾದ ಯೋಹಾನನಾಗಲಿ ಕರ್ತನಾದ
ಯೇಸುಕ್ರಿಸ್ತನಾಗಲಿ ಯಾವುದೇ ಪುಸ್ತಕಗಳನ್ನು ಬರೆಯಲಿಲ್ಲ ಪಂಚಾಶತ್ತಮ ಹಬ್ಬ ದ
ತರುವಾಯ ಅಪೋಸ್ತಲರು ಕ್ರಿಸ್ತನನ್ನು ಕುರಿತು ಉಪದೇಶಿಸಲು ಪ್ರಾರಂಭಿಸಿದಾಗ ಅವರ
ಜ್ಞಾಪಕದಲ್ಲಿದ್ದ ಕ್ರಿಸ್ತನ ಮಾತುಗಳನ್ನು ಉಲ್ಲೇಖ ಮಾಡುತ್ತಿದ್ದ ರು. ನಂತರ ಈ ಹೇಳಿಕೆಗಳು 4
20
ಪುಸ್ತಕಗಳಲ್ಲಿ ಬರೆಯಲ್ಪ ಟ್ಟು ಸುವಾರ್ತೆ ಪುಸ್ತಕಗಳೆಂದು ಚಿರಪರಿಚಿತವಾದವು. ಲೂಕನು
ಯೆರೂಸಲೇಮಿನಿಂದ ರೋಮ್ ವರೆಗಿನ ಸಭೆಯ ವಿಸ್ತರಣೆಯ ಕುರಿತಾದ ಚಾರಿತ್ರಿಕ
ದಾಖಲೆಗಳನ್ನು ಸೇರಿಸಿದನು (ಅ.ಕೃ). ಅಪೋಸ್ತಲರು ಸಹ ಸಭೆಗಳನ್ನು ಸ್ಥಾಪಿಸಿದರು. ಮತ್ತು
ವಿಶ್ವಾಸಿಗಳನ್ನು ಕಟ್ಟು ವದಕ್ಕಾಗಿ 19 ಪತ್ರಿಕೆಗಳನ್ನು ಬರೆದರು. ಈ ಪತ್ರಿಕೆಗಳಿಗೆ ಯಾಕೋಬನು
ಬರೆದ ಪತ್ರಿಕೆ ಯೂದನ ಪತ್ರಿಕೆ ಮತ್ತು ಪ್ರಕಟಣೆ ಗ್ರಂಥವು ಸೇರಿಸಲ್ಪ ಟ್ಟ ವು.
ಹೊಸ ಒಡಂಬಡಿಕೆಯ ಎಲ್ಲಾ 27 ಪುಸ್ತಕಗಳು ಪ್ರಾರಂಭದಿಂದ ಒಮ್ಮ ತವಾಗಿ
ಅಂಗೀಕರಿಸಲ್ಪ ಡಲಿಲ್ಲ . ಆದರೆ ಹೆಚ್ಚಿನ ಪುಸ್ತಕಗಳು ಅಂಗೀಕರಿಸಲ್ಪ ಟ್ಟ ವು ಅನೇಕ ವಿವಾದಗಳು
ವಿಪರೀತವಾಗಿದ್ದ ವು. ಆದರೆ 397 ನೇ ವರ್ಷದಲ್ಲಿ ಕಾರ್ತೇಜ್ ಕೌನ್ಸಿಲ್ನಲ್ಲಿ ನಮಗೆ
ಗೊತ್ತಿರುವಂತೆ ಹೊಸ ಒಡಂಬಡಿಕೆಯ ಎಲ್ಲಾ 27 ಪುಸ್ತಕಗಳ ಅಳತೆಗೋಲು ಅಂತಿಮವಾಗಿ
ಪ್ರಾಮಾಣಿಕೃತವಾಯಿತು. ಹೊಸ ಒಡಂಬಡಿಕೆಯ ಪುಸ್ತಕಗಳು ದೈವ
ಪ್ರೇರಿತವಾದವುಗಳಾಗಿರುವದರಿಂದ ಅವುಗಳು ಬರೆಯಲ್ಪ ಟ್ಟ ಕೂಡಲೆ ಅಳತೆಗೋಲು
ಮಾಡಲ್ಪ ಟ್ಟ ವೆಂದು ನಾವು ಮನವರಿಕೆ ಮಾಡಿಕೊಳ್ಳು ವುದು ಬಹಳ ಮುಖ್ಯ ವಾದದ್ದು . ಆರಂಭ
ಸಮಯದಿಂದಲೂ ಇದ್ದ ನಂಬಿಕೆಗಳಿವೆ. ಕಾರ್ತೇಜ್ ಕೌನ್ಸಿಲ್ ಕೇವಲ ಔಪಚಾರಿಕ
ಅಂಗೀಕಾರವನ್ನು ಮಾತ್ರ ನೀಡಿತು(ಈ ವಿಷಯವು ನಿಮಗೆ ಆಸಕ್ತಿಕರವಾಗಿದ್ದ ರೆ ಚಕ್
ಗಿಯಾನೊಟ್ಟಿಯವರು ಬರೆದು ಇಸಿಎಸ್ ಸಂಸ್ಥೆ ಯು ಪ್ರಕಾಶನ ಮಾಡಿದ ಹೊಸ
ಒಡಂಬಡಿಕೆಯ ರಚನೆ ಎಂಬ ಪುಸ್ತಕವನ್ನು ಓದಿರಿ).
ಅಳತೆಗೋಲಿಗಾಗಿ/ಅಳತೆಗೋಲಿನ ಪರೀಕ್ಷೆಗಳು
ಕ್ರೈಸ್ತರು ಇಂದು ಯಾಕೆ ಕೇವಲ ಹಳೆ ಒಡಂಬಡಿಕೆಯ 39 ಪುಸ್ತಕಗಳನ್ನು ಮಾತ್ರ
ಅಂಗೀಕರಿಸುತ್ತಾರೆ ಹಾಗೂ ಇತರ ಪುಸ್ತಕಗಳನ್ನು ಯಾಕೆ ಅಂಗೀಕರಿಸುವದಿಲ್ಲ ? ಒಂದು
ಕಾರಣವೆಂದರೆ ರೂತಳು, ಎಜ್ರನು, ಪ್ರಸಂಗಿ, ಪರಮಗೀತ ಹಾಗೂ ಕೆಲವು ಕಿರಿಯ
ಪ್ರವಾದಿಗಳ ಪುಸ್ತಕಗಳನ್ನು ಹೊರತುಪಡಿಸಿ ಹೊಸ ಒಡಂಬಡಿಕೆಯ ಲೇಖಕರಿಂದ
ಅಧಿಕಾರಯುಕ್ತವೆಂದು ಉಲ್ಲೇಖಿಸಲ್ಪ ಟ್ಟಿವೆ. ಇವುಗಳಲ್ಲಿ ಯಾವುದಾದರೂ ಒಂದು
ಪುಸ್ತಕವನ್ನು ಆದರಿಸಿ ಯಾವುದೇ ವಿಶೇಷ ಬೋಧನಾ ಸಿದ್ಧಾಂತವಿಲ್ಲ . ಮತ್ತು ಹಳೆ
ಒಡಂಬಡಿಕೆಯು ಸಮಗ್ರವಾಗಿ ಸ್ವ ತಃ ಕರ್ತನಾದ ಯೇಸುಕ್ರಿಸ್ತನಿಂದಲೇ
ಅನುಮೋದಿಸಲಾಗಿದೆ.(ಲೂಕ. 24:27).
21
ಇದಲ್ಲ ದೆ ಆದಿ ಸಭೆಯ ಕಾಲದುದ್ದ ಕ್ಕೂ ಈ ಪುಸ್ತಕಗಳನ್ನು ಮತ್ತು ಹೊಸ
ಒಡಂಬಡಿಕೆಯ ಪುಸ್ತಕಗಳನ್ನು ಅಂಗೀಕರಿಸುವಲ್ಲಿ ಪವಿತ್ರಾತ್ಮ ನ ಸಾಕ್ಷಿಯನ್ನು ನಾವು
ಅಂಗೀಕರಿಸಬಹುದು. ಕೆಲವರು ಮಾತ್ರ ಕೆಲವು ಪುಸ್ತಕಗಳ ವಿಷಯದಲ್ಲಿ ಕೆಲ ಕಾಲ ಸಂದೇಹ
ವ್ಯ ಕ್ತಪಡಿಸುತ್ತಾರೆ. ಸತ್ಯ ವೇದದ 66 ಪುಸ್ತಕಗಳಲೆಲ್ಲಾ ಕ್ರಿಸ್ತನ ಕುರಿತು ಮಾತನಾಡುತ್ತವೆ, ಮತ್ತು
ಕ್ರಿಸ್ತನನ್ನೇ ಮಹಿಮೆಪಡಿಸುತ್ತವೆ. ಮತ್ತೊಂದೆಡೆ ಅಪೊಕ್ರಿಪ ಪುಸ್ತಕಗಳು ಚಾರಿತ್ರಿಕ ಹಾಗೂ
ಭೌಗೋಳಿಕ ತಪ್ಪು ಗಳನ್ನು ಒಳಗೊಂಡಿವೆ. ಅವುಗಳು ದೇವರ ವಾಕ್ಯ ಕ್ಕ ನುಸಾರವಾಗಿಲ್ಲ ದ
ಸುಳ್ಳು ತನ, ಸತ್ತವರಿಗೆ ಪ್ರಾರ್ಥನೆ ಮತ್ತು ಸತ್ಕಾರ್ಯಗಳ ಮೂಲಕ ರಕ್ಷಣೆ ಮುಂತಾದ ತಪ್ಪು
ಬೋಧನೆಗಳನ್ನು ಸಮರ್ಥಿಸಿಕೊಳ್ಳು ತ್ತವೆ. ಅಪೋಕ್ರಿಪವು ಎಂದಿಗೂ ಇಬ್ರಿಯ ಹಳೆ
ಒಡಂಬಡಿಕೆಯ ಭಾಗವಾಗಿ ರೂಪಿಸಲ್ಪ ಡಲಿಲ್ಲ . ಮಾತ್ರವಲ್ಲ ದೆ ಇಂದಿಗೂ ಸಹ ಇಲ್ಲ .
ಸಿದ್ಧಾಂತದ ಪ್ರಗತಿ
ಪರಿಗಣಿಸಬೇಕಾದ ಮತ್ತೊಂದು ಅಂಶವೆಂದರೆ ಅದೇ ಸಿದ್ಧಾಂತದ ಪ್ರಗತಿ. ನಿರ್ಧಿಷ್ಟ
ವಿಷಯವಾದ ಮೇಲಿನ ಎಲ್ಲಾ ಸತ್ಯ ಗಳನ್ನು ದೈವಪ್ರೇರಿತವಾದ ಯಾವುದೇ ಒಂದು ಪುಸ್ತಕ
ಅಥವಾ ವಾಕ್ಯ ಭಾಗವು ಒಳಗೊಂಡಿದೆ ಎಂದು ದೈವಪ್ರೇರಣಾ ಸಿದ್ಧಾಂತವು ಸೂಚಿಸುವದಿಲ್ಲ .
ಇದಕ್ಕೆ ಬದಲಾಗಿ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ವಾಕ್ಯ ಭಾಗಗಳಲ್ಲಿ ಯಾವುದೇ
ವಿರೋಧೋಕ್ತಿ ಇಲ್ಲ ಎಂಬುದನ್ನು ಖಂಡಿತವಾಗಿ ಪ್ರತಿಪಾದಿಸುತ್ತದೆ. ಉದಾಹರಣೆಗೆ,
ಆದಿಕಾಂಡವು ದೇವರ ಕುರಿತಾಗಿ ಹೆಚ್ಚಾಗಿ ಬೋಧಿಸುತ್ತದೆ. ಆದರೆ ದೇವರ ಕುರಿತಾಗಿ
ಎಲ್ಲ ವನ್ನೂ ಬೋಧಿಸುವದಿಲ್ಲ . ಸತ್ಯ ವೇದದ ಪ್ರತಿಯೊಂದು ಪುಸ್ತಕವೂ ಸಹ ನಮ್ಮ ಸೃಷ್ಠಿಕರ್ತನ
ವ್ಯ ಕ್ತಿತ್ವ , ಕೆಲಸ ಮತ್ತು ಮಹಿಮೆಯ ಕುರಿತು ಹೆಚ್ಚಾದ ಬೋಧನೆಯನ್ನು ಸೇರಿಸುತ್ತವೆ.
ವಾಸ್ತವಿಕವಾಗಿ, ಇಡೀ ಸತ್ಯ ವೇದವು ದೇವರ ಕುರಿತಾಗಿ ಎಲ್ಲ ವನ್ನು ಹೇಳಲು ಪ್ರಯತ್ನಿಸುವದಿಲ್ಲ .
ಯಾಕಂದರೆ ಇದು ಮನುಷ್ಯ ನ ಗ್ರಹಿಕೆಗೂ ಮೀರಿದ್ದಾಗಿತ್ತು . ದೇವರು ತನ್ನ ಕುರಿತಾಗಿ
ಪ್ರಕಟಿಸಿಕೊಳ್ಳು ವ ಎಲ್ಲ ವನ್ನೂ ಸತ್ಯ ವೇದವು ಒಳಗೊಂಡಿದೆ. ದೇವರ ವಾಕ್ಯ ವು ಮನಿಷ್ಯ ನಿಗೆ
ಪರಿಪೂರ್ಣವಾಗಿಯೂ, ಸೂಕ್ತವಾಗಿಯೂ ಹೊಂದಿಕೆಯಿರುವುದರಿಂದ ದೇವರವಾಕ್ಯ ಕ್ಕೆ
ಎನನ್ನೂ ಸೇರಿಸಬೇಕಾಗಿಲ್ಲ .
ಸಿದ್ಧಾಂತದ ಪ್ರಗತಿಯನ್ನು ಕ್ರಿಸ್ತನ ಕುರಿತಾದ ಸಿದ್ಧಾಂತ, ಪವಿತ್ರಾತ್ಮ ನ ಕುರಿತಾದ
ಸಿದ್ಧಾಂತ, ರಕ್ಷಣೆಯ ಕುರಿತಾದ ಸಿದ್ಧಾಂತ ಹಾಗೂ ಇತರ ವಿಷಯಗಳಲ್ಲಿ ಕಾಣಬಹುದು.
ಹಳೇ ಒಡಂಬಡಿಕೆಯು ದೇವರ ನೀತಿಯನ್ನು ವಿಸ್ತಾರವಾಗಿ ಒತ್ತಿಹೇಳುತ್ತದೆ. ಹೊಸ
22
ಒಡಂಬಡಿಕೆಯಾದರೋ ದೇವರ ಕೃಪೆಯನ್ನು ಪ್ರಧಾನವಾಗಿ ನಮ್ಮ ಮುಂದೆ ತರುತ್ತದೆ.
ಪ್ರಕಟಿಸಲ್ಪ ಟ್ಟ ಸತ್ಯ ದ ಉತ್ತುಂಗವು ಪೌಲನ ಪತ್ರಿಕೆಗಳಲ್ಲಿ ಕಂಡುಬರುತ್ತದೆ ಆದರೆ ಹಳೇ
ಒಡಂಬಡಿಕೆಯ ಮತ್ತು ಹೊಸ ಒಡಂಬಡಿಕೆಯ ಇತರ ಪುಸ್ತಕಗಳ ಹಿನ್ನೆಲೆಯಿಲ್ಲ ದೇ
ಅವುಗಳನ್ನು ಅರ್ಥಮಾಡಿಕೊಳ್ಳು ವುದು ಕಷ್ಟ ವಾಗುತ್ತದೆ. ದೇವರವಾಕ್ಯ ದ ಅಳತೆಗೋಲು ಈಗ
ಸಂಪೂರ್ಣವಾಗಿದೆ ಅಥವಾ ಪೂರ್ತಿಯಾಗಿದೆ.
ಸಿದ್ಧಾಂತದ ಪ್ರಗತಿಯನ್ನು ಸತ್ಯ ವೇದದಲ್ಲಿ ಯುಗಗಳ ಮುಖಾಂತರವೂ
ಗಮನಿಸಬಹುದು. ಇದರಲ್ಲಿ ಪ್ರತಿಯೊಂದು ಯುಗವೂ ಮನುಷ್ಯ ನಿಗೆ ದೇವರಿಂದ ಹೆಚ್ಚಿನ
ಬೆಳಕನ್ನು ತರುತ್ತದೆ. ಯುಗವೆಂದರೆ ಒಂದು ನಿದಿಷ್ಟ ಕಾಲಘಟ್ಟ ದಲ್ಲಿ ದೇವರು
ಮನುಷ್ಯ ನೊಂದಿಗೆ ನೇಮಿಸಿದ ದೈವೀಕ ವ್ಯ ವಹಾರವಾಗಿದೆ (ಉ.ದಾ. ಹಳೇ ಒಡಂಬಡಿಕೆಯ
ಧರ್ಮಶಾಸ್ತ್ರಯುಗ ಅಥವಾ ಹೊಸ ಒಡಂಬಡಿಕೆಯ ಕೃಪಾಯುಗ). ಒಬ್ಬ ನೇ ಸತ್ಯ ದೇವರು
ತನ್ನ ಸೇವಕರ ಮೂಲಕ ಅದ್ಭು ತವಾದ ರೀತಿಯಲ್ಲಿ ಕಾಲಾನುಕಾಲಕ್ಕೆ ತನ್ನ ನ್ನು
ಪ್ರಕಟಿಸಿಕೊಂಡನು ಎಂದು ಸತ್ಯ ವೇದವು ಬೋಧಿಸುವದನ್ನು ನಾವು ನಂಬುತ್ತೇವೆ.
23
ದೇವರ ವಾಕ್ಯ ದ ಸರಿಯಾದ ಅರ್ಥ ವಿವರಣೆ ಮಾಡುವ ಅಧ್ಯ ಯನವನ್ನು ಹರ್ಮೆನೋಟಿಕ್
ಅಂದರೆ ಅರ್ಥವಿವರಣಾ ಶಾಸ್ತ್ರ ಎನ್ನು ತ್ತಾರೆ. ಈ ಅರ್ಥವಿವರಣಾಶಾಸ್ತ್ರದ ಮೇಲೆ ಅನೇಕ
ಪುಸ್ತಕಗಳು ದೇವರ ವಾಕ್ಯಾಕ್ಕ ನುಸಾರವಾದ ಮತ್ತು ಸತ್ಯ ವೇದ ವಿಧ್ಯಾರ್ಥಿಗಳಿಗೆ
ಅನುಕೂಲಕರವಾದ ಅರ್ಥವಿವರಣೆಯ ತತ್ವ ಗಳನ್ನು ಒದಗಿಸುತ್ತವೆ ದೇವರ ವಾಕ್ಯ ವನ್ನು
ವ್ಯಾಖ್ಯಾನಿಸುವದಕ್ಕೂ ಇರುವ ಕೆಲವು ಮುಖ್ಯ ತತ್ವ ಗಳನ್ನು ಸಂಕ್ಷಿಪ್ತವಾಗಿ ಪರೀಕ್ಷೆ ಮಾಡೋಣ.
ಮೊದಲನೆಯದಾಗಿ ಸತ್ಯ ವೇದದ ಎಲ್ಲಾ ವ್ಯಾಖ್ಯಾನಗಳಲ್ಲಿ ಅಥವಾ ಅರ್ಥ
ವಿವರಣೆಯಲ್ಲಿ ಗಮನಿಸುವಿಕೆ (ವಾಕ್ಯ ಭಾಗದಲ್ಲಿ ಏನಿದೆ), ವ್ಯಾಖ್ಯಾನ ಅರ್ಥವಿವರಣೆ (ಇದರ
ಅರ್ಥವೇನು) ಮತ್ತು ಅಳವಡಿಸಿಕೊಳ್ಳು ವಿಕೆ (ನಮಗೆ ಈಗ ಇದರ ಅರ್ಥವೇನು?
ವಿಶೇಷವಾಗಿ ಪ್ರಾಯೋಗಿಕ ಅವಧಿಯಲ್ಲಿ) ಗಳ ನಡುವಿನ ವ್ಯ ತ್ಯಾಸವನ್ನು ಮಾಡಬೇಕು.
ಪ್ರತಿಯೊಂದು ವಾಕ್ಯ ಭಾಗಕ್ಕೂ ಒಂದೇ ಒಂದು ಪ್ರಾಥಮಿಕ ಅರ್ಥವಿರುತ್ತದೆ. ಆದರೂ ಆತ್ಮೀಕ
ತೊಡಗಿಸಿಕೊಳ್ಳು ವಿಕೆ ಮತ್ತು ಅಳವಡಿಸಿಕೊಳ್ಳು ವಿಕೆಗಳು ಅಸಂಖ್ಯಾತವಾಗಿರುತ್ತದೆ ---
ದೇವರಾತ್ಮ ವು ಅಂತಹ ಸತ್ಯ ದ ಉಗ್ರಾಣವಾಗಿದೆ! ವ್ಯಾಖ್ಯಾನವು ಬಹಳ ಮುಖ್ಯ ವಾದದ್ದು ಇದು
ನಮಗೆ ದೇವರು ಏನನ್ನು ಹೇಳುತ್ತಾನೆಂದು ಅರ್ಥಮಾಡಿಕೊಳ್ಳ ಲು ಸಹಾಯಮಾಡುವದು
ಮಾತ್ರವಲ್ಲ ದೆ ಪುರಾತನ ಲೇಖಕರನ್ನು ನಮ್ಮ ನವೀನ ಕಾಲದೊಂದಿಗೆ ಬೆಸೆಯುವ
ಸೇತುವೆಯಾಗಿರಲು ಸಹಾಯ ಮಾಡುತ್ತದೆ. ಹೊಸದಾಗಿ ಹುಟ್ಟಿದ ವಿಶ್ವಾಸಿಯು ಅಂದರೆ
ಆತನಿಗೆ ಅಥವಾ ಆಕೆಗೆ ಉಪದೇಶ ಮಾಡಲು ಪವಿತ್ರಾತ್ಮ ನ ಮೇಲೆ ಆತುಕೊಂಡಿತ್ತಾರೋ.
ಅವರು ಮಾತ್ರವೇ ಸ್ಥಿರವಾಗಿಯೂ ಸರಿಯಾಗಿಯೂ ವ್ಯಾಖ್ಯಾನಿಸುತ್ತಾರೆ. ಸತ್ಯ ವೇದದ
ವ್ಯಾಖ್ಯಾನದಲ್ಲಿನ ಅನೇಕ ಸಂಘರ್ಷಗಳಿಗೆ ಕಾರಣ ದೇವರ ವಾಕ್ಯ ಕ್ಕೆ ಅನುಸಾರವಲ್ಲ ದ ಜನರು
(ಕೆಲವು ಸಾರಿ ಕೆಲವು ವೇದ ಪಂಡಿತರು) ಪರಿಶುದ್ಧ ವಾಕ್ಯ ದ ಮೇಲೆ ತಮ್ಮ ಸ್ವಂತ
ಆಲೋಚನೆಗಳನ್ನು ಹೇರುವದೇ ಆಗಿರುತ್ತದೆ.
ಎಲ್ಲಾ ವ್ಯಾಖ್ಯಾನಗಳ ನಿಯಮವು ಪ್ರತಿಯೊಂದು ಹೇಳಿಕೆಯನ್ನು ಅದರ ಸಾಮಾನ್ಯ
ಸರಳ ಅರ್ಥದಲ್ಲಿ ತೆಗೆದುಕೊಳ್ಳು ವದು. ರೂಪಕಾಲಂಕಾರ ಅದು ಕೊಡುವ
ಭಾವಕ್ಕ ನುಸಾರವಾಗಿ ಭಾಷೆಯು ಸತ್ಯ ವೇದದಲ್ಲಿ ಹೆಚ್ಚಾಗಿವೆ. ಆದರೆ ಇವುಗಳ ಕೂಡ ಅಕ್ಷರಶಃ
ಅರ್ಥವನ್ನು ತಿಳಿಸುತ್ತದೆ ಕೆಳಕಂಡ 7 ತತ್ವ ಗಳು ಸಮಗ್ರವಾಗಿಲ್ಲ ದಿದ್ದ ರು, ವಿಧ್ಯಾರ್ಥಿಗಳ
ಆಲೋಚನೆ ಬಹಳವಾಗಿ ಸಹಾಯಮಾಡುತ್ತದೆ
1. ನಾವು ಸತ್ಯ ವೇದದ್ದು ದ್ದ ಕ್ಕೂ ಸತ್ಯ ವನ್ನು ಪತ್ತೆಹಚ್ಚ ಬೇಕು. ಯಾಕೆಂದರೆ ಆರಂಭದ
ಪ್ರಕಟಣೆಯು ಒಂದು ವಿಷಯದ ಮೇಲೆ ಕೊನೆಯದಾಗಿರುವದಿಲ್ಲ . ಆದರೂ ಇದು
24
ವಿಷಯಕ್ಕೆ ಪ್ರಮುಖ ಕೀಲಿಯಾಗಿರಬಹುದು (ಸಿದ್ಧಾಂತದ ಪ್ರಗತಿ). ಆರಂಭದ
ಪ್ರಕಟಣೆಯು ನಂತರದ ಪ್ರಕಟಣೆಗಿಂತಲೂ ಕಡಿಮೆ ಮೌಲ್ಯ ವುಳ್ಳ ದ್ದೆಂದು ಹೇಳುವದು
ತಪ್ಪು . ಯುಗಗಳ ಅಧ್ಯ ಯನವು ಪ್ರಗತಿಪರ ಪ್ರಕಟಣೆಯನ್ನು ಅರ್ಥಮಾಡಿಕೊಳ್ಳ ಲು
ಶ್ರೇಷ್ಟ ರೀತಿಯಲ್ಲಿ ಅನುಕೂಲ ಮಾಡುತ್ತದೆ.
2. ದೇವರು ಮನುಷ್ಯ ರ ಭಾಷೆಯನ್ನು ಹಂಚಿಕೊಟ್ಟ ನು. ಮತ್ತು ಇದರ ಮೂಲಕ
ಸಂಪರ್ಕಿಸಲು ಅನುಗ್ರಹ ತೋರಿದನು. ಈ ರೀತಿಯಾಗಿ ಮಾಡುವ ಸಲುವಾಗಿ ತನ್ನ
ಆಲೋಚನೆಗಳು ನೆರವೇರುವಂತೆ ಮಾಡಲು ಮನುಷ್ಯ ನ ಶೈಲಿಯನ್ನು
ಉಪಯೋಗಿಸಿದನು. ಇದು ಪ್ರಾರ್ಥಮಿಕವಾಗಿ ದೇವರು ತನ್ನ ಸ್ವಂತ ಗುಣಲಕ್ಷಣಗಳನ್ನು
ವಿವರಿಸುವ ಸತ್ಯ ವಾಗಿದೆ. ಮಾನವ ರೂಪ ವ್ಯ ಕ್ತಿತ್ವ ಗಳ ಮೂಲಕ (ದೇವರ ವೈಯುಕ್ತಿಕ
ಗುಣಲಕ್ಷಗಳು ಎಂಬ ನಂತರದ ಪಾಠವನ್ನು ನೋಡಿರಿ). ಬರೆಯಲ್ಪ ಟ್ಟ ವಾಕ್ಯ ಗಳ
ಮೂಲಕ ದೇವರು ಪ್ರಕಟಿಸಿದನು ಹಾಗೂ ಮಾನವನ ಭಾಷೆಯ
ಅಸಂಪೂರ್ಣವಾಗಿರುವದರಿಂದ ಸಂಪರ್ಕಿಸಲು ಅಡ್ಡಿಯಾಗುವದಿಲ್ಲ . ನಾವು
ಸಂಗತಿಗಳನ್ನು ಗ್ರಹಿಸಿಕೊಳ್ಳು ವ ಹಾಗೆ ದೇವರು ತನ್ನ ನ್ನು ಹೊಂದಿಕೆ ಮಾಡಿಕೊಳ್ಳು ತ್ತಾನೆ.
3. ಸತ್ಯ ವೇದದ ಮೇಲೆ ಮತ್ತು ವಾಕ್ಯ ಭಾಗದ ಸಾಕ್ಷರತೆಯನ್ನು ಹುಡುಕಲು ಒಬ್ಬ ರ ಸ್ವಂತ
ಪಂಗಡದ ಅಥವಾ ವಿಶ್ವಾಸರ್ಹ ಹಿನ್ನೆಲೆಗಳ ಪೂರ್ವಾವಧಿ ಪ್ರಾಯ ಕಲ್ಪ ನೆಗಳನ್ನು
ಒತ್ತಾಯಪಡಿಸುವದರ ಬದಲಾಗಿ ಪ್ರಮಾಣಿಕವಾಗಿ ಮಾಡಬೇಕಾದ ಕಾರ್ಯವೆಂದರೆ
ಕೊಡಲ್ಪ ಟ್ಟ ವಿಷಯಕ್ಕೆ ಸಂಬಂಧಿಸಿದಂತೆ ಕೊಟ್ಟ ಎಲ್ಲಾ ವಾಕ್ಯ ಭಾಗಗಳನ್ನು ಅನುಸರಿಸಿ
ನೋಡಿ ನಂತರ ವಾಕ್ಯ ಗಳು ಖಾತರಿಪಡಿಸಿದಂತೆ ಅಂತ್ಯ ವನ್ನು ನಿರ್ಧರಿಸುವದು ಆಗಿದೆ.
4. ಪದಗಳು ವ್ಯಾಕರಣ ಭಾವ ಅಥವಾ ಶೈಲಿ, ಇತ್ಯಾದಿಗಳೆಲ್ಲ ವನ್ನು ಅವುಗಳ ಸಮಂಜಸ,
ಸನ್ನಿವೇಶ ಮತ್ತು ಚಾರಿತ್ರಿಕ ಚೌಕಟ್ಟಿನೊಳಗೆ ನೋಡಬೇಕು. ಒಂದು ಹೇಳಿಕೆ ಹೀಗಿದೆ
“ಸನ್ನಿವೇಶದಿಂದ ತೆಗೆದುಹಾಕಲ್ಪ ಟ್ಟ ಮೂಲ ವಾಕ್ಯ ವು ಸಬೂಬು ಅಥವಾ ನೆಪದ
ಫಲಿತಾಂಶವನ್ನು ನೀಡುತ್ತದೆ”
5. ಅದೇ ರೀತಿಯ ವ್ಯಾಕರಣ ಬದ್ಧ ಚಾರಿತ್ರಿಕ ಅರ್ಥ ವಿವರಣೆ ಸ್ಪ ಷ್ಟ ಕಾವ್ಯಾತ್ಮ ಕ ಮತ್ತು
ರೂಪಕ ಅಭಿವ್ಯಕ್ತಿಗಳನ್ನುಂಟು ಮಾಡುತ್ತಾ ದೇವರ ವಾಕ್ಯ ದುದ್ದ ಕ್ಕೂ
ಉಪಯೋಗಿಸಲ್ಪ ಡಬೇಕು. ಕೆಲವು ಜನರು ಪ್ರವಾದನೆಗಳನ್ನು ಹೊರತುಪಡಿಸಿ
ಸತ್ಯ ವೇದವನ್ನು ಅಕ್ಷರಶಃ ತೆಗೆದುಕೊಳ್ಳು ತ್ತಾರೆ. ಇದು ಅಸಮರ್ಥವಾಗಿ ಭಿನ್ನ ತೆಯನ್ನು
ತೋರಿಸುವದಾಗಿದೆ. ಉದಾ: ಕ್ರಿಸ್ತನ ಮೊದಲನೇ ಆಗಮನದ ಭವಿಷ್ಯ ವಾಣಿಗಳು
25
ಅಕ್ಷರಶಃ ನೆರವೇರಿದವು ಆದುದರಿಂದ ಆತನ ಎರಡನೇ ಬರೋಣದ ಮತ್ತು
ಸಾಮ್ರಾಜ್ಯ ದ ಕುರಿತಾದ ಪ್ರವಾದನೆಗಳು ಸಹ ಅಕ್ಷರಶಃ ನೆರವೇರುತ್ತದೆ. ಅಂತಹ
ಸಂಗತಿಗಳು “ಆತ್ಮೀಕರರಣ ಮಾಡುವದು”. (ರೂಪಕಾಲಂಕರವಾಗಿ ವರ್ಣಿಸುವದು)
ದೇವರ ವಾಕ್ಯ ಕ್ಕ ನುಸಾರವಾದದ್ದ ಲ್ಲ .
26
ದೇವರ ವಾಕ್ಯ ದ ಬೆಳಗುವಿಕೆ (ಜ್ಞಾನೋದಯ)
“ಬೆಳಗುವಿಕೆ” ಪದವನ್ನು ಬೆಳಕಿನೊಂದಿಗೆ ಭೌತಿಕವಸ್ತು ಗಳ ಪ್ರವಾಹವನ್ನು
ವಿವರಿಸಲು ಉಪಯೋಗಿಸಲಾಗುತ್ತದೆ. ಆತ್ಮೀಕ ಬೆಳಕಿನೊಂದಿಗೆ ದೈವಪ್ರೇರಿತ ದೇವರ ಆತ್ಮ ನು
ಪ್ರಕಟನೆಯ ಪ್ರವಾಹವನ್ನು ವಿವರಿಸಲು ನಾವೂ ಸಹ ಅದೇ ಪದವನ್ನು ಉಪಯೋಗಿಸುತ್ತೇವೆ.
ನಾವು ಈಗಷ್ಟೇ ಪರಿಗಣಿಸಿದಂತೆ ಮನುಷ್ಯ ಬರಹಗಾರರಿಗೆ ದೇವರವಾಕ್ಯ ದ
ಪ್ರೇರಣೆಯನ್ನುಂಟುಮಾಡಿದ ಸತ್ಯ ವೇದದ ಲೇಖಕನಾದ ಪವಿತ್ರಾತ್ಮ ನು ದೇವರವಾಕ್ಯ ದ
ಬೆಳಗುವಿಕೆಯನ್ನು ಮಾಡಿದಾಗ ಮಾತ್ರವೇ ಅರ್ಥವಿವರಣೆಯ ತತ್ವ ಗಳ ಅರ್ಥವನ್ನು
ತಿಳಿಯಲು ಸಾಧ್ಯ . (1 ಕೊರಿಂಥ 2:10-14; 1 ಯೋಹಾ 2:20,27) ಬೆಳಗುವಿಕೆಯು
ನೂತನ ಜ್ಞಾನದ ನೀಡಿಕೆಯ ಕುರಿತು ಸಂಬಂಧಪಡುವದಿಲ್ಲ ಅಥವಾ ಪ್ರಕಟನೆಯ
(ದೈವಪ್ರೇರಣೆ) ಖಚಿತ ದಾಖಲೆಗೂ ಸಂಬಂಧಪಡುವದಿಲ್ಲ ಆದರೆ ವಾಕ್ಯ ಭಾಗದ ಸ್ಪ ಷ್ಟೀಕರಣ
ದೇವರಿಂದ ಪ್ರಕಟಿಸಲ್ಪ ಟ್ಟ ಹಾಗೂ ದೈವ ಪ್ರೇರಿತವಾದದ್ದಾಗಿರುತ್ತದೆ. ಈ ವ್ಯ ತ್ಯಾಸಗಳನ್ನು
ಮನಸ್ಸಿನಲ್ಲಿಟ್ಟು ಕೊಳ್ಳು ವುದು ಬಹಳ ಪ್ರಾಮುಖ್ಯ .
ದೇವರವಾಕ್ಯ ದ ಕೆಲವು ವಾಕ್ಯ ಗಳು ಒಂದಕ್ಕೊಂದು ವಿರೋಧಭಾಸದಿಂದ
ಕೂಡಿರುವುದರ ಕಾರಣದಿಂದಾಗಿ ಸತ್ಯ ವೇದದಲ್ಲಿ ನಾವು ಭರವಸೆ ಇಡಲಾಗುವದಿಲ್ಲ ಎಂದು
ಕೆಲವರು ಹೇಳುತ್ತಾರೆ. ಎಚ್ಚ ರಿಕೆಯಿಂದ ಅಧ್ಯಾಯನ ಮಾಡಿದಾಗ ಪ್ರಾಯೋಗಿಕನಾಗಿ ಆ
ರೀತಿಯಲ್ಲಿ ವಿರೋಧಭಾಸಗಳನ್ನು ಬಗೆಹರಿಸಬಹುದು. ಅವು ನಿಜವಾಗಿಯೂ
ದೇವರವಾಕ್ಯ ದ ಸೌಂದರ್ಯವನ್ನು ಹೆಚ್ಚು ಸ್ಪ ಷ್ಟ ವಾಗಿ ಹೊರತರಲು ಹವಣಿಸುತ್ತೇವೆ. ಉಳಿದ
ವಿರೋಧಭಾಸಗಳನ್ನು ದೇವರ ಅನಂತ ಜ್ಞಾನವಿವೇಕಗಳನ್ನು ಅರ್ಥಮಾಡಿಕೊಳ್ಳ ಲು
ಮನುಷ್ಯ ನ ಮಿತಿಯುಳ್ಳ ಸಾಮರ್ಥ್ಯದ ಗುಣಲಕ್ಷಣಗಳೆಂದು ಹೇಳಬಹುದು.
ಸತ್ಯ ವೇದವು ತಪ್ಪಿಲ್ಲ ದ್ದು ಮತ್ತು ತಪ್ಪಿಹೋಗದ್ದು (ಖಂಡಿತವಾದದ್ದು )
ಆಗಿರುವದರಿಂದ ಕ್ರೈಸ್ತ ನಂಬಿಕೆ ಮತ್ತು ಅಭ್ಯಾಸಗಳಿಗೆ ಇದೇ ಅಂತಿಮ ಅಧಿಕಾರವಾಗಿದೆ.
ದೀನನಾದ ವಿಶ್ವಾಸಿಯು ಪವಿತ್ರಾತ್ಮ ನು ಹೃದಯ ಮತ್ತು ಮನಸ್ಸು ಗಳನ್ನು ಬೆಳಗುತ್ತಾನೆ ಅವನ
ಆತ್ಮೀಕ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ ಮತ್ತು ಅವನ ಆಳವಾದ ಅವನ ಹೆಬ್ಬ ಕೆಯನ್ನು
ತೃಪ್ತಿಪಡಿಸುತ್ತಾನೆ ಎಂಬ ಭರವಸೆಯೊಂದಿಗೆ ಹೋಗಬಹುದು. ಈ ಸರಣಿಯಲ್ಲಿನ ಉಳಿದ
ಪಾಠಗಳು ಈ ದೈವೀಕ ಅಧಿಕಾರವನ್ನು, ದೇವರ ವಾಕ್ಯವನ್ನು ಕಟ್ಟು ನಿಟ್ಟಾಗಿ ಆಧರಿಸಿದೆ..
27
ಅಧ್ಯಾಯ
3
ದೈವಶಾಸ್ತ್ರ:
ದೇವರ (ಕುರಿತಾದ) ಅಧ್ಯ ಯನ
-ಭಾಗ 1-
ದೈವಶಾಸ್ತ್ರ ಎಂಬ ಪದದ ಅಕ್ಷರಶಃ ಅರ್ಥವೇ “ದೇವರ ಕುರಿತಾದ ಅಧ್ಯ ಯನ”
ಆದರೆ ಈ ಪದವನ್ನು ವಿಸ್ತಾರವಾದ ಅರ್ಥದಲ್ಲಿ ತೆಗೆದುಕೊಂಡಾಗ ಕ್ರೈಸ್ತ ಸಿದ್ಧಾಂತದ
ಸಂಪೂರ್ಣ ಕ್ಷೇತ್ರವನ್ನು ಆಲಂಗಿಸಿಕೊಳ್ಳು ವಾಗ ಬರಹಗಾರರು ಸಾಧಾರಣವಾಗಿ ದೇವರ
ವ್ಯ ಕ್ತಿತ್ವ ಗಳ ಹೆಚ್ಚು ನಿಶ್ಚಿತ ಅಧ್ಯ ಯನಕ್ಕೆ ಥಿಯಾಲಜಿ ಪ್ರಾಪರ್ ಎಂದು ಕರೆಯುತ್ತಾರೆ.
ದೇವರ ಅಸ್ತಿತ್ವ
ನೈಸರ್ಗಿಕ ಕಾರಣದಿಂದ ಕೆಲವು ಸಂಗತಿಗಳನ್ನು ಕಲಿಯಬಹುದಾದರೂ ದೇವರ
ಸತ್ಯ ವೇದವನ್ನು ಹೊರತುಪಡಿಸಿ ದೇವರ ಕುರಿತಾದ ಮಹಾ ಸತ್ಯ ಗಳನ್ನು ತಿಳಿದುಕೊಳ್ಳ ಲು
28
ಸಾಧ್ಯ ವಿಲ್ಲ .. ದೇವರ ಅಸ್ತಿತ್ವ ದ ಕುರಿತಾಗಿ 4 ಪ್ರಧಾನ ತಾರ್ಕಿಕ ವಾದಗಳು ಇವೆ. ಮೊದಲ
ಮೂರು ವಾದಗಳಿಗೆ ಸತ್ಯ ವೇದದ ಬೆಂಬಲವಿದೆ.
ಲೋಕೋತ್ಪ ತಿಯ ವಾದ ವೆಂಬುದಿದೆ. ಈ ವಾದದ ಪ್ರಕಾರ, ವಿಶ್ವ ವು ಸಾಕಷ್ಟು
ಕಾರಣಗಳ ಪರಿಣಾಮವಾಗಿದೆ. ಈಗ ಏನಾದರೂ ಅಸ್ತಿತ್ವ ದಲ್ಲಿದ್ದ ರೆ ಅದು ಶೂನ್ಯ ದಿಂದ
ಬಂದಿದ್ದಾಗಿರಬೇಕು. ಅಥವಾ ನಿತ್ಯ ತ್ವ ದ್ದಾಗಿರಬೇಕು. ಯಾವುದು ಸಹ ಕಾರಣವಿಲ್ಲ ದೆ
ಅಸ್ತಿತ್ವ ದಲ್ಲಿರುವದನ್ನು ತೋರಿಸುವದಿಲ್ಲ . ಅಥವಾ ಶೂನ್ಯ ದಿಂದ ಬಂದಿದ್ದಾಗಿ ತೋರಿಸುವದಿಲ್ಲ .
ಭೌತಿಕವಾದವುಗಳು ನಿತ್ಯ ವಾದದ್ದೆಂದು ನಂಬುವದಕ್ಕಿಂತ ನಿತ್ಯ ನಾದ ಪರಮ
ಬುದ್ಧಿಶಕ್ತಿಯುಳ್ಳ ವನ ಸೃಷ್ಟಿಯ ಎಲ್ಲ ವನ್ನು ಶೂನ್ಯ ದಿಂದಲೇ ಸೃಷ್ಟಿ ಮಾಡಿದ್ದಾನೆಂದು
ನಂಬುವದು ಹೆಚ್ಚು ತಾರ್ಕಿಕವಾಗಿದ್ದಾಗಿದೆ. ಈ ವಾದದಿಂದ ದೇವರು ಶಾಶ್ವ ತನಾಗಿದ್ದಾನೆಂದು
ಶಕ್ತಿಶಾಲಿಯಾಗಿದ್ದಾನೆ ಹಾಗೂ ಸಂಕೀರ್ಣವಾದ ಮತ್ತು ಭವ್ಯ ವಾದ ಶ್ರೇಷ್ಠ “ಪರಿಣಾಮ”
ವಿಶ್ವ ದ ಅಸ್ತಿತ್ವ ಕ್ಕೆ ಕಾರಣ ಕರ್ತನಾಗಿದ್ದಾನೆಂದು ಮುಕ್ತಾಯ ಮಾಡಬಹುದು. (ಆದಿ. 1:1, ಇಬ್ರಿ.
11:3)
ನಂತರ ಮೂಲ ಸಂಕಲ್ಪ ವಾದ ವೆಂಬುದಿದೆ. (ಅಂತಿಮ ಕಾರಣ ಸಿದ್ಧಾಂತ). ಈ
ವಾದದ ಪ್ರಕಾರ ಗಮನಿಸಬಹುದಾದ ಉದ್ಧೇಶ, ರಚನಾ ಶೈಲಿ ಮತ್ತು ಕ್ರಮಗಳು ವಿಶ್ವ ದಲ್ಲಿ
ಇರಲೇಬೇಕು. ಮತ್ತು ವಿಶ್ವ ದಲ್ಲಿ ಅವು ಪಾಲುಗಾರಿಕೆ ಹೊಂದಿರಲೇಬೇಕು. ಇದು ಮೊದಲನೇ
ವಾದದೊಂದಿಗೆ ನಿಕಟವಾಗಿದೆ. ಪೌಲನು ಅ.ಕೃ 14;17 ರಲ್ಲಿ ಮನುಷ್ಯ ನಿಗೆ ದೇವರ
ಒಳ್ಳೆಯತನದ ಗುರುತಾಗಿ ಕಾಲಗಳ ಪ್ರಗತಿಯ ಕ್ರಮವನ್ನು ಕುರಿತು ಮಾತನಾಡುವಾಗ ಈ
ವಾದವನ್ನು ಉಪಯೋಗಿಸುತ್ತಾನೆ. ಬಹಳ ಚಿರಪರಿಚಿತವಾದ ಹೊಲಿಕೆಯೆಂದರೆ ಒಬ್ಬ
ವ್ಯ ಕ್ತಿಯು ಒಂದು ಕೈಗಡಿಯಾರವನ್ನು ಕೊಂಡು ಕೊಳ್ಳು ತ್ತಾನೆ. ನಂತರ ಅದರ ಕೆಲಸ
ಮಾಡುವ ಕ್ರಮ ಮತ್ತು ಸಂಕೀರ್ಣತೆಯನ್ನು ಗಮನಿಸುತ್ತಾನೆ. ಕಾರಣ ಅದನ್ನು
ಉಂಟುಮಾಡಿದವನ ಬುದ್ಧಿವಂತಿಕೆಯನ್ನು ತಿಳಿಯುವದು. ಈ ದೃಷಾಂತವು ಬಹಳ ಸರಳವು
ಚಿರಪರಿಚಿತವೂ ಆಗಿದೆ. ಇದರ ಅತ್ಯು ತ್ತಮ ಪ್ರಸ್ತು ತಿಯನ್ನು ಪೇಲೆಯವರ “ನೈಸಿರ್ಗಿಕ
ದೈವಶಾಸ್ತ್ರ” ಎಂಬ ಹಳೆ ಪುಸ್ತಕದಲ್ಲಿ ಕಾಣುತ್ತೇವೆ ಈ ಪುಸ್ತಕವು ಡಾರ್ವಿನ್ನ ಸಿದ್ಧಾಂತವನ್ನು
ತಿರಸ್ಕ ರಿಸುವ ಶ್ರೇಷ್ಠ ಪುಸ್ತಕವಾಗಿದೆ.
ಪ್ರಪಂಚದಲ್ಲಿರುವ ಸಂಕಷ್ಟ ಮತ್ತು ದುಷ್ಟ ತನದ ಪ್ರಶ್ನೆಯು ಆಗಾಗ್ಗೆ ಈ ಮೂಲ
ಸಂಕಲ್ಪ ವಾದಕ್ಕೆ ವಿರುದ್ಧ ವಾಗಿ ತರಲಾಗಿದೆ. ಹೀಗಿದ್ದ ರು ದೇವರ ಸಂಕಷ್ಟ ವನ್ನಾಗಲೀ,
ದುಷ್ಟ ತನವನ್ನಾಗಲೀ ಸೃಷ್ಟಿಸಲಿಲ್ಲ ವೆಂಬುದನ್ನು ನಾವು ನೆನಪಿನಲ್ಲಿಟ್ಟು ಕೊಳ್ಳ ಬೇಕು. ಇವೆಲ್ಲ ವೂ
29
ನಕರಾತ್ಮ ಕ ಸಂಗತಿಗಳು ಎಂದರೆ ಸೈತಾನನು ಮತ್ತು ಮನುಷ್ಯ ನು ದೇವರಿಗೆ
ಅವಿಧೇಯರಾಗಿದ್ದ ರ ಪಲಿತಾಂಶಗಳಾಗಿವೆ. ನಾವು ಜ್ಞಾಪಕದಲ್ಲಿಟ್ಟು ಕೊಳ್ಳ ಬೇಕಾದ
ಮತ್ತೊಂದು ಸತ್ಯಾಂಶವೆಂದರೆ ಅಂತ್ಯ ದಲ್ಲಿ ದೇವರು ತನ್ನ ನ್ನು ತಾನು ತನ್ನ ಎಲ್ಲಾ ವಿಷಯಗಳಲ್ಲಿ
ನ್ಯಾಯವಂತನು ಮತ್ತು ಜ್ಞಾನಿಯಾಗಿರುತ್ತಾನೆ. ಎಂದು ತೋರಿಸಲಾಗಿದೆ..
ಮುಂದಿನದು ಮಾನವ ಶಾಸ್ತ್ರೀಯವಾದ ಮೊದಲ ಎರಡು ವಾದಗಳ ಪರಿಷ್ಕ ರಣೆ,
ತರ್ಕದ ಈ ಸಾಲು ಹೀಗೆ ಹೇಳುತ್ತದೆ ಮುಂದಿನ ಭೌದ್ಧಿಕ, ಭಾವನಾತ್ಮ ಕ (ಧಾರ್ಮಿಕ
ವಾದವನ್ನು ಒಳಗೊಂಡು) ಮನುಷ್ಯ ನ ಸ್ವ ಭಾವದ ಮತ್ತು ಇಚ್ಛೆ ಯ ಅಂಶಗಳು ಸಮಾನ
ಲಕ್ಷಣಗಳುಳ್ಳ ಬುದ್ಧಿವಂತ ಕಾರಣವನ್ನು ಬೇಡಿಕೆ ಇಡುತ್ತದೆ. ಒಮ್ಮೆ ಸತ್ಯ ವಾಗಿ ಮಾತನಾಡಿದ
ಅನ್ಯ (ವಿಧರ್ಮಿ) ತತ್ವ ಜ್ಞಾನಿಯನ್ನು ಉಲ್ಲೇಖಿಸಿ ಅಥೇನೆಯಲ್ಲಿ ಸೇರಿದ ಪ್ರೇಕ್ಷಕರಿಗೆ ಪೌಲನು
ಹೇಳಿದ್ದೇನೆಂದರೆ – ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ, ಇರುತ್ತೇವೆ. ನಿಮ್ಮ
ಕವಿಗಳಲ್ಲಿಯೇ ಕೆಲವರು - ನಾವು ಆತನ ಸಂತಾನದವರೇ ಎಂಬುದಾಗಿ ಹೇಳಿದ್ದಾರೆ. ನಾವು
ದೇವರ ಸಂತಾನದವರಾಗಿದ್ದ ಮೇಲೆ ದೈವವು ಮನುಷ್ಯ ನ ಶಿಲ್ಪ ವಿದ್ಯೆಯಿಂದಲೂ,
ಕಲ್ಪ ನೆಯಿಂದಲೂ ಕೆತ್ತಿರುವ ಚಿನ್ನ , ಬೆಳ್ಳಿ, ಕಲ್ಲು ಗಳಿಗೆ ಸಮಾನವೆಂದು ನಾವು ಭಾವಿಸಬಾರದು.
ಮಾನವ ಶಾಸ್ತ್ರೀಯ ವಾದಕ್ಕೆ ಇರುವ ಆಕ್ಷೇಪಣೆಯು ಮನುಷ್ಯ ನಲ್ಲಿಯ ನೀತಿ ಭ್ರಷ್ಟ ತೆಯ
ಪ್ರಸನ್ನ ತೆಯಾಗಿದೆ. ಆದರೆ ದೇವರ ಅಸ್ತಿತ್ವ ದ ಮೇಲೆ ಅಕ್ರಮಣ ಮಾಡುವ ಜನರು ತಮ್ಮ
ಕುರಿತಾಗಿ ತಾವು ನೀತಿ ಭ್ರಷ್ಟ ರಾಗಿದ್ದೇವೆ ಎಂಬುದನ್ನು ಅಪರೂಪವಾಗಿ ಆಲೋಚಿಸುತ್ತಾರೆ.
ವಾದವು ಅತೀ ವಿರಳವಾಗಿ ಪ್ರಸ್ತಾಪಿಸಲ್ಪ ಡುತ್ತದೆ! ಮನುಷ್ಯ ರಲ್ಲಿನ ದೇವರ ಸ್ವ ರೂಪವನ್ನು
ಕೆಡಿಸುವದು ಅಥವಾ ವಿರೂಪಗೊಳಿಸುವದು, ಆದಾಮನಲ್ಲಿ ಮಾನವ ಕುಲ ಬಿದ್ದು
ಹೋದದ್ದ ರ ಫಲಿತಾಂಶವಾಗಿರುತ್ತದೆ.
ಅಂತಿಮವಾಗಿ ಮೂಲ ತತ್ವ ವಿಚಾರವಾದ ವಿದೆ ಈ ವಾದವು ಸತ್ಯ ವೇದದಲ್ಲಿ ಕಂಡು
ಬರುವದಿಲ್ಲ . ಮತ್ತೆ ಕೆಲವರು ದೇವರಲ್ಲಿ ನಂಬಿಕೆ ಇಡಲು ಸಹಾಯ ಮಾಡಿದರೂ ಈ
ವಾದವು ಅನೇಕರಿಂದ ತಿರಸ್ಕ ರಿಸಲ್ಪ ಟ್ಟಿತು. (ಹೆಚ್ಚಿನ ಮಾಹಿತಿಗಾಗಿ ಇಸಿಎಸ್ ಕೋರ್ಸ್ ಉತ್ತರ
ಹೇಳುವದಕ್ಕೆ ಸಿದ್ಧ ವಾಗರ್ರಿ ಎಂಬ ಕೋರ್ಸ್ ಪುಸ್ತಕವನ್ನು ನೋಡಿರಿ) ಇದು ಎರಡು
ಆವರಣಗಳನ್ನು ಮತ್ತು ಮುಕ್ತಾಯಗಳೊಂದಿಗಿನ ಅನುಮಾನಾತ್ಮ ಕವಾದ 1) ಪರಿಪೂರ್ಣ
ಅಸ್ತಿತ್ವ ದ ಆಲೋಚನೆಯನ್ನು ನಾನು ಹೊಂದಿದ್ದೇನೆ. 2) ಈ ಅಸ್ತಿತ್ವ ವು ವ್ಯ ಕ್ತಿಯು
ಅಸ್ತಿತ್ವ ದಲ್ಲಿರುವದೇ ಆದಲ್ಲಿ ಅಸ್ತಿತ್ವ ದಲ್ಲಿರದ ಪರಿಪೂರ್ಣ ವ್ಯ ಕ್ತಿಗಿಂತ ಶ್ರೇಷ್ಠ ನೇ ಆಗಿರಬೇಕು.
ಅಂದರೆ ಆತನ ವಾಸ್ತವೀಕ ಅಸ್ತಿತ್ವ ವು ಅತೀ ಶ್ರೇಷ್ಠ ನು ಎಂಬ ಅಸ್ತಿತ್ವ ದಲ್ಲಿದ್ದಾನೆ ಎಂಬ
30
ವಿಷಯಾಂಶವನ್ನು ಒಳಗೊಂಡಿರುತ್ತದೆ ಎಂಬ ಯೋಚನೆ. 3) ಆದುದರಿಂದ ಅಸ್ತಿತ್ವ ದ
ಆಲೋಚನೆಯು ಅತೀ ಪರಿಪೂರ್ಣ ವ್ಯ ಕ್ತಿ (ಅಸ್ತಿತ್ವ ) ಎಂಬ ಆಲೋಚನಯನ್ನು
ಒಳಗೊಂಡಿರುವಾಗ್ಗೆ ಆ ವ್ಯ ಕ್ತಿಯು ಅಸ್ತಿತ್ವ ದಲ್ಲಿರಬೇಕು. ಅನೇಕ ಜನರಿಗೆ ಈ ಕೊನೆಯ
ವಾದವನ್ನು ಅನುಸರಿಸಲು ಕಷ್ಟ ವಾಗುತ್ತದೆ. ಆದರೆ ಇದು ಮದ್ಯ ಯುಗದಿಂದ
ಉಪಯೋಗಿಸಲ್ಪ ಡುತ್ತಿದ್ದು , ಇದನ್ನು ಕನಿಷ್ಟ ತಿಳಿದುಕೊಳ್ಳು ವದು ಉತ್ತಮವಾಗಿರುತ್ತದೆ.
ಈ ವಾದಗಳು ಮನುಷ್ಯ ನನ್ನು ರಕ್ಷಣೆಗೆ ತರುವಷ್ಟು ಬೆಳಕನ್ನು ಹೊಂದಿರುವದಿಲ್ಲ .
ಆದರೆ ಅನೇಕ ಸಾರಿ ಅವುಗಳು ದೇವರಲ್ಲಿ ನಂಬಿಕೆಯಿಡುವ ಕಡೆಗೆ ಸರಿಯಾದ
ನಿದರ್ಶನದಲ್ಲಿಡುವ ಹೆಜ್ಜೆ ಯೆಂದು ನಿರೂಪಿಸಲ್ಪ ಟ್ಟಿದೆ. ಆದುದರಿಂದ ಸತ್ಯ ವೇದದ
ಹೊರತಾಗಿಯೂ ಆ ಸರ್ವೋನ್ನ ತೆ ಅಸ್ತಿತ್ವ ದ ಕುರಿತಾದ ಬಲವಾದ ಸೂಚನೆಯಿರುವದನ್ನು
ನಾವು ಕಾಣುತ್ತೇವೆ. ಆ ಸರ್ವೋನ್ನ ತ ಅಸ್ತಿತ್ವ ವನ್ನು ನಾವು ದೇವರೆಂದು ಕರೆಯುತ್ತೇವೆ.
ಬೇರೊಂದು ರೀತಿಯಲ್ಲಿ ಆಲೋಚಿಸುತ್ತಿರುವವರ ಕುರಿತೇನು? ಒಬ್ಬ ನೇ
ದೇವರು, ನಿಜವಾದ ದೇವರು ಹಾಗು ವೈಯುಕ್ತಿಕ ದೇವರಲ್ಲಿ ನಂಬಿಕೆಯಿಡದವರ
ದೃಷ್ಟಿಕೋನಗಳನ್ನು ಸಹ ಪರಿಗಣಿಸುವದು ನ್ಯಾಯಯುತವಾದುದ್ದು .
ಮೊದಲನೆಯದಾಗಿ,“ನಾಸ್ತಿಕತೆ” ಇವರು ದೇವರಿಲ್ಲ ಎನ್ನು ವವರು. ಹೇಗಿದ್ದ ರೂ
ದೇವರಿಲ್ಲ ವೆಂದು ಅವರು ಹೇಗೆ ತಾನೇ ಮನಗಂಡಿದ್ದಾರೆ? ದೇವರಿಲ್ಲ ಎಂದು
ಸಕರಾಕತ್ಮ ಕವಾಗಿ ಒಬ್ಬ ನು ಹೇಳಿಕೆ ನೀಡುವದೆಂದರೆ ಅವನು ಎಲ್ಲ ವನ್ನು ತಿಳಿದಿರಬೇಕು.
ಅಥವಾ ಅವನು ದೇವರಿಲ್ಲ ಎಂದು ತಿಳಿದಿರಬೇಕು. ಅಥವಾ ಅವನು ಆ ರೀತಿ
ಹೇಳಬಾರದು. ಸೈದ್ಧಾಂತ ನಾಸ್ತಿಕನು ಎಲ್ಲಾ ಜ್ಞಾನವನ್ನು ವಸ್ತು ಶಃ ಊಹಿಸುತ್ತಾರೆ. ದೇವರಿಲ್ಲ
ಎಂಬುದನ್ನು ಖಚಿತಪಡಿಸಿಕೊಳ್ಳ ಲು ಆತನು ಪ್ರಪಂಚದ ಪ್ರತಿಯೊಂದು ಭಾಗಗಳಿಗೂ
ಪ್ರಯಾಣಿಸಬೇಕಾಗಬಹುದು. ಉದಾ: ಕಮ್ಯೂ ನಿಷ್ಟ ರು ಒಬ್ಬ ವ್ಯ ಕ್ತಿಯನ್ನು ಮೊದಲ ಬಾರಿಗೆ
ಉಪಗ್ರಹ ಕಕ್ಷೆಗೆ ಬಿಟ್ಟಾಗ ಅವರು ಅಂತರಿಕ್ಷದ ಹೊರಭಾಗದಲ್ಲಿ ಅವನು ದೇವರನ್ನು
ನೋಡಲಿಲ್ಲ ವೆಂದು ಅವರಿಗೆ ವರದಿ ನೀಡಿದರು. ದೇವರು ಅಂತರಿಕ್ಷದ ಹೊರಗೆ
ಬಹುದೂರದಲ್ಲಿರುವನು. ಯಾರೋ ಒಬ್ಬ ರು ಸ್ವಾಗಸ್ಯ ವಾಗಿ ಅಬಿಪ್ರಾಯಪಟ್ಟಿದ್ದಾರೆ.
“ಅಂತರಿಕ್ಷಯಾನಿಯ ಒಡನಾಡಿಯು ಆಕಾಶ ನೌಕೆಯಿಂದ ಹೊರಗೆ ಹೆಜ್ಜೆ ಇಟ್ಟಾಗ, ಆತನು
ದೇವರನ್ನು ಸಂಧಿಸಿರಬಹುದು? ದೇವರಿಲ್ಲ ವೆಂದು ಸಂಪೂರ್ಣವಾಗಿ ನಿಶ್ಚಿತ ಪಡಬೇಕಾದರೆ
ನಾಸ್ತಿಕನು ಎಲ್ಲ ವನ್ನು ತಿಳಿದಿರಬೇಕು ಹಾಗು ಒಂದೇ ಸಮಯದಲ್ಲಿ ಎಲ್ಲಾ ಕಡೆಯು
ಇರಬೇಕು. ಆದರೆ (ಏಕಕಾಲದಲ್ಲಿ) ಈ ರೀತಿ ಇರುವುದು ದೇವರ ಗುಣಲಕ್ಷಣಗಳಾಗಿವೆ.
31
ಆದುದರಿಂದ ದೈವೀಕ ಗುಣಲಕ್ಷಣಗಳನ್ನು ತನ್ನ ದೆಂದು ವಹಿಸಿಕೊಳ್ಳು ವದರ ಮೂಲಕ
ಅಸಾಮಾನ್ಯ ಅಸ್ತಿತ್ವ ವುಳ್ಳಾತನ ಇರುವಿಕೆಯನ್ನು ನಾಸ್ತಿಕನು ಅಲ್ಲ ಗಳೆಯುತ್ತಾನೆ. ದೇವರ ಶಕ್ತಿ
ಇಲ್ಲ ದೆ ಯಾವ ಮನುಷ್ಯ ನೂ ದೇವರಿಲ್ಲ ವೆಂದು ನಿರೂಪಿಸಲಾರನು.
ಎರಡನೆಯದಾಗಿ,ಆಜ್ಞೆಯತಾವಾದಿ “ದೇವರು ಅಸ್ತಿತ್ವ ದಲ್ಲಿದ್ದಾನೋ ಇಲ್ಲ ವೋ
ಎಂದು ತಿಳಿಯುವದು ಸಾಧ್ಯ ವಿಲ್ಲ ” ಎಂದು ಈ ನಿರೀಶ್ವ ರವಾದಿಗಳು ಹೇಳುತ್ತಾರೆ. ಇದು
ನೇರವಾದ ನಾಸ್ತಿಕತೆಕ್ಕಿಂತ ಹೆಚ್ಚು ಪರಿಜ್ಞಾನವುಳ್ಳ ದ್ದು . ಆದರೆ ಇದು ಸ್ಪ ಷ್ಟ ವಾಗಿ ಅಜ್ಞಾನದ ಮೇಲೆ
ಆಧಾರಿತವಾಗಿದೆ ನಿರೀಶ್ವ ರವಾದಿಯು ಯಾವ ಮನುಷ್ಯ ನೂ ದೇವರನ್ನು ತಿಳಿಯಲು
ಸಾಧ್ಯ ವಿಲ್ಲ ವೆಂದು ಹಕ್ಕು ಸಾಧಿಸಿ ಹೇಳಬಹುದು, ಆದರೆ ಎಲ್ಲ ರಿಗೋಸ್ಕ ರ
ಪರಿಣಾಮಕಾರಿಯಾಗಿ ಸಾರ್ವತ್ರಿಕ ಹೇಳಿಕೆಯನ್ನು ನೀಡಲು ಸಾಧ್ಯ ವಿಲ್ಲ .
ಸತ್ಯ ವೇದವು ಸತ್ಯ ವಲ್ಲ ವೆಂದು ವಿಕಾಸವಾದ ನಿರೂಪಿಸುತ್ತದೆ ಎಂದು ಕೆಲವು ಜನರು
ಯೊಚಿಸುತ್ತಾರೆ. ಆದರೆ ವಿಕಸನವು ನಿಜವಾಗಿದ್ದ ರೂ ಸಹ ಇದಕ್ಕೆ ಆರಂಭವೆನ್ನು ವದು
ಇರಲೇಬೇಕು. ನಮ್ಮ ಸುತ್ತಲು ಇರುವ ವಿಕಾಸಗೊಂಡಿರುವ ಸಮ್ಮಿಶ್ರತಾ ಪ್ರಪಂಚದ ಎಲ್ಲ ವುಗಳ
ಮೂಲಧಾತುವನ್ನು ಯಾರು ಉಂಟುಮಾಡಿದರು? ಇದನ್ನು ಯಾರು ಪ್ರಾರಂಭ
ಮಾಡಿದರು, ಮತ್ತು ಚಲಿಸುವಂತೆ ಮಾಡಿದವರು? ದೇವರು ತಾನೇ ಈ ವಿಶ್ವ ವನ್ನು
ಸೃಷ್ಟಿಸಿದ್ದಾನೆ. ಮತ್ತು ಚಲಿಸುವಂತೆ ಮಾಡುತ್ತಿದ್ದಾನೆ.
ಅನಂತರ ಬಹುದೇವತಾ ವಾದ ಈ ನಂಬಿಕೆಯು ನಾಸ್ತಿಕವಾದಕ್ಕೆ ವಿರುದ್ಧ ವಾದದ್ದು .
ಅನೇಕ ದೇವರುಗಳಿದ್ದಾರೆಂದು ಇದು ಬೋಧಿಸುತ್ತದೆ. ಗ್ರೀಕ್ ಮತ್ತು ರೋಮ್ನ ಪುರಾತನ
ಧರ್ಮಗಳು ಅಥವಾ ಹಿಂದು ಧರ್ಮ ಮತ್ತು ಶಿಂಟೋ ಧರ್ಮಗಳು ಅನೇಕ ವಿಧವಿಧವಾದ
ದೇವರುಗಳನ್ನು ಹೊಂದಿವೆ. ಆದರೆ ಇದು ಇತರರನ್ನು ಅಸ್ತಿತ್ವ ಕ್ಕೆ ತಂದ ಮೂಲ ಪರಮ ಶ್ರೇಷ್ಟ
ದೈವದ ಕಡೆಗೆ ಸುಳಿವನ್ನು ನೀಡಬಹುದು. ಬಹುದೇವತಾ ವಾದದಲ್ಲಿ ಸೃಷ್ಟಿಸಲ್ಪ ಟ್ಟ ಸೃಷ್ಟಿ
ವಸ್ತು ಗಳೇ ದೇವರ ಸ್ಥಾನಕ್ಕೆ ಏರಿಸಲ್ಪ ಟ್ಟ ವು. ಮತ್ತು ದೇವರೆಂದು ಆರಾಧಿಸಲ್ಪ ಟ್ಟ ವು.
ನಂತರ ಬರುವುದು ಅದ್ವೈತ ವಾದ (ವಿಶ್ವ ದೇವತಾ ವಾದ) ಈ ದಟ್ಟ ತಪ್ಪು
ತಿಳುವಳಿಕೆಯು ಬೋಧಿಸುವದೇನೆಂದರೆ ದೇವರು ತನ್ನ ಸೃಷ್ಟಿಯಾದ ವಿಶ್ವ ದೊಂದಿಗೆ ಬೆರೆತು
ಹರಡಿಕೊಂಡಿದ್ದಾನೆ. ಅಂದರೆ ಈ ವಿಶ್ವ ವು ತನ್ನ ಷ್ಟ ಕ್ಕೆ ತಾನೇ ಸೃಷ್ಟಿಸಲ್ಪ ಟ್ಟಿದೆ. ಮತ್ತು ಪ್ರತಿ
ಮನುಷ್ಯ ನು ದೇವರ ಅಂಶವಾಗಿದ್ದಾನೆ “ದೇವರೇ ಎಲ್ಲ ವೂ ಆಗಿದ್ದಾನೆ, ಎಲ್ಲ ವೂ
ದೇವರಾಗಿದೆ” ಎಂದು ಅದ್ವೈತ ವಾದವು ಹೇಳುತ್ತದೆ. ಹೀಗೆ ದೇವರು ತನ್ನ ಸೃಷ್ಟಿಯಿಂದ ವ್ಯ ತ್ಯಾಸ
ತಿಳಿಯಲಾಗದವನಾಗಿದ್ದಾನೆ. ಈ ಸಿದ್ಧಾಂತವು ಕೆಲವು ನಿರ್ದಿಷ್ಟ ದುರ್ಬೋಧಕರ
32
ಬೋಧನೆಯಾಗಿ ವಿವಿಧ ರೀತಿಗಳಲ್ಲಿ ಹೇಳಲ್ಪ ಟ್ಟಿದೆ. ಸತ್ಯ ವೇದದ ಬೋಧನೆಯಾದ ದೇವರು
ತನ್ನ ಸೃಷ್ಟಿಗಿಂತಲೂ ಶ್ರೇಷ್ಟ ನು, ಮತ್ತು ತನ್ನ ಸೃಷ್ಟಿಯಿಂದ ಪ್ರತ್ಯೇಕವಾಗಿರುವವನು ಎಂಬ
ಬೋಧನೆಯ ಮೂಲಕ ಇದು ತಿರಸ್ಕ ರಿಸಲ್ಪ ಟ್ಟಿದೆ.
ಅಂತಿಮವಾಗಿ ಆಸ್ತಿಕ ವಾದ (ಏಕೇಶ್ವ ರ ವಾದ) ಎಂಬುದಿದೆ. ದೇವರು
ಅಸ್ತಿತ್ವ ದಲ್ಲಿದ್ದಾನೆ ಎಂಬುದನ್ನು ಅಲ್ಲ ಗಳೆಯದೆ ಆಸ್ತಿಕವಾದಿಗಳು ದೇವರು ತನ್ನ ನ್ನು
ಪ್ರಕಟಿಸಿಕೊಂಡಿದ್ದಾನೆ ಎಂಬುದನ್ನು ನಂಬದೇ ಅದನ್ನು ತಿರಸ್ಕ ರಿಸುತ್ತಾರೆ. ದೇವರು ಜಗತ್ತನ್ನು
ಸೃಷ್ಟಿ ಮಾಡಿದ್ದಾನೆ. ನಂತರ ಅವುಗಳು ತಮ್ಮ ದೇ ಆದ ಪಥದಲ್ಲಿ, ಮುಂದುವರಿಯುವಂತೆ
ಮಾಡಲು ಕೆಲವು ಹಂತದದವರೆಗೆ ಹಿಂತೆಗೆದುಕೊಂಡನು ಎಂದು ಹೇಳುತ್ತಾರೆ. ದೇವರು ಈ
ವಿಶ್ವ ವನ್ನು ಮನುಷ್ಯ ಕುಲವನ್ನು ಆತನ ಸ್ವ ರೂಪದಲ್ಲಿ ಸೃಷ್ಟಿಸಿ ,ಮನುಷ್ಯ ನೊಂದಿಗೆ ಸಂಪರ್ಕಿಸುವ
ಉದ್ಧೇಶವಿಲ್ಲ ದೆ ಯಾಕೆ ಸೃಷ್ಟಿಸಿದನು?
ದೇವರ ವಾಕ್ಯ ದ ಒಂದು ವಾಕ್ಯ ವನ್ನು ಗಮನಿಸುವುದು ಆಸಕ್ತಿದಾಯಕವಾಗಿದೆ....
ಸತ್ಯ ವೇದದ ಮೊಟ್ಟ ಮೊದಲ ವಾಕ್ಯ ......ಈ ಮೇಲಿನ ಎಲ್ಲಾ ತಪ್ಪು ಬೋಧನೆಗಳನ್ನು
ನಿರಾಕರಿಸುತ್ತದೆ.
33
ವಿಷಯವಾಗಿದ್ದು ಸಂಪೂರ್ಣವಾಗಿ ಅವುಗಳನ್ನು ವರ್ಗಿಕರಿಸಲು ಅಸಾಧ್ಯ . ಕೆಲವರು
ಅವುಗಳನ್ನು ದೇವರು ಮಾತ್ರ ಹೊಂದಿರುವ ಗುಣಲಕ್ಷಣಗಳೆಂದು (ನಿತ್ಯ ತೆ ಮತ್ತು ಅನಂತತೆ)
ವಿಂಗಡಿಸಿ ಅವುಗಳಿಗೆ ಹಂಚಿಕೊಳ್ಳ ಲಾಗದ ಗುಣಲಕ್ಷಣಗಳೆಂದು ಮತ್ತು ಮನುಷ್ಯ ನು
ಖಚಿತವಾದ ಶ್ರೇಣಿಯವರೆಗೆ ಮನುಷ್ಯ ನು ಹೊಂದಿರುವ (ಪ್ರೀತಿ ಮತ್ತು ಜ್ಞಾನ
ತಿಳುವಳಿಕೆಯಂತಹ) ಗುಣಲಕ್ಷಣಗಳು ಇವುಗಳನ್ನು ಹಂಚಿಕೊಳ್ಳ ಲಾಗುವ
ಗುಣಲಕ್ಷಣಗಳೆಂದು ಕರೆಯುವರು. ಇತರರು ಗರಿಷ್ಠ ಪ್ರಮಾಣ ಮತ್ತು ಸಂಬಂಧಿತ ಎಂಬ
ಪದಗಳನ್ನು ಬಳಸುತ್ತಾರೆ. ಈ ಪಾಠದಲ್ಲಿ ದೇವರ ವೈಯುಕ್ತಿಕ ಗುಣಲಕ್ಷಣಗಳು (ಮನುಷ್ಯ ನು
ಕೆಲ ವಿಶಾಲತೆಯವರೆಗೆ ಹಂಚಿಕೊಳ್ಳು ವ) ಮತ್ತು ಸ್ವ ಭಾವ ಸಿದ್ಧ ವಾದ ಗುಣಲಕ್ಷಣಗಳು
(ಮನುಷ್ಯ ನೊಂದಿಗೆ ಸಂಪರ್ಕಿಸದವುಗಳು) ಎಂದು ವಿಭಾಗಿಸಲಾಗಿದೆ.
34
ಬುದ್ಧಿಶಕ್ತಿ
ದೇವರ ಮಹಾ ಬುದ್ಧಿ ಶಕ್ತಿಯ ಗುಣಲಕ್ಷಣವೆಂದರೆ ಅದುವೇ ಸರ್ವಜ್ಞಾನಿ
ಎಂಬುದು. ಎಲ್ಲಾ ಮನುಷ್ಯ ರು ಸ್ವ ಲ್ಪ ಬುದ್ಧಿ ಜ್ಞಾನ ಹೊಂದಿರುವದರಿಂದ ಸರ್ವವನ್ನು ಬಲ್ಲ
ಬುದ್ಧಿಶಕ್ತಿಯನ್ನು ಗ್ರಹಿಸಿಕೊಳ್ಳು ವದು ಕಷ್ಟ ವಾಗುವದಿಲ್ಲ ಇದೇ ದೇವರ ಸರ್ವ ಜ್ಞಾನತ್ವ . ಇದೇ
ಎಲ್ಲ ವುಗಳ ಕುರಿತಾದ ತಿಳುವಳಿಕೆ ಅವುಗಳ ವಾಸ್ತವವಾದವುಗಳು ಅಥವಾ
ಸಾಧ್ಯ ತೆಯಿಲ್ಲ ದಿರುವಗಳು ಹಿಂದಿನದು, ವರ್ತಮಾನದ್ದು , ಅಥವಾ ಭವಿಷ್ಯ ತ್ತಿನದು. ಜನರು,
ಘಟನೆಗಳು, ಪರಿಸ್ಥಿತಿಗಳು, ಸ್ಥ ಳಗಳು ಅಥವಾ ಸಂಗತಿಗಳು, ಅಲ್ಲ ದೆ ದೇವರು ಯಾವುದೇ
ಪರಶ್ರಮವಿಲ್ಲ ದೇ ಎಲ್ಲಾ ಕ್ಷೇತ್ರಗಳಲ್ಲೂ ಸಮಾನವಾಗಿ ತನ್ನ ಸರ್ವಜ್ಞಾನತ್ವ ವನ್ನು
ಅನುಷ್ಠಾನಗೊಳಿಸುತ್ತಾನೆ. ದೇವರ ಸರ್ವಜ್ಞಾನತ್ವ ಕ್ಕೆ ಉತ್ತಮ ಉದಾರಣೆಯನ್ನು ದೇವರ
ಕುಮಾರನಾದ ಯೇಸುವಿನ ಜೀವಿತದಲ್ಲಿ ಕಾಣುತ್ತೇವೆ. ನಮ್ಮ ಕರ್ತನು ತೂರ್ ಮತ್ತು
ಸೀದೊನಿನಲ್ಲಿ ಆತನು ಅದ್ಭು ತ ಕಾರ್ಯಗಳನ್ನು ಮಾಡಿದ್ದ ರೆ ಏನಾಗುತ್ತಿತ್ತು ಎಂದು
ಹೇಳಿದನು (ಸಾಧ್ಯ ವಾಗುವ ಸಂಗತಿಗಳ ಜ್ಞಾನ ಮತ್ತಾಯ 11:2) ಈ ಸಿದ್ಧಾಂತವು
ವಿಶ್ವಾಸಿಗಳಿಗೆ ಪ್ರೋತ್ಸಾಹವಾಗಿದೆ, ಇದರಲ್ಲಿ ನಾವು ರಕ್ಷಣೆ ಹೊಂದಿದ ನಂತರವೂ ನಾವು ಎಷ್ಟು
ಸಾರಿ ಆತನನ್ನು ನಿರ್ಲಕ್ಷಿಸುತ್ತೇವೆ ಎಂಬುದು ಆತನಿಗೆ ತಿಳಿದಿದ್ದ ರೂ ದೇವರು ನಮ್ಮ ನ್ನು
ರಕ್ಷಿಸಿದ್ದಾನೆ ಎಂಬುದನ್ನು ತಿಳಿದುಕೊಳ್ಳ ಬಹುದು.
ತಿಳಿವು/ಇಂದ್ರಿಯ ಗ್ರಹಣಶಕ್ತಿ
ದೇವರ ಕುರಿತು ಮಾತನಾಡುವಾಗ, ಇಂದ್ರಿಯ ಗ್ರಹಣಶಕ್ತಿ ಎಂಬ ಪದವು
ಭಾವನೆಗಳು ಎಂಬ ಪದಕ್ಕಿಂತ ಉತ್ತಮವಾದದ್ದು ., ನಂತರದ ಅವಧಿಯಿಂದ ಕೆಲವು ತಪ್ಪು
ಅಳವಡಿಸುವಿಕೆಗಳನ್ನು ಹೊಂದಿರಬಹುದು. ಇಂದ್ರಿಯ ಗ್ರಹಣಶಕ್ತಿ ಅಥವಾ ಉನ್ನ ತ
ಭಾವನೆಗಳ 4 ಪ್ರಮುಖ ಗುಣಲಕ್ಷಣಗಳನ್ನು ಪರೀಕ್ಷಿಸೋಣ.
ದೇವರು ಪ್ರೀತಿ
1 ಯೋಹಾನ 4:8 ರಲ್ಲಿ ನಾವು ಹೀಗೆ ಓದುತ್ತೇವೆ. ದೇವರು ಪ್ರೀತಿಯಾಗಿದ್ದಾನೆ.
ಆದರೆ ಪ್ರೀತಿ ಎಂದರೇನು? ಪ್ರೀತಿಯು ಮಮತೆ ಅಥವಾ ವಾತ್ಸ ಲ್ಯ ಮತ್ತು ತಿದ್ದು ಪಡಿಯೆಂಬ
ಎರಡೂ ಆಲೋಚನೆಗಳನ್ನು ಒಳಗೊಂಡಿದೆ. ಹೀಗೆ ಇದನ್ನು ಪ್ರೀತಿಸಲ್ಪ ಟ್ಟ ಸಂಗತಿಯು
ಉನ್ನ ತವಾದ ಒಳ್ಳೆಯದನ್ನು ಬಯಸುವುದು ಎಂದು ಸಾರಾಂಶಗೊಳಿಸಬಹುದು. ಸದ್ಗು ಣ
35
ಕರುಣೆ ಮತ್ತು ಕೃಪೆಗಳು ಪ್ರೀತಿಗೆ ಸಂಬಂಧಿಸಿವೆ ಆದರೆ ದೇವರ ಪ್ರೀತಿಯ ವ್ಯ ಕ್ತಪಡಿಸುವಿಕೆ
ಎಂದು ಕಲಿಸಲ್ಪ ಡುತ್ತದೆಯೇ ಹೊರತು ಪ್ರತ್ಯೇಕ ಗುಣಲಕ್ಷಣವಾಗಿ ಅಲ್ಲ . ಎಫೆಸ 2:4-7 ಮತ್ತು
1 ಯೋಹಾನ 3:1 ನ್ನೂ ಸಹ ನೋಡಿರಿ. ನಮಗೆ ದೇವರನ್ನು ಪ್ರೀತಿಸುವುದೆಂದರೆ ನಾವು
ದೇವರ ಚಿತ್ತವನ್ನು ಹುಡುಕುತ್ತೇವೆ ,ಅದು ಅತ್ಯು ತ್ತಮವಾದದ್ದು .
ದೇವರು ನ್ಯಾಯವಂತನು
ಪ್ರಗತಿಪರ ಚಿಂತನೆಯು ನೀತಿ ಅಥವಾ ನ್ಯಾಯದ ಸಿದ್ಧಾಂತದ ಸಮತೋಲನ
ಮಾಡುವುದನ್ನು ಮರೆಯುವ ಮಟ್ಟಿಗೆ ಪ್ರೀತಿ ಎಂಬ ಗುಣಲಕ್ಷಣವನ್ನು ಹೆಚ್ಚಾಗಿ ವರ್ಣಿಸುವ
ಕಡೆಗೆ ಉದಾರವಾದಿ (ಪ್ರಗತಿಪರ) ಚಿಂತನೆಯು ಒಲವು ತೋರುತ್ತದೆ (ಈ ಎರಡು ಪದಗಳು
ಮೂಲ್ಯ ಪಠ್ಯ ದಲ್ಲಿ ಒಂದೇ ಪದವಾಗಿದ್ದು ಎರಡು ರೀತಿಯಲ್ಲಿ ಭಾಷಾಂತರಿಸಲ್ಪ ಟ್ಟಿದೆ)
ವಿಮೋಚನೆಯಲ್ಲಿ ದೇವರು "ನೀತಿವಂತನು ಮತ್ತು ಸಮರ್ಥಕ" ಯೇಸುವಿನಲ್ಲಿ ನಂಬಿಕೆ
ಇಟ್ಟು ವಿಶ್ವಾಸಿಗಳಾದವರಿಗೆ (ರೋಮಾ. 3:26) ಎರಡೂ ಆಗಿದ್ದಾನೆ. ನ್ಯಾಯತೀರ್ಪಿನಲ್ಲಿ ,
ಆತನು “ಪಕ್ಷಪಾತ ತೋರುವದಿಲ್ಲ . ಅಂದರೆ ಆತನು ನೈತಿಕಧರ್ಮ(ನೀತಿ, ನ್ಯಾಯ)ದಿಂದಲೇ
ನ್ಯಾಯತೀರ್ಪು ಮಾಡುತ್ತಾನೆ (ಅ.ಕೃ. 10:34). ಎಂದರ್ಥ. ದೇವರ ನೀತಿ ಅಥವಾ ನ್ಯಾಯಕ್ಕೆ
ಸಂಬಂಧಿಸಿದ ಇತರ ಪ್ರಮುಖ ವಾಕ್ಯ ಭಾಗಗಳು ಈ ಕೆಳಕಂಡಂತಿವೆ. ಕೀರ್ತ.11:7; 147:15;
ಯೋಹಾ. 17:25; ಪ್ರಕ. 16:5-7.
ದೇವರು ಪರಿಶುದ್ಧ ನು
ನಕರಾತ್ಮ ಕ ಅರ್ಥದಲ್ಲಿ ಪರಿಶುದ್ಧ ತೆ ಎಂದರೆ ದುಷ್ಟ ತನದ ಅನುಪಸ್ಥಿತಿ. ಧನಾತ್ಮ ಕ
ಅರ್ಥದಲ್ಲಿ ಇದು ಪರಿಪೂರ್ಣತೆಯಲ್ಲಿ ಕ್ರಿಯಾತ್ಮ ಕ ನೀತಿಯ ಗುಣ, ಇದರಿಂದ ದೇವರು ತನ್ನ
ಸ್ವಂತ ನೈತಿಕ ಶ್ರೇಷ್ಟ ತೆಯನ್ನು ನಿತ್ಯ ತ್ವ ಕ್ಕೂ ಚಿತೈಸುತ್ತಾನೆ. ಮತ್ತು ಕಾಪಾಡಿಕೊಳ್ಳು ತ್ತಾನೆ. ಕ್ರೈಸ್ತರು
ದೇವರಲ್ಲಿ ಪರಿಪೂರ್ಣ ಮಟ್ಟ ವನ್ನು ಹೊಂದಿದ್ದಾರೆ ಹಾಗೂ ಆತನು ಪರಿಶುದ್ಧ ನಾಗಿರುವ
ಹಾಗೆ ಅವರು ಪರಿಶುದ್ಧ ರಾಗಿರಬೇಕೆಂದು ಆಜ್ಞೆ ಹೊಂದಿದ್ದಾರೆ. (1 ಪೇತ್ರ 1:16) ಮಟ್ಟ ವು
ಪರಿಪೂರ್ಣವಾಗಿದ್ದ ರೂ ಅಗತ್ಯ ತೆಗಳು ನಮ್ಮ ಕ್ರೈಸ್ತ ಪ್ರಬುದ್ದ ತೆಗೆ ಸಂಬಂಧಿಸಿದ್ದಾಗಿವೆ. ದೇವರ
ಪರಿಶುದ್ಧ ತೆಗೆ ನಾವು ದೃಢೀಕರಿಸಲ್ಪ ಡುವ ಹೊಸ ಕ್ಷೇತ್ರಗಳಿಗಾಗಿ ನಾವು ನಿರಂತರವಾಗಿ
ಗಮನಿಸುತ್ತಿರಬೇಕು. ಪರಿಶುದ್ಧ ತೆಯಿಲ್ಲ ದೆ ಜೀವಿಸುತ್ತಿರುವ ಈ ದಿನದಲ್ಲಿ ಮಿತಿಮೀರಿದ
ಪಾಪದ ಪಾಪಪೂರ್ಣತೆಯ ವ್ಯ ತ್ಯಾಸವನ್ನು ಹೊರತರುವಂತೆ ವಿಸ್ಮ ಯಗೊಳಿಸುವ ದೇವರ
36
ಪರಿಶುದ್ಧ ತೆಯು ಒತ್ತಿ ಹೇಳಲ್ಪ ಡಬೇಕು. ಯೆಶಾಯ 6:3, ಯೋಹಾನ 17:11 ಮತ್ತು
ಪ್ರಕಟನೆ 4:8 ನ್ನು ಸಹ ಓದಿರಿ.
ದೇವರು ಸತ್ಯ ವು
ನಮ್ಮ ಕರ್ತನಾದ ಯೇಸು ಕ್ರಿಸ್ತನು ಹೇಳಿದ್ದು ನಾನೇ ಮಾರ್ಗವೂ, ಸತ್ಯ ವೂ,
ಜೀವವೂ ಆಗಿದ್ದೇನೆ (ಯೋಹಾನ 14:6) ಸತ್ಯ ಎಂಬುದು ದೈವತ್ವ ದ ಪ್ರಮುಖ
ಗುಣಲಕ್ಷಣವಾಗಿದೆ. ಪರಿಶುದ್ಧ ತೆಯ ಹಾಗೆ ಇದು ಸಕಾರಾತ್ಮ ಕ ಮತ್ತು ನಕಾರಾತ್ಮ ಕ
ಪಾರ್ಶ್ವಗಳನ್ನು ಹೊಂದಿದೆ. ಸತ್ಯ ಎಂದರೆ ಸುಳ್ಳಿನ ಅನುಪಸ್ಥಿತಿ ಹಾಗೂ ಯಾವುದನ್ನು
ಪ್ರತಿನಿಧಿಸುತ್ತದೆಯೋ ಅದರ ಸಕಾರಾತ್ಮ ಕ ಒಪ್ಪಂದ ಅದೇ ಒಂದು ಮಟ್ಟ ಕ್ಕೆ ಇರುವ
ಸ್ಥಿರತೆಯಾಗಿದೆ. ದೇವರು ತಾನೇ ಸ್ವ ತಃ ಪ್ರಮಾಣಿತನಾಗಿರುವಾಗ, ದೇವರು ಸ್ವ -
ಸ್ಥಿರತೆಯುಳ್ಳ ವನು ಎಂದು ಹೇಳಿದಂತೆಯೇ ಆಗುತ್ತದೆ. ಪೌಲನು ರೋಮಾಪುರದವರಿಗೆ 3:4
ರಲ್ಲಿ ಹೀಗೆ ಹೇಳಿದ್ದಾನೆ, "ಎಲ್ಲಾ ಮನುಷ್ಯ ರು ಸುಳ್ಳು ಗಾರರಾದರೂ ದೇವರು ಸತ್ಯ ವಂತನೇ
ಸರಿ". ಈ ಸತ್ಯ ವೆಂಬ ಗುಣಲಕ್ಷಣದ ಕಾರಣದಿಂದಾಗಿ ನಮ್ಮ ಕರ್ತನಾದ ದೇವರು ತನ್ನ
ಉದ್ದೇಶಗಳಲ್ಲಿ, ತನ್ನ ವಾಗ್ದಾನಗಳಲ್ಲಿ ಅಥವಾ ತನ್ನ ಪ್ರಕಟಣೆಯಲ್ಲಿ ಯಾವುದೇ ಸುಳ್ಳ ನ್ನು
ಮಾಡಲಾರನೆಂಬ ಭರವಸೆಯಿಂದಿರಬಹುದು ಕರ್ತನು ತನ್ನ ಕುರಿತಾದ ಪ್ರಕಟಣೆಯಲ್ಲಿ
ಸತ್ಯ ವಂತನು ಎಂದು ದೇವರು ತನ್ನ ಪರಿಶುದ್ಧ ವಾಕ್ಯ ವು ಲೋಪವಿಲ್ಲ ದ್ದು ಎಂಬ ತರ್ಕದಲ್ಲಿ
ನಿರೂಪಿಸಿದ್ದಾನೆ. ದೇವರ ವಾಕ್ಯ ವು ಲೋಪವಿಲ್ಲ ದ್ದು ಎಂಬ ಸಿದ್ಧಾಂತವು ಅನೇಕರಿಂದ
ಅದರಲ್ಲೂ ವಿಶೇಷವಾಗಿ ಸೌವಾರ್ತಿಕತೆಯನ್ನು ಪ್ರತಿಪಾದಿಸುವವರಿಂದಲೂ ಆಕ್ರಮಣಕ್ಕೆ
ಒಳಗಾಗಿದೆ.
ಚಿತ್ತ (ಸಂಕಲ್ಪ )
ಅಡೆತಡೆಗಳಿಂದ ಅಥವಾ ನಿರ್ಬಂಧಗಳಿಂದ ಸ್ವ ತಂತ್ರವಾಗಿರುವುದನ್ನು ಸ್ವಾತಂತ್ರ್ಯತೆ
ಎಂದು ಕರೆಯುತ್ತಾರೆ. ಆದ್ದ ರಿಂದ ದೇವರು ಸಂಪೂರ್ಣವಾಗಿ ಸ್ವ ತಂತ್ರನು ಎಂದು ನಾವು
ಸ್ಪ ಷ್ಟ ವಾಗಿ ಹೇಳಬಹುದು. ಮನುಷ್ಯ ನ ಸಂಬಂಧದಲ್ಲಿ ಸ್ವಾತಂತ್ರವು ಸಂಬಂಧಿತ ಪದಪ್ರಯೋಗ,
ಯಾವ ಸೃಷ್ಟಿಯೂ ಸಹ ನಿಖರವಾಗಿ ತನ್ನಿಷ್ಟ ದಂತೆ ಮಾಡಲು ಸ್ವ ತಂತ್ರವಿಲ್ಲ . ದೇವರ
ಸಂಬಂಧದಲ್ಲಿ ಸ್ವಾತಂತ್ರ್ಯ ದೇವರು ತನಗೆ ಸರಿ ತೋಚಿದಂತೆ ಮಾಡಲು ನಿರ್ಭಂದವಿಲ್ಲ ದ
ಸ್ವ ತಂತ್ರನು ಎಂದರ್ಥ ಖಂಡಿತವಾಗಿಯೂ ದೇವರು ತನ್ನ ಸ್ವ ಭಾವಕ್ಕೆ ವಿರುದ್ಧ ವಾಗಿ ಏನೂ
37
ಮಾಡಲಾರನು. ಆದರೆ ಆತನ ಸ್ವ ಭಾವವು ಪರಿಪೂರ್ಣವಾಗಿರುವದರಿಂದ ಇದನ್ನು
ನಿರ್ಬಂಧವೆಂದು ಪರಿಗಣಿಸುವದು ಕಷ್ಟ ವಾಗಿರುತ್ತದೆ. ದೇವರು ತನ್ನ ಮೇಲೆ ತಾನೇ ವಾಗ್ಧಾನ
ಅಥವಾ ಒಡಂಬಡಿಕೆ ರೂಪದಲ್ಲಿ ನಿರ್ಬಂಧ ಹೇರಿಕೊಳ್ಳ ಬಹುದು ಹಾಗೂ ಆತನು ಈ
ಕಾರ್ಯಕ್ರಮದ ಅಡಿಯಲ್ಲಿಯೇ ಕಾರ್ಯ ಮಾಡುತ್ತಾನೆ. ಯಾಕೆಂದರೆ ಅದನ್ನು
ಮಾಡಬೇಕೆಂದು ನಿರ್ಧರಿಸಿರುವದರಿಂದ ಮಾತ್ರ ಮಾಡುತ್ತಾನೆ. ಪಾಪಿಯಾದ ಮನುಷ್ಯ ನಿಗೆ
ಏನನ್ನಾದರೂ ಮಾಡಲು ದೇವರು ಜವಾಬ್ದಾರನಲ್ಲ . ಆತನು ಎಲ್ಲೆಲ್ಲಿ ತನ್ನ ನ್ನು
ಸಮರ್ಪಿಸಿಕೊಂಡಿದ್ದಾನೋ ಅಲ್ಲಿ ಅಬ್ರಹಾಮನಿಗೆ ಕೊಟ್ಟ ತನ್ನ ವಾಗ್ಧಾನದಲ್ಲಿ ಮತ್ತು ತನ್ನ
ಮಗನನ್ನು ಸ್ವೀಕರಿಸುವ ಎಲ್ಲ ರಿಗೂ ಉಚಿತವಾಗಿ ರಕ್ಷಣೆಕೊಡುವ ವಾಗ್ದಾನಲ್ಲಿ ಆತನು ತನ್ನ
ಮಾತನ್ನು ನೆರೆವೇರಿಸುತ್ತಾನೆ. ದೇವರ ಸ್ವಾತಂತ್ರ್ಯತೆಯ ವಿಷಯದಲ್ಲಿ ಸುಂದರವಾದ
ವಾಕ್ಯ ಭಾಗವನ್ನು ಯೆಶಾಯ. 40: 6-31 ರಲ್ಲಿ ಕಾಣುತ್ತೇವೆ.
ದೇವರು ಸರ್ವಶಕ್ತನು
ದೇವರು ತನ್ನ ಇಷ್ಟಾನುಸಾರ ತನ್ನ ಚಿತ್ತವನ್ನು ಮಾಡಲು ಸ್ವ ತಂತ್ರನಾಗಿರುವದು
ಮಾತ್ರವಲ್ಲ ದೆ, ತನ್ನ ಪರಿಪೂರ್ಣ ಚಿತ್ತವನ್ನು ನೆರವೇರಿಸಲು ಎಲ್ಲಾ ಶಕ್ತಿಯನ್ನು ಹೊಂದಿರುವ
ಸರ್ವಶಕ್ತನಾಗಿದ್ದಾನೆ. ದೇವರ ವಾಕ್ಯ ದಲ್ಲಿ ಅನೇಕ ಸಾರಿ ದೇವರು “ಸರ್ವಶಕ್ತನು” ಎಂದೇ
ಕರೆಯಲ್ಪ ಟ್ಟಿದ್ದಾನೆ. ಯೋಬನು ಹೀಗೆಂದನು -ನಿನಗೆ ಎಲ್ಲಾ ಸಾಧ್ಯ ವಾಗಿದೆ (ಯೋಬ. 42:2).
ಲೋಕದ ಸೃಷ್ಟಿಕಾರ್ಯ ಮತ್ತು ಅದರ ಸಂರಕ್ಷಣಾ ಕಾರ್ಯ ಐಗುಪ್ತದಿಂದ ಇಸ್ರಾಯೇಲ್ಯ ರ
ಬಿಡುಗಡೆ, ಕ್ರಿಸ್ತನ ಪುನರುತ್ಥಾನ ಹಾಗೂ ಕಳೆದು ಹೋದ ಪಾಪಿಗಳಿಗೆ ರಕ್ಷಣೆ ಕೊಡುವ ಈ
ಎಲ್ಲಾ ಕಾರ್ಯಗಳಲ್ಲಿ ದೇವರ ಮಹಾಶಕ್ತಿಯನ್ನು ಕಾಣಬಹುದು. ಕೀರ್ತ. 8 ರಲ್ಲಿ ಸೃಷ್ಟಿಯು
ದೇವರ ಕೈಕೆಲಸ ಎಂದು ಹೇಳಲ್ಪ ಟ್ಟಿದೆ. ಆದರೆ ಪಾಪದಲ್ಲಿ ಕಳೆದು ಹೋದ ಮನುಷ್ಯ ಕುಲವನ್ನು
ರಕ್ಷಿಸಲು ಯೆಹೋವನ ಬಾಹುವೇ ಕಾರ್ಯ ಮಾಡಿತು. ಯೆಶಾ. 53:1. ಇದರಿಂದ ತಿಳಿದು
ಬರುವದೇನೆಂದರೆ ಸೃಷ್ಟಿಯ ಕಾರ್ಯವು ದೇವರ ಬಾಯಿ ಮಾತಿನಿಂದಲೇ ನೆರವೇರಿತು.
ಆದರೆ ಬಿದ್ದು ಹೋದ ಮಾನವನಿಗೆ ಬಿಡುಗಡೆ ಅಥವಾ ರಕ್ಷಣೆಯನ್ನು ಒದಗಿಸಲು ದೇವರ
ಮಗನ ಯಜ್ಞಾರ್ಪಣೆಯನ್ನು ತೆಗೆದುಕೊಂಡಿತು (ಯೆರೆ. 32:17,; ಮತ್ತಾ 19:26; ಪ್ರಕ.
19:6).
ಮುಂದಿನ ಅಧ್ಯಾಯದಲ್ಲಿ ದೇವರ ಶಾಸನ ಬದ್ಧ ಗುಣಲಕ್ಷಣಗಳ ಕುರಿತು
ಅಭ್ಯಾಸಿಸೋಣ.
38
ಅಧ್ಯಾಯ
4
ದೈವ ಶಾಸ್ತ್ರ:
ದೇವರ (ಕುರಿತಾದ) ಅಧ್ಯ ಯನ
-ಭಾಗ 2-
ದೇವರ ಶಾಸನ ಬದ್ಧ ಗುಣಲಕ್ಷಣಗಳನ್ನು ಗ್ರಹಿಸಲು ಆತನ ವೈಯಕ್ತಿಕ
ಗುಣಲಕ್ಷಣಗಳಿಗಿಂತ ಕಠಿಣವಾದವುಗಳು. ಅವುಗಳು ಸ್ವ ಭಾವದಿಂದ ಮನುಷ್ಯ ನು ಹೊಂದುವ
ಹಾಗೆ ಸಂಪರ್ಕಿಸಲು ಸಾಧ್ಯ ವಿಲ್ಲ .
39
ನಂತರ ಆತನ ಐಕ್ಯ ತೆ ಇದೆ. “ಇಸ್ರಾಯೇಲ್ಯ ರೇ, ಕೇಳಿರಿ ನಮ್ಮ ದೇವರಾದ
ಯೆಹೋವನು ಒಬ್ಬ ನೇ ದೇವರು” (ಧರ್ಮೋ. 6:4). ಶತಮಾನಗಳಿಂದಲೂ ಯಹೂದ್ಯ ರು
ಈ ಮಾತುಗಳ ಮೂಲಕ ದೇವರ ಐಕ್ಯ ತೆಯನ್ನು ಘೋಷಿಸುತ್ತಲೇ ಇದ್ದಾರೆ. ದೇವರು
ಅಸ್ತಿತ್ವ ದಲ್ಲಿಯೂ, ಇರುವಿಕೆಯಲ್ಲಿಯೂ, ಶಕ್ತಿಯಲ್ಲಿಯೂ ಒಬ್ಬ ನೇ ದೇವರಾಗಿದ್ದಾನೆ.
“ಶೆಮಾ” ದಲ್ಲಿ (ವಿಶ್ವಾಸ ಸೂತ್ರದಲ್ಲಿ ಒಬ್ಬ ನೇ ಎಂದು ಕರೆಯಲ್ಪ ಡುವ ಮಾತು). ಹೇಳಲ್ಪ ಟ್ಟ
ಒಂದೇ ಎನ್ನು ವದು ಪೂರ್ತಿಯಾಗಿ ಅಂಕೆಗಳನುಸಾರದ “ಒಂದು” ಎನ್ನು ವದನ್ನು
ಉಲ್ಲೇಖಿಸುವದಿಲ್ಲ . ಬದಲಾಗಿ ಇಬ್ರಿಯ ಬಾಷೆಯಲ್ಲಿನ ದೇವರ ಹೆಸರಿನ ಬಹುವಚನ ಪದ
“ಎಲೋಹಿಂ”ನಲ್ಲಿ ಇರುವ ವ್ಯ ಕ್ತಿಗಳ ಐಕ್ಯ ತೆವನ್ನು ತಿಳಿಸುತ್ತದೆ. ಹಳೆ ಒಡಂಬಡಿಕೆಯಲ್ಲಿರುವ
ನಂಬಿಗಸ್ತರು ಹಾಗೆ ಕ್ರೈಸ್ತರು ಸಹ ಒಬ್ಬ ನೇ ದೇವರಲ್ಲಿ ನಂಬಿಕೆಯಿಡುತ್ತಾರೆಯೇ ಹೊರತು
ಕೆಲವರು ಕೆಲವು ಸಾರಿ ತಪ್ಪಾಗಿ ಅರ್ಥೈಸುವ ಹಾಗೆ ಮೂರು ದೇವರುಗಳಲ್ಲಿ ಅಲ್ಲ .
ಮುಂದೆ ಆತನ ಅನಂತತೆ ಇದೆ. ದೇವರು ಬಂಧನವಿಲ್ಲ ದವನು, ಮಿತಿಯಿಲ್ಲ ದವನು
ಮತ್ತು ಕೈಗಳಿಂದ ಕಟ್ಟಿದ ದೇವಸ್ಥಾನಗಳಿಗೆ ಸೀಮಿತಗೊಂಡವನಲ್ಲ (1 ಅರಸು. 8:27).
ದೇವರು ಆಕಾಶಕ್ಕಿಂತಲೂ ಉತ್ತಮ ಮಟ್ಟ ದಲ್ಲಿರುವವನು. ಇದು ಸಹ ಆತನಿಂದಲೇ
ಸೃಷ್ಟಿಸಲ್ಪ ಟ್ಟಿದೆ..
ಅನಂತರ ಆತನ ನಿತ್ಯ ತೆ ಇದೆ. ನಿತ್ಯ ತ್ವ ಎಂಬುದು ಅನಂತತೆಯ ಸಮಯ
ಸಂಬಂಧವಾಗಿದೆ. ಒಟ್ಟಾಗಿ ದೇವರು ಒಟ್ಟಾರೆಯಾಗಿ ಸಮಯವನ್ನೂ ಮೀರಿದ್ದಾನೆ.. ನಾವು
ಸಮಯದಲ್ಲಿ ತಾತ್ಕಾಲಿಕವಾದ ಘಟನಗಳ ಅನುಕ್ರಮದಲ್ಲಿದ್ದೇವೆ. ನಿತ್ಯ ತ್ವ ದಲ್ಲಿ ಅಂತಹ
ಯಾವುದೇ ಅನುಕ್ರಮವಿರುವದಿಲ್ಲ . ಬದಲಾಗಿ ಬಹುಶಃ ಅಲ್ಲಿ ಹಂತ, ಹಂತದ ಪ್ರಗತಿ
ಇರುತ್ತದೆ. ಸಮಯಕ್ಕೆ ದೇವರ ಸಂಬಂಧದ ದುರ್ಬಲ ದೃಷ್ಟಾಂತವು ಕಾಲಕಾಲಕ್ಕೆ
ಪ್ರಾರಂಭದಿಂದ ಮುಕ್ತಾಯದವರೆಗೂ ಒಂದು ಕಟ್ಟ ಡದ ತುದಿಯಲ್ಲಿ ನಿಂತು
ಮೆರವಣಿಗೆಯನ್ನು ಸಂಪೂರ್ಣವಾಗಿ ನೋಡುವ ವ್ಯ ಕ್ತಿಯನ್ನು ಅದೇ ರಸ್ತೆ ಬದಿಯಲ್ಲಿ ನಿಂತು
ಒಂದೇ ಸಮಯಗಳಲ್ಲಿ ಆ ಮೆರವಣಿಗೆಯು ಮುಂದೆ ಮುಂದೆ ಸಾಗುವಾಗ ಒಂದು
ಪಾರ್ಶ್ವವನ್ನು ಮಾತ್ರ ನೊಡುವ ವ್ಯ ಕ್ತಿಯೊಂದಿಗೆ ಹೋಲಿಕೆ ಮಾಡಿದಂತೆ ಇರುತ್ತದೆ.
“ನಿತ್ಯ ತ್ವ ದಿಂದ ನಿತ್ಯ ತ್ವ ದವರೆಗೂ ನೀನೇ ದೇವರು” ಕೀರ್ತ. 90:2.
ಆತನ ಮಾರ್ಪಾಡಾಗದಿರುವಿಕೆ.ದೇವರು ಮಾರ್ಪದವನು, ಮತ್ತು
ಮಾರ್ಪಾಡಾಗದಿರುವವನು. ಆತನ ವ್ಯ ಕ್ತಿತ್ವ ದಲ್ಲಿ ಯಾವುದೇ ಬೆಳವಣಿಗೆಯಾಗಲೀ,
ವಿವಾದಗಳಾಗಲೀ, ಅಥವಾ ವಿರೋಧಗಳಾಗಲೀ ಇರುವದಿಲ್ಲ (ಯಾಕೋ. 1:17). ಆದಿ.
40
6:6 ರಂಥ ವಾಕ್ಯ ಭಾಗಗಳಲ್ಲಿ ದೇವರು “ಪಶ್ಚಾತ್ತಾಪ ಪಟ್ಟ ನು” (ಅವನ ಮನಸ್ಸ ನ್ನು ಬೇರೆ
ಮಾಡಿಕೊಂಡನು ಎಂದರ್ಥದಲ್ಲಿ) ಎಂದು ಬರೆದಿದೆ. ಇದು ಮನುಷ್ಯ ನ ದೃಷ್ಟಿಕೋನವನ್ನು
ಕುರಿತು ತಿಳಿಸಿದ್ದು ಮನುಷ್ಯ ನ ಭಾವೋದ್ವೇಗವನ್ನು ಅಥವಾ ಚಿತ್ತವನ್ನು ದೈವತ್ವ ಕ್ಕೆ
ಹೋಲಿಸುವದಾಗಿದೆ. ಇದನ್ನೇ ಮಾನವ ಮನೋವಿಕಾರ ಮತ್ತು ಭಾವರಾಗಗಳನ್ನು ದೇವರಿಗೆ
ಅನ್ವ ಯಿಸುವದು ಎಂದು ಕರೆಯುತ್ತಾರೆ. ದೇವರ ಯೋಜನೆಯನ್ನು ಅನುಕ್ರಮವಾಗಿ
ಬಹಿರಂಗ ಪಡಿಸುವುದು ಮನುಷ್ಯ ನಿಗೆ ಅವನು ತನ್ನ ನ್ನು ಬದಲಾಯಿಸಿಕೊಂಡಿದ್ದಾನೆ ಎಂಬ
ಭಾವನೆ ನೀಡುತ್ತದೆ. ದೇವರು ಎಂದಿಗೂ ತನ್ನ ಗುಣಲಕ್ಷಣಗಳನ್ನು ಬದಲಾಯಿಸುವುದಿಲ್ಲ ..
ಒಬ್ಬ ಮನುಷ್ಯ ನು ದೇವರಿಗೆ ವಿಧೇಯನಾದಾಗ ದೇವರು ಒಂದು ರೀತಿಯಲ್ಲಿ ಕಾರ್ಯ
ಮಾಡುತ್ತಾನೆ. ಮನುಷ್ಯ ನು ಅವಿಧೇಯನಾದಾಗ ತನ್ನ ದೈವೀಕ ಸ್ವಾಭಾವಕ್ಕೆ ಅನುಗುಣವಾಗಿ
ಮತ್ತೊಂದು ರೀತಿಯಲ್ಲಿ ಕಾರ್ಯ ಮಾಡುತ್ತಾನೆ. ಆದರೆ ಸ್ವ ತಃ ದೇವರಲ್ಲಿ ಮಾರ್ಪಾಟವಿಲ್ಲ .
ಜೊತೆಗೆ ಆತನ ಸರ್ವವ್ಯಾಪಕತ್ವ ಇದೆ. ಗುಣಲಕ್ಷಣವು ಆತನ ಸೃಷ್ಟಿ ಮತ್ತು ಜೀವಿಗಳ
ಸಂಬಂಧದಲ್ಲಿ ದೇವರ ಅನಂತತೆ ಎಂದು ಕರೆಯಲ್ಪ ಡುತ್ತದೆ. ಅದ್ವೈತ ಸಿದ್ಧಾಂತ ಬೋಧಿಸುವಂತೆ
ದೇವರು ಎಲ್ಲಾ ಕಡೆಗಳಲ್ಲಿ ಇದ್ದಾನೆ. ಆದರೆ ಆತನೇ ಎಲ್ಲ ವೂ ಅಲ್ಲ ಪವಿತ್ರಾತ್ಮ ನು ಒಬ್ಬ ನ
ಹೃದಯದಲ್ಲಿ ವಾಸಮಾಡುತ್ತಿರಬಹುದು. ಆದರೆ ಅದೇ ವ್ಯ ಕ್ತಿಯೊಂದಿಗೆ ಅನ್ಯೋನ್ಯ ತೆಯಿಂದ
ದೂರವಿರುವದು, ಅದರಿಂದ ಆತ್ಮೀಕ ಅಥವಾ ನೈತೀಕ ಅರ್ಥದಲ್ಲಿ ಕರ್ತನಿಂದ
ದೂರವಿರುವದು ಎಂದರ್ಥವಾಗುತ್ತದೆ. ನಾವು ದೇವರ ಪ್ರಸನ್ನ ತೆಯಿಂದ ತಪ್ಪಿಸಿಕೊಳ್ಳ ಲು
ಸಾಧ್ಯ ವಿಲ್ಲ . ಆತ್ಮೀಕ ವಾಸ್ತವಿಕತೆಯಾಗಿ ಕ್ರೈಸ್ತರು ದೇವರ ಪ್ರಸನ್ನ ತೆಯಲ್ಲಿ ಜೀವಿಸುವದನ್ನು
ಅಭ್ಯಾಸ ಮಾಡಿಕೊಳ್ಳ ಬೇಕು ಕೀರ್ತ. 139:7-10. ದೇವರು ಸರ್ವವ್ಯಾಪಿಯೆಂದು ದೃಢವಾಗಿ
ಸಾರುವ ವಾಕ್ಯ ವಾಗಿದೆ.
ಅಂತಿಮವಾಗಿ ಆತನ ಸಾರ್ವಭೌಮತ್ವ ವಿದೆ ದೇವರು ಸಾರ್ವಭೌಮನು ಎಂದು
ಹೇಳಿದರೆ ಆತನೇ ಪರಮ ಶ್ರೇಷ್ಟ ನಾದ ಆಡಳಿತಗಾರನು ಎಂದು ಹೇಳಿದಂತೆಯೇ; ಆತನು
ಯಾವ ರೀತಿಯ ಸಾರ್ವಭೌಮತ್ವ ವನ್ನು ಅಭ್ಯಾಸ ಮಾಡುತ್ತಾನೆ ಎಂಬುದರ ಕುರಿತು ಏನನ್ನು
ಹೇಳಲಿಲ್ಲ . ಆತನೇ ಅಂತಿಮ ಆಡಳಿತಗಾರ ಹಾಗೂ ಭದ್ರತೆಯನ್ನು ಎಂದಿಗೂ
ಬಿಟ್ಟು ಕೊಡುವವನಲ್ಲ . ದೇವರ ಸಾರ್ವಭೌಮತ್ವ ವು ನಂಬಿಗಸ್ತರಿಗೆ ಪುನರ್ ಭರವಸೆಯ
ಸಿದ್ಧಾಂತವಾಗಿರುತ್ತದೆ. ವಿಶೇಷವಾಗಿ ಸತ್ಯ ಮತ್ತು ಸರಿಯಾದುದರ ವಿರುದ್ಧ ವಾಗಿ ಸಂಗತಿಗಳು
ಹೋಗುವುದು ಕಂಡು ಬರುವಾಗ ಮತ್ತೆ ಭರವಸೆಯನ್ನು ನೀಡುವಂತದ್ದಾಗಿರುತ್ತದೆ. ಅಂತಿಮ
ವಿಶ್ಲೇಷಣೆಯಲ್ಲಿ ಕೆಟ್ಟ ವುಗಳಾಗಿದ್ದು ದೇವರ ಯೋಜನೆಗೆ ವಿರುದ್ಧ ವಾಗಿರುವ ಸಂಗತಿಗಳನ್ನು
41
ಒಳಗೊಡಂತೆ ಎಲ್ಲ ವೂ ದೇವರ ಮಹಿಮೆಗಾಗಿಯೇ ಕಾರ್ಯಮಾಡುತ್ತವೆ. ದೇವರ
ಸಾರ್ವಭೌಮತ್ವ ವು ರೋಮಾ. 9:14-24; ಎಫೆ. 1;3-14 ರಲ್ಲಿ ಪ್ರಸ್ತು ತಪಡಿಸಲ್ಪ ಟ್ಟಿದೆ.
ಮನುಷ್ಯ ನು ಜವಬ್ದಾರಿಯುತ ನೈತಿಕ ಕಾರ್ಯಕರ್ತ ಎಂದು ಸತ್ಯ ವೇದವು ಬೋಧಿಸುತ್ತದೆ.
ಇದನ್ನು ನಮ್ಮ ಮನಸ್ಸು ಗಳಲ್ಲಿ ದೇವರ ಸಾರ್ವಭೌಮತ್ವ ದೊಡನೆ ಸಂಧಾನಪಡಿಸಲು ಸಾಧ್ಯ ವಿಲ್ಲ .
ಆದಾಗ್ಯೂ ಎರಡು ಉಪದೇಶಗಳು ದೇವರಿಂದಲೇ ಪ್ರಕಟಿಸಲ್ಪ ಟ್ಟು ವಗಳು ಮತ್ತು
ಸತ್ಯ ವಾದವುಗಳು. ಒಂದರ ವೆಚ್ಚ ದಲ್ಲಿ ಇನ್ನೊಂದಕ್ಕೆ ಅಧಿಕ ಒತ್ತು ಕೊಡುವದು
ಅಪಾಯಕಾರಿಯಾದ ಸಂಗತಿ!
ತ್ರಯೇಕತ್ವ
ವಿಜ್ಞಾನಿಗಳು ಮತ್ತು ಮನೋವಿಜ್ಞಾನಿಗಳು ಮಾನವನ ವ್ಯ ಕ್ತಿತ್ವ ವನ್ನು ವಿವರಿಸಲು
ಕಷ್ಟ ಪಡುತ್ತಿರುವದಾದರೆ ದೇವ ಶಾಸ್ತ್ರಜ್ಞ ರು ಮತ್ತು ಇತರ ಸತ್ಯ ವೇದ ಸಿದ್ಧಾಂತ ವಿದ್ಯಾರ್ಥಿಗಳು
ದೇವರನ್ನು ವರ್ಣಿಸುವದಕ್ಕೆ ಕಷ್ಟ ಪಡುವದು ಆಶ್ಚ ರ್ಯವೇನಲ್ಲ . ದೇವರ ಇರುವಿಕೆಯ
ಕುರಿತಾದ ತುಂಬಾ ಕಷ್ಟ ಕರವಾದ ಮರ್ಮವೇನೆಂದರೆ ಅದುವೇ ತ್ರಯೇಕತ್ವ ದ ಸಿದ್ಧಾಂತ
ತ್ರಯೇಕತ್ವ ವೆಂಬ ಪದವು ಸತ್ಯ ವೇದದಲ್ಲಿ ಎಲ್ಲಿಯೂ ಕಂಡು ಬರುವದಿಲ್ಲ . ಆದರೆ ಅದರ
ಸತ್ಯ ಗಳು ಸತ್ಯ ವೇದಲ್ಲೆಲ್ಲಾ ವ್ಯಾಪಿಸಿದೆ. ತ್ರಯೇಕತ್ವ ದ ಕೆಲವು ನಿರೂಪಣೆಗಳನ್ನು ನೋಡೋಣ.
ನಂತರ ಅವುಗಳು ದೇವರ ವಾಕ್ಯ ದಿಂದಲೇ ಆ ನಿರೂಪಣೆಗೆ ಹೇಗೆ ಬಂದವು ಎಂಬುದನ್ನು
ಗಮನಿಸೋಣ.
ಬಹಳ ಚಿರಪರಿಚಿತವಾದ ಒಂದು ನಿರೂಪಣೆ: ವೆಷ್ಟ್ ಮಿನಿಷ್ಟ ರ್ ಕನ್ಫೆಷನ್ ನಲ್ಲಿ
ಒಳಗೊಂಡಿದೆ. (1643). “ದೈವತ್ವ ದ ಐಕ್ಯ ತೆಯಲ್ಲಿ ಒಂದು ವಸ್ತು , ಶಕ್ತಿ ಮತ್ತು ನಿತ್ಯ ತೆಯ .....
ಮೂರು ವ್ಯ ಕ್ತಿಗಳಿದ್ದಾರೆ.”
ಇದು ತ್ರಯೇಕತ್ವ ದ ಸಿದ್ಧಾಂತದ ವಾಕ್ಯಾನುಸಾರ ಹೇಳಿಕೆಯಾಗಿದೆ. ಹೀಗಿದ್ದ ರು
“ವ್ಯ ಕ್ತಿಗಳು” ಎಂಬ ಪದವು ತಪ್ಪು ಅಭಿಪ್ರಾಯವನ್ನು ಕೊಡಬಹುದಾದರೂ ಸಾಮಾನ್ಯ
ಅರ್ಥದಲ್ಲಿ ವ್ಯ ಕ್ತಿಗಳು ಒಬ್ಬೊಬ್ಬ ವ್ಯ ಕ್ತಿ ಎಂಬರ್ಥದಲ್ಲಿ ಹೇಳಲ್ಪ ಟ್ಟಿಲ್ಲ . ಮೂರು ದೇವರುಗಳಲ್ಲ ,
ದೇವರು ಮೂರು ವ್ಯ ಕ್ತಿಗಳಲ್ಲಿ ಬೇರೆ ಅರ್ಥದಲ್ಲಿಯೇ ಹೊರತು ಯಾವುದೇ
ವಿರೋದತೆಯು ಇಲ್ಲ . ಈ ಸತ್ಯ ವು ಬಿ.ಬಿ. ವಾರ್ ಫೀಲ್ಡ್ ರವರ ನಿರೂಪಣೆಯಲ್ಲಿ ಒತ್ತಿ
ಹೇಳಲ್ಪ ಟ್ಟಿದೆ. “ದೈವತ್ವ ದ ಐಕ್ಯ ತೆಯಲ್ಲಿ ಸಮಾನ ನಿತ್ಯ ತೆ ಮತ್ತು ಸಮಾನ ವ್ಯ ಕ್ತಿತ್ವ ವನ್ನು ಹೊಂದಿದ
ಮೂರು ವ್ಯ ಕ್ತಿಗಳು. ದೈವತ್ವ ದಲ್ಲಿ ಒಂದೇ ಆದರೆ ಅಸ್ತಿತ್ವ ದಲ್ಲಿ ಭಿನ್ನ ರಾದವರು” ಇಲ್ಲಿರುವ
42
‘ಐಕ್ಯ ತೆ’ ಎಂಬ ಪದವು ಸಾಮಾನ್ಯ ರೂಢಿಯನ್ನು ಭದ್ರಪಡಿಸುತ್ತದೆ. ಆದರೆ ಕಠಿಣ
ಪದಪ್ರಯೋಗವಾದ ‘ವ್ಯ ಕ್ತಿಗಳು’ ಮತ್ತು ‘ಸಮಾನ ಸ್ಥಾನಮಾನ’ ಮತ್ತು ಸಮಾನ
ನಿತ್ಯ ತೆಯೆಂಬ ಪದಗಳು ಮಗನು ಮತ್ತು ಪವಿತ್ರಾತ್ಮ ನು ತಂದೆಗಿಂತ ಕೆಳಮಟ್ಟ ದವರು ಮತ್ತು
ತಂದೆಯಾದ ದೇವರಿಂದ ಸೃಷ್ಟಿಸಲ್ಪ ವರು ಎಂಬ ತೊಡಕುಗಳನ್ನು ತಡೆಯುತ್ತವೆ. ಯಾರೋ
ಒಬ್ಬ ರು ದೈವತ್ವ ವನ್ನು ಬಹಳ ಸ್ಪ ಷ್ಟ ವಾಗಿ ಉಲ್ಲೇಖಿಸಿದ್ದಾರೆ. ತ್ರಯೇಕತೆಯ ಮೂರು ವ್ಯ ಕ್ತಿಗಳು,
ಒಂದೇ ತಿರುಳನ್ನು ಅಥವಾ ಸತ್ಯ ವನ್ನು ಹೊಂದಿರುವರು. ವಿಜ್ಞಾನದಲ್ಲಿ ಚೆನ್ನಾಗಿ ತಿಳಿದಿರುವ
ಸಂಗತಿಯೆಂದರೆ, ಪ್ರತಿಯೊಂದು ಮೂಲಧಾತವು ವಿಶೇಷಗುಣವನ್ನು ಪ್ರಕಟಿಸುತ್ತದೆ ಮತ್ತು
ವರ್ಣಪಟಲ ದರ್ಶಕದ ಮೇಲೆ ವಿಶೇಷ ಮಾದರಿಯನ್ನು ಮತ್ತು ಮೂಲಧಾತುವು
ಯಾವಾಗಲೂ ಅದೇ ಮಾದರಿಯನ್ನು ಹೊಂದಿರುತ್ತದೆ. ಹಾಗೆಯೇ ದೈವತ್ವ ದಲ್ಲಿನ
ಪ್ರತಿಯೊಬ್ಬ ವ್ಯ ಕ್ತಿಯು ಸಾರದಲ್ಲಿ ಒಂದೇ ಆಗಿದ್ದ ರೂ ಒಂದೇ ರೀತಿಯ ಮಾದರಿಯನ್ನು
ಹೊಂದಿದ್ದಾರೆ.
ತ್ರೈಯೇಕತ್ವ ಸಿದ್ಧಾಂತವು ಸತ್ಯ ವೇದದಲ್ಲಿ ಹೇಳಲ್ಪ ಟ್ಟಿಲ್ಲ . ಆದರೆ ಇದು ಅದರಲ್ಲಿರುವ
ತೋರಿಕೆಯ ವಿರೋಧಿಶಕ್ತಿಗಳಿಗೆ ತಾರ್ಕಿಕ ಸಮಾಧಾನವಷ್ಟೆ. ನಾವು ಈಗಾಗಲೆ
ನೋಡಿದಂತೆ, ದೇವರು ಒಬ್ಬ ನೇ ಎಂದು ಸತ್ಯ ವೇದವು ಬೋಧಿಸುತ್ತದೆ (ಧರ್ಮೋ.6:4) ಅದೇ
ಸಮಯದಲ್ಲಿ ತಂದೆಯು ದೇವರಾಗಿದ್ದಾನೆ ಮಗನು ದೇವರಾಗಿದ್ದಾನೆ ಮತ್ತು ಪವಿತ್ರಾತ್ಮ ನು
ದೇವರಾಗಿದ್ದಾನೆ ಎಂದು ಸತ್ಯ ವೇದವು ಬೋಧಿಸುತ್ತದೆ. ತಂದೆಯ ದೈವತ್ವ ಕ್ಕೆ ವಿರುದ್ಧ ವಾಗಿ
ಯಾರೂ ವಾದಮಾಡುವದಿಲ್ಲ ಆದರೆ ಮಗನ ಮತ್ತು ಪವಿತ್ರಾತ್ಮ ನ ದೈವತ್ವ ದ ಕುರಿತು
ಮನವರಿಕೆ ಮಾಡುವುದು ಅಗತ್ಯ ವಾಗಿದೆ.
ಮಗನಾದದೇವರು
ಕ್ರಿಸ್ತನು ತಂದೆಯಿಂದ ಭಿನ್ನ ವಾಗಿದ್ದಾನೆ ಮತ್ತು ಆತನೂ ಸಹ ದೇವರೇ ಆಗಿದ್ದಾನೆ.
ಉದಾಹರಣೆಗೆ ಇದನ್ನು ಪರಿಗಣಿಸಿ, ಯೋಹಾ 1:1 ಆ ವಾಕ್ಯ ವು ದೇವರ ಬಳಿಯಲ್ಲಿತ್ತು , ಆ
ವಾಕ್ಯ ವು ದೇವರಾಗಿತ್ತು . ಇಲ್ಲಿ ಕ್ರಿಸ್ತನು (ಅಕ್ಷರಶಃವಾಗಿ) ದೇವರೊಂದಿಗೆ
ಮುಖಾಮುಖಿಯಾಗುವದನ್ನು ನಾವು ನೋಡುತ್ತೇವೆ. ಈ ಕಾರಣದಿಂದ, ಆತನಿಂದ
ವಿಶಿಷ್ಟ ವಾದವನು ಆದಾಗ್ಯೂ ದೇವರೆಂದು ಕರೆಯಲ್ಪ ಟ್ಟಿದ್ದಾನೆ. ಇಬ್ರಿ 1:8 ಮತ್ತು ಯೋಹಾ
20:28 ರಲ್ಲಿ ಕ್ರಿಸ್ತನು ದೇವರೆಂದು ಕರೆಯಲ್ಪ ಟ್ಟಿದ್ದಾನೆ.
43
ಕ್ರಿಸ್ತನೂ ಸಹ ದೇವರೇ ಆಗಿದ್ದಾನೆ ಯಾಕೆಂದರೆ ಆತನು ದೇವರ ಗುಣಲಕ್ಷಣಗಳನ್ನು
ಹೊಂದಿರುತ್ತಾನೆ- ಉದಾಹರಣೆಗೆ, ಆತನ ಬದಲಾಗದ ಗುಣಲಕ್ಷಣ (ಇಬ್ರಿ: 13:8) ಆತನ
ಸರ್ವವ್ಯಾಪಕತ್ವ (ಮತ್ತಾ: 18:20) ಮತ್ತು ಆತನ ಸರ್ವಜ್ಞಾನತ್ವ (ಯೋಹಾ :2:24 ,25)
ಕ್ರಿಸ್ತನು ದೇವರು ಎನ್ನು ವದಕ್ಕೆ ಇರುವ ಮೂರನೇ ಪುರಾವೆಯೆಂದರೆ ಆತನ
ದೈವೀಕ ಕ್ರಿಯೆಗಳು ಮಾರ್ಕ: 2:5-7 ರಲ್ಲಿ ಕ್ರಿಸ್ತನು ಪಾಪವನ್ನು ಕ್ಷಮಿಸುತ್ತಾನೆ, ಸ್ಪ ಷ್ಟ ವಾಗಿ ಇದು
ದೈವತ್ವ ದ ವಿಶೇಷಾಧಿಕಾರಿಯಾಗಿದೆ. ಕೊಲೋ: 1:16-17 ರಲ್ಲಿ ಕ್ರಿಸ್ತನು ವಿಶ್ವ ದ ಸೃಷ್ಟಿಕರ್ತನಾಗಿ
ಕಾಣಲ್ಪ ಡುವದು ಮಾತ್ರವಲ್ಲ ದೆ, ಸೃಷ್ಟಿಯ ಸಂರಕ್ಷಕನಾಗಿಯೂ ಇದ್ದಾನೆ. ಕ್ರಿಸ್ತನ ದೈವತ್ವ ಕ್ಕೆ
ಹೆಚ್ಚಿನ ಗಮನವನ್ನು ಅಧ್ಯಾಯ 5 ಕ್ರಿಸ್ತಶಾಸ್ತ್ರ ಭಾಗ 1 ರಲ್ಲಿ ನೀಡಲಾಗಿದೆ.
44
ಮಟ್ಟ ದಲ್ಲಿ ಇರುವದನ್ನು ಹಾಗೆಯೇ ನಮ್ಮ ಕರ್ತನಾದ ಯೇಸುಕ್ರಿಸ್ತನ ದೀಕ್ಷಸ್ನಾನದಲ್ಲಿಯೂ
ಇದೆ ಮಾದರಿಯನ್ನು ಕಾಣುತ್ತೇವೆ (ಮತ್ತಾ. 3:16-17).
ತ್ರೈಯೇಕತ್ವ ದ ಪುರಾವೆಗಳ ಇಲ್ಲಿಯವರೆಗಿನ ಎಲ್ಲಾ ಪಟ್ಟಿಯನ್ನು ಹೊಸ
ಒಡಂಬಡಿಕೆಯಿಂದ ತೆಗೆದುಕೊಳ್ಳ ಲಾಗಿದೆ. ಇದು ತಾರ್ಕಿಕವಾದದ್ದು . ಹಳೆ ಒಡಂಬಡಿಕೆಯ
ಕಾಲದಲ್ಲಿ ಬಹು ದೇವತಾ ಸಿದ್ಧಾಂತವು ಬಹು ಶ್ರೇಷ್ಟ ವಾಗಿತ್ತು . ಅದು ಸಹ ದೇವರ
ಐಕ್ಯ ತೆಯನ್ನು ಒತ್ತಿ ಹೇಳುವಷ್ಟ ರ ಮಟ್ಟಿಗೆ ಇತ್ತು (ಧರ್ಮೋ. 6:4). ಒಮ್ಮೆ ಇಸ್ರಾಯೇಲ್
ಬ್ಯಾಬಿಲೋನಿನ ಸೆರೆವಾಸದಿಂದ ವಿಗ್ರಹಾರಧನೆ ವಿಷಯದಲ್ಲಿ ಸಂಸ್ಕ ರಿಸಲ್ಪ ಟ್ಟಿತ್ತು . ಆದಾಗ್ಯೂ
ದೇವರ ತ್ರೈಯೇಕತ್ವ ದ ಸ್ವ ಭಾವದ ಬೋಧನೆಯು ಇನ್ನೂ ಸ್ಪ ಷ್ಟ ವಾಗಿ ಪ್ರಕಟಿಸಲ್ಪ ಡಬಹುದಿತ್ತು .
ತ್ರೈಯೇಕತ್ವ ವು ಹಳೆ ಒಡಂಬಡಿಕೆಯಲ್ಲಿ ಒಳಗೊಂಡಿದೆ. ಆದರೆ ಸ್ಪ ಷ್ಟ ವಾಗಿ ಅಲ್ಲ . “ದೇವರು”
ಎಂಬ ಪದಕ್ಕೆ ಇಬ್ರಿಯ ಭಾಷೆಯಲ್ಲಿ ಉಪಯೋಗಿಸಲ್ಪ ಟ್ಟ ಪದ ಎಲೋಹಿಂ (“ಹಿಮ್”ನಿಂದ
ಕೊನೆಗೊಳ್ಳು ವದು ಚೆರೂಬಿಮ್ ಮತ್ತು ಸೆರಾಫಿಮ್) ಬಹು ವಚನ ರೂಪದಲ್ಲಿದ್ದ ರೂ ಸಹ
ಏಕ ವಚನ ಕ್ರಿಯಾಪದದಲ್ಲಿ ಉಪಯೋಗಿಸಲ್ಪ ಟ್ಟಿದೆ. ಈ ವೀಕ್ಷಣೆಯು ಹೊಸ
ಒಡಂಬಡಿಕೆಯ ಪ್ರಕಟಣೆಯೊಂದಿಗೆ ಅಸಷ್ಟ ವಾಗಿ ಸಂಬಂಧಿಸಿದೆ ಕೀರ್ತನೆ 2 ರಲ್ಲಿ
ಮೆಸ್ಸೀಯನು ಮತ್ತು ತಂದೆಯಾದ ದೇವರು ಬೇರೆ ಬೇರೆ ಕಂಡು ಬಂದರೂ ಯೆಶಾ:
48:16 ರಲ್ಲಿ ಪವಿತ್ರಾತ್ಮ ನು ಮತ್ತು ತಂದೆಯಂತೆ ಇಬ್ಬ ರೂ ಸ್ಪ ಷ್ಟ ವಾಗಿ ದೇವರಾಗಿದ್ದಾರೆ.
ತ್ರೈಯೇಕತ್ವ ವನ್ನು ಅರ್ಥ ಮಾಡಿಕೊಳ್ಳು ವ ಸಮಸ್ಯೆ ಯು ಉಳಿದುಕೊಳ್ಳು ತ್ತದೆ. ಆದರೆ
ಇದು ನಮ್ಮ ನ್ನು ಆಶ್ಚ ರ್ಯ ಚಕಿತರನ್ನಾಗಿ ಮಾಡಬಾರದು. ಇಂದಿನ ನವೀನ ವೈಜ್ಞಾನಿಕ
ಸಂಶೋಧನೆಗಳ ಸಹಾಯದಿಂದಲೂ ದೇವರ ಸೃಷ್ಟಿಯ ಕುರಿತು ಎಲ್ಲ ವನ್ನು ನಾವು
ಅರ್ಥಮಾಡಿಕೊಳ್ಳ ಲಾಗದಿದ್ದ ರೆ ದೇವರ ವ್ಯ ಕ್ತಿತ್ವ ಅಥವಾ ದೇವರ ಸ್ವಂತ ಸ್ವ ಭಾವಗಳನ್ನು
ವಿಶ್ಲೇಷಿಸಲು ನಮಗಾಗದಿದ್ದ ಕ್ಕೆ ನಾವು ಯಾಕೆ ಆಶ್ಚ ರ್ಯ ಪಡಬೇಕು? ದೈವತ್ವ ವನ್ನು ಅಥವಾ
ತ್ರೈಯೇಕತ್ವ ವನ್ನು ಗ್ರಹಿಸಲು ನಮ್ಮಿಂದಾಗದಿದ್ದ ಕ್ಕೆ ನಾವು ಆಶ್ಚ ರ್ಯಪಡುತ್ತೇವೆ ಅಂದರೆ
ದೇವರೇ ಅಲ್ಲ ಎಂಬುದಕ್ಕೆ ಆಶ್ಚ ರ್ಯಪಟ್ಟಂತೆಯೇ ಆಗುತ್ತದೆ.
ದೇವರ ಪ್ರಕಟಣೆಯನ್ನು ಸುಮ್ಮ ನೇ ನಂಬುವುದು ಮತ್ತು ತನ್ನ ನ್ನು ನಮಗೆ
ಪ್ರಕಟಿಸಿಕೊಳ್ಳ ಲು ದೇವರು ಕೃಪೆಯಿಂದ ಅನುಗ್ರಹಿಸಿದ್ದಾನೆಂದು ಅರ್ಥಮಾಡಿಕೊಳ್ಳು ವುದು
ಎಷ್ಟೋ ಉತ್ತಮವಾದದ್ದು . ಇಂದಿನ ಸಮಯಕ್ಕೆ, ಸತ್ಯ ವೇದವು ತನ್ನು ದ್ದ ಕ್ಕೂ ಒಬ್ಬ ನೇ
ದೇವರಿದ್ದಾನೆ ಎಂದು ಹೇಳುತ್ತದೆ. ಮತ್ತು ಆತನು ನಿತ್ಯ ತ್ವ ಕ್ಕೂ ತಂದೆಯಾಗಿ, ಮಗನಾಗಿ ಮತ್ತು
ಪವಿತ್ರಾತ್ಮ ನಾಗಿ ಅಸ್ತಿತ್ವ ದಲ್ಲಿದ್ದಾನೆ ಹಾಗೂ ಈ ಮೂವರು ಸಮಾನವಾಗಿ ದೇವರಾಗಿದ್ದಾರೆ
45
ಎಂದು ವಿಶ್ವಾಸದಿಂದ ನಾವು ಹೇಳಬಹುದು. ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ವಿಶ್ವಾಸಿಗೆ
ತ್ರೈಯೇಕತ್ವ ದ ಸುಮಧುರ ಬೋಧನೆಯನ್ನು ಸ್ವೀಕರಿಸುವದಕ್ಕೆ ಯಾವುದೇ ವಾಸ್ತವಿಕವಾದ
ಕಷ್ಟ ವಾಗಲೀ, ಸಮಸ್ಯೆ ಯಾಗಲೀ ಇಲ್ಲ . ಕಾರಣ ಜಗತ್ತಿನಲ್ಲಿ ಯಾವದೊಂದೂ
ಸೃಷ್ಟಿಸಲ್ಪ ಡುವುದಕ್ಕೆ ಹಿಂದೆಯೇ ದೈವತ್ವ ದ ವ್ಯ ಕ್ತಿಗಳ ನಡುವೆ ದೇವರ ಪ್ರೀತಿಯನ್ನು
ಪ್ರಯೋಗಿಸಲು ಈ ತ್ರೈಯೇಕತ್ವ ವೊಂದೇ ಪರಿಗಣಿಸಲ್ಪ ಡುತ್ತದೆ. ದೇವಜನರು ಮತ್ತು
ದೇವದೂತರೊಂದಿಗೆ ಸೇರಿಕೊಂಡು ಒಬ್ಬ ನೇ ದೇವರು ಮೂರು ವ್ಯ ಕ್ತಿತ್ವ ಗಳಲ್ಲಿದ್ದಾನೆಂದು
ಸ್ತು ತಿಸಿ ಕೊಂಡಾಡೋಣ.
ತಂದೆಯಾದ ದೇವರು
ದೇವರ ಕುರಿತಾದ ಅರ್ಥಪೂರ್ಣ ಕಲ್ಪ ನೆಯೆಂದರೆ ತ್ರೈಯೇಕತ್ವ ದಲ್ಲಿ ಮೊದಲನೇ
ವ್ಯ ಕ್ತಿಯನ್ನು “ತಂದೆ” ಎಂದು ಕರೆಯಲಾಗಿದೆ. ಅತ್ಯು ತ್ತಮ ಅರ್ಥದಲ್ಲಿ ಪಿತೃತ್ವ ದ ಮಾನವ
ಕಲ್ಪ ನೆಯು ದೈವೀಕ ಪವಿತ್ರ ಗ್ರಂಥದಿಂದ ಪಡೆಯಲಾಗಿದೆ.. ಪರಿಶುದ್ಧ ದೇವರವಾಕ್ಯ ವು
ದೇವರನ್ನು ತಂದೆಯಾಗಿ 4 ಪ್ರಮುಖ ಮತ್ತು ವಿಶಿಷ್ಟ ಅರ್ಥದಲ್ಲಿ ತಿಳಿಸಿಕೊಡುತ್ತದೆ.
ಆತನು ಎಲ್ಲಾ ಸೃಷ್ಟಿಯ ತಂದೆಯಾಗಿದ್ದಾನೆ.“ದೇವರ ಸಾರ್ವತ್ರಿಕ ಪಿತೃತ್ವ ) ಮತ್ತು
ಮನುಷ್ಯ ನ ಸಹೋದರತ್ವ ”ದ ಕುರಿತು ಉದಾರವಾದಿ ಪ್ರಗತಿಪರರ ವಾಕ್ಯಾನುಸಾರವಲ್ಲ ದ
ಒತ್ತು ಕೊಡುವಿಕೆಯಿಂದಾಗಿ, ದೇವರು ಎಲ್ಲಾ ಸಂಗತಿಗಳ ತಂದೆಯಾಗಿದ್ದಾನೆ (ಜನ್ಮ ದಾತ)
ಎಂಬ ದೇವರವಾಕ್ಯ ದ ಸತ್ಯ ವು ಸುವಾರ್ತಾಭೋಧಕರ ನಡುವೆ ಅಸ್ಪ ಷ್ಟ ವಾಗಿದೆ.. ಅ.ಕೃ 17:28-
29 ರಲ್ಲಿ ಮನುಕುಲಕ್ಕೆ ಅಗತ್ಯ ವಾದ ಎಲ್ಲಾ ಅಗತ್ಯ ವಸ್ತು ಗಳನ್ನು ಸರಬರಾಜು ಮಾಡುವವವನು
ದೇವರು ಎಂದು ತಿಳಿಸಿದೆ. ಮಿತಿಯುಳ್ಳ ವಿಧಾನದಲ್ಲಿ ಹೇಳುವುದಾದರೆ ಎಲ್ಲಾ ಮನುಷ್ಯ ರೂ
“ಸಹೋದರರೇ” ಆಗಿದ್ದಾರೆ, ದೇವರ ಮಗನು ಎಂದು ಕರೆಯಲ್ಪ ಟ್ಟ ಆದಾಮನ
ವಂಶವಳಿಯವರು ಆಗಿದ್ದಾರೆ (ಲೂಕ:3:38) ಆತ್ಮೀಕ ಅರ್ಥದಲ್ಲಿ, ಎಷ್ಟಾದರೂ
ರಕ್ಷಿಸಲ್ಪ ಟ್ಟ ವರೂ ರಕ್ಷಿಸಲ್ಪ ಡದೇ ಇರುವವರಿಗೂ ನಡುವೆ ದೊಡ್ಡ ಡಂಗುರವಿದೆ.
ಆತನು ಇಸ್ರಾಯೇಲ್ಯ ರ ತಂದೆ. ಒಂದು ಜನಾಂಗವಾಗಿ, ಇಸ್ರಾಯೇಲ್ ದೇವರನ್ನು
ತಂದೆಯಾಗಿ ಹೊಂದಿತ್ತು , ಆತನಾದರೋ ಇಸ್ರಾಯೇಲ್ಯ ರನ್ನು ತನ್ನ “ಮಗ”ನೆಂದೂ ತನ್ನ
“ಚೊಚ್ಚ ಲಮಗ”ನೆಂದೂ ಕರೆದಿದ್ದಾನೆ (ವಿಮೋ: 4:22) ಯೆರೆ: 31:9 ರಲ್ಲಿ ಸ್ಪ ಷ್ಟ ವಾಗಿ ಹೀಗೆ
ಹೇಳಿದ್ದಾನೆ, “ನಾನು ಇಸ್ರಾಯೇಲಿಗೆ ತಂದೆಯಾಗಿದ್ದೇನೆ” ಇಲ್ಲಿ ಗಮನಿಸಬೇಕಾದ ಪ್ರಾಮುಖ್ಯ
ಸಂಗತಿಯೆಂದರೆ, ಈ ಸಂಬಂಧವು ವೈಯಕ್ತಿಕವಾದುದಲ್ಲ , ಕ್ರೈಸ್ತ ವಿಶ್ವಾಸಿಗೂ ದೇವರಿಗೂ
46
ನಡುವೆ ಈಗ ಅಸ್ತಿತ್ವ ದಲ್ಲಿರುವ ಸಂಬಂಧವು ಕ್ರಿಸ್ತನ ಪ್ರಾಯಶ್ಚಿತ್ತ ಮರಣದ ಮೂಲಕ
ಸಾಧ್ಯ ವಾಗಿ ಮಾಡಲ್ಪ ಟ್ಟ ದ್ದು ಹಾಗೂ ರಾಷ್ಟ್ರೀಯ ಪಿತೃತ್ವ ವಾಗಿದೆ.
ಆತನು ನಮ್ಮ ಕರ್ತನಾದ ಯೇಸುಕ್ರಿಸ್ತನ ತಂದೆ. ಕರ್ತನಾದ ಯೇಸು ಕ್ರಿಸ್ತನು
ಅನೇಕ ಸಾರಿ ದೇವರನ್ನು ಕುರಿತು ತಂದೆಯೆಂದು ಮಾತನಾಡಿದ್ದಾನೆ ಮತ್ತು ಆ
ರೀತಿಯಲ್ಲಿಯೇ ದೇವರನ್ನು ಪ್ರಾರ್ಥಿಸಿದ್ದಾನೆ. ಈ ಪದ್ಧ ತಿಯು ಮತ್ತಾಯನ ಸುವಾರ್ತೆಯಲ್ಲಿ
20 ಸಾರಿಯೂ, ಮಾರ್ಕನ ಸುವಾರ್ತೆಯಲ್ಲಿ 2 ಸಾರಿಯೂ, ಲೂಕನ ಸುವಾರ್ತೆಯಲ್ಲಿ 62
ಸಾರಿಯೂ ಹಾಗೂ 3 ಸಾರಿ ಪ್ರಕಟಣೆಯಲ್ಲಿಯೂ ಕಂಡುಬರುತ್ತದೆ. ಪೌಲನು “ನಮ್ಮ
ಕರ್ತನಾದ ಯೇಸುಕ್ರಿಸ್ತನ ತಂದೆಯೂ, ದೇವರೂ” ಎಂದು 6 ಪ್ರತ್ಯೇಕ ವಾಕ್ಯ ಭಾಗಗಳಲ್ಲಿ
ಬರೆದಿದ್ದಾನೆ. ಪೇತ್ರನು ಕೂಡ ಅದೇ ಶೈಲಿಯಲ್ಲಿ ತನ್ನ ಮೊದಲನೇ ಪತ್ರಿಕೆಯಲ್ಲಿ
ಉಪಯೋಗಿಸಿದ್ದಾನೆ ಹಾಗೂ ಯೋಹಾನನು ಅದೇ ರೀತಿಯ ಭಾಷೆಯನ್ನು 4 ಸೇರಿ
ಬರಿದಿದ್ದಾನೆ. ಈ ತಂದೆ-ಮಗನ ಸಂಬಂಧದ ಮಟ್ಟ ದಲ್ಲಿ ಊಹಿಸಿಕೊಳ್ಳ ಬಾರದು ಅಥವಾ
ಇಸ್ರಾಯೇಲ್ಯ ರೊಂದಿಗಿನ ಸಂಬಂಧ ಅಥವಾ ಹೊಸದಾಗಿ ವಿಶ್ವಾಸಿಗಳೊಂದಿಗಿನ
ಸಂಬಂಧದಂತೆ ಮಾತ್ರ ಇರುತ್ತದೆಂದು ಭಾವಿಸಕೂಡದು. ವಿಶೇಷರೀತಿಯಲ್ಲಿ, ದೇವರು
ಕ್ರಿಸ್ತನನ್ನು ತನ್ನ ಮಗನೆಂದು ಒಪ್ಪಿಕೊಂಡಿದ್ದಾನೆ; ಎರಡು ಸಂದಂರ್ಭಗಳಲ್ಲಿ ದೇವರು
ಪರಲೋಕದಿಂದ ಮಾತಾಡಿ “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು
ಮೆಚ್ಚಿದ್ದೇನೆ” ಎಂದು ಹೇಳಿದ್ದಾನೆ.
ಯೇಸು ಕ್ರಿಸ್ತನು ದೇವಕುಮಾರನು ಎನ್ನು ವ ಅಂಶವು ಮಗನು ಸೃಷ್ಟಿಸಲ್ಪ ಟ್ಟ ವನು
ಅಥವಾ ದೇವರ ಕ್ರಿಯೆಯಿಂದ ಅಸ್ತಿತ್ವ ಕ್ಕೆ ಬಂದವನು ಎಂದರ್ಥವಲ್ಲ . ಕ್ರಿಸ್ತಶಾಸ್ತ್ರದಡಿಯಲ್ಲಿ
ಮಗನು ನಿತ್ಯ ತ್ವ ದವನು ಎಂದು ನಿರೂಪಿಸುವ ವಾಕ್ಯ ಗಳನ್ನು ಅಧ್ಯಾಯನ ಮಾಡೋಣ. ಆದರೆ
ದೇವರ ವಾಕ್ಯ ದಲ್ಲಿ ಎರಡು ಪದಗಳು ತಂದೆ ಮತ್ತು ಮಗನ ನಡುವಿನ ಸಂಬಂಧವನ್ನು
ವರ್ಣಿಸುತ್ತವೆ. ಮೊದಲನೆಯದಾಗಿ “ಒಬ್ಬ ನೇ ಮಗನು” ಈ ಪದ ಪ್ರಯೋಗವು
ಯೋಹಾನನ ಸುವಾರ್ತೆ ಹಾಗೂ ಮೊದಲನೇ ಪತ್ರಿಕೆಯಲ್ಲಿ 5 ಸಾರಿ ಬಳಸಲ್ಪ ಟ್ಟಿದೆ. ಗ್ರೀಕ್
ಪದದ ಅರ್ಥ ಅದೇ ರೀತಿ ಇರುವವನು. ಒಬ್ಬ ನೇ ಅಥವಾ ಅದ್ವಿತೀಯನು. ಹಾಗೆಯೇ
ಆತನು “ಚೊಚ್ಚ ಲ ಮಗನು” ಈ ಪದವು ಕ್ರಿಸ್ತನ ಕುರಿತು 7 ಸಾರಿ ಉಪಯೋಗಿಸಲ್ಪ ಟ್ಟಿದೆ.
ಕನ್ಯಾಮರಿಯಳ ಮಗನಾಗಿ ಆತನ ಜನನದ ಕುರಿತು ಈ ಪದದ ಅರ್ಥ ಸಮಯದಲ್ಲಿ
ಮೊದಲು (ಅಂದೆ ಮೊದಲ ಮಗು ಆಕೆಗೆ ಜನಿಸಿತು; ಆಕೆ ಇತರ ಮಕ್ಕ ಳನ್ನು ಪಡೆದುಕೊಳ್ಳು ತ್ತಾ
ಹೋಗುತ್ತಾಳೆ) ಇತರ ಎಲ್ಲಾ ನಿದರ್ಶನಗಳಲ್ಲಿ ಈ ಪದದ ಅರ್ಥ ಸ್ಥಾನದಲ್ಲಿ ಮೊದಲಿಗನು
47
(ಕೊಲೊ. 1:15). ಹಾಗೆಯೇ “ಸತ್ತವರೊಳಗಿಂದ ಮೊದಲು ಎದ್ದು ಬಂದವನು (ಕೊಲೊ.
1:18) ಮತ್ತು ಅನೇಕ ಸಹೋದರರೊಳಗೆ ಜೇಷ್ಠ ನು (ರೋಮಾ. 8:2). ಸೃಷ್ಟಿಸಲ್ಪ ಟ್ಟ
ಜೀವಿಗಳೊಂದಿನ ಯಾವುದೇ ಸಂಬಂಧದಲ್ಲಿ ಕ್ರಿಸ್ತನೇ ಪ್ರಧಾನ ಸ್ಥಾನ ಹೊಂದಿರಬೇಕು.
ಹಳೇ ಒಡಂಬಡಿಕೆಯಲ್ಲಿ ಜೇಷ್ಠ ಪುತ್ರನು ಎಂಬ ಪದ ಪ್ರಯೋಗವು ಕುಟುಂಬದಲ್ಲಿ
ಕಾಲಾನುಕ್ರಮದಲ್ಲಿ ಮೊದಲು ಹುಟ್ಟಿದ್ದ ವರಿಗೆ ಅನ್ವ ಯಿಸುತ್ತಿರಲು ಉದಾ: ಚೊಚ್ಚ ಲುತನದ
ಹಕ್ಕೂ ಆರ್ಶೀವಾದವು ಶೇಮ್, ಇಸಾಕನು, ಯಾಕೋಬನು, ಯೆಹೂದನು ಮತ್ತು
ಸೊಲೊಮೋನನಿಗೆ ಕೊಡಲ್ಪ ಟ್ಟಿತು. ಹಾಗೆಯೇ ಕ್ರಿಸ್ತನಿಗೆ ಸಂಬಂಧಿಸಿ ಉಪಯೋಗಿಸಿದಾಗ.
ಚೊಚ್ಚ ಲ ಮಗನು ಎನ್ನು ವದು ಆತನ ಸ್ಥಾನಕ್ಕೆ ಉಲ್ಲೇಖವಾಗಿದೆಯೇ ಹೊರತು ಆತನ ಜನನ
ಅಥವಾ ಮೂಲಕ್ಕ ಲ್ಲ . ಮನುಷ್ಯ ನಾಗಿ ಖಂಡಿತವಾಗಿಯೂ ಆತನು ಲೋಕದಲ್ಲಿ
ಮೊದಲಿಗನಲ್ಲ
ಯೇಸುಕ್ರಿಸ್ತನು ದೇವರ ಮಗನಾಗಿ ಈ ಲೋಕಕ್ಕೆ ಬಂದ್ದ ದ್ದು ಮನುಷ್ಯ ನ
ಮಗನಂತೆ ಪುರುಷ ಸಂಕಲ್ಪ ದಿಂದಲ್ಲ . ದೇವರ ಕುರಿತಾಗಿ “ತಂದೆ” ಮತ್ತು “ಮಗ” ಎಂಬ
ಶಬ್ಧ ಗಳನ್ನು ಉಪಯೋಗಿಸುವದನ್ನು ನೋಡಿ ಅನೇಕ ಜನರು ಹೆಚ್ಚಾಗಿ ಇದು ---- ಅಂದರೆ
ಕಲೆಯಲ್ಲಿ ಮಾನವನ ರೂಪವನ್ನು ಪ್ರತಿನಿಧಿಸುವ ಗುಣವೆಂದು ಹೇಳುತ್ತಾರೆ. ಮತ್ತೊಂದು
ಮಾತಿನಲ್ಲಿ ಹೇಳುವದಾದರೆ , ದೈವೀಕ ವಾಸ್ತಾಂಶವನ್ನು ವರ್ಣಿಸಲು ಅತೀ ಸಮೀಪದ
ಮಾನವ ಗುಣವನ್ನು ಉಪಯೋಗಿಸದೇ ಯಾವದೇ ಸಂದರ್ಭದಲ್ಲಾ ದರೂ ತಂದೆ ಮಗನ
ಸಂಬಂಧವು ತಂದೆಯಾದ ದೇವರ ಮತ್ತು ಮಗನಾದ ದೇವರ ನಡುವೆ ಯಾವಾಗಲೂ
ಅಸ್ತಿತ್ವ ದಲ್ಲಿರುವ ಅಥವಾ ನಿತ್ಯ ವತ್ವ ದ ಪುತ್ರತ್ವ ಎಂದು ಕರೆಯಲ್ಪ ಡುತ್ತದೆ.
ಆತನು ಕ್ರೈಸ್ತ ವಿಶ್ವಾಸಿಗಳ ತಂದೆ.ದೇವರು ಎಲ್ಲಾ ಕ್ರೈಸ್ತರ ತಂದೆ “ದೇವರ ಮಕ್ಕ ಳು”
(ಗಲಾ. 3:26). ಆತ್ಮೀಕ ಅರ್ಥದಲ್ಲಿ ಲೋಕದಲ್ಲಿರುವ ಎಲ್ಲಾ ಜನರೂ ದೇವರ ಮಕ್ಕ ಳಲ್ಲ
ಎಂಬ ಚಿರಪರಿಚಿತ ಆಲೋಚನೆಗೆ ತದ್ವಿರುದ್ಧ ವಾಗಿದ್ದ ರೂ ಈ ಹಿಂದಿನ ಅಧ್ಯಾಯದಲ್ಲಿ
ಗಮನಿಸಿದಂತೆ ಸೃಜನಾತ್ಮ ಕ ಅರ್ಥದಲ್ಲಿ ಎಲ್ಲಾ ಮನುಷ್ಯ ರೂ ತಂದೆಯ ಸಂತತಿಯವರೇ
ಆಗಿದ್ದಾರೆ.
ನಾವು ಗಮನದಲ್ಲಿಟ್ಟು ಕೊಳ್ಳ ಬೇಕಾದ ತಿಳುವಳಿಕೆ (ಬೋಧನೆ) ಎಂದರೆ ಒಂದು
ಕುಟುಂಬದೊಳಗೆ ಸೇರಲು ಮೂರು ಮಾರ್ಗಗಳಿವೆ – 1) ಹುಟ್ಟಿನಿಂದ 2)ದತ್ತು ಸ್ವೀಕಾರದ
ಮೂಲಕ 3)ವಿವಾಹದ ಮೂಲಕ ಇವುಗಳಲ್ಲಿ ಪ್ರತಿಯೊಂದು ವಿಶ್ವಾಸಿಯಲ್ಲಿ ಅಥವಾ
48
ವಿಶ್ವಾಸಿಗಾಗಿ ಅಥವಾ ಸಮಗ್ರವಾಗಿ ಸಭೆಗಾಗಿ ದೇವರ ಕಾರ್ಯಕ್ಕೆ ಸಮಾಂತರವಾಗಿದೆ
49
ಅಧ್ಯಾಯ
5
ಕ್ರಿಸ್ತ ಶಾಸ್ತ್ರ:
ಕ್ರಿಸ್ತನ (ಕುರಿತಾದ) ಅಧ್ಯ ಯನ
-ಭಾಗ 1-
ಕ್ರಿಸ್ಟಾಲಜಿ ಅಥವಾ ಕ್ರಿಸ್ತಶಾಸ್ತ್ರ ಎಂದರೆ ಅಕ್ಷರಶಃವಾಗಿ ಕ್ರಿಸ್ತನ ಅಧ್ಯ ಯನ ಎಂದರ್ಥ.
ಇದು ಯೇಸಕ್ರಿಸ್ತನು ಮಾಡಿದ್ದೆಲ್ಲ ವನ್ನು ಮಾಡುತ್ತಿರುವದನ್ನೂ ಮತ್ತು ಭವಿಷ್ಯ ತ್ತಿನಲ್ಲಿ ಆತನು
ಮಾಡಲಿರುವದನ್ನೂ ಒಳಗೊಂಡಿರುತ್ತದೆ. ತಂದೆಯ ಹೃದಯದಲ್ಲಿರುವ ಎಲ್ಲ ವುಗಳ
ಪರಮೋಚ್ಛ ಪ್ರಕಟಣೆಯೇ ಕ್ರಿಸ್ತನಾಗಿದ್ದಾನೆ. ಕ್ರಿಸ್ತನು ನಮ್ಮ ರಕ್ಷಕನು, ಮಹಾಯಾಜಕನು
ಮತ್ತು ಮಾದರಿಯು, ಹಾಗೂ ನಮ್ಮ ಎಲ್ಲಾ ಆಶೀರ್ವಾದಗಳ ಮೂಲವೂ ಆಗಿದ್ದಾನೆ. ಆತನ
ಶಿಲುಬೆಯು ಎರಡು ನೈಜ್ಯ ತೆಗಳ ಕೇಂದ್ರವಾಗಿದೆ. ಕ್ರಿಸ್ತನಿಗೆ ಪೂರ್ವದಲ್ಲಿದ್ದೆಲ್ಲ ವೂ ಆತನಿಗಾಗಿ
ಮುಂದಕ್ಕೆ ನೋಡುತ್ತಿದ್ದ ವು ಹಾಗೂ ವರ್ತಮಾನದ ಮತ್ತು ಭವಿಷ್ಯ ತ್ತಿನ
ಆಶೀವಾರ್ದಗಳೆಲ್ಲ ವೂ ಆತನಿಂದಲೇ ಹರಿದುಬರುವಂತವುಗಳು ಮತ್ತು ಆತನು ಕಲ್ವಾ ರಿ
ಶಿಲುಬೆಯ ಮೇಲೆ ಮಾಡಿಮುಗಿಸಿದ ಆತನ ಕಾರ್ಯವನ್ನು ಹಿಂದಕ್ಕೆ ನೋಡುತ್ತವೆ.
50
ಸಂರಕ್ಷಣಾ ಕಾರ್ಯದ ಕುರಿತು ಮಾತನಾಡುತ್ತದೆ. ಕ್ರಿಸ್ತನ ದೈವತ್ವ ಕ್ಕೆ ಒಂದು ಪುರಾವೆ ಎಂದರೆ
ವಿಶ್ವ ವನ್ನು ಸೃಷ್ಟಿಸುವಲ್ಲಿ ಆತನ ಶಕ್ತಿ “ಆತನಲ್ಲಿ ಜೀವವಿತ್ತು ” (ಯೋಹಾ. 1:4). ಮತ್ತು ಆತನು
ಆ ಜೀವವನ್ನು ಲೋಕದೊಂದಿಗೆ ಸಮಪರ್ಕಿಸಿದನು. ದೇವರು ಮಗನ ಮೂಲಕವೇ
ಜಗತ್ತನ್ನು ಅಥವಾ ಯುಗಗಳನ್ನು ಸೃಷ್ಟಿಸಿದನು(ಇಬ್ರಿ.1:2; ಯೋಹ:1:3)ಹೊಸ
ಒಡಂಬಡಿಕೆಯಲ್ಲಿ ನಾವು ಹೀಗೆ ನೋಡುತ್ತೇವೆ. ಮಗನು ತನ್ನ ಶಕ್ತಿಯ ವಾಕ್ಯ ದಿಂದ
ಸಮಸ್ತವನ್ನು ಪರಿಪಾಲಿಸುತ್ತಾನೆ ಎಂದು (ಇಬ್ರಿ. 1:3). ಮತ್ತು ಆತನಲ್ಲಿ (ಕ್ರಿಸ್ತನಲ್ಲಿ) ಸರ್ವ
ಸಂಪೂರ್ಣತೆಯು ಆಧಾರಗೊಂಡಿದೆ (ಕೊಲೊ. 1:17 “ಒಟ್ಟಾಗಿ ಹಿಡುಕೊ”).
ದೇವರ ವಾಕ್ಯ ವು ಪ್ರಕಟಣೆಯಲ್ಲಿ ಮಗನ ಕಾರ್ಯವನ್ನು ತಿಳಿಸುತ್ತದೆ. ಆತನು
ಮನುಷ್ಯು ನಾಗುವದಕ್ಕೆ ಮೊದಲೇ ನಿತ್ಯ ತ್ವ ದ ದೇವಕುಮಾರನು ದೇವರು ಮನುಷ್ಯ ರಿಗೆ
ಪ್ರಕಟಿಸಿದನು. ಹಳೇ ಒಡಂಬಡಿಕೆಯ ಕಾರ್ಯದಲ್ಲಿ ಮನುಷ್ಯ ನ ರೂಪದಲ್ಲಿ ಕೆಲವು ಸಾರಿ
ಕರ್ತನ ದೂತನಾಗಿ (ದೇವದೂತ ಶಾಸ್ತ್ರದ ಮೇಲಿನ ಪಾಠವನ್ನು ನೋಡಿರಿ). ಹಾಗೂ
ಬೆಂಕಿಯ ಉರಿಯಂತೆ ಪ್ರಕ್ಯ ಕ್ಷನಾದನು. ದೇವರು ಅಬ್ರಹಾಮನಿಗೆ (ಆದಿ. 12:7), ಇಸಾಕನಿಗೆ
(ಆದಿ. 26:2), ಯಾಕೋಬನಿಗೆ (ಆದಿ. 35:9), ಮೋಶೆಗೆ (ವಿಮೋ. 3:2), ಇಸ್ರಾಯೇಲ್ಯ ರಿಗೆ
(ಯಾಜ:. 9:4), ಯೆಹೋಶುವನಿಗೆ (ಯೆಹೋ. 5:13-15), ಗಿದ್ಯೋನನಿಗೆ (ನ್ಯಾಯ.
6:12). ಮಾನೋಹನಿಗೆ (ನ್ಯಾಯ. 13:11), ಸಮುವೇಲನಿಗೆ(1 ಸಮು. 3:21), ದಾವೀದನಿಗೆ
(2 ಪೂರ್ವ. 3:1), ಸೊಲೊಮೋನನಿಗೆ (1 ಅರಸು. 9:2). ಯೆಶಾಯನಿಗೆ (ಯೆಶಾ. 6:1),
ಯೆಹೆಜ್ಕೇಲನಿಗೆ (ಯೆಹೆ. 1:28) ಮತ್ತು ದಾನಿಯೇಲನಿಗೆ (ದಾನಿ. 10:5) ಪ್ರತ್ಯ ಕ್ಷನಾದನು.
ಮಗನು ಮನುಷ್ಯ ರಿಗೆ ತನ್ನ ನ್ನು ಪ್ರಕಟಿಸಿಕೊಂಡಂತೆ ತಂದೆಯಾಗಲೀ, ಪವಿತ್ರಾತ್ಮ ನಾಗಲೀ
ತಮ್ಮ ನ್ನು ಪ್ರಕಟಿಸಿಕೊಂಡರೆಂಬುದಕ್ಕೆ ಯಾವ ಪುರಾವೆಗಳು ಇಲ್ಲ .
ಅದ್ಭು ತವಾದ ಸಂಗತಿಯೆಂದರೆ ದೇವರು ಮಗನ ಮೂಲಕ ತನ್ನ ನ್ನು ಮನುಷ್ಯ ನಿಗೆ
ಪ್ರಕಟಿಸಿಕೊಂಡದ್ದೇ ಆಗಿದೆ.
ಕ್ರಿಸ್ತನ ದೈವತ್ವ
ಆತನ ಹೆಸರುಗಳಿಂದ ಅನೇಕ ಮಾತುಗಳಿಂದ ದೇವರೆಂದು ಕರೆಸಿಕೊಳ್ಳು ವದರ
ಮೂಲಕ (ಉದಾ: ಇಬ್ರಿ. 1:8). ಆದರೆ ವಿಶೇಷವಾಗಿ ಆತನ ಗುಣಲಕ್ಷಣಗಳಿಂದ ಯೇಸು
ಕ್ರಿಸ್ತನು ದೈವೀಕ ದೇವಕುಮಾರನೆಂದು ಕಾಣಲ್ಪ ಟ್ಟಿದ್ದಾನೆ. ತ್ರೈಯೇಕತ್ವ ದ ವಾದದ ಅಡಿಯಲ್ಲಿ
ತಂದೆಯೊಂದಿಗೂ, ಪವಿತ್ರಾತ್ಮ ನೊಂದಿಗೂ ಕ್ರಿಸ್ತನ ಸಮಾನತೆಯನ್ನು (ಆತನ
51
ದೈವತ್ವ ವಾದ್ದ ರಿಂದ) ಹೊರಪಡಿಸುವ ಕೆಲವು ಪುರಾವೆಗಳನ್ನು ನಾವು ನೊಡಿದ್ದೇವೆ. ಕ್ರಿಸ್ತನು
ಒಬ್ಬ ನೇ ವ್ಯ ಕ್ತಿಯಲ್ಲಿ ಹೇಗೆ ದೇವರು ಮತ್ತು ಮನುಷ್ಯ ನು ಎರಡು ಆಗಿದ್ದಾನೆಂದು ನಾವು
ನೋಡಬೇಕಾಗಿದೆ. ಆತನು “ ದೇವಮಾನವನು ಆಗಿದ್ದಾನೆ.”
ಯೇಸು ಕ್ರಿಸ್ತನು ದೇವರಾಗಿದ್ದು ಮನುಷ್ಯ ನಾಗಿ ತಿರುಗಿಕೊಂಡವನು ಅಥವಾ
ಆತನು ತುಂಬಾ ಒಳ್ಳೆಯ ಮನುಷ್ಯ ನಾಗಿದ್ದು ಅದರಿಂದ ದೇವರಾದನೆಂದೇನು ಅಲ್ಲ
ಎಂಬುದನ್ನು ಮನದಟ್ಟು ಮಾಡಿಕೊಳ್ಳು ವದು ಬಹಳ ಪ್ರಾಮುಖ್ಯ . ಆತನು ಸಮಾನವಾಗಿ
ದೇವರು ಮತ್ತು ಮನುಷ್ಯ ನು, ಏಕ ಕಾಲಕ್ಕೆ ಪರಿಪೂರ್ಣ ಮಾನವತ್ವ ವನ್ನು ಮತ್ತು ದೈವತ್ವ ವನ್ನು
ಹೊಂದಿದ್ದ ವನೇ ಹೊರತು ಒಂದೊಂದನ್ನು ಭಾಗಭಾಗವಾಗಿ ಹೊಂದಿದವನಲ್ಲ . ನಮ್ಮ ಕರ್ತನ
ವೈಯಕ್ತಿತ್ವ ದ ಕುರಿತಾದ ಹೆಚ್ಚಿನ ತಪ್ಪು ಬೋಧನೆಗಳು ಈ ಅಂಶದ ಮೇಲೆ ಅತಿಯಾಗಿ
ಸಡಿಲಗೊಂಡಿರುತ್ತದೆ. ಪ್ರಾರಂಭದ ತಪ್ಪು ಬೋಧನೆಗಳು ಹೆಚ್ಚಾಗಿ ಹೇಳುತ್ತಿದ್ದ ದ್ದು ಯೇಸು
ದೇವರಾಗಿದ್ದ ನು ಕೇವಲ ಮನುಷ್ಯ ನಾಗಿ ಛಾಯರೂಪದಲ್ಲಿ ಪ್ರತ್ಯ ಕ್ಷನಾದನು. ಇವತ್ತಿನ ತಪ್ಪು
ಬೋಧನೆ ಹೇಳುವದೇನೆಂದರೆ, ಆತನು ನಿಜವಾಗಿಯೂ ದೇವರಾಗಿರಲಿಲ್ಲ ದೇವರ ವಾಕ್ಯ ದ
ಸತ್ಯ ವಾಕ್ಯ ದ ಮನೋಭಾವ/ಸ್ಥಿತಿಯು ಚರ್ಚ್ ಆಫ್ ಇಂಗ್ಲೆಂಡ್ನ ಧರ್ಮ ಲೇಖನಗಳಲ್ಲಿ
ಎರಡನೆ ಕಾಲಂ ನಲ್ಲಿ ಕಾಣುತ್ತೇವೆ.
ತಂದೆಯ ವಾಕ್ಯ ವಾಗಿರುವ ಮಗನು ತಂದೆಯ ನಿತ್ಯ ತೆಯಿಂದ ಪಡೆದ ಮಗನು
ನಿತ್ಯ ದೇವರಾಗಿರುವಾತನು ತಂದೆಯೊಂದಿಗೆ ಒಂದೇ ಸಾರವನ್ನು ಹೊಂದಿದಾತನು,
ಕನ್ಯಾಮರಿಯಳ ಗರ್ಭದಲ್ಲಿ ಆಕೆಯ ಸಾರವಾದ ಮಾನವ ಸ್ವ ಭಾವಗಳನ್ನು
ತೆಗದುಕೊಂಡಾತನು. ಇದರಿಂದ ದೈವತ್ವ ಮತ್ತು ಮಾನವತ್ವ ಗಳೆಂಬ ಎರಡು ಪರಿಪೂರ್ಣ
ಸ್ವ ಭಾವಗಳು ಏಕ ವ್ಯ ಕ್ತಿಯಲ್ಲಿ ಕೂಡಿಕೊಂಡಿದ್ದ ವು. ಮತ್ತು ಎಂದೆಂದಿಗೂ ವಿಭಾಗಿಸಲು
ಸಾಧ್ಯ ವಿಲ್ಲ ದ ಸ್ವ ಭಾವಗಳು ಇದರಿಂದ ಒಬ್ಬ ನೇ ಕ್ರಿಸ್ತನು ಸಂಪೂರ್ಣ ದೇವರು ಹಾಗೂ
ಸಂಪೂರ್ಣ ಮನುಷ್ಯ ನೂ ಆಗಿದ್ದಾನೆ.
ಕ್ರಿಸ್ತನ ದೈವತ್ವ ವು ಹೆಚ್ಚಾಗಿ ಆಕ್ರಮಣಕ್ಕೀಡಾಗಿರುವದರಿಂದ ಆತನ ದೈವೀಕ
ಗುಣಲಕ್ಷಣಗಳನ್ನು ಸಂಪೂರ್ಣವಾಗಿ ಪರೀಕ್ಷಿಸುವದರ ಮೂಲಕ ಈ ಸಿದ್ಧಾಂತದ ಸತ್ಯ ಕ್ಕೆ ಕೆಳಗೆರೆ
ಹಾಕೋಣ.
ಆತನ ನಿತ್ಯ ತ್ವ . ಯೋಹಾ. 1:1 ವಾಕ್ಯ ವು ಕೆಲವು ವಚನಗಳ ನಂತರ ಆ ವಾಕ್ಯ ವನ್ನು
ಕ್ರಿಸ್ತನೆಂದು ಗುರುತಿಸುತ್ತದೆ. ಅದು ಆದಿಯಿಂದಲೂ ಅಸ್ತಿತ್ವ ದಲ್ಲಿತ್ತು . ಆತನು ಆರಂಭದಲ್ಲಿ
52
ಅಸ್ತಿತ್ವ ಕ್ಕೆ ಬರಲಿಲ್ಲ . ಆದಾಗ್ಯೂ . “ಆದಿಯಲ್ಲಿ” ಎನ್ನು ವದನ್ನು ತುಂಬಾ ಹಿಂದಕ್ಕೆ ಹಾಕಬಹುದು.
ಆ ಸಮಯದಿಂದಲೂ ವಾಕ್ಯ ವು ಇತ್ತು .. ಯೋಹಾ. 1:14 ರಲ್ಲಿ ಆ ವಾಕ್ಯ ವು ಕ್ರಿಸ್ತನೇ ಎಂದು
ನಾವು ನೋಡುತ್ತೇವೆ. ಇಡೀ ಜಗತ್ತು ಸೃಷ್ಟಿಸಲ್ಪ ಡುವದಕ್ಕೆ ಮುಂಚೆಯೇ ಆತನು ತಂದೆಯ
ಮಹಿಮೆಯಲ್ಲಿ ಪಾಲುಗಾರನಾಗಿದ್ದ ನು (ಯೋಹಾ. 17:5). ಫಿಲಿ:2:6, ಕೊಲೊ. 1:17, 2:9,
ಮತ್ತು ಇಬ್ರಿ. 1:8 ನ್ನು ಹೋಲಿಸಿರಿ.
53
ದಾಖಲಾಗಿವೆ. ಕ್ರಿಸ್ತನು ಮುಂದೆ ತನಗೆ ಸಂಭವಿಸಲಿರುವ ಹಿಂಸೆ /ಸಂಕಟದ ವಿವರಗಳನ್ನು
ತಿಳಿದಿದ್ದ ನು (ಹಾಗೂ ಮೌಖಿಕವಾಗಿ ಕೂಡ ಹೇಳಿದ್ದಾನೆ.) ಭವಿಷ್ಯ ತ್ತಿನ ತಕ್ಷಣದ (ಯೋಹಾ.
6:64,; 13:38) ಹಾಗೂ ಭವಿಷ್ಯ ತ್ತಿನ ದೂರದ (ಮತ್ತಾ. 24, ಮತ್ತು 25 ಅಧ್ಯಾಯಗಳು) .
ಸರ್ವ ವ್ಯಾಪಕತ್ವ .ಯೇಸು ಕ್ರಿಸ್ತನು ಪುನರುತ್ಥಾನದ ಮಾನವ. ದೇಹದಲ್ಲಿ ಈಗ
ದೇವರ ಬಲಗಡೆಯಲ್ಲಿದ್ದ ರೂ (ಎಫೆ. 1:20) ಆತನ ಆಜ್ಞಾನುಸಾರವಾಗಿ ಲೋಕದಲ್ಲೆಲ್ಲಾ
ಹೋಗುತ್ತಿರುವ ತನ್ನ ವಿಧೇಯ ಹಿಂಬಾಲಕರೊಂದಿಗೂ ಇದ್ದಾನೆ(ಮತ್ತಾ. 28:19-20).
ಆತನ ಮಾರ್ಪಾಡಾಗದಿರುವಿಕೆ (ಇಬ್ರಿ. 1:12) ತಂದೆಯಾದ ದೇವರು ನಿತ್ಯ ತೆಯಲ್ಲಿ
ಸ್ವ ಯಂ ಸ್ಥಿರ ಆಗಿರುವಂತೆ ಮಗನಾದ ದೇವರು “ಯೇಸು ಕ್ರಿಸ್ತನು ನಿನ್ನೆ ಇದ್ದ ಹಾಗೆ ಈ
ಹೊತ್ತು , ನಿರಂತರವೂ ಹಾಗೆಯೇ ಇರುವನು” (ಇಬ್ರಿ. 13:8). ಎಲ್ಲಾ ಯುಗಗಳ
ಅತೀಶ್ರೇಷ್ಟ ವಾದ ಘಟನೆಯೆಂದರೆ ದೇವಕುಮಾರನು ಮನುಷ್ಯ ನಾದದ್ದು , ದೇವ ಮಾನವ.
ಆದರೂ ಆತನು ದೇವರಾಗಿರುವದನ್ನು ನಿಲಿಸಲಿಲ್ಲ , ತಡೆಯಲಾಗಲಿಲ್ಲ ಅಥವಾ ಆತನ
ಅದ್ಭು ತ ಗುಣಲಕ್ಷಣವನ್ನು ಬದಲಾವಣೆ ಮಾಡಿಕೊಳ್ಳ ಲಿಲ್ಲ .
ಆತನ ನೀತಿವಂತಿಕೆ (2 ತಿಮೋ. 4:8). ದೇವರ ಈ ಅಗತ್ಯ ಗುಣಲಕ್ಷಣವು
ಮಗನಲ್ಲಿಯೂ ಸಮಾನವಾಗಿ ಕಂಡುಬರುತ್ತದೆ. ಆತನು ನೀತಿಯನ್ನು ಮೆಚ್ಚು ತ್ತಾನೆ. ಹಾಗೂ
ಅದರ್ಮವನ್ನು ಹಗೆ ಮಾಡುತ್ತಾನೆ (ಇಬ್ರ. 1:9). ಈ ಭೂಮಿಯ ಮೇಲಿನ ತನ್ನ ಜೀವಿತದಲ್ಲಿ
ಕ್ರಿಸ್ತನು ಪಾಪಿಗಳನ್ನು ಪ್ರೀತಿಸಿದನು ಆದರೆ ದೇವರಿಗೆ ವಿರುದ್ಧ ವಾದ ಅವರ ಪಾಪಗಳನ್ನು ಹಗೆ
ಮಾಡಿದನು. ಎಲ್ಲಾ ನ್ಯಾಯತೀರ್ಪು ಮಾಡುವ ಅಧಿಕಾರವು ಮಗನ ಕೈಯಲ್ಲಿ
ಕೊಡಲ್ಪ ಟ್ಟಿದೆಯೋ ಹಾಗೆಯೇ ನೀತಿಯಿಂದಲೇ ನ್ಯಾಯತೀರ್ಪು ಮಾಡುವನು
(ಯೋಹಾ. 5:22).
ಆತನ ಪರಿಶುದ್ಧ ತೆ (ಲೂಕ. 1:35). ಮರಿಯಳಲ್ಲಿ ಹುಟ್ಟ ಲಿರುವ ಮಗುವನ್ನು
ಕುರಿತು ದೇವದೂತನಾದ ಗಬ್ರಿಯೇಲನು ನೀಡಿದ ಒಂದು ರೀತಿಯ ವಿವರಣೆಯೆಂದರೆ
“ಪರಿಶುದ್ಧ ನು ........ ದೇವಕುಮಾರನು” ಎಂಬುದು. ಈಗ ನಾವು ಪರಲೋಕದಲ್ಲಿ ಪರಿಶುದ್ದ
ಮಹಾಯಾಜಕನನ್ನು ಹೊಂದಿದ್ದೇವೆ (ಇಬ್ರಿ. 7:26). ಯೇಸುವಿನ ಸ್ನೇಹಿತನೂ ಆಗಿರುವ
ಅಪೋಸ್ತಲನಾದ ಪೇತ್ರನು ಕ್ರಿಸ್ತನನ್ನು ಪರಿಶುದ್ಧ ನು ಎಂದು ಗುರುತಿಸಿದನು (ಅ.ಕೃ. 3:14).
ಹೇಗೆಂದರೆ ದೆವ್ವ ಪೀಡಿತ ಮನುಷ್ಯ ನಲ್ಲಿದ್ದ ದೆವ್ವ ವು ಆತನನ್ನು ಗುರುತಿಸಿದಂತೆಯೇ (ಮಾರ್ಕ.
1:24).
54
ಆತನ ಪ್ರೀತಿ (ಯೋಹಾ. 13:1). ಕ್ರಿಸ್ತನು ಈ ಭೂಮಿಯ ಮೇಲಿದ್ದಾಗ
ಅಗತ್ಯ ತೆಯಲ್ಲಿರುವ ಜನರನ್ನು ಕಂಡಾಗ ಕನಿಕರದಿಂದ ಮನಮರುಗಿದನು (ಉದಾ: ಮತ್ತಾ.
9:36). ಅಪೋಸ್ತಲನಾದ ಪೌಲನು ಕ್ರಿಸ್ತನನ್ನು ಕುರಿತು” ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನ ನ್ನೇ
ಒಪ್ಪಿಸಿಕೊಟ್ಟ ನು. ಎಂದು ವರ್ಣೀಸಿದನು (ಎಫೆ. 2:20). ಪೌಲನಿಗೆ ಕ್ರಿಸ್ತನು ತೋರಿದ
ಪ್ರೀತಿಯೇ ಪೌಲನು ಕ್ರಿಸ್ತನಿಗಾಗಿ ಜೀವಿಸುವಂತೆ ಪ್ರೇರೆಪಿಸಿತು.
ಈ ಎಲ್ಲಾ ವಾಕ್ಯ ಗಳಿಂದ ನಾವು ನೋಡುವದೇನೆಂದರೆ ದೇವರು ಏನೆಲ್ಲಾ
ಆಗಿದ್ದಾನೋ ಅದೆಲ್ಲಾ ಕ್ರಿಸ್ತನೇ ಆಗಿದ್ದಾನೆ. ಕ್ರಿಸ್ತನು ದೈವೀಕನು ಎಂದು ಹೇಳಿದರೆ ಮಾತ್ರ
ಸಾಲದು. ಇದರಿಂದ ಅರ್ಥಮಾಡಿಕೊಳ್ಳು ವದೇನೆಂದರೆ ಕ್ರಿಸ್ತನು ದೇವರ ಹಾಗೆ ಇದ್ದಾನೆ
ಎಂದು. ಕ್ರಿಸ್ತನು ದೇವಕುಮಾರನಾಗಿರುವಂತೆ ಎಲ್ಲಾ ವಿಶ್ವಾಸಿಗಳು ದೇವಕುಮಾರರು ಎಂದು
ಹೇಳಿದಂತಾಗುತ್ತದೆ ಅಷ್ಟೆ. ಈ ಪಾಠದಲ್ಲಿರುವ ಎಲ್ಲಾ ವಾಕ್ಯ ಭಾಗಗಳನ್ನು ಎದುರಿಸಲು
ಮನಸುಳ್ಳ ಪ್ರತಿಯೊಬ್ಬ ರೂ ಮನವರಿಕೆ ಮಾಡಿಕೊಳ್ಳ ಬೇಕಾದದ್ದೇನೆಂದರೆ ಯೇಸು ಕ್ರಿಸ್ತನು
ದೇವಕುಮಾರನು ಮಾತ್ರವೇ ಅಲ್ಲ ಆತನು ಮಗನಾದ ದೇವರೇ ಆಗಿದ್ದಾನೆ.
ಹಳೇ ಒಡಂಬಡಿಕೆಯ ಮತ್ತು ಹೊಸ ಒಡಂಬಡಿಕೆಯ ದಾಖಲೆಗಳನ್ನು ಹೋಲಿಕೆ
ಮಾಡುವಾಗ ಯೆಶಾ. 40:3 ನ್ನು ನಾವು ಗಮನಿಸುವಾಗ ಅದು ಯೆಹೋವನ ಆಗಮನಕ್ಕೆ
ಮುಂಚೆ ಮುಂದೂತನು ಬರುತ್ತಾನೆ. ಎಂದು ಪ್ರವಾದಿಸುತ್ತದೆ. ಇದನ್ನೇ ಮತ್ತಾ. 3:1-3 ರಲ್ಲಿ
ಅದು ಕರ್ತನಾದ ಕ್ರಿಸ್ತನೇ ಎಂದು ಗುರುತಿಸುತ್ತದೆ. ಇಸ್ರಾಯೇಲ್ಯ ರು ಅರಣ್ಯ ಪ್ರಯಾಣದಲ್ಲಿ
ತಮ್ಮ ಕರ್ತನನ್ನು ಪರೀಕ್ಷಿಸುತ್ತಾರೆ (ಅರಣ್ಯ . 21:6-7). ಇದನ್ನೇ 1 ಕೊರಿ. 10:9 ರಲ್ಲಿ ಕ್ರಿಸ್ತನು
ಎಂದು ಹೇಳಿದೆ. ಹೀಗಾಗಿ ದೇವಕುಮಾರನು ತಂದೆಯೊಂದಿಗೆ ಸರಿಸಮಾನನು, ನಿತ್ಯ ತ್ವ ದಲ್ಲೂ
ಸರಿಸಮಾನನು ಆಗಿದ್ದು ದೇವರೇ ಆಗಿದ್ದಾನೆಂದು ನಾವು ಕಾಣುವವರಾಗಿದ್ದ ವೆ (ನೈಸೀಯ
ವಿಶ್ವಾಸ ಸೂತ್ರದಿಂದ).
ಕ್ರಿಸ್ತನ ಮಾನವೀಯತೆ
ಕರ್ತನಾಗಿರುವ ಯೇಸು ಪಾಪಸ್ವ ಭಾವ ಒಂದನ್ನು ಬಿಟ್ಟು ಉಳಿದಂತೆ ಮನುಷ್ಯ ನ
ಎಲ್ಲಾ ಸ್ವ ಭಾವಗಳನ್ನೂ ಹೊಂದಿದ್ದ ನು.
ಆತನ ಜನನವು (ಆತನ ಅದ್ಭು ತ ಗರ್ಭಧಾರಣೆಯನ್ನು ಹೊರತು ಪಡಿಸಿ)
ಸಾಮಾನ್ಯ ವಾದುದ್ದಾಗಿತ್ತು . ದೇವರ ವಾಕ್ಯ ಭಾಗಗಳು ಗಂಬೀರವಾಗಿ ಹೇಳಿಕೆ
ಕೊಡುವದೇನೆಂದರೆ ಯೇಸುವಿನ ಗರ್ಭಧಾರಣೆಯು ಪರಿಶುದ್ಧಾತ್ಮ ನಿಂದ ಉಂಟಾದದ್ದು
55
(ಮತ್ತಾ. 1:20). ಹಾಗೂ ಆಕೆಯ ತಾಯಿಯು ಕನ್ಯೆಯಾಗಿದ್ದ ಳು (1:23). ಲೂಕ. 1:31, 35,
2:5-7, 16, 21 ಮತ್ತು 28 ನೇ ವಾಕ್ಯ ವನ್ನು ಎಚ್ಚ ರಿಕೆಯಿಂದ ಪರಿಗಣಿಸಿರಿ. ಆತನ ಯೌವನವು
ಸಾಮಾನ್ಯ ವಾದುದಾಗಿತ್ತು . ಆತನು ಪ್ರಶ್ನೆಗಳನ್ನೂ ಕೇಳಿದನು. ತಂದೆ ತಾಯಿಗಳಿಗೆ
ವಿಧೇಯನಾಗಿದ್ದ ನು ಮತ್ತು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ವೃದ್ಧಿಯಾಗುತ್ತಾ
ಬಂದನು; ಇದಲ್ಲ ದೆ ದೇವರ ಮತ್ತು ಮನುಷ್ಯ ರ ದಯೆಯು ಆತನ ಮೇಲೆ ಹೆಚ್ಚಾಗುತ್ತಾ
ಬಂತು (ಲೂ.ಕ 2:40-52). ಆತನು ಮಾನವೀಯ ಮಿತಿಗಳಿಗೆ ಸ್ವ ಯಂ ಪ್ರೇರಣೆಯಿಂದ
ಒಳಪಟ್ಟಿದ್ದ ನು; ಆತನು ಹಸಿವನ್ನು ಅನುಭವಿಸಿದನು (ಮತ್ತಾ. 4:2), ಆಯಾಸಗೊಂಡನು
(ಯೋಹಾ. 4:6), ಬಾಯಾರಿದ್ದ ನು (ಯೋಹಾ. 19:28). ಆತನ ಮಾನವೀಯ
ಅಗತ್ಯ ತೆಗಳನ್ನು ಹೊಂದಿಕೊಳ್ಳ ಲು ದೇವಕುಮಾರನೆಂಬ ಆತನ ಶಕ್ತಿಯನ್ನು ಎಂದಿಗೂ
ಉಪಯೋಗಿಸಿಕೊಳ್ಳ ಲಿಲ್ಲ . ಆತನ ಭಾವನೆಗಳು ಪ್ರೀತಿ (ಮಾರ್ಕ. 10:21), ಕೋಪ (ಮಾರ್ಕ.
3:5), ಹಾಗೂ ದುಃಖ (ಲೂಕ. 13:43)ಗಳಂತೆ ಮಾನವೀಯ ಭಾವನೆಗಳು ಹೀಗಿದ್ದ ರೂ
ಯೇಸು ಎಂದಿಗೂ ಯಾವುದೇ ಭಯವನ್ನು ತೋರಿಸಲಿಲ್ಲ . ಆತನು ಭಾರಿ
ಅಪಾಯದಲ್ಲಿದ್ದ ರೂ ದೇವರಲ್ಲಿ ಭರವಿಸವಿಟ್ಟಿದ್ದ ನೇ ವಿನಃ ಭಯಪಡಲಿಲ್ಲ (ಲೂಕ. 4:29-30;
ಯೊಹಾ. 10:31-32).
ಆತನ ಮರಣವು ಮನುಷ್ಯ ನ ಮರಣದಂತೆಯೇ ಇತ್ತು . ಆದರೆ
ವ್ಯ ತ್ಯಾಸವುಳ್ಳ ದ್ದಾಗಿತ್ತು . ಆತನು ನಿತ್ರಾಣದಿಂದ ಮರಣ ಹೊಂದಲಿಲ್ಲ . ಆತನು ಗಟ್ಟಿಯಾದ
ಸ್ವ ರದಿಂದ ಕೂಗಿದನು, ಮತ್ತು ಸ್ವ ಯಂ ಪ್ರೇರಣೆಯಿಂದ ತನ್ನ ಆತ್ಮ ವನ್ನು ಒಪ್ಪಿಸಿಕೊಟ್ಟ ನು.
ಯೋಹಾ. 10:17-18 ರಲ್ಲಿ ಆತನು ಹೇಳಿದ್ದು , “ನಾನು ತಿರುಗಿ ಪಡಕೊಳ್ಳು ತ್ತೇನೆಂದು ನನ್ನ
ಪ್ರಾಣವನ್ನು ಕೊಡುತ್ತೇನೆ; ನನ್ನ ಪ್ರಾಣವನ್ನು ಯಾರೂ ತೆಗೆಯರು, ನನ್ನ ಷ್ಟ ಕ್ಕೆ ನಾನೇ
ಕೊಡುತ್ತೇನೆ. ಅದನ್ನು ತಿರುಗಿ ಪಡಕೊಳ್ಳು ವದಕ್ಕೆ ನನಗೆ ಅಧಿಕಾರ ಉಂಟು” ಮಾನವನ
ಮರಣ ಎಂದರೆ ಶರೀರ ಮತ್ತು ಆತ್ಮ ಗಳ ಅಗಲುವಿಕೆ ಅಥವಾ ಬೇರ್ಪಡುವಿಕೆ. ಹೀಗೆ ಯೇಸು
ಕೂಡ ಮರಣ ಹೊಂದಿದನು. ಆತನ ಸ್ವ ಭಾವವು ಮನುಷ್ಯ ನ ಮೂರು ಪದರ
ಸ್ವ ಭಾವದಂತೆಯೇ, ಆತನ ಪ್ರಾಣ (ಮತ್ತಾ. 26:38), ಆತನ ಆತ್ಮ (ಲೂಕ. 23:46) ಮತ್ತು
ಆತನ ದೇಹ (ಯೋಹಾ. 19:40).
ಆತನು ಸಂಪೂರ್ಣ ಮನುಷ್ಯ ನಾಗಿದ್ದ ನು. ಯೇಸು ಕ್ರಿಸ್ತನು ಪಾಪವೊಂದನ್ನು
ಹೊರತುಪಡಿಸಿ ಉಳಿದೆಲ್ಲಾ ಪ್ರಮುಖ ಅಂಶಗಳಲ್ಲಿ ಮನುಷ್ಯ ನಂತೆಯೇ ಇದ್ದ ನು. ಇದು
ಬಹಳ ಮಹತ್ವ ದ ವ್ಯ ತ್ಯಾಸವಾಗಿದೆ. ಪಾಪವು ಬಂಡಾಯವಾಗಿದೆ. ಅಂದರೆ ದೇವರ ಚಿತ್ತಕ್ಕೆ
56
ವಿರುದ್ಧ ವಾಗಿ ನಮ್ಮ ಚಿತ್ತವನ್ನು ಮಾಡುವದೇ ಆಗಿದೆ (ರೋಮಾ. 1:28-32; 3:23; 5:12).
ದೇವರು ತನ್ನ ಸ್ವ ಭಾವಕ್ಕೆ ಅಸಂಬದ್ಧ ವಾಗಿ ಕಾರ್ಯ ಮಾಡುವದಿಲ್ಲ ಹಾಗೆಯೇ ಕ್ರಿಸ್ತನೂ ಸಹ
ದೇವಕುಮಾರನು ದೇವರ ಚಿತ್ತಕ್ಕೆ ತದ್ವಿರುದ್ಧ ವಾಗಿ ಕಾರ್ಯ ಮಾಡುವದಿಲ್ಲ . ಕೇವಲ ಕ್ರಿಸ್ತನು
ಮಾತ್ರವೇ ಸತ್ಯ ವಾಗಿ ಹೇಳಬಹುದೇನೆಂದರೆ “...... ತಂದೆಯು ನನಗೆ ಬೋಧಿಸಿದ ಹಾಗೆ
ಅದನ್ನೆಲ್ಲಾ ಮಾತಾಡಿದೆ...... ನಾನು ಆತನಿಗೆ ಮೆಚ್ಚಿಕೆಯಾದದ್ದ ನ್ನು ..... ಯಾವಾಗಲೂ
ಮಾಡುವದರಿಂದ” (ಯೋಹಾ. 8:28; 29) ಎಂದು. ಆತನ ವೈರಿಗಳು ಕೂಡ ಆತನ
ಮುಗ್ಧ ತೆಯನ್ನು ಒಪ್ಪಿಕೊಳ್ಳ ಬೇಕಾಗಿತ್ತು ; “ನನ್ನ ಲ್ಲಿ ಪಾಪವನ್ನು ತೋರಿಸಿಕೊಡುವವರು
ಯಾರಿದ್ದಾರೆ?” (ಯೋಹಾ. 8:46). ಪಿಲಾತನು ಹೀಗೆಂದನು “ನಾನು ಇವನಲ್ಲಿ ಯಾವ
ದೋಷವನ್ನು ಕಾಣಲಿಲ್ಲ ” (ಯೋಹಾ. 19:4,;6). ತಂದೆಯಾದ ದೇವರು ಕ್ರಿಸ್ತನ ಕುರಿತು ತನ್ನ
ಅನುಮೋದನೆಯನ್ನು ತೋರಿಸಿದನು. “ಈತನು ಪ್ರಿಯನಾಗಿರುವ ನನ್ನ ಮಗನು;
ಈತನನ್ನು ಮೆಚ್ಚಿದ್ದೇನೆ” ಅಂದನು (ಮತ್ತಾ. 3:17 ;17:5). ಅಂತಿಮವಾಗಿ ದೇವರು ಈತನನ್ನು
ಸತ್ತವರೊಳಗಿಂದ ಎಬ್ಬಿಸಿದನು (ರೋಮಾ. 1:4). ಮೇಲಿನ ಎಲ್ಲಾ ಸಂಗತಿಗಳು ದೇವರು ತನ್ನ
ಮಗನನ್ನು ಸಂಪೂರ್ಣ ಮನುಷ್ಯ ನೆಂದು ಮೌಲ್ಯ ಮಾಪನ ಮಾಡಿದ್ದ ನ್ನು ನಿರೂಪಿಸುತ್ತದೆ.
ಆತನು ಯಾವ ಪಾಪವನ್ನು ಮಾಡಲಿಲ್ಲ (1 ಪೇತ್ರ. 2:22). ಆತನಿಗೆ ಪಾಪದ ಅರಿವಿರಲಿಲ್ಲ
(2 ಕೊರಿ. 5:21). ಆತನಲ್ಲಿ ಪಾಪವಿರಲಿಲ್ಲ (1 ಯೋಹಾ. 3:5).
ಕ್ರಿಸ್ತನು ಸಂಪೂರ್ಣ ಮನುಷ್ಯ ನೆಂಬುದನ್ನು ನಾವು ನೋಡಿದ್ದೇವೆ. ಈ ಸತ್ಯ ವನ್ನು ಒತ್ತಿ
ಹೇಳಲಾಗಿದೆ. ಯಾಕೆಂದರೆ ಮನುಷ್ಯ ನು ಮಾತ್ರವೇ ದೇವರನ್ನು ಸಂಪೂರ್ಣವಾಗಿ
ಮನುಷ್ಯ ರಿಗೆ ಪ್ರಕಟಿಸಲು ಸಾಧ್ಯ . ಮನುಷ್ಯ ನು ಮಾತ್ರ ಸಾಯಲು ಸಾಧ್ಯ . ನಮಗೋಸ್ಕ ರ
ದೇವರೊಂದಿಗೆ ಮಧ್ಯ ಸ್ಥಿಕೆ ವಹಿಸಲು ದೇವ ಮಾನವನು ನಮಗೆ ಅವಶ್ಯ ವಾಗಿದ್ದ ನು
(1 ತಿಮೋ. 2:5). ಕೇವಲ ಪಾಪ ರಹಿತ ಮನುಷ್ಯ ನು ಮಾತ್ರ ಇತರರಿಗಾಗಿ ಪ್ರಾಣ ಕೊಡಲು
ಸಾಧ್ಯ . ಯೇಸುವಿನಲ್ಲಿ ಒಂದೇ ಒಂದು ಪಾಪವಿದ್ದಿದ್ದ ರೂ ಆತನು ತನ್ನ ಪಾಪಕ್ಕಾಗಿ ತಾನೇ
ಸಾಯಬೇಕಾಗಿತ್ತು . ಆದರೆ ದೇವರಿಗೆ ಸ್ತೋತ್ರವಾಗಲಿ. ದೇವರ ಕುರಿಮರಿಯು
ಸಂಪೂರ್ಣವಾದದ್ದು . ದೇವ ಕುಮಾರನು ಸಂಪೂರ್ಣ ಮನುಷ್ಯ ನು, ಪಾಪರಹಿತ
ಮನುಷ್ಯ ನು. ಕ್ರಿಸ್ತನು ಪಾಪ ಮಾಡಲಿಲ್ಲ ಎಂಬುದು ಮಾತ್ರವೇ ಅಲ್ಲ . ಮಾನವ
ಶರೀರಧಾರಿಯಾದ ದೇವರಾಗಿ ಆತನು ಪಾಪ ಮಾಡಲು ಸಾಧ್ಯ ವಿಲ್ಲ . ಆತನು
ಪಾಪರಹಿತನಾಗಿದ್ದ ನು.(ನಿಷ್ಕ ಳಂಕನಾಗಿದ್ದ ನು.)
57
ಅಧ್ಯಾಯ
6
ಕ್ರಿಸ್ತ ಶಾಸ್ತ್ರ:
ಕ್ರಿಸ್ತನ (ಕುರಿತಾದ) ಅಧ್ಯ ಯನ
-ಭಾಗ 2-
ಕ್ರಿಸ್ತನ ನರಾವತಾರ
ಕ್ರಿಸ್ತನು ದೈವೀಕ ಹಾಗೂ ಮಾನವೀಯ ಎಂಬ ಎರಡು ರೀತಿಯ ಸ್ವ ಭಾವಗಳನ್ನು
ಹೊಂದಿದ್ದಾನೆಂದು ನಾವು ನೋಡಿದ್ದೇವೆ. ದೈವೀಕ ಸ್ವ ಭಾವವು ಆತನಲ್ಲಿ ನಿತ್ಯ ತ್ವ ದಿಂದಲೇ
58
ಇರುವಂಥದ್ದು . ಆದರೆ ಮಾನವ ಸ್ವ ಭಾವವು ಸ್ತ್ರೀಯಲ್ಲಿ ಹುಟ್ಟಿರುವುದರ ಮೂಲಕ
ಪಡೆದುಕೊಂಡಿದ್ದಾಗಿದೆ. ಹೀಗೆ ರಕ್ತ ಮತ್ತು ಮಾಂಸಧಾರಿಯಾದ ಈ ಪ್ರಕ್ರಿಯೆಯನ್ನು
ನರಾವತಾರ ಎಂದು ಕರೆಯುತ್ತಾರೆ. ಇದರ ಸರಳ ಅರ್ಥ “ಶರೀರದಲ್ಲಿ ವಿಮೋಚನೆ”
ಎಂಬುದು. ಪಾಪಿಯಾದ ಮನುಷ್ಯ ರನ್ನು ರಕ್ಷಿಸುವದಕ್ಕಾಗಿ ಅವರ ಬದಲಿಯಾಗಲು ನಿತ್ಯ ತ್ವ ದ
ದೇವ ಕುಮಾರನು ನಮ್ರತೆಯಿಂದ ತಗ್ಗಿಸಿಕೊಂಡು ಮನುಷ್ಯ ನಾದನು. ಅಪೋಸ್ತಲನಾದ
ಯೋಹಾನನು ನಂಬಿಕೆಯ ಈ ಸಿದ್ಧಾಂತದ ಭವ್ಯ ತೆಯನ್ನು ತನ್ನ ಸುವಾರ್ತೆಯ ಪೀಠಿಕೆಯಲ್ಲಿ
ಸುಂದರವಾಗಿ ವ್ಯ ಕ್ತಪಡಿಸಿದ್ದಾನೆ. “ಅ ವಾಕ್ಯ ವೆಂಬುವನು ನರಾವತಾರ ಎತ್ತಿ ನಮ್ಮ ಮಧ್ಯ ದಲ್ಲಿ
ವಾಸ ಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು; ಆ ಮಹಿಮೆಯು
ತಂದೆಯ ಬಳಿಯಿಂದ ಬಂದ ಒಬ್ಬ ನೇ ಮಗನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ
ಸತ್ಯ ದಿಂದಲೂ ತುಂಬಿದವನಾಗಿದ್ದ ನು” (ಯೋಹಾನ 1:14)
59
ವಚನಗಳಿಂದಲೂ ನಾವು ಕಲಿಯುವದೇನೆಂದರೆ ಮುಂದೆ ಬರಲಿರುವ ವಿಮೋಚಕನು
ದೇವದೂತನಂತಿರದೆ ಅಥವಾ ಬೇರಾವುದೋ ಅನ್ಯ ಜೀವಿಯಂತಿರದೆ ಅವನು
ಮನುಷ್ಯ ನಾಗಿರುವನು.
60
ಹೊಂದತಕ್ಕ ದೇವರೂ ಆಗಿದ್ದಾನೆ ಆಮೇನ್ (ರೋಮ 9:5) “ಎರಡನೆಯ ಮನುಷ್ಯ ನು
ಪರಲೋಕದಿಂದ ಬಂದವನು” (1 ಕೊರಿ: 15:47). “ದೇವರು ಶರೀರಧಾರಿಯಾಗಿ
ಪ್ರತ್ಯ ಕ್ಷನಾದನು” (1 ತಿಮೋ: 3:16) ಅದೇ ರೀತಿಯಾಗಿ ನಾವು ಈ ಮುಂದಿನ
ವಾಕ್ಯ ಭಾಗಗಳನ್ನು ಓದಿ ಪರಿಗಣಿಸಬೇಕು. ಗಲಾ: 4:4; ಫಿಲಿ: 2:6-8 ಮತ್ತು ಇಬ್ರಿ: 2:14.
ನಮ್ಮೆಲ್ಲ ರ ಪಾಪಗಳಿಗಾಗಿ ಪ್ರಾಯಶ್ಚಿತ್ತ ಬಲಿಯಾಗಿ ಮರಣ ಹೊಂದುವ ನಿಮಿತ್ತವಾಗಿ
ದೇವರು ಶಾರೀರಿಕ ದೇಹವನ್ನು ಹೊಂದಲೇಬೇಕಾಗಿತ್ತು .
ಕ್ರಿಸ್ತನ ಜೀವನ
61
ಬದುಕಿರುವ ಅತೀಶ್ರೇಷ್ಟ ಜೀವನ ಎನ್ನು ವದರ ಮುಖ್ಯಾಂಶಗಳ ಸಂಕ್ಷಿಪ್ತ
ಲೆಕ್ಕಾಚಾರವನ್ನು ಇಲ್ಲಿ ಸೇರಿಸಬಹುದು. ವಾಸ್ತಕವಿಕವಾಗಿ ನೋಡಿದರೆ
ಸುವಾರ್ತಾಪುಸ್ತಕಗಳನ್ನು ಸಹ ನಜರೇತಿನ ಯೇಸುವಿನ ಸಂಪೂರ್ಣ ಜೀವನ ಚರಿತೆಯನ್ನು
ಕೊಡುವದರ ಬದಲು ಕೇವಲ ಆಯ್ದ ಸಂಭಾಷಣೆಗಳನ್ನು ಮತ್ತು ಘಟನೆಗಳನ್ನು ಮಾತ್ರ
ಕೊಡುತ್ತವೆ. (ಯೋಹಾನನು ಬರೆದ ಸುವಾರ್ತೆಯ ಕೊನೆಯ ವಚನವನ್ನು ನೋಡಿರಿ).
ಆತನ ಜನನ ಮತ್ತು ಬಾಲ್ಯ ವಿದೆ. (ಮತ್ತಾ. 1:18-25; ಲೂಕ. 2:1-10; 4:1-42).
ಕನ್ಯೆಯಲ್ಲಿ ಜನಿಸುವ ಅದ್ಭು ತದ ಮೂಲಕ ದೇವರು ಮನುಷ್ಯ ನಾಗಬೇಕಾದದ್ದು ಎಂತಹ
ದೈವೀಕವಾಗಿ ಸೂಕ್ತ ಕಾರ್ಯವಾಗಿತ್ತು ! ಕನ್ಯೆಯಾದ ಮರಿಯಳ ಗರ್ಭದಲ್ಲಿ ಪವಿತ್ರಾತ್ಮ ನ
ಕಾರ್ಯದಿಂದ ಯೇಸು ಗರ್ಭಧಾರಣೆಯಾಗಿ ಸಂಪೂರ್ಣ ಮನುಷ್ಯ ನಾಗಿ ಈ ಲೋಕಕ್ಕೆ
ತರಲ್ಪ ಟ್ಟ ನು, ಅದೂ ಸಹ ಎಲ್ಲಾ ಮಾನವ ಜನಾಂಗದ ಸಾಮಾನ್ಯ ಮೂಲ ಪಾಪ ಸ್ವ ಭಾವವನ್ನು
ಪಡೆದುಕೊಳ್ಳ ದೆ ಪಾಪರಹಿತನಾಗಿ ಜನಿಸಿಬಂದನು. ಯೇಸು ಈ ಭೂಮಿಯ ಮೇಲೆ
ಮೂವತ್ತಮೂರು ವರ್ಷ ಜೀವಿಸಿದ್ದ ನು. ಶಿಶುವಾಗಿದ್ದ ಸಮಯದಿಂದ ಮೂವತ್ತು
ವರುಷಗಳ ಅಂತರದಲ್ಲಿ ಒಂದೇ ಒಂದು ಘಟನೆ ಮಾತ್ರ ದಾಖಲಾಗಿದೆ. ಅದೇನೆಂದರೆ
ವಿಧೇಯನಾದ ಹಾಗೂ ಪರಿಪೂರ್ಣ ಬಾಲಕನಾಗಿದ್ದ ಆತನು ಪರಲೋಕದ ಸಂಗತಿಗಳಲ್ಲಿ
ಬಹಳ ಆಸಕ್ತಿಯುಳ್ಳ ವನಾಗಿದ್ದ ನು (ಲೂಕ. 2:41-52). ದೇವರ ವಾಕ್ಯ ದ ಹೆಚ್ಚು ಪಾಲು
ದಾಖಲೆಗಳು ಯೇಸುಕ್ರಿಸ್ತನು ಬಹಿರಂಗ ಸೇವೆ ಮಾಡಿದ ಮೂರು ವರ್ಷಕ್ಕೆ ಹೆಚ್ಚಿನ
ಪ್ರಾಧಾನ್ಯ ತೆ ಕೊಟ್ಟಿದೆ. ಅದರಲ್ಲಿಯೂ ಶಿಲುಬೆಗೇರಿಸಲ್ಪ ಡುವ ಆ ವಾರದ ಘಟನೆಗಳಿಗೆ
ಸಂಬಂಧಿಸಿದ ಆತನ ವಿಷಯಗಳಿಗೆ ಸುವಾರ್ತೆಗಳಲ್ಲಿ ವಿವರಣೆಯನ್ನು ದೇವರ ವಾಕ್ಯ ದ ಇತರ
ಯಾವುದೇ ವಿಷಯಗಳಿಗೂ ಕೊಟ್ಟಿರುವದಿಲ್ಲ .
62
ದೀಕ್ಷಾಸ್ನಾನ ಮಾಡಿಸಿಕೊಂಡನು. ಯೇಸುವಿನಲ್ಲಿ ಯಾವುದೇ ಪಾಪವಿರಲಿಲ್ಲ . ಆದರೆ
ಯೇಸು ತನ್ನ ಜನರೊಂದಿಗೆ ಗುರುತಿಸಿಕೊಳ್ಳ ಲು ದೀಕ್ಷಾಸ್ನಾನಕ್ಕೆ ಒಪ್ಪಿಸಿಕೊಂಡನು (ಮತ್ತಾ.
3:15).ತನ್ನ ನ್ನು ಯಾರೊಬ್ಬ ರೂ ಯೇಸು ಪಾಪವನ್ನು ಅರಿಕೆ ಮಾಡುತ್ತಿದ್ದಾನೆಂದು
ಯೋಚಿಸಬಾರದೆಂದು ಒಮ್ಮೆ ದೇವರು ಆತನನ್ನು “ಪ್ರಿಯನಾಗಿರುವ ನನ್ನ ಮಗನು”
ಎಂದನು. ಇನ್ನೂ ಮುಂದುವರಿದು ಪವಿತ್ರಾತ್ಮ ನು ಆತನ ಮೇಲೆ ಬಂದನು. ಪವಿತ್ರಾತ್ಮ ನು
ಅಳತೆಯಿಲ್ಲ ದ ಮಟ್ಟಿದೆ ಕ್ರಿಸ್ತನಿಗೆ ಕೊಡಲ್ಪ ಟ್ಟ ನು (ಯೋಹಾ. 3:34). ಹಳೇ ಒಡಂಬಡಿಕೆಯಲ್ಲಿ
ಎಣ್ಣೆ ಎನ್ನ ವದು ಪವಿತ್ರಾತ್ಮ ನಿಗೆ ಮಾದರಿಯಾದ ಚಿತ್ರಣವಾಗಿದೆ. ಆತನ ದೀಕ್ಷಾಸ್ನಾನದಲ್ಲಿ
ಪವಿತ್ರಾತ್ಮ ನು ಈ ವಿಶೇಷವಾದ ವಿಧಾನದಲ್ಲಿ ಅವನ ಮೇಲೆ ಬಂದಾಗ ಯೇಸು ಕ್ರಿಸ್ತನಾಗಿ
ಅಭಿಷೇಕಿಸಲ್ಪ ಟ್ಟ ನು.
63
“ಕ್ರಿಸ್ತನು ಪಾಪ ಮಾಡಲು ಸಮರ್ಥನಾಗಿರಬೇಕಿತ್ತು , ಇಲ್ಲ ದಿದ್ದ ರೆ ಶೋಧನೆಯು
ಅರ್ಥಹೀನವಾಗುತ್ತಿತ್ತು ಎಂದು ಕೆಲವರು ವಾದಿಸುತ್ತಾರೆ. ಸೈತಾನನ ಶೋಧನೆಗೆ
ಪ್ರತಿಕ್ರಿಯಿಸಲು ಕ್ರಿಸ್ತನಲ್ಲಿ ಏನೂ ಇರಲಿಲ್ಲ . ಆದ್ದ ರಿಂದ ಆತನ ನಿಷ್ಪಾಪತನವನ್ನು
ಅಲ್ಲ ಗಳೆಯುವದು ತಪ್ಪು (ಅಂದರೆ ಆತನು ಪಾಪ ಮಾಡಬಹುದಾಗಿತ್ತು ಆದರೆ ಮಾಡಲಿಲ್ಲ
ಎಂದು ಹೇಳಿದಂತೆ). ಆತನು ತನ್ನ ಪಾಪರಹಿತತೆಯನ್ನು ತುಂಬಾ ಒತ್ತಡಗಳ ಅಡಿಯಲ್ಲಿ
ನಿರೂಪಿಸಿದನು. ಕೆಲವರು ಹೀಗೆನ್ನು ತ್ತಾರೆ. ಆತನು ದೇವಕುಮಾರನಾಗಿ ಪಾಪ ಮಾಡಲಿಲ್ಲ
ಮನುಷ್ಯ ನಾಗಿ ಮಾಡಬಹುದಿತ್ತು . ಆದರೆ ಇದು ಕ್ರಿಸ್ತನು 2 ಚಿತ್ರಣಗಳನ್ನು ಹೊಂದಿದಂತೆ
ಅರ್ಥಕೊಡುತ್ತದೆ. ಒಂದು ಮಾನುಷಿಕ, ಮತ್ತೊಂದು ದೈವೀಕ. ಇವೆರಡು ಒಂದಕ್ಕೊಂದು
ತದ್ವಿರುದ್ಧ ವಾಗಿ ಕಾರ್ಯ ಮಾಡುತ್ತದೆ. ಕ್ರಿಸ್ತನು ದ್ವಂದ್ವ ವ್ಯ ಕ್ತಿತ್ವ ವನ್ನು ಹೊಂದಿದ್ದ ನೆಂದು ಇದು
ತೋರಿಸುತ್ತದೆ. ದೇವರ ಮಗನು ಕೇವಲ ಮನುಷ್ಯ ನಾಗಿ ಬಂದಿದ್ದಾನೆ. ಇದು
ಭಯಂಕರವಾದ ದುರ್ಬೋಧನೆ. ಕ್ರಿಸ್ತನು ಈ ಭೂಮಿಯ ಮೇಲಿದ್ದಾಗ ಪಾಪ
ಮಾಡಬಹುದಾಗಿದ್ದ ರೆ ಆತನು ಈಗಿನ ವರ್ತಮಾನ ಕಾಲದಲ್ಲಿ ಅಥವಾ ಭವಿಷ್ಯ ತ್ತಿನಲ್ಲಿ
ಸೋಲುವದಿಲ್ಲ ಎನ್ನು ವದಕ್ಕೆ ಯಾವ ಖಾತರಿ ಇದೆ?
64
ಮೂಲಕ ಸುವಾರ್ತೆಯನ್ನು ಹೆಚ್ಚು ಸ್ವಾದಿಷ್ಟ ಕರವಾಗಿ ಮಾಡಲು ಕೆಲವರು – ಅವಿಶ್ವಾಸಿಗಳು
-- ಪ್ರಯತ್ನಿಸಿದರು. ಸತ್ತವರನ್ನು ಎಬ್ಬಿಸಲು, ಮತ್ತು ಬಿರುಗಾಳಿಯನ್ನು ಶಾಂತಗೊಳಿಸಲು ಈ
ವಾದವು ಹೇಗೆ ಅನ್ವ ಯವಾಗುತ್ತದೆ ಎಂದು ತಿಳಿಯುವದು ಕಷ್ಟ ವಾದದ್ದು . ಅನೇಕ ಸಾರಿ
ಸಂಭವಿಸುವಂತೆ ಪುನರ್ವಾಖ್ಯಾನಗಾರರೆಂದು ಕರೆಯಲ್ಪ ಡುವವರು ಸತ್ಯ ವೇದವನ್ನು
ವಿವರಿಸುವಂತೆ ಸತ್ಯ ವೇದವು ದಾಖಲಿಸುವ ವಾಸ್ತವಾಂಶಗಳನ್ನು ನಂಬುವದಕ್ಕಿಂತಲೂ,
ಅದ್ಭು ತಗಳ ಅಂಶಗಳನ್ನು ನಂಬುವದು ಕಷ್ಟ ಕರವಾದದ್ದು . ಯೇಸು ಜನರನ್ನು
ಪ್ರೀತಿಮಾಡಿದ್ದ ರಿಂದಲೂ ಅವರಿಗೆ ಸಹಾಯ ಮಾಡುವ ಉದ್ಧೇಶದಿಂದಲೂ ಅದ್ಭ ತಗಳನ್ನು
ಮಾಡಿದನು ಮಾಡಿದ ಅದ್ಬು ತಗಳ ಮೂಲಕ ದೇವರು ಆತನೊಂದಿಗೆ ಇದ್ದಾನೆಂದು ಯೇಸು
ನಿರೂಪಿಸಿದನು (ಅಪೋ. 10:38). ಅಥವಾ ಸಾಬೀತು ಪಡಿಸಿದನು. ಆತನ ಅದ್ಭು ತ
ಕಾರ್ಯಗಳ ಮೂಲಕ ಅನೇಕ ಜನರು ಆಕರ್ಷಿತರಾದರು ಎಂಬುದು ಸತ್ಯ ವಾದದ್ದು ಆದರೆ
ಆಕರ್ಷಿತರಾಗಿ ಬಂದಾಗ ಅವರಿಗೆ ದೇವರ ಕುರಿತಾಗಿ ಕಲಿಸಿದನು. ಯೇಸು
ಯಾರಾಗಿದ್ದಾನೆಂದು ಹೇಳಲ್ಪ ಟ್ಟ ದ್ದ ನ್ನು ನಂಬದೇ ಇರಲು ಹೃದಯದಲ್ಲಿ ಅದ್ಭು ತಗಳು
ಯಾವುದೇ ನೆಪಗಳನ್ನು ಬಿಡಲಿಲ್ಲ .(ಯೋಹಾ:15:24).
ಕ್ರಿಸ್ತನ ಮರಣ
65
ಕ್ರಿಸ್ತನ ಮರಣದ ಅರ್ಥ ಮತ್ತು ಅದರ ಆಳವಾದ ಅನ್ವ ಯಿಸಿಕೊಳ್ಳು ವಿಕೆಯು
ಅಪೊಸ್ತಲನಾದ ಪೌಲನ ಪತ್ರಿಕೆಗಳಲ್ಲಿ ಕಂಡು ಬರುತ್ತದೆ. ಮತ್ತು ಅವುಗಳನ್ನು
ರಕ್ಷಣಾಶಾಸ್ತ್ರದಡಿಯಲ್ಲಿ ಕಲಿಯಬಹುದು. ಇಲ್ಲಿ ನಾವು ಕ್ರಿಸ್ತನ ಮರಣದ ಅಂಶಗಳನ್ನು ಮಾತ್ರ
ಪರಿಗಣಿಸೋಣ.
66
ಶಿಲುಬೆಗೇರಿಸುವುದರ ಮೂಲಕ ಮನುಷ್ಯ ನ ಅಪರಾಧವು ಸಂಪೂರ್ಣವಾಗಿ ತೋರಿಬಂತು,
ಆದರೆ ಅಂತಿಮವಾಗಿ ಯಾವ ಮನುಷ್ಯ ನೂ ಅವನ ಜೀವವನ್ನು ಅವನಿಂದ
ತಗೆಯಲಾಗಲಿಲ್ಲ (ಯೋಹಾ: 10:17-18; ಅ.ಕೃ 2:23). ದೇವರು ಯಾಕೆ ಅವನ
ಕೈಬಿಟ್ಟ ನು? ಅದಕ್ಕಿ ರುವ ಸರಳ ಉತ್ತರ ಹೀಗಿದೆ: “ಪಾಪಜ್ಞಾನವಿಲ್ಲ ದ ಆತನನ್ನು ದೇವರು
ಪಾಪಸ್ವ ರೂಪಿಯಾಗ ಮಾಡಿದನು” (2 ಕೊರಿ: 5:21). ದೇವರು ಕ್ರಿಸ್ತನ ಪ್ರಾಯಶ್ಚಿತ್ತವನ್ನು
ಯಜ್ಞ ವನ್ನು ಸ್ವೀಕಾರ ಮಾಡಿಕೊಂಡನೆಂಬುದನ್ನು ದೇವರು ಅವನನ್ನು ಮರಣದಿಂದ
ಎಬ್ಬಿಸಿದ್ದ ರಲ್ಲಿ ಕಾಣಬಹುದು (ರೋಮ 4:25)
ಕ್ರಿಸ್ತನ ಪುನರುತ್ಥಾನ
67
ಯೇಸುವೇ ಎಂಬ ಸಂದೇಹವಿದ್ದೆಡೆ ಆತನನ್ನು ಮುಟ್ಟಿ ನೋಡಲು ಅವರನ್ನು
ಕೇಳಿಕೊಂಡನು. ಮತ್ತೊಂದೆಡೆ, ಆತನು ಅಗೋಚರನಾಗಿ (ಸದೃಶ್ಯ ನಾದನು) ಮುಚ್ಚಿದ್ದ
ಬಾಗಿಲುಗಳಿಂದ ಒಳಪ್ರವೇಶಮಾಡಿದನು. ಆತನು ಈ ಶಕ್ತಿಗಳನ್ನು ಪುನರುತ್ಥಾನಕ್ಕೆ ಮುಂಚೆ
ಉಪಯೋಗಿಸಲಿಲ್ಲ . ಅಪೋಸ್ತಲರ ಕೃತ್ಯ ಗಳಲ್ಲಿನ ಪ್ರಸಂಗಗಳನ್ನು ತೋರಿಸುವಂತೆ;
ಪುನರುತ್ಥಾನವು ನಮ್ಮ ನಂಬಿಕೆಯ ಅಸ್ತಿರವಾಗಿದೆ. ಆದ್ದ ರಿಂದ ಇದಕ್ಕೆ ಹೆಚ್ಚಿನ ಒತ್ತು
ಕೊಡಲಿಕ್ಕಾಗುವದಿಲ್ಲ .
ಅಧ್ಯಾಯ
7
ಕ್ರಿಸ್ತ ಶಾಸ್ತ್ರ:
ಕ್ರಿಸ್ತನ (ಕುರಿತಾದ) ಅಧ್ಯ ಯನ
-ಭಾಗ 3-
68
ಕ್ರಿಸ್ತನ ಹೆಸರುಗಳು
69
ಮಾನವೀಯ ಹೆಸರಾಗಿದ್ದು ಆತನ ರಕ್ಷಕತ್ವ ವನ್ನು ಒತ್ತಿ ಹೇಳುತ್ತದೆ. ವಾಸ್ತವವಾಗಿ “ಯೇಸು”
ಎನ್ನು ವದು ಕ್ರಿಸ್ತನ ಕಾಲದಲ್ಲಿ ಸಾಮಾನ್ಯ ಯೆಹೂದ್ಯ ಹೆಸರಾಗಿತ್ತು . ಇದು ಯೆಹೋಶುವ
ಎಂಬ ಹೆಸರಿನ ಅದೇ ಅರ್ಥವನ್ನು ಹೊಂದಿದೆ. ಗ್ರೀಕ್ ರೀತಿಯದಾಗಿದೆ. ಈ ಹೆಸರು
ಸುವಾರ್ತೆಯ ಪುಸ್ತಕದಲ್ಲಿ ಹೇರಳವಾಗಿ ಉಪಯೋಗಿಸಲ್ಪ ಟ್ಟಿದೆ. ಆದರೆ ಪತ್ರಿಕೆಗಳಲ್ಲಿ ಕರ್ತನು
ಅಥವಾ ಕ್ರಿಸ್ತನು ಎಂಬ ಪದವನ್ನು ಇದರೊಂದಿಗೆ ಸೇರಿಸಿಯೇ ಉಪಯೋಗಿಸಿದೆ. ಹಾಡಿನ
ರಚನೆಗಳಲ್ಲಿ ಆತನ ಮಾನವೀಯ ಹೆಸರಿನ ಏಕ ಹೆಸರು ಮಾತ್ರ ವ್ಯ ಕ್ತಪಡಿಸುವಂತೆ
ಉಪಯೋಗಿಸಲ್ಪ ಟ್ಟಿದೆ. ಆದರೆ ಪೌಲನು ತನ್ನ ಪತ್ರಿಕೆಗಳಲ್ಲಿ ತೋರಿಸಿರುವಂತೆ ಸಾಮಾನ್ಯ ವಾಗಿ
ದೇವಕುಮಾರನು ತನ್ನ ಪೂರ್ಣ ಹೆಸರನ್ನು ಅಥವಾ ಶಿರೋನಾಮವನ್ನು ಹೊಂದಲು
ಯೋಗ್ಯ ನಾಗಿದ್ದಾನೆ.
ಹಿಂದಿನ ಎರಡು ಅಧ್ಯಾಯಗಳಲ್ಲಿ ನಾವು ಕ್ರಿಸ್ತನ ವ್ಯ ಕ್ತಿತ್ವ , ಜೀವನ ಮತ್ತು ಸೇವೆಯ
ಕುರಿತು ಕಾಲಾನುಕ್ರಮದಲ್ಲಿ ಆತನ ಜನನ ಪೂರ್ವ ಕಾಲದಿಂದ ಆತನ
70
ಪುನರುತ್ಥಾನದವರೆಗಿನ ಸಂಗತಿಗಳನ್ನು ಕಲಿತಿದ್ದೇವೆ. ಈಗ ನಾವು ಆತನ ದಿವ್ಯಾರೋಹಣ
ಮತ್ತು ಪರಲೋಕದಲ್ಲಿನ ಸೇವೆಯ ಕುರಿತು ಚರ್ಚಿಸೋಣ.
71
ಚಟುವಟಿಕೆಗಳ ಕುರಿತು ವಿವರಿಸಲು ಹೊಸ ಒಡಂಬಡಿಕೆಯಲ್ಲಿ ಉಪಯೋಗಿಸಿರುವ 5
ಪದಗಳಿವೆ. ಅವುಗಳನ್ನೂ ಸಂಕ್ಷಿಪ್ತವಾಗಿ ಪರಿಗಣಿಸೋಣ.
72
ಒಡಂಬಡಿಕೆಯಲ್ಲಿ. ಕ್ರಿಸ್ತನೇ ಮಹಾಯಾಜಕನು. ಮೆಲ್ಕಿಜೇದೇಕನ ನಂತರದ ಕ್ರಮಾಂಕದಲ್ಲಿ
(ಇಬ್ರಿ. 7:1-6), ಮತ್ತು ಆರೋನನ ಯಾಜಕತ್ವ ದ ಕಾರ್ಯಗಳನ್ನು ನೆರವೇರಿಸುವವನೂ
ಆಗಿದ್ದಾನೆ. ಈ ಆರೋನನು ಮತ್ತು ಮೆಲ್ಕಿಜೇದೇಕನು ಎಂಬಿಬ್ಬ ರಿಗಿಂತಲೂ ಶ್ರೇಷ್ಟ ನಾದ
ಮಹಾಯಾಜಕನು. ಆರೋನನು ಮತ್ತು ಅವನ ಎಲ್ಲಾ ಮಕ್ಕ ಳು ಸತ್ತು ಹೋದರು; ಕ್ರಿಸ್ತನು
ನಿತ್ಯ ನಿರಂತರಕ್ಕೂ ಇರುವ ಮಹಾಯಾಜಕನು. ಈತನೊಬ್ಬ ನೇ ಶ್ರೇಷ್ಟ ನಾದ
ಮಹಾಯಾಜಕನು ಎಂದು ಕರೆಯಲ್ಪ ಟ್ಟ ವನು (ಇಬ್ರಿ. 4:14). (ಕ್ರಿಸ್ತನ ಯಾಜಕತ್ವ ವು ಕೇವಲ
ಇಬ್ರಿಯ ಪತ್ರಿಕೆಯಲ್ಲಿ ಮಾತ್ರ ನಮೂದಿಸಲ್ಪ ಟ್ಟಿದೆ). ಮಹಾಯಾಜಕನ ಪ್ರಧಾನ ಉದ್ಯೋಗವು
ಆರಾಧನೆ ಮತ್ತು ಮಧ್ಯ ಸ್ಥಿಕೆಯ ಸಂಪರ್ಕಹೊಂದಿದೆ. (ಇಬ್ರಿ. 5:1-2). ಕ್ರಿಸ್ತನು ತನ್ನ ನ್ನು ತಾನೇ
ದೇವರಿಗೆ ಯಜ್ಞ ವಾಗಿ ಪರಿಪೂರ್ಣ ಯಜ್ಞ ವಾಗಿ ಸಮರ್ಪಿಸಿಕೊಂಡು ದೇವರಿಂದ
ಅಂಗೀಕರಿಸಲ್ಪ ಟ್ಟ ನು (ಇಬ್ರಿ. 10:12).ನಮ್ಮ ಮಹಾಯಾಜಕನಾಗಿ ಕ್ರಿಸ್ತನು ನಮ್ಮ
ಆರಾಧನೆಯನ್ನು ಮುನ್ನ ಡೆಸುತ್ತಾನೆ ಮತ್ತು ನಮ್ಮ ಸ್ತು ತಿಯು ದೇವರಿಂದ
ಅಂಗೀಕರಿಸಲ್ಪ ಡುವಂತೆ ಮಾಡುತ್ತಾನೆ (ಇಬ್ರಿ. 10:19-22). ಯಾಜಕನಾಗಿ, ಈತನು ತನ್ನ ನ್ನೇ
ಸಮರ್ಪಿಸಿಕೊಂಡದ್ದ ರಿಂದ, ಶೋಧಿಸಲ್ಪ ಟ್ಟ ದ್ದ ರಿಂದ, ಶೋಧಿಸಲ್ಪ ಡುವವರಿಗೆ ಸಹಾಯ
ಮಾಡಲು ಶಕ್ತನಾಗಿದ್ದಾನೆ (ಇಬ್ರಿ. 2:18). ಮತ್ತು ಆತನು ತನ್ನ ಮೂಲಕ ದೇವರ ಬಳಿಗೆ
ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿಗೋಸ್ಕ ರ ವಿಜ್ಞಾಪನೆ
ಮಾಡುವದಕ್ಕೆ ಯಾವಾಗಲೂ ಬದುಕುವವನಾಗಿದ್ದಾನೆ (ಇಬ್ರಿ7:25). ಅಂತ್ಯ ವಲ್ಲ ದ ಜೀವದ
ಶಕ್ತಿಯುಳ್ಳ ವನಾಗಿದ್ದು …” (ಇಬ್ರಿ. 7:16).
73
ಯೇಸು ನಮ್ಮ ಪ್ರತಿಪಾದಕನು ಕ್ರಿಸ್ತನು ಮಧ್ಯ ಸ್ಥ ನಾಗಿ ಪಾಪಿಗಳನ್ನು ದೇವರ ಬಳಿಗೆ
ತರುತ್ತಾನೆ. ಯಾಜಕನಾಗಿ ವಿಶ್ವಾಸಿಗಳನ್ನು ಆಶೀರ್ವಾದದ ಸ್ಥ ಳದಲ್ಲಿ ಇರಿಸುತ್ತಾನೆ. ಆದರೆ
ನಾವು ಪಾಪದೊಳಗೆ ಬಿದ್ದಾಗ ನಮಗೆ ಕ್ರಿಸ್ತನೆಂಬ ಪ್ರತಿಪಾದಕನ ಅಗತ್ಯ ವಿದೆ. ನನ್ನ ಪ್ರಿಯರಾದ
ಮಕ್ಕ ಳೇ, ನೀವು ಪಾಪಮಾಡದಂತೆ ಈ ಮಾತುಗಳನ್ನು ನಿಮಗೆ ಬರೆಯುತ್ತೇನೆ.
ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು
ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ (1 ಯೋಹಾ. 2:1). ಈ ವಾಕ್ಯ ದಿಂದ ನಾವು ಎರಡು
ಸಂಗತಿಗಳನ್ನು ಕಲಿಯುತ್ತೇವೆ: ದೇವರ ಉದ್ದೇಶ ಮತ್ತು ದೇವರ ಒದಗಿಸುವಿಕೆ. ಆತನ
ಉದ್ದೇಶವೆಂದರೆ ನಾನು ಎಂದಿಗೂ ಪಾಪಮಾಡಬಾರದು ಆದರೆ ನಾನು ಪಾಪರಹಿತನು
ಅಥವಾ ಸಂಪೂರ್ಣನು ಎಂದು ನಮ್ಮ ಕುರಿತಾಗಿ ಯೋಚಿಸಿಕೊಂಡು ನಮ್ಮ ನ್ನೇ
ಮೋಸಗೋಳಿಸಬಾರದು. ನಾವು ಪಾಪಮಾಡಿದಾಗ, ನೀತಿವಂತನಾದ ಯೇಸು ಕ್ರಿಸ್ತನೆಂಬ
ಸೂಕ್ತ ಪ್ರತಿಪಾದಕನ ಒದಗಿಸುವಿಕೆಯನ್ನು ದೇವರು ಕೊಟ್ಟಿದ್ದಾನೆಂದು ಸಂತೋಷಪಡುತ್ತೇವೆ.
ಒಬ್ಬ ವ್ಯ ಕ್ತಿಯ ಅಗತ್ಯ ತೆಯ ಸಮಯದಲ್ಲಿ ಸಹಾಯ ಮಾಡಲು ಒಬ್ಬ ವಕೀಲನು
ಅಥವಾ ಆಪ್ತಸಮಾಲೋಚಕನು ಬಯಸುವ ಹಾಗೆ ಪಾಪಮಾಡುವ ವಿಶ್ವಾಸಿಯನ್ನು
ದೇವರೊಂದಿಗಿನ ಅನ್ಯೋನ್ಯ ತೆಗೆ ಪುನಃಸ್ಥಾಪಿಸಲು ಕ್ರಿಸ್ತನು ಕಾರ್ಯಮಾಡುತ್ತಾನೆ. ಕೆಲವು
ಜನರು ಹೀಗೆ ಬೋಧಿಸುತ್ತಾರೆ, ಏನೆಂದರೆ ವಿಶ್ವಾಸಿಗಳಾದ ನಾವು ಪಾಪಮಾಡಿದಾಗ ನಾವು
ನಿತ್ಯ ಜೀವವನ್ನು ಕಳಕೊಳ್ಳು ತ್ತೇವೆ. ಇದು ದೇವರ ವಾಕ್ಯಾನುಸಾರವಲ್ಲ ದ ಬೋಧನೆ ಮತ್ತು
ದೇವರು ಮಧ್ಯ ಪ್ರವೇಶಿಸಿ ನಮ್ಮ ನ್ನು ಶಿಕ್ಷಿಸಿ ಶಿಸ್ತು ಪಡಿಸದೆ ನಾವು ಪಾಪಮಾಡುತ್ತಲೇ
ಇರಬಹುದು ಎಂದು ಹೇಳಿದಂತ ಮಾತಿಗೆ ಸಮಾನವಾಗಿರುತ್ತದೆ. ಸಹಾಯಕನು ಎಂಬ ಪದ
(ಗ್ರೀಕ್ ನಲ್ಲಿ ಮದ್ಯ ಸ್ಥ )ವು ಪವಿತ್ರಾತ್ಮ ನಿಗೂ ಬಳಸಲ್ಪ ಟ್ಟಿದ್ದು “ಆಧರಣೆ ಮಾಡುವವನು” ಅಥವಾ
ಸಹಾಯಕನು ಎಂದು ಯೋಹಾನ. 14:16,26;15:26, ಮತ್ತು 16:7 ರಲ್ಲಿ
ಉಪಯೋಗಿಸಲ್ಪ ಟ್ಟಿದೆ. ಇದು ಕ್ರಿಸ್ತನ ಪ್ರಸ್ತು ತ ಸೇವಾ ಕಾರ್ಯದ ಮತ್ತೊಂದು ಅರ್ಥವನ್ನು
ಕೊಡುತ್ತದೆ. ಹಾಗೆಯೇ ಇದು ಕ್ರಿಸ್ತನ ಕಾರ್ಯ ಹಾಗೂ ಪವಿತ್ರಾತ್ಮ ನ ಕಾರ್ಯಗಳೆರೆಡೂ
ನಿಕಟ ಸಂಬಂಧ ಹೊಂದಿವೆ ಎಂಬುವದನ್ನು ತೋರಿಸಿಕೊಡುತ್ತವೆ. ಇವುಗಳನ್ನು ಧ್ಯಾನಿಸಿರಿ.
74
ಯೇಸು, ನಮ್ಮ ಕುರುಬನು
೧ ಪೇತ್ರ. 2:25 ರಲ್ಲಿ ಇತರ ಎರಡು ಶಿರೋನಾಮೆಗಳ ಕುರಿತು ಓದುತ್ತೇವೆ.
ಮೊದಲನೆಯದಾಗಿ ಈತನು ನಮ್ಮ ಕುರುಬನು. “ಒಳ್ಳೇಯ ಕುರುಬ”ನಾಗಿ ಯೇಸು ತನ್ನ
ಕುರಿತಾಗಿ ತನ್ನ ಪ್ರಾಣವನ್ನೇ ಕೊಟ್ಟ ನು (ಯೋಹಾ. 10:11) ಇದು ಭೂತಕಾಲದ್ದು
(ಹಿಂದಿನದು) ಭವಿಷ್ಯ ತ್ತಿನ ಕುರಿತಾದರೆ ಆತನು ಹಿರೀ ಕುರುಬನು ಎಂದು 1 ಪೇತ್ರ. 5:4 ರಲ್ಲಿ
ವಿವರಿಸಲ್ಪ ಟ್ಟಿದ್ದಾನೆ, ಹಾಗೂ ಆತನು ಮಹಿಮೆಯಲ್ಲಿ ಪ್ರತ್ಯ ಕ್ಷನಾಗುವಾಗ ತನ್ನ ಅಧೀನದಲ್ಲಿದ್ದು
ನಂಬಿಗಸ್ಥ ರಾಗಿ ಕುರುಬನ ಸೇವೆ ಮಾಡುವವರಿಗೆ ಬಹುಮಾನಗಳನ್ನು (ಕಿರೀಟಗಳನ್ನು )
ಕೊಡುವ ವಾಗ್ದಾನ ಮಾಡಿದ್ದಾನೆ. ಇಬ್ರಿಯ. 13:20-21 ರಲ್ಲಿ ನಾವು ಗ್ರಹಿಸಬಹುದಾದ
ಸಂಗತಿಯೆಂದರೆ ಆತನು ತನ್ನ ರಕ್ತದ ಶಕ್ತಿಯ ಮೂಲಕ ನಮ್ಮ ಮಹಾಕುರುಬನಾಗಿ ನಮ್ಮ ನ್ನು
ದೇವರ ಮಂದೆಗೆ ಸೇರಿಸುವ ಒಡಂಬಡಿಕೆಗೆ ಸೇರಿಸಿದನು ಮತ್ತು ಕ್ರಿಸ್ತನ ಮೂಲಕ ಪ್ರಸ್ತು ತ
ಶಕ್ತಿಯಿಂದ ನಮಗೆ ಆಹಾರ, ಮಾರ್ಗದರ್ಶನ ಮತ್ತು ಸಂರಕ್ಷಣೆಯನ್ನು ಒದಗಿಸುವನಾದನು.
ಇದರಿಂದ ದೇವರ ಶಕ್ತಿಯ ಮೂಖಾಂತರ ಸಕಲ ಸತ್ಕಾರ್ಯಕ್ಕೂ ನಮ್ಮ ನ್ನು ಸನ್ನ ದ್ಧ ರಾಗಿ
ಮಾಡುವನು.
75
ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರಿಗಿಕೊಳ್ಳ ದಿದ್ದ ರೆ (ಪ್ರಕ. 2:5) ದೀಪಸ್ತಂಭವನ್ನು
ತೆಗೆದುಹಾಕುವೆನು (ನೀತಿಯ ಸೂಚಕನಾದ ಮತ್ತು ಸುವಾರ್ತೆಯ ಬೆಳಕಾಗಿ)
76
ದೀನತೆಯುಳ್ಳ ವನಾಗಿ ಬಂದನು ಹಾಗೂ ಮನುಷ್ಯ ರ ತಿರಸ್ಕಾರಕ್ಕೆ, ನಿಂದನೆಗೆ, ಅಗೌರವಕ್ಕೆ
ಗುರಿಯಾದನು .ದೇವರು ಆತನನ್ನು ಜಗತ್ತಿನ ಕೇಂದ್ರದಲ್ಲಿ ಪರಲೋಕದಲ್ಲಿ
ಮಹಿಮೆಪಡಿಸಿದನು, ಯೇಸು ಕ್ರಿಸ್ತನು ಈ ಲೋಕದಲ್ಲಿ ಎಲ್ಲಿ ತಿರಸ್ಕ ರಿಸಲ್ಪ ಟ್ಟ ನೋ ಅದೇ
ಸ್ಥ ಳದಲ್ಲಿ ಆತನನ್ನು ಮಹಿಮೆಪಡಿಸುವದು ದೇವರ ಯೋಜನೆಯ ಅವಶ್ಯ ಕ ಭಾಗವಾಗಿತ್ತು .
ಆತನು ಪುನಃ ಬಂದಾಗ, ಪ್ರತಿ ಮೊಣಕಾಲುಗಳು ಆತನ ಆತನಿಗೆ ನಮಸ್ಕ ರಿಸುವುದು.
77
ಹೋಗುವವು ಹಾಗೂ ದೇವರು ನೂತನ ಭೂಮ್ಯಾಕಾಶಗಳನ್ನು ಸೃಷ್ಟಿಸುವನು (1 ಥೆಸ.
4:13,-17; ಪ್ರಕ. 20 ಮತ್ತು 21).
ಅಧ್ಯಾಯ
8
ಪವಿತ್ರಾತ್ಮ ಶಾಸ್ತ್ರ:
ಪವಿತ್ರಾತ್ಮ ನ ಕುರಿತಾದ ಅಧ್ಯ ಯನ
ಅನೇಕ ಜನರು ಪವಿತ್ರಾತ್ಮ ನ ಸ್ವ ಭಾವದ ಕುರಿತು ತಪ್ಪು ಅಭಿಪ್ರಾಯ ಹೊಂದಿದ್ದಾರೆ;
ಪವಿತ್ರಾತ್ಮ ನನ್ನು ನಿಜವಾದ ಜೀವವುಳ್ಳ ವನು ಎಂದು ಪರಿಗಣಿಸದೆ ಆತನನ್ನು ಕೇವಲ ನಿಗೂಢ
ಪ್ರಭಾವವೆಂದು ಮಾತ್ರ ಪರಿಗಣಿಸುತ್ತಾರೆ. ಪವಿತ್ರಾತ್ಮ ನ ವ್ಯ ಕ್ತಿತ್ವ ವನ್ನು ಸಾಮಾನ್ಯ ವಾಗಿ
ಪರಿಗಣಿಸುವದರ ಮೂಲಕ ಪವಿತ್ರಾತ್ಮ ನ ವ್ಯ ಕ್ತಿತ್ವ ವನ್ನು ಕುರಿತು ಅಧ್ಯ ಯನ ಮಾಡೋಣ.
78
ನಾವು “ವ್ಯ ಕ್ತಿ” ಎಂದು ಹೇಳುವಾಗ ಊಟ ಮಾಡುವನು, ಕಾರ್ಯಗಳನ್ನು
ಮಾಡುವವನು, ತನ್ನ ನ್ನು ವ್ಯ ಕ್ತಪಡಿಸುವವನು ಎಂದು ವಿವರಣೆ ನೀಡುತ್ತೇವೆ. ಅ.ಕೃ. 10:19-
20 ರಲ್ಲಿ ಪವಿತ್ರಾತ್ಮ ನು ಹೀಗೆ ಮಾತ್ತಾಡುತ್ತಾನೆ – “ನಾನು ಕಳುಹಿಸಿದೆನು” ಎಂದು
ಹೇಳುತ್ತಾನೆ. ಅ.ಕೃ. 13:2 ರಲ್ಲಿ “ನಾನು ಕರೆದೆನು” ಎಂದು ಪವಿತ್ರಾತ್ಮ ನು ಹೇಳುತ್ತಾನೆ.
ಪ್ರಕಟಣೆ 2 ಮತ್ತು 3 ರಲ್ಲಿ 7 ಸಾರಿ “ಪವಿತ್ರಾತ್ಮ ನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಲ ವನು
ಕೇಳಲಿ” ಎಂದು ಓದುತ್ತೇವೆ.
ಒಬ್ಬ ವ್ಯ ಕ್ತಿಗೆ ಸ್ವಂತ ಚಿತ್ತವಿರುತ್ತದೆ. ಹಾಗೆಯೇ ಪವಿತ್ರಾತ್ಮ ನಿಗೂ ಚಿತ್ತವಿದೆ (1 ಕೊರಿ.
12:11). ಆತನು ಮನುಷ್ಯ ರೊಂದಿಗೆ ವಾದಿಸುತ್ತಾನೆ (ಆ.ಕಾ. 6:3). ನಮ್ಮ ನ್ನು ಆತನು ದೇವರ
ಮಕ್ಕ ಳಾಗಿ ನಡೆಸುತ್ತಾನೆ (ರೋಮಾ. 8:14). ವ್ಯ ಕ್ತಿಗೆ ಭಾವನೆಗಳಿರುತ್ತವೆ. ಪವಿತ್ರಾತ್ಮ ನು
ರೇಗಿಸಲ್ಪ ಡುವನು (ಯೆಶಾ:63:10). ದುಃಖಿಸಿದರು (ಎಫೆ. 4:30), ಅಥವಾ ಅವಮಾನ
ಹೊಂದಬಹುದು (ಇಬ್ರಿ. 10:29). ವ್ಯ ಕ್ತಿಗೆ ಬುದ್ಧಿವಂತಿಕೆಯಿದೆ; ಪವಿತ್ರಾತ್ಮ ನು ಮನಸ್ಸು
ಹೊಂದಿದ್ದಾನೆ (ರೋಮಾ. 8:27). ಆತನು ದೇವರ ಅಗಾಧ ಸಂಗತಿಗಳನ್ನು ಹುಡುಕುತ್ತಾನೆ
ಮತ್ತು ದೇವರ ಮನಸ್ಸ ನ್ನು ತಿಳಿದಿದ್ದಾನೆ (1 ಕೊರಿ. 2:10-11).
ಪವಿತ್ರಾತ್ಮ ನ ದೈವತ್ವ
79
ಸತ್ಯ ವೇದದಲ್ಲಿ, ದೇವದೂತರು ಆತ್ಮ ಗಳೆಂದು ಕರೆಯಲ್ಪ ಟ್ಟಿದ್ದಾರೆ. ಮತ್ತು ಅವರಲ್ಲಿ
ಕೆಲವರು ಪರಿಶುದ್ಧ ಆತ್ಮ ಗಳು. ಪವಿತ್ರಾತ್ಮ ನು ದೈವೀಕ ಅಂದರೆ ದೇವರ ಗುಣಲಕ್ಷಣಗಳನ್ನು
ಹೊಂದಿದ್ದಾನೆಂಬುದು ದೇವರ ವಾಕ್ಯ ದಿಂದ ಸ್ಪ ಷ್ಟ ವಾಗಿದೆ. ಪರಿಶುದ್ಧ ಅಥವಾ ಪವಿತ್ರ ಆತ್ಮ ನು
(ಲೂಕ. 11:13) ಎಂಬ ಪದವೇ ಆತನು ಆತ್ಮ ನು ಎಂಬದಾಗಿಯೂ ಮತ್ತು ಆತನು
ಪರಿಶುದ್ಧ ನು ಎಂಬದಾಗಿಯೂ ಕಲಿಸುತ್ತವೆ. ಇವೆರೆಡೂ ದೈವೀಕ ಲಕ್ಷಣಗಳೇ ಆಗಿವೆ.
ಪವಿತ್ರಾತ್ಮ ನು ನಿತ್ಯ ನಾಗಿದ್ದಾನೆ (ಇಬ್ರಿ. 9:14). ಪ್ರತಿಯೊಂದು ಜೀವಿಗಳು, ಪ್ರತಿಯೊಬ್ಬ
ದೇವದೂತನಿಗೆ ಒಂದು ಆರಂಭವಿದೆ. ದೇವರು ಮಾತ್ರವೇ ನಿತ್ಯ ನಾಗಿದ್ದಾನೆ. ಆತನೇ
(ಪವಿತ್ರಾತ್ಮ ನು) ಸಾರ್ವಭೌಮನಾಗಿದ್ದಾನೆ. ತಂದೆಯಾದ ದೇವರೊಂದಿಗೂ ಮಗನಾದ
ದೇವರೊಂದಿಗೂ ಸರಿಸಮಾನನಾಗಿದ್ದಾನೆ. ಹೀಗೆ ದೀಕ್ಷಾಸ್ನಾನಗಳು ತಂದೆಯ, ಮಗನ ಮತ್ತು
ಪವಿತ್ರಾತ್ಮ ನ ಹೆಸರಿನಲ್ಲಿ ಕೊಡಲ್ಪ ಡಬೇಕು (ಮತ್ತಾ. 28:19). ಪೌಲನು ಕೊರಿಂಥ ವಿಶ್ವಾಸಿಗಳಿಗೆ
ತ್ರೈಯೇಕ ದೇವರಿಂದ ಆಶೀರ್ವಾದವನ್ನು ಉಚ್ಚ ರಿಸಿದನು (2 ಕೊರಿ. 13:14). ಜೀವಿಯನ್ನು
ದೇವರೊಂದಿಗೆ ಸಮಾನಗೊಳಿಸಿ ಸಂಪರ್ಕಿಸುವದು ತಪ್ಪಾಗುತ್ತದೆ.
80
ಲೋಕಕ್ಕೆ ಅರುಹನ್ನು ಹುಟ್ಟಿಸುವನು (ಯೋಹಾ16:8-11).ಆತನು ಕೃಪಾಪೂರ್ಣನು:
ಆತನು ಕೃಪೆಯ ಆತ್ಮ ನು ಎಂದು ಕರೆಯಲ್ಪ ಟ್ಟಿದ್ದಾನೆ (ಇಬ್ರಿ. 10:29). ಆತನ ಪ್ರೀತಿಯು
ರೋಮಾ.15:30 ರಲ್ಲಿ ವ್ಯ ಕ್ತಪಡಿಸಲ್ಪ ಟ್ಟಿದೆ.
81
ಈಗ ನಾವು ಪವಿತ್ರಾತ್ಮ ನ ಕಾರ್ಯಗಳ ಕುರಿತು ಪರಿಗಣಿಸೋಣ. ಅವೆಲ್ಲ ವೂ
ಪವಿತ್ರಾತ್ಮ ನನ್ನು ದೇವರೆಂದು ಪ್ರತಿಯೊಂದು ವಿಷಯದಲ್ಲಿಯೂ ತಂದೆಯೊಂದಿಗೂ
ಮಗನೊಂದಿಗೂ ಸರಿಸಮಾನನಾದವನೆಂದೂ ನಿರೂಪಿಸುತ್ತದೆ. ಪವಿತ್ರಾತ್ಮ ನು
ಸಂಪೂರ್ಣವಾಗಿ ದೇವರೇ ಆಗಿದ್ದಾನೆ ಎಂದು ಸತ್ಯ ವೇದವು ಉಪದೇಶಿಸುತ್ತದೆ.
ಪವಿತ್ರಾತ್ಮ ನ ಕರ್ಯ
ಸೃಷ್ಟಿ
ವಿಶ್ವ ಕ್ಕೆ ಸಂಬಂಧಿಸಿದಂತೆಯೇ ಸೃಷ್ಟಿಯು ಪವಿತ್ರಾತ್ಮ ನ ಕಾರ್ಯವಾಗಿದೆ. ಎಲ್ಲ ವೂ
ಮಗನಿಂದಲೇ ಸೃಷ್ಟಿಸಲ್ಪ ಟ್ಟಿದ್ದ ರೂ, ಮನುಷ್ಯ ನ ಸೃಷ್ಟಿಯ ಸಂಬಂಧದಲ್ಲಿ (ಯೋಬ. 33:4)
ಮತ್ತು ಪ್ರಾಣಿಗಳ ಸೃಷ್ಟಿಯ ಸಂಬಂಧದಲ್ಲಿ (ಕೀರ್ತ. 104:30) ಪವಿತ್ರಾತ್ಮ ನು
ಉಲ್ಲೇಖಿಸಲ್ಪ ಟ್ಟಿದ್ದಾನೆ. ಯೋಬ.ನ ಪ್ರಕಾರ “ಆತನ ಶ್ವಾಸವು (ದೇವರು)
ಆಕಾಶಮಂಡಲವನ್ನು ಶುಭ್ರಮಾಡುವದು” ಯೋಬ. 26:13 ಮತ್ತು ಭೂಮಿಯನ್ನು
ಉಂಟುಮಾಡಿದತು (ಆ.ಕಾ:1:2).
82
ಪವಿತ್ರಾತ್ಮ ನಿಂದಲೇ ಆದದ್ದು (2 ಪೇತ್ರ. 1:21). ಹಾಗೆಯೇ 2 ಸಮು. 23:2-3; ಅ.ಕೃ. 1:16,
28:25; ಯೋಹಾ. 14:26, 16:13, 1 ಕೊರಿ. 2:10 ಮತ್ತು 1 ತಿಮೊ. 4:1 ನ್ನು ಸಹ
ನೋಡಿರಿ. ಈ ವಿಷಯವು ಸತ್ಯ ವೇದ ಶಾಸ್ತ್ರದಡಿಯಲ್ಲಿ ಹೆಚ್ಚು ಸಂಪೂರ್ಣವಾಗಿ
ವ್ಯ ವಹರಿಸಲಾಗಿದೆ. ಇಂದು ವಿಶ್ವಾಸಿಗಳಿಗೆ ಪವಿತ್ರಾತ್ಮ ನು ದೇವರ ವಾಕ್ಯ ವನ್ನು ಬೆಳಗಿಸುವವನಾಗಿ
ಕಾರ್ಯ ಮಾಡುತ್ತಾನೆ, ಅಂದರೆ ಆತನು ವಾಕ್ಯ ಭಾಗವನ್ನು ಸ್ವ ಷ್ಟ ಪಡಿಸಿದಾಗ ಆತನ
ದೈವಪ್ರೇರಣೆಯಿಂದ ವಿಶ್ವಾಸಿಯು ಒಂದೇ ಸಾರಿಗೆ ಪ್ರಯೋಜನವನ್ನು ಸ್ವೀಕರಿಸುತ್ತಾನೆ
ಅಥವಾ ಪಡೆದುಕೊಳ್ಳು ತ್ತಾನೆ.
ನರಾವತಾರ
ನರಾವತಾರವು ಕ್ರಿಸ್ತನ ಸಂಬಂಧದಲ್ಲಿ ಪವಿತ್ರಾತ್ಮ ನ ಕಾರ್ಯವಾಗಿದೆ.
ದೇವಕುಮಾರನೂ ಮತ್ತು ದೇವರ ಆತ್ಮ ನ ನಡುವಿನ ನಿಕಟ ಸಂಪರ್ಕವು ಭೂಮಿಯ ಮೇಲೆ
ಕ್ರಿಸ್ತನ ಅನುಭವದ ಅಧ್ಯ ಯನದಲ್ಲಿ ನೋಡಲಿದ್ದೇವೆ. ರೋಮಾ. 8:9 ಪವಿತ್ರಾತ್ಮ ನು “ಕ್ರಿಸ್ತನ
ಆತ್ಮ ನು” ಎಂದು ಕರೆಯಲ್ಪ ಟ್ಟಿದ್ದಾನೆ. ಕ್ರಿಸ್ತನಿಗೆ ಉಲ್ಲೇಖಿಸಲ್ಪ ಟ್ಟಂತಯೇ ಪವಿತ್ರಾತ್ಮ ನ ಏಳು
ಸೇವೆಗಳನ್ನು ದಾಖಲಿಸಬಹುದು.
83
ಈ ಎಲ್ಲಾ ಸೇವೆಗಳು ಪವಿತ್ರಾತ್ಮ ನ ಬಲದಿಂದಲೇ ಮಾಡಿ ತೋರಿಸಿದನು (ಲೂಕ.
4:14'18; ಮತ್ತಾ. 12:28). ನರಾವತಾರದಲ್ಲಿ ದೇವಕುಮಾರನು ತನ್ನ
ಸರ್ವಶಕ್ತತೆಯನ್ನು ಮರಳಿ ಪಡೆದುಕೊಂಡನು. ಆದರೆ ಪವಿತ್ರಾತ್ಮ ನ ಬಲದಿಂದ
ತಂದೆಯು ಆತನಿಗೆ ನೇಮಿಸಿದ ಜೀವಿತವನ್ನು ಜೀವಿಸಿದನು. ಆತನು ತನ್ನ ಸ್ವಂತ
ತೊಡಗಿಸಿಕೊಳ್ಲು ವುದರ ಅಥವಾ ತನ್ನ ಸ್ವಂತ ಬಲದ ಮೇಲೆ ಕಾರ್ಯಮಾಡಲಿಲ್ಲ .
5.. ಯೇಸು ಹೀಗೆಂದನು “ನನ್ನ ಪ್ರಾಣವನ್ನು ಕೊಡುವದಕ್ಕೆ ನನಗೆ ಅಧಿಕಾರ ಉಂಟು,
ಅದನ್ನು ತಿರಿಗಿ ಪಡಕೊಳ್ಳು ವದಕ್ಕೆ ನನಗೆ ಅಧಿಕಾರ ಉಂಟು” (ಯೋಹಾ. 10:18).
ಆದರೂ ಕ್ರಿಸ್ತನು ನಿತ್ಯಾತ್ಮ ನ ಮೂಲಕ ತನ್ನ ನ್ನು ತಾನೇ ಯಾವುದೇ ಕಳಂಕವಿಲ್ಲ ದವನಾಗಿ
ದೇವರಿಗೆ ಸಮರ್ಪಿಸಿಕೊಂಡನು (ಇಬ್ರಿ. 9:14).
6.. ತನ್ನ ಪ್ರಾಣವನ್ನು ಸಮರ್ಪಿಸಿಕೊಂಡ ನಂತರ ಅದನ್ನು ತಿರಿಗಿ ಪಡಕೊಳ್ಳು ವದಕ್ಕೆ ಕ್ರಿಸ್ತನಿಗೆ
ಅಧಿಕಾರ ಇದ್ದ ರೂ, ವಾಸ್ತವಾಂಶದಲ್ಲಿ ದೇವರು ಕ್ರಿಸ್ತನನ್ನು ಮರಣದಿಂದ ಎಬ್ಬಿಸಿದನು.
ಅದು ಅ.ಕೃ. 2:28 ಮತ್ತು ರೋಮಾ. 4:25 ಕ್ಕೆ ಅನುಸಾರವಾಗಿ 1 ಪೇತ್ರ 3;18 ರಲ್ಲಿ
ಕ್ರಿಸ್ತನು ಪವಿತ್ರಾತ್ಮ ನಿಂದ ತಿರಿಗಿ ಬದುಕುವವನಾದನು ಎಂದು ದಾಖಲಿಸಿದೆ
7. ಪವಿತ್ರಾತ್ಮ ನು ಮದುಮಗಳಿಗೆ ಮದುಮಗನಿಗಾಗಿ ಹಂಬಲಿಸುವಂತೆ ಪ್ರೇರೇಪಿಸುತ್ತಾನೆ
(ಪ್ರಕ. 22:17)
ಅರುಹನ್ನು ಹುಟ್ಟಿಸುವದು
ಅರುಹನ್ನು ಹುಟ್ಟಿಸುವದು ಲೋಕದ ಸಂಬಂಧದಲ್ಲಿ ಪವಿತ್ರಾತ್ನ ಕಾರ್ಯವಾಗಿದೆ.
ಆತನು ಪಾಪ, ನೀತಿ, ನ್ಯಾಯತತ್ಪ ರತೆಯ ವಿಷಯದಲ್ಲಿ ಲೋಕಕ್ಕೆ ಅರುಹನ್ನು ಹುಟ್ಟಿಸುತ್ತಾನೆ
(ಯೋಹಾ. 16:8-11). ಪವಿತ್ರಾತ್ಮ ನ ಕಾರ್ಯದಂತೆಯೇ ಜನರು ಅರುಹನ್ನು ಹೊಂದುವ
ಸ್ಥಿತಿಗೆ ತರಲ್ಪ ಡುವದನ್ನು ನೋಡಲು ಸಾದ್ಯ ವೆಂದು ನಿರೀಕ್ಷಿಸಬಹುದು. ಇದು ಎರಡು
ಮಿತಿಗಳನ್ನು ಒಳಗೊಂಡಿರುತ್ತದೆ. ದೇವರು ಮನುಷ್ಯ ನಿಗೆ ಉಚಿತವಾಗಿ
ಆಯ್ಕೆಮಾಡಿಕೊಳ್ಳು ವ ಹಕ್ಕ ನ್ನು ಕೊಟ್ಟಿರುವದರಿಂದ ದೇವರು ಇದಕ್ಕೆ ವಿರುದ್ಧ ವಾಗಿ
ಹೋಗುವದಿಲ್ಲ ಅಥವಾ ಮನುಷ್ಯ ನಿಗೆ ಅವನ ಚಿತ್ತಕ್ಕೆ ವಿರುದ್ಧ ವಾಗಿ ಬಲವಂತ ಮಾಡುವದಿಲ್ಲ .
ದೇವರ ಆತ್ಮ ನು ಮಿತಿ ಹೊಂದಿದವನು ಎಂದರೆ ಮನುಷ್ಯ ನ ಕಠಿಣ ಹೃದಯದ ಅರ್ಥದಲ್ಲಿ
ಹೇಳಿದ ಮಾತು. ಕೆಲಜನರು ಪವಿತ್ರಾತ್ಮ ನನ್ನು ಎದುರಿಸುತ್ತಾರೆ (ಅ.ಕೃ. 7:51). ಅಥವಾ
ಕೃಪೆಯ ಆತ್ಮ ನನ್ನು ಅವಮಾನ ಮಾಡುತ್ತಾರೆ (ಇಬ್ರಿ. 10:29). ಮತ್ತೊಂದೆಡೆ, ಪವಿತ್ರಾತ್ಮನು
84
ಮನುಷ್ಯ ನ ವಿವೇಕಹೀನ ವಿರೋಧ ಮತ್ತು ದಂಗೆಯನ್ನು ಮಿತಿಗೊಳಿಸತ್ತಾನೆ, ಮತ್ತು
ನಿರ್ಬಂದಿಸುತ್ತಾನೆ. ಪವಿತ್ರಾತ್ಮ ನು ಪ್ರಸ್ತು ತ ಸಭೆಯೊಳಗಿದ್ದು ವಿಶೇಷವಾದ ರೀತಿಯಲ್ಲಿ ಈ
ಲೋಕದಿಂದ ತೆಗೆದುಕೊಂಡುಹೋಗುವ ತನಕ ನಿಗ್ರಹಿಸುವ ಕಾರ್ಯವನ್ನು
ಮುಂದುವರಿಸುತ್ತಾನೆ. ಸರ್ವವ್ಯಾಪಿಯಾದ ದೇವರಾಗಿ, ಅಕ್ಷರಶಃ ಆತನು ತೆಗೆಯಲ್ಪ ಡುವದಿಲ್ಲ
(2 ಥೆಸ. 2:7).
ಪುನರ್ಜನ್ಮ
ಪಶ್ಚಾತ್ತಾಪಪಡುವ ವ್ಯ ಕ್ತಿಯ ಸಂಬಂಧದಲ್ಲಿ ಇದು ಪವಿತ್ರಾತ್ಮ ನ ಕಾರ್ಯವಾಗಿದೆ.
ಪವಿತ್ರಾತ್ಮ ನ ಅದ್ಭು ತವಾದ ಕಾರ್ಯದಿಂದ, ಕ್ರಿಸ್ತನನ್ನು ಸ್ವೀಕರಿಸುವ ಪ್ರತಿಯೊಬ್ಬ ನಿಗೂ ಅಂದರೆ
ಆತನ ಹೆಸರಿನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬ ನಿಗೂ ದೇವರ ಜೀವವು ಆವರಿಸುತ್ತದೆ
(ಯೋಹಾ. 1:12-13, 3:5-6). ಆದರೂ ಏನು ಹೊಂದಿದ್ದೇವೆ ಎನ್ನು ವ ಪರಿಜ್ಞಾನವಿಲ್ಲ ದೆ,
ಒಬ್ಬ ನು ಹೊಸದಾಗಿ ಆ ಕ್ಷಣದಲ್ಲಿ ಹುಟ್ಟು ತ್ತಾನೆ.. ಒಮ್ಮೆ ನಿತ್ಯ ಜೀವವು ಸ್ವೀಕರಿಸಲ್ಪ ಟ್ಟ ರೆ ಅದು
ಎಂದೆಂದಿಗೂ ನಷ್ಟ ವಾಗುವದಿಲ್ಲ .
ಪವಿತ್ರೀಕರಣ (ಶುದ್ಧೀಕರಣ)
ಇದು ವಿಶ್ವಾಸಿಯ ಸಂಬಂಧದಲ್ಲಿ ಪವಿತ್ರಾತ್ಮ ನ ಕಾರ್ಯವಾಗಿದೆ. ಈ ವಿಷಯವು
ಇಸಿಎಸ್ ಅದ್ಯ ಯನದ ೨ನೇ ಭಾಗವಾದ ರಕ್ಷಣಾಶಾಸ್ತ್ರದ ಪಾಠಗಳಲ್ಲಿ ಹೆಚ್ಚು ಪೂರ್ಣವಾಗಿ
ಅಭಿವೃದ್ಧಿಪಡಿಸಲಾಗಿದೆ. ಆದರೆ ಇಲ್ಲಿ ಪವಿತ್ರಾತ್ಮ ನ ಮೂಲಭೂತ ಚಟುವಟಿಕೆಗೆ ಸೇರಿದ್ದಾಗಿದೆ.
ಒಬ್ಬ ವ್ಯ ಕ್ತಿಯು ಹೊಸದಾಗಿ ಹುಟ್ಟಿದಾಗ, ಆತನು ಶುದ್ಧೀಕರಣ ಹೊಂದುತ್ತಾನೆ, ದೇವರಿಗಾಗಿ
ಪ್ರತ್ಯೇಕಿಸಲ್ಪ ಡುತ್ತಾನೆ. ಇದು ಒಂದೇ ಸಾರಿ ಸಂಭವಿಸುತ್ತದೆ. ಆದರೆ ಇದು ವಿಶ್ವಾಸಿಯ ಉಳಿದ
ಜೀವಿತದಲ್ಲಿ ಅನುದಿನವೂ ನಡೆಯುವ ಪ್ರಕ್ರಿಯೆಯಾಗಿರುತ್ತದೆ. ಸ್ಥಾನೀಯ ಶುದ್ಧೀಕರಣ
ಮತ್ತು ಪ್ರಯೋಗಿಕ ಶುದ್ಧೀಕರನಗಳೆರೆಡೂ ಪವಿತ್ರಾತ್ಮ ನ ಕಾರ್ಯವಾಗಿದೆ (1 ಪೇತ್ರ. 1:2).
ಅನುದಿನದ ಶುದ್ಧೀಕರಣದ ಕಾರ್ಯವು ಕ್ರಿಸ್ತನ ಕಾರ್ಯವಾಗಿದೆ (ಎಫೆ. 5:26). ಈ
ಕಾರ್ಯವನ್ನು ಮಾಡಿ ನೆರವೇರಿಸುವದಕ್ಕಾಗಿ ಪವಿತ್ರಾತ್ಮ ನು ಪ್ರತಿಯೊಬ್ಬ ವಿಶ್ವಾಸಿಯಲ್ಲಿಯೂ
ಶಾಶ್ವ ತವಾಗಿ ನೆಲೆಸಿರುತ್ತಾನೆ (1 ಯೋಹಾ2:27), ಮತ್ತು ಅವರ ಜೀವಿತದಲ್ಲಿ ಫಲವನ್ನು
ಉಂಟುಮಾಡುತ್ತಾನೆ (ಗಲಾ5:22). ಹಾಗೂ ಪ್ರತಿಯೊಬ್ಬ ನನ್ನೂ ತುಂಬಿರಬೇಕೆಂದು
ಬಯಸುತ್ತಾನೆ (ಎಫೆ. 5:18). ನಿಜವಾದ ದೇವರ ಮಗನಿಗೂ ಸಹ ಪವಿತ್ರಾತ್ಮ ನ
ಕಾರ್ಯಗಳನ್ನು ಅಡ್ಡಿಪಡಿಸಲು ಸಾಧ್ಯ ವಿದೆ. ಪವಿತ್ರಾತ್ಮ ನನ್ನು ದುಃಖಪಡಿಸುವದರ ವಿರುದ್ಧ
85
ದೇವರ ವಾಕ್ಯ ವು ಎಚ್ಚ ರಿಸುತ್ತದೆ (ಎಫೆ. 4:30). ಹಾಗೂ ಪವಿತ್ರಾತ್ಮ ನನ್ನು ನಂದಿಸುವದರ
ವಿರುದ್ಧ ವೂ ಎಚ್ಚ ರಿಸುತ್ತದೆ (1 ಥೆಸ 5:19).
86
ಇದಕ್ಕಿಂತ ಭಿನ್ನ ವಾಗಿರುವದೇ ಈ ಪವಿತ್ರಾತ್ಮ ನಿಂದ ತುಂಬಿಸಲ್ಪ ಡುವದು ಇದು ನಿಬಂಧನೆಗೆ
ಅಂದರೆ ಶರತ್ತು ಬದ್ಧ ತೆಗಳಿಗೆ ಒಳಪಡುತ್ತದೆ. ಇದು ವಿಶ್ವಾಸಿಯು ಅನುದಿನವೂ ತನಗೆ ತಿಳಿದ
ಪಾಪಗಳನ್ನು ಅರಿಕೆಮಾಡಿ ತಂದೆ ಮಗ ಪವಿತ್ರಾತ್ಮ ನಿಗೆ ಸಂಪೂರ್ಣವಾಗಿ
ಅಧೀನರಾಗಿರುವದರ ಮೇಲೆ ಅವಲಂಭಿತವಾಗಿರುತ್ತದೆ. 1 ಕೊರಿ. 12:13 ರಲ್ಲಿ ನಾವು
(ವಿಶ್ವಾಸಿಗಳು) ಒಂದೇ ದೇಹವಾಗುವದಕ್ಕಾಗಿ ಒಂದೇ ಆತ್ಮ ದಲ್ಲಿ ದೀಕ್ಷಾಸ್ನಾನ
ಮಾಡಿಸಿಕೊಂಡೆವು ಎಂದು ಪೌಲನು ಹೇಳುತ್ತಾನೆ, ಆದರೆ ಎಫೆಸ: 5:18 ರಲ್ಲಿ
ಪವಿತ್ರಾತ್ಮ ಭರಿತರಾಗರ್ರಿ (ಅಕ್ಷರಶಃ ಪವಿತ್ರಾತ್ಮ ನಿಂದ ತುಂಬಿಸಲ್ಪ ಟ್ಟ ರ್ರಿ) ಮತ್ತು ಪವಿತ್ರಾತ್ಮ ನ
ಫಲವನ್ನು (ಗಲಾ5:22-23) ಕೊಡುವವರಾಗರ್ರಿ ಎಂದು ಬುದ್ದಿಮಾತು ಹೇಳುತ್ತಾನೆ. ನಾವು
ಅನುದಿನವೂ ಪವಿತ್ರಾತ್ಮ ನ ಕಾರ್ಯಾಚಾರಣೆಗೆ ಅಧೀನರಾಗಿರಬೇಕೆಂದು ದೇವರ ಆತ್ಮ ನು
ಹಂಬಲಿಸುತ್ತಾನೆ. ಹಾಗೆ ಮಾಡಲು ನಾವು ಪವಿತ್ರಾತ್ಮ ನಿಗೆ ಅವಕಾಶ ಕೊಡೋಣ.
87
ನಮ್ಮ ಜೀವಿತದ ಮೇಲೆ ಪವಿತ್ರಾತ್ಮ ನಿಯಂತ್ರಣ ಮತ್ತು ಶಕ್ತಿಗೆ ಅಧೀನರಾಗಬೇಕಾದ
ಜವಬ್ಧಾರಿಕೆವುಳ್ಳ ವರಾಗಿರುತ್ತೇವೆ ಎಂಬುದನ್ನು ನಾವು ನೆನಪಿನಲ್ಲಿಟ್ಟು ಕೊಳ್ಳ ಬೇಕು.
ಮೂಲಭೂತ
ಸತ್ಯ ವೇದಸಿದ್ಧಾಂತಗಳು
ಭಾಗ - 1
ಪರೀಕ್ಷೆ
88
ಅಧ್ಯಾಯ 1 ರ ಪರೀಕ್ಷೆ
ಸತ್ಯ ವೇದಶಾಸ್ತ್ರ – ಭಾಗ 1
2. ದೇವರ ಕುರಿತಾದ ಪಾಠದಲ್ಲಿ ದೇವರು ತನ್ನ ನ್ನು ಲಿಖಿತ ರೂಪದಲ್ಲಿ ಪ್ರಕಟಿಸಿಕೊಳ್ಳ ಲು ಇದ್ದ
ಒಂದು ಕಾರಣವೆಂದರೆ
89
A. ದೇವರು ತಾನೆಷ್ಟು ಶ್ರೇಷ್ಠ ನೆಂದು ತೋರಿಸಿಕೊಡಲು
B. ನಮ್ಮಿಂದ ದೇವರು ಏನನ್ನು ಅಪೇಕ್ಷಿಸುತ್ತಾನೆಂದು ನಾವು ತಿಳಿದುಕೊಳ್ಳು ವಂತೆ
ಆತನ ಚಿತ್ತವನ್ನು ಸಂಪರ್ಕಿಸಲು
C. ಆತನು ಹೇಗೆ ಮಾನವನಾಗಿದ್ದಾನೆಂದು ತೋರಿಸಿಕೊಡಲು
D. ದೇವರನ್ನು ವೈಯಕ್ತಿಕವಾಗಿ ತಿಳಿದುಕೊಳ್ಳು ವದು ಎಷ್ಟ ರ ಮಟ್ಟಿಗೆ ಅಸಾಧ್ಯ
ಎಂಬುದನ್ನು ತಿಳಿಸಿಕೊಡಲು ____
90
D . ಇವು ದೇವರಿಂದ ಬಂದ ನೇರವಾದ ಮಾತುಗಳು ಮತ್ತು ಖಂಡಿತವಾದ
ಉದ್ದೇಶವನ್ನು ಹೊಂದಿವೆ
91
ನೀವು ಏನನ್ನು ಹೇಳುವಿರಿ?
ಸತ್ಯ ವೇದಲ್ಲಿರುವ ದೇವರ ಕುರಿತಾದ ಪ್ರಕಟನೆಯು ನಿಮ್ಮ ಮೇಲೆ ವೈಯುಕ್ತಿಕವಾಗಿ ಹೇಗೆ
ಪರಿಣಾಮ ಬೀರಿದೆ?
ಅಧ್ಯಾಯ 2 ರ ಪರೀಕ್ಷೆ
ಸತ್ಯ ವೇದಶಾಸ್ತ್ರ – ಭಾಗ 2
92
D . ಅವು ಓದಲು ಸುಲಭವಾಗಿದೆಯೋ
93
D . ಈ ಬೋಧನೆಗಳು ಬರೆಯಲ್ಪ ಟ್ಟ ಕಾಲಕ್ಕ ನುಸಾರವಾಗಿ ವಿಭಿನ್ನ ವಾಗಿವೆ
9. ಹಳೆ ಒಡಂಬಡಿಕೆಯ ಹೆಚ್ಚು ಭಾಗವು ________ ನಲ್ಲಿ ಬರೆಯಲ್ಪ ಟ್ಟಿತು, ಆದರೆ ಹೊಸ
ಒಡಂಬಡಿಕೆಯು ________ ನಲ್ಲಿ ಬರೆಯಲ್ಪ ಟ್ಟಿತು.
A. ಗ್ರೀಕ್ / ಲ್ಯಾ ಟಿನ್
B. ಅರಾಮಿಕ್ / ಗ್ರೀಕ್
C. ಇಬ್ರೀಯ / ಗ್ರೀಕ್
D. ಇಬ್ರೀಯ / ಲ್ಯಾ ಟಿನ್
94
10. ನಾವು ಶಾಸ್ತ್ರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳ ಲು ಯಾರು ನಮ್ಮ
ಮನೊನೇತ್ರಗಳನ್ನು ಬೆಳಗಿಸಬೇಕು
A. ಒಬ್ಬ ಪ್ರಾಮುಖ್ಯ ನಾದ ವಿದ್ವಾಂಸನು
B. ಪವಿತ್ರಾತ್ಮ ನು
C. ನಿಮಗೆ ಇಷ್ಟ ವಾದ ವ್ಯಾಖ್ಯಾನಕಾರನು
D. ನಿಮ್ಮ ಸಭೆ
95
ಅಧ್ಯಾಯ 3 ರ ಪರೀಕ್ಷೆ
ದೇವರ ಶಾಸ್ತ್ರ – ಭಾಗ 1
ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ. ನಿಮಗೆ
ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.
3. ಅಪೋಸ್ತಲರ ಕೃತ್ಯ ಗಳು 17:28-29 ರಲ್ಲಿ ದೇವರ ಅಸ್ತಿತ್ವ ಕ್ಕೆ ಯಾವ ವಾದದ
ಪ್ರತಿರೂಪವಾಗಿದೆ
A. ಮಾನವ ಶಾಸ್ತ್ರೀಯ
B. ದೂರಸಂಪರ್ಕ ನೀತಿಶಾಸ್ತ್ರ
C. ಮೂಲ ತತ್ವ ಶಾಸ್ತ್ರ
D. ವಿಶ್ವ ರಚನಾಶಾಸ್ತ್ರ
96
A. ಅವನು ತಾರ್ಕಿಕವಾಗಿ ಆಲೋಚಿಸುವುದನ್ನು ನಿರಾಕರಿಸುವುದು
B. ಇತರರ ಅಭಿಪ್ರಾಯಗಳನ್ನು ಕೇಳುವುದು
C. ದೇವರ ಅಧ್ಯ ಯನಕ್ಕೆ ತನನ್ನು ಸಮರ್ಪಿಸುವುದು
D. ಒಂದೇ ಸಾರಿ ಪ್ರತಿಯೊಂದನ್ನು ತಿಳುಕೊಳ್ಳು ವುದು ಮತ್ತು ಪ್ರತಿಯೊಂದು
ಸ್ಥ ಳದಲ್ಲೂ ಇರುವುದು
8. ದೇವರ ನ್ಯಾಯವು
A. ಮನಸ್ಸು ಬಂದಂತೆ ಮಾಡಿರುವುದಾಗಿದೆ
B. ಅನಗತ್ಯ ವಾಗಿ ಕಠಿಣವಾಗಿದೆ
C. ನಿಷ್ಪ ಕ್ಷಪಾತ ಮತ್ತು ಯೋಗ್ಯ ವಾಗಿದೆ
97
D. ಶಾಸ್ತ್ರದಲ್ಲಿ ಹೆಚ್ಚು ಒಟ್ಟು ಕೊಡಲ್ಪ ಟ್ಟಿದೆ
ಅಧ್ಯಾಯ 4 ರ ಪರೀಕ್ಷೆ
ದೇವರ ಶಾಸ್ತ್ರ – ಭಾಗ 2
ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ. ನಿಮಗೆ
ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.
98
C. ಕ್ರಿಸ್ತನಲ್ಲಿರುವ ವಿಶ್ವಾಸಿಗಳು ಹೊಂದುವಂತೆ ಅವರಿಗೆ ತಿಳಿಸಲ್ಪ ಟ್ಟ ವು
D. ಮನುಷ್ಯ ನು ಹೊಂದುವಂತೆ ತಿಳಿಸಲು ಸಾಧ್ಯ ವಿಲ್ಲ
99
6. ತ್ರಯೇಕತ್ವ ವು ಹೀಗೆ ವಿವರಿಸಲ್ಪ ಟ್ಟಿದೆ
A. ಸಮಾನ ಶಕ್ತಿಯುಳ್ಳ ಮೂರು ದೇವರುಗಳು
B. ಅನೇಕ ಸಮಾನ ಗುಣಲಕ್ಷಣಗಳುಳ್ಳ ಮೂರು ದೇವರುಗಳು
C. ದೈವತ್ವ ದ ಏಕತೆಯಲ್ಲಿ ಮೂರು ಸಹ - ಸಮಾನ ಮತ್ತು ಸಹ - ನಿತ್ಯ ವ್ಯ ಕ್ತಿಗಳು
D. ವಿಶ್ವ ದ ಆಡಳಿತವನ್ನು ಹಂಚಿಕೊಳ್ಳು ವ ಮೂರು ವಿಭಿನ್ನ ವ್ಯ ಕ್ತಿಗಳು
100
ನೀವು ಏನನ್ನು ಹೇಳುವಿರಿ?
ನೀನು ದೇವರನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳು ವಂತೆ ಈ ಪಾಠವು ಹೇಗೆ
ಸಹಾಯಿಸಿತು ?
ಅಧ್ಯಾಯ 5 ರ ಪರೀಕ್ಷೆ
ಕ್ರಿಸ್ತ ಶಾಸ್ತ್ರ – ಭಾಗ 1
ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ. ನಿಮಗೆ
ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.
101
D. ಈ ಮೇಲಿರುವ ಎಲ್ಲ ರಿಗು
102
7. ಯೇಸು ಕ್ರಿಸ್ತನು ದೇವರು ಎಂದು ಹೇಳಲು ಒಂದು ಮಾರ್ಗ
A. ಆತನನ್ನು ಹಿಂಬಾಲಿಸಿದವರಲ್ಲಿ ಅನೇಕ ಮಂದಿಯನ್ನು ಎಣಿಸಿನೋಡುವುದು
B. ಹಳೆಯ ಒಡಂಬಡಿಕೆಯಲ್ಲಿ ದೇವರಿಗೆ :ಕರ್ತನು" ಎಂಬುದಾಗಿ
ಕರೆಯಲ್ಪ ಟ್ಟಿರುವ ಹೆಸರುಗಳ ಸಂಖ್ಯೆಯನ್ನು ಹೋಲಿಸಿ ನೋಡುವುದು
C. ಆತನನ್ನು ಸೂಚಿಸುವ ಹಳೆಯ ಒಡಂಬಡಿಕೆ ಮತ್ತು ಹೋದ ಒಡಂಬಡಿಕೆಯ
ಪಠ್ಯ ಗಳನ್ನು ಹೋಲಿಸಿ ನೋಡುವುದು (ಉದಾಹರಣೆಗೆ: ಯೆಶಾಯ 40:3 ಮತ್ತು
ಮತ್ತಾಯ 3:3).
D. ಆತನು ಹಾಗೆ ಹೇಳಿದ್ದ ರಿಂದ ಆತನು ದೇವರೆಂದು ಊಹಿಸಿಕೊಳ್ಳು ವುದು
103
ನೀವು ಏನನ್ನು ಹೇಳುವಿರಿ?
ಕ್ರಿಸ್ತನ ಕುರಿತಾಗಿ ಎಂದು ಕೇಳದ ವ್ಯ ಕ್ತಿಗೆ ಆತನನ್ನು ಹೇಗೆ ವಿವರಿಸುವಿರಿ ಎಂದು ಒಂದು
ಅಥವಾ ಎರಡು ಹೇಳಿಕೆಗಳಲ್ಲಿ ಬರೆಯಿರಿ ? ಈ ಪಾಠದಲ್ಲಿ ನೀಡಲ್ಪ ಟ್ಟಿರುವ
ಮಾಹಿತಿಯೊಂದಿಗೆ ನಿಮ್ಮ ನ್ನು ಮಿತಿಗೊಳಿಸಿರಿ.
ಅಧ್ಯಾಯ 6 ರ ಪರೀಕ್ಷೆ
ಕ್ರಿಸ್ತ ಶಾಸ್ತ್ರ – ಭಾಗ 2
ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ. ನಿಮಗೆ
ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.
104
A. ಒಡೆಯ
B. ಯೆಹೋವ
C. ಎಲೋಹಿಮ್
D. ಇಮ್ಮಾನುವೆಲ್
105
C. ಒಂದು ವೇಳೆ ಆತನು ಪಾಪಮಾಡಲು ಸಾಧ್ಯ ವಾಗಿದ್ದ ರೆ ಆತನಿಗೆ ಬಂದ
ಶೋಧನೆಯು ಅರ್ಥವಿಲ್ಲ ದ್ದಿರುತ್ತಿತ್ತು
D. ಆತನು ಪಾಪ ಮಾಡಲು ಸಾಧ್ಯ ವೋ ಅಥವಾ ಪಾಪ ಮಾಡಲು
ಮಾಡುತ್ತಾನೋ ಎಂದು ಕಂಡು ಹಿಡಿಯಲು ದೇವರು ಆತನನ್ನು
ಪರೀಕ್ಷಿಸುತ್ತಿದ್ದ ನು
106
ನಿಮ್ಮ ಸಹೋದ್ಯೋಗಿಯೊಂದಿಗೆ ಊಟದ ಸಮಯದಲ್ಲಿ ಆಗುವ ಸಂಭಾಷಣೆಯು ಆ ವ್ಯ ಕ್ತಿ
ಯೇಸು ಕ್ರಿಸ್ತನು ಕೇವಲ ಒಳ್ಳೆಯ ವ್ಯ ಕ್ತಿ ಎಂದು ನಂಬುವುದಾಗಿ ತಿಳಿಸುತ್ತದೆ. ನೀವು ಈಗ
ಕಲಿತಿರುವ ಪಾಠದಿಂದ ಆ ವ್ಯ ಕ್ತಿಗೆ ಹೇಗೆ ಉತ್ತರಿಸುವಿರಿ(ಸಂಕ್ಷಿಪ್ತವಾಗಿ) ?
ಅಧ್ಯಾಯ 7 ರ ಪರೀಕ್ಷೆ
ಕ್ರಿಸ್ತ ಶಾಸ್ತ್ರ – ಭಾಗ 3
ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ. ನಿಮಗೆ
ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.
107
4. ಕ್ರಿಸ್ತನು ಸ್ವ ರ್ಗಾರೋಹಣಕ್ಕೆ ಮುಂಚೆ ತನ್ನ ಶಿಷ್ಯ ರಿಗೆ ಹೇಳಿದ ಕೊನೆಯ ಮಾತುಗಳು
A. ಭೂಪರಲೋಕಗಳಲ್ಲಿ ಎಲ್ಲಾ ಅಧಿಕಾರವು ನನಗೆ ಕೊಡಲ್ಪ ಟ್ಟಿದೆ
B.ಒಬ್ಬ ರನ್ನೊಬ್ಬ ರು ಪ್ರೀತಿಸಿರಿ
C. ನೀವು ನನಗೆ ಯೆರೂಸಲೇಮಿನಲ್ಲಿಯೂ... ಮತ್ತು ಭೂಲೋಕದ
ಕಟ್ಟ ಕಡೆಯವರೆಗೆ ಸಾಕ್ಷಿಗಳಾಗಿರುವಿರಿ
D. ದೇವರು ನಿಮ್ಮೊಂದಿಗಿರುತ್ತಾನೆ
108
C. 1 ಪೇತ್ರ 5:4.
D. ಇಬ್ರಿಯ 13:20.
ಅಧ್ಯಾಯ 8 ರ ಪರೀಕ್ಷೆ
ಪವಿತ್ರಾತ್ಮ ಶಾಸ್ತ್ರ
ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ. ನಿಮಗೆ
ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.
109
1. ಕೆಲವು ಸತ್ಯ ವೇದ ಭಾಗಗಳಲ್ಲಿ ಪವಿತ್ರಾತ್ಮ ನನ್ನು "ಅದು" ಎಂದು ಸೂಚಿಸಲಾಗಿದೆ. ಇದಕ್ಕೆ
ಕಾರಣ
A. ಪವಿತ್ರಾತ್ಮ ನು ನಿಜವಾದ ವ್ಯ ಕ್ತಿತ್ವ ವಿಲ್ಲ ದ ಒಂದು ದೈವಿಕ ಪರಿಣಾಮ ಅಥವಾ ಶಕ್ತಿ
B. ಅಂತಹ ಭಾಗಗಳ ಅನುವಾದವು ತಪ್ಪಾಗಿದೆ ಮತ್ತು ಅವು ಮೂಲ ಭಾಷೆಯ
ಸ್ವಾತಂತ್ರವನ್ನು ಉಪಯೋಗಿಸುತ್ತವೆ
C. ಅಂತಹ ಭಾಗಗಳಲ್ಲಿ ಮೂಲ ದಾಖಲೆಗಳು ತಪ್ಪಾಗಿದೆ
D. ಇಲ್ಲಿ ಗ್ರೀಕ್ ಪದವು ನಪುಂಸಕ ಲಿಂಗದಲ್ಲಿದೆ
2. ಈ ಕೆಳಗಿನ ಯಾವ ಭಾಗಗಳಲ್ಲಿ ಪವಿತ್ರಾತ್ಮ ನು "ನಿತ್ಯ ದ ಆತ್ಮ " ನೆಂದು ಕರೆಯಲ್ಪ ಟ್ಟಿದ್ದಾನೆ
A. ಮತ್ತಾಯ 28:19
B. ಲೂಕ 11:13
C. 2 ಕೊರಿ. 13:14.
D. ಇಬ್ರಿಯ 9:14.
4. ಪ್ರಕಟಣೆ 3:1 ರಲ್ಲಿರುವ "ದೇವರ ಏಳು ಆತ್ಮ ಗಳು" ಎಂಬ ಅಭಿವ್ಯ ಕ್ತಿಯು
A. ಏಳು ದೇವದೂತ ಜೀವಿಗಳನ್ನು ಸೂಚಿಸುತ್ತಿದೆ, ಪವಿತ್ರಾತ್ಮ ನನ್ನ ಲ್ಲ
B. ಅಸಂಖ್ಯಾತ ದೈವಿಕ ಆತ್ಮ ಗಳು ಉಂಟು ಎಂಬ ಪರಿಕಲ್ಪ ನೆಗೆ ತೂಕವನ್ನು
ಹೆಚ್ಚಿಸುತ್ತದೆ
C. ಪವಿತ್ರಾತ್ಮ ನನ್ನು ಆತನ ವಿವರಣೆಯ ಸಂಪೂರ್ಣತೆಯಲ್ಲಿ ತಿಳಿಸುತ್ತದೆ
D. ಕೇವಲ ಒಂದೇ ಒಂದು ದೈವಿಕ ಆತ್ಮ ವಿದೆ ಎಂದು ಹೇಳು ಇತರ ಶಾಸ್ತ್ರದ
ಭಾಗಗಳಿಗೆ ತದ್ವಿರುದ್ಧ ವಾಗಿದೆ
110
A. ಲೋಕದ ಸೃಷ್ಟಿ
B. ಅನನೀಯನ ಪಾಪ
C. ಕನ್ನಿಕೆಯಲ್ಲಿ ಕರ್ತನಾದ ಯೇಸುಕ್ರಿಸ್ತನ ಜನನ
D. ಪಂಚಾಶತ್ತಮ ದಿನದಂದು ಸಭೆಯ ಜನನ
111
10. ಈ ಕೆಳಗಿನವುಗಳಲ್ಲಿ ಯಾವ ಸೇವೆಯು ವಿಶ್ವಾಸಿಯ ಪ್ರಾಣದ ಸ್ಥಿತಿಯ ಮೇಲೆ
ಆಧಾರಗೊಂಡು ಪವಿತ್ರಾತ್ಮ ನಿಂದ ನಿರ್ಬಂಧಕ್ಕೊಳಗಾಗಿದೆ
A. ಮುದ್ರೆ ಹಾಕುವುದು
B. ಸಂಚಾಕಾರ ಮಾಡುವುದು
C. ಭರಿತರನ್ನಾಗಿ ಮಾಡುವುದು
D. ದೀಕ್ಷಾಸ್ನಾನ ಮಾಡಿಸುವುದು
ಮೂಲಭೂತ
ಸತ್ಯ ವೇದಸಿದ್ಧಾಂತಗಳು
112
ಭಾಗ - 2
ಪಾಠಗಳು
ಆರ್. ಇ. ಹಾರ್ಲೋ
ಅನುವಾದ / ಭಾಷಾಂತರ :
ಸಹೋ. ಸೈಮನ್ ಎಸ್
ಪ್ರಕಾಶಕರು
ಎಮ್ಮಾಹುಸ್ ಅಂಚೆ ತೆರಪಿನ ಶಾಲೆ
113
ಪಿ ಎಸ್ ಬಿ ಎನ್ ೯೭೮ -೦-೯೪೦೨೯೩-೨೮-೧
ಸಂಕೇಥ ಎಚ್ ಎಸ್ ಡಬ್ಲು ö್ಯ
ಕೃತಿಸ್ವಾಮ್ಯ ೧೯೫೭, ೧೯೭೨, ೨೦೦೫, ೨೦೦೮, ಇಸಿಎಸ್ ಮಿನಿಸ್ಟೀಸ್
ಈ ಎಲ್ಲಾ ವಾಕ್ಯ ಭಾಗಗಳನ್ನು (ಸೂಚಿಸಲ್ಪ ಟ್ಟಿರುವುದಾದದರೆ ಹೊರತು) ನ್ಯೂ ಕಿಂಗ್ ಜೇಮ್ಸ್ ವರ್ಷನ್
ನಿಂದ ತೆಗೆದುಕೊಳ್ಳ ಲಾಗಿದೆ. ಕೃತಿಸ್ವಾಮ್ಯ ೧೯೭೯. ೧೯೮೦, ೧೯೮೨ ಥಾಮಸ್ ನೆಲ್ ಸನ್
ಅಪ್ಪ ಣೆಯಿಂದ ಉಪಯೋಗಿಸಲ್ಪ ಟ್ಟಿದೆ. ಎಲ್ಲಾ ಹಕ್ಕು ಗಳನ್ನು ಕಾಯ್ದಿರಿಸಲಾಗಿದೆ.
ಅಧ್ಯಾಯ
1
ದೇವದೂತ ಶಾಸ್ತ್ರ:
ದೇವದೂತರ ಅಧ್ಯ ಯನ
ಹಳೆಯ ಮತ್ತು ಹೊಸ ಒಡಂಬಡಿಕೆ ಎರಡರಲ್ಲೂ ದೇವದೂತ ಅಂದರೆ ಸರಳವಾಗಿ "
ಸಂದೇಶಕ", ಎಂದು ಅರ್ಥ. ದೇವರನ್ನು ಅಥವಾ ಸೈತಾನನನ್ನು ಸೇವಿಸುವ ಈ ಆತ್ಮೀಕ
ಜೀವಿಗಳಿಗೆ ಇದು ವಿಶೇಷವಾದ ಪದಬಳಕೆಯಾಗಿದೆ. ಇದೇ ಅರ್ಥದಲ್ಲೇ ನಾವು ಆ
ಪದಪ್ರಯೋಗವನ್ನು ಉಪಯೋಗಿಸಿದ್ದೇವೆ.
ದೇವದೂತರ ಆರಂಭ
114
ದೇವದೂತರು ಎಲ್ಲಿಂದ ಬಂದವರು? ಅವರು ನೋಡಲು ಹೇಗಿರುತ್ತಾರೆ?
ಯಾವ ಯಾವ ಬಗೆಯ ದೇವದೂತರಿದ್ದಾರೆ? ದೇವರು ದೇವದೂತರನ್ನು ಸೃಷ್ಟಿಸಿದನು.
ಯೋಹಾನನು ಯೋಹಾ 1:3 ರಲ್ಲಿ "ಆತನ ಮೂಲಕವಾಗಿ ಸಮಸ್ತವು ಉಂಟಾಯಿತು;[
ದೇವಕುಮಾರನು, ವಾಕ್ಯ , ಕ್ರಿಸ್ತನು]" ಎಂದು ಹೇಳುತ್ತಾನೆ. ಪೌಲನು ಇನ್ನೂ ಸ್ಪ ಷ್ಟ ವಾಗಿ
ಹೇಳಿದ್ದಾನೆ: "ಭೂಪರಲೋಕಗಳಲ್ಲಿರುವ ದೃಶ್ಯಾದೃಶ್ಯ ವಾದವುಗಳೆಲ್ಲ ವೂ ಸಿಂಹಾಸನಗಳಾಗಲಿ
ಪ್ರಭುತ್ವ ಗಳಾಗಲಿ ದೊರೆತನಗಳಾಗಲಿ ಅಧಿಕಾರಗಳಾಗಲಿ ಆತನಲ್ಲಿ ಸೃಷ್ಟಿಸಲ್ಪ ಟ್ಟ ವು. ಸರ್ವವು
ಆತನ ಮುಖಾಂತರವಾಗಿಯೂ ಆತನಿಗೋಸ್ಕ ರವಾಗಿಯೂ
ಸೃಷ್ಟಿಸಲ್ಪ ಟ್ಟಿತು"(ಕೊಲೊ.1:16).
115
ದೇಹಗಳನ್ನು ಹೊಂದಿಲ್ಲ ಮತ್ತು ಸಾಮಾನ್ಯ ವಾಗಿ ಮನುಷ್ಯ ರಿಗೆ ಕಾಣಿಸುವುದಿಲ್ಲ . "ಆತ್ಮ ಕ್ಕೆ
ಮಾಂಸವು ಎಲುಬೂ ಇರುವುದಿಲ್ಲ (ಲೂಕ 24:39). ಕೆಲವೊಮ್ಮೆ, ದೇವದೂತರು ಮನುಷ್ಯ
ರೂಪದಲ್ಲಿ ಜನರಿಗೆ ಕಾಣಿಸಿಕೊಂಡಿದ್ದಾರೆ ( ಆದಿ. 19:1, 5; ಇಬ್ರಿ.13:2). ದೇವದೂತರು
ಅಧಿಕಾರದಲ್ಲೂ ಮತ್ತು ಶಕ್ತಿಯಲ್ಲೂ ಮನುಷ್ಯ ರಿಗಿಂತ ಶ್ರೇಷ್ಠ ರು. ಶ್ರೇಣಿಯಲ್ಲಿ, ಮನುಷ್ಯ ನು
ದೇವದೂತರಿಗಿಂತ ಸ್ವ ಲ್ಪ ಕಡಿಮೆಯಾಗಿ ಮಾಡಲ್ಪ ಟ್ಟಿದ್ದಾನೆ (ಕೀರ್ತ. 8:5). ಇಬ್ರಿಯ 2:9 ರಿಂದ
ದೇವದೂತರು ಅನಂತರು ಎಂಬುದು ಕಂಡುಬರುತ್ತದೆ— ಅಂದರೆ , ಮನುಷ್ಯ ರ ಹಾಗೆ
ಅವರು ಸಾಯುವುದಿಲ್ಲ . ಅದು ಮಾತ್ರವಲ್ಲ ದೆ ದೇವದೂತರು, ವೈಯುಕ್ತಿಕ ಆತ್ಮ ಗಳು,
ದೇವರನ್ನು ಸೇವಿಸುವುದಕ್ಕಾಗಿ ಆತನಿಂದ ಪಾಪವಿಲ್ಲ ದವರಾಗಿ ಸೃಷ್ಟಿಸಲ್ಪ ಟ್ಟ ವರು.
116
ಕಾಣಬರುವ ಕೆಲವು ಭಾಗಗಳಲ್ಲಿ ಈ ದೇವದೂತನು ಅಥವಾ "ಸಂದೇಶಕನು"
ದೈವಿಕವಾದವನು ಎಂಬುದು ಸ್ಪ ಷ್ಟ ವಾಗಿ ಕಂಡುಬರುತ್ತದೆ (ಉದಾ. ಆದಿ. 16:11, 13 ;
ವಿಮೋ. 3:2, 4). ಈ ರೀತಿಯ ಎಲ್ಲಾ ಭಾಗಗಳನ್ನು ಎಚ್ಚ ರಿಕೆಯಿಂದ ಅಧ್ಯ ಯನ
ಮಾಡುವದಾದರೆ ಈ ಯೆಹೋವನ ದೂತನೇ ನರಾವತಾರಕ್ಕೆ ಮೊದಲು ಕಾಣಿಸಿಕೊಂಡ
ಕರ್ತನಾದ ಯೇಸುಕ್ರಿಸ್ತನು ಅಥವಾ ದೈವತ್ವ ದ ಗೋಚರ ಅಭಿವ್ಯ ಕ್ತಿ ಎಂಬುದು
ಪ್ರಕಟವಾಗುತ್ತದೆ. ದೇವರ ಪ್ರಕಟನೆಯಾಗಿ (ಯೋಹಾನ 1:18), ತ್ರಯೇಕತ್ವ ದ ಎರಡನೇ
ವ್ಯ ಕ್ತಿಯೇ ದೇವರನ್ನು ಹಳೆಯಒಡಂಬಡಿಕೆಯಲ್ಲೂ ಪ್ರಕಟಪಡಿಸ ಬೇಕಾದವನು ಎಂಬುದು
ಸೂಕ್ತವಾಗಿ ಹೋಲುತ್ತದೆ. ಎಂತಹಾ ಅದ್ಭು ತ, ನರಾವತಾರದಲ್ಲಿ ದಾಸನ ರೂಪ ಧರಿಸಲು
ಬಯಸಿದಾತನು, ನರಾವತಾರಕ್ಕೆ ಮುಂಚೆ, ಕರ್ತನ ದೂತನಾಗಿ ಕಾರ್ಯಮಾಡಲು
ಬಯಸಿದ್ದಾನೆ.
117
ಮಾಡಲು ಸಿದ್ಧ ರಿದ್ದ ರು (ಮತ್ತಾ. 26:53). ಆತನ ಪುನರುತ್ಥಾನದ ಸಮಯದಲ್ಲಿ ಸಾಕ್ಷಿಗಳು
ಸಮಾಧಿಯನ್ನು ಪ್ರವೇಶಿಸಲು ಸಹಾಯವಾಗುವಂತೆ ಬಂಡೆಯ ಕಲ್ಲ ನ್ನು ಉರುಳಿಸಿದರು
(ಕ್ರಿಸ್ತನು ಈಗಾಗಲೇ ಎದ್ದಿದ್ದ ನು ಮತ್ತಾ. 28:2-4). ಅವರು ಪುನರುತ್ಥಾನದ ಸಾಕ್ಷಿಗಳನ್ನು
ಭದ್ರವಾಗಿರಿಸಿದರು (ಯೋಹಾನ 20:12-13) ಮತ್ತು ಯೇಸುವಿನ ಹಿಂಬಾಲಕರಿಗೆ ( ಲೂಕ
24:4-7) ಪುನರುತ್ಥಾನವನ್ನು ಪ್ರಕಟಿಸಿದರು. ಅಪೊಸ್ತಲರ ಕೃತ್ಯ ಗಳು 1:10-11, ರಲ್ಲಿ ಕ್ರಿಸ್ತನು
ಪರಲೋಕಕ್ಕೆ ಏರಿಹೋದ ರೀತಿಯಲ್ಲೇ ಹಿಂತಿರುಗಿ ಬರುವನು ಎಂದು ಆತನ ಎರಡನೆಯ
ಬರೋಣವನ್ನು ಮುಂತಿಳಿಸಿದರು. ಈಗ, ಕ್ರಿಸ್ತನು ದೇವರ ಬಲಪಾರ್ಶ್ವದಲ್ಲಿ ಕುಳಿತು
ಕಾರ್ಯಮಾಡುತ್ತಿರುವಾಗ, ದೇವದೂತರು ಸುವಾರ್ತೆಯಲ್ಲಿಯೂ ಮತ್ತು ಪಾಪಿಗಳ
ರಕ್ಷಣೆಯಲ್ಲಿಯೂ ಸಂತೋಷ ಪಡಲು ಆಸಕ್ತಿಯುಳ್ಳ ವರಾಗಿದ್ದಾರೆ( 1 ಪೇತ್ರ. 1:12; ಲೂಕ
15:10). ಕ್ರಿಸ್ತನು ಆಳುವುದಕ್ಕೂ ತೀರ್ಪು ಮಾಡುವುದಕ್ಕೂ ಬರುವಾಗ ದೇವದೂತರು
ಪ್ರಮುಖ ಪಾತ್ರ ವಹಿಸುತ್ತಾರೆ ( ಮತ್ತಾ. 13:39, 41-42, 49-50; 2 ಥೆಸ. 1:7-10, ಇತ್ಯಾದಿ).
ದೇವದೂತರು ದೇವರ ತೀರ್ಪನ್ನು ನೆರವೇರಿಸುವ ಅನೇಕ ಸಂಗತಿಗಳನ್ನು ಪ್ರಕಟನೆಯ
ಪುಸ್ತಕವು ಒಳಗೊಂಡಿದೆ.
118
ಅಥವಾ ಈ ದೇವರ ಸೇವಕರ ಕುರಿತಾಗಿ ತಮಾಷೆ ಮಾಡುವ ಹಾಗೂ ಅವರನ್ನು ನಂಬದ
ಮನೋಭಾವವುಳ್ಳ ವರಾಗಿರದೆ ತಿಳುವಳಿಕೆಯುಳ್ಳ ವಿಶ್ವಾಸಿಯಾಗಿರಬೇಕು.
ಸೈತಾನನು
119
ಭಾಗಗಳಲ್ಲಿ ಮಾನವ ಸರ್ಕಾರದ ತೆರೆಯ ಹಿಂದಿನ ಸಂಗತಿಗಳನ್ನು ದೇವರ ದಾಸರ
ಪ್ರೇರಿತವಾದ ಕಣ್ಣು ಗಳು ಕಂಡವು. ಬಾಬೆಲ್ ಮತ್ತು ತೂರಿನ ಅರಸರು ಸ್ಪ ಷ್ಟ ವಾಗಿ ಸೈತಾನನ
"ಬಗೆಯಾಗಿ" ಕಾಣಲ್ಪ ಟ್ಟಿದ್ದಾರೆ. ಅನೇಕ ವಿವರಗಳು ಸಾಧಾರಣ ಮನುಷ್ಯ ರಿಗೆ
ಅನ್ವ ಯಿಸುವುದಕ್ಕೆ ಸಾಧ್ಯ ವಾಗುವುದಿಲ್ಲ (ಇದೆ ತತ್ವ ವು ಉಳಿದ ಭಾಗಗಳಿಗೂ
ಅನ್ವ ಯವಾಗುತ್ತದೆ, ಅದರಲ್ಲೂ ವಿಶೇಷವಾಗಿ ಕೀರ್ತನೆಗಳಲ್ಲಿ ಮೇಲ್ನೋಟಕ್ಕೆ ಅದು ದೈವಿಕ
ಮನುಷ್ಯ ನನ್ನು ಸೂಚಿಸುತ್ತದೆ ಆದರೆ ಆಳವಾದ ಅಧ್ಯ ಯನಗಳು ಅದು ಕ್ರಿಸ್ತನೇ ಎಂದು
ತೋರಿಸಿಕೊಡುತ್ತವೆ.) ಈ ವ್ಯಾಖ್ಯಾನದ ಆಧಾರದ ಮೇಲೆ ನಾವು ಸೈತಾನನ ಕುರಿತಾಗಿ
ಹಲವಾರು ಸಂಗತಿಗಳನ್ನು ಕಲಿತುಕೊಳ್ಳ ಬಹುದು: ಅವನು ಲೂಸಿಫರನೆಂದು
ಕರೆಯಲ್ಪ ಡುತ್ತಿದ್ದ ನು(ಬೆಳಕನ್ನು ಹೊತ್ತವನು), ಈ ಪದದ "ಉದಯ ನಕ್ಷತ್ರ" ಎಂಬ
ಅರ್ಥದಲ್ಲಿ ಭಾಷಾಂತರಿಸಲ್ಪ ಟ್ಟಿದೆ. (ಯೆಶಾಯ 14:12; ಕ್ಕೆ ವಿರುದ್ಧ ವಾಗಿ ನಿಜವಾದ
ಉದಯ ನಕ್ಷತ್ರ ಕರ್ತನಾದ ಯೇಸುಕ್ರಿಸ್ತನೇ ಆಗಿದ್ದಾನೆ, ಪ್ರಕಟನೆ 22:16). ಅವನಿಗೆ
ನಂಬಿಕೆಯಿಂದ ಕೊಡಲ್ಪ ಟ್ಟ ಉನ್ನ ತ ಸ್ಥಾನವಿತ್ತು ಮತ್ತು ಅವನು ಸುಂದರನೂ ಬುದ್ದಿವಂತನೂ
ಆಗಿದ್ದ ನು(ಯೆಹೆ. 28:12-15). ವಿಶ್ವ ದ ಒಂದು ಭಾಗ ಸೈತಾನನ ನಿರ್ವಹಣೆಗೆ ಒಪ್ಪಿಸಲ್ಪ ಟ್ಟಿತ್ತು .
ಲೂಸಿಫರನ ಹೃದಯದಲ್ಲಿ ಗರ್ವವು ತುಂಬಿದಾಗ ಮೊಟ್ಟ ಮೊದಲ ಬಾರಿಗೆ ಪಾಪವು ದೇವರ
ಸೃಷ್ಟಿಯನ್ನು ಪ್ರವೇಶಿಸಿತು. ಅವನು, "ನಾನು ಆಕಾಶಕ್ಕೆ ಹತ್ತಿ... ನಾನು ಉನ್ನ ತಕ್ಕೇರಿಸಿ... ನಾನು
ಆಸೀನನಾಗುವೆನು... ಉನ್ನ ತೋನ್ನ ತನಿಗೆ ಸರಿಸಮಾನನಾಗುವೆನು," ಅಂದರೆ ದೇವರ ಹಾಗೆ
ಆಗುವೆನು ಎಂದು ಹೇಳಿದನು(ಯೆಶಾ. 14:13-14).
120
ಅವನು ಎಸೆಯುತ್ತಾನೆ, ಆದರೆ ನಂಬಿಕೆಯಿಂದ ಇವುಗಳನ್ನು ವಿಫಲಗೊಳಿಸಬಹುದು (ಎಫೆ.
6:16). ಹೊಸ ವಿಶ್ವಾಸಿಗಳು ಸಹ ತಮ್ಮ ನ್ನು ಸೈತಾನನು ಮುಟ್ಟ ಲು ಸಾಧ್ಯ ವಾಗದ ಹಾಗೆ
ಅವನನ್ನು ಜಯಿಸಬಹುದು ಮತ್ತು ತಮ್ಮ ನ್ನು ಕಾಪಾಡಿಕೊಳ್ಳ ಬಹುದು (1 ಯೋಹಾ. 2:13;
5:18). ಸತ್ಯ ವೇದವು ಈ ದುಷ್ಟ ನನ್ನು ದೇವರ ಎಲ್ಲಾ ಮಾರ್ಗಗಳನ್ನು ವಿರೋಧಿಸುವ
ಜೀವಿಯನ್ನಾಗಿ ಚಿತ್ರಿಸುತ್ತದೆ.
ಅವನು ಸೈತಾನನೆಂದು ಕರೆಯಲ್ಪ ಟ್ಟಿದ್ದಾನೆ. ಇದು ಜೆಕ 3:1 ರಲ್ಲಿ ಕಾಣುವ ಹಾಗೆ
ಇದು "ಪ್ರತಿಕಕ್ಷಿ," ಎಂಬ ಅರ್ಥವುಳ್ಳ ಇಬ್ರಿಯ ಪದವಾಗಿದೆ. ಸೈತಾನನು ಎಲ್ಲಾ
ಸಂಧರ್ಭದಲ್ಲೂ ದೇವರನ್ನು ಮತ್ತು ಆತನ ಜನರನ್ನು ವಿರೋಧಿಸಿದ್ದಾನೆ. ಕೆಲವೊಮ್ಮೆ ಈ
ವಿರೋಧವು ಬಹಿರಂಗವಾಗಿರುತ್ತದೆ; 1 ಪೇತ್ರ. 5:8 ರಲ್ಲಿ ಇವನನ್ನು ಕ್ರಿಸ್ತೀಯ ನಂಬಿಕೆ ಮತ್ತು
ಸಾಕ್ಷಿಯನ್ನು ನಾಶಮಾಡುವುದನ್ನೇ ಗುರಿಯನ್ನಾಗಿಟ್ಟು ಕೊಂಡಿರುವ ಗರ್ಜಿಸುವ ಸಿಂಹದಂತೆ
ವಿವರಿಸಲಾಗಿದೆ. ಕೆಲವೊಮ್ಮೆ ಇವನು ಬೆಳಕಿನ ದೂತನ ಹಾಗೆ ವೇಷಧರಿಸುತ್ತಾನೆ (2 ಕೊರಿ.
11:14). ಸತ್ಯ ವೇದದಲ್ಲಿ ಪ್ರಕಟಗೊಂಡಿರುವ ಹಾಗೆ, ಚರಿತ್ರೆಯುದ್ಧ ಕ್ಕೂ ಸೈತಾನನ ಸ್ಥಿರವಾದ
ಉದ್ದೇಶವೇನೆಂದರೆ, ದೇವರು ಜಗತ್ತಿಗಾಗಿ ಇಟ್ಟಿರುವ ಉದ್ದೇಶವನ್ನು ,ಅದರಲ್ಲೂ
ವಿಶೇಷವಾಗಿ ಮನುಷ್ಯ ನಿಗೆ ಸಂಬಂಧಿಸಿದ ಆತನ ಉದ್ದೇಶವನ್ನು ವಿರೋಧಿಸುವುದೇ ಆಗಿದೆ.
ಅವನ ಅನೇಕ ಹೆಸರುಗಳಲ್ಲಿ ಪಿಶಾಚನೆಂಬುದು ಮುಖ್ಯ ಹೆಸರಾಗಿದೆ, ಇದು ಗ್ರೀಕ್
ಭಾಷೆಯಲ್ಲಿ " ದೂರುಹೇಳುವವನು" ಎಂಬ ಅರ್ಥವನ್ನು ನೀಡುತ್ತದೆ. ಈ ಹೆಸರು
ಸೈತಾನನಿಗೆ ನಾಲ್ಕು ವಿವಿಧ ರೀತಿಯಲ್ಲಿ ಬಳಸಲ್ಪ ಟ್ಟಿದೆ:
121
ಕಾಣುತ್ತೇವೆ (ಯೋಬ. 1:9). ಅವನು ಸಹೋದರರ ವಿಷಯವಾಗಿ ಹಗಲಿರುಳು
ದೇವರ ಮುಂದೆ ದೂರು ಹೇಳುತ್ತಾನೆ (ಪ್ರಕ. 12:10).
2. ಅವನು ದೇವರ ಗುಣಲಕ್ಷಣಗಳ ಮೇಲೆ ತಪ್ಪಾದ ಅಪವಾದವನ್ನು ಹೊರಿಸುವುದರ
ಮೂಲಕ ಪರಲೋಕ ದೂತರ ಮುಂದೆ ದೇವರ ವಿರುದ್ಧ ದೂರುಹೇಳುತ್ತಾನೆ (ಅಂದರೆ,
ದೇವರು ಯೋಬನ ವಿಷಯದಲ್ಲಿ ಪಕ್ಷಪಾತ ಮಾಡಿದನು ಎಂದು ಹೇಳಿದನು). ಇದರ
ಹಿನ್ನ ಲೆಯನ್ನು ಪರಿಗಣಿಸುವ ಮೂಲಕ ಈ ಕಾರ್ಯವು ದೇವರ ನೀತಿಯುಳ್ಳ ಆಡಳಿತದ
ಮೇಲೆ ಅವನ ಆಕ್ರಮಣ ಎಂದು ತಿಳಿದುಕೊಳ್ಳ ಬಹುದು. ದೇವರು ಸೈತಾನನ್ನ ಮತ್ತು
ಅನೇಕ ಇತರೆ ದೂತರನ್ನು ಅವರ ಪ್ರತಿಭಟನೆ ಎಂಬ ಪಾಪದ ನಿಮಿತ್ತ ಪರಲೋಕದಿಂದ
ಹೊರಗೆ ಹಾಕಿದನು. ಸೈತಾನನು ಈ ಸಂಗತಿಯನ್ನು ಅನ್ವ ಯಿಸಿಕೊಂಡು ಇದು ಅನೀತಿ
ಮತ್ತು ಅನ್ಯಾಯ ಯಾಕಂದರೆ ದೇವರು ಮನುಷ್ಯ ರ ಪಾಪವನ್ನು ಒಂದೇಬಾರಿಗೆ
ತೀರ್ಪುಮಾಡುವುದಿಲ್ಲ ಎಂದು ಹೇಳುತ್ತಾನೆ. ಸೃಷ್ಟಿಯ ಮತ್ತು ಮನುಷ್ಯ ನ
ವಿಮೋಚನೆಯ ಅತೀ ಶ್ರೇಷ್ಠ ವಾದ ಉದ್ದೇಶಗಳಲ್ಲಿ ಒಂದು ಉದ್ದೇಶವೇನೆಂದರೆ,
ದೇವರು ಸೈತಾನನ ಅನೀತಿಯಿಂದ ಕೂಡಿದ ಆಪಾದನೆಗಳನ್ನು ಶಾಶ್ವ ತವಾಗಿ
ಲಯಮಾಡುವುದೇ ಆಗಿದೆ.
3. ಪಿಶಾಚನು ಮನುಷ್ಯ ರ ಮುಂದೆ ದೇವರ ವಿರುದ್ಧ ದೂರು ಹೇಳುತ್ತಾನೆ (ಆದಿ. 3:5).
ನಾವು ದೇವರ ಪ್ರೀತಿಯನ್ನು ಅನುಮಾನಿಸಬೇಕೆಂದು ಅವನು ಬಯಸುತ್ತಾನೆ. ಜನರು
ಕಷ್ಟ ಪಡುವುದಕ್ಕೂ ಮತ್ತು ಇನ್ನು ಅನೇಕ ಸಂಗತಿಗಳನ್ನು ಮಾಡುವುದಕ್ಕೂ ದೇವರು
ಅನುಮತಿಸುವುದರಿಂದ ಮನುಷ್ಯ ರು ದೇವರನ್ನು ಟೀಕಿಸುತ್ತಾರೆ. ಈ ಸಂಗತಿಯಲ್ಲಿ
ಅವರು ಸೈತಾನನ ಕಾರ್ಯದಲ್ಲಿ ಪಾಲುತೆಗೆದು ಕೊಳ್ಳು ವವರಾಗಿದ್ದಾರೆ.
4. ಅವನು ಪರಸ್ಪ ರ ನಮ್ಮ ವಿಷಯದಲ್ಲಿ ದೂರುಹೇಳುತ್ತಾನೆ. ಉದಾಹರಣೆಗೆ, ಪೌಲನ
ಮತ್ತು ಕೊರಿಂಥ ಸಭೆಯ ನಡುವೆ ಕೆಲವು ವಾದಗಳನ್ನು ಅಥವಾ ತಪ್ಪಾದ ಗ್ರಹಿಕೆಗಳನ್ನು
ತರಲು ಸಾಧ್ಯ ವಾಗುವುದಾದರೆ ಅವನು ಮೇಲುಗೈ ಸಾಧಿಸಬಹುದು ಎಂಬುದನ್ನು
ಅವನು ತಿಳಿದಿದ್ದ ನು (2 ಕೊರಿ. 2:11). ಪೌಲನು ಅವನ ತಂತ್ರಗಳನ್ನು ಅರಿತವನಾಗಿದ್ದ ನು.
ಕರ್ತನ ಜನರ ನಡುವಿನ ವಿಭಜನೆ ಸುವಾರ್ತೆಯ ಹರಡುವಿಕೆಗೆ ದೊಡ್ಡ
ಅಡ್ಡಿಯನ್ನುಂಟುಮಾಡಿದೆ.
122
ರಮ್ಯ ವಾಗಿಯೂ") ಮತ್ತು ಬದುಕು ಬಾಳಿನ ಡಂಭಕ್ಕೆ ("ಜ್ಞಾನೋದಯಕ್ಕೆ
ಅಪೇಕ್ಷಿಸತಕ್ಕ ದ್ದಾಗಿಯೂ") ಅನ್ವ ಯುಸುವಂತೆ ಮಾಡಿದನು. ಈ ಮೂರು ಸಂಗತಿಗಳು
ಖಂಡಿತವಾಗಿಯೂ "ತಂದೆಯಿಂದ ಬಂದವುಗಳಲ್ಲ " (1 ಯೋಹಾ 2:16). ಆದಾಮ ಮತ್ತು
ಹವ್ವ ಳು ಪರೀಕ್ಷೆಯಲ್ಲಿ ಸೋತವರಾಗಿ ಪಾಪದಲ್ಲಿ ಬಿದ್ದ ರು. ಸಾವಿರಾರು ವರ್ಷಗಳ ನಂತರ
ಶೋಧಕನು ಕೊನೆ ಆದಮನಾದ ಕರ್ತನಾದ ಯೇಸು ಕ್ರಿಸ್ತನ ಬಳಿಯಲ್ಲಿ ಇದೆ ತಂತ್ರಗಳನ್ನು
ಉಪಯೋಗಿಸಿದನು. ಅವನು ಯೇಸುವಿಗೆ, "ಈ ಕಲ್ಲು ಗಳು ರೊಟ್ಟಿಯಾಗುವಂತೆ ಅಪ್ಪ ಣೆ
ಕೊಡು" (ಶರೀರದಶೆ) ಎಂದು ಹೇಳಿದನು. ಅವನು ಇದರೊಂದಿಗೆ "ಇವೆಲ್ಲ ವುಗಳ
ಅಧಿಕಾರವನ್ನು ಇವುಗಳ ವೈಭವವನ್ನು ನಿನಗೆ ಕೊಡುವೆನು" (ಕಣ್ಣಿನಾಶೆ) ಎಂದು ಹೇಳಿದನು.
ಕೊನೆಯದಾಗಿ, ಅವನು "ನೀನು ದೇವರ ಮಗನಾಗಿದ್ದ ರೆ ಇಲ್ಲಿಂದ ಕೆಳಗೆ ಧುಮುಕು"
(ಬದುಕುಬಾಳಿನ ಡಂಭ) ಎಂದು ಹೇಳಿದನು. ಶೋಧಕನ ಅತಿ ದೊಡ್ಡ ಪ್ರಯತ್ನ ವು ಅತಿ
ದೊಡ್ಡ ಸೋಲಿನಲ್ಲಿ ಅಂತ್ಯ ವಾಯಿತು. ಕ್ರಿಸ್ತನು ಪಾಪ ಮಾಡುವುದಿಲ್ಲ ಮತ್ತು ಪಾಪ ಮಾಡಲು
ಸಾಧ್ಯ ವಿಲ್ಲ . ಈ ಸಂಪೂರ್ಣ ಘಟನೆಯು ಲೂಕ 4:1-13 ರಲ್ಲಿ ಧಾಖಲಿಸಲ್ಪ ಟ್ಟಿದೆ. ಮತ್ತಾ 4:1-
11 ಮತ್ತು ಮಾರ್ಕ 1:12-13 ನೋಡಿರಿ.
123
ನಂಬಿಕೆಯಿಲ್ಲ ದಿರುವಂತೆ ಜನಸಾಮಾನ್ಯರನ್ನು ಹುಸಿಗೊಳಿಸಿದನು. ಅವನನ್ನು ಒಂದು
ಹಾಸ್ಯ ಮಾಡುವ ವಿಷಯವನ್ನಾಗಿ ವಿಡಂಬನೆಮಾಡಿಕೊಂಡು ಸತ್ಯ ವೇದದ ಸಾಕ್ಷಿಗಳನ್ನು
ಸ್ವೀಕರಿಸುವವನನ್ನು ಪರಿಹಾಸ್ಯ ಮಾಡುವುದೇ ಆಗಿದೆ.
124
ಮತ್ತಾ. 24:24; ಪ್ರಕ. 13:13-15). ಅಶುದ್ಧ ಆತ್ಮ ಗಳಾಗಿ ವಿಗ್ರಹಗಳ ಹಿಂದೆ ಕಾರ್ಯಮಾಡುವ
ವಿದ್ಧ ರ್ಮಿಗಳ ದೇವರುಗಳು ಅನೇಕ ಸಂಧರ್ಭದಲ್ಲಿ ದೆವ್ವ ಗಳಾಗಿದ್ದ ವು (1 ಕೊರಿ. 10:20).
ಕ್ರಿಸ್ತನು ದೆವ್ವ ಗಳನ್ನು ಬಿಡಿಸಿ ತನ್ನ ಶಿಷ್ಯ ರಿಗೂ ಅವುಗಳನ್ನು ಬಿಡಿಸುವ ಶಕ್ತಿಯನ್ನು
ಕೊಟ್ಟ ನು (ಮತ್ತಾ. 4:24; 10:1; ಅ. ಕೃ. 19:12). ಈ ದೆವ್ವ ಗಳು ನಿಜವಾದವುಗಳಲ್ಲ ಅಥವಾ
ಇದು ಕೇವಲ ಹಿಡಿಯಲ್ಪ ಟ್ಟ ವರ ಮಾನಸಿಕ ಭ್ರಾಂತಿ ಎಂದು ಹೇಳುವುದಕ್ಕೆ ಎಂದಿಗೂ ಯಾವ
ಸುಳಿವು ಇಲ್ಲ . ಕ್ರಿಸ್ತನ ಮತ್ತು ದೆವ್ವ ಗಳ ನಡುವಿನ ನೇರವಾದ ಸಂಭಾಷಣೆಯು
ಧಾಖಲಿಸಲ್ಪ ಟ್ಟಿದೆ. ಲೋಕದ ಕೆಲವು ಭಾಗಗಳಲ್ಲಿರುವ ಮಿಷನರಿಗಳು ಈ ರೀತಿಯ ದೆವ್ವ
ಹಿಡಿದವರ ಸುದ್ದಿಗಳನ್ನು ಇಂದಿಗೂ ತಿಳಿಸುತ್ತಾರೆ. ಪಾಶ್ಚಿಮಾತ್ಯ ದೇಶಗಳು ಈ ಪ್ರಭಾವದಿಂದ
ದೂರ ಉಳಿದಿಲ್ಲ .
ಬಿದ್ದು ಹೋದ ಮನುಷ್ಯ ರ ಹಾಗೆ, ಬಿದ್ದು ಹೋದ ದೇವಧೂತರಿಗೆ
ವಿಮೋಚನೆಯಿಲ್ಲ . ಈ ಧೂತರುಗಳು ಸೈತಾನನನ್ನು ಹಿಂಬಾಲಿಸುವಾಗ ತಮ್ಮ ನಿರ್ಧಾರದ
ಕುರಿತು ಅವರಿಗೆ ಸ್ಪ ಷ್ಟ ವಾದ ಅರಿವಿದ್ದ ಹಾಗೆ ತೋಚುತ್ತದೆ; ಆದುದರಿಂದ ಅವರು ದೊಡ್ಡ
ಬೆಳಕಿನ ಮತ್ತು ಸೌಭಾಗ್ಯ ದ ನಿಲುವಿನಲ್ಲಿ ಪಾಪ ಮಾಡಿದರು.
125
(ಮತ್ತಾ. 25:41). ಕ್ರಿಸ್ತನೊಬ್ಬ ನೇ ತನ್ನ ವಿಮೋಚಕನೆಂಬ ಸಂಗತಿಯಲ್ಲಿ ನಂಬಿಕೆಯಿಡುವ
ಮನುಷ್ಯ ನು ಎದುರಿಸಲು ಅವಶ್ಯ ವಿಲ್ಲ ದ ಗಂಭೀರವಾದ ಮತ್ತು ಭಯದಿಂದ ಕೂಡಿದ
ಭವಿಷ್ಯ ವಾಗಿದೆ. ನಿಜವಾಗಿಯೂ, ತನ್ನ ಮಗನ ಮೂಲಕ ಬಿದ್ದು ಹೋದ ಮನುಷ್ಯ ನಿಗೆ
ವಿಮೋಚನೆಯನ್ನು ಒದಗಿಸಿದ್ದ ಕ್ಕಾಗಿ ನಾವು ದೇವರಿಗೆ ಕೃತಜ್ಞ ತೆಯುಳ್ಳ ವರಾಗಿರಬೇಕು.
ಅಧ್ಯಾಯ
2
ಮಾನವಶಾಸ್ತ್ರ:
ಮನುಷ್ಯ ನಅಧ್ಯ ಯನ
ಮಾನವಶಾಸ್ತ್ರ ಎಂಬುದು ಧರ್ಮಶಾಸ್ತ್ರದ ಒಂದು ಸಿಧಾಂತವಾಗಿದ್ದು ಇದೆ ಹೆಸರಿನಲ್ಲಿರುವ
ವಿಜ್ಞಾನದ ಒಂದು ಶಕೆಯೊಂದಿಗೆ ಸಣ್ಣ ಸಂಪರ್ಕವನ್ನು ಹೊಂದಿದೆ. ಇಲ್ಲಿ ನಾವು ದೇವರಿಂದ
ಸೃಷ್ಟಿಸಲ್ಪ ಟ್ಟ ಎರಡನೇಯ ಹಂತದ ನೈತಿಕ ಜೀವಿಗಳ ಕುರಿತಾಗಿ ಕಾಳಜಿವುಳ್ಳ ವರಾಗಿದ್ದೇವೆ—
ಮಾನವ ಕುಲ. ದೇವರ ಯೋಜನೆಯಲ್ಲಿ ಮನುಷ್ಯ ನ ಕುರಿತಾಗಿ ಸತ್ಯ ವೇದವು ಏನನ್ನು
ಬೋಧಿಸುತ್ತದೆ?
ಮನುಷ್ಯ ನ ಆರಂಭ
126
ಮೂಲಭೂತ ಸತ್ಯ ಗಳನ್ನು ದೇವರು ಆದಿ 1:27,; 2:7, ಮತ್ತು ಇತರೆ ಭಾಗಗಳಲ್ಲಿ
ಪ್ರಕಟಪಡಿಸಿದ್ದಾನೆ.
127
ಮನುಷ್ಯ ನ ಸ್ವ ಭಾವ
ಮನುಷ್ಯ ನು ದೈಹಿಕ ಮತ್ತು ಭೌತಿಕ ಜೀವಿಗಿಂತ ಹೆಚ್ಚಿನವನು ಎಂಬುದನ್ನು ಎಲ್ಲಾ
ಕ್ರೈಸ್ತರು ಒಪ್ಪಿಕೊಳ್ಳು ತ್ತಾರೆ. ಮನುಷ್ಯ ನು ತನ್ನ ನ್ನು ಸಂಪೂರ್ಣಗೊಳಿಸಲು ಅಭೌತಿಕವಾದ ಭಾಗ
ಅಥವಾ ಭಾಗಗಳನ್ನು ಸಹ ಹೊಂದಿದ್ದಾನೆ. ಈ ಭೌತಿಕ ಮತ್ತು ಅಭೌತಿಕ ಎಂಬ ಎರಡು
ಭಾಗಗಳ ವಿಭಜನೆಯನ್ನು ಒತ್ತಿಹೇಳುವವರನ್ನು ದ್ವಿಭಜನವಾದಿಗಳು ಎಂದು
ಕರೆಯಲಾಗುತ್ತದೆ, ಅಂದರೆ "ಎರಡಾಗಿ ಕತ್ತರಿಸು" ಎಂಬ ಅರ್ಥ ಸಿಗುತ್ತದೆ. ಈ
ದ್ವಿಭಜನವಾದಿಗಳಿಗೆ ಆತ್ಮ , ಪ್ರಾಣ, ಮನಃಸಾಕ್ಷಿ, ಹೃದಯ, ಇತ್ಯಾದಿ., ಇವೆಲ್ಲ ವೂ ಮನುಷ್ಯ ನ
ಅಭೌತಿಕವಾದ ಭಾಗಗಳು ಒಂದಕ್ಕೊಂದು ವಿಭಿನ್ನ ವಾಗಿವೆ ಆದರೆ ಮನುಷ್ಯ ನ ಅಭೌತಿಕವಾದ
ಸ್ವ ಭಾವದ ವಿವಿಧ ಮುಖಗಳಾಗಿದೆ. ತ್ರಿಭಜನವಾದಿಗಳೆಂದು ಕರೆಯಲ್ಪ ಡುವ ಇತರರು,
ಮನುಷ್ಯ ನು ಮೂಲಭೂತವಾಗಿ ದೇಹ ಆತ್ಮ ಪ್ರಾಣವೆಂಬ ಮೂರು ಭಾಗಗಳಿಂದ
ರಚಿಸಲ್ಪ ಟ್ಟಿದ್ದಾನೆ ಎಂದು ನಂಬುತ್ತಾರೆ (1 ಥೆಸ. 5:23; ಇಬ್ರಿ. 4:12). ಹೃದಯ ಮತ್ತು
ಮನಃಸಾಕ್ಷಿಯಂತಹ ಇತರ ಗುಣಲಕ್ಷಣಗಳನ್ನು ಆತ್ಮ ಮತ್ತು ಪ್ರಾಣದ ಬಿಂಬಕಗಳ(ಅಥವಾ
ಮುಖಗಳು) ಹಾಗೆ ಕಾಣುತ್ತಾರೆ. ತ್ರಿಭಜನವು ಸರಳವಾಗಿರುವುದರಿಂದ ದೇಹ, ಪ್ರಾಣ ಮತ್ತು
ಆತ್ಮ ದ ಈ ಮೂರು ವರ್ಗಗಳಿಗೆ ಎಲ್ಲಾ ಪದಗಳನ್ನು ಹೊಂದಿಸುವುದು ಕಷ್ಟ ಎಂಬ
ಒಪ್ಪಿಗೆಯೊಂದಿಗೆ ಇಲ್ಲಿಯೂ ಸಹ ಅದನ್ನೇ ತೋರಿಸಲಾಗಿದೆ. ಅದು ಮಾತ್ರವಲ್ಲ ದೆ, ಹೃದಯ,
ಮನಃಸಾಕ್ಷಿ, ಆತ್ಮ ಮತ್ತು ಪ್ರಾಣವೆಂಬ ಪ್ರಾಮುಖ್ಯ ವಾದ ಪದಗಳ ಸಂಪೂರ್ಣ ವರದಿಯನ್ನು
ಮಾಡುವುದಾದರೆ ಅವುಗಳಲ್ಲಿ ವ್ಯ ತ್ಯಾಸಗಳಿವೆ. ಆದ್ದ ರಿಂದ ದ್ವಿಭಜನ ಮತ್ತು ತ್ರಿಭಜನವಾದಿಗಳು
ಸಾಂಪ್ರದಾಯಿಕ ವಿಶ್ವಾಸಿಗಳು ಎಂದು ಒತ್ತಿ ಹೇಳಬೇಕು ಮತ್ತು ಇವೆರಡು ಅಭಿಪ್ರಾಯಗಳ
ನಡುವಣ ವ್ಯ ತ್ಯಾಸವು ಪರೀಕ್ಷಿಸಲ್ಪ ಟ್ಟ ರೆ ಅದು ಬಹಳ ಕಡಿಮೆ ಎಂದು ತಿಳಿದುಬರುತ್ತದೆ.
128
ಪ್ರಾಣವು ವೈಯಕ್ತಿಕ ಜೀವಿತದ ಸ್ವ ಪ್ರಜ್ಞೆಗೆ ಅಧೀನವಾಗಿದೆ(ಕೀರ್ತ. 13:2; 42:5,
11). ಅದನ್ನು ಪರಲೋಕದ ಸಂಗತಿಗಳ ಕಡೆಗೆ ತಿರುಗಿಸಲು ಸಾಧ್ಯ (ಕೀರ್ತ. 42:1-2), ಅದನ್ನು
ಭೂಲೋಕದ ಸಂಗತಿಗಳ ಅಥವಾ ಭಾವನಾತ್ಮ ಕ ಸಂಗತಿಗಳ ಕಡೆಗೂ ತಿರುಗಿಸಬಹುದು
ಮತ್ತು ಸಾಮಾನ್ಯ ವಾಗಿ ಅದು ಶಾರೀರಿಕ ಹಸಿವೆಗಳೊಂದಿಗೆ ಸಂಯೋಜನೆಗೊಂಡಿರುತ್ತದೆ.
(ಧರ್ಮೋ. 12:15, 20; ಕೀರ್ತ. 107:9; ಜ್ಞಾನೋ. 6:30; ಯೆಶಾ. 29:8 ಹೋಲಿಸಿ
ನೋಡಿರಿ). ಅದು ಅನೇಕ ವಿಧವಾದ ಭಾವನಾತ್ಮ ಕ ಪ್ರಕ್ರಿಯೆಗಳನ್ನು , ಅಂದರೆ
ಬಯಕೆ(ಧರ್ಮೋ. 12:20), ಹಗೆ (2 ಸಮು. 5:8), ವ್ಯ ಸನ(2 ಅರಸು 4:27), ಮತ್ತು
ಸಂತೋಷ (ಯೆಶಾ. 61:10), ಮತ್ತು ಬಳಲುವಿಕೆ(ಆದಿ. 42:21), ಮತ್ತು ದುಃಖವನ್ನು
(ಮಾರ್ಕ 14:34)ಪ್ರದರ್ಶಿಸುತ್ತದೆ.
129
ಮೊದಲನೇ ಮನುಶ್ಯ ನಾದ ಆದಾಮನಿಂದ ಉತ್ಪ ತ್ತಿಯಾದವರು ಎಂಬುದನ್ನು
ಪ್ರತಿಯೊಬ್ಬ ರೂ ತಿಳಿದಿದ್ದಾರೆ(ಈ ದಿನಗಳಲ್ಲಿ ಅನೇಕರು ಆದಾಮ ಹವ್ವ ರ ಐತಿಹಾಸಿಕತೆಯನ್ನು
ಅಲ್ಲ ಗಳೆದರೂ). ವಿಜ್ಞಾನವು ಮನುಷ್ಯ ನ ಪರಿಕಲ್ಪ ನೆ ಮತ್ತು ಗರ್ಭಾವಸ್ಥೆ ಯ ಕುರಿತು
ಅಧ್ಯ ಯನ ಮಾಡಿರುವುದರಿಂದ ಅವನ ದೈಹಿಕ ಕ್ಷೇತ್ರದ ವಿಷಯದಲ್ಲಿ ಯಾವುದೇ
ಸಮಸ್ಯೆ ಯಿಲ್ಲ . ಆದರೆ ನಮ್ಮ ಅಭೌತಿಕವಾದ ಸ್ವ ಭಾವದ ಕುರಿತಾಗಿ ವಿಜ್ಞಾನವು ಏನನ್ನೂ
ಹೇಳಲು ಸಾಧ್ಯ ವಿಲ್ಲ .(ಕೆಲವರು, ಈ ಅಂಶದಿಂದ ಪಾರಾಗಲು, ಮನುಷ್ಯ ನ ಅಭೌತಿಕ ಭಾಗಗಳ
ಪ್ರತ್ಯೇಕ ಅಸ್ತಿತ್ವ ವನ್ನು ನಿರಾಕರಿಸಿ, ಇದು ಮೆದುಳಿನಂತಹ ದೈಹಿಕ ಅಂಗಗಳ ಕಾರ್ಯಗಳನ್ನು
ಮಾತ್ರ ಮಾಡುತ್ತದೆ ಎಂದು ಹೇಳುತ್ತಾರೆ.ಈ ರೀತಿ ಹೇಳುವುದು ಇದು ಸಂಪೂರ್ಣವಾಗಿ
ಅಸಮರ್ಪಕ ಮತ್ತು ಸತ್ಯ ವೇದಕ್ಕೆ ವಿರುದ್ಧ ವಾಗಿದೆ). ಹಾಗಾದರೆ ಒಬ್ಬ ವ್ಯ ಕ್ತಿಯು ಎಲ್ಲಿಂದ ತನ್ನ
ಅಪ್ರತಿಮ ಭಾಗಗಳನ್ನು ಪಡೆದುಕೊಂಡನು? ಈ ವಿಷಯದ ಮೇಲೆ ಅನೇಕ ವಿವಾದಗಳು
ಉಂಟು; ನಾವು ಸತ್ಯ ವೇದಕ್ಕೆ ಸೂಕ್ತವಾಗಿ ಹೊಂದಿಕೊಳ್ಳು ವ ಅಭಿಪ್ರಾಯವನ್ನು ವಿವರಿಸಲು
ಮಾತ್ರ ಸಮಯ ತೆಗೆದುಕೊಳ್ಳೋಣ— ಅದು ವಂಶಾವಳಿಯಿಂದ ಬಂದ ಪಾಪ.
130
ಆತನು ಪಾಪದ ಎಲ್ಲಾ ದಂಡನೆಯಿಂದ ಮತ್ತು ಭ್ರಷ್ಟ ತೆಯಿಂದ ಪ್ರತ್ಯೇಕಿಸಿದವನಾಗಿ
ಪ್ರತಿಷ್ಠಿಸಲ್ಪ ಟ್ಟಿದ್ದ ನು ಎಂಬುದು ಸ್ಪ ಷ್ಟ ವಾಗಿದೆ. ಕ್ರಿಸ್ತನು ಈ ಎಲ್ಲಾ ಸಂಗತಿಗಳಿಗೂ ಹೊರತಾಗಿದ್ದು ,
ಇದನ್ನು ನೋಡಲು ಹೆಚ್ಚಿನ ಸಮಸ್ಯೆ ಯನ್ನು ಉಂಟು ಮಾಡಬಾರದು.
ಮನುಷ್ಯ ನ ಸ್ಥಾನ
ಕೀರ್ತನೆ 8 ರಲ್ಲಿ ಮನುಷ್ಯ ನು ದೇವದೂತರಿಗಿಂತ ಸ್ವ ಲ್ಪ ಕಡಿಮೆಯಾಗಿ ಮಾಡಲ್ಪ ಟ್ಟಿದ್ದಾನೆ (ವ.
ಮತ್ತು ಎಫೆ. 6:1 ರಂತಹ ವಾಕ್ಯ ಭಾಗಗಳು ನಾವು ನಮ್ಮ ಜೀವಿತದಲ್ಲಿ ಅಧಿಕಾರಿಗಳಿಗೆ
ನಂತರ ಸೃಸ್ಟಿಸಲ್ಪ ಟ್ಟ ದರಿಂದ ಮತ್ತು ಆಕೆ ಮೊದಲು ಪಾಪದಲ್ಲಿ ಬಿದ್ದ ದ್ದೇ ಆಗಿದೆ. ಕರ್ತನಾದ
131
ಅರ್ಥವಲ್ಲ . ಉದಾಹರಣೆಗೆ, ಪ್ರಜಾಪಭುತ್ವ ದಲ್ಲಿ ಮನುಷ್ಯ ನು "ಸ್ವ ತಂತ್ರನು', ಅದರೆ ಅವನು
ಜೀವಿಸುವ ನೆಲದ ಕಾನೂನುಗಳನ್ನು ಪಾಲಿಸುವ ಮತ್ತು ಇತರರ ಸ್ವಾತಂತ್ರ್ಯವನ್ನು ಗೌರವಿಸುವ
ಹಂಗಿನಲ್ಲಿದ್ದಾನೆ.
ಮನುಷ್ಯ ನ ಕಾರ್ಯ
ದೇವರು ಮನುಷ್ಯ ನನ್ನು ಯಾಕೆ ಸೃಷ್ಟಿಸಿದನು? ವೆಸ್ಟ ಮಿನಿಸ್ಟರ್ ಶಾಟ್ರರ ಕ್ಯಾಟ್ಯಾಸಿಮ್ ಎಂಬ
ಮತ್ತು ಆತನಲ್ಲಿ ಶಾಶ್ವ ತಕ್ಕೂ ಸಂತೋಷಿಸುವುದೇ ಆಗಿದೆ" ಎಂದು ಹೇಳುತ್ತದೆ. ದೇವರು ತನ್ನ
ಪ್ರೀತಿಯ ಸ್ವ ಭಾವದಿಂದ ಮನುಷ್ಯ ನನ್ನು ಸೃಷ್ಟಿಸಿದನು. ಮನುಷ್ಯ ನನ್ನು ತಾನು ಪ್ರೀತಿಸಲು
ಸಾಧ್ಯ ವೋ ಆತನು ಬಯಸುವುದಾದರೆ ಮಾತ್ರ ಸಾಧ್ಯ ವಾಗುತ್ತದೆ. ತನ್ನ ನ್ನು ಆತ್ಮ ದಲ್ಲೂ
132
ದೇವರು ಮನುಷ್ಯ ನನ್ನು ಸೃಷ್ಟಿಮಾಡಲು ಮತ್ತೊಂದು ಕಾರಣ ಸೈತಾನನ
ಸಂಬಂಧದಲ್ಲಿ ಕಾಣುತ್ತೇವೆ. ಸೈತಾನನು ದೇವರ ಯೋಜನೆಗಳನ್ನು ಹಾಳುಮಾಡುವ
ಸಲುವಾಗಿ ಮನುಷ್ಯ ನನ್ನು ಪಾಪಕ್ಕೆ ನಡೆಸಿದನು. ಮನುಷ್ಯ ನು ಮಾಡಿದ ಪಾಪಕ್ಕೆ ದೇವರು
ಅವನನ್ನು ಶಿಕ್ಷಿಸಿದ್ದ ರಿಂದ ಮನುಷ್ಯ ನು ದೇವರನ್ನು ದ್ವೇಷಿಸುತ್ತಾನೆಂದು ಸೈತಾನನು ಬಹಳ
ಚನ್ನಾಗಿ ಊಹಿಸಿಕೊಂಡಿರಬಹುದು ಇದು ಬಹುಶ ಸತ್ಯ ವಾಗಿರ ಬಹುದು ಮತ್ತೊಂದು
ರೀತಿಯಲ್ಲಿ ಹೇಳುವುದಾದರೆ, ಪಾಪವು ದೇವರು ತನ್ನ ಪ್ರೀತಿಯನ್ನು ತೋರಿಸುವ
ವ್ಯಾಪ್ತಿಯನ್ನು ಬಹಳವಾಗಿ ಹೆಚ್ಚಿಸಿತು. "ಪಾಪವು ಹೆಚಾದಲ್ಲೇ ಕೃಪೆಯು ಹೆಚ್ಚಾಯಿತು"
(ರೋಮಾ. 5:20). ಕ್ರಿಸ್ತನ ಶಿಲುಬೆಯ ಕಾರಣದಿಂದ, ಸೈತಾನನ ಅಪವಾದಗಳು ಶಾಶ್ವ ತವಾಗಿ
ಮೌನವಾಗಿರಿಸಲ್ಪ ಡುತ್ತವೆ. ಕ್ರಿಸ್ತನು ನಿತ್ಯ ತ್ವ ದುದ್ದ ಕ್ಕೂ ತನ್ನ ವಿಶಾಲವಾದ ವಿಮೋಚಿಸಲ್ಪ ಟ್ಟ ತನ್ನ
ಪರಿವಾರವನ್ನು ತನ್ನೊಂದಿಗೆ ಇಟ್ಟು ಕೊಳ್ಳು ತ್ತಾನೆ.
ಮನುಷ್ಯ ನ ಜವಾಬ್ದಾರಿ
133
ಮನುಷ್ಯ ನಿಗೆ ಯಾವುದು ಒಳ್ಳೆಯದಾಗಿದೆಯೋ ಅದು ದೇವರ ಮಟ್ಟ ಕ್ಕೆ ಸಮವಾಗಿಲ್ಲ .
ನಾಗರಿಕ ಸಭ್ಯ ತೆಯು ಮನುಷ್ಯ ರ ಗೌರವವನ್ನು ಗೆಲ್ಲ ಬಹುದು ಆದರೆ ನಮ್ಮ ನ್ನು ಪರಲೋಕಕ್ಕೆ
ಕೊಂಡೊಯ್ಯ ಲು ಎಂದಿಗೂ ಸಾಧ್ಯ ವಿಲ್ಲ .
ಅಧ್ಯಾಯ
3
ಪಾಪಶಾಸ್ತ್ರ:
ಪಾಪದಅಧ್ಯ ಯನ
ಪಾಪ ಶಾಸ್ತ್ರವು ಪಾಪದ ಅಧ್ಯ ಯನವಾಗಿದೆ (ಗ್ರೀಕ್ ಭಾಷೆಯ ಹಮರ್ಷಿಯ
ಎಂದರೆ ಪಾಪ ಎಂದರ್ಥ) ಈ ಭಾಗದಲ್ಲಿ ನಾವು ಪಾಪ, ಭೂಲೋಕದಲ್ಲಿ ಅದರ ಉಗಮ
ಮತ್ತು ವೈಯಕ್ತಿಕ ಪಾಪ, ಸ್ವಾಸ್ತ್ಯವಾಗಿ ಪಡೆದಿರುವ ಪಾಪದ ಸ್ವ ಭಾವವನ್ನು ಮತ್ತು ನಮ್ಮ ಲೆಕ್ಕ ಕ್ಕೆ
ಎಣಿಸಲ್ಪ ಟ್ಟಿರುವ ಪಾಪಗಳ ನಡುವಣ ವ್ಯ ತ್ಯಾಸದ ವ್ಯಾಖ್ಯಾನವನ್ನು ಪರೀಕ್ಷಿಸುವವರಾಗಿದ್ದೇವೆ.
ಪಾಪವನ್ನು ವ್ಯಾಖ್ಯಾನಿಸುವುದು
134
ಕೊಡಬೇಕಾದವುಗಳನ್ನು ಖಡಿತಗೊಳಿಸುವುದು. ಪಾಪದ ಕುರಿತಾದ ಮನುಷ್ಯ ನ
ಪರಿಕಲ್ಪ ನೆಯು ಕೇವಲ ಅಸಮರ್ಥನೀಯವಾದ ಸೂಕ್ಷ್ಮತೆ, ಭ್ರಾಂತಿ, ಇಂದ್ರಿಯತೆ,
ಉದಾಸೀನತೆ ಅಥವಾ ಸ್ವಾರ್ಥತೆಗಳೇ ಆಗಿದೆ. ಸಾಮಾನ್ಯ ವಾಗಿ ಹೇಳುವುದಾದರೆ ದೇವರು ತನ್ನ
ವಾಕ್ಯ ದಲ್ಲಿ ವಿವರಿಸಿರುವ ಹಾಗೆ ನಾವು ದೇವರ ಗುಣಾತಿಶಯಕ್ಕೆ ಹೋಲುವುದರಲ್ಲಿ
ಉಂಟಾಗುವ ಕೊರತೆಯನ್ನು ಪಾಪವೆಂದು ವ್ಯಾಖ್ಯಾನಿಸಬಹುದು. ದೇವರಿಗೂ ದೇವರ
ಚಿತ್ತಕ್ಕೂ ಸ್ವ ರೂಪರಾಗುವುದರಲ್ಲಿ ಉಂಟಾಗುವ ಕೊರತೆಯು ಮಾಲಿನ್ಯ ವನ್ನು ಮತ್ತು
ದೋಷವನ್ನು ಕೆಲವು ಸಂಗತಿಗಳ ಉದ್ದೇಶ ಪೂರ್ವಕವಾದ ಅಭ್ಯಾಸವೇ ಪಾಪವೆಂದು ನಾವು
ನೀರೆರಚುವವರಾಗಿರಬಾರದು.
ಪಾಪದ ಉಗಮ
135
ಪ್ರಶ್ನೆಯನ್ನು ಹುಟ್ಟಿಸಿದನು. ಈ ಮರದ ಹಣ್ಣ ನು ತಿನ್ನ ಬಾರದು, ತಿಂದ ದಿನವೇ ಸಾಯುವಿ
ಎಂದು ದೇವರು ಆಜ್ಞಾಪಿಸಿದ್ದ ನು. ಅವರು ಸಾಯುವುದಿಲ್ಲ ವೆಂದು ಸೈತಾನನು ಹೇಳಿದನು.
ಅವರು ಒಳ್ಳೆಯದನ್ನು ಮತ್ತು ಕೆಟ್ಟ ದ್ದ ನ್ನು ಅರಿತವರಾಗಿ ದೇವರ ಹಾಗೆ ಆಗುವರೆಂದು
ಸೈತಾನನು ವಾಗ್ದಾನ ಮಾಡಿದನು. ಹವ್ವ ಳು ವಂಚಿತಳಾಗಿ ಇದನ್ನು ನಂಬಿದಳು. ಆದಾಮನ
ಪಾಪವು ಕೆಟ್ಟ ದಾಗಿತ್ತು ಯಾಕೆಂದರೆ ಅವನು ವಂಚಿತನಾಗಲಿಲ್ಲ . ಅವನು ಮಾಡುತಿದ್ದ
ಕಾರ್ಯವನ್ನು ಒಂದು ಮಟ್ಟ ಕ್ಕೆ ಅವನು ಅರ್ಥಮಾಡಿಕೊಂಡಿದ್ದ ನು(1 ತಿಮೊ. 2:14).
ವೈಯಕ್ತಿಕ ಪಾಪ
136
ವರ್ತಿಸುವುದಕ್ಕಿಂತಲೂ ಬಹಳ ಕೆಟ್ಟ ವರು. ನಮ್ಮ ವೈಯಕ್ತಿಕ ಪಾಪಗಳ ವಿಧಗಳು ಮತ್ತು
ಮೊತ್ತಗಳು ಅಂತ್ಯ ವಿಲ್ಲ ದ್ದು . ಅವುಗಳ ಕೆಲವು ಪಟ್ಟಿಗಳನ್ನು ಮಾರ್ಕ 7:21, 22; ರೋಮಾ
1:29-31; ಗಲಾ. 5:19-21 ರಲ್ಲಿ ಕಾಣಬಹುದು. ವೈಯಕ್ತಿಕ ಪಾಪಗಳು ದೇವರ ದೃಷ್ಟಿಯಲ್ಲಿ
ದಂಡನೆಯನ್ನು ಮತ್ತು ದೋಷವನ್ನು ತರುತ್ತವೆ.
137
ರಕ್ಷಣೆ ಹೊಂದದವರು ಹೊಂದಿರುವ ಒಂದೇ ಸ್ವ ಭಾವ ಪಾಪದ ಸ್ವ ಭಾವವಾಗಿದೆ.
ಕ್ರೈಸ್ತರು ಹಳೆಯ ಸ್ವ ಭಾವದೊಂದಿಗೆ ದೈವಿಕ ಸ್ವ ಭಾವವನ್ನು ಕೂಡ ಹೊಂದಿದ್ದಾರೆ(2 ಪೇತ್ರ. 1:4)
— ಇದರಿಂದಲೇ ಆಂತರ್ಯದಲ್ಲಿ ಹೋರಾಟ. ಮೊದಲನೆಯದು ದೇವರ ಮುಂದೆ
ಒಳ್ಳೆಯದಾಗಿರಲು ಸಾಮರ್ಥ್ಯವಿಲ್ಲ ದ್ದು ಮತ್ತು ಎರಡನೆಯದು ಪಾಪಮಾಡಲು
ಸಾಮರ್ಥ್ಯವಿಲ್ಲ ದ್ದು (1 ಯೋಹಾ. 3:9). ಸ್ವಾಸ್ತ್ಯವಾಗಿ ಹೊಂದಿದ ಪಾಪದ ಸ್ವ ಭಾವವು
ದಂಡನೆಯನ್ನು ತರುತ್ತದೆ. ಆತ್ಮೀಕ ವಿಚಾರಗಳಲ್ಲಿ ಭ್ರಷ್ಟ ರಾಗುವುದು, ಅಧಃಪತನ
ಹೊಂದುವುದು ಮತ್ತು ಕುರುಡರಾಗುವುದು ಈ ಪಾಪವನ್ನು ಸ್ವಾಸ್ತ್ಯವಾಗಿ ಹೊಂದಿದ್ದ ರ
ಫಲಿತಾಂಶ. ಮನುಷ್ಯ ನ ಹೃದಯವು ಎಲ್ಲ ದಕ್ಕಿಂತಲೂ ವಂಚಕವಾಗಿದೆ(ಯೆರೆ . 17:9), ಮತ್ತು
ಮನುಷ್ಯ ಹೊಸ ಜನ್ಮ ವು ಮಾತ್ರ ಅವನು ದೇವರ ರಾಜ್ಯ ಕ್ಕೆ ಅರ್ಹನನ್ನಾಗಿ ಮಾಡುತ್ತದೆ
(ಯೋಹಾ. 3:6). ಮನುಷ್ಯ ನ ಅಧಃಪತನವನ್ನು ಒತ್ತಿ ಹೇಳುವಾಗ, ಅವರು ಒಳ್ಳೆಯದನ್ನು
ಪ್ರಶಂಸಿಸುವುದಿಲ್ಲ ಅಥವಾ ಅನುಭವಿಸುವುದಿಲ್ಲ , ಅವರಿಗೆ ಮನಃಸಾಕ್ಷಿಯಿಲ್ಲ ಅಥವಾ ಅವರು
ತಮ್ಮ ಕಾಮಾಭಿಲಾಷೆಗಳನ್ನು ನೆರವೇರಿಸಿಕೊಳ್ಳು ತ್ತಾರೆ ಎಂದು ಸತ್ಯ ವೇದವು ಬೋಧಿಸುವುದಿಲ್ಲ .
ಪಾಪದ ಸ್ವ ಭಾವದ ದಂಡ ದೇವರಿಂದ ಅಗಲಿಸಲ್ಪ ಡುವುದು ಮತ್ತು ಈ ಅಗಲಿಕೆ ಕ್ರಿಸನಲ್ಲಿ
ನಂಬಿಕೆಯಿಟ್ಟು ವಿಮೋಚಿಸಲ್ಪ ಡದಿದ್ದ ರೆ " ನಿತ್ಯ ತ್ವ ದುದ್ದ ಕ್ಕೂ ", ಎರಡನೇ ಮರಣವೇ
ನಿಶ್ಚಿತವಾಗಿರುತ್ತದೆ.
ಆರೋಪಿಸುವುದು ಅಂದರೆ ಒಬ್ಬ ವ್ಯ ಕ್ತಿಯ ಲೆಕ್ಕ ಕ್ಕೆ ಸೇರಿಸುವುದು, ಆ ವ್ಯ ಕ್ತಿಯೇ
ಅದಕ್ಕೆ ಮೂಲ ಕಾರಣನು ಮತ್ತು ಅವನು ಇನ್ನೊಬ್ಬ ರಿಗೆ ಸೇರಿದವನು ಎಂಬ
ಜವಾಬ್ದಾರಿಯನ್ನು ಹೊರಿಸುವುದು. ಇದಕ್ಕೆ ಉತ್ತಮವಾದ ಸತ್ಯ ವೇದದ
ಉಧಾಹರಣೆಯೆಂದರೆ ಫಿಲೆ 18, ಅಲ್ಲಿ ಓಡಿಹೋದ ಗುಲಾಮನಾದ ಒನೆಸೀಮನ
ಸಾಲವೇನಾದರೂ ಇದ್ದಾರೆ ತನ್ನ ಲೆಕ್ಕ ಕ್ಕೆ ಹಾಕುವಂತೆ ಪೌಲನು ಹೇಳುತ್ತಿದ್ದಾನೆ. ಇದು ಪೌಲನ
138
ಸಾಲವಲ್ಲ ವಾದ್ದ ರಿಂದ, ಇದು ನ್ಯಾಯಾಂಗದಿಂದ ಹೊರಿಸಲ್ಪ ಟ್ಟ ದಾಗಿತ್ತು . ನಾವು
ಆದಾಮನಲ್ಲಿದ್ದ ಕಾರಣ ಆದಾಮನ ಪಾಪವು ಮನುಷ್ಯ ರಾದ ನಮ್ಮ ಮೇಲೆ
ಹೊರಿಸಲ್ಪ ಟ್ಟಿರುವದು ನಿಜವಾದದ್ದಾಗಿದೆ( ರೋಮಾ. 5:12; ಗಲಾ. 3:22). ನಾವು ಈ
ಮೊದಲು ನೋಡಿರುವ ಹಾಗೆ, ಒಬ್ಬ ಸಂಪೂರ್ಣ ವ್ಯ ಕ್ತಿಯು ತನ್ನ ಪೂರ್ವಿಕನಲ್ಲಿದ್ದು ಅವನಲ್ಲಿ
ಕ್ರಿಯೆ ಮಾಡಿದ ಸಂಗತಿಯು ವಂಶಾವಳಿಯಿಂದ ಬಂದ ಪಾಪದ ವಿಷಯಕ್ಕೆಒಂದು
ವಾದವಾಗಿದೆ. (ಇಬ್ರಿ. 7:9-10 ಹೋಲಿಸಿ ನೋಡಿರಿ). ರೋಮಾ 5:12, ರಲ್ಲಿ, "ಪಾಪ
ಮಾಡಿದನು", ಎಂಬುದು ಉತ್ತಮವಾದ ಅನುವಾದವಾಗಿದೆ ಯಾಕೆಂದರೆ ಎಲ್ಲಾ
ಮನುಷ್ಯ ರು ಆದಾಮನಲ್ಲಿ ಮಾಡಿದ ಒಂದು ಕಾರ್ಯ ಆದಾಗಿತ್ತು . ಅದೇ ರೀತಿಯಲ್ಲಿ,
ಕ್ರಿಸ್ತನ ನೀತಿಯು ಎಲ್ಲಾ ವಿಶ್ವಾಸಿಗಳ ಲೆಕ್ಕ ಕ್ಕೆ ಸೇರಿಸಲ್ಪ ಟ್ಟಿದೆ. ರೋಮಾ 5:14 ವಚನವು ಈ
ಹೊರಿಸಲ್ಪ ಟ್ಟ ಪಾಪದ ಫಲಿತಾಂಶ ಸ್ವಾಭಾವಿಕ ಮರಣ ಎಂದು ತೋರಿಸುತ್ತದೆ(ಮರಣವು
ಆಳುತಿತ್ತು ). ಆದಾಮನಲ್ಲಿ ಎಲ್ಲ ರು ಸತ್ತರು ಮತ್ತು ಕ್ರಿಸ್ತನಲ್ಲಿ ಎಲ್ಲ ರು ಬದುಕುವಂತಾದರು —
ಅಥವಾ ಇನ್ನು ಖಚಿತವಾಗಿ ಹೇಳುವದಾದರೆ ಕ್ರಿಸ್ತನಲ್ಲಿ ಎಲ್ಲ ರು ಬದುಕಿಸಲ್ಪ ಟ್ಟ ರು. ಏನ್ ಎ ಸ್
ಬಿ ಎಂಬ ಭಾಷಾಂತರವು ರೋಮಾ 3:23 ವಚನವನ್ನು "ಎಲ್ಲ ರೂ ಪಾಪ ಮಾಡಿದ್ದಾರೆ",
ಎನ್ನ ವುದಕ್ಕೆ ಬದಲಾಗಿ "ಎಲ್ಲ ರೂ ಪಾಪಮಾಡಿದರು" ಎಂದು ಅನುವಾದ ಮಾಡುತ್ತದೆ,
ಅಂದರೆ ಆದಾಮನು ಪಾಪಮಾಡಿದ ಸಮಯದಲ್ಲೇ ನಾವೆಲ್ಲ ರೂ ಆದಾಮನಲ್ಲಿ
ಪಾಪಮಾಡಿದೆವು ಎಂದು ಅರ್ಥ(ರೋಮಾ 5:12 ರಲ್ಲಿರುವ ಅದೇ ಚಿಂತನೆ). ಸತತವಾಗಿ
"ಹೊಂದದೆ ಹೋಗುವುದು" ಅಂದರೆ ಆದಾಮನಿಂದ ಹೊಂದಿದ ಪಾಪದೊಂದಿಗೆ ವೈಯಕ್ತಿಕ
ಪಾಪಗಳನ್ನು ಹೆಚ್ಚಿಸುವುದು.
139
ಕ್ರೈಸ್ತರ ಪಾಪ ಮತ್ತು ಅದಕ್ಕೆ ಪರಿಹಾರ
140
ಸೈತಾನನು ನಮ್ಮ ಮೂರನೆಯ ವೈರಿಯಾಗಿದ್ದಾನೆ. ಸೈತಾನನ ತಂತ್ರಗಳು
ಕ್ರಮಬದ್ಧ ವಾದ ಬುದ್ದಿವಂತಿಕೆಯಿಂದ ಕೂಡಿದ್ದ ದಾಗಿದೆ(ಎಫೆ. 6:11); ನಾವು ಅವನೊಂದಿಗೆ
ಸತತವಾದ ಕುಸ್ತಿಪಂದ್ಯ ದಲ್ಲಿದ್ದೇವೆ(6:12). ಸೈತಾನನು ಸ್ನೇಹಿತನ ಹಾಗೆ ನಮ್ಮ ನ್ನು
ಸಮೀಪಿಸುವಾಗ ಅವನನ್ನು ಎದುರಿಸುವುದೇ ಸೈತಾನನ ಮೇಲೆ ಜಯ ಸಾಧಿಸುವ
ರಹಸ್ಯ ವಾಗಿದೆ.(ಯಾಕೋ. 4:7 ಬಿ ). ಅಥವಾ ಅವನು ಉಗ್ರನಾಗಿ ಆಕ್ರಮಿಸುವಾಗ (1 ಪೇತ್ರ
. 5:8-9), ಮತ್ತು ದೈವೀಕ ನಿಬಂಧನೆಯನ್ನು ಮಾತ್ರ ಅವಲಂಬಿಸಿರಿ ದೇವರ ಆತ್ಮ ನಿಂದ
(1 ಯೋಹ:4.4) ದೇವರಿಗೆ ಒಪ್ಪಿಸಿಕೊಡಿರಿ. (ಯಾಕೋ. 4:7) ನಂಬಿಕೆಯಿಂದ (1 ಪೇತ್ರ .
5:9), ದೇವರಿಂದ ನಮಗೆ ಕೊಡಲ್ಪ ಟ್ಟಿರುವ ಸರ್ವಾಯುಧಗಳನ್ನು (ಎಫೆ. 6:11-17).
ಧರಿಸಿಕೊಂಡು ದೇವರ ಒದಗಿಸುವಿಕೆಯ ಮೇಲೆ ಆತುಕೊಳ್ಳ ಬೇಕಾಗಿದೆ.
141
ಮತ್ತು ಪ್ರೀತಿಯುಳ್ಳ ಪರಿಶುದ್ದ ಜನರು ಯಾವಾಗಲೂ ತಮ್ಮ ನ್ನು ಘೋರ ಪಾಪಿಗಳೆಂದು
ಎಣಿಸುವುದು..
ಅಧ್ಯಾಯ
4
ರಕ್ಷಣಾಶಾಸ್ತ್ರ:
ರಕ್ಷಣೆಯಅಧ್ಯ ಯನ
- ಭಾಗ 1 -
ಪಾಪದ ಅಧ್ಯ ಯನವು ರಕ್ಷಣೆಯ ಅತೀ ಶ್ರೇಷ್ಠ ವಾದ ಅಗತ್ಯ ವನ್ನು ನಮಗೆ
ಸ್ಪ ಷ್ಟ ವಾಗಿ ತೋರಿಸಿದೆ. ರಕ್ಷಣೆಯ ಅಧ್ಯ ಯನವನ್ನು ರಕ್ಷಣಾಶಾಸ್ತ್ರವೆಂದು ಕರೆಯುತ್ತಾರೆ. ಗ್ರೀಕ್
ಭಾಷೆಯಲ್ಲಿ ರಕ್ಷಕನು ಅಂದರೆ ಸೋಟೆರ್ ಎಂದರ್ಥ.
142
ಕಾರ್ಯವು ಎಲ್ಲಾ ಮನುಷ್ಯ ರು ಈಗಾಗಲೇ ರಕ್ಷಣೆ ಹೊಂದಿದ್ದಾರೆ ಎಂದು ಖಾತರಿ
ನೀಡುವುದಿಲ್ಲ , ಆದರೆ ಎಲ್ಲಾ ಮನುಷ್ಯ ರು ರಕ್ಷಣೆ ಹೊಂದಲು ಆತನು ಒಂದು ಮಾರ್ಗವನ್ನು
ತೆರಿದ್ದಾನೆ ಎಂದು ಹೇಳುತ್ತದೆ. ನಾಲ್ಕು ಮುಖ್ಯ ಪದಗಳು ಕ್ರಿಸ್ತನ ಪೂರ್ತಿಗೊಂಡ
ಕಾರ್ಯವನ್ನು ವಿವರಿಸುತ್ತವೆ.
143
ಅನಂತ ಜೀವವನ್ನು ಹೊಂದಿದವನಾಗಿರಬೇಕು. ಒಬ್ಬ ನಿರ್ದೋಷಿಯಾಗಿರುವ
ಸಾಮಾನ್ಯ ಮನುಷ್ಯ ನು ಕೇವಲ ಮತ್ತೊಬ್ಬ ನಿಗಾಗಿ ಮಾತ್ರ ಮರಣಿಸಲು ಸಾಧ್ಯ .
ದೇವರ ನಿಯಮವು "ಪ್ರಾಣಕ್ಕೆ ಪ್ರಾಣ" (ಧರ್ಮೋ:19:21)ಎಂಬುದಾಗಿದೆ.
ಮತ್ತೊಂದು ರೀತಿಯಲ್ಲಿ ಹೇಳುವದಾದರೆ ಪರಿಪೂರ್ಣವಾದ ಬದಲಿ ದೇವರೇ
ಆಗಿದ್ದಾನೆ.
144
ದಂಡನೆಯ ಜವಾಬ್ದಾರಿಯನ್ನು ತನ್ನ ಮೇಲೆ ಹೊತ್ತು ಕೊಳ್ಳು ವುದರ ಮೂಲಕ ಆತನು
ಪಾಪಗಳಿಗಾಗಿಯೂ ಸತ್ತನು. ದೇವರ ಕುಮಾರನಾದ ಕ್ರಿಸ್ತನು ,ಪರಿಪೂರ್ಣ ಮನುಷ್ಯ ನು,
ಆದರ್ಶ ವ್ಯ ಕ್ತಿಯು, ಸಮರ್ಪಕ ಮತ್ತು ಏಕೈಕ ಬದಲಿಯಾಗಿದ್ದಾನೆ.
145
ಮೂರನೆಯ ಪದವು ಪಾವತಿಯ ರಶೀದಿಯ ಮೇಲೆ ಬಿಡುಗಡೆ ಮಾಡುವ
ಅರ್ಥವನ್ನು ಕೊಡುತ್ತದೆ. 1 ಪೇತ್ರ.1:18-19 ವಚನಗಳು ಆ ಬೆಲೆ ಕ್ರಿಸ್ತನ ರಕ್ತ ಎಂಬುದನ್ನು
ಸೂಚಿಸುತ್ತದೆ ಮತ್ತು ತೀತ 2:14 ವಚನವು ನಾವು ಆತನ ಸ್ವಾಸ್ತ್ಯವಾಗುವಂತೆ ಅಪರಾಧಗಳಿಂದ
ವಿಮೋಚಿಸಲ್ಪ ಟ್ಟ ವು ಎಂದು ಹೇಳುತ್ತದೆ. ನಾಲ್ಕ ನೆಯ ಪದವು ಮೂರನೆಯ ಪದದಂತೆಯೇ
ಇದೆ, , ಇದು "ಇದರಿಂದ ದೂರ" ಎಂಬ ಬಿಡುಗಡೆಯ ಕಲ್ಪ ನೆಯನ್ನು ಪೂರ್ವಪ್ರತ್ಯ ಯ
(ಅಪೊ) ಸೇರ್ಪಡೆಯೊಂದಿಗೆ ಬಲಪಡಿಸುತ್ತದೆಮತ್ತು ರೋಮಾ. 3:24 ಮತ್ತು ಎಫೆ.1:14
ಗಳಲ್ಲಿ ನಾಮಪದದ ರೂಪದಲ್ಲಿ ಕಂಡುಬರುತ್ತದೆ.
146
ಎಂದು 1 ಯೋಹಾ. 4:10 ವಚನವು ತೋರಿಸಿಕೊಡುತ್ತದೆ. ಈ ದೇವರ ತೃಪ್ತಿಯು ಎಲ್ಲಾ
ಸಂಗತಿಗಳನ್ನು ಒಳಗೊಂಡಿದೆ: ಅದು ನಮ್ಮ ಪಾಪಗಳಿಗೆ ಮಾತ್ರವಲ್ಲ ಸಮಸ್ತ ಲೋಕದ
ಪಾಪಗಳಿಗೆ'. ದೇವರಿಗೆ ನಿವಾರಣೆಯಾಗದಿದ್ದ ರೆ ಅದರ ಫಲ ಆತನ ಉಗ್ರತೆಯಾಗಿರುತ್ತದೆ.
ಹಳೆಯ ಒಡಂಬಡಿಕೆಯ "ಕೃಪಾಸನ", (ಇಬ್ರಿಯ . 9:5) ಎಂಬ ಪದವನ್ನು ಮತ್ತು
ಪಾಪನಿವಾರಣೆ (ರೋಮಾ. 3:25, ಕ್ರಿಸ್ತನ ಕುರಿತು ಮಾತನಾಡುವಾಗ) ಎಂಬ ಪದವನ್ನು
ಗ್ರೀಕ್ ಭಾಷೆಗೆ ಅನುವಾದ ಮಾಡಲು ಹೊಸಒಡಂಬಡಿಕೆಯಲ್ಲಿ ಒಂದೇ ಪದವನ್ನು
ಬಳಸಲಾಗಿದೆ. ಕೃಪಾಸನವು ಪಾಪವನ್ನು ಮುಚ್ಚು ವುದನ್ನು ಮತ್ತು ಅದು ಬೇಡಿಕೆಯಿಟ್ಟ
ದೈವಿಕ ನೀತಿಯ ಮಟ್ಟ ವನ್ನು ಎತ್ತಿ ತೋರಿಸುತ್ತಿತ್ತು .
ಸಂಧಾನ. ಬದಲಿ ಮತ್ತು ವಿಮೋಚನೆ ಪಾಪದ ಕಡೆಗೆ, ಪಾಪ ನಿವಾರಣೆ ದೇವರ ಕಡೆಗೆ
ಮತ್ತು ಈಗ ಮನುಷ್ಯ ನ ಸಂಧಾನ—ಇವುಗಳೇ ಕ್ರಿಸ್ತನು ಬಾಧೆಯ ಮತ್ತು ಮರಣದ
ಸಾಧನೆಗಳು. ಆತನ ಮರಣವು ಪಾಪದ ಸ್ವ ಭಾವವನ್ನು ತೀರ್ಪಿಗೆ ಒಳಪಡಿಸಿತು ಮತ್ತು
ಕ್ಷಮಿಸು, ಶುದ್ದೀಕರಿಸು ಎಂಬ ಎರಡು ಶ್ರೇಷ್ಠ ಕಾರ್ಯಗಳಿಗೆ ಅಡಿಪಾಯವಾಗಿದೆ
ಎಂಬುದನ್ನು ಪಾಪಶಾಸ್ತ್ರದ ಅಡಿಯಲ್ಲಿ ಈಗಾಗಲೇ ನೋಡಿದ್ದೇವೆ. ದೇವರು
ಮನುಷ್ಯ ನೊಂದಿಗೆ ಸಂಧಾನವಾದನು ಎಂದು ಹೇಳುವುದು ಸಹಜವಾಗಿ ಮಾಡುವ
ತಪ್ಪಾಗಿದೆ. ಆದರೆ ಸಂಧಾನವಾಗುತ್ತಿರುವವನು ಮನುಷ್ಯ ನೆಂದು ಸತ್ಯ ವೇದವು ಹೇಳುತ್ತದೆ.
ಸಾಮಾನ್ಯ ವಾದ ಬಳಕೆಯಲ್ಲಿ, ಸಂಧಾನ ಎಂದರೆ ಹಗೆಯಿಂದ ಕೂಡಿರುವ ಇಬ್ಬ ರನ್ನು ಒಟ್ಟಿಗೆ
ಕರೆತರುವುದೇ ಆಗಿದೆ. ಸಂಧಾನ ಅಂದರೆ ಸ್ಥಾನದ ಸಂಪೂರ್ಣ ಬದಲಾವಣೆ. ಒಬ್ಬ ವ್ಯ ಕ್ತಿಯ
ವೈರತ್ಯ ವನ್ನು ತೆಗೆದುಹಾಕಿ ಸ್ನೇಹವನ್ನು ಸಂಧಾನವು ತರುತ್ತದೆ. ಕ್ರಿಸ್ತನ ರಕ್ತದ ಮೂಲಕ ಮತ್ತು
147
ಕ್ರಿಸ್ತನ ಮರಣದಿಂದ(ತ್ಯಾಗದ ಮರಣ) (ಕೊಲೊ. 1:20)ಸಮನ್ವ ಯವಾದ ಸಂಧಾನವು
ಸಾಧ್ಯ ವಾಯಿತು.
ಚುನಾವಣೆ
148
ಕೆಲವರನ್ನು ಆರಿಸಿಕೊಂಡನು(ಯೋಹಾ. 6:37). ಆಯ್ಕೆಯಾದವನು ನಾಶವಾದನು ಎಂದು
ಎಲ್ಲೂ ಹೇಳುವುದಿಲ್ಲ . ಬೆಂಕಿಯ ಕೆರೆಯು ಸೈತಾನನಿಗೂ ಮತ್ತು ಅವನ ದೂತರಿಗೂ
ಸಿದ್ಧ ಮಾಡಲ್ಪ ಟ್ಟಿತು. ದೇವರು ಯಾರನ್ನು ಅಲ್ಲಿಗೆ "ಕಳುಹಿಸುವುದಿಲ್ಲ "; ಆದರೆ ಜನರು
ಕ್ರಿಸ್ತನನ್ನು ತಿರಸ್ಕ ರಿಸಿದ ಕಾರಣದಿಂದ ಅಲ್ಲಿಗೆ ಹೋಗುತ್ತಾರೆ. ರೋಮಾ 9 ಅಧ್ಯಾಯವು
ಸಭೆಯಲ್ಲಿರುವ ವಿಶ್ವಾಸಿಗಳ ಕುರಿತು ಮಾತನಾಡದಿದ್ದ ರೂ, ಚುನಾವಣೆಯ ಕುರಿತಾದ
ಉತ್ತಮವಾದ ಭಾಗವಾಗಿದೆ. ದೇವದೂತರು, ಇಸ್ರಾಯೇಲ್ಯ ರು, ಕ್ರಿಸ್ತನು ಕೂಡ
ಆರಿಸಿಕೊಳ್ಳ ಲ್ಪ ಟ್ಟ ವನು ಎಂದು ಹೇಳಲಾಗಿದೆ (1 ತಿಮೊ. 5:21; ಯೆಶಾ. 45:3-4; 1 ಪೇತ್ರ.
2:6). ಕ್ರೈಸ್ತರು ಕೂಡ ರೋಮಾ. 8:33; ಕೊಲೊ. 3:12; 1 ಪೇತ್ರ. 1:2 ವಚನಗಳಲ್ಲಿ
ಆರಿಸಿಕೊಳ್ಳ ಲ್ಪ ಟ್ಟ ವರು ಎಂದು ಕರೆಯಲ್ಪ ಟ್ಟಿದ್ದಾರೆ.
149
ಸಾಮಾನ್ಯ ಕರೆಯು ಎಲ್ಲಾ ಜನರು ದೇವರ ಬಳಿ ಬರುವಂತೆ ಆಹ್ವಾನಿಸುತ್ತದೆ
ಮತ್ತು ಎಲ್ಲಾ ಜನರನ್ನು ಕ್ರಿಸ್ತನ ಕಡೆಗೆ "ಎಳೆಯುವುದಕ್ಕೆ" ಸಂಬಂಧಿಸಿದೆ(ಯೋಹಾ. 12:32).
ಈ ಸಾಮಾನ್ಯ ಕರೆಯನ್ನು ಅನೇಕರು ತಿರಸ್ಕ ರಿಸುತ್ತಾರೆ ಮತ್ತು ಅವರೇ ಅದಕ್ಕೆ
ಹೊಣೆಯಾಗಿರುತ್ತಾರೆ (ಇಬ್ರಿ.12:25).ಪ್ರಭಾವವುಳ್ಳ ಅಥವಾ ಪರಿಣಾಮಕಾರಿಯಾದ
ಕರೆಯುವಿಕೆಯು ಖಂಡಿತವಾದ ರಕ್ಷಣೆಯ ಫಲಿತಾಂಶವನ್ನು ಹೊಂದಿರುತ್ತದೆ. ಇದು
ಯೋಹಾ. 6:37, 44 "ಸಮೀಪಿಸುವುದಕ್ಕೆ" ಸಂಬಂಧಿಸಿದೆ. ತಂದೆಯಿಂದ ಮಗನಿಗೆ
ಕೊಡಲ್ಪ ಟ್ಟಿರುವವರೆಲ್ಲ ರೂ ಖಂಡಿತವಾಗಿಯೂ ಕ್ರಿಸ್ತನ ಬಳಿ ಬರುತ್ತಾರೆ ಮತ್ತು ಆತನಿಂದ
ಸ್ವೀಕರಿಸಲ್ಪ ಡುತ್ತಾರೆ. ಸುವಾರ್ತೆಯನ್ನು ಸ್ವೀಕರಿಸುವ ಬಲವಂತವೇನೂ ಇಲ್ಲ ; ಆದರೆ
ಚುನಾಯಿಸಲ್ಪ ಟ್ಟ ವರು ಇದಕ್ಕೆ ಸಿದ್ಧ ರಾಗಿರುತ್ತಾರೆ. ದೇವರಿಂದ ಕರೆಯಲ್ಪ ಡುವದು
ಮಹಿಮೆಗೇರಿಸುವಷ್ಟು ಒಳ್ಳೆಯದಾಗಿರುವುದರಿಂದ ರಕ್ಷಣೆಯ ಫಲ
ಖಚಿತವಾಗಿರುತ್ತದೆ(ರೋಮಾ. 8:39); ಕರೆಯುವಾತನು ಖಂಡಿತವಾಗಿಯೂ ಅದನ್ನು
ಮಾಡುವನು(1 ಥೆಸ. 5:24).
150
ಮೇಲೆ ಒತ್ತಡ ಹೇರುವುದಾದರೆ, ಅದು ವಾಸ್ತವವಾಗಿ ಯಾವ ಪ್ರಯೋಜನವೂ ಇಲ್ಲ
ರಕ್ಷಣೆಯ ವೃತ್ತಿಯಾಗಿರುತ್ತದೆ. ವಾಸ್ತವದಿಂದ ದೂರವಿರುತ್ತದೆ.
ಒಬ್ಬ ವ್ಯ ಕ್ತಿಯು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ಕೂಡಲೇ ಕ್ರಿಸ್ತನ ನೀತಿಯು ಅವನ/ ಅವಳ
ಲೆಕ್ಕ ಕ್ಕೆ ಸೇರಿಸಲ್ಪ ಡುತ್ತದೆ. ಮೂರನೆಯದಾಗಿ, ಮನುಷ್ಯ ರು ನ್ಯಾಯ ತೀರ್ವಿಕೆಯ
ವಿಷಯದಲ್ಲಿ ಅರುಹನ್ನು ಹೊಂದುತ್ತಾರೆ(ವ. 11). ಇದು ಶಿಲುಬೆಯ ಸೈತಾನನು ಹೊಂದಿದ
ತೀರ್ಪನ್ನು ಸೂಚಿಸುತ್ತದೆ. ಪಾಪದ ನಾಯಕನೇ ನ್ಯಾಯ ತೀರ್ವಿಕೆಗೆ ಒಳಗಾಗುವುದಾದರೆ,
ಅವನ ಹಿಂಬಾಲಕರು ಅವನ ಈ ಲೋಕದ ವ್ಯ ವಸ್ಥೆ ಗಳಲ್ಲಿ ಭಾಗಿಗಳಾಗಿದ್ದ ರಿಂದ ಅವರು
ತೀರ್ವಿಕೆಗೆ ಒಳಗಾಗುವುದು ಖಂಡಿತ(ಅವರು ಸೈತಾನ ಕಾರ್ಯ ಮಾಡುತಿದ್ದೇವೆಂದು
ತಿಳಿದರು ತಿಳೀಯದಿದ್ದ ರೂ).
ಇದರಿಂದ ನಾವು ಕಲಿಯುವ ಪ್ರಾಯೋಗಿಕವಾದ ಪಾಠವೇನೆಂದರೆ, ಪವಿತ್ರಾತ್ಮ ನು
ಬರೆಯಲ್ಪ ಟ್ಟ ಅಥವಾ ಸಾರಲ್ಪ ಟ್ಟ ಸತ್ಯ ವೇದದ ಸಂದೇಶವಾದ ಕ್ರಿಸ್ತನ ಸುವಾರ್ತೆಯ ಮೂಲಕ
ಅರುಹನ್ನು ಹುಟ್ಟಿಸುವ ಕಾರ್ಯವನ್ನು ಮಾಡುತ್ತಾನೆ.
151
ಮನುಷ್ಯ ರು ಈ ಸರಳವಾದ ಸುವಾರ್ತೆಗೆ ಎಲ್ಲಾ ರೀತಿಯ ಕ್ರಿಯೆಗಳನ್ನು ಮತ್ತು ವಿಧಿಗಳನ್ನು
ಸೇರಿಸುವ ಪ್ರಯತ್ನ ವನ್ನು ಮಾಡುತ್ತಿದ್ದಾರೆ—ಈ ರೀತಿಯ ಸೇರ್ಪಡೆಗಳು ರಕ್ಷಣೆಯು ಕೇವಲ
ದೇವರ ಕೃಪೆಯಿಂದ ಮಾತ್ರ ಬೇರೆ ಯಾತರಿಂದಲೂ ಅಲ್ಲ ಎಂಬ ಸತ್ಯ ವನ್ನು ಇಲ್ಲ ದಂತೆ
ಮಾಡಬಹುದು(ಎಫೆ. 2:8-9). ಒಬ್ಬ ಮನುಷ್ಯ ನು ತನ್ನ ಹಿನ್ನ ಲೆಯ ಕುರಿತಾಗಿ ತನ್ನ ಮನಸ್ಸ ನ್ನು
ಬದಲಾಯಿಸದೆ ನಿಜವಾಗಿ ನಂಬಿಯಿಡಲು ಅಥವಾ ನಂಬಲು ಸಾಧ್ಯ ವಾಗುವುದಿಲ್ಲ
ಆದಕಾರಣ ಮಾನಸಾಂತರವು ನಂಬಿಕೆಯ ಒಂದು ಭಾಗವಾಗಿದೆ. ಮಾನಸಾಂತರ ಅಂದರೆ
ಸರಳವಾಗಿ ಮನಸ್ಸ ನ್ನು ಬದಲಾಯಿಸುವುದು. ಒಬ್ಬ ವ್ಯ ಕ್ತಿ ಪರಿವರ್ತನೆ ಹೊಂದುವಾಗ
ಅಗತ್ಯ ವಿಲ್ಲ ದಿದ್ದ ರೂ ಭಾವನೆಗಳು ವ್ಯ ಕ್ತವಾಗಬಹುದು. ಒಬ್ಬ ವ್ಯ ಕ್ತಿಯು ಅಳುತ್ತಾ
ಪ್ರಾರ್ಥಿಸಬೇಕು ಎಂಬ ಪರಿಕಲ್ಪ ನೆಯು ಸತ್ಯ ವಲ್ಲ ಮತ್ತು ಸತ್ಯ ವೇದ ಆಧಾರಿತವಲ್ಲ . ಕೆಲವರು
ಬಾಯಿಂದ ಅರಿಕೆಮಾಡಲು, ದೀಕ್ಷಾಸ್ನಾನ ಹೊಂದಲು, ಕರ್ತನ ಅನ್ಯೋನ್ಯ ತೆಯಲ್ಲಿ ಪಾಲು
ಹೊಂದಲು ಅಥವಾ ಇತರೆ ಸಂಗತಿಗಳನ್ನು ರಕ್ಷಣೆಯ ಭಾಗಗಳಾಗಿ ಮಾಡಲು
ಇಷ್ಟ ಪಡುತ್ತಾರೆ. ಆದರೆ ನಂಬಿಕೆಯು ಮಾತ್ರವೇ ರಕ್ಷಣೆಯಾಗಿದೆ, ಅವುಗಳಲ್ಲ . ಇವುಗಳು
ರಕ್ಷಣೆಯ ಸರಿಯಾದ ಪರಿಣಾಮಗಳು ಆದರೆ ನಂಬಿಕೆಯು ಮಾತ್ರ ದೇವರು ಕೃಪೆಯಿಂದ
ನಮಗೆ ರಕ್ಷಣೆ ನೀಡುವ ಮಾಧ್ಯ ಮವಾಗಿದೆ— ಇದಕ್ಕೆ ಬೇರೆ ಯಾವುದರ ಅಗತ್ಯ ವಿಲ್ಲ
152
ಹೊಸ ಒಡಂಬಡಿಕೆಯಲ್ಲಿ,ನಂಬಿಕೆ ಮತ್ತು ವಿಶ್ವಾಸ ಎರಡಕ್ಕೂ ಒಂದೇ ಪದವನ್ನು
ಗ್ರೀಕ್ ಭಾಷೆಯಲ್ಲಿ ಬಳಸಲಾಗಿದೆ. ನಂಬಿಕೆಯು ನಾಮ ಪದವಾಗಿದೆ ಮತ್ತು ವಿಶ್ವಾಸವು
ಕ್ರಿಯಾಪದವಾಗಿದೆ—ಅಂದರೆ ನಂಬಿಕೆಯು— ಯೇಸುಕ್ರಿಸ್ತನ ಮೇಲೆ —ಭರವಸೆಯಿಡುವ
ಕ್ರಿಯೆಯಾಗಿದೆ. ಜನರು ನಂಬಿಕೆಗೆ ಬರುವುದರ ಕುರಿತಾಗಿ ಮಾತನಾಡುವುದುಂಟು, ಆದರೆ
ರಕ್ಷಿಸುವ ನಂಬಿಕೆಯು ಸರಿಯಾದ ದೃಷ್ಟಿಯನ್ನು ಅಥವಾ ವಸ್ತು ವನ್ನು ಹೊಂದಿರಬೇಕೆಂದು
ಸತ್ಯ ವೇದವು ಸ್ಪ ಷ್ಟ ವಾಗಿ ಹೇಳುತ್ತದೆ. ಜನರು ಎಲ್ಲಾ ರೀತಿಯ ವಿಷಯಗಳಲ್ಲೂ ,
ಪರಿಕಲ್ಪ ನೆಗಳಲ್ಲೂ , ಅಥವಾ ವಸ್ತು ಗಳಲ್ಲೂ ನಂಬಿಕೆಯಿಡಬಹುದು. ಆದರೆ ಯೇಸುಕ್ರಿಸ್ತನಲ್ಲಿ
ನಂಬಿಕೆಯಿಡುವವರಿಗೆ ಮಾತ್ರ ದೇವರು ರಕ್ಷಣೆಯನ್ನು ನೀಡುತ್ತಾನೆ. ಕರ್ತನಾದ
ಯೇಸುಕ್ರಿಸ್ತನಲ್ಲಿ ಇಡುವ ನಂಬಿಕೆಯೇ ರಕ್ಷಣೆಯನ್ನು ಉಂಟುಮಾಡುತ್ತದೆ.
153
ಅಧ್ಯಾಯ
5
ರಕ್ಷಣಾಶಾಸ್ತ್ರ:
ರಕ್ಷಣೆಯಅಧ್ಯ ಯನ
- ಭಾಗ 2 -
ದೇವರ ರಕ್ಷಣಾ ಕಾರ್ಯ
154
ರಿಚಸ್ ಆಫ್ ಡಿವೈನ್ ಗ್ರೇಸ್" ಅಡಿಯಲ್ಲಿ ಗಮನಿಸಿ) ಅವುಗಳಲ್ಲಿ ಕೆಲವನ್ನು ನಾವು
ನೋಡೋಣ.
155
ಪ್ರಾಮುಖ್ಯ ವಾದ ನೀತಿವಂತಿಕೆ ಮತ್ತು ನಾವು ಕ್ರಿಯೆಗಳಿಲ್ಲ ದೆ ನಂಬಿಕೆಯಿಂದ ದೇವರ
ದೃಷ್ಟಿಯಲ್ಲಿ ನೀತಿವಂತರಾದ ನಂತರ ಮಾತ್ರ ಹೊಂದುವಂತದ್ದು .
ನಾವು ದೇವರ ಆತ್ಮ ನಿಂದಲೂ ಮತ್ತು ದೇವರ ವಾಕ್ಯ ದಲ್ಲಿ ಶೇಖರಿಸಲ್ಪ ಟ್ಟಿರುವ
ಸುವಾರ್ತೆಯ ಸಂದೇಶದಿಂದಲೂ ಮತ್ತೆ ಹುಟ್ಟಿದವರಾಗಿದ್ದೇವೆ.(ಯೋಹಾ. 3:5; 1 ಪೇತ್ರ.
1:22-25). ನಾವು ರಕ್ತ ಸಂಬಂಧದಿಂದಲೋ (ಸ್ವಾಭಾವಿಕ ಜನನ), ಶರೀರದ
ಇಚ್ಛೆ ಯಿಂದಲೋ(ಸ್ವ ನಿರ್ಣಯ ಅಥವಾ ಸ್ವ ಶಕ್ತಿಯಿಂದ), ಅಥವಾ ಮನುಷ್ಯ ನ
ಚಿತ್ತದಿಂದಲೋ(ಬೇರೊಬ್ಬ ರ ಕ್ರಿಯೆ, ಪಾದ್ರಿಗಳ ಮಧ್ಯ ಸ್ಥಿಕೆ ಅಥವಾ ನೀರಿನ ದೀಕ್ಷಾಸ್ನಾನ)
ದೇವರಿಗೆ ಹುಟ್ಟಿದವರಲ್ಲ . ದೇವರಿಂದ ಹುಟ್ಟಿದ ಮಕ್ಕ ಳು ಕ್ರಿಸ್ತನನ್ನು ಸ್ವೀಕರಿಸುವುದರ ಮೂಲಕ,
ಆತನ ನಾಮದಲ್ಲಿ ನಂಬಿಕೆಯಿಡುವುದರ ಮೂಲಕ ಈ ಅಧಿಕಾರವನ್ನು
ಪಡೆದುಕೊಂಡಿದ್ದಾರೆ(ಯೋಹಾ. 1:12-13).
156
ಸಾರಾಂಶದಲ್ಲಿ ಹೇಳುವದಾದರೆ, ಪುನರ್ಜನ್ಮ ಅಥವಾ ಮತ್ತೆ ಹುಟ್ಟು ವುದು ಆತ್ಮೀಕ
ಕ್ಷೇತ್ರದಲ್ಲಿ ನಿತ್ಯ ಜೀವವನ್ನು ಹೊಂದುವುದಾಗಿದೆ. ಮತ್ತೆ ಹುಟ್ಟಿದವರು ಮಾತ್ರ ನಿತ್ಯ
ದಂಡನೆಯಿಂದ ರಕ್ಷಣೆ ಹೊಂದುತ್ತಾರೆ ಮತ್ತು ದೇವರು ಮಾತ್ರ ನಮ್ಮ ನ್ನು ಮತ್ತೆ ಹುಟ್ಟಿಸಲು
ಶಕ್ತನಾಗಿದ್ದಾನೆ. ನಾವು ಆತನ ಸೃಷ್ಟಿಗಳಲ್ಲೇ ಪ್ರಥಮ ಫಲಗಳಂತಾಗಬೇಕೆಂಬುದೇ
(ಯಾಕೋ.1:18), ಸ್ವಾಸ್ತ್ಯದ ಭಾದ್ಯ ರಾಗಬೇಕೆಂಬುದೇ(1 ಪೇತ್ರ. 1:3-4), ಮತ್ತು
ಸತ್ಕಾರ್ಯಗಳನ್ನು ಮಾಡುವವರಾಗಬೇಕೆಂಬುದೇ(ಎಫೆ. 2:10) ಆತನ ಚಿತ್ತವಾಗಿದೆ
157
ಸನ್ನಿಧಾನದಿಂದ ಬೇರ್ಪಡಿಸಲ್ಪ ಡುತ್ತಾನೆ. ಕ್ರಿಸ್ತನಲ್ಲಿ ಅವನೋ\ ಅವಳೋ ನಂಬಿಕೆಯಿಟ್ಟ
ತಕ್ಷಣವೇ ಮತ್ತು ಅವರು ಅದಕ್ಕೆ ತಕ್ಕಂತೆ ಜೀವಿಸಬೇಕು ಎಂಬ ಸತ್ಯ ದ ಆಧಾರದ ಮೇಲೆ ಎಲ್ಲಾ
ವಿಶ್ವಾಸಿಗಳು ಪರಿಶುದ್ದ ರು ಎಂಬ ಪ್ರಾಯೋಗಿಕವಾದ ಕ್ರಿಯೆಗಳು
ಅವಲಂಬಿತವಾಗಿವೆ("ಪವಿತ್ರೀಕರಿಸು" ಎಂಬ ಅದೇ ಗ್ರೀಕ್ ಪದದ ಮೂಲದಿಂದ).
ಮನುಷ್ಯ ನು ಈ ಕ್ರಮವನ್ನು ಬದಲಾಯಿಸಿ ಪವಿತ್ರರಾಗಿ ಜೀವಿಸುವವರು ನಂತರ ಪರಿಶುದ್ದ ರು
ಎಂದು ಕರೆಯಲ್ಪ ಡುತ್ತಾರೆ ಎಂದು ಹೇಳುತ್ತಾರೆ. ಸ್ಥಾನಿಕ ಪವಿತ್ರೀಕರಣ ಎಂಬುದು ಒಂದೇ
ಬಾರಿ ಎಲ್ಲ ರಿಗು ಆದದ್ದು ಅದು ಪದೇ ಪದೇ ಆಗುವಂತದಲ್ಲ ವೆಂದು ಇಬ್ರಿಯ 10:10-14
ವಚನವು ತೋರಿಸಿಕೊಡುತ್ತದೆ. ಕ್ರಿಸ್ತನೇ ನಮ್ಮ ಪವಿತ್ರೀಕರಣವಾಗಿರುವುದರಿಂದ ಇದು
ಸಂಪೂರ್ಣವಾಗಿದೆ1 ಕೊರಿ.1:30). ರಕ್ಷಣೆಯ ಸಂದರ್ಭದಲ್ಲೇ ಎಲ್ಲಾ ವಿಶ್ವಾಸಿಗಳು ಕ್ರಿಸ್ತನಲ್ಲಿ
ಶಾಶ್ವ ತವಾಗಿ ಪ್ರತ್ಯೇಕಿಸಲ್ಪ ಟ್ಟಿದ್ದಾರೆ. ಈಗ "ಪರಿಶುದ್ದ ತೆಯಲ್ಲಿ", ದೇವರ ವಾಕ್ಯ ದ ಮೂಲಕ
ಪ್ರಗತಿಹೊಂದುವುದು ಪ್ರತಿಯೊಬ್ಬ ನ ಕರ್ತವ್ಯ ವಾಗಿದೆ(ಪಾಪದಿಂದ ಪ್ರತ್ಯೇಕತೆ) (ಯೋಹಾ.
17:17; 1 ಪೇತ್ರ. 1:15-16). 88888
158
ಮರೆಯಬೇಕು(ಇಬ್ರಿ. 8:12). ಪಾಪದ ಕ್ಷಮಾಪಣೆ ಫಲಿತಾಂಶವು ಅತಿಯಾದ ಆನಂದ
ಮತ್ತು ಸಮಾಧಾನವಾಗಿರಬೇಕು.
ದೇವರ ಬಳಿಗೆ ಪ್ರವೇಶ— ದೇವರ ಸಾನಿಧ್ಯ ಕ್ಕೆ ಪ್ರವೇಶಿಸುವ ಅಧಿಕಾರ. ಇದು ನಂಬಿಕೆಯಿಂದ
ಹೊಂದುವಂತದ್ದು ಮತ್ತು ದೇವರ ಅಪರಿಮಿತವಾದ ಆಶೀರ್ವಾದಗಳಿಗೆ
ಎಡೆಮಾಡಿಕೊಡುತ್ತದೆ(ರೋಮಾ. 5:2). ನಂಬುವ ಯೆಹೂದ್ಯ ರು ಮತ್ತು ಅನ್ಯ ಜನರು
ಒಂದೇ ಪವಿತ್ರಾತ್ಮ ನ ಮೂಲಕ ತಂದೆಯ ಸಾನಿಧ್ಯ ಕ್ಕೆ ಪ್ರವೇಶಿಸುವ ಅಧಿಕಾರ
ಹೊಂದಿದ್ದಾರೆ(ಎಫೆ . 2:18). ಇದು ಕ್ರಿಸ್ತನು ಮಾಡಿದ ಸಂಧಾನದ ಕಾರ್ಯದ ಮೇಲೆ
ಅವಲಂಬಿತವಾಗಿದೆ ಮತ್ತು ಇದು ಪರಿಪೂರ್ಣವಾದ ಭರವಸೆಯೊಂದಿಗೆ
ಜೊತೆಗೂಡಿದೆ(ಎಫೆ. 3:12; ಇಬ್ರಿ. 4:16; 10:19-20).
159
ತಿಳಿದುಕೊಳ್ಳು ವುದೇ ಭರವಸೆ. ಒಬ್ಬ ನು ಶಾಶ್ವ ತವಾಗಿ ರಕ್ಷಣೆ ಹೊಂದಿದ್ದಾನೆ ಎಂದು
ಹೇಳುವುದೇ ಭದ್ರತೆ. ಎಲ್ಲ ರಿಗೂ ಮೊದಲನೆಯದರ ಮೇಲೆ ನಂಬಿಕೆ ಇದೆ ಆದರೆ ನಂತರದ್ದು
ಅಸಾಧ್ಯ ಅಥವಾ ಯೋಚನೆಗೂ ಮಿಗಿಲಾದದ್ದು ಎಂದು ಭಾವಿಸುತ್ತಾರೆ. ದುರದೃಷ್ಟ ವಶಾತ್,
ಕ್ರೈಸ್ತರು ಎಂಬುದಾಗಿ ಕರೆಸಿಕೊಳ್ಳು ವ ಅನೇಕರು ಈ ಎರಡೂ ಭಾವನೆಗಳನ್ನು ಹೊಂದಿಲ್ಲ .
ಇದಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆ ಗಳು ಸುಳ್ಳು ಬೋಧನೆಗಳಿಂದ, ಸ್ವಾಭಾವಿಕವಾದ
ಭಯದಿಂದ, ಮತ್ತು ನಿಜವಾಗಿ ರಕ್ಷಣೆ ಅಂದರೆ ಏನು ಎಂಬುದನ್ನು ತಪ್ಪಾಗಿ ಅರ್ಥ
ಮಾಡಿಕೊಳ್ಳು ವುದರ ಮೂಲಕ ಬರುತ್ತದೆ.
ಭರವಸೆ
160
ಹೊಂದುವುದನ್ನು ಒಳಗೊಂಡಿದೆ. ಆಂತರ್ಯದಲ್ಲಿ ಪವಿತ್ರಾತ್ಮ ನು ಮಾಡುವ ಸೇವೆಯು
ನಮ್ಮ ನ್ನು ದೇವರ ಪ್ರೀತಿಯಿಂದ ತುಂಬಿಸುವುದನ್ನು (ರೋಮಾ. 5:5), ನಮಗೆ
ಮಾರ್ಗದರ್ಶನ ನೀಡುವುದನ್ನು (ರೋಮಾ. 8:14) ಮತ್ತು ನಮಗೆ ಸಾಕ್ಷಿ ನೀಡುವುದನ್ನು
ಒಳಗೊಂಡಿದೆ(ರೋಮಾ. 8:16).
ಶಾಶ್ವ ತ ಭದ್ರತೆ
ಈಗ ರಕ್ಷಣೆಯ ಭರವಸೆ ಹೊಂದಿರುವ ಮತ್ತು ಹೊಸ ಜೀವದ ಗುರುತುಗಳುಳ್ಳ
ಅನೇಕರು ಈ ಬಹಳ ಪ್ರಾಮುಖ್ಯ ವಾದ ಪ್ರಶ್ನೆಯನ್ನು ಕೇಳುತ್ತಾರೆ —"ನಿಜವಾಗಿ ಮತ್ತೆ
ಹುಟ್ಟಿರುವ ವಿಶ್ವಾಸಿಯು ನಾಶವಾಗಲು ಸಾಧ್ಯ ವೇ?" ಹಿಂಜಾರಿ ಹೋಗಿರುವ( ಕ್ರೈಸ್ತನೆಂದು
ಹೇಳಿಕೊಂಡು ತನ್ನ ಜೀವಿತದಲ್ಲಿ ಅದನ್ನು ಪ್ರತಿಬಿಂಬಿಸದೆ ಇರುವ ವ್ಯ ಕ್ತಿ) ವ್ಯ ಕ್ತಿಯು ತನ್ನ
ರಕ್ಷಣೆಯನ್ನು ಕಳೆದುಕೊಂಡು ನರಕಕ್ಕೆ ಹೋಗಲು ಸಾಧ್ಯ ಎಂದು ಅನೇಕರು ಹೇಳುತ್ತಾರೆ.
ಯಾವುದೇ ನಿರ್ಬಂಧವಿಲ್ಲ ದ ನಿತ್ಯ ಜೀವದ ಕುರಿತಾಗಿ ನಾವು ಖಚಿತವಾಗಿರುವದಾದರೆ, ನಾವು
ನ್ಯಾಯತೀರ್ವಿಕೆಯ ಭಯವಿಲ್ಲ ದೆ ಪಾಪದಲ್ಲಿ ಜೀವಿಸಬಹುದು ಎಂದು ಅವರು ಹೇಳುತ್ತಾರೆ.
ಮರಣವನ್ನುಂಟು ಮಾಡುವ ದೇವರ ಶಿಕ್ಷೆಯು ಇದನ್ನು ನಿಭಾಯಿಸಬಲ್ಲ ದು ಎಂಬುದನ್ನು
ಅವರು ಮರೆತುಹೋಗಿದ್ದಾರೆ. ಅದು ಮಾತ್ರವಲ್ಲ ದೆ, ಅಶುದ್ದ ರು ಮತ್ತು
ಕಾಮಾಭಿಲಾಷೆಯುಳ್ಳ ವರು ಸುಳ್ಳಾದ ವೇಷ ಧರಿಸುವವರೂ ಮತ್ತು ಶಿಲುಬೆಯ ವೈರಿಗಳೂ
ಆಗಿದ್ದಾರೆ. (ಎಫೆ. 5:5-6; ಫಿಲಿ. 3:18-19).
161
ಅವರನ್ನು ಕಾಪಾಡಲು ಶಕ್ತನಾಗಿದ್ದಾನೆ. ಈ ಸೈರಣೆಯ ಎರಡು ಪಟ್ಟು ಅಂಶಗಳನ್ನು ಫಿಲಿ.
2:12-13 ರಲ್ಲಿ ಕಾಣಬಹುದು.ಆದರೆ ದೇವರು ನಮ್ಮ ಲ್ಲಿ ಅಲೌಕಿಕವಾಗಿ ಕಾರ್ಯ
ಮಾಡುತ್ತಿರುವ ಕಾರಣದಿಂದ ಮಾತ್ರ ನಮ್ಮ ರಕ್ಷಣೆಯನ್ನು ಸಾಧಿಸಲು ನಾವು ಹೊಂದುವ
ಸೈರಣೆಯು ಅಂತಿಮವಾಗಿ ಮುಕ್ತಾಯಗೊಳ್ಳು ತ್ತದೆ (ಗಣಿತದಲ್ಲಿರುವ ಸಮಸ್ಯೆ ಯ ಹಾಗೆ).
ಅದೇ ರೀತಿಯಾಗಿ 2 ತಿಮೊ 2:19 ರಲ್ಲಿರುವ ಹಾಗೆ ಕ್ರೈಸ್ತರೆನಿಸಿಕೊಂಡವರು ಕೆಟ್ಟ ದ್ದ ನ್ನು
ತೊರೆಯುತ್ತಾರೆ(ಮನುಷ್ಯ ರ ಕಡೆಯಿಂದ) ಯಾಕೆಂದರೆ ತನ್ನ ವರು ಯಾರಾರೆಂದು ಕರ್ತನು
ತಿಳಿದಿದ್ದಾನೆ(ದೈವಿಕ ದೃಷ್ಟಿಯಲ್ಲಿ).
ಒಬ್ಬ ವ್ಯ ಕ್ತಿಯು ಒಮ್ಮೆ ರಕ್ಷಣೆ ಹೊಂದಿದರೆ ಅವನು ಶಾಶ್ವ ತಕ್ಕೂ ರಕ್ಷಣೆ
ಹೊಂದಿದ್ದಾನೆ ಎಂದು ಬೋಧಿಸುವ ಅನೇಕ ಭಾಗಗಳು ಉಂಟು. ಒಂದು ವೇಳೆ ಇದು
ನಿಬಂಧನೆಯುಳ್ಳಾದ್ದಾಗಿದ್ದ ರೆ " ನಿತ್ಯ ಜೀವ" ಎಂಬ ಪದಗುಚ್ಛ ವೇ ತದ್ವಿರುದ್ದ ವಾಗಿರುತ್ತಿತ್ತು .
ರೋಮಾ.8:31-39 ವಚನಗಳು ನಮ್ಮ ನ್ನು ದೇವರ ಪ್ರೀತಿಯಿಂದ ಯಾವ ಸಂಗತಿಗಳು
ಅಗಲಿಸಲಾರವೆಂದು ದೈವಿಕವಾದ ಪ್ರಶ್ನೆಗಳಲ್ಲೇ ಉತ್ತರವಿರುವ ನಾಲ್ಕು ಪ್ರಶ್ನೆಗಳನ್ನು
ನೀಡುತ್ತದೆ. ಅನುಮಾನವುಳ್ಳ ವರಿಗೆ ಸಹಾಯಿಸುವ ಇತರ ವಚನಗಳೆಂದರೆ: ಯೋಹಾ.
6:37, 39; ರೋಮಾ. 11:29; 1 ಕೊರಿ 1:8-9; ಫಿಲಿ. 1:6; ಮತ್ತು ಎಫೆ. 4:30.
162
ಯಾಕೆಂದರೆ ಅವರಲ್ಲಿ ನಿಜವಾದ ರಕ್ಷಣೆಯ ಗುರುತುಗಳಿಲ್ಲ . ಸ್ಥಿರವಾಗಿ ನಿಲ್ಲು ವುದು ರಕ್ಷಣೆಗೆ
ಒಂದು ಪುರಾವೆಯೇ ಹೊರತು ರಕ್ಷಣೆಗೆ ಷರತ್ತಲ್ಲ . 1 ಕೊರಿ: 15:1-2 ಮತ್ತು ಇಬ್ರಿ 3:6. 1
ತಿಮೊ 4:1-2 ಯಂತಹ ವಚನಗಳು ಮತ ಭ್ರಷ್ಟ ರ ಕುರಿತಾಗಿ ಮಾತನಾಡುತ್ತವೆ— ಎಂದಿಗೂ
ಹೊಸದಾಗಿ ಹುಟ್ಟಿದ ಅನುಭವವಿಲ್ಲ ದೆ ಸುಳ್ಳು ವೇಷ ಧರಿಸಿಕೊಂಡಿರುವವರು. ಆ ವಚನವು
"ನಂಬಿಕೆ" ಎಂದು ಹೇಳುವುದನ್ನು ಗಮನಿಸಿ , ಅದು ಕ್ರಿಸ್ತನಲ್ಲಿ ವ್ಯ ಕ್ತಿಗತವಾದ ನಂಬಿಕೆಯನ್ನು
ಸೂಚಿಸದೆ, ಮತಭ್ರಷ್ಟ ರು ಹೊಂದದೇ ಇರುವ ಕ್ರಿಸ್ತೀಯ ನಂಬಿಕೆಯನ್ನು ಸೂಚಿಸುತ್ತಿದೆ. 2
ಪೇತ್ರ. 2:1-22 ರಲ್ಲಿರುವ ಸುಳ್ಳು ಬೋಧಕರು ಒಂದು ಒದಗಿಸುವಿಕೆಯ ಮಾರ್ಗದಲ್ಲೇ
ಒಳಗೆ ಬಂದರು; ಅವರು ನಿಜವಾಗಿ ರಕ್ಷಣೆ ಹೊಂದಿದ್ದ ರು ಎಂದು ಎಲ್ಲೂ ಹೇಳಿಲ್ಲ . ಅವರನ್ನು
" ನಾಯಿಗಳೆಂದು" ಕರೆಯಲ್ಪ ಟ್ಟಿರುವ ಸತ್ಯ ವು ಅವರು ಅಶುದ್ಧ ರಾದ ಹೊರಗಿನವರು
ಎಂಬುದನ್ನು ಸೂಚಿಸುತ್ತದೆ.
163
ಉದ್ದೇಶಪೂರ್ವಕವಾಗಿ ಆತ್ಮೀಕ ಅವಕಾಶಗಳ ಬಾಗಿಲನ್ನು ತಮ್ಮ ಮೇಲೆ ಮುಚ್ಚಿಕೊಂಡರು.
ರಕ್ಷಣೆಯ ಹೊಸ್ತಿಲಲ್ಲೇ ನಿಂತುಕೊಂಡು ಕ್ರಿಸ್ತನನ್ನು ತಿರಸ್ಕ ರಿಸಲು ನಿರ್ಧರಿಸಿದರು ಮತ್ತು ಹೀಗೆ
ಮಾಡುವುದರ ಮೂಲಕ ಆತನನ್ನು ಬಹಿರಂಗವಾಗಿ ನಾಚಿಕೆಗೊಳಪಡಿಸಿದರು(ಇಬ್ರಿ. 6:6b).
ಭರವಸೆ ಮತ್ತು ಭದ್ರತೆಯ ಕುರಿತಾದ ಆಳವಾದ ಅಧ್ಯ ಯನಕ್ಕಾಗಿ , ಸೆಕ್ಯೂ ರ್ಲಿ ಸೆವ್ಡ್
ಅಂಡ್ ಶೂರ್ ಆಫ್ ಇಟ್ " ಎಂಬ ಈಸಿಎಸ್ ಕೋರ್ಸ್ ಅನ್ನು ನೋಡಿರಿ.
164
ನಮ್ಮ ಪ್ರತಿಫಲಗಳು ಆತನ ಸೇವೆಗಾಗಿ ಭದ್ರವಾಗಿರಿಸಲ್ಪ ಟ್ಟಿವೆ. ನಾವು ಎಂದಿಗೂ
ನಾಶವಾಗುವುದಿಲ್ಲ .
ಅಧ್ಯಾಯ
6
ಸಭಾಶಾಸ್ತ್ರ:
ಸಭೆಯಅಧ್ಯ ಯನ
- ಭಾಗ 1 -
165
ಹೊಸ ಒಡಂಬಡಿಕೆಯ ಕಾಲಘಟ್ಟ ದ ಸಭೆಗಳು ಯಾವ ರೀತಿ ಇದ್ದ ವು ಎಂಬುದನ್ನು ಅನೇಕ
ವಿದ್ವಾಂಸರು ಒಪ್ಪಿಕೊಳ್ಳು ತ್ತಾರೆ, ಆದರೆ ಅನೇಕರು ಹೊಸ ಒಡಂಬಡಿಕೆಯ ಸಭೆಯ ತತ್ವ ಗಳು
ಪ್ರಾಮುಖ್ಯ ವಲ್ಲ ಎಂದು ಭಾವಿಸುತ್ತಾರೆ. ಅದರಲ್ಲೂ ಅನೇಕರು ಶಾಸ್ತ್ರದ ವಿಧಾನಗಳು ಇಂದು
"ಪ್ರಯೋಗಿಕವಲ್ಲ " ಎಂದು ಭಾವಿಸುತ್ತಾರೆ. ಹೀಗಿದ್ದ ರೂ, ಸಭೆಗಳು ಯಾವರೀತಿ ಕ್ರಮದಿಂದ
ಕೂಡಿರಬೇಕು ಮತ್ತು ಆರಾಧಿಸಬೇಕು ಎಂಬ ಮಾರ್ಗದರ್ಶನವನ್ನು ಹೊಸ
ಒಡಂಬಡಿಕೆಯಲ್ಲಿ ಕೊಟ್ಟಿರುವದಾದರೆ—ಸಾಮಾನ್ಯ ತತ್ವ ಗಳಲ್ಲಿ— ಕನಿಷ್ಠ ಪಕ್ಷ ಅದನ್ನು ನಾವು
ಪಾಲಿಸಲೇ ಬೇಕು.
ಸಭೆಯ ರಚನೆ
166
ಎಂಬುದನ್ನು ಗಮನಿಸಿರಿ. ಅಥವಾ ಶಾಸ್ತ್ರವು ಚರ್ಚುಗಳ ಸಂಯೋಜನೆಯ ಅಥವಾ ವಿವಿಧ
ಪಂಗಡಗಳ ಕುರಿತಾಗಿಯೂ ಮಾತನಾಡುವುದಿಲ್ಲ . ಇವುಗಳು ಆಧುನಿಕ ಪರಿಕಲ್ಪ ನೆಗಳಾಗಿವೆ.
167
ಮೂಲಕ ಈಗ ದೇವರಿಂದ ತಿಳಿಸಲಾಗಿದೆ. (ಎಫೆ.3:4-5, 9; ಕೊಲೊ. 1:26; ರೋಮಾ.
16:25-26 ನೋಡಿರಿ). ಕ್ರಿಸ್ತನು ಮತ್ತಾ 16:18 ರಲ್ಲಿ ಮುಂತಿಳಿಸಿದನು, "ನಾನು ನನ್ನ
ಸಭೆಯನ್ನು ಕಟ್ಟು ವೆನು" (ಭವಿಷ್ಯ ತ್ ಕಾಲ) ಮತ್ತು ಅ ಕೃ 1:5 ರಲ್ಲಿ ತನ್ನ ಶಿಷ್ಯ ರಿಗೆ ಪವಿತ್ರತ್ಮಾ
ದೀಕ್ಷಾಸ್ನಾನದ ವಾಗ್ದಾನ ಮಾಡಿದನು. ಅಪೊ 5:11 ನೆಯ ವಚನಗಳು ಸಭೆಯು
ಅಸ್ತಿತ್ವ ದಲ್ಲಿರುವುದರ ಕುರಿತು ಮಾತನಾಡುತ್ತದೆ, ಮತ್ತು 1 ಕೊರಿ. 12:13 ನೆಯ ವಚನವು
ಕ್ರಿಸ್ತನ ದೇಹವು ಪವಿತ್ರಾತ್ಮ ನ ದೀಕ್ಷಾಸ್ನಾನದಿಂದ ರಚನೆಗೊಂಡಿರುವುದನ್ನು ಸೂಚಿಸುತ್ತದೆ.
ಸಭೆಯ ಕಾರ್ಯ
ಅಧಿಕಾರ
168
ನಿಜವಾದ ಸಭೆಯ ಶಕ್ತಿಯು ಒಬ್ಬ ವ್ಯ ಕ್ತಿಯಲ್ಲಿದೆ—ಅದು ಬೇರೆ ಯಾರು ಅಲ್ಲ
ಪವಿತ್ರಾತ್ಮ ನು. "ಪವಿತ್ರಾತ್ಮ ನು ನಿಮ್ಮ ಮೇಲೆ ಬರುವಾಗ ನೀವು ಬಲಹೊಂದಿ" (ಅ. ಕೃ 1:8).
ಸಭೆಯು ಒಂದು ಪ್ರಾರ್ಥನಾ ಕೂಟದಲ್ಲಿ ಉಗಮವಾಯಿತು, ಹೀಗೆಯೇ ಪವಿತ್ರಾತ್ಮ ನ
ಬಲವನ್ನು ಹೊಂದಲು ಸಾಧ್ಯ —ಪ್ರಾರ್ಥನೆಯ ಮೂಲಕ. ಅ ಕೃ 2:42 ರಲ್ಲಿ ಆದಿ ಸಭೆಯ
ವಿಶ್ವಾಸಿಗಳು "ಅಪೊಸ್ತಲರ ಬೋಧನೆಯನ್ನು ಕೇಳುವದರಲ್ಲಿಯೂ ಸಹೋದರರ
ಅನ್ಯೋನ್ಯ ತೆಯಲ್ಲಿಯೂ ರೊಟ್ಟಿ ಮುರಿಯುವದರಲ್ಲಿಯೂ ಪ್ರಾರ್ಥನೆಗಳಲ್ಲಿಯೂ
ನಿರತರಾಗಿದ್ದ ರು" ಎಂದು ಓದುತ್ತೇವೆ.
169
ನೀಡಲಾಗಿದೆ. ಪೂರ್ಣಾವಧಿ ಸುವಾರ್ತಿಕರಾಗಿರದೆ ಒಬ್ಬ ವ್ಯ ಕ್ತಿಯನ್ನು ಕ್ರಿಸ್ತನಕಡೆಗೆ ನಡೆಸುವ
ಸುವಾರ್ತಿಕನ ಕೆಲಸವನ್ನು ಮಾಡಲು ಸಾಧ್ಯ . ಇಲ್ಲಿ ಎಫೆಸ 4 ನೇ ಅಧ್ಯಾಯದಲ್ಲಿರುವ
ವರಗಳನ್ನು ಮಾತ್ರ ಚರ್ಚಿಸೋಣ.
ವರವಾಗಿರುವ ಜನರು
170
ಒಬ್ಬ ನಿಜವಾದ ಸೌವಾರ್ತಿಕನು ಜನರು ಕ್ರಿಸ್ತನಿಗಾಗಿ ನಿರ್ಧಾರ ಮಾಡಲು ಅವರನ್ನು
ಗೆಲ್ಲು ವಂತೆ ಪವಿತ್ರತ್ಮಾನ ಮೇಲೆ ಅವಲಂಬಿತನಾಗಿರುತ್ತಾನೆ. ಪ್ರಯಾಣಿಕವಲ್ಲ ದ ಅಥವಾ
ಶಾಸ್ತ್ರಕ್ಕ ನುಸಾರವಲ್ಲ ದ "ಸುವಾರ್ತಾ ಕಾರ್ಯಗಳು" ಎಂಬ ವಿಧಗಳಿಂದ ಸಭೆಯು
ಅತಿಯಾದ ಅವಮಾನಕ್ಕೊಳಗಾಗಿದೆ . ಕೆಲವು ತಿಂಗಳುಗಳು ಅಥವಾ ಅದಕ್ಕಿಂತ ಕಡಿಮೆ
ನೆಲೆಸುವ ಸುಳ್ಳಾದ ವೇಷಗಳಿಗಿಂತಲೂ ಕೆಲವು ಅಥವಾ ಇಲ್ಲ ಎಂಬ "ನಿರ್ಧಾರಗಳನ್ನು "
ಹೊಂದಿರುವುದೇ ಉತ್ತಮವಾದದ್ದು .
171
ಹೆಚ್ಚು ಅನ್ವ ಯನು , ಯಾಕೆಂದರೆ ಬೋಧಿಸುವ ವರವು ಬೋದಿಸಿದ್ದ ನ್ನು ಜೀವಿಸುವಂತೆ
ಮಾಡುತ್ತದೆ, ಮತ್ತು ಕಲಿಸಿದಂತಹ ಸಂಗತಿಗಳು ದೈವ ಪ್ರೇರಿತವಾದ ದೇವರ ವಾಕ್ಯ ವಾಗಿದೆ.
ಅಪೊಸ್ತಲರ ಬೋಧನೆಗಳೆಂದರೆ ಅಪೊಸ್ತಲರು ಕಳಿಸಿದ ಸಂಗತಿಗಳಾಗಿವೆ. ಪವಿತ್ರಾತ್ಮ ನಿಲ್ಲ ದೆ
ಯಾವುದೇ ಉಪದೇಶಗಳು ಶಾಸ್ತ್ರದ ಮಟ್ಟ ಕ್ಕೆ ಬರಲು ಸಾಧ್ಯ ವಿಲ್ಲ . ಶೈಕ್ಷಣಿಕವಾಗಿ ಸತ್ಯ ಗಳನ್ನು
ಮತ್ತು ಸ್ವ ಸ್ಥ ಬೋಧನೆಗಳನ್ನು ಕಲಿಯಲು ಸಾಧ್ಯ , ಆದರೆ ಅದು ಗರ್ವವನ್ನು ಪೋಷಿಸುತ್ತಾ
ಆತ್ಮೀಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
ಸಂಘಟನೆ
172
ಅಪೋಸ್ತಲನಾದ ಪೌಲನ ಒಕ್ಕ ಣೆಯಲ್ಲಿ ಆರಾಧಿಸುವ ಯಾಜಕರು ಮೊದಲ ಸ್ಥಾನವನ್ನೂ
ಪಡಕೊಳ್ಳು ತ್ತಿದ್ದ ರು, ಇದು ಇಂದು ಬಹಳವಾಗಿ ಹೆಚ್ಚಿರುವ "ಜನರು" ಅಧಿಕಾರಿಗಳು ಎಂಬ
ವ್ಯ ವಸ್ಥೆ ಗೆ ಎಷ್ಟೋ ವಿಭಿನ್ನ ವಾಗಿದೆ.
173
ಡಿಯಕನೊಸ್ ಎಂಬ ಗ್ರೀಕ್ ಪದದ ಅರ್ಥ "ಸೇವಕ." ಕೆಲವೊಮ್ಮೆ ಹೊಸ
ಒಡಂಬಡಿಕೆಯಲ್ಲಿ ತಾಂತ್ರಿಕವಲ್ಲ ದ ರೀತಿಯಲ್ಲಿ ಬಳಸಲಾಗಿದೆ ಮತ್ತು ಭಾಷಾಂತರಿಸಲಾಗಿದೆ.
ಕೆಲವೊಮ್ಮೆ ವಿಶೇಷವಾದ ರೀತಿಯಲ್ಲಿ ಬಳಸಲಾಗಿದೆ ಫಿಲಿ. 1:1, ಮತ್ತು ಆಂಗ್ಲ ಭಾಷೆಯಲ್ಲಿ
ಡೀಕನ್ ಎಂಬುದಾಗಿ ಬಳಸಲಾಗಿದೆ. ಅ ಕೃ 6:1-7 ವಚನಗಳು ಸಭಾ ಸೇವಕರ
ಕುರಿತಾದಂತಹ ಮೊದಲ ಭಾಗವಾಗಿದೆ. ಈ ಭಾಗದಲ್ಲಿ ಮೂಲ ಪದವನ್ನು ಬಳಸಿಲ್ಲ ಆದರೆ
ಅದಕ್ಕೆ ಸಂಬಂಧಿಸಿದ ಕ್ರಿಯಾಪದವನ್ನು (ಉಪಚಾರ) ಬಳಸಿದೆ. ಸಾಮಾನ್ಯ ವಾಗಿ ಸಭಾಸೇವಕರ
ಸೇವೆಯು ಮೇಜನ್ನು ಸಿದ್ಧ ಪಡಿಸುವದಕ್ಕಿಂತ ಹೆಚ್ಚಾಗಿ, ಹಿರಿಯರ ಪರೋಕ್ಷವಾದಂತಹ ಎಲ್ಲಾ
ರೀತಿಯ ಜವಾಬ್ಧಾರಿಗಳನ್ನೊಳಗೊಂಡಿದೆ. ಸಭಾ ಸೇವಕರ ಅರ್ಹತೆಗಳು
ಉನ್ನ ತವಾದವುಗಳೂ ಮತ್ತು ಹಿರಿಯರ ಅರ್ಹತೆಗಳಿಗೆ ಸಮನಾದವುಗಳು ಆಗಿವೆ. ಅವರು
ಸೇವೆಗೆ ಬರುವುದಕ್ಕಿಂತ ಮುಂಚೆ ಅವರ ನಡೆವಳಿಕೆಯು ಸಾಭೀತಾಗಬೇಕು (ವ.10)
ದೇವರಿಗೆ ಭಯಪಡುವುದು, ಸ್ವ ಸ್ಥ ನಂಬಿಕೆ, ಮತ್ತು ಹಣದಾಶೆ ಇಲ್ಲ ದಿರುವುದು ಕೆಲವು
ಪ್ರಾಮುಖ್ಯ ವಾದಂತಹ ಅರ್ಹತೆಗಳಾಗಿವೆ. 11 ನೇ ವಚನವು ಸಭಾಸೇವಕರ ಪತ್ನಿಯರನ್ನು
ಅಥವಾ ಸಭಾ ಸೇವಕಿಯರನ್ನು ಸೂಚಿಸಬಹುದು . ರೋಮಾ 16:1 ನೇ ವಚನದಲ್ಲಿ
ಫೊಯಿಬೆಯನ್ನು ಸಭಾ ಸೇವಕಿಯಾಗಿ ಅಥವಾ ಸಾಧಾರಣ ದೃಷ್ಟಿಯಲ್ಲಿ ಸರಳವಾದ
ಸೇವಕಿಯಾಗಿ ಸೂಚಿಸಲಾಗಿದೆ. ಚೆನ್ನಾಗಿ ಸೇವೆಮಾಡುವ ಸಭಾ ಸೇವಕರು ನಂಬಿಕೆಯಲ್ಲಿ
ಒಳ್ಳೆಯ ಸ್ಥಿರತೆಯನ್ನು ಮತ್ತು ಶ್ರೇಷ್ಠ ವಾದ ವಿಶ್ವಾಸವನ್ನು ಗಳಿಸುತ್ತಾರೆ (1 ತಿಮೊ. 3:13).
174
ಅಧ್ಯಾಯ
7
ಸಭಾಶಾಸ್ತ್ರ:
ಸಭೆಯಅಧ್ಯ ಯನ
- ಭಾಗ 2 -
ಸಭೆಯ ಉದ್ದೇಶ
175
ಮತ್ತು ಸ್ಥ ಳೀಯ ಸಭೆಗಳೆರಡೂ ಈ ಲೋಕದಲ್ಲಿ ಸುವಾರ್ತೆ ಸಾರುವುದರ ಮೂಲಕ
ಸಾಕ್ಷಿಯಾಗಿರುವುದು ಮತ್ತು ವಿಶ್ವಾಸಿಗಳ ಜೀವಿತವನ್ನು ಕ್ರಿಸ್ತನಿಂದ ತುಂಬಿಸುವುದು ಮಾತ್ರವಲ್ಲ
; ದೇವರ ಜ್ಞಾನದ ಕುರಿತಾಗಿ ದೇವದೂತರಿಗೆ ಸಾಕ್ಷಿ ನೀಡಬೇಕು. ಸ್ಥ ಳೀಯ ಸಭೆಗಳಲ್ಲಿ ,
ವಿಶ್ವಾಸಿಗಳು ಆತನನ್ನು ಆರಾಧಿಸಲು ಮತ್ತು ಸ್ತು ತಿಸಲು ಸೇರಿಬರುವಾಗ ದೇವರು ಮಹಿಮೆ
ಹೊಂದುತ್ತಾನೆ.
176
ಆದರೆ ಮತ್ತು ಈಗ ಸ್ಥ ಳೀಯ ಸಭೆಗಳಿಗೆ ದೇವರಿಟ್ಟಿರುವ ವ್ಯಾಪ್ತಿಯುಳ್ಳ ಯೋಜನೆಗೆ
ನಮ್ಮ ನ್ನು ಹೇಗೆ ಸಂಬಂಧಿಸಿಕೊಳ್ಳು ವುದು ? ಇದಕ್ಕೆ ಪ್ರತಿಯೊಂದು ಸ್ಥ ಳೀಯ ಸಭೆಯಲ್ಲಿರುವ
ವಿಶ್ವಾಸಿಗಳು ಸಾರ್ವತ್ರಿಕ ಸಭೆಯ ಸತ್ಯ ಗಳನ್ನು ಪ್ರತಿಬಿಂಬಿಸಬೇಕು ಎಂಬ ತತ್ವ ದೊಂದಿಗೆ
ಆರಂಭಿಸಬೇಕು. ಅದರ ಗುಣಲಕ್ಷಣಗಳೇನೆಂದರೆ,
ಏಕತೆ ಎಫೆ. 4:4—ಕೇವಲ ಒಂದು ನಿಜವಾದ ಸಭೆ
ಶಿರಸ್ಸಿಗೆ ಅಧೀನರಾಗುವುದು ಎಫೆ. 5:23 &ಕೊಲೊ. 1:18; ಯೋಹಾ 14:16,
26—ಕ್ರಿಸ್ತನು ಮತ್ತು ಆತನ ದೈವಿಕ ಪ್ರತಿನಿಧಿಯಾಗಿರುವ ಪವಿತ್ರಾತ್ಮ ನು
ಸಾರ್ವತ್ರಿಕತೆ ಅ. ಕೃ. 2:47; 1 ಕೊರಿ. 12:12-26—ಎಲ್ಲಾ ನಿಜವಾದ ವಿಶ್ವಾಸಿಗಕು
ಈ ಒಂದೇ ದೇಹಕ್ಕೆ ಸೇರಿದವರಾಗಿದ್ದಾರೆ; ಯಾವುದೇ ತೀವ್ರವಾದ ಪಾಪವಿಲ್ಲ ದೆ
ಶುದ್ಧ ವಾಗಿ ಜೀವಿಸುತ್ತಿರುವ ಎಲ್ಲಾ ವಿಶ್ವಾಸಿಗಳು ಸಾರ್ವತ್ರಿಕ ಸಭೆಯಲ್ಲಿರುವುದರಿದ
ಸ್ಥ ಳೀಯ ಸಭೆಯಲ್ಲಿ ಅವರನ್ನು ಸ್ವೀಕರಿಸಬೇಕು.
ಪರಿಶುದ್ಧ ತೆ 1 ಕೊರಿ. 3:17—ದೇವರು ಒಟ್ಟಾಗಿ ತನ್ನ ಜನರನ್ನು ಈ ಪಾಪತುಂಬಿದ
ಲೋಕದಿಂದ ಪ್ರತ್ಯೇಕಿಸಿದ್ದಾನೆ; ಸ್ಥ ಳೀಯ ಸಭೆಯಲ್ಲಿರುವಂಥಹ ವ್ಯ ಕ್ತಿಗಳು ಈ
ಸತ್ಯ ವನ್ನು ತೋರಿಸಲು ಮತ್ತು ಕ್ರಿಸ್ತನನ್ನು ಮೆಚ್ಚಿಸಲು ಪರಿಶುದ್ಧ ತೆಯ ಮತ್ತು
ಒಳ್ಳೆತನದ ಜೀವಿತವನ್ನು ಜೀವಿಸಬೇಕು.
ಬೆಳವಣಿಗೆ ಎಫೆ. 4:11-12—ಕ್ರಿಸ್ತನು ತನ್ನ ಸಭೆಗೆ ಕೊಟ್ಟಿರುವ ವರಗಳ ಮೂಲಕ
ಸಭೆಯು ಕಟ್ಟ ಲ್ಪ ಡುತ್ತದೆ (ಯೋಗ್ಯ ಸ್ಥಿತಿಗೆ ತರುವುದು)
ವಿಶ್ವಾಸಿಗಳ ಸಾರ್ವತ್ರಿಕ ಯಾಜಕತ್ವ 1 ಪೇತ್ರ. 2:5, 9—ಇದು ಎಲ್ಲ ರು
ಪ್ರಸಂಗಿಸುತ್ತಾರೆ ಎಂದು ಅರ್ಥವಲ್ಲ ಬದಲಾಗಿ, ಎಲ್ಲ ರು ಆರಾಧಿಸುವವರಾಗಿಯೂ
ಸೇವೆ ಮಾಡುವ ಯಾಜಕರಾಗಿಯೂ ಕಾರ್ಯ ನಿರ್ವಹಿಸುತ್ತಾರೆ.
ಕ್ರಿಸ್ತನನ್ನು ಸನ್ಮಾನಿಸುವ, ಸತ್ಯ ವೇದವನ್ನು ನಂಬುವ ವಿಧೇಯತೆಯುಳ್ಳ ಜನರನ್ನು
ಹೊಂದಿರುವ ನಾಯಕತ್ವ ವು ತಮ್ಮ ಸ್ಥ ಳೀಯ ಮತ್ತು ತಮ್ಮ ವ್ಯ ಕ್ತಿಗತವಾದ ನಡವಳಿಕೆ ಮತ್ತು
ವೃದ್ಧಿಯ ವಿಷಯದಲ್ಲಿ ಇವುಗಳನ್ನು ಲೆಕ್ಕ ಕ್ಕೆ ತೆಗೆದುಕೊಂಡು ಯಾವ ರೀತಿಯಲ್ಲಿ ಈ
ತತ್ವ ಗಳನ್ನು ಪ್ರಾಯೋಗಿಕವಾಗಿ ಅಳವಡಿಸಬೇಕೆಂದು ತಿಳಿದುಕೊಳ್ಳ ಲು ದೇವರ
ಮಾರ್ಗದರ್ಶನವನ್ನು ಹುಡುಕುತ್ತಾರೆ.
ಸಭೆಯ ನಿಯಮಗಳು
177
ನಿಯಮ ಎಂಬ ಪದಕ್ಕೆ ನಿಘಂಟಿನಲ್ಲಿರುವ ಅರ್ಥವೇನೆಂದರೆ "ಅಧಿಕಾರವುಳ್ಳ ವಿಧಿ
ಅಥವಾ ಮಾರ್ಗಸೂಚಿ; ಸರ್ಕಾರದಿಂದ ಜಾರಿಗೊಳಿಸಿರುವ ಕಾನೂನು; ಒಂದು ದೈವತ್ವ ದಿಂದ
ಪಡಕೊಂಡಿರುವ ಅಥವಾ ವಿಧಿಸಲ್ಪ ಟ್ಟಿರುವ ಸಂಗತಿ; ಅಥವಾ ತಿಳಿಸಲಾಗಿರುವ ಅಭ್ಯಾಸ
ಅಥವಾ ಕಾರ್ಯಕ್ರಮ." ಈ ನಾಲ್ಕು ಅರ್ಥಗಳಲ್ಲಿರುವಂಥಹ ಅಂಶಗಳು ಸತ್ಯ ವೇದವನ್ನು
ನಂಬುವ ಸಭೆಗಳಲ್ಲಿ ವಾಡಿಕೆಯಲ್ಲಿ ಪಾಲಿಸುವ ಎರಡು ಸಂಗತಿಗಳಾದ ನೀರಿನ ದೀಕ್ಷಾಸ್ನಾನ
ಮತ್ತು ಅನ್ಯೋನ್ಯ ತೆಗೆ ಸೂಕ್ತವಾಗಿ ಹೊಂದುತ್ತದೆ.
ಕೆಲವರು ದೀಕ್ಷಾಸ್ನಾನವನ್ನು ಸ್ಥ ಳೀಯ ಸಭೆಯ "ಸದಸ್ಯ ತ್ವ ಕ್ಕೆ" ಅವಶ್ಯ ಕವಾದುದ್ದೆಂದು
ಹೇಳುತ್ತಾರೆ. ಪ್ರತಿಯೊಬ್ಬ ಕ್ರೈಸ್ತನು ದೀಕ್ಷಾಸ್ನಾನ ಹೊಂದಲೇಬೇಕು ಆದರೆ ದೀಕ್ಷಾಸ್ನಾನವು
ಸಭೆಯ ಸದಸ್ಯ ತ್ವ ಕ್ಕೆ ಸಂಬಂಧಪಡಿಸುತ್ತದೆ ಎಂದು ಹೇಳಲು ಯಾವುದೇ ವಚನಗಳಿಲ್ಲ .
ವಾಸ್ತವವಾಗಿ ಸ್ಥ ಳೀಯ ಸದಸ್ಯ ತ್ವ ದ ಕುರಿತಾಗಿ ಯಾವುದೇ ವಚನಗಳಿಲ್ಲ . ಹೃದಯದಲ್ಲಿ ನಡೆದ
ಸಂಗಾತಿಯ ಹೊರಗಿನ ಗುರುತೇ ದೀಕ್ಷಾಸ್ನಾನ ಎಂಬುದನ್ನು ಸಾಮಾನ್ಯ ವಾಗಿ
ಅರ್ಥಮಾಡಿಕೊಂಡಿದ್ದಾರೆ, ದೀಕ್ಷಾಸ್ನಾನದ ಕುರಿತಾದ ಅನೇಕ ತರ್ಕಗಳು
ಇಲ್ಲ ದಂತಾಗುತ್ತಿದ್ದ ವು. ದೀಕ್ಷಾಸ್ನಾನವು ಪಾಪವನ್ನು ತೊಳೆಯುವುದಿಲ್ಲ ; ಅದು ರಕ್ಷಿಸಲು
ಸಾಧ್ಯ ವಿಲ್ಲ , ರಕ್ಷಣೆ ಹೊಂದಲು ಸಹಾಯಿಸಲು ಸಾಧ್ಯ ವಿಲ್ಲ .
178
ಸುವಾರ್ಥಬೋಧಕರೆಲ್ಲ ರೂ ಇದು ಕ್ರಿಸ್ತನ ಆಜ್ಞೆಗೆ ವಿಧೇಯರಾಗುವುದು ಮತ್ತು ಕ್ರಿಸ್ತೀಯ
ಜೀವಿತವನ್ನು ಜೀವಿಸಲು ಬಹಿರಂಗವಾಗಿ ಪ್ರತ್ಯೇಕಪಡಿಸುವುದು ಅಂದು ನಂಬುತ್ತಾರೆ. ಇಂದು
ಸಹ ಕೆಲವು ದೇಶಗಳಲ್ಲಿ ಪರಿವರ್ತನೆ ಹೊಂದಿದವರ ದೀಕ್ಷಾಸ್ನಾನವು ಕೇವಲ ನಂಬಿಕೆಯ
ವೃತ್ತಿಯಾಗಿದೆ ಅದು ಅವಿಶ್ವಾಸಿಗಳು ಹಿಂಸಿಸುವುದಕ್ಕೆ ಕಾರಣವಾಗಿದೆ.
179
ಹೋಗಿ ಉಪದೇಶಿಸಿ ಮತ್ತು ಹೊಸದಾಗಿ ನಂಬುವವರಿಗೆ ದೀಕ್ಷಾಸ್ನಾನ ಮಾಡಿಸಿ ಎಂದು
ಕ್ರಿಸ್ತನು ತನ್ನ ಶಿಷ್ಯ ರಿಗೆ ನಿಯೋಜಿಸಿದ್ದ ನು. ದೀಕ್ಷಾಸ್ನಾನದ ಬೋಧನೆಯು ಮತ್ತು
ದೀಕ್ಷಾಸ್ನಾನವು ಶಾಸ್ತ್ರಕ್ಕ ನುಸಾರವಾದದ್ದು ಎಂಬುದನ್ನು ಮಾತ್ರ ನಾವು ನೋಡೋಣ(ಮತ್ತಾ.
28:19-20).
180
ನಿಜವಾದ ಸ್ಮ ರಣೆಯ ಕೂಟವು ವಿಶ್ವಾಸಿಗಳಿಗೆ ಶ್ರೇಷ್ಠ ವಾದ ಆತ್ಮೀಕ ಪ್ರಯೋಜನವಾಗಿದೆ
ಮತ್ತು ಕ್ರಿಸ್ತನ ವ್ಯ ಕ್ತಿತ್ವ ಮತ್ತು ಕಾರ್ಯದಿಂದ ದೂರ ಹೋಗದ ಹಾಗೆ ಭದ್ರಕೋಟೆ ಯಾಗಿದೆ..
181
ಎಲ್ಲಾ ಶಿಸ್ತಿನ ಕ್ರಿಯೆಗಳು ನ್ಯಾಯವಾದ ರೀತಿಯಲ್ಲಿರಬೇಕು ಮತ್ತು ಸಭೆಯ
ವಿಷಯಗಳು ಸಭೆಯ ವಿಶ್ವಾಸಿಗಳಿಗೆ ಸೀಮಿತವಾಗಿರಬೇಕು. ಸಂಪೂರ್ಣವಾಗಿ ಅನರ್ಹರಾದ
ವ್ಯ ಕ್ತಿಗಳು ಸಭೆಯ ಅನ್ಯೋನ್ಯತೆಯಲ್ಲಿದ್ದು ಶಿಸ್ತಿಗೆ ಒಳಗಾದರೆ ಸುವಾರ್ತೆಯ ಸಾಕ್ಷಿಯಲ್ಲಿ
ನಾವು ದೇವರ ಆಶೀರ್ವಾದವನ್ನು ಕಾಣಬಹುದು.
182
ಸಕ್ರಿಯರಾಗಿ ಕಾರ್ಯ ಮಾಡುತ್ತಾ ಬಂದಿದ್ದಾರೆ. ಸ್ತ್ರೀಯರು ಸುಲಭವಾಗಿ ಸತ್ಯ ವೇದದ
ಗಾಡಿಯಲ್ಲಿ ನೆಲೆಸಬಹುದು ಮತ್ತೂ ಕ್ರಿಸ್ತನಿಗೂ ಸಭೆಗೂ ಸೇವೆಮಾಡುವುದರಲ್ಲಿ
ಕೊರತೆಯಿಲ್ಲ ದವರಾಗಿರಬಹುದು.
183
ಅಧ್ಯಾಯ
8
ಭವಿಷ್ಯ ದ್ಶಾಸ್ತ್ರ:
ಭವಿಷ್ಯ ದ ಸಂಗತಿಗಳ ಅಧ್ಯ ಯನ
ದೇವರು ಮನುಷ್ಯ ನಿಗೆ ನೀಡುವ ರಕ್ಷಣೆ ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯ ತ್
ಕಾಲದಲ್ಲಿ ಇರುವಂಥದಾಗಿದೆ.ಪವಿತ್ರಾತ್ಮ ನು ವಿಶ್ವಾಸಿಯನ್ನು ಪಾಪದ ಶಕ್ತಿಯಿಂದ ಸತತವಾಗಿ
ಬಿಡಿಸುತ್ತಿದ್ದ ರೂ, ಹಳೆಯ ಸ್ವ ಭಾವವು ಇನ್ನು ಹಾಗೆಯೆ ಉಳಿದಿದೆ. ಬಹಳವಾಗಿ ಪರಿಪಕ್ವ ತೆ
ಹೊಂದಿರುವ ಪರಿಶುದ್ಧ ನೂ ಕೂಡ ಕೆಲವೊಮ್ಮೆತನ್ನ ಆಂತರ್ಯದಲ್ಲಿ ಪಾಪದ
ಪ್ರೇರಣೆಯನ್ನು ಹೊಂದಿರುತ್ತಾನೆ. ಆದರೆ ಒಳ್ಳೆಯ ಸುದ್ದಿಯೇನೆಂದರೆ ಕ್ರಿಸ್ತನು ಪುನಃ
ಬರುವಾಗ ಈ ಹಳೆಯ ಸ್ವ ಭಾವ ಶಾಶ್ವ ತವಾಗಿ ತೆಗೆದು ಹಾಕಲ್ಪ ಡುತ್ತದೆ(1 ಕೊರಿ. 15:49-51).
184
ಒಳಗೊಂಡಿದ್ದ ಹಾಗೆಯೇ ಎರಡನೆಯ ಬರೋಣವು ಎರಡು ಹಂತಗಳನ್ನು ಒಳಗೊಂಡಿದೆ.
ಕ್ರಿಸ್ತನ ಮೊದಲನೇ ಬರೋಣಕ್ಕೆ ಸಂಬಂಧಿಸಿದಂತೆ ಆತನು ಬೇತ್ಲೆಹೇಮಿನಿಂದ ಬರುತ್ತಾನೆ
ಎಂದು ಒಬ್ಬ ಪ್ರವಾದಿ ಹೇಳಿದನು(ಮೀಕ 5:2) ಮತ್ತು ಅತನ್ನು ಕತ್ತೆ ಮರಿಯನ್ನು
ಹತ್ತಿದವನಾಗಿ ಯೆರೂಸಲೇಮನ್ನು ಪ್ರವೇಶಿಸುವನು ಎಂದು ಮತ್ತೊಬ್ಬ ಪ್ರವಾದಿಯೂ
ಹೇಳಿದನು(ಜೆಕ. 9:9). ಈ ಎರಡು ಸಂಗತಿಗಳು ಅಕ್ಷರಸಃ ನೆರವೇರಿದವು (ಮತ್ತಾ. 2:1;
21:1-11). ಅದೇ ರೀತಿಯಲ್ಲಿ ಎರಡನೆಯ ಬರೋಣಕ್ಕೆ ಸಂಬಂಧಿಸಿದಂತೆ, ಆತನು ತನ್ನ
ಪರಿಶುದ್ಧ ಜನರಿಗಾಗಿ ಬರುತ್ತಾನೆ ಎಂದು ಕೆಲವು ವಚನಗಳು ಹೇಳುತ್ತವೆ (ಯೋಹಾ. 14:3),
ಇನ್ನು ಕೆಲವು ಭಾಗಗಳು ಆತನು ತನ್ನ ಪರಿಶುದ್ಧ ರೊಂದಿಗೆ ಬರುವುದನ್ನು ಹೇಳುತ್ತವೆ (1 ಥೆಸ
. 3:13). ಹೀಗೆ ಈ ಎರಡು ಬರೋಣಗಳ ನಡುವೆ ಸಮಯಗಳ ಅಂತರವಿದೆ. ಮುಂಬರುವ
ಸಂಗತಿಗಳನ್ನು ನಾವು ಕಾಲ ಕ್ರಮಕ್ಕ ನುಸಾರವಾದ ರೀತಿಯಲ್ಲಿ ಪರಿಗಣಿಸೋಣ.
ಕ್ರಿಸ್ತನು ತನ್ನ ಪರಿಶುದ್ಧ ರಿಗಾಗಿ ಬರುವಾಗ, ಅವರು ಅಂತರಿಕ್ಷಕ್ಕೆ ಒಯ್ಯ ಲ್ಪ ಡುತ್ತಾರೆ.
ಇದನ್ನು ಸಭೆಯ ಎತ್ತಲ್ಪ ಡುವಿಕೆ ಎಂದು ಕರೆಯುತ್ತಾರೆ. "ಎತ್ತಲ್ಪ ಡುವಿಕೆ " ಎಂಬ ಪದವು ಆಂಗ್ಲ
ಭಾಷೆಯ ಸತ್ಯ ವೇದದಲ್ಲಿ ಎಲ್ಲೂ ಕಾಣುವುದಿಲ್ಲ , ಆದರೆ "ಕದ್ದು ಕೊಂಡು ಹೋಗು " ಎಂಬ
ಅರ್ಥವುಳ್ಳ ಪದದಿಂದ ಬಂದಿದೆ— 1 ಥೆಸ 4:17 ರ ಲ್ಯಾ ಟಿನ್ ಭಾಷೆಯ ಅನುವಾದದಲ್ಲಿ
ಬಳಸಲಾಗಿದೆ—"ನಾವು.... ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳು ವದಕ್ಕಾಗಿ ಅವರ
ಸಂಗಡಲೇ ಮೇಘವಾಹನರಾಗಿ ಫಕ್ಕ ನೆ ಒಯ್ಯ ಲ್ಪ ಡುವೆವು".
185
ಈ ಸತ್ಯಾಂಶದ ಎರಡು ಘಟಕಗಳನ್ನು 1 ಕೊರಿ 15:51-56 ಮತ್ತು 1 ಥೆಸ.4:13-
18 ರಲ್ಲಿ ಕಾಣಬಹುದು. ಇದರ ಮೂಲಕ ಕರ್ತನು ಮಹಾ ಧ್ವ ನಿಯೊಡನೆ ಇಳಿದುಬರುವನು
ಎಂಬುದನ್ನು ಕಲಿತುಕೊಳ್ಳು ತ್ತೇವೆ; ಈಗಾಗಲೇ ಮರಣ ಹೊಂದಿರುವ ವಿಶ್ವಾಸಿಗಳು ಮೊದಲು
ಸತ್ತವರಿಂದ ಎದ್ದು ಬರುವರು; ಜೀವಿಸುತ್ತಿರುವ ವಿಶ್ವಾಸಿಗಳು ರೂಪಾಂತರ ಹೊಂದಿದವರಾಗಿ
ಹೊಸ ದೇಹವನ್ನು ಪಡೆದುಕೊಳ್ಳು ತ್ತಾರೆ. ಒಂದು ಕ್ಷಣದಲ್ಲೇ "ರೆಪ್ಪೆ ಬಡಿಯುವಷ್ಟ ರೊಳಗಾಗಿ"
ಅಂತರಿಕ್ಷದಲ್ಲಿ ಎತ್ತಲ್ಪ ಡುವರು ಮತ್ತು ಇದು ಇದ್ದ ಕಿದ್ದ ಹಾಗೆ ನಡೆಯುವದು.
ಕ್ರಿಸ್ತನ ನ್ಯಾಯಾಸನ
186
ಕೊಡಲ್ಪ ಟ್ಟಿಲ್ಲ ಆದರೆ ಮದುವೆ ಔತಣವು ನಮ್ಮ ನ್ನು ಕರ್ತನಾದ ಯೇಸುವಿನೊಂದಿಗೆ ನಿತ್ಯ ತ್ವ ಕ್ಕೆ
ಪರಿಚಯಿಸಲು ಸರಿಯಾದಂತಹ ಮಾರ್ಗವಾಗಿದೆ.
187
ಮಾನಸಾಂತರದಿಂದ ದೇವರ ಕಡೆಗೆ ತಿರುಗುತ್ತಾನೆ" ಎಂದು ಕೆಲವರು ಹೇಳಬಹುದು. ಆದರೆ
ದೇವರು ತನ್ನ ಸಂಪೂರ್ಣ ರೌದ್ರವನ್ನು ತೋರಿಸುವಾಗಲು ಮನುಷ್ಯ ನು ಮಾನಸಾಂತರ
ಪಡಲಿಲ್ಲ . ಮಹಾಸಂಕಟ ಕಾಲವು ಇದನ್ನು ಸಾಬೀತುಪಡಿಸುತ್ತದೆ.
188
ಜೀವಿಸುವ ರಾಜ್ಯ ಗಳ ನ್ಯಾಯತೀರ್ವಿಕೆ
189
ಸಭೆಯನ್ನು ಪಾಪಗಳಿಂದ ಶುದ್ಧ ಮಾಡುವ ಸಲುವಾಗಿ ಸಭೆಯು
ಸಂಕಟಕಾಲವನ್ನು ಅಥವಾ ಅದರ ರುಚಿಯನ್ನು ನೋಡಬೇಕು ಎಂದು ಅನೇಕ ಕ್ರೈಸ್ತರು
ಭಾವಿಸುತ್ತಾರೆ. ಹೀಗೆ ಸಂಕಟಕಾಲವು ಒಂದು ರೀತಿಯ "ಪ್ರೊಟೆಸ್ಟಂಟ್ ಶುದ್ಧೀಕರಣ"
ವಾಗುತ್ತದೆ. ವಿಶ್ವಾಸಿಗೆ ಶಿಕ್ಷೆಯಿದೆ ಆದರೆ ಅದು ಅವನು ಪಾಪದಲ್ಲಿ ಮುಂದುವರಿಯದ ಹಾಗೆ
ಅವನನ್ನು ತಡೆಯಲು ಮಾಡುವಂಥದ್ದಾಗಿದೆ. ಆದರೆ ಸಂಕಟಕಾಲವು ಈ ದುಷ್ಟ ಲೋಕದ
ಪಾಪಗಳಿಗೆ ಅದನ್ನು ದಂಡಿಸುವುವಂಥದ್ದಾಗಿದೆ.
190
ಭವಿಷ್ಯ ದಲ್ಲಿ ಮೆಸ್ಸಾಯನು ಅರಸನಾಗಿ ಇಡೀ ಲೋಕವನ್ನೇ ಅಳುವ ಚಿನ್ನ ದ
ಯುಗದ ಕುರಿತಾಗಿ ಹಳೆಯ ಒಡಂಬಡಿಕೆಯ ಪ್ರವಾದನೆಗಳು ಹೇಳುತ್ತವೆ. ಪ್ರಕಟನೆ 20:4
ರಲ್ಲಿ ಆತನು ಸಾವಿರ ವರುಷ ಆಳುವುದನ್ನು ನೋಡುತ್ತೇವೆ. ಈ ಕಾಲಘಟ್ಟ ವನ್ನು
ಮಿಲೇನಿಯಂ ಎಂದು ಕರೆಯಲಾಗುತ್ತದೆ, ಇದು ಎರಡು ಲಾಟಿನ್ ಪದಗಳಿಂದ ಬಂದಿದೆ
ಇದರ ಅರ್ಥ "ಸಾವಿರ ವರುಷ". ಆದಾಮನ ಪಾಪದಿಂದ ಭೂಲೋಕವು ಶಾಪಕ್ಕೆ
ಒಳಗಾಯಿತು(ಆದಿ. 3:17-18), ಮತ್ತು ಅದರಿಂದ ನೆಲವು ಮುಳ್ಳು ಗಳನ್ನು , ಕಳೆಗಳನ್ನು
ಬೆಳೆಯುತ್ತದೆ. ಪರದೈಸಿಯು ಪುನರ್ಸ್ಥಾಪಿಸಲ್ಪ ಡುತ್ತದೆ(ಪ್ರಕ. 2:7) ಮತ್ತು ಅರಣ್ಯ ವು
"ತಾವರೆಯ ಹಾಗೆ ಅರಳುತ್ತದೆ"(ಯೆಶಾ. 35:1). ವನ್ಯ ಮೃಗಗಳು ಪಳಗಿಸಲ್ಪ ಡುತ್ತವೆ
(ಯೆಶಾ. 65:25),ಮತ್ತು ಎಲ್ಲಾ ಸೃಷ್ಟಿಗಳು ಬಾದೆಯಿಂದ ಬಿಡಿಸಲ್ಪ ಡುವವು(ರೋಮಾ.
8:19-22).
191
ಹನ್ನೆರಡು ಮಂದಿ ಅಪೋಸ್ತಲರರು ಆತನನ್ನು ಸೇರಿಕೊಳ್ಳು ತ್ತಾರೆ(ಮತ್ತಾ. 19:28).
ಸಂಕಟಕಾಲದಲ್ಲಿ ತಮ್ಮ ನಂಬಿಗಸ್ತಿಕೆಯನ್ನು ಸಾಬೀತುಪಡಿಸಿದ ಯೆಹೂದ್ಯ ರು ಕೂಡ
ಅದಿಕಾರವನ್ನು ಹೊಂದುತ್ತಾರೆ(ಲೂಕ 19:17). ಕ್ರೈಸ್ತರು ಕ್ರಿಸ್ತನ ದೇಹದ ಅಂಗಗಳು ಮತ್ತು
ಆತನ ಮದಲಗಿತ್ತಿಯರಾಗಿ ಆತನು ಹೋದಲೆಲ್ಲಾ ಅವರು ಹೋಗುವರು(ಯೋಹಾ
14:3).
ಸಾವಿರ ವರುಷ ಆಳ್ವಿಕೆಯಲ್ಲಿ, ಕ್ರಿಸ್ತನು ಸಿಂಹಾಸನದಲ್ಲಿರುವುದರಿಂದ ಎಲ್ಲಾ ಜನರು
ಬಲವಂತವಾಗಿ ವಿದೇಯರಾಗುತ್ತಾರೆ. ಆದರೆ ಅವಕಾಶ ಸಿಕ್ಕು ವಾಗ ಅನೇಕರು ಅರಸನ
ವಿರುದ್ಧ ಪ್ರತಿಭಟಿಸುತ್ತಾರೆ. ಸಾವಿರ ವರುಷದ ಅಂತ್ಯ ದಲ್ಲಿ ಸೈತಾನನು ಕೆಲವುಕಾಲ
ಬಿಡುಗಡೆಯಾಗುತ್ತಾನೆ (ಪ್ರಕ. 20:3). ದೇವರ ಸಿಂಹಾಸನವನ್ನು ತಳ್ಳಿ ಹಾಕುವ ಪ್ರಯತ್ನದಲ್ಲಿ
ಅವನು ಅಸಂಖ್ಯಾತ ಸೈನಿಕರನ್ನು ಒಟ್ಟು ಗೂಡಿಸುವನು. ಪರಲೋಕದಿಂದ ಬೆಂಕಿ ಬಂದು
ಅವನ ಸೇನೆಯನ್ನು ದಹಿಸುವದು(ಪ್ರಕ. 20:9) ಮತ್ತು ದೇವರ ಆಳ್ವಿಕೆಯನ್ನು
ಎದುರಿಸಿದವರೆಲ್ಲ ರೂ ಶಾಶ್ವ ತವಾಗಿ ಇಲ್ಲ ದಂತಾಗುವರು.
192
"ಕತ್ತಲೆಯು, ಗೋಳಾಟವು, ಹಲ್ಲು ಕಡಿಯೋಣವು" ಇರುವುದು (ಮತ್ತಾ. 22:13; 25:30).
ದುಷ್ಟ ರು "ಅಲೆಯುವ ನಕ್ಷತ್ರಗಳಾದ ಇವರ ಪಾಲಿಗೆ ಕಾರ್ಗತ್ತಲೆಯು ಸದಾಕಾಲ
ಇಟ್ಟಿರುವದು" ಹಾಗಿರುತ್ತಾರೆ (ಯೂದ.13). ನರಕವು ದೇವರಿಂದ ದೂರವಿದೆ ಎಂಬುದನ್ನು
ಬಿಟ್ಟು ಅದು ಎಲ್ಲಿದೆ ಎಂಬುದು ನಮಗೆ ತಿಳಿದಿಲ್ಲ . ಯೇಸುವು ಹೇಳಿದನು "ನೀವು ನಿಮ್ಮ
ಪಾಪದಲ್ಲೇ ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ" (ಯೋಹಾ. 8:21).
ಪರಲೋಕ ಅಥವಾ ನರಕದ ಕುರಿತಾಗಿ ಸತ್ಯ ವೇದವು ಹೆಚ್ಚಾಗಿ ಹೇಳುವುದಿಲ್ಲ .
ಆದರೆ ಪರಲೋಕದಲ್ಲಿಲದ ಸಂಗತಿಗಳ ಕುರಿತಾಗಿ ನಾವು ನೋಡುತ್ತೇವೆ—ದುಃಖ , ಅಳುವಿಕೆ,
ನೋವು, ಶಾಪ, ಮರಣ. ಅಲ್ಲಿ ಬೆಳಕು, ಜೀವ, ಪ್ರೀತಿ ಮತ್ತು ಮಹಿಮೆಯಿರುತ್ತದೆ (ಪ್ರಕ.
21:22–22:5).
193
15:7). ಕ್ರಿಸ್ತನನ್ನು ಅಂತಿಮವಾಗಿ ತಿರಸ್ಕ ರಿಸುವವರು ದೇವರಿಂದ ನಿತ್ಯ ಕ್ಕೂ ಅಗಲುತ್ತಾರೆ. ರಕ್ಷಣೆ
ಹೊಂದಿದವರಿಗೆ ನಿತ್ಯ ಜೀವವಿರುವ ಹಾಗೆಯೆ ಇವರ ದಂಡನೆಯೂ ನಿತ್ಯ ವಾಗಿರುತ್ತದೆ.
ಮೂಲಭೂತ
ಸತ್ಯ ವೇದಸಿದ್ಧಾಂತಗಳು
ಭಾಗ - 1
194
ಪರೀಕ್ಷೆ
ಅಧ್ಯಾಯ 1 ರ ಪರೀಕ್ಷೆ
ದೇವದೂತ ಶಾಸ್ತ್ರ
195
B . ಮೀಕಾಯೇಲನು ಮತ್ತು ಪ್ರಧಾನ ದೂತನು
C. ಸೇರಾಫಿಯರು
D. ಕೆರೂಬಿಯರು
6. ಶಾಸ್ತ್ರದ ಮೊದಲ ಮತ್ತು ಕೊನೆಯ ಪ್ರತ್ಯ ಕ್ಷತೆಯಲ್ಲಿ ಸೈತಾನನು ಈ ರೀತಿ ಚಿತ್ರಿಸಲ್ಪ ಟ್ಟಿದ್ದಾನೆ
A . ಸರ್ಪ ಅಥವಾ ಘಟಸರ್ಪ
B .ದುಷ್ಟ ನು
C.ಶೋದಕನು
D.ಲೂಸಿಫರನು
196
B . ಪಕ್ಷವಾದಿ
C.ದೂರು ಹೇಳುವವನು
D.ವಂಚಕನು
ಅಧ್ಯಾಯ 2 ರ ಪರೀಕ್ಷೆ
197
ಮಾನವ / ಮನುಷ್ಯ ಶಾಸ್ತ್ರ
198
A . ಬುದ್ದಿ, ಭಾವನೆ ಮತ್ತು ಚಿತ್ತ
B . ಬುದ್ದಿ ಮತ್ತು ಭಾವನೆ ಮಾತ್ರ
C. ದೇಹ ಮತ್ತು ಪ್ರಾಣ ಮಾತ್ರ
D. ದೇಹ ಮತ್ತು ಆತ್ಮ ಮಾತ್ರ
199
10.ಸಂಪೂರ್ಣ ಭ್ರಷ್ಟ ತೆ ಎಂಬ ಪದದ ಅರ್ಥ
A . ಸ್ವಾಭಾವಿಕ ಮನುಷ್ಯ ನು ದೇವರನ್ನು ಮೆಚ್ಚಿಸಲು ಅಸಮರ್ಥನಾಗಿದ್ದಾನೆ
B . ಮನುಷ್ಯ ನು ಮಾಡುವ ಎಲ್ಲ ವು ಕೆಟ್ಟ ದ್ದೇ
C. ಎಲ್ಲಾ ಪಾಪವು ಸಮನಾದ ಪರಿಣಾಮಗಳನ್ನು ಒಳಗೊಂಡಿದೆ
D. ಮನುಷ್ಯ ನಿಗೆ ಯಾವುದೇ ನಿರೀಕ್ಷೆಯಿಲ್ಲ
ಅಧ್ಯಾಯ 3 ರ ಪರೀಕ್ಷೆ
ಪಾಪಶಾಸ್ತ್ರ
2. ಮೊದಲನೆಯ ಪಾಪವು
A . ಲೂಸಿಫರನು
200
B . ಆದಾಮನು
C. ಹವ್ವ ಳು
D. ಕಾಯಿನನು
5. ಈ ಪಾಠದಲ್ಲಿ ವ್ಯ ಕ್ತಿಗತವಾದ ಪಾಪಗಳು ಮತ್ತು ಸ್ವಾಸ್ತ್ಯವಾಗಿ ಹೊಂದಿದ ಪಾಪದ ಸ್ವ ಭಾವದ
ಸಂಭಂದವನ್ನು ಹೀಗೆ ಹೋಲಿಸಲಾಗಿದೆ
A . ಒಂದು ಮರ ಮತ್ತು ಅದರ ಹಣ್ಣು
B . ಪಾಕವಿಧಾನ ಮತ್ತು ಅದರಿಂದ ಮಾಡಿದ ಆಹಾರ
C. ಸಲಕರಣೆಗಳು ಮತ್ತು ಒಂದು ಮುಗಿದ ಯೋಜನೆ
D. ಹಸ್ತಿವಾರ ಮತ್ತು ಕಟ್ಟ ಡ
201
A . ವ್ಯ ಕ್ತಿಗತವಾದ ಪಾಪ
B . ನ್ಯಾಯಾಂಗದಿಂದ ಹೊರಿಸಿದ ಪಾಪ
C. ಸ್ವಾಸ್ತ್ಯವಾಗಿ ಹೊಂದಿದ ಪಾಪದ ಸ್ವ ಭಾವ
D. ಮೊದಲ ಪಾಪ
202
ಅಧ್ಯಾಯ 4 ರ ಪರೀಕ್ಷೆ
ರಕ್ಷಣಾಶಾಸ್ತ್ರ – ಭಾಗ 1
2. ದೇವರು ತನ್ನ ನಿಯಮವನ್ನು ಬದಿಗಿಡಲು ಸಾಧ್ಯ ವಿಲ್ಲ , ಆದರೆ ಆತನ ಪರಿಶುದ್ಧ ತೆಯ
ಬೇಡಿಕೆಗಳನ್ನು ಯಾವುದು ತೃಪ್ತಿಪಡಿಸಬೇಕಿತ್ತು
A . ಕೃಪೆ
B . ಕರುಣೆ
C. ಪ್ರೀತಿ
D. ಕನಿಕರ
203
4 . ವಿಮೋಚನೆಯು ಯಾವುದಕ್ಕೆ ಸಂಬಂಧಿಸಿದೆ
A . ನಮ್ಮ ಕೆಟ್ಟ ಕಾರ್ಯಗಳ ಮಾನಸಾಂತರಕ್ಕೆ
B . ಯಥಾರ್ಥವಾದ ಜೀವಿತ ಜೀವಿಸಲು
C. ಪಾಪದ ಬಂಧನದಿಂದ ಬಿಡುಗಡೆಯಾಗಲು
D. ನಮ್ಮ ಪ್ರಾಣಕ್ಕಾಗಿ ದೇವರು ಸೈತಾನನಿಗೆ ಬೇರೆ ತೆರುವುದು
204
D. ವಿಶ್ವಾಸಿಗಳನ್ನು ಅವಿಶ್ವಾಸಿಗಳೊಂದಿಗೆ
9.ದೇವರು ಚುನಾಯಿಸಿದ್ದು
A . ಎಲ್ಲ ರು ರಕ್ಷಣೆ ಹೊಂದಲು
B . ಕೆಲವರು ನಾಶವಾಗಲು
C. ಕೆಲವರು ರಕ್ಷಣೆ ಹೊಂದಲು
D. ಹೆಚ್ಚಿನ ಮಂದಿ ರಕ್ಷಣೆ ಹೊಂದಲು
ಅಧ್ಯಾಯ 5 ರ ಪರೀಕ್ಷೆ
ರಕ್ಷಣಾಶಾಸ್ತ್ರ - ಭಾಗ 2
205
ರಕ್ಷಣಾಶಾಸ್ತ್ರಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ
ಬರೆಯಿರಿ. ನಿಮಗೆ ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.
206
A . ಪಾದ್ರಿಯ ಮೂಲಕ
B. ಪಾಲಕನ ಮೂಲಕ
C. ಪವಿತ್ರಾತ್ಮ ನ ಮೂಲಕ
D. ಸಭೆಯ ಮೂಲಕ
207
10. ನಮ್ಮ ರಕ್ಷಣೆಯನ್ನು ಸಾಬೀತುಪಡಿಸುವ ಸಂಗತಿ
A. ನಮ್ಮ ದೈವಿಕವಾದ ಜೀವಿತಗಳು
B. ನಮ್ಮ ಸಮರ್ಪಣೆ ಮತ್ತು ನಂಬಿಕೆ
C. ನಮ್ಮ ಸ್ನೇಹಿತರ ಬೆಂಬಲ ಮತ್ತು ಪ್ರೋತ್ಸಾಹ
D. ತ್ರಯೇಕತ್ವ ದಲ್ಲಿರುವ ಪ್ರತಿಯೊಂದು ವ್ಯ ಕ್ತಿಯ ಗುಣ ಮತ್ತು ಕಾರ್ಯ
ಅಧ್ಯಾಯ 6 ರ ಪರೀಕ್ಷೆ
ಸಭಾಶಾಸ್ತ್ರ - ಭಾಗ 1
208
D. ಬಿ ಮತ್ತು ಸಿ ಎರಡು
4. ಸಭೆಯು
A . ಹೊಸ ಮತ್ತು ಹಳೆಯ ಒಡಂಬಡಿಕೆಯಲ್ಲಿ ಅಸ್ತಿತ್ವ ದಲ್ಲಿತ್ತು
B . ಯೆಹೂದ ಧರ್ಮದ ತಾರ್ಕಿಕವಾದ ವಿಸ್ತರಣೆ
C. ಪಂಚಾಶತ್ತಮ ದಿನದಂದು ಅಸ್ತಿತ್ವ ಕ್ಕೆ ಬಂತು
D. ಕ್ರಿಸ್ತನು ಈ ಲೋಕದಲ್ಲಿದ್ದಾಗ ಆತನ ಆರಾಧನೆಯ ಸ್ಥ ಳವಾಗಿತ್ತು
209
B . ಅದು ಕಡಿಮೆ ಸಮಯದಲ್ಲಿ ಆದದ್ದು ಆದುದರಿಂದ ಅಳವಡಿಸುವುದು ಸುಲಭ
C. ಉಪದೇಶಿಗಳು ಬಳಕೆಯಾದರೆಂಬ ಭಾವನೆಯನ್ನು ನೀಡುತ್ತದೆ
D. ಹಿರಿಯರಿಂದ ಗೌರವವನ್ನು ಸಂಪಾದಿಸುವ ಮಾರ್ಗ
9. ಸಭೆಯ ಹಿರಿಯನು
A .ಯಶಸ್ವಿಯಾದ ವ್ಯ ವಹಾರ ಮಾಡುವವನಾಗಿರಬೇಕು
B . ಅರವತ್ತು ವರುಷ ದಾಟಿದ ವ್ಯ ಕ್ತಿಯಾಗಿರಬೇಕು
C. ಶಾಸ್ತ್ರಕ್ಕೆ ಅನುಸಾರವಾದ ಅರ್ಹತೆಗಳನ್ನು ಹೊಂದಿರಬೇಕು
D. ಸಭೆಯಿಂದ ಮತದಲ್ಲಿ ಚುನಾಯಿಸಲ್ಪ ಡಬೇಕು
210
ಅಧ್ಯಾಯ 7 ರ ಪರೀಕ್ಷೆ
ಸಭಾಶಾಸ್ತ್ರ - ಭಾಗ 2
211
A . ಸೇವೆಗೆ ಸಮರ್ಪಿಸಿವುದು
B . ಮಗುವಿನ ದೀಕ್ಷಾಸ್ನಾನ ಮತ್ತು ಧೃಡೀಕರಣ
C. ನೀರಿನಲ್ಲಿ ಮುಳುಗಿಸಿ ದೀಕ್ಷಾಸ್ನಾನ ಮತ್ತು ಕರ್ತನ ಭೋಜನ
D. ಕ್ರಿಸ್ತನ ಜನನವನ್ನು ಆಚರಿಸುವುದು
212
A . ಸತ್ಯ ವೇದವು ಎಷ್ಟು ಹಳೆಯದು ಎಂಬುದನ್ನು ತೋರಿಸುತ್ತದೆ
B . ಪುರುಷರು ಸ್ತ್ರೀಯರಿಗಿಂತ ದೇವರಿಗೆ ಬಹಳ ಪ್ರಾಮುಖ್ಯ ವಾದವರು ಎಂದು ಅರ್ಥ
C. ಒಬ್ಬ ನಾಯಕನಾಗಿ ಕಠಿಣವಾಗಿ ಕೆಲಸ ಮಾಡುವುದು ಉತ್ತಮವಾದದ್ದು
D. ಅವರು ಬೇರೆ ಯಾವ ಮಾರ್ಗಗಳಲ್ಲೂ ಸೇವೆ ಮಾಡಲು ಸಾಧ್ಯ ವಿಲ್ಲ ಎಂದು
ಅರ್ಥವಲ್ಲ
ಅಧ್ಯಾಯ 8 ರ ಪರೀಕ್ಷೆ
ಭವಿಷ್ಯ ಶಾಸ್ತ್ರ
213
1. ಈ ಕೆಳಗಿನ ಹೇಳಿಕೆಗಳಲ್ಲಿ ಕ್ರಿಸ್ತನು ಮೊದಲು ಬಾದೆಯನ್ನು ಅನುಭವಿಸಿ ನಂತರ
ಮಹಿಮೆಯಿಂದ ಅಳುವನು ಎಂಬ ಹಳೆಯ ಒಡಂಬಡಿಕೆಯ ಪ್ರವಾದನೆಯನ್ನು
ಉತ್ತಮವಾಗಿ ವಿವರಿಸುತ್ತದೆ
A . ಯಹೂದ್ಯ ರು ಕ್ರಿಸ್ತನನ್ನು ತಿರಸ್ಕ ರಿಸಿದ್ದ ರಿಂದ ದೇವದೂತರು
(ಮನುಷ್ಯ ರಲ್ಲ )ಪರಲೋಕದ ಮಹಿಮೆಗಳನ್ನು ಅನುಭವಿಸುವರು
B . ಹಳೆಯ ಒಡಂಬಡಿಕೆಯ ಪ್ರವಾದನೆಗಳನ್ನು ನಂಬಲು ಸಾಧ್ಯ ವಿಲ್ಲ
C. ಕ್ರಿಸ್ತನು ಭೂಲೋಕಕ್ಕೆ ಬಂದಾಗ ಈ ಎರಡು ಪ್ರವಾದನೆಗಳನ್ನ್ನು ನೆರವೇರಿಸಿದನು
D. ಕ್ರಿಸ್ತನು ಎರಡು ಬಾರಿ ಬರುತ್ತಾನೆ ಒಮ್ಮೆ ಬಾಧೆಯನ್ನು ಅನುಭವಿಸಲು ನಂತರ
ಮಹಿಮೆಯಿಂದ ಆಳ್ವಿಕೆ ಮಾಡಲು
4.ಕ್ರಿಸ್ತನ ನ್ಯಾಯಾಸನದಲ್ಲಿ
A.ವಿಶ್ವಾಸಿಗಳು ಪರಲೋಕಕ್ಕೆ ಯೋಗ್ಯ ರೋ ಇಲ್ಲ ವೋ ಎಂದು ತಿಳಿಯಲು ಅವರನ್ನು
ತೀರ್ಪು ಮಾಡಲಾಗುತ್ತದೆ
B. ಪ್ರತಿಫಲ ಅಥವಾ ತಿರಸ್ಕ ರಣೆಗೆ ವಿಶ್ವಾಸಿಗಳ ಕ್ರಿಯೆಗಳನ್ನು ಮರುವಿಮರ್ಶೆ
ಮಾಡಲಾಗುವುದು
C. ವಿಶ್ವಾಸಿಗಳು ಎತ್ತಲ್ಪ ಟ್ಟಾಗ ತಿಳಿದುಬರುತ್ತದೆ
214
D. ರಕ್ಷಣೆ ಹೊಂದಿದವರು ಮತ್ತು ಹೊಂದದವರು ತಮ ಜೀವಿತದ ಲೆಕ್ಕ ವನ್ನು
ನೀಡುತ್ತಾರೆ
8. ಮಿಲೇನಿಯಂನಲ್ಲಿ
A. ಯೇಸುಕ್ರಿಸ್ತನು ಇಸ್ರಾಯೇಲನ್ನು ಆಳುವನು
B. ಸರ್ಕಾರದಲ್ಲಿ ಎಲ್ಲಾ ರಾಷ್ಟ್ರಗಳು ಸಮಾನ ಧ್ವ ನಿಯನ್ನು ಹೊಂದಿರುತ್ತದೆ
C. ಯೇಸುಕ್ರಿಸ್ತನು ಸಮಸ್ತ ಭೂಲೋಕವನ್ನಾಳುವನು
D. ಎಲ್ಲಾ ಮನುಷ್ಯ ರು ರಕ್ಷಣೆ ಹೊಂದುವರು
215
9. ದೊಡ್ಡ ಬಿಳಿ ಸಿಂಹಾಸನದ ತೀರ್ಪಿನಲ್ಲಿ
A. ಜನರು ಅವರ ಕೃತ್ಯ ಗಳಿಗೆತಕ್ಕಂತೆ ತೀರ್ಪಿಗೊಳಗಾಗುತ್ತಾರೆ
B. ಕುರಿಯಾದಾತನ ಪುಸ್ತಕದಲ್ಲಿ ಹೆಸರು ಬರೆಯಲ್ಪ ಡದವರನ್ನು ಬೆಂಕಿಯ ಕೆರೆಗೆ
ದೊಬ್ಬ ಲಾಗುವುದು
C. ಜನರು ಕರ್ತನಾದ ಯೇಸುವಿನಿಂದಲೇ ತೀರ್ಪು ಮಾಡಲ್ಪ ಡುವರು
D. ಈ ಮೇಲಿರುವ ಎಲ್ಲ ವೂ ಸತ್ಯ ವಾಗಿವೆ
216