Download as pdf or txt
Download as pdf or txt
You are on page 1of 132

- ನಕ್ಷತ್ರ ವೀಕ್ಷಣೆ

ಜಿ. ಟಿ. ನಾರಾಯಣ ರಾವ್

ಕೃಷ್ಟವೇ ಸ್ವಾಹೀ
ಸಿಂಹ ,
ಕಾಳಭೈರವ ಸಹದೇವ
ಹೆರ್ಸಟಕ

ಹೈರ್ದ ಶೆಟ್ಟನ ? ಸಪ್ತರ್ಷಿಮಂಡಲ

| ಪುನರ್ವಸದ್ವಿತೀಯ ದೊಪ್ಪಸೌಟು ಉತ್ತರ ಕಿರೀಟ


ಪುನರ್ವಸುಪ್ರಫದು
ಮಿಥುನ ಮಂತರ
| ಆರಗದಲ
ಲಘುಸಪ್ತರ್ಷಿ ಸಂಯೋಧನ

ಪುಟ್ಟ ಸೌಟು
ಆದ್ರ್ರಾ ವಿಜಯಸಾರೆಡ್ಡಿ
ಧ್ರುವನಕ್ಷತ್ರ ಆಫ್
ಮಹಾ
- ಬ್ರಹ್ಮ ಹೃದಯ
ವೀಕ
ಪ್ರಾಧಭುಜ
ಸಾ
ವೃಷಭ ಪ ಹಂಸಾಕ್ಷಿ
ಗ ಗರುಡ
ರೋಹಿಣಿ
ಗ ಯುಧಿಷ್ಠಿರ
ಕುಂತೀ ರಾಜಹಂಸ

ಮಹಾಬ್ರಹ್ಮಾಂಡ

ನಕುಲ

ಕನಾ

ಅಜಗರ

ಕಿನ ರ

ಸೌರಾಷ&
ಕಿನ್ನದ ಪ್ರಥಮ
ಕೆಲವು ಏಕಶೃಂಗೇರಿ
ವೃಶ್ಚಿಕ ದಕ್ಷಿಣ ಲುಟ
ಉರಗಧರ & ದೇನಣ ಬಸಿ ಕ
5 ಗಂ ಗೆ ದಕ್ಷಿಣ ಮರಾಠಾನ

ಆ ' ಕಾ
ಮಗಾಹಿಲ್" ಇದೆ ಮಹಾವ್ಯಾಧ
ಮನು
ನಾಡಗಳು ಮುಷ್ಟ

ವಾಧ ಸ್ಪಷ್ಟ
ವೃಹಬಂದು

ಮೈ ತಣ್ಣೀ|

ಚಕೋರ
ಚ4 _42 ಮೀಸೆ-
ಕುಂಭ ಮೀನಾ೬
ನಕ್ಷತ್ರ ವೀಕ್ಷಣೆ

ನಕ್ಷತ್ರ ವೀಕ್ಷಕರ ಕೈಪಿಡಿ

- ಜಿ. ಟಿ. ನಾರಾಯಣರಾವ್

ಪ್ರಸಾದ್ ಏಜೆನ್ಸಿಸ್

ನಂ . ೯೦೭/೫ , ೪ನೇ ಮುಖ್ಯ ರಸ್ತೆ , ೧ನೇ ಕ್ರಾಸ್

ವಿದ್ಯಾರಣ್ಯಪುರ , ಮೈಸೂರು ೫೬೦೦೦೮

ದೂರವಾಣಿ ೦೮೨೧ ೩೪೦೯೩೨


NAKSHATRA VEEKSHANE a handbook in Kannada on

stargazing . Author : G . T. Narayana Rao, # 8 , 'Athree ,' Kamakshi


Hospital Road , Saraswatipura , Mysore 570 009 (Ph : 0821-543759).

First edition ( 1983) and the second enlarged edition (1997 ) were

published by Karnataka Adult Education Council, Mysore . The present


improved edition is printed and published by Prasad Agencies , No.

907 /5 , 4th Main Road , 1st Cross, Vidyaranyapura Mysore 570 008 ,

Phone : 0821 340932 . Printed at Tara Printing Press , 285 / F6


Uttaradimutt Road , 5th West Cross, Mysore 570 004 ( Phone 0821
443543 , 431638 ). 128 pages, 37 illustrations. Rs 40

© Author, 2002

Rs 40

ರೂ ೪೦

ಮೂರು ಆವೃತ್ತಿಗಳನ್ನೂ

ಪ್ರೊಫೆಸರ್ ಆರ್ . ಎಲ್ . ನರಸಿಂಹಯ್ಯ ( ೧೯೦೨-೬೯)

ಇವರ ನೆನಪಿಗೆ ಅರ್ಪಿಸಲಾಗಿದೆ

ಪ್ರತಿಗಳಿಗೆ ಸಂಪರ್ಕಿಸಿ

ಅತ್ರಿ ಬುಕ್ ಸೆಂಟರ್

೪, ಶರಾವತಿ ಕಟ್ಟಡ ಬಲ್ಮಟ, ಮಂಗಳೂರು ೫೭೧೦೦೧

ದೂರವಾಣಿ ೦೮೨೪ ೪೨೫೧೬೧, ೪೯೨೩೯೭


ಅರಿಕೆ (ಎರಡನೆಯ ಆವೃತ್ತಿಗೆ)

ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿ ನಕ್ಷತ್ರ ವೀಕ್ಷಣೆ' ಯನ್ನು ೧೯೮೩ರಲ್ಲಿ

ಪ್ರಕಟಿಸಿತು. ಈಗ, ೧೯೯೭, ಅದೇ ಸಂಸ್ಥೆ ಪರಿಷ್ಕೃತ ಮತ್ತು ವಿಸ್ತ್ರತ ಆವೃತ್ತಿಯನ್ನು ಹೊರತರುತ

ನನಗೆ ಮುದನೀಡಿದೆ. ಇದು ನಕ್ಷತ್ರ ವೀಕ್ಷಕರ ಸಂಗಾತಿ ಪುಸ್ತಕ. ಇದನ್ನು ಓದುವ ಮೊದಲು ನೀವು

ಕಡ್ಡಾಯವಾಗಿ ಪಾಲಿಸಬೇಕಾದ ಕೆಲವು ಪ್ರಾಥಮಿಕ ವಿಧಿಗಳಿವೆ :

* ಕನಿಷ್ಠ ಪಕ್ಷ ಒಂದು ವಾರವಾದರೂ ಪ್ರತಿ ರಾತ್ರಿ ಅದೇ ಅರ್ಧ ಗಂಟೆ ನಕ್ಷತ್ರಲೋ

ಪ್ರಜ್ಞಾಪೂರ್ವಕವಾಗಿ ಸರ್ವೆಕ್ಷಿಸಬೇಕು.

* ಎದ್ದು ಕಾಣುವ ವಿವರಗಳನ್ನು ಆಗಾಗಲೇ ಗುರುತುಹಾಕಿಕೊಂಡು ಸಾವಕಾಶವಾಗಿ ಮರ

ಪ್ರಯತ್ನಿಸಬೇಕು. ನೀವುರಚಿಸುವ ಆಕಾಶಪಟದಲ್ಲಿ ಇರಬಹುದಾದ ಮಾಹಿತಿಗಳಿವು : ಸೂರ

ಚಂದ್ರ ಮೂಡಿದ ಮತ್ತು ಕಂತಿದ ನೆಲೆಗಳು, ಚಂದ್ರನ ಸ್ಥಾನ ಮತ್ತು ಕಲೆ (ಉಜ್ವಲ ಭಾಗ

ಬಿಂಬದ ಎಷ್ಟು ಅಂಶವಿದೆ ಎಂಬುದರ ಮಾನಕವೇ ಕಲೆ ; ಅಮಾವಾಸ್ಯೆಯಂದು ಇದು೦, ಹುಣ್ಣಿ

೧, ಮಿಕ್ಕಂದು ಭಿನ್ನರಾಶಿ), ನಕ್ಷತ್ರ ಚಿತ್ರಗಳು ಮತ್ತು ಗ್ರಹ ಸ್ಥಾನಗಳು.

* ಆಕಾಶದ ಅಪಾರ ವಿಸ್ತಾರವನ್ನು ನಿಮ್ಮ ಕಲ್ಪನೆಯ ಸೀಮೆಯೊಳಗೆ ಸಾಧ್ಯವಾಗುವಷ್ಟು

ಸ್ಟಾಂಗೀಕರಿಸಬೇಕು: ಸಾಂತ ಎಂದೂ ಅನಂತವನ್ನು ಗ್ರಹಿಸದು ನಿಜ, ಆದರೆ ಆ ನಿಟ್ಟಿನಲ್ಲಿ ನಾವು ಹೂಡ

ನಿರಂತರ ಪ್ರಯತ್ನ ಕೊಡುವ ಸುಖ ಅನುಭವಗ್ರಾಹ್ಯ ಮಾತ್ರ ಎಂಥ ಉತ್ಕೃಷ್ಟ ಚಿತ್ರವೇ ಆಗಲಿ,

ಆಯಾಮಗಳ ಮಾದರಿಯೇ ಆಗಲಿ , ಕೊನೆಗೆ ತಾರಾಲಯವೇ ( planetarium) ಆಗಲಿ ಗಗನದ ಆ ನಿಜ

ವೈಭವದ ಅನಂತಾಲ್ನಾಂಶವನ್ನೂ ನಿಮ್ಮ ಮುಂದೆ ಬಿತ್ತರಿಸದು. ಇನ್ನು ಈ ಪುಸ್ತಕ

ವಿವರಣಾತ್ಮಕ ಪದಗಳು ಏನನ್ನು ತಾನೇ ಸಾಧಿಸಬಲ್ಲವು, ಹಾದಿ ತೋರಿಸುವುದರ ಹೊರತಾಗಿ

ಆಕಾಶಧ್ಯಾನವನ್ನು ದಿನದಿನ ಮಾಡುತ್ತಿದ್ದರೆ ನಿಮಗೆ ತಿಳಿಯದೆಯೇ ನೀವುಕವಿಹೃದಯಿಯೂ ಆಗಿ

* ನಾಲ್ಕನೆಯ ಹಂತದಲ್ಲಿ ಈ ಪುಸ್ತಕವನ್ನು ಜಿಜ್ಞಾಸುವಿನ ಚಿತ್ತೈಕಾಗ್ರತೆಯ

ಇದೊಂದು ಶಾಸ್ತ್ರಗ್ರಂಥ, ರಮ್ಮ ಕಥಾನಕ ಅಲ್ಲ , ಮನೋರಂಜಕ ನಾಟಕವೂ ಅಲ್ಲ . ಶಾಸ್ತ್ರದ ಕಾಠ

ನಯಗೊಳಿಸುವಷ್ಟರ ಮಟ್ಟಿಗೆ ಇಲ್ಲಿಯ ನಿರೂಪಣ ತಂತ್ರವಿದೆ. ಆದ್ದರಿಂದ ಇಲ್ಲಿಯ ಚಿತ್ರ , ಸಂಖ್ಯೆ


ರೂಪಕ, ಕಥೆ, ವಿವರಣೆ, ಪದ್ಯ ಮುಂತಾದ ಪ್ರತಿಯೊಂದು ಅಂಶಕ್ಕೂ ನಿರ್ದಿಷ್ಟ ಕ್ರಿಯಾಪಾತ್ರ

* ಮುಂದಿನ ಹಂತದಲ್ಲಿ ಈ ಪುಸ್ತಕವನ್ನು ಒಡನಾಡಿಯಾಗಿ ಪಕ್ಕದಲ್ಲಿ ಇಟ್ಟುಕೊಂಡು ಆಕಾಶಗ್ರ

ವೀಕ್ಷಿಸಬೇಕು, ತರುವಾಯ ಪುಸ್ತಕದಲ್ಲಿ ಸಂವಾದೀ ಚಿತ್ರ ನೋಡಬೇಕು, ಮತ್ತು ಕೊನೆಯಲ

ಓದಬೇಕು. ಹೇಗೆ ಜೀವನದಲ್ಲಿ ಭಾವನೆ, ಮಾನಸಿಕ ಚಿತ್ರ , ಭಾಷೆ ಈ ಕ್ರಮದಲ್ಲಿ ಬರಬೇಕೋ ಹಾ

ನಕ್ಷತ್ರ ವೀಕ್ಷಣೆಯಲ್ಲಿ ಬಾನು ಮೊದಲು, ಕಲ್ಪನೆ ಬಳಿಕ, ಮತ್ತು ನುಡಿನೇಯ್ಕೆ ಕೊನೆಗೆ ಬ

ಪ್ರಯತ್ನ ಅರ್ಥಪೂರ್ಣವಾಗಿರುತ್ತದೆ.

* ಪ್ರತಿಯೊಂದು ಪಾರಿಭಾಷಿಕ ಪದಕ್ಕೂ ಮೊದಲಬಾರಿ ಅದು ಬಂದಾಗ ಸಾಕಷ್ಟು ವಿವರಣೆ

ಇಲ್ಲೆಲ್ಲ ಆಕಾಶ ಕುರಿತಂತೆ ಮನದೊಳಗೆ ಕಾಲ್ಪನಿಕ ಚಿತ್ರ ರೂಪಿಸಿಕೊಂಡು, ಅವಶ್ಯವಾದರೆ ಗಗನಕ್ಕೆ

ಅನ್ವಯಿಸಿ, ಆಯಾ ಪದದ ಅರ್ಥಸ್ವಾರಸ್ಯ ಗ್ರಹಿಸಬೇಕು. ಇದು ತೀರ ಅನಿವಾರ್ಯ ವಿಧಿ.


iv

ಸಾಧಿಸಲಾಗದಿದ್ದರೆ ಪಾರಿಭಾಷಿಕ ಪದಗಳು ಅರ್ಥಶೂನ್ಯ ಅಕ್ಷರ ಸಮುಚ್ಚಯಗಳಾಗುತ್ತವೆ. ಅ


ನೀವು ನಕ್ಷತ್ರ ಪ್ರಪಂಚದ ಚಿರಂತನ ಸೌಂದರ್ಯದಿಂದ ವಂಚಿತರಾಗಿರುತ್ತೀರಿ.

ಈ ಪುಸ್ತಕದ ಪುನರ್ಮುದ್ರಣವನ್ನು ಒಂದು ಪವಿತ್ರಸೇವೆ ಎಂದು ಅಂಗೀಕರಿ

ನಿರ್ವಹಿಸಿರುವ ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಅಧ್ಯಕ್ಷರು, ಪ್ರಧಾನ ಕಾ

ಸಂಪಾದಕರು, ಮುದ್ರಣ ವಿಭಾಗದವರು , ಕಲಾವಿದರು ಎಲ್ಲರಿಗೆ ಹಾರ್ದಿಕ ನಮನಗಳು .

ಮೂರನೆಯ ಆವೃತ್ತಿ ಬಗ್ಗೆ

ಪ್ರಸಾದ್ ಏಜನ್ಸಿಸ್‌ನವರಕೋರಿಕೆ ಮೇರೆಗೆ ಪ್ರಸ್ತುತ ಸುಧಾರಿತ ಆವೃತ್ತಿಯನ್ನ

ಚಿತ್ರಗಳಲ್ಲಿ ಸ್ಪುಟತೆ ತರಲು ಪ್ರಯತ್ನಿಸಿದೆ. ಅವಶ್ಯ ಕಂಡಲ್ಲಿ ಹೊಸ ಸಂಗತಿಗಳನ್ನು ಸೇರಿಸಿದ

ಕೃತಜ್ಞತೆಗಳು. ಅಂದವಾಗಿ ಮುದ್ರಿಸಿರುವ ತಾರಾ ಪ್ರಿಂಟಿಂಗ್ ಪ್ರೆಸ್ಸಿನ ಚೇತನಗಳಿಗೆ ನಮನಗಳು.

ಜಿ. ಟಿ. ನಾರಾಯಣರಾವ್

೮, ಅತ್ರಿ , ಕಾಮಾಕ್ಷಿ ಆಸ್ಪತ್ರೆ ರಸ್ತೆ , ಸರಸ್ವತೀಪುರ

ಮೈಸೂರು ೫೭೦ ೦೦೯ (ದೂರವಾಣಿ ೦೮೨೧ ೫೪೩೭೫೯)

೩೧-೧೨- ೨೦೦೨

ವಿದ್ಯಾಂ ಚಾವಿದ್ಯಾಂ ಚ ಯಸ್ತಗೋಭಯಂ ಸಹ

ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಮೃತಮಶ್ನುತೇ

ಈಶಾವಾಸ್ಯ ಉಪನಿಷತ್

ವಿದ್ಯೆ ಅವಿದ್ಯೆ ಎರಡನ್ನೂ ಯಾರು ತಿಳಿಯುವನೋ ಅವನು ಅವಿದ್ಯೆ ಎಂಬ ಮೃತ್ಯು ದಾಟ

ವಿದ್ಯೆ ಎಂಬ ಅಮೃತತ್ವ ಐದುತ್ತಾನೆ.

ಸಿರಿವಂತರು ಬಡವರು ಬೀಗವಿಕ್ಕಿರುವ ಎರಡು ಸಂದೂಕಗಳು -

ಒಂದರ ಕೀಲಿ ಇನ್ನೊಂದರೊಳಗಿದೆ.


ಕಾರೆನ್ ಬ್ರಿಕ್ಸನ್

ಜೋಲುವುದೇತಕೆ ನೇಣಿಗೆ ಗೆಳೆಯಾ ?

ಏಣಿಗೆ ಇದೆ, ಹಿಡಿ ಅದರೆಳೆಯಾ

ಹಂತಿಗೆ ಹಂತಿಗೆ ಬೇರೆ ಲೋಕವಿದೆ

ಅಲ್ಲಿಗೆ ನವ ಪಾಕವಿದೆ

ನೂರಿಗೆ ಊರದೆ, ಸಾವಿರಕೇರದೆ

ಅಲಕ್ಷವಿರುವುದು ಯಾವ ಎದೆ ?


ಅಂಬಿಕಾತನಯದತ್ತ
ಪರಿವಿಡಿ

ಎಣಿಕೆಗೆ ನಿಲುಕದ ಬೆಳಕಿನ ಹುಡಿಗಳು

ಮೇಲೆ ಬಾನಬಟ್ಟಲು ಕೆಳಗೆ ನನ್ನ ತೊಟ್ಟಿಲು

ಧ್ರುವ ಮಾಣಿಕ್ಯದ ರಕ್ಷಕ ಭಲ್ಲೂಕಗಳು

ನಕ್ಷತ್ರ ಸಭಾಪತಿ ಧ್ರುವತಾರೆ |

ಕುಂತೀದೇವಿಯ ದರ್ಶನ ಭಾಗ್ಯ

ಧ್ರುವ ನಕ್ಷತ್ರಕ್ಕೆ ಲಗ್ಗೆ ಹಾಕೋಣವೇ ?

ಖಗೋಳದಲ್ಲಿ ಹೆದ್ದಾರಿಗಳು : ವಿಷುವದ್ಯ ಮತ್ತು ಯಾಷ್ಟೋತ್ತರ

ಗಗನ ವೈಭವಸೂರ್ಯದೇವನ ಜೈತ್ರಯಾತ್ರೆ

ಖಗೋಳದಲ್ಲಿ ಕಡಿದ ಹೆದ್ದಾರಿ - ಕ್ರಾಂತಿ ವೃತ್ತ

ವಿರಾಟ್ಪುರುಷನ ಉತ್ತರೀಯ

ಬಾನಿನಲ್ಲಿ ಹೆಗ್ಗುರುತುಗಳು ಮತ್ತು ಗಡಿಗೆರೆಗಳು

ಆಕಾಶಪಟ - ಬಾಂದಳದ ಸಂಕ್ಷಿಪ್ತ ಚಿತ್ರ

ಬಾ ಕರ್ತಾರನ ಕಮ್ಮಟಕೆ

ಅಕ್ಟೋಬರ್

ನವೆಂಬರ್

ಡಿಸೆಂಬರ್

ಜನವರಿ

ಫೆಬ್ರುವರಿ

ಮಾರ್ಚ್

ಏಪ್ರಿಲ್

ಮೇ

ಜೂನ್

ಜುಲೈ

ಆಗಸ್ಟ್

ಸೆಪ್ಟೆಂಬರ್

ಇಳಿದು ಬಾ ತಾಯಿ ಇಳಿದು ಬಾ


ಚಂದ್ರನ ಮಾಸಿಕ ವರಿಸೆಗಳು
೫೪

ಬೈಗಿನ ತಾರೆ ನಸುಕಿನ ನೀರೆ ೫೬

ಬೆಂಕಿಗೆರೆ ಗೊಂಡೆತಲೆ ಧೂಮಲೀಲೆ

ಗಣನೆಗೆ ನಿಲುಕಿದ ಆಕಾಶ

ಬ್ರಹ್ಮಾಂಡಗಳ ಸಮುದಾಯವೇ ವಿಶ್ವ

ಬರಿಗಣ್ಣಿಗೆ ಕಾಣುವಂತೆ ಮೊದಲ ೩೦ ಉಜ್ವಲ ನಕ್ಷತ್ರಗಳು

ಆಕಾಶದಲ್ಲಿ ದೂರ, ಕಾಲ ಮಾನಕಗಳು ೬೫

ನಕ್ಷತ್ರ ಪುಂಜಗಳು ೬೫

ದ್ವಾದಶ ರಾಶಿಗಳು

೨೭ ನಿತ್ಯ ನಕ್ಷತ್ರಗಳು

ಗ್ರಹಗೃಹ ನಿರ್ಣಯ

ಗ್ರಹಣಗಳು

ಕಾಲ

ದಿವಸಗಳ ಸಾಪ್ತಾಹಿಕ ಚಕ್ರ


೧೦೨

ಭೂಮಿಯ ಆಕಾರ
೧೦೬

ವಿಶ್ವವಿಹಾರ
೧೧೧

ವಿಷಯ- ಪುಟಸೂಚಿ ೧೧೫


ನಕ್ಷತ್ರ ವೀಕ್ಷಣೆ

ಎಣಿಕೆಗೆ ನಿಲುಕದ ಬೆಳಕಿನ ಹುಡಿಗಳು

ಮೈಸೂರಿನ ಒಂದು ಬಡಾವಣೆಯಲ್ಲಿ ನನ್ನ ವಾಸ. ಹೊತ್ತು ಮೂಡುವ ಮೊದಲ

ಬಯಲು ದಿಬ್ಬಗುಡ್ಡ ಅಲೆದು ಮನೆಗೆ ಮರಳುವುದು ವಾಡಿಕೆ. ಸಂಜೆ ಬಿಡುವಿದ್ದಾಗ ಚಾಮುಂ

ಹತ್ತಿ ಇರುಳಿನ ಸಾಕಷ್ಟು ಹೊತ್ತು ಅಲ್ಲಿ ಕಳೆಯುವುದು ಹವ್ಯಾಸ. ಹಳ್ಳಿಗಾಡುಗಳಿಗೆ ಹ

ಈ ಅಲೆತವೊಂದೇ ನನ್ನ ನಿಜ ಸಂಗಾತಿ, ಮೇಲೆ ಬಾನು ಸುತ್ತ ಕಾನು ನಡುವೆ ನಾನು !

ಒಂಟಿತನದ ಪ್ರಜ್ಞೆ ಎಂದೂ ನನ್ನನ್ನು ಬಾಧಿಸಿದ್ದಿಲ್ಲ . ಏಕೆಂದರೆ ಆಕಾಶದಲ್ಲಿಯ ಅಸ

ಮಿತ್ರರು ಸದಾ ನನ್ನ ಜೊತೆಗಿರುವರೆಂಬ ಸಂಗತಿ ನನಗೆ ತಿಳಿದಿದೆ. ಹಗಲಿನಲ್ಲಿ ಸೂರ್ಯ ಮಾತ

ಸಾಕು. ಒಮ್ಮೊಮ್ಮೆ ಚಂದ್ರ ಕೂಡ ಜೊತೆಗಿರುವುದುಂಟು. ಕತ್ತಲಾಯಿತೆಂದರೆ ಮತ್ತೆ ಅವರ

ಏನು ವೈವಿಧ್ಯ , ವೈದೃಶ್ಯ ಮತ್ತು ಸ್ವಾರಸ್ಯ !

ಕಣ್ಣಿಗೆ ಕಾಣುವ ನಕ್ಷತ್ರಗಳ ಸಂಖ್ಯೆ ಎಷ್ಟು ? ಶಾಲೆಯಲ್ಲಿ ಓದುತ್ತಿದ್ದಾ

ಕೇಳಿದ ಈ ಪ್ರಶ್ನೆಗೆ ಉತ್ತರ ಹುಡುಕಲು ನಾವು ಕೆಲವರು ವಿದ್ಯಾರ್ಥಿಗಳು ಊರ ಅಂಚಿನ

ಹತ್ತಿ ರಾತ್ರಿ ಪೂರ್ತಿ ಮರಸು ಕುಳಿತೆವು. ಸಾಕಷ್ಟು ಹುಮ್ಮಸ್ಸು ಅಬ್ಬರಗಳಿಂದ ತ

ಮಹಾಯಜ್ಞ ಅತಿ ಶೀಘ್ರವಾಗಿ ಪುಸ್ಸೆಂದು ಎಗರಿಬಿದ್ದು ಹೋಯಿತು. ಮೇಲುನೋಟಕ್ಕೆ ಎ

ನಿಲುಕದಷ್ಟು ಬೆಳಕಿನ ಚುಕ್ಕಿಗಳು, ಬಾನಂಗಳದಲ್ಲಿ ಬೇಕಾಬಿಟ್ಟಿ ಹರಡಿಕೊಂಡಿರುವ ಬೆಂಕ

ಎಣಿಸಹೊದರೆ ಸರಿಯಾಗಿ ನೂರು ಕೂಡ ಹಿಡಿತಕ್ಕೆ ಸಿಕ್ಕವು. ನೂರೆಂಟು ತೊಂದರೆ, ಎ

ಮುಗಿಸಿದಲ್ಲಿ ಹೊಸ ಮಿನುಗುಗಳ ಮಂದಹಾಸ. ಆಗ ಕಂಡದ್ದು ಈಗ ಕಾಣದು - ಮಾಯಾ

ಮೃಗಲಾಸ್ಯ , ಬೆಳಕಿನ ಮಚ್ಚೆ ಎಂದುಕೊಂಡಲ್ಲಿ ಬಿಡಿ ಕಿಡಿಗಳ ಎರಚಿಕೆ. ಇವೆಲ್ಲಕ್ಕಿಂತ

ಆಕಾಶ ಚಷಕದ ಮೇರೆ ಇರದ ಮತ್ತು ಅರಿಯಲೂ ಆಗದ ಎತ್ತರ ಬಿತ್ತರ. ಒಟ್ಟಾರೆ ಕಪ್ಪೆ

ತೂಕದ ತಕಲೀಫು!

ಅಕ್ಟರ್‌ ಬಾದಶಹ ವಝಿರ್ ಬೀರಬಲನಿಗೆ ಸವಾಲೆಸೆಯುತ್ತಾನೆ, " ಆಕಾಶದಲ

ಕ್ಷತ್ರಗಳ ಸಂಖ್ಯೆ ಎಷ್ಟು ?" |

" ಈ ರಾತ್ರಿ ಲೆಕ್ಕ ಹಾಕಿ ನಾಳೆ ಬಂದು ಪ್ರಭುಗಳಿಗೆ ವರದಿ ಸಲ್ಲಿಸುತ್ತೇನೆ."

ಮರುದಿನ ಚಕ್ರವರ್ತಿ ಒದ್ದೋಲಗದಲ್ಲಿ ಗಂಭೀರಾಸನನಾಗಿದ್ದಾನೆ. ಬೀರಬಲ ತುಸು ತ

ಆಗಮಿಸಿದ್ದಾನೆ - ತೂಕವಾಗಿ ಕೂಡ. ಅವನ ಹಿಂದೆ ನಾಲ್ವರು ಸೇವಕರು ಹೊರಲಾಗದೆ ಹೊತ

ವಿದಿದ್ದಾರೆ ಭಾರೀ ಮೂಟೆಯನ್ನು ,

"ಪ್ರಭ ನಕ್ಷತ್ರದ ಲೆಕ್ಕ ಇದರೊಳಗಿದೆ!" ಮೂಟೆ ಬಿಚ್ಚಿದ್ದಾರೆ. ಅದರೊಳಗೆ ಅಸಂಖ್ಯ

ಸರಳ ಹರಳುಗಳು ! ಅಲ್ಲಿ ಎಷ್ಟು ಹರಳುಗಳಿವೆಯೋ ಆಗಸದಲ್ಲಿ ಅಷ್ಟು ಅರಿಲುಗಳಿವ

ರೀಮಂತ ಮಂತ್ರಿಯ ಶ್ರೀಮಂತ ಜವಾಬು, ಎಣಿಕೆ ಅಸಾಧ್ಯ ಎಂಬುದು ಧ್ವನಿ.

ಇದು ಹಾಗಿರಲಿ. ಒಮ್ಮೆ ಬರಿಗಣ್ಣಿಗೆ ಕಾಣುವ ನಕ್ಷತ್ರಗಳ ಸಂಖ್ಯೆ ಮೂರು ಸ


ನಕ್ಷತ್ರ ವೀಕ್ಷಣೆ

ಮೀರಲಾರದೆಂದು ಪುಸ್ತಕಗಳಲ್ಲಿ ವರದಿ ಆಗಿದೆ. ಒಂದು ಸಲಕ್ಕೆ ಆಕಾಶದ ಅರ್ಧಭಾಗ

ನಮಗೆ ಗೋಚರವಾಗುತ್ತದೆ. ಆದ್ದರಿಂದ ಬರಿಗಣ್ಣಿನಿಂದ ನಾವು ನೋಡಬಹು

ಗರಿಷ್ಠ ಸಂಖ್ಯೆ ಆರು ಸಾವಿರ.

ಮೇಲೆ ಬಾನಬಟ್ಟಲು ಕೆಳಗೆ ನನ್ನ ತೊಟ್ಟಿಲು

ಬೆಟ್ಟದ ಕೊಡಿಯಲ್ಲಿ ಕುಳಿತಿದ್ದೇನೆ. ಬಾನ ಬಟ್ಟಲು ನನ್ನ ಮೇಲೆ ಕವಿಚಿಕ

ಗಾತ್ರವಾಗಲಿ ವಿಸ್ತಾರವಾ
ಖಮಧ್ಯದಲ್ಲಿರುವ ವಸ್ತು
ನನ್ನ ಅಂದಾಜಿಗೆ ನಿಲುಕವು

ಆದರೆ ನನ್ನ ನೆಲೆ ಇದರ

ನಡುಬಿಂದುವಿನಲ್ಲಿದೆ ಎಂ

ಭಾವನೆ ಸ್ಪುರಿಸುತ್ತದೆ. ಇಷ್ಟೇ

ಅಲ್ಲ , ಬಟ್ಟಲಿನ ಅತ್ಯು

ಬಿಂದು ನನ್ನ ತಲೆಯ ನೇರ

ಮೇಲಿದೆ. ನೆಲಕ್ಕೆ ಲಂಬವಾಗಿ


ಹಾರಿಜ ಸಮೀಪದಲ್ಲಿರುವ ವಸ್ತು
ರುವಂತೆ ನನ್ನ ನೆತ್ತಿ ಮೂಲಕ
ವೀತ ಎಳೆದ ಗೆರೆ ಆಕಾಶವನ್ನು ಈ
ಖಯುಮಂಡಲ
ಪದರಗಳು ಬಿಂದುವಿನಲ್ಲಿ ಸಂಧಿಸುತ್ತದೆ.

ಇದು ನನ್ನ ಖಮರ .

ಇಲ್ಲಿಂದ ಆಕಾಶ

ಕಡೆಗಳಿಗೂ ಕ್ರಮೇಣ

ಇಳಿಯುತ್ತ ಮುಂದೆ ಸರಿದಂತೆ

ಕಡಿದಾಗಿ ಬೀಳುತ್ತ

ದೂರದಲ್ಲಿ ಭೂಮಿಯನ್ನ
ಚಿತ್ರ ೧. ಭೂಮಿಯ ಮೇಲೆ ನಿಂತು ಬಾನಿನ ಎತ್ತರ ಬಿತ್ತರ
ಸಂಗಮಿಸುತ್ತದೆ. ಸಂಗಮ
ತಿಳಿಯುವ ಪ್ರಯತ್ನ
ರೇಖೆಯೊಂದು ಮಹಾವೃ

ಕಡಲ ಕಿನಾರೆಯಲ್ಲಿ ನಿಂ

ಮಾನಸಿಕವಾಗಿ ನೀರಿನ ಹರವು ಜಿಗಿದು ಆಚೆ ಅಂಚು ತಲಪಿದಾಗ ಇದರ ಅಸ್ತಿತ್ವ ಇನ್ನೂ ಸ್ಪುಟ

ಪ್ರಕಟವಾಗುತ್ತದೆ : ಅಲ್ಲಿ ಬಾನನೀಲಿಮೆ ದ್ರವಿಸಿ ಇಳಿದು ಕಡಲಾಗಿದೆಯೋ ಕಡಲ ನೀಲಿಮೆ ಘ

ಏರಿ ಬಾನಾಗಿದೆಯೋ ಎಂಬಂತೆ, ಆಕಾಶಗೋಳವನ್ನು ಎರಡು ಅರ್ಧಗಳಾಗಿ ಪ್ರತ್ಯೇಕಿಸ

ಅದು. ಅದಕ್ಕಿಂತ ಮೇಲಿರುವ ಕಾಯಗಳನ್ನು ನೋಡಬಲ್ಲೆ . ಕೆಳಗಿರುವವನ್ನು ಕ


ಖಗೋಳವನ್ನು ಗೋಚರ ಮತ್ತು ಅಗೋಚರ ಅರ್ಧಗಳಾಗಿ ವಿಭಾಗಿಸುವ
ನಕ್ಷತ್ರ ವೀಕ್ಷಣೆ

ಹಾರಿಜವೆಂದು ಹೆಸರು. ದಿಗಂತ ಮತ್ತು ಕ್ಷಿತಿಜ ಪರ್ಯಾಯನಾಮಗಳು, ನನ್ನ ಸ್ಥಾನ(

ಕೇಂದ್ರದಲ್ಲಿದೆ. ನನ್ನ ಖಮಧ್ಯದ ( ನೆತ್ತಿ ಬಿಂದುವಿನ) ನೇರಿದಿರು ಬಿಂದು - ಅಂದರೆ ಖಮಧ್ಯವ

ನನಗೆಜೋಡಿಸುವ ರೇಖೆ ವಿಸ್ತರಿಸಲ್ಪಟ್ಟಾಗ ಪುನಃ ಖಗೋಳವನ್ನು ಸಂಧಿಸುವ ಬಿಂದು - ನನಗ

ಕಾಣದು. ಭೂಮಿಗೆ ಸುರಂಗ ಹೊಡೆಯುವುದು ಸಾಧ್ಯವಾದೀತೇ ? ಹೇಗೂ ಇರಲಿ, ನನ್ನ ದೃಷ್ಟಿಯ

ಕಾಲ್ಪನಿಕವಾಗಿರುವ ಆದರೆ ವಸ್ತುತಃ ಅಸ್ತಿತ್ವ ಇರುವ ಆ ಬಿಂದುವಿಗೆ ಅಧೋಬಿಂದುವ

ಚಿತ ೨. ವೀ :ವೀಕ್ಷಕನ ( ನನ್ನ )


ಗೋಚರ ಗೋಳಾರ್ಧ
ಸ್ಥಾನ. ಧ್ರು :ಧ್ರುವನಕ್ಷತ್ರ .

ಖ :ವೀಕ್ಷಕನ ಖಮಧ್ಯ , ಉ ,
- ~ ~ - ~ ~ ~ ~
ದ:ಉತ್ತರ, ದಕ್ಷಿಣ ಬಿಂದುಗಳು.

ಯಾದ್ಯೋತ್ತರ: ಖಮಧ್ಯವನ್ನೂ

ಧ್ರುವನಕ್ಷತ್ರವನ್ನೂ ಜೋಡಿಸುವ

ಮಹಾವೃತ್ತ , ಇದರ ಕೇಂದ್ರದಲ್ಲಿ

ಹಾರಿಜ ವೀಕ್ಷಕನಿದ್ದಾನೆ. ಇದು

ಅಗೋಚರ ಗೋಳಾರ್ಧ ಹಾರಿಜವನ್ನು ಸಂಧಿಸುವ

ಬಿಂದುಗಳು ಉ , ದ.
ಯಾಷ್ಟೋತ್ತರ

ಖಮಧ್ಯ ಅಧೋಬಿಂದು ಮತ್ತು ಹಾರಿಜ ನನ್ನ - ಹೌದು ಖಾಸಾ ನನ್ನ - ವಿಧೇಯ

ಸಂಗಾತಿಗಳು. ಚಾಮುಂಡಿಬೆಟ್ಟದಲ್ಲಿ ನಿಂತಾಗ ಕಾಣುವ ಖಮಧ್ಯ - ಹಾರಿಜ ಜೋಡಿಗಿಂತ ಬೇರೆಯದ

ಆದ ಜೋಡಿಯನ್ನು ಕುದುರೆಮುಖ ಶಿಖರದಲ್ಲಿ ನಿಂತಾಗ ಕಂಡಿದ್ದೇನೆ. ವ್ಯಕ್ತಿಯಿಂದ

ಸ್ಥಳದಿಂದ ಸ್ಥಳಕ್ಕೂ ಇವು ವ್ಯತ್ಯಾಸವಾಗುತ್ತವೆ.

ಕೊಠಡಿಯೊಳಗೆ ಕುಳಿತಾಗ ಎರಡೂ ಇಲ್ಲ . ಅಂಗಳಕ್ಕೆ ಇಳಿದಾಗ ಖಮಧ್ಯವೇನೋ ಕಾಣುತ್ತದೆ

ಆದರೆ ಹಾರಿಜ ? ಸುತ್ತಲಿನ ಮನೆ ಮರ ಅದನ್ನು ಮರೆ ಮಾಡಿವೆ. ಬಯಲಿಗೆ ಹೋದಾಗ ಅದರ

ತುಣುಕುಗಳು ಬಿಡಿಸಿಕೊಳ್ಳುತ್ತವೆ. ಎತ್ತರ ಎತ್ತರ ಏರಿದಂತೆ ಹಾರಿಜದ ವಿಸ್ತಾರ ಹೆಚ

ಆಗುತ್ತದೆ. ಭೌತ ಜಗತ್ತಿನಲ್ಲಿ ಹೇಗೊ ಜ್ಞಾನ ಪ್ರಪಂಚದಲ್ಲಿಯೂ ಹಾಗೆ ಔನ್ನತ್ಯದ ಜೊತೆಗ

ದಿಗಂತ ವ್ಯಾಪ್ತಿಯೂ ವಿಸ್ತರಿಸುವುದು ನಿಯಮ.


ನಕ್ಷತ್ರ ವೀಕ್ಷಣೆ

MOCH

ಚಿತ್ರ ೩ . ಮುಷ್ಟಿ , ಬೆರಳು ಮತ್ತು ತರದ ಐದೂ ಬೆರಳುಗಳು ಅಳೆಯುವ ಅಂದಾಜುಕೋನಗ

ಧ್ರುವ ಮಾಣಿಕ್ಯದ ರಕ್ಷಕ ಭಲ್ಲೂಕಗಳು

ಮಾರ್ಚ್ ತಿಂಗಳ ಒಂದು ಸಂಜೆ. ಮನೆ ಒಳಗೆ ಕುದಿವ ಸೆಕೆ , ಮನೆ ಹೊರಗೆ ಉರಿವ ಧ

ಮನದೊಳಗೊ ತುಮುಲ ತಾಂಡವ, ಕಾಲುಗಳು ಯಾಂತ್ರಿಕವಾಗಿ ಬೆಟ್ಟವೇರುತ್ತ ಸಾಗಿವೆ. ಕತ್ತಲ

ಕವಿದಿದೆ. ನಾನುತನ ಅದರಲ್ಲಿ ಕರಗಿಹೋಗಿದೆ. ಕತ್ತಲೆಯ ಮೊತ್ತ ಹೆಪ್ಪುಗಟ್ಟಿ ಮೈದಳೆದಂತಿರುವ

ಬಂಡೆಯ ಮಂಡೆಮೇಲೆನೆಲೆಗೊಂಡಿದ್ದೇನೆ. ಸುತ್ತಲೂ ದೃಷ್ಟಿ ಬೀರಿದ್ದೇನೆ. ಚಂದ್ರರಹಿತ

ಎಂದಿಗಿಂತ ಹೆಚ್ಚು ಕಪ್ಪುಕಾಡಿಗೆ ಬಳಿದುಕೊಂಡಿರುವಂತೆ ಭಾಸವಾಗುತ್ತದೆ. ಈ ಸಾಂದ

ರಂದ್ರಿಸಿ ಬೆಳಕಿನ ಹನಿಗಳು ತೊಟ್ಟಿಕ್ಕುತ್ತಿವೆ.

ಆಕಾಶದ ಪೂರ್ವ-ಉತ್ತರ ವಲಯ ವಿಶೇಷ ಆಕರ್ಷಣೆಯಿಂದ ರಂಜಿಸುತ

ಸಮಪ್ರಕಾಶದ ಏಳು ಬೆಳಕಿನ ಬೊಟ್ಟುಗಳು ಸಮ ಅಂತರಗಳಲ್ಲಿ ಕಂಗೊಳಿಸುತ್ತಿವೆ. ನನ್ನ ಯಾವ

ಪ್ರಯತ್ನವೂ ಇರದೇ ಮನಸ್ಸು ಈ ಬೊಟ್ಟುಗಳನ್ನು ನೂಲಿನಿಂದ ನೇಯುವ ಜೇಡ

ಮಾಡುತ್ತದೆ. ನನ್ನೆದುರೊಂದು ಬೃಹತ್ರಶ್ನಾರ್ಥಕ ಚಿಹ್ನೆ ನಿಂತಿದೆ - ಏನು ಜೀವ

ಸವಾಲೆಸೆದಿರುವಂತೆ, ವಿಸ್ಮಿತ ನೇತ್ರನಾಗಿ ಅದನ್ನು ದಿಟ್ಟಿಸುತ್ತಿದ್ದೇನೆ. ಆ ಸವ

ತಿರುಗಿಹಾಕಿ ಜವಾಬು ನಿರೀಕ್ಷಿಸುತ್ತ ಕಾದಿದ್ದೇನೆ.

ಅದರ ಆಕಾರ ಹೇಗಿದೆ ? ತಲೆಕೆಳಗಾದ ಸೌಟಿನಂತೆ ? ಸ ಅಕ್ಷರದ ಒಿನಂತೆ ?

ಮೇಲೂ ಹಿಡಿ ಕೆಳಗೂ ಆದ ನೇಗಿಲಿನಂತೆ ? ಎಲ್ಲವೂ ಸರಿ. ಸೌಟಿನ ಅಥವಾ ನೇಗಿ

ಪೂರ್ವದಕ್ಷಿಣಕ್ಕೆ ಚಾಚಿಕೊಂಡಿದೆ. ಹಿಡಿ ಕೊಂಚ ನೆಟ್ಟಗಿರಬಾರದಿತ್ತೆ ! ಇದರ ನಡು ಮುರ


ನಕ್ಷತ್ರ ವೀಕ್ಷಣೆ

ಚಿತ್ರದ ಹೆಸರು ಸಪ್ತರ್ಷಿಮಂಡಲ, ಪ್ರಾಚೀನ ಭಾರತೀಯರ ಬಗೆಗಣ್ಣು ಇದರ

ತಪಸ್ಸಾಧ್ಯಾಯನಿರತ ಸಪ್ತಮುನಿಪುಂಗವರನ್ನು ಪ್ರತಿಷ್ಠಾಪಿಸಿದೆ. ಗ್ರೀಕರು ಇದ

ಕರಡಿಯನ್ನು ಕಂಡಿದ್ದಾರೆ. ಪೂರ್ವದ ಕೊನೆಯಿಂದ ತೊಡಗಿದರೆ ಈ ನಕ್ಷತ್ರ


60
ವಸಿಷ್ಠ , ಆಂಗೀರಸ್ಸು , ಅತ್ರಿ , ಪುಲಸ್ತ್ರ , ಪುಲಹ, ಕ್ರತು.

ಚಿತ್ರ ೪, ಉತ್ತರ ಮುಖಿಯಾಗಿ

ನಿಂತಿರುವ ನನ್ನೆದುರು ಸಪ್ತರ್ಷಿ

ಮಂಡಲ ಹಿರಿ ಸವಾಲೆಸೆದಿದೆ -


ಧ್ರುವನಕ್ಷತ್ರ
ಏನು ಜೀವನದರ್ಥ ? ಇದರ ಏಳು ಪುಲಕ

ಬಿಡಿ ನಕ್ಷತ್ರಗಳನ್ನು
ahrBi
ಎಣಿಸಬಹುದು. ಮೇಲಿನ ಎರಡು ಕ್ರರು

ನಕ್ಷತ್ರಗಳನ್ನು ಜೋಡಿಸುವ

ಸರಳರೇಖೆಯನ್ನು ಎಡಕ್ಕೆ
ಪುಲಸ್ತ್ರ
ವಿಸ್ತರಿಸಿದಾಗ ಎದುರಾಗುವ

ಮೊದಲ ಬೆಳಕಿನ ಬಿಂದು RA


ಅತ್ರಿ
ಧ್ರುವನಕ್ಷತ್ರ , ಎಡಗಡೆಯದು

ಲಘು ಸಪ್ತರ್ಷಿ ವಸಿಷ್ಠದ ಒತ್ತಿಗೆ

ಎಡ(ಉತ್ತರ) ಕ್ಕೆ ಇರುವ ಪೇಲವ ಆಂಗೀರಸ್ಸು

ಚುಕ್ಕಿ ಆರುಂಧತಿ.

ಮಸಿವ

| ಮರೀಚ1 -

ಪುಲಹ, ಕ್ರತು ಯು ಮೊದಲುಮೂಡುತ್ತದೆ. ಉಳಿದ ಐದು ನಕ್ಷತ್ರಗಳು ಇನ್ನೂ ಹಾರಿ

ಕೆಳಗಿರುವಾಗ ಅವುಗಳ ಆಗಮನ ಸಾರುವ ಹರಿಕಾರರಂತೆ ಇವು ರಂಗ ಪ್ರವೇಶಿಸುತ್ತವೆ.

ಪುಲಹ ರೇಖೆಗೆ ಲಂಬ ದಿಶೆಯಲ್ಲಿ ಕೆಳಗೆ (ಪೂರ್ವ) ಪುಲಸ್ತ್ರ ಮೇಲೇಳುತ್ತದೆ. ಇದರ

ಅತ್ರಿ , ಆಂಗೀರಸ್ಸು , ವಸಿಷ್ಠ ಮತ್ತು ಮರೀಚಿ ಇದೇ ಕ್ರಮದಲ್ಲಿ ಹಾರಿಜ ದಾಟಿ ಪ್ರತ್ಯಕ್ಷವಾಗುತ್

ವಸಿಷ್ಟಕ್ಕೆ ತೀರ ಒತ್ತಾಗಿ ತುಸು ಉತ್ತರಕ್ಕೆ (ಕೆಳಕ್ಕೆ)ಕ್ಷೀಣ ನಕ್ಷತ್ರವೊಂದುಂಟು. ಇ


ತೇಜಸ್ಸಿನ ಅನಂತಾಲ್ವಾಂಶಧಾರಿ ಕಿಡಿಯೋ ಎಂಬಂತಿದೆ. ಸಾಕಷ್ಟು ಏಕಾಗ್ರತೆಯಿಂ

ದೃಷ್ಟಿ ಸಾಂದ್ರೀಕರಿಸಿದಾಗ ಮಾತ್ರ ಇದರ ದರ್ಶನವಾದೀತು. ಇದು ಅರುಂಧತಿ, ವಸ

ಪಂಚ ಮಹಾಪತಿವ್ರತೆಯರ ಪೈಕಿ ಒಬ್ಬಳು, ನೂತನ ದಂಪತಿಗಳಿಗೆ ಅರುಂಧತೀ ದ


ನಕ್ಷತ್ರ ವೀಕ್ಷಣೆ

ಮಾಡಿಸುವುದು ವೈದಿಕ ಸಂಪ್ರದಾಯ . ( ಅಳಿಯನ ಕುರುಡು ಪರೋಕ್ಷವಾಗಿ ಪತ್ತೆ ಹಚ್ಚುವ

ಇದಾಗಿರಬಹುದೇ ?) ಆದರೆ ಅದೆಷ್ಟೋ ಸಲ ಸಪ್ತರ್ಷಿಮಂಡಲ ಆಕಾಶದಲ್ಲಿ ಕಾಣದಿರುವ

ಕಾಣುವಾಗಲೂ ಅದು ಇರುವ ದಿಕ್ಕು ತಿಳಿಯದೆ - ಎಲ್ಲಿಗೋ ಗುರಿ ತೋರಿಸಿ ಕ

ಪೂರೈಸುವುದಿದೆ. ಇನ್ನು ವರನಿಗೆ ಪಕ್ಕದಲ್ಲೇ ಸಾಕ್ಷಾತ್ ಜೀವಂತ ಅರುಂಧತಿ

ಆ ಗಗನ ಕುಸುಮ ಎಲ್ಲಿದ್ದರೇನು !

- ಮೂಡುವಾಗ ಅದೊಂದು ಬೃಹತ್ರಶ್ನಾರ್ಥಕ ಚಿಹ್ನೆ , ನಡು ಆಗಸಕ್ಕೆ ಬಂದಂತೆ

ಕುಗ್ಗುತ್ತದೆ. ವಿನ್ಯಾಸ ಬದಲಾಗುತ್ತದೆ. ಅಲ್ಲಿ ಅದು ಕಿತ್ತೆಸೆದ ಮಣಿ ಹಾರದಂತೆ ಬೇಕಾಬಿಟ್ಟಿ

ಹೋಗುತ್ತದೆ. ಪಡುವಲ ಬಾನಿಗೆ ಇಳಿದಂತೆ ಅದರ ಆಕಾರ ಕ್ರಮೇಣ ಹಿಗ್ಗತೊಡಗುತ್ತದೆ

ಅದು ತೆಲೆಕೆಳಗಾದ ಪ್ರಶ್ನಾರ್ಥಕ ಚಿಹ್ನೆ, ಅಥವಾ ಹಿಡಿಮೇಲಾದ ಸೌಟು, ಇಲ್ಲವ

ಸಿದ್ದವಾಗಿರುವ ನೇಗಿಲು. "ಸನ್ನೆ ಊರಲು ದಿಣ್ಣೆ ತೋರಿಸಿ, ಸಾಕ್ಷಾತ್ ಧರಿತ್ರಿಯನ್ನೇ ಮಗು

ಬಿಡುತ್ತೇನೆ" ಎಂಬುದಾಗಿ ಉದ್ಧರಿಸಿದ ವಿಜ್ಞಾನಿ ಆರ್ಕಿಮಿಡೀಸನ ನೆನಪೂ ಮಹ

ವರಾಹಾವತಾರದ ನೆನಪೂ ಅಪ್ರಯತ್ನಿ ತವಾಗಿ ಮನದಲ್ಲಿ ಸುಳಿಯುತ್ತವೆ.

ನಕ್ಷತ್ರ ಸಭಾಪತಿ ಧ್ರುವತಾರೆ

ಮಾರ್ಚ್ ತಿಂಗಳಿನಿಂದ ಮುಂದೆ ಸುಮಾರ

ತಿಂಗಳ ಕಾಲ ಪ್ರತಿ ದಿನವೂ ಸಂಜೆಗೆಂಪು ಮಾಸಿದಂತೆ

ಸಪ್ತರ್ಷಿಮಂಡಲವನ್ನು ಆಕಾಶದ ಉತ್ತರ ಇಳಿಜಾರಿ

ಕಾಣಬಹುದು. ಅದರ ಸ್ಥಾನ ಕ್ರಮೇಣ ಪಶ್ಚಿಮದತ್ತ

ಸರಿಯುತ್ತದೆ. ಉದಾಹರಣೆಗೆ ಮಾರ್ಚ್ ತಿಂಗಳ

ಅದು ಹಿರಿ ಪ್ರಶ್ನಾರ್ಥಕ ಚಿಹ್ನೆಯಂತೆ ಮೂ

ಜೂನ್ ತಿಂಗಳಿಗಾಗುವಾಗ ಅದೇ ಹೊತ್ತಿಗೆ ನಡು

ಆಗಸದಲ್ಲಿ ಕುಗ್ಗಿದಸೌಟಾಗಿ ಕುಸಿದಿರುತ್ತದೆ. ಸೆಪ್ಟೆಂಬರ್

ತಿಂಗಳ ಸಂಜೆ ಉತ್ತರ- ಪಶ್ಚಿಮ ತಗ್ಗಿನಲ್ಲಿ ತಲೆಕೆಳಗಾದ

ಪ್ರಶ್ನಾರ್ಥಕ ಚಿಹ್ನೆಯಾಗಿ ಲಂಬನಗೊಂಡಿರುತ್ತದೆ.

ಸಪ್ತರ್ಷಿಮಂಡಲದ ವಿವಿಧ ವಿನ್ಯಾಸಗಳು ನನ್ನ

ಗಣಿತ ಪ್ರಜ್ಞೆಯನ್ನು ಎಚ್ಚರಗೊಳಿಸುತ್ತವೆ. ದ

ಬಯಲಿನಲ್ಲಿ ಹೇರು ಪ್ರಾಣಿಯೊಂದು ಮತ್ತೆ ಮತ್ತ

ಹೊರಟಲ್ಲಿಗೆ ಮರಳಿಬಂದು ಅದೇ ಜಾಡಿನಲ್ಲಿ ಪುನಃ


ಚಿತ್ರ ೫, ಆಕಾಶದ ಪಶ್ಚಿಮ - ಉತ್ತರ

ವಲಯದಲ್ಲಿ ಸಪ್ತರ್ಷಿಮಂಡಲ ಇಳಿಯುತ್ತಿ ಸಾಗುತ್ತಿರುವ ನೋಟ ಕಂಡಾಗ ಒಳ


ರುವಾಗ ಕಾಣುವ ದೃಶ್ಯ . ಲಘು ಮಿಡಿಯುತ್ತದೆ? ಈ ಪ್ರಾಣಿ ಪ್ರಾಯಶಃ ಗಾಣದೆತ್ತಿನ
ಸಪ್ತರ್ಷಿಯನ್ನೂ ಚಿತ್ರದಲ್ಲಿ ಕಾಣಿಸಿದೆ.
ನಕ್ಷತ್ರ ವೀಕ್ಷಣೆ

ವರ್ತುಲೀಯ ಜಾಡಿನ ಮೇಲೆ ಸಾಗುತ್ತಿದೆ ಎಂದು. ಸಪ್ತರ್ಷಿಮಂಡಲವಾದರೂ ಇಂ

ಜಾಡಿನಲ್ಲಿ ಜಾರುತ್ತಿರುವುದಾಗಿರಬಹುದೇ ?

ಪುಲಹ, ಕ್ರತು ನಕ್ಷತ್ರಗಳ ಮೇಲೆ ಲಕ್ಷ್ಯ ಕೇಂದ್ರಿಕರಿಸುತ್ತೇನೆ. ಇವನ್ನು ಜೋಡ

ರೇಖೆಯನ್ನು ಇದೇ ದಿಶೆಯಲ್ಲಿ ಉತ್ತರದ ತಗ್ಗಿಗೆ ವೃದ್ಧಿಸುತ್ತೇನೆ. ನನ್ನ ದೃಷ್ಟಿರೇಖೆಗೆ ಒತ್

ಎಂಬಂತೆ ಪುಲಹ -ಕ್ರತು ಅಂತರದ ಸುಮಾರು ಐದುವರೆ ಮಡಿ ದೂರದಲ್ಲಿ ಒಂದು ನತ್ತು

ಮಿನುಗು ನನ್ನ ಲಕ್ಷ್ಯ ಸೆಳೆಯುತ್ತದೆ. ಈ ಆಧಾರ ಬಿಂದುವಿನಲ್ಲಿ ದೃಷ್ಟಿ ನೆಟ್ಟು ವಿರಮಿಸುತ

ರಾತ್ರಿಯ ಬೇರೆ ಬೇರೆ ಜಾಮಗಳಲ್ಲಿ ಪುಲಹ -ಕ್ರತು ರೇಖೆಯ ವಿನ್ಯಾಸ ಬದಲಾದಂತೆ ಈ ರೇಖೆ

ಹೇಗೆ ಮಾರ್ಪಡುವುದೆಂಬುದನ್ನು ಪರೀಕ್ಷಿಸುತ್ತೇನೆ. ವರ್ಷದ ಬೇರೆ ಬೇರೆ

ಸಪ್ತರ್ಷಿಮಂಡಲ ಗೋಚರವಾದಾಗ ಪ್ರತಿ ಸಲವೂ ಈ ತಪಾಸಣೆಯನ್ನು ಪುನರಾವ

ಸದಾ ಅದೇ ಫಲಿತಾಂಶ : ಪುಲಹ, ಕ್ರತು ಮತ್ತು ಮೂರನೆಯ ನಕ್ಷತ್ರ ಏಕರೇಖಾಸ್ಥವ

ಇದರ ಅರ್ಥವೇನು? ಪುಲಹ-ಕ್ರತು ರೇಖೆ ಯಾವಾಗಲೂ ಮೂರನೆಯ ನಕ್ಷತ್ರದ ಮೂಲ

ಹೋಗುವುದರಿಂದ ಮೊದಲ ಎರಡು ತಾರೆಗಳ ಚಲನೆ ಮೂರನೆಯದಕ್ಕೆ ತಟ್ಟುವುದಿಲ್ಲ . ಅರ್ಥ

ಇದು ಅಚಲ. ಎಂದೇ ಇದರ ಹೆಸರು ಧ್ರುವ ನಕ್ಷತ್ರ . ಇದು ಮೂಡದು, ಮೇಲೇರದು , ಕೆಳಗಿಳಿಯದ

ಕಂತದು. ದೇಶಕಾಲಾಬಾಧಿತವಾಗಿದೆ. ಗಗನದ ಅಗಣಿತ ತಾರಾಗಣಗಳು ಸದಾ ಗತಿಶೀಲವಾಗಿರುವ

ಧ್ರುವತಾರೆ ಮಾತ್ರ ಮಿಸುಕಾಡದು - ಬ್ರಹ್ಮಾಂಡ ರಂಗಸ್ಥಳದ ಅಧ್ಯಕ್ಷತೆ ವಹಿಸಿದೆಯೋ

ದೃಶ್ಯಗಳಿಗೆ ಸ್ಥಿರ ಸಾಕ್ಷಿಯಾಗಿ ಕುಳಿತಿದೆಯೋ ಎಂಬಂತೆ, ಕುವೆಂಪು ನುಡಿಗಳಲ್ಲಿ

ಹಂಗಿಸುತ ಕಾಲನಂ ಜಾಳಿಸುತ ಸೃಷ್ಟಿಯಂ|

ಲಯವನಣಕಿಸುತ ನಿಂತಿರುವೆ ನೀನು

ಇದು ಉಜ್ಜಲ ನಕ್ಷತ್ರ ಅಲ್ಲ . ಸುಂದರ ಸುಮನೋಹರ ನಕ್ಷತ್ರ ಚಿತ್ರ ಪರಿವೇಷ್ಟಿತವಾಗಿಲ್ಲ

ಇದನ್ನು ಕೋಟಿಸೂರ್ಯಸಮಪ್ರಭಾ ಎಂದು ವರ್ಣಿಸುವುದು ಹೊಲ್ಲ . ಆದರೆ ಇದಕ್ಕಿರುವ ಸ

ಬೇರಾವ ನಕ್ಷತ್ರಕ್ಕೂ ಸಲ್ಲ .

ಪುಲಹ, ಕ್ರತು ನಕ್ಷತ್ರಗಳಿಗೆ ಧ್ರುವಸೂಚಕಗಳೆಂದು ಹೆಸರು ( ಚಿತ್ರ ೪). ಇವುಗಳ ನೆರವಿನಿಂದ


ಧ್ರುವನಕ್ಷತ್ರದ ಸ್ಥಾನ ಗಟ್ಟಿಮಾಡುತ್ತೇನೆ. ಎಷ್ಟರ ಮಟ್ಟಿಗೆ ಎಂದರೆ ಆಕಾಶದಲ್ಲಿ ಸಪ್ತರ್ಷಿಮ

ಮೈದಳೆದಿರಲಿ ಮೈಗರೆದಿರಲಿ ಧ್ರುವನಕ್ಷತ್ರ ಮಾತ್ರ ನನಗೆ ಸುಸ್ಪಷ್ಟ ಹೆಗ್ಗುರುತು. ಹಗಲು ಗುರಿಹಿಡಿದು

ಅದರ ನೆಲೆ ತೋರಬಲ್ಲೆ , ಇರುಳು ಎಳನೇಯ್ದು ಅದರ ಸೆಲೆ ಹೀರಬಲ್ಲೆ .

ಕುಂತೀದೇವಿಯ ದರ್ಶನ ಭಾಗ್ಯ

ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಆಕಾಶ ಅತ್ಯಂತ ಸ್ವಚ್ಛವಾಗಿರುತ್ತದೆ -

ಸರೋವರದಂತೆ, ನಕ್ಷತ್ರಗಳ ಮೌನಗಾನ ಮತ್ತು ಮೂಕ ಅಭಿನಯ ಆಗ ಅಧಿಕ ವೈಭವದಿ

ಪ್ರದರ್ಶಿತವಾಗುತ್ತವೆ. ಗಗನದ ಗಭೀರತೆ ನಾಲ್ಕುಮಡಿ ಹೆಚ್ಚಿದಂಥ ಅನುಭವ.


ನಕ್ಷತ್ರ ವೀಕ್ಷಣೆ

ಸಂಜೆ ಹೊರಳುತ್ತಿದೆ. ಇರುಳು ಮುಸುಕುತ್ತಿದೆ. ದೃಷ್ಟಿ ಮಯಮಯವಾಗಿದೆ. ಬಾ

ದೀವಟಿಗರು ಒಬ್ಬೊಬ್ಬರಾಗಿ ಹಾಜರಾಗುತ್ತಿದ್ದಾರೆ. ಆದರೆ ಚಿರಪರಿಚಿತ ಸಪ್ತರ್ಷಿಮ

ಕಾಣದೆ ಮನಸ್ಸು ಚಡಪಡಿಸುತ್ತಿದೆ. ತನ್ನ ಗೈರುಹಾಜರಿಯಿಂದ ಅದಕ್ಕೀಗ ಅಧಿಕ ಮ

ಪ್ರಾಪ್ತವಾಗಿದೆ. ಶಾಶ್ವತ ಧ್ರುವ ನಕ್ಷತ್ರ ಅಲ್ಲೇ ಇದೆ.

ನಾಟಕವ ನೋಡುಬ್ರಹ್ಮಾಂಡ ರಂಗಸ್ಥಲದಿ


ಕೋಟಿನಟರಾಂತಿಹರು ಚಿತ್ರ ಪಾತ್ರಗಳ

ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ


ನೋಟಕರುಮಾಟಕರೆ ಮಂಕುತಿಮ್ಮ

ಜಮದಗ್ನಿ

ಧ್ರುವ ನಕ್ಷತ್ರ

9 . *

bಯೇಶಳದ

ಚಿತ್ರ ೬ : ಆಕಾಶದ ಪೂರ್ವ -ಉತ್ತರ ವಲಯದಲ್ಲಿ ಕುಂತೀ ಪುಂಜ

ಉತ್ತರಾಭಿಮುಖಿಯಾಗಿರುವ ನಾನು ಬಲಕ್ಕೆ – ಆಕಾಶದ ಪೂರ್ವ- ಉತ್ತರ

ಸಹಜವಾಗಿ ದೃಷ್ಟಿ ಬೀರುತ್ತೇನೆ. ಸುಮಾರು ೫ ನಕ್ಷತ್ರಗಳು ರಚಿಸುವ ಇಂಗ್ಲಿಷ್ ವರ್ಣಮ

M - ಅಕ್ಷರ ಕಂಡು ಕುತೂಹಲ ತಳೆಯುತ್ತೇನೆ. ಇದು ಕುಂತೀ ಪುಂಜ . ಇದರ ಪಶ್ಚಿಮ ಕೊನೆ ನ

ಜಮದಗ್ನಿ ,

ಕುಂತಿಯ M - ಆಕಾರದಲ್ಲಿ ಎರಡು ಶೃಂಗಗಳು ಅಥವಾಕೋನಗಳು ಇರುವುದು ಸರ

ಇವು ದಕ್ಷಿಣದೆಡೆಗೆ ಮೊನೆ ಮಾಡಿಕೊಂಡಿವೆ. ಭುಜಗಳು ಮತ್ತು ಆ ಕಾರಣದಿಂ


ನಕ್ಷತ್ರ ವೀಕ್ಷಣೆ

ಉತ್ತರದ ತಗ್ಗಿಗೆ ತೆರೆದುಕೊಂಡಿವೆ. ಪೂರ್ವಕೋನದ ಪೂರ್ವಬಾಹು (ಮೂಡುವಾಗ

ಕಂತುವಾಗ ಮೇಲಿನದು) ತುಸು ಜಾಸ್ತಿ ಕಿಸಿದುಕೊಂಡಿರುವಂಥ ಚಿತ್ರ . ಆ ಬಾಹುವ

ಒಳತಟ್ಟಿದರೆ ಎಂಥ ಸಮಾಂಗೀಯ ಚಿತ್ರ ದೊರೆತೀತೆಂದು ಮನಸ್ಸು ಎಣಿಕೆಹಾಕುತ್ತದೆ

ವ್ಯಕ್ತಿಯ ಆಜ್ಞೆ ಆಕಾಶದಲ್ಲಿ ಅಸಿಂಧು! ಸಮಾಂಗೀಯತೆಯ ಯಾಂತ್ರಿಕ ನೀರಸತ

ಯಾದೃಚ್ಛಿಕತೆಯ ವಿಚಿತ್ರ ಅರಾಜಕತೆಯೇ ನಿಜ ಸೌಂದರ್ಯದ ಮೂಲವಾಗಿರಬಹುದೇ ! ( ಪು

೩೬)

ಕುಂತಿಗೂ ಧ್ರುವನಕ್ಷತ್ರಕ್ಕೂ ನಡುವೆ ಏನಾದರೂ ಸಂಬಂಧ ಉಂಟೇ ? ಹೌದು. ಸರಿಸುಮ

ಪೂರ್ವಕೋನದ ಸಮದ್ವಿಭಾಜಕ ಧ್ರುವನಕ್ಷತ್ರವನ್ನು ಪ್ರವೇಶಿಸುತ್ತದೆ. ಕುಂತಿ ತಳೆಯ

ನಿಲವುಗಳಲ್ಲಿಯೂ ಇದು ನಿಜ. ಹೀಗೆ ಸಪ್ತರ್ಷಿಮಂಡಲದ ಧ್ರುವಸೂಚಕಗಳ ಗೈರುಹಾಜರಿ

ಕುಂತಿಯ ಪೂರ್ವಕೋನದ್ವಿಭಾಜಕದ ನೆರವಿನಿಂದ ಧ್ರುವನಕ್ಷತ್ರವನ್ನು ಪತ್ತೆ ಹಚ್ಚುತ್ತೇನೆ.

R71ಆ

ಧ್ರುವನಕ್ಷತ್ರ

ಚಿತ್ರ ೭ . ಧ್ರುವನಕ್ಷತ್ರ ಕುರಿತಂತೆ ಸಪ್ತರ್ಷಿಮಂಡಲ ಮತ್ತು ಕುಂತೀ ಪುಂಜಗಳ ವಿನ್ಯಾಸ

ಫೆಬ್ರುವರಿ ತಿಂಗಳು. ರಾತ್ರಿ ಏರಿದೆ. ಅಂದಾಜು ೯- ೧೦ ಗಂಟೆ. ಸಪ್ತರ್ಷಿಮಂಡಲ ಮತ್ತ

ಕುಂತೀ ಪುಂಜಗಳು ಉತ್ತರಾಕಾಶದಲ್ಲಿ ಮೆರೆಯುತ್ತಿವೆ. ಮೊದಲನೆಯದು ಮೂಡಿದೆ. ಆದ್ದರಿಂದ

ಪೂರ್ವಾಕಾಶದಲ್ಲಿದೆ. ಎರಡನೆಯದು ಕಂತಲು ಸಿದ್ಧವಾಗಿದೆ. ಆದ್ದರಿಂದ ಪಶ್ಚಿಮಾಕಾಶದ

ಆರು ತಿಂಗಳ ತರುವಾಯ , ಆಗಸ್ಟ್ ಇದೇ ಹೊತ್ತಿಗೆ ನೋಡುವಾಗ ಈ ಪುಂಜಗಳ ಸ್ಥಾನಗಳು


ನಕ್ಷತ್ರ ವೀಕ್ಷಣೆ

ಅದಲುಬದಲಾಗಿರುತ್ತವೆ. ಪೂರ್ವಾಕಾಶದಲ್ಲಿ ಕುಂತೀ ಪುಂಜ , ಪಶ್ಚಿಮಾಕಾಶದಲ್ಲಿ ಸಪ್ತ

ಧ್ರುವನಕ್ಷತ್ರವೆಂಬ ಅನರ್ಥ್ಯ ನಿಧಿಯನ್ನು ಉಭಯಪಾರ್ಶ್ವಗಳಲ್ಲಿಯೂ

ನಿಯುಕ್ತರಾಗಿ ನಿಂತಿರುವ ಸೇವಕರಂತೆ, ಧ್ರುವರಾಜನಿಗೆ ಕದಲಾರತಿ ಬೆಳಗಳು ಸನ್ನದ್

ಮಂಗಳಾಂಗಿಯರಂತೆ, ಇಲ್ಲವೇ ಚಕ್ರವರ್ತಿಗೆ ನರ್ತನ ಸೇವೆ ಒಪ್ಪಿಸಲು ಸಿದ್ಧರ

ನಾಟ್ಯಕುಶಲಿಯರಂತೆ ಈ ಪುಂಜಗಳು ಭಂಗಿ ಉಂಟು.

Mo°ಈ
‫همهم‬

. ಧ್ರುವನು )

ಸಪ್ತಗಮಂಡಲ

ಉಚ್ಚರ

ಚಿತ್ರ ೮. ಬಾನರಂಕರಾಟಣ, ಉತ್ತರಮೇರುವಿನಲ್ಲಿ ನಿಂತ ವೀಕ್ಷಕನಿಗೆ ಧ್ರುವನಕ್ಷತ್ರ ಆತ

ಖಮಧ್ಯದಲ್ಲಿರುತ್ತದೆ. ( ಚಿತ್ರದಲ್ಲಿ ಕೇಂದ್ರಬಿಂದು). ೨೪ಗಂಟೆಗಳ ( ದಿವಸದ ಅವಧಿಯಲ್

ಸಪ್ತರ್ಷಿಮಂಡಲ ಮತ್ತು ಲಘು ಸಪ್ತರ್ಷಿ ತಳೆಯುವ ವಿವಿಧ ವಿನ್ಯಾಸಗಳ

ಚಿತ್ರವನ್ನು ಇಲ್ಲಿ ಕಾಣಿಸಿದೆ.

ಧ್ರುವ ನಕ್ಷತ್ರದಿಂದ ಒಂದು ಅರವನ್ನು ಧ್ರುವಸೂಚಕಗಳೆಡೆಗೂ ಇನ್ನೊ

ಪೂರ್ವಶೃಂಗಕ್ಕೂ ಚಾಚಿದರೆ ಮನೋಹರವಾದ ಗಿರಿಗಿಟಿ ದೊರೆಯುತ್ತದೆ. ನನ್ನನ್ನು ಧ್ರುವ

ಸೇರಿಸುವ ಅಕ್ಷದ ಅಥವಾ ಮೇರುದಂಡದ ಸುತ್ತ ಈ ಗಿರಿಗಿಟಿಯನ್ನು ಗಿರಗರನೆ ತಿರು

ನಾದೀತು? ಆಗ ಧ್ರುವನಕ್ಷತ್ರ ಇದ್ದಲ್ಲೇ ಇರುತ್ತದೆ. ಸಪ್ತರ್ಷಿಮಂಡಲ ಮತ್ತು

ಇದರ ಸುತ್ತ ವಿವಿಧ ವಿನ್ಯಾಸ ತಳೆಯುತ್ತ ಸುತ್ತುತ್ತಿರುವುವು. ಇದೊಂದು ಬಾ

೪೨). ವಾಸ್ತವವಾಗಿ ಸಂಭವಿಸುತ್ತಿರುವುದಾದರೂ ಇದೇ . ಪ್ರತಿ ೨೪ ಗಂಟೆಗಳ ಒಂದು ದಿ

ಇರುಳು ಅಥವಾ ದಿವಾ ರಾತ್ರಿಗಳ ಒಟ್ಟು ಅವಧಿ) ಸಲ್ಲುವಾಗ ಗಿರಿಗಿಟಿಯ ಒಂದು

ಪೂರ್ಣವಾಗಿರುತ್ತದೆ.
ಧ್ರುವನಕ್ಷತ್ರಕ್ಕೆ ಲಗ್ಗೆ ಹಾಕೋಣವೇ ?

ಆಕಾಶದ ಸಮಸ್ತಕಾಯಗಳೂ ಮೂಡಿ ಮೇಲೇರಿ ನೆತ್ತಿಗೆರೆದಾಟಿ ಕೆಳಗಿಳಿದು ಕಂತುತ್ತವೆ.

ಇದೊಂದು ಏಕಮುಖ ವಾಹನ ಸಂಚಾರ – ( one-way trafic ). ಪೂರ್ವದಿಂದ ಪಶ್ಚಿಮದೆಡೆಗ

ಈ ಉತ್ಸವಪಥಸಂಚಲನ ಅಥವಾ ಮೆರವಣಿಗೆ ಬಲುಕ್ರಮಬದ್ಧವಾಗಿದೆ, ಅತಿ ಶಿಸ್ತಿನಿಂದ ಕೂಡಿದೆ,

ಮತ್ತು ಸತತವಾಗಿ ನಡೆಯುತ್ತಲೂ ಇದೆ.

ಮೇಲೆ ಬಳಸಿರುವ'ಸಮಸ್ತ ' ವಿಶೇಷಣಕ್ಕೆ ಒಂದು ವಿನಾಯತಿಕೊಡಬೇಕು. ಅದು ಧ್ರುವನಕ್ಷತ್ರ

ಕುರಿತದ್ದು . ಗಗನ ಸೈನಿಕರ ವಿವಿಧ ವರಿಸೆಗಳಿಗೆ ಸಾಕ್ಷಿ ಸ್ಥಾನದಲ್ಲಿರುವ ಈ ನಕ್ಷತ್ರ ನಿಶ್ಚಲ, ಮೂಡ

ಕಂತು - ತಿರುಗು ಚಲನೆಯಿಂದ ಅಬಾಧಿತ .

ಹರಿಜರೇಖೆ

VOIZTINTELTIITELIN = .
ಚಿತ್ರ ೯ . ಧ್ರುವನಕ್ಷತ್ರದಕೋನೋನ್ನತಿ ಗಣಿಸುವ ವಿಧಾನ , ವೀಕ್ಷಕ ಉತ್ತರಮುಖಿಯಾಗಿ ನಿಂತು

ಹಾರಿಜರೇಖೆ ಕುರಿತು ವೀಕ್ಷಕ- ಧ್ರುವನಕ್ಷತ್ರ ರೇಖೆ ರಚಿಸುವ ಕೋನ (x ) ಅಳೆಯುತ್ತಾನೆ. x

ಧ್ರುವನಕ್ಷತ್ರದ ಕೋನೋನ್ನತಿ.

ಧ್ರುವನಕ್ಷತ್ರ ಎಷ್ಟು ದೂರದಲ್ಲಿದೆ? ಬಾನ ಚತುವಿನಷ್ಟು ಎನ್ನುವ ಸುಲಭ ಉತ್ತರ ಏನನ್

ತಿಳಿಸುವುದಿಲ್ಲ . ಏಕೆಂದರೆ ಸೂರ್ಯ, ಚಂದ್ರ , ಗ್ರಹ, ನಕ್ಷತ್ರ ಎಲ್ಲವೂ ಬಾನ ಚತುವಿಗೇ ಲಗತ

ಹಾಗಾದರೆ ಇವೆಲ್ಲವೂ ಒಂದೇ ದೂರದಲ್ಲಿವೆಯೇ ? ಈ ಗೊಂದಲ ನನ್ನ ತಲೆ ತಿನ್ನುತ್ತಿರುವಾಗ

ಇದರಿಂದ ಬಿಡುಗಡೆಯ ಹಾದಿ ಸುಲಭವಾಗಿ ಹೊಳೆಯುತ್ತದೆ : ಧ್ರುವನಕ್ಷತ್ರದ ಎತ್ತರ ಎಷ್ಟು

ಎರಡು ಬಿದಿರು ದಬ್ಬೆಗಳನ್ನು ಕೀಲಿಸಿ ಕತ್ತರಿಯಂಥ ಸಲಕರಣೆ ತಯಾರಿಸುತ್ತೇನೆ. ಪ್ರತಿಯ


ದಬ್ಬೆಯೂ ಇನ್ನೊಂದನ್ನು ಕುರಿತಂತೆ ಕೀಲಿಯ ಸುತ್ತ ಸಮತಲದ ಮೇಲೆ ತಿರುಗಬಲ್ಲದ

ದಬ್ಬೆಯನ್ನು ದಕ್ಷಿಣೋತ್ತರ ದಿಕ್ಕಿನಲ್ಲಿ ನೆಲಕ್ಕೆ ಸಮಾಂತರವಾಗಿ ನನ್ನ ಕಣ್ಣಿನ ನೇರ ಹಿಡಿಯುತ್ತೇನ

ಇದು ಹಾರಿಜದತ್ತ ಚಾಚಿರುತ್ತದೆ. ಎಂದೇ ಹಾರಿಜರೇಖೆ. ಇನ್ನೊಂದನ್ನು ಯುಕ್ತವಾಗಿ ತಿರುಗಿಸಿ

ಧ್ರುವನಕ್ಷತ್ರಕ್ಕೆ ಗುರಿಹಿಡಿಯುತ್ತೇನೆ ( ಗಣಿತೋಪಕರಣ ಪೆಟ್ಟಿಗೆಯಲ್ಲಿರುವ ಕೈವಾರದಿಂದ,


ನಕ್ಷತ್ರ ವೀಕ್ಷಣೆ

ವಿಭಾಜಕದಿಂದ ಅಥವಾ ಏನೂ ದೊರೆಯದಾಗ ತೋರುಮತ್ತು ನಡುಬೆರಳುಗಳ ಉ

ಈ ಪ್ರಯೋಗ ಮಾಡಬಹುದು ( ಚಿತ್ರ ೩ ). ದಬ್ಬೆಗಳ ನಡುವಿನಕೋನ ಅಳೆಯುತ್ತೇನೆ. ಹಾರಿಜದ

ಧ್ರುವನಕ್ಷತ್ರ ಎಷ್ಟು ಎತ್ತರದಲ್ಲಿದೆ ಎಂಬುದರ ಮಾನಕ ಈ ಕೋನ. ಇದು ಧ್ರ

ಕೋನೋನ್ನತಿ.

- ಬೇರೆ ಬೇರೆಊರುಗಳಿಗೆ ಹೋದಾಗ ತಪ್ಪದೆ ಈ ಪ್ರಯೋಗಮಾಡುತ್ತೇನೆ. ನನ್ನ ಪುಸ್ತಕದ

ಉಲ್ಲೇಖವಾಗಿರುವ ( ಆಯ್ದ ಕೆಲವು ವಿವರಗಳಿವು:

ಸ್ಥಳದ ಹೆಸರು ಧ್ರುವನಕ್ಷತ್ರದಕೋನೋನ್ನತಿ

ಕನ್ಯಾಕುಮಾರಿ

ಕೊಚ್ಚಿ ೧೦೦

ಭಟ್ಕಳ ೧೪೦

ಬಿಜಾಪುರ ೧೭೦

ಕಲ್ಕತ್ತ ೨೩೦

ದಿಬ್ಬಗರ್‌

ಶ್ರೀನಗರ ೩೪೦

ಭೂಮಿಯಲ್ಲಿ ನಾವು ಉತ್ತರಕ್ಕೆ ಹೋದಂತೆ ಆಕಾಶದಲ್ಲಿ ಧ್ರುವನಕ್ಷತ್ರ

ಪಡೆಯುತ್ತದೆ. ಎಲ್ಲಿಯವರೆಗೆ? ಉತ್ತರ ಮೇರುವಿನಲ್ಲಿ ನಿಂತವನಿಗೆ ಧ್ರುವನಕ್ಷತ

ಖಮಧ್ಯದಲ್ಲಿರುವುದೇ ? ಹೌದು. ಅಲ್ಲಿ ಅಕ್ಷ (ವೀಕ್ಷಕನನ್ನು ಧ್ರುವಕ್ಕೆ ಜೋಡಿಸುವ

ಮೇರುದಂಡ) ನೆಲಕ್ಕೆ ಲಂಬವಾಗಿರುತ್ತದೆ ( ಚಿತ್ರ ೮ ), ಉತ್ತರ ಮೇರುವಿನಿಂದ ಮುಂ

ಕಡೆಗೆ ಮುಖಮಾಡಿ ನಡೆದರೂ ಅದು ದಕ್ಷಿಣಾಭಿಮುಖವೇ ಆಗಿರುತ್ತದೆ! ಧ್ರುವ

ಕೋನೋನ್ನತಿ ಇಳಿಯತೊಡಗುತ್ತದೆ. ಆದ್ದರಿಂದ ಗರಿಷ್ಠಕೋನೋನ್ನತಿ ೯೦೦

ವೀಕ್ಷಕನ ಅಕ್ಷಾಂಶ ಧ್ರುವನಕ್ಷತ್ರದಕೋನೋನ್ನತಿಗೆ ಸಮ . ಅಂದ ಮೇಲೆ ನಾವು ನ

ಧ್ರುವತಾರೆಯ ಕೋನೋನ್ನತಿ ಅಳೆದು ನಮ್ಮ ನೆಲೆಯ ಅಕ್ಷಾಂಶ ತಿಳಿಯಬಹುದೆಂಬುದ

ಇದೇನೋ ಸರಿ - ಧ್ರುವನಕ್ಷತ್ರ ಖಗೋಳದ ಗೋಚರ ಗೋಳಾರ್ಧದಲ್ಲಿರುವ

ಕನ್ಯಾಕುಮಾರಿಯಿಂದ ದಕ್ಷಿಣಕ್ಕೆ ಹೋದಾಗ ? ಧ್ರುವನಕ್ಷತ್ರ ಇಳಿದಿಳಿದು ಆತ ಸಮ

ಮೇಲಿರುವಾಗ ( ಅಕ್ಷಾಂಶ ೦೨) ಹಾರಿಜದೊಂದಿಗೆ ಐಕ್ಯವಾಗಿರುತ್ತದೆ. ಮತ್ತೂ ದ

ಆತನಿಗೆ ಧ್ರುವನಕ್ಷತ್ರ ಎಲ್ಲಿಯೂ ಕಾಣಸಿಗದು. ದಕ್ಷಿಣ ಗೋಳಾರ್ಧನಿವಾಸಿಗಳ ಆಕ

ಧ್ರುವನಕ್ಷತ್ರವಿಲ್ಲ .

- ಉತ್ತರ ಗೋಳಾರ್ಧನಿವಾಸಿಗಳಾಗಿರುವ ನಮ್ಮ ಧ್ರುವಬಿಂದುವಿನ ಬಳಿ ಒಂದು

ಇರುವುದು ಕೇವಲ ಆಕಸ್ಮಿಕ, ಇರಬೇಕೆಂಬುದು ಸೃಷ್ಟಿ ನಿಯಮ ಅಲ್ಲ . ದಕ್ಷಿಣ ಗೋಳಾರ್

ಇಂಥ ಆಕಸ್ಮಿಕತೆ ಸಂಭವಿಸಿಲ್ಲ . ಆದ್ದರಿಂದ ದಕ್ಷಿಣ ಧ್ರುವನಕ್ಷತ್ರವಿಲ್ಲ .


೧೩

ಖಗೋಳದಲ್ಲಿ ಹೆದ್ದಾರಿಗಳು : ವಿಷುವದ್ವ , ಮತ್ತು ಯಾಮೋತ್ತರ

ನನ್ನನ್ನು ಧ್ರುವನಕ್ಷತ್ರಕ್ಕೆ ಜೋಡಿಸುವ ಅಕ್ಷದ ಅಂದರೆ ಮೇರುದಂಡದ ಸುತ್ತ ಆಕಾಶಗೋಳ

ಪೂರ್ವ- ಪಶ್ಚಿಮ ದಿಶೆಯಲ್ಲಿ ಆವರ್ತಿಸುತ್ತದೆ. ಅದರ ಒಳಮೈಗೆ ಲಗತ್ತಾಗಿರುವ ಎಲ್ಲ

ಅದು ಈ ಚಲನೆಯ ವೇಳೆ ತನ್ನ ಜೊತೆಒಯ್ಯುತ್ತದೆ. ಈ ನಿರಂತರ ಪರಿವ್ರಜನದಲ್ಲಿ ಭಾಗಿಗಳಾಗದ


ಕಾಯಗಳು ಧ್ರುವನಕ್ಷತ್ರ ಮತ್ತು ಪ್ರಾಯಶಃ ನಾನು. ಕ್ರಮೇಣ ಈ ಜ್ಞಾನ ನನಗೆ ಸ್ಪುರಣವಾದಂತ

ಗಗನಗ್ರಂಥವನ್ನು ಹೆಚ್ಚು ಅರ್ಥಪೂರ್ಣವಾಗಿ ಓದುವುದು ಸಾಧ್ಯವಾಗುತ್ತದೆ.

ಗೋಳವನ್ನು ಭೂಗೋಳಶಾಸ್ತ್ರದ ತರಗತಿಯಲ್ಲಿ ತಿರುಗಿಸಿದ ನೆನಪು ಮರುಕೊಳಿಸುತ್ತದೆ. ಆ

ಪ್ರಯೋಗವನ್ನು ಪುನರಾವರ್ತಿಸಿ ಗೋಳದ ಮೈಮೇಲಿನ ವಿವಿಧ ಬಿಂದುಗಳ ವರ್ತನೆ ಪರೀಕ್ಷಿಸುತ್ತೇನ

ಚಿತ್ರ ೧೦ . ಅಕ್ಷಕ್ಕೆ ಹೂಡಿದಗೋಳ, ಇದರಲ್ಲಿಯ ಊರ್ಧ್ವವೃತ್ತ ಯಾಷ್ಟೋತ್ತರ. ಈ ಚಿತ್ರವನ್ನು ಚಿತ್ರ ೧ರ ಜೊತೆ

ಹೋಲಿಸಿ ಹಾರಿಜ, ವೀಕ್ಷಕನ ಸ್ಥಾನ, ಉತ್ತರ ಮತ್ತು ದಕ್ಷಿಣ ಬಿಂದುಗಳು ಇವನ್ನು ಗುರುತಿಸಬೇಕು. ವೀಕ್ಷಕನನ್ನು
ಧ್ರುವನಕ್ಷತ್ರಕ್ಕೆ ಜೋಡಿಸುವ ರೇಖೆಯೇ ಖಗೋಳದ ಅಕ್ಷ ಗೋಳ ಪಶ್ಚಿಮ -ಪೂರ್ವ ದಿಶೆಯಲ್ಲಿ ಆವರ್ತಿಸುತ್ತದೆ
ನಕ್ಷತ್ರ ವೀಕ್ಷಣೆ

ಅಕ್ಷದ ಕೊನೆ ಬಿಂದುಗಳು ಇದ್ದಲ್ಲಿಯೇ ತಿರುಗುತ್ತವೆ. ಅವ

ಹಂದಾಡುವುದಿಲ್ಲ .

ಇತರ ಎಲ್ಲ ಬಿಂದುಗಳೂ ಅಕ್ಷದ ಸುತ್ತ ಪರಿಭ್ರಮಿಸುತ್ತವೆ. ಕೊನೆ ಬಿ

ಹತ್ತಿರದ ಬಿಂದು ಕಿರಿ ಪರಿಧಿ ವೃತ್ತವನ್ನೂ ದೂರದ ಬಿಂದು ಹಿರಿ ಪರಿಧಿ ವೃತ್ತವ

ರೇಖಿಸುತ್ತವೆ.

ವೃತ್ತವಿಸ್ತೀರ್ಣಗಳಿಗೆ ಮಿತಿ ಉಂಟು. ಗರಿಷ್ಠ ವಿಸ್ತೀರ್ಣ ವೃತ್ತಗೋಳವನ್

ಭಾಗಿಸುತ್ತದೆ. ಆದ್ದರಿಂದ ಇದು ಸಮಭಾಜಕವೃತ್ತ .

ಸಮಭಾಜಕವನ್ನು ಒಳಗೊಂಡಂತೆ ಪ್ರತಿಯೊಂದು ವೃತ್ತಕ್ಕೂ

ವೃತ್ತದಕೇಂದ್ರದಲ್ಲಿ ಲಂಬವಾಗಿದೆ - ಅಕ್ಷಕ್ಕೆ ವೃತಫಲಕಗಳನ್ನು ಇವ

ರಂಧ್ರಗಳಲ್ಲಿ ಪೋಣಿಸಲಾಗಿದೆಯೋ ಎಂಬಂತೆ (ದೇವಾಲಯಗಳಲ್ಲಿ

ನೆಲೆ ಆರತಿಯಂತೆ).

ಸಮಭಾಜಕದ ಪ್ರತಿಯೊಂದು ಬಿಂದುವೂ ಅಕ್ಷದಕೊನೆಬಿಂದುಗ

ಅಂತರ ಅಥವಾ ದೂರದಲ್ಲಿದೆ. ಈ ದೂರಗೋಳಪರಿಧಿಯ ನಾಲ್ಕನೆಯ ಒಂದ

( ಪಾದ) .

ಗೋಳಕೇಂದ್ರದಿಂದ ಸಮಭಾಜಕದ ಮೇಲಿನ ಯಾವುದೇ ಬಿಂದು

ರೇಖೆಗೂ (ತ್ರಿಜ್ಯ) ಅಕ್ಷಕ್ಕೂ ನಡುವಿನ ಕೋನ ೯೦°.

ಯಾಷ್ಟೋತ್ತರ

ವೃ / ಉತ್ತರಗೋಳಾರ್ಧ 18

ವಿಷುವದ್ವತ
S

> ಹಾರಿಜ :

ಪೂ
ದಕ್ಷಿಣಗೋಳಾರ್ಧ

ಚಿತ್ರ ೧೧ . ಎಡ:ವೀಕ್ಷಕನಿಗೆ ಕಾಣುವ ಆಕಾಶದೃಶ್ಯ , ಬಲ: ಹಾರಿಜ ತಲದ, ಅಂದರೆ ನೆಲದ ಮೇಲಿನ ಸಂವಾ

ದಿಗ್ವಿಂದುಗಳು. ವೀ :ವೀಕ್ಷಕ, ಧ್ರು .ಧ್ರುವನಕ್ಷತ್ರ, ಖ:ಖಮಧ್ಯ , ಉ , ವಾ, ಪ, ನೈ , ದ, ಆ, ಪೂ , ಈ :ಉತ


ವಾಯವ್ಯ , ಪಶ್ಚಿಮ, ನೈರುತ್ಯ , ದಕ್ಷಿಣ, ಆಗ್ನೆಯ, ಪೂರ್ವ, ಈಶಾನ್ಯ ದಿಕ್ಸಿಂದುಗಳು.
ನಕ್ಷತ್ರ ವೀಕ್ಷಣೆ

ಈ ಪರಿಕಲ್ಪನೆಗಳನ್ನು ಸಂಶಯಾತೀತವಾಗಿ ಸ್ವಾಂಗೀಕರಿಸಿ ಮತ್ತೆ ಗಗನವನ್ನು ನೋಡುತ್ತೇನೆ

ಮೈ ನೀಲಿಗಟ್ಟುವವರೆಗೆ. ಈಗ ನಾನು ಬೆಟ್ಟದಕೊಡಿಯಲ್ಲಿ ಕುಳಿತಿದ್ದೇನೆ. ನನ್ನ ಸ್ಥಾನ ಖಗೋಳದ


ವಾಸ್ತವವಾಗಿ ಹಾರಿಜದ ಮೇಲಿನಗೋಚರ ಗೋಳಾರ್ಧದ - ಕೇಂದ್ರದಲ್ಲಿದೆ( ಚಿತ್ರ ೨). ನನ್ನನ್ನು

ಧ್ರುವನಕ್ಷತ್ರಕ್ಕೆ ಜೋಡಿಸುವ ಅಕ್ಷದ ಸುತ್ತ ಇದು ಪೂರ್ವ- ಪಶ್ಚಿಮ ದಿಶೆಯಲ್ಲಿ ಆವರ್

ಈ ಆವರ್ತನೆಯ ವೇಳೆ ಧ್ರುವನಕ್ಷತ್ರಕ್ಕೆ ಹತ್ತಿರವಿರುವ ತಾರೆ ಕಿರಿವಿಸ್ತೀರ್ಣದ ವೃತ್ತವನ್ನೂ

ದೂರವಿರುವ ತಾರೆ ಹಿರಿವಿಸ್ತೀರ್ಣದ ವೃತ್ತವನ್ನೂ ರೇಖಿಸುತ್ತವೆ. ಉದಾಹರಣೆಗೆ ಕ್ರತು ರೇಖಿಸುವ

ವೃತ್ತಕ್ಕಿಂತ ಮರೀಚಿರೇಖಿಸುವ ವೃತ್ತ ಅಧಿಕ ವಿಸ್ತೀರ್ಣದ್ದು .

ಅಂದ ಮೇಲೆ ಗರಿಷ್ಠ ವಿಸ್ತೀರ್ಣದ ವೃತ್ತ ಯಾವುದು ? ಸಮಭಾಜಕವಾಗಬೇಕೆಂದು

ಗೋಳಜ್ಯಾಮಿತಿಯಿಂದ ಅರಿತಿದ್ದೇನೆ. ಇದು ನನ್ನ ಮೂಲಕ ಅಕ್ಷಕ್ಕೆ ಲಂಬವಾಗಿ ಎಳೆದ ಸಮತಲವ

ಖಗೋಳವನ್ನು ಛೇದಿಸುವ ವೃತ್ತ , ಇದರ ಹೆಸರು ವಿಷುವದ್ಯ , ಖಗೋಳವನ್ನು ಇದು

ಅರ್ಧಗಳಾಗಿ ವಿಭಾಗಿಸುತ್ತದೆ. ಧ್ರುವನಕ್ಷತ್ರವನ್ನು ಒಳಗೊಂಡಿರುವ ಭಾಗ ಉತ್ತರಗೋಳ

ಒಳಗೊಳ್ಳದ ಭಾಗ ದಕ್ಷಿಣಗೋಳಾರ್ಧ ( ಚಿತ್ರ ೧೧).

- ಖಮಧ್ಯವನ್ನೂ ಧ್ರುವನಕ್ಷತ್ರವನ್ನೂ ಜೋಡಿಸುವ ವೃತ್ತ ಎಳೆದು ಇದನ್ನು ಹಾರಿಜದವರೆಗೆ

ಉಭಯ ಪಾರ್ಶ್ವಗಳಲ್ಲಿಯೂ ವಿಸ್ತರಿಸುತ್ತೇನೆ. ಇದು ಯಾಷ್ಟೋತ್ತರ. ಹಾರಿಜವನ್ನು ಇದು ಎರಡು

ಬಿಂದುಗಳಲ್ಲಿ ಸಂಧಿಸುತ್ತದೆ. ಧ್ರುವನಕ್ಷತ್ರದ ಕೆಳಗಿನದು ಇದರ ನೇರೆದುರಿನದು. ( ನೇರೆದುರಿನದು

ಎಂದಾಗ ಪ್ರತಿ ಸಲವೂ ನನ್ನನ್ನು ಕುರಿತಂತೆ ಅಂದರೆ ವೀಕ್ಷಕನನ್ನು ಕುರಿತಂತೆ ಎನ್ನುವುದು ಅಧ್ಯ

ಮೊದಲನೆಯದು ಉತ್ತರ ಬಿಂದು, ಎರಡನೆಯದು ದಕ್ಷಿಣ ಬಿಂದು. ಯಾವೊತ್ತರಸಹ

ಖಗೋಳವನ್ನು ಎರಡು ಅರ್ಧಗಳಾಗಿ ವಿಭಾಗಿಸುತ್ತದೆ. ಆಕಾಶಕಾಯಗಳು ಮೇಲೇರುತ್ತಿರುವ ಅರ

ಕೆಳಗಿಳಿಯುತ್ತಿರುವ ಅರ್ಧ. ಮೊದಲನೆಯದು ಪೂರ್ವ ಗೋಳಾರ್ಧ , ಎರಡನೆಯದು ಪಶ್ಚಿಮ

ಗೋಳಾರ್ಧ . ಉತ್ತರ ಬಿಂದುವಿನಿಂದ ೯೦°ಬಲಕ್ಕೆ ತಿರುಗುತ್ತೇನೆ – ದಹಿನೇ ಮೂಡ್. ಈಗ ನನ್ನ

ದೃಷ್ಟಿರೇಖೆ ಹಾರಿಜವನ್ನು ಪೂರ್ವ ಬಿಂದುವಿನಲ್ಲಿ ಸಂಧಿಸುತ್ತದೆ. ಇದರ ನೇರೆದುರಿನದು ಪಶ್ಚಿಮ

ಬಿಂದು. ಹೀಗೆನನಗೆ ಉತ್ತರ, ಪೂರ್ವ, ದಕ್ಷಿಣ, ಪಶ್ಚಿಮ ಎಂಬ ನಾಲ್ಕು ಪ್ರಮುಖ ದಿಗ್ವಿ

ಒದಗುತ್ತವೆ. ಇವು ನನ್ನ ಹಾರಿಜದಲ್ಲಿರುವ ವಿಶಿಷ್ಟ ಸ್ಥಾನಗಳು, ಉತ್ತರ- ದಕ್ಷಿಣ ಮತ್ತು ಪೂರ

ಪಶ್ಚಿಮ ರೇಖೆಗಳು ಪರಸ್ಪರ ಲಂಬವಾಗಿವೆ. ಇವುಗಳ ಸಂಧಿಬಿಂದುವಿನಲ್ಲಿ ನಾನು ನಿಂತಿದ್ದೇನ

- ದಿಗ್ವಿಂದು (ಉದಾಹರಣೆಗೆ ಪೂರ್ವಬಿಂದು) ಮತ್ತು ದಿಶೆ (ಉದಾಹರಣೆಗೆ ಪೂರ್

ಒಂದೇ ಅಲ್ಲ . ಮೊದಲನೆಯದು, ಹೆಸರೇ ಸೂಚಿಸುವಂತೆ, ಖಚಿತವಾದ ಒಂದು ಬಿಂದು.

ಎರಡನೆಯದು ಆ ಬಿಂದುವಿನ ಉಭಯ ಪಾರ್ಶ್ವಗಳಲ್ಲಿ ತಲಾ ೪೫° ವ್ಯಾಪ್ತಿ ಪ್ರದೇಶ. ಆದ್ದರ

ಪೂರ್ವದಿಶ ಆಗ್ನೆಯ ಬಿಂದುವಿನಿಂದ ಈಶಾನ್ಯ ಬಿಂದುವಿನವರೆಗೂ ಉತ್ತರ ದಿಶ ಈಶಾ

ಬಿಂದುವಿನಿಂದ ವಾಯವ್ಯ ಬಿಂದುವಿನವರೆಗೂ ಪಶ್ಚಿಮ ದಿಶ ವಾಯವ್ಯ ಬಿಂದುವಿನಿಂದ

ಬಿಂದುವಿನವರೆಗೂ ದಕ್ಷಿಣದಿಶ ನೈರುತ್ಯ ಬಿಂದುವಿನಿಂದ ಆಗ್ನೆಯ ಬಿಂದುವಿನವರೆಗೂ ವ್ಯಾಪಿಸಿರುವ

ಪ್ರದೇಶಗಳು.
೧ ೬
ನಕ್ಷತ್ರ ವೀಕ್ಷಣೆ

ಯಾಷ್ಟೋತ್ತರ

0 ವೀ )

ವಿಷುವತ್ತ

ಚಿತ್ರ ೧೨. ವೀಕ್ಷಕನನ್ನು ( ವೀ ) ಕುರಿತಂತೆ ಸೂರ್ಯನ ದೈನಂದಿನ ಪಥ ವಾರ್ಷಿಕವಾಗಿ ಆಂಧೋಲಿ


ಡಿಸೆಂಬರ್ ೨೧ರಂದು ಮಕರವೃತ್ತ , ಉದಯ ಮ ಬಿಂದುವಿನಲ್ಲಿ , ಮಾರ್ಚ್ ೨೧ರಂದು ವಿಷುವದ್ಯತ

ಪೂ (ಪೂರ್ವ) ಬಿಂದುವಿನಲ್ಲಿ , ಅಸ್ತ ಪ( ಪಶ್ಚಿಮ) ಬಿಂದುವಿನಲ್ಲಿ . ಜೂನ್ ೨೧ರಂದು ಕರ್ಕವೃತ್ತ , ಉ

ಬಿಂದುವಿನಲ್ಲಿ . ಸೆಪ್ಟೆಂಬರ್ ೨೩ರಂದು ಮತ್ತೆ ವಿಷುವತ್ತ. ಡಿಸೆಂಬರ್ ೨೧ರಂದು

ಧ್ರು : ಧವನಕ್ಷತ್ರ, ಖ:ಖಮಧ್ಯ .

ವಿಷುವದ್ವ ಹಾರಿಜವನ್ನು ಪೂರ್ವ ಮತ್ತು ಪಶ್ಚಿಮ ಬಿಂದುಗ

ಯಾಮೋತ್ತರವನ್ನು ? ಈ ಛೇದನ ಬಿಂದು ನನ್ನ ಸ್ಥಾನ, ಅಂದರೆ ಅಕ್ಷಾಂಶ, ಅನ

ಬದಲಾಗುತ್ತದೆ. ಸಮಭಾಜಕದ ಮೇಲಿರುವವನಿಗೆ, 0° ಅಕ್ಷಾಂಶ, ವಿಷುವದ್ವ

ಅಧೋಬಿಂದುಗಳ ಮೂಲಕ ಹಾಯುತ್ತದೆ. ದಕ್ಷಿಣ ಅಮೆರಿದ ಈಕ್ವೆಡಾರ್ , ಬ್ರೆಝಿಲ್; ಆಫ್ರ

ಕಾಂಗೊ , ಕೆನ್ಮಾ ; ಸುಮಾತ್ರಾ , ಬೋರ್ನಿಯೋ ಮುಂತಾದ ಪ್ರದೇಶಗಳಲ್ಲಿ

ಗೋಚರವಾಗುವ ದೃಶ್ಯ , ಆಯಾ ಅಕ್ಷಾಂಶಾನುಸಾರ ಬದಲಾಗುವುದು. ಸಾರ್ವತ್ರ

ಹಾರಿಜದಿಂದ ತೊಡಗಿ, ಯಾಷ್ಟೋತ್ತರ ನೇರ, ಧ್ರುವನಕ್ಷತ್ರದವರೆಗೆ ಗಮಿಸಬೇಕಾದ ಎತ್ತರ ವೀಕ್ಷ

ಅಕಾಂಶ ( ಚಿತ್ರ ೯ ). ಇದೇ ಧಾಟಿ ಮತ್ತು ದಾರಿಯಲ್ಲಿ ಮುಂದೆ ಸಾಗಿದಾಗ ಖ

ಹಾರಿಜದಿಂದ ಖಮಧ್ಯದ ಎತ್ತರ ೯೦°. ವೀಕ್ಷಕನ ಅಕ್ಷಾಂಶ x ಆಗಿರುವಾಗ ( ಚಿತ್ರ ೧೧ ರಲ್

ಕೋನಉವೀಧ್ರು) ಧ್ರುವನಕ್ಷತ್ರದಿಂದ ಖಮಧ್ಯದ ಉನ್ನತಿ ೯೦೦-x (=ಕೋನಧ್ರುವ


೧೭
ನಕ್ಷತ್ರ ವೀಕ್ಷಣೆ

ಗಣನೆಗಳ ಸೌಕರ್ಯಾರ್ಥ ಖಗೋಳದ ತ್ರಿಜ್ಯವನ್ನು ೧ ಏಕಮಾನವೆಂದು ಅಂಗೀಕರಿಸುತ್ತೇವೆ

ಯಾವುದೇ ವೃತ್ತಕಂಸ ವೀಕ್ಷಕನಲ್ಲಿ ರಚಿಸುವಕೋನವನ್ನು ಆ ಕಂಸದ 'ಉದ್ದ' ಅಥವಾ ದೀರ

ಎಂದು ಭಾವಿಸುತ್ತೇವೆ. ಆಕಾಶದಲ್ಲಿ ರೇಖೀಯ ದೂರಗಳು ನಿಷ್ಟ್ರಯೋಜಕ, ಕಾರಣ - ಸಮಸ್ತ

ಆಕಾಶಕಾಯಗಳೂ ನಮ್ಮಿಂದ ಒಂದೇ ದೂರದಲ್ಲಿವೆ, ಇದು ಖಗೋಳದ ತ್ರಿಜ್ಯ ಎಂಬ ಸಾಮೂಹ

ಸಾರ್ವಕಾಲಿಕ ಮತ್ತು ಸಾರ್ವದೈಶಿಕ ವಿಭ್ರಮೆ ನಮ್ಮ ಬದುಕಿನ ಅವಿಭಾಜ್ಯ ಅಂಶ. ನಿಸರ್ಗ ನಮ್ಮನ

ರೂಪಿಸಿ ಕಂಡರಿಸಿರುವುದು ಹೀಗೆ - ಈ ನೆಲದಲ್ಲಿ ಬಾಳಲೆಂದು, ಆ ಬಾನಿನಲ್ಲಿ ಅಂತರಗಳನ್ನ

ನೇರ ಕಾಣಲೆಂದಲ್ಲ !

ಗಗನ ವೈಭವ ಸೂರ್ಯದೇವನ ಜೈತ್ರಯಾತ್ರೆ

ನನ್ನ ಮನೆ ಅಂಗಳದಲ್ಲಿ ನಿಂತಿದ್ದೇನೆ. ಪೂರ್ವ ದಿಶೆಯ ಗಡಿಯಲ್ಲಿ ಚಾಮುಂಡಿ ಬೆ

ಸಾಲು ಉತ್ತರ- ದಕ್ಷಿಣವಾಗಿ ದಿವ್ಯ ನಿರ್ಲಕ್ಷ್ಯದಿಂದ ಮೈಚೆಲ್ಲಿ ಕೊಂಡಿದೆ. ಅದರ mood , ಅಂ

ಲಹರಿ, ಪಾದರಸದಂತೆ - ಗತಿಶೀಲತೆ ಪ್ರಧಾನ ಶ್ರುತಿ. ಈ ಸ್ಥಾವರಭಿತ್ತಿಯಲ್ಲಿ ಕೂಡ ಎಂಥ

ಜಂಗಮ ಪ್ರವೃತ್ತಿ ! ಬೆಟ್ಟದ ರೋಹಿತ ಲಹರಿಯ ವಿವಿಧ ಠಾಯಿಗಳಿಗೆ ಕಾರಣ ಏನು ಅಥವಾ

ಯಾರು ? ಇನ್ನಾರು ಸಾಕ್ಷಾತ್ ಸೂರ್ಯನೇ .

ನೇಸರು ನನ್ನ ಲೋಕಕ್ಕೆ ಮೂಡುವುದು ಎಂದರೆ ಅದು ಬೆಟ್ಟದ ಆಚೆಕಡೆಯಿಂದ ಲಗ್ಗೆ ಹತ್ತಿ

ಬಂದು, ಮೇಲಂಚಿನ ಅಷ್ಟಾವಕ್ರ ಚಾಚುಗಳ ಮೂಲಕ ಕಿರಣದೋಕುಳಿ ಎರಚಿ ಮತ್ತೆ ಪ್ರತ್ಯಕ್ಷವಾ

ವಿದ್ಯಮಾನ. ಅಂಬಿಕಾತನಯದತ್ತರ ನುಡಿಗಳಲ್ಲಿ

ಮೂಡಲ ಮನೆಯಾ ಮುತ್ತಿನ ನೀರಿನ

ಎರಕವ ಹೊಯ್ದಾ

ನುಣ್ಣನ್ನರಕವಹೊಯ್ದಾ

ಬಾಗಿಲ ತೆರೆದೂ ಬೆಳಕು ಹರಿದೂ

ಜಗವೆಲ್ಲಾ ತೊಯ್ದಾ

ಹೋಯೋ - ಜಗವೆಲ್ಲಾ ತೊಯ್ದಾ !

ಪ್ರತಿದಿನವೂ ಒಂದೇ ಶ್ರುತಿ, ಒಂದೇ ಗೀತೆ, ಆದರೆ ವಿವಿಧ ಭಾವ. ಎಂದೇ ಒಂದೊಂದ

ದಿನವೆಂದರೆ ಒಂದೊಂದು ಭಾವಗೀತೆ. ಉದಾಹರಣೆಗೆ ಸೂರ್ಯ ಮೊನ್ನೆ ಎಲ್ಲಿ ಉದಯಿ

ನಿನ್ನೆ ಅಲ್ಲಿ ಉದಯಿಸದೇ ಅದರ ತುಸು ಒತ್ತಿನ ಬಿಂದುವಿನಲ್ಲಿ ಹಣುಕಿ ಇಣುಕಿ ಮೇಲೆ ಬಂದಿತು.

ಇಂದು ? ನಿನ್ನೆಯ ಬಿಂದುವಿನ ತುಸು ಪಕ್ಕಕ್ಕೆ. ಈ ಬಗೆಯ ಮಂದಸರಿತ ಅಥವಾ ಒತ್ತ

ಖಚಿತವಾಗಿಯೂ ಕ್ರಮಪ್ರಕಾರ ಮತ್ತು ನಿರಂತರ ಜರಗುತ್ತಲೇ ಇರುವುದೆಂಬುದನ್ನ

ಅರಿತಿದ್ದೇನೆ. ವರ್ಷವಿಡೀ ಗಮನಿಸಿದಾಗ ವೇದ್ಯವಾದ ಸಂಗತಿ ಇದು:

* ಡಿಸೆಂಬರ್ ೨೧/೨೨ ಬೆಟ್ಟದ ಗರಗಸ ಅಂಚನ್ನು ಸೂರ್ಯ ಪೂರ್ವ- ದಕ್ಷಿಣ ವಲಯ

ಒಂದು ಬಿಂದುವಿನಲ್ಲಿ ದಾಟಿ ಉದಯಿಸುತ್ತದೆ. ಇದಕ್ಕಿಂತ ದಕ್ಷಿಣಕ್ಕೆ ಅದು ಸರಿಯುವ


ನಕ್ಷತ್ರ ವೀಕ್ಷಣೆ

ಡಿ

ಜೂನ್ ೨೧

* ಮಾರ್ಚ್ ೨೧ ವೀ
ಸಪ್ಟೆಂಬ
ಸೆಪ್ಟೆಂಬರ್ ವೃ
೨೨

ಹಾರಿಜ

ಡಿಸೆಂಬರ್ ೨೧.

ಚಿತ್ರ ೧೩ . ಉತ್ತರ ಮೇರುವಿನಲ್ಲಿ ನಿಂತ ವೀಕ್ಷಕನಿಗೆ ( ವಿ ) ಧ್ರುವನಕ್ಷತ್ರ ( ಧ್ರು ) ಆತನ ಖಮಧ್ಯದಲ್ಲಿದ್ದು ವಿಷುವ
( ವಿ ) ಹಾರಿಜದೊಂದಿಗೆ ಐಕ್ಯವಾಗಿರುತ್ತದೆ. ಎಂದೇ ಈತನಿಗೆಸೂರ್ಯನ ದೈನಂದಿನ ಪಥ ವಾರ್ಷಿಕವಾ
( ವಿವ) ಮೇಲಕ್ಕೂ (ಉತ್ತರ) ಕೆಳಕ್ಕೂ ( ದಕ್ಷಿಣ) ಆಂದೋಲಿಸಿದಂತೆ ಕಾಣುತ್ತದೆ. ಸೂರ್ಯ ವಿಷುವದ್ವತ್ತ

( ವಿ -ಕವ ) ವಲಯದಲ್ಲಿರುವಾಗ ( ಮಾರ್ಚ್ ೨೧ - ಸೆಪ್ಟೆಂಬರ್ ೨೩ ) ಸದಾ ಸೂರ್ಯದರ್ಶನವಾಗುತ್


ತಿಂಗಳ ಸಂತತ ದಿನ : ದಿವಾಸಂತತಂ ಸೂರ್ಯ ವಿಷುವದ್ಭತ್ತ- ಮಕರವೃತ್ತ ( ವಿವೃ- ಮವ) ವಲಯದಲ್ಲಿರುವಾಗ ( ಸೆಪ್
೨೩ - ಮಾರ್ಚ್ ೨೧) ಎಂದೂ ಸೂರ್ಯ ದರ್ಶನವಾಗುವುದಿಲ್ಲ , ಅಂದರೆ ಆರು ತಿಂಗಳ ಸಂತತ ರಾತ್ರಿ . ನಿಶಾ

ತರುವಾಯದ ದಿನಗಳಲ್ಲಿ ಉದಯ ಬಿಂದು ಉತ್ತರಾಭಿಮುಖವಾಗಿ

ಜೂನ್ ೨೧/ ೨೨ ಬೆಟ್ಟದ ಗರಗಸ ಅಂಚನ್ನು ಸೂರ್ಯ ಪೂರ್ವ

ವಲಯದಲ್ಲಿಯ ಒಂದು ಬಿಂದುವಿನಲ್ಲಿ ದಾಟಿ ಉದಯಿಸುತ್ತದೆ ಇದ

ಉತ್ತರಕ್ಕೆ ಅದು ಸರಿಯುವುದಿಲ್ಲ .

* ತರುವಾಯದ ದಿನಗಳಲ್ಲಿ ಉದಯಬಿಂದು ದಕ್ಷಿಣಾಭಿಮುಖವಾಗಿ ಹರಿಯ

* ಡಿಸೆಂಬರ್ ೨೧/ ೨೨ ಮತ್ತೆ ಹಿಂದಿನ ಘಟನೆಯ ಪುನರಾವರ್ತನೆ .

ಹೀಗೆ ಸೂರ್ಯೋದಯ ( ಅಂತೆಯೇ ಅಸ್ತಮಾನ), ವಾರ್ಷಿಕವಾಗಿ ಎರಡ

ಗಡಿಬಿಂದುಗಳ ನಡುವೆ ಆಂದೋಲಿಸುತ್ತದೆ: ಮ ಮತ್ತು ಕ. ಇವುಗಳ ನಟ್ಟ ನ

ಬಿಂದು ( ಪಶ್ಚಿಮ ಬಿಂದು) ಉಂಟು ( ಚಿತ್ರ ೧೨).


ನಕ್ಷತ್ರ ವೀಕ್ಷಣೆ

ಮಾರ್ಚ್ ೨೧ ಮತ್ತು ಸೆಪ್ಟೆಂಬರ್ ೨೩ ದಿನಾಂಕಗಳಂದು ಸೂರ

ಬಿಂದುವಿನಲ್ಲಿಯೂ ಅಸ್ತ್ರ ಪಶ್ಚಿಮ ಬಿಂದುವಿನಲ್ಲಿಯೂ ಸಂಭವಿಸುತ್ತವೆ. ಅಂದು ಸೂರ

ದೈನಂದಿನ ಪಥ - ಮೂಡುವಲ್ಲಿಂದ ಕಂತುವಲ್ಲಿ ತನಕಸೂರ್ಯರೇಖಿಸುವ ವಕ್ರರೇಖೆ

ವಿಷುವದ್ಯವೇ. ಹಗಲು ಇರುಳುಗಳ ದೀರ್ಘತೆ ಸಮ , ತಲಾ ೧೨ ಗಂಟೆ. ಮಾರ್ಚ್

ಸೆಪ್ಟೆಂಬರ್ ೨೩ರ ತನಕದ ಅವಧಿಯಲ್ಲಿ ಇರುಳಿಗಿಂತ ಹಗಲು ದೀರ್ಘತರವಾಗಿದ್ದರೆ ಸೆಪ

೨೩ರಿಂದ ಮಾರ್ಚ್ ೨೧ರ ತನಕದ ಅವಧಿಯಲ್ಲಿ ಹಗಲಿಗಿಂತ ಇರುಳು ದೀರ್ಘತರವ

ಈ ಅವಧಿಗಳಲ್ಲಿ ದೈನಂದಿನ ಪಥಗಳು ವಿಷುವದ್ಭತ್ತದಿಂದ ಅನುಕ್ರಮವಾಗಿ ಉತ್ತರದಲ

ದಕ್ಷಿಣದಲ್ಲೂ ಸಂಚಾರೀಭಾವಗಳಲ್ಲಿರುವುವು.

ಹುಣ್ಣಿಮೆಯಂದು ಸೂರ್ಯ ಮತ್ತು ಚಂದ್ರ ಎದುರುಬದಿರಾಗಿರುತ್ತವೆ – ಪೂರ

ಬಿಂದುಗಳಂತೆ. ಆದ್ದರಿಂದ ಮಾರ್ಚ್ ೨೧ ಇಲ್ಲವೇ ಸೆಪ್ಟೆಂಬರ್ ೨೩ ದಿನಾಂಕಗಳ

ಇವುಗಳಿಗೆ ತೀರ ಹತ್ತಿರದ ದಿನಾಂಕಗಳಂದು ಸಂಭವಿಸುವ ಹುಣ್ಣಿಮೆಯ ಚಂದ್ರ ಬಹು

ವಿಷುವದ್ಭತ್ತದ ಮೇಲೆಯೇ ಇರುವುದು ಎಂದೇ ಆ ಇರುಳು ಚಂದ್ರ ರೇಖಿಸುವ ಪಥ ಸರಿಸುಮಾ

ವಿಷುವತ್ತ.

ಖಗೋಳದಲ್ಲಿ ಕಡಿದ ಹೆದ್ದಾರಿ - ಕ್ರಾಂತಿವೃತ್ತ

ಸೂರ್ಯನ ದೈನಂದಿನ ಪಥ ವರ್ಷದ ಎರಡು ತಾರೀಕುಗಳಂದು ಮಾತ್ರ - ಮಾರ

ಮತ್ತು ಸೆಪ್ಟೆಂಬರ್ ೨೩ - ವಿಷುವದೂತ, ಉಳಿದ ಯಾವುದೇ ದಿನಾಂಕದ

ವಿಷುವದ್ಯದಿಂದ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಇರುವ ಒಂದು ವೃತ್ತ ಎಂಬ ಅರಿವು ನನ್ನ

ಹೊಸ ಸಂದೇಹಗಳಿಗೆ ಕಾರಣವಾಗುತ್ತದೆ.

ಉಳಿದ ದಿನಗಳಲ್ಲಿ ಈ ಪಥಗಳ ಸ್ವರೂಪವೇನು? ಇವು ವಿಷುವದ್ಯಕ್ಕೆ ಸಮ

ವೃತ್ತಗಳು. ಇವುಗಳ ಕೇಂದ್ರ ನಾನಲ್ಲ . (ವಿಷುವದ್ವದಕೇಂದ್ರ ನಾನೇ .)

ಸೂರ್ಯನ ಈ ಆಂದೋಳನವನ್ನು ನಕ್ಷತ್ರ ಚಿತ್ರಗಳ ಮುನ್ನೆಲೆಯಲ್ಲಿ ( ಸ್ಥಿರ ನಕ್ಷತ್

ಹಿನ್ನೆಲೆಯಲ್ಲಿರುವುವು- ಪರದೆಯಂತೆ; ಸೂರ್ಯ, ಚಂದ್ರ , ಗ್ರಹ, ಉಲ್ಕೆ , ಧೂಮಕೇತು

ಮುನ್ನೆಲೆಯಲ್ಲಿ ಕುಣಿಯುತ್ತಿರುವುವು - ಪಾತ್ರಧಾರಿಗಳಂತೆ) ಗುರುತಿಸಬಲ್ಲೆನೇ ?

ಗುರುತಿಸಲಾರೆ . ಏಕೆಂದರೆ ಸೂರ್ಯ ಇರುವಾಗ ನಕ್ಷತ್ರದರ್ಶನ ಇಲ್ಲ . ನಕ್ಷತ್ರದರ್ಶನ ಆಗ

ಸೂರ್ಯ ಇಲ್ಲ . ಈ ಸಂದಿಗ್ಧತೆಯಿಂದ ಪಾರಾಗಲು ಪರೋಕ್ಷ ವಿಧಾನಕ್ಕೆ ಶರಣು ಹೋಗ

- ಪ್ರತಿ ದಿನ ಮುಂಜಾನೆ ಸೂರ್ಯೊದಯಪೂರ್ವದಲ್ಲಿ ಮತ್ತು ಸಂಜೆ ಸೂರ

ನಂತರ ಆಕಾಶದ ನಕ್ಷತ್ರಪಟ ಚಿತ್ರಿಸುತ್ತೇನೆ. ಎರಡು ಮೂರು ದಿನಗಳಲ್ಲಿ - ಒಂದು ವಾರದಲ್ಲಿ

ಕೂಡ - ವಿಶೇಷ ವ್ಯತ್ಯಾಸವೇನೂ ಕಂಡುಬರುವುದಿಲ್ಲ . ಆದರೆ ಒಂದು ತಿಂಗಳು ಸಲ್ಲುವಾಗ ಇಡ

ನಕ್ಷತ್ರಪಟ ಕೊಂಚ ಪಶ್ಚಿಮಕ್ಕೆ ಸರಿದಿರುವುದು ಗೊತ್ತಾಗುತ್ತದೆ.


ನಕ್ಷತ್ರ ವೀಕ್ಷಣೆ

ಉದಾಹರಣೆಗೆ ಎರಡು ತಿಂಗಳ ಹಿಂದೆಸೂರ್ಯ ಕಂತಿದಾಗ ಪಶ್ಚಿಮಾಕಾಶದ ತಗ್

ನಕ್ಷತ್ರ ಚಿತ್ರ ಈಗ ಅದೇ ಹೊತ್ತಿಗೆ ಕಾಣದಾಗಿದೆ. ಅಂದರೆ ಪಶ್ಚಿಮ ಹಾರಿಜದ ಕೆಳಗೆ ಇಳಿದುಹ

ಆಗ ನಡು ಆಗಸದಲ್ಲಿದ್ದ ಚಿತ್ರ ಈಗ ಪಡುವಲಿಗೆ ಹೊರಳಿದೆ. ಮೂಡಲ ಬಾನಿನಲ್ಲಿ

ನಡು ಆಗಸಕ್ಕೆ ಬಡ್ತಿ ಪಡೆದಿದೆ. ಆಗ ಮೂಡಿಯೇ ಇರದಿದ್ದ ನಕ್ಷತ್ರ ಚಿತ್ರ ಈಗ ಪೂರ್ವಾಕ

ನವವೈಭವದಿಂದ ವಿಜೃಂಭಿಸುತ್ತಿದೆ. ಅಂದರೆ ಪೂರ್ವ ಹಾರಿಜದ ಕೆಳಕ್ಕಿದ್ದ ನಕ್

ಬಂದಿದೆ. ಒಂದು ವರ್ಷ ಸಂದಾಗ ಮತ್ತೆ ಹಿಂದಿನ ಚಿತ್ರಗಳ ಪುನಃ ಪ್ರದರ್ಶನ - ಅದೇ ವಿನ್ಯಾಸ

ಅದೇ ಸಾಪೇಕ್ಷ ಸ್ಥಾನ, ಅದೇ ವೈಭವ, ಅದೇ ಸೌಂದರ್ಯ, ಇಡೀ ಖಗೋಳ ಸೂರ್ಯನನ

ಕುರಿತಂತೆ ಪೂರ್ವ- ಪಶ್ಚಿಮ ದಿಶೆಯಲ್ಲಿ ವಾರ್ಷಿಕವಾಗಿ ಒಂದು ಆವರ್ತನೆ

ವಿದ್ಯಮಾನ. ವಾಸ್ತವವಾಗಿ ಇಲ್ಲಿ ಸೂರ್ಯ ನಕ್ಷತ್ರಖಚಿತ ಆಕಾಶಗೋಳದ ಮುನ್ನೆಲೆಯಲ್ಲ

ಸುತ್ತ ವಿರುದ್ಧ ದಿಶೆಯಲ್ಲಿ ಅಂದರೆ ಪಶ್ಚಿಮ- ಪೂರ್ವ ದಿಶೆಯಲ್ಲಿ ಒಂದು ಪರಿಭ

- ಕುಂಭ ಮಕರ
* ಧನು
ಮೀನ್ಯರಿಗೆಯ ವೃಶ್ಚಿಕ
ತುಲಾ

ಮೇಷ

ಕನ್ಯಾ

ವೃಷಭ ಸಿಂಹ

ಕರ್ಕಟಕ
ಮಿಥುನ

ಚಿತ್ರ ೧೪, ಸೌರವ್ಯೂಹದಲ್ಲಿ ಗ್ರಹಗಳು ಸೂರ್ಯನ ಸುತ್ತ ಪರಿಭ್ರಮಿಸುವ ಕಕ್ಷೆಗಳು ಸ್ಕೂಲವಾಗಿ


ಸಮತಲದಲ್ಲಿವೆ. ಖಗೋಳವನ್ನು ಇದು ಸಂಧಿಸುವ ಮಹಾವೃತ್ತವೇ ಕ್ರಾಂತಿವೃತ್ಯ , ಈ ತಲಕ್ಕೆ ಲಂಬವಾ
ದೂರ ಸಾಗಿ ನಿಂತವನಿಗೆ ಸ್ಥಿರ ನಕ್ಷತ್ರ ಚಿತ್ರಗಳ ಮುನ್ನೆಲೆಯಲ್ಲಿ ಸೂರ್ಯ- ಭೂಮಿ ಸಂಬಂಧ ಹೇಗೆ ಕಾಣಬಹ
ಚಿತ್ರದಲ್ಲಿ ಇದನ್ನು ಬಿಂಬಿಸಿದೆ. ಸೂರ್ಯನ ಸುತ್ತ ಭೂಮಿ ಪರಿಭ್ರಮಿಸುತ್ತಿದೆ. ಆದರೆ ಭೂವಾಸಿಗಳಾದ
ಸೂರ್ಯನೇ ನಮ್ಮ ಸುತ್ತ ಅದೇ ದಿಶೆಯಲ್ಲಿ ಪರಿಭ್ರಮಿಸುವಂತೆ ಭಾಸವಾಗುತ್ತದೆ. ಚಿತ್ರದಲ್ಲಿ ಭೂಮಿ
ರೇಖೆ ತುಲಾರಾಶಿಯತ್ತ ಗುರಿ ಮಾಡಿದೆ. ಭೂಮಿ ಮುಂದೆ ಸರಿದಂತೆ ( ಚಿತ್ರದಲ್ಲಿ ಅಪ್ರದಕ್ಷಿಣ ದಿಶೆ) ಈ
ಕ್ರಮೇಣ ವೃಶ್ಚಿಕ, ಧನು, ಮಕರ ಮುಂತಾದ ರಾಶಿಗಳತ್ತ ಗುರಿಮಾಡುತ್ತದೆ. ಆಯಾ ಸಂದರ್ಭದ
ಮನೆ ಆಯಾ ರಾಶಿಯನ್ನುತ್ತೇವೆ. ಮೊದಲನೆಯ ಸಂದರ್ಭದಲ್ಲಿ ತುಲಾ, ಮತ್ತಿನ ಸಂದರ್ಭಗಳಲ್ಲಿ ವೃಶ್ಚಿಕ ಇತ್ಯಾದ
ಯಾವುದೇ ದಿವಸ ಸೂರ್ಯನ ಹಿನ್ನೆಲೆಯಲ್ಲಿರುವ ನಕ್ಷತ್ರ ಚಿತ್ರವೇ ಆ ದಿವಸ ಸೂರ್ಯನ ರಾಶಿ,

ಇದಾದರೂ ಪೂರ್ತಿ ನಿಜ ವಿವರಣೆ ಅಲ್ಲ . ನಿಜಕ್ಕೂ ನನ್ನ ಮನೆ ಭೂಮಿಯೇ

' ಅಪರಾಧಿ.' ಇದು ನನ್ನ ಸಮೇತಸೂರ್ಯನ ಸುತ್ತ ವಾರ್ಷಿಕವಾಗಿ ಒಂದು ಪರಿಭ್ರಮ

ಆದರೆ ನನಗೆ ಇದು ಆಕಾಶ ಪರದೆಯ ಮುನ್ನೆಲೆಯಲ್ಲಿ ಸೂರ್ಯನ ಸಮಶಿಕ ಮತ್ತು ಸ

ಚಲನೆಯಾಗಿ ಅನುಭವಕ್ಕೆ ಬರುತ್ತದೆ. ಇದು ನಮಗೆಲ್ಲರಿಗೂ ಹುಟ್ಟಿನಿಂದಲೇ ಒದ


ನಕ್ಷತ್ರ ವೀಕ್ಷಣೆ

ಒಂದು ತೆರನಾದ ಕಣ್ಣಿಟ್ಟು , ಹೊನಲಿನ ದಿಶೆಯಲ್ಲಿ ರಭಸದಿಂದ ಸಾಗುವ ಹರಿ

ಕುಳಿತವನಿಗೆ ತಾನು ನಿಶ್ಚಲವಾಗಿದ್ದು ಉಭಯ ದಂಡೆಗಳಲ್ಲಿಯ ಗಿಡ ಮರಗಳು ಎದುರು ದಿಶೆಯಲ


ಸರಿಯುತ್ತಿರುವಂತೆ ಭಾಸವಾಗುವುದಿಲ್ಲವೇ , ಹಾಗೆ, ಈಶೋಪನಿಷತ್ತಿನಲ್ಲಿ ಹೇಳಿರುವಂತೆ

ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಮ್

ತತ್ತ್ವಂ ಪೂಷನ್ನ ಪಾವೃಣು ಸತ್ಯಧರ್ಮಾಯದೃಷ್ಟಯೇ


ಹೊನ್ನ ತಟ್ಟೆಯ ಕವಿದು, ಪೋಷಕನೆ, ಓ ಸೂರ್ಯ

ನಿನ್ನೊಳಿಹ ಸತ್ಯದಾನನವ ಮರೆಯಿಸಿಹೆ


ನನ್ನಿಯಿಂ ತೆಗೆ ಅದನು; ಸತ್ಯದೊಳ್ ಮನವೆನಗೆ

ಎನ್ನ ಕಣ್ಣದತೋರು; ಧರ್ಮಬೀಜವದು


- ಅನುವಾದ : ಡಿವಿಜಿ

ಹೇಗೂ ಇರಲಿ. ಸೂರ್ಯ ನನ್ನ ಸುತ್ತ ಪಶ್ಚಿಮ- ಪೂರ್ವ ದಿಶೆಯಲ್ಲಿ ಪರಿಭ್ರಮಿಸ

ಪರಿಭ್ರಮಣೆಯ ಅವಧಿ ೧ ವರ್ಷ ಎಂಬ ಪ್ರಾತಿಭಾಸಿಕ ಸತ್ಯವನ್ನು ಅಂಗೀಕರಿಸಿ ಸೂರ್ಯನ

ಗುರುತಿಸಲು ಮುಂದಾಗುತ್ತೇನೆ. ಪುನಃ ಪರೋಕ್ಷ ವಿಧಾನಕ್ಕೆ ಶರಣು: ಸೂರ್ಯನ

ಉದಯಾಸ್ತ ಬಿಂದುಗಳ ಸಮೀಪದಲ್ಲಿ ಉದಯಪೂರ್ವ ಮತ್ತು ಅಸಮಾನಾನಂ

ನಕ್ಷತ್ರ ಚಿತ್ರಗಳ ಮೇಲೆ ಲಕ್ಷ್ಯ ಕೇಂದ್ರಿಕರಿಸುತ್ತೇನೆ.

ದೀರ್ಘಕಾಲಿಕ ವಿಶ್ಲೇಷಣೆಯ ಫಲವಾಗಿ ಪ್ರಕಟವಾಗುವ ಸತ್ಯ ತುಸು ಅಚ್ಚರಿ ಉಂ

ಮಾಡುತ್ತದೆ.

ಸೂರ್ಯನ ವಾರ್ಷಿಕ ಪಥ ವಿಷುವತ್ತ ಅಲ್ಲ

ವಿಷುವದ್ವತ್ತಕ್ಕೆ ಸಮಾಂತರವಾಗಿರುವ ವೃತ್ತವೂ ಅಲ್ಲ


* ಬದಲು, ವಿಷುವದ್ಯಕ್ಕೆ ಮಾಲಿಕೊಂಡಿರುವ ಒಂದು ವೃತ್ತ

* ಇದರ ಕೇಂದ್ರವೂ ನಾನೇ

ಸೌರಕಕ್ಷೆಯ ಹೆಸರು ಕ್ರಾಂತಿವೃತ್ತ , ಇದು ವಿಷುವದ್ಯಕ್ಕೆ ೨೩೦೨೭' (ಸ್ಕೂಲವ


೨೩ .೫ ) ಬಾಗಿಕೊಂಡಿದೆ. ಈ ವೃತ್ತಗಳು ಒಂದು ಜೊತೆ ವ್ಯಾಸೀಯ ವಿರುದ್ದ ಬಿಂದುಗಳಲ್ಲ

ಛೇದಿಸುತ್ತವೆ ( ಚಿತ್ರ ೧೫).

ಖಗೋಳದಲ್ಲಿ ಪಶ್ಚಿಮ -ಪೂರ್ವ ದಿಶಾಸರಿತಕ್ಕೆ ಮಾರ್ಗಚಲನೆ ಎಂದೂ ಪೂರ್ವ- ಪಶ್ಚಿಮ

ದಿಶಾಸರಿತಕ್ಕೆ ವಕ್ರಚಲನೆ ಎಂದೂ ಹೆಸರು. ಚಿತ್ರದಲ್ಲಿ ಇವನ್ನು ಅನುಕ್ರಮವಾಗಿ ಅಪ್ರದಕ್ಷಿಣ ಮ

ಪ್ರದಕ್ಷಿಣ ದಿಶೆಗಳಿಂದ ಸೂಚಿಸುತ್ತೇವೆ.

ಕ್ರಾಂತಿವೃತ್ತದ ನೇರ ಮಾರ್ಗಚಲನೆಯಲ್ಲಿರುವಾಗ ವಿಷುವದ್ಭತ್ತವನ್ನು ಒಮ್ಮೆ ದಕ್ಷಿಣದಿ

ಉತ್ತರಕ್ಕೂ ಒಮ್ಮ ಉತ್ತರದಿಂದ ದಕ್ಷಿಣಕ್ಕೂ ದಾಟುತ್ತೇವೆ. ಮೊದಲನೆಯ ನೆಲೆ ಮೇಷ ಬಿಂದ

ಅಥವಾ ವಸಂತವಿಷುವ, ಎರಡನೆಯದು ತುಲಾಬಿಂದು ಅಥವಾ ಶರದ್ವಿಷುವ, ಒಟ್ಟಾ

ವಿಷುವದ್ರಿಂದುಗಳು. ವಿಷುವದ್ರಿಂದುಗಳ ಜೋಡಣೆ ಖಗೋಳದ ಒಂದು ವ್ಯಾಸ. ಇದರ ನ

ಖಗೋಳ ಕೇಂದ್ರವಾದ ' ನಾನು'(ವೀಕ್ಷಕ).


೨೨
ನಕ್ಷತ್ರ ವೀಕ್ಷಣೆ

ಸೂರ್ಯ ವಸಂತವಿಷುವಕ್ಕೆ ಮಾರ್ಚ್ ೨೧/೨೨ ರಂದೂ ಶರದ್ವಿಷುವಕ್ಕೆ ಸೆಪ

೨೩ರಂದೂ ಬರುತ್ತದೆ. ಆ ದಿನಾಂಕಗಳಂದು ಸೂರ್ಯನ ನೆಲೆ ವಿಷುವದ್ವತ್ತದ ಮ

ಇರುವುದರಿಂದ ಉದಯಾಸ್ತಗಳು ಕರಾರುವಾಕ್ಕಾಗಿ ಪೂರ್ವ, ಪಶ್ಚಿಮ ಬಿಂದುಗಳಲ್ಲಿಯೇ

ಮತ್ತು ದೈನಂದಿನ ಪಥಗಳು ವಿಷುವದ್ಯದಲ್ಲಿ ಐಕ್ಯವಾಗಬೇಕು ಎಂಬುದು ನನ್ನ ನಿರೀಕ್ಷ

ವೀಕ್ಷಣೆ ಇದನ್ನು ಸ್ಥಿರಿಕರಿಸುತ್ತದೆ.

ಉತ್ತರಗೋಳಾರ್ಧ
ಜೂನ್ ೨೧ .

೨೩ . ೫° R

ಡಿಸೆಂಬರ್ ೨೧ ಮ - ದಕ್ಷಿಣಗೋಳಾರ್ಧ

ಚಿತ್ರ ೧೫. ವೀ :ವೀಕ್ಷಕ, ವಿವೃ :ವಿಷುವದ್ವತ್ತ. ಮವಕಶಮ :ಕ್ರಾಂತಿವೃತ್ತ . ಮ : ಮಕರಾಯನ ಬಿಂದು (ಉತ್ತರಾಯಣ

ಬಿಂದು), ಕಟಕರ್ಕಾಯನ ಬಿಂದು ( ದಕ್ಷಿಣಾಯನ ಬಿಂದು), ವ: ವಸಂತವಿಷುವ ಬಿಂದು. ಶ: ಶರದ್ವಿಷುವ ಬ

ಧ್ರು .ಧ್ರುವನಕ್ಷತ್ರ, ವಿಷುವದ್ಯ ಮತ್ತು ಕ್ರಾಂತಿವೃತ್ತ ತಲಗಳ ನಡುವಿನ ಬಾಗು-ಕೋನ ವೃವೀಕ= ಸುಮ

ಇಪ್ಪತ್ತಮೂರೂವರೆ ಡಿಗ್ರಿ .

ಹಾಗಾದರೆ ನಮ್ಮ ಅನುಭವಕ್ಕೆ ಬರುವಂತೆ ಜೂನ್ ೨೧/ ೨೨ ಮತ್ತು ಡಿಸೆಂಬರ್ ೨೧/ ೨೨

ದಿನಾಂಕಗಳ ವೈಶಿಷ್ಟ್ಯ ಏನು ? ಜೂನ್ ೨೧/ ೨೨ ರಂದು ಸೂರ್ಯ ವಿಷುವದ್ಭತ್ತದಿಂದ

ಉತ್ತರದಲ್ಲಿರುವುದು. ಆ ತನಕ ಉತ್ತರಾಭಿಮುಖ ಯಾತ್ರೆ ಹೋದಸೂರ್

ಅಲ್ಲಿ ನಿಂತು reverse gear ಹಾಕಿ ವಿಪರ್ಯಯ ಚಲನೆ ತೊಡಗುವುದೋ ಎಂಬಂತೆ. ಡಿಸೆ

೨೧/ ೨೨ರಂದು ತದ್ವಿರುದ್ದ ಪರಿಸ್ಥಿತಿ. ದಕ್ಷಿಣಾಭಿಮುಖ ಪರ್ಯಟನೆಯಲ್ಲಿ ಅತಿ

ಸೂರ್ಯ ಮತ್ತೆ ಉತ್ತರಮುಖಿ ಆಗುವುದು ಅಂದು. ಸೂರ್ಯಲೋಲಕ ವಿಷುವದ್ಯದ

ಪಾರ್ಶ್ವಗಳಲ್ಲಿಯೂ ಸಮದೂರ ಆಂದೋಳಿಸುವಂಥ ದೃಶ್ಯವಿದು.. ( ಚಿತ್ರ ೧೨ನ್ನು ೧೩

೧೪ರ ಜೊತೆಹೋಲಿಸಿ ನೋಡಬೇಕು). ಜೂನ್ ೨೧/ ೨೨ ದಕ್ಷಿಣಾಯನಾರಂಭ ದಿನ, ಡಿಸೆಂಬರ

೨೧/ ೨೨ ಉತ್ತರಾಯಣಾರಂಭ ದಿನ. ಸೂರ್ಯನ ಈ ವಿಶಿಷ್ಟ ಸ್ಥಾನಗಳಿಗೆ ಕರ್ಕಾಯನ ಬಿಂದ

ಮತ್ತು ಮಕರಾಯನ ಬಿಂದು ಎಂದೂ ಒಟ್ಟಾಗಿ ಇವುಗಳಿಗೆ ಅಯನ ಬಿಂದುಗಳೆಂದ


ವಿರಾಟ್ಪುರುಷನ ಉತ್ತರೀಯ

ನಕ್ಷತ್ರ ಚಿತ್ರಾಂಕಿತಾಕಾಶದಲ್ಲಿ ಸೂರ್ಯನ ಸಂಚಾರಪಥ ತೀರ ಇಕ್ಕಟ್

ಅಥವಾ ಒಡ್ಯಾಣಕ್ಕೆ ಸೀಮಿತವಾಗಿದೆ. ಉದಾಹರಣೆಗೆ ಸೂರ್ಯ ಎಂದೂ ಸಪ್ತರ್

ಉತ್ತರಕ್ಕೆ ಅಥವಾ ತ್ರಿಶಂಕುವಿನಷ್ಟು ದಕ್ಷಿಣಕ್ಕೆ ಸುಳಿಯುವುದಿಲ್ಲ .

ಸೂರ್ಯನ ವಾರ್ಷಿಕ ಪರಿವ್ರಜನದ ಹಿನ್ನೆಲೆ ನಕ್ಷತ್ರ ಚಿತ್ರಗಳನ್ನು ಗುರುತಿಸಲಾ

ಆಕಾರ ಬೇಕಾಬಿಟ್ಟಿ ವಿತರಣೆಯಲ್ಲಿ ಕ್ರಮವಿಲ್ಲ . ಪರಸ್ಪರ ಅಂತರಗಳಲ್ಲಿ ಅಸಮತೆಯೇ ನಿಯಮ

ಆದರೆ ವಕ್ರತೆಯಲ್ಲಿ ಸಮಮಿತಿ, ಗೋಜಲಿನಲ್ಲಿ ಸಾಂಗತ್ಯ ಮತ್ತು ಅಸಮತೆಯಲ್ಲಿ ಕ್ರಮ

ಅದ್ಭುತ ಸೃಷ್ಟಿಶೀಲ ಬುದ್ದಿ ಮಾನವನಿಗಿದೆ. ತನ್ನ ಬದುಕನ್ನು ಸುಗಮಗೊಳಿಸಲು

ವಿದ್ಯಮಾನಗಳಲ್ಲಿ ಕ್ರಮಬದ್ಧತೆ ಕಂಡು ಇದನ್ನು ಅರ್ಥವಿಸಲು ಹಲವಾ


ವಿಧಿಗಳನ್ನೂ ಮಂಡಿಸಿ ಪಾಲಿಸಿಕೊಂಡು ಬಂದಿದ್ದಾನೆ. ನಮ್ಮ ಇಂದಿನ ನಾಗರಿಕ ಜೀವನ ಈ

ಸಂಪ್ರದಾಯಗಳ ಮೇಲೆ ನಿಂತಿದೆ.

ಮಾನವನ ವೀಕ್ಷಣನಿರತ. ಪ್ರಯೋಗಪರಿಣತ ಮತ್ತು ತರ್ಕದೀಪ್ತ ಮತಿ ನೈಸ

ವಿದ್ಯಮಾನಗಳ ತಳರೂಪಿಕೆಯನ್ನು ನಿರಪೇಕ್ಷವಾಗಿ ( ಎಂದರೆ ಈ ಕ್ರಿಯೆಯಲ್ಲಿ ಎಲ್ಲವೂ ನಿಸ

" ನಾನು " ಅಂಶ ಅದರ ಅಧ್ಯಯನದಲ್ಲಿ ನಿರತವಾಗಿರುವ ರೂಪಗುಣ ಭಾವರಹಿತ ಆದರೆ ಸಂವಹನ

ಶೀಲ ಬುದ್ಧಿಯುಕ್ತ ವ್ಯಕ್ತಿ ಮಾತ್ರ ) ಅನ್ವೇಷಿಸುವಾಗ ವಿಜ್ಞಾನ ಮೈದಳೆಯುತ್ತದೆ. ಮಾನವಮ

ನಿಸರ್ಗ ಅಂತರ ಕ್ರಿಯೆಯ ಶಿಶುವಿದು. ಇದರ ತಳದಲ್ಲಿ ಮೂರು ಅಭಿಗೃಹೀತಗಳಿವೆ :

೧. ವಿಶ್ವದಲ್ಲಿ ಕ್ರಮವಿದೆ.

೨. ಈ ಕ್ರಮವನ್ನು ಗುರುತಿಸಿ ಅರ್ಥವಿಸಿ ಸಂವಹನಿಸುವ ಸಾಮರ್ಥ್ಯ ಮಾನವ

" ಭಗವಂತ ಕಪಟದ್ರೂತವಾಡುವುದಿಲ್ಲ ." ಇದು ಐನ್‌ಸ್ಟೈನರ ಪ್ರಸಿದ್ಧ ಸೂಕ್ತಿ.

ಇಲ್ಲಿ ಭಗವಂತ ಎಂದರೆ ಸಾಕ್ಷಾತ್ ನಿಸರ್ಗವೇ . ನಿಸರ್ಗಕ್ಕೆ ಮನವಿಲ್ಲ , ಮರ

ಇಲ್ಲ ಎಂಬುದು ಇಂಗಿತ.

ಸೂರ್ಯನಮ್ಮ ಸುತ್ತ ಒಂದು ಪರಿಭ್ರಮಣೆ ಮುಗಿಸುವಷ್ಟರಲ್ಲಿ ಸುಮಾರು ೧೨

ಅಥವಾ ಹುಣ್ಣಿಮೆ ಸಂದಿರುತ್ತವೆ. ಎರಡು ಆಸನ್ನ ಅಮಾವಾಸ್ಯೆಗಳ ನಡುವಿನ ಅವಧಿ ತಿಂಗ

ಇದು ಸುಮಾರು ೩೦ ದಿವಸಗಳ ಅವಧಿ. ಹೀಗೆ ೧೨ ಮತ್ತು ೩೦ ಸಂಖ್ಯೆಗಳಿಗೆ ವಿಶೇಷ ಪ್ರಾ


ಒದಗಿತು .

ಸೌರಕಕ್ಷೆಯನ್ನು ೧೨ ಸಮಭಾಗಗಳಾಗಿ ಮಾಡಿ, ಒಂದೊಂದು ವಿಭಾಗದ ಹಿನ್ನೆಲ

ಪುಂಜದ ಹೆಸರಿನಿಂದ ಆ ವಿಭಾಗವನ್ನು ನಿರ್ದೇಶಿಸಲಾಯಿತು. ಇವೇ ಮೇಷ, ವ

ಕರ್ಕಟಕ , ಸಿಂಹ , ಕನ್ಯಾ , ತುಲಾ, ವೃಶ್ಚಿಕ, ಧನು , ಮಕರ, ಕುಂಭ, ಮೀನ - ದ್ವಾದಶರಾಶಿಗ

( ಚಿತ್ರ ೧೪).
ನಕ್ಷತ್ರ ವೀಕ್ಷಣೆ

- ಸೂರ್ಯ ಯಾವ ನಕ್ಷತ್ರ ಚಿತ್ರದ ಮುನ್ನೆಲೆಯಲ್ಲಿರುವುದೋ , ಅಂದರೆ ಸೂರ್

ಯಾವ ನಕ್ಷತ್ರಗೃಹದಲ್ಲಿ ಕಾಣಬಹುದೋ , ಆ ಚಿತ್ರದ ಹೆಸರಿನಿಂದ ಆ ಮಾಸವನ್ನು ನಿರ

ವಾಡಿಕೆ. ಹೀಗೆ ಮೇಷ ಗೃಹದಲ್ಲಿ ಸೂರ್ಯ ಇರುವ ಅವಧಿ ಮೇಷ ಮಾಸ , ವೃಷಭ ಗೃಹದಲ್ಲ

ಇರುವ ಅವಧಿ ವೃಷಭ ಮಾಸ, ಇತ್ಯಾದಿ. ಇವು ಸೌರ ಮಾಸಗಳು.

ವಸ್ತುತಃ ಮೇಷಾದಿ ನಕ್ಷತ್ರ ಚಿತ್ರಗಳು ಸಪ್ತರ್ಷಿಮಂಡಲ, ಕುಂತೀ ಮುಂತಾ

ನಕ್ಷತ್ರಪುಂಜಗಳೇ ಆದರೂ ಅವು ನಮ್ಮ ಸೂರ್ಯನ ಖಾಸಾ ಮುಸಾಫರ ಖಾನೆಗ

ಅವುಗಳಿಗೆ ನಕ್ಷತ್ರರಾಶಿಗಳು ಅಥವಾ ಸರಳವಾಗಿ ರಾಶಿಗಳು ಎಂಬ ವಿಶೇಷ ಅಭಿಧಾನ ಕೂ

- ನಮ್ಮ ನಿತ್ಯ ಸಂಚಾರಪಥದ ಆಸುಪಾಸಿನ ನೆಲಗುರುತುಗಳು ನಮಗೆ ಮುಖ್ಯವಾಗುವಂ

ಮೇಷದಿಂದ ಮೀನದವರೆಗಿನ ದ್ವಾದಶರಾಶಿಗಳು ರಚಿಸುವ ಒಡ್ಯಾಣಕ್ಕೆ ರಾಶಿಚಕ್ರವೆಂದ

ಸೂರ್ಯ ಈ ಚಕ್ರದಿಂದ ಆಚೆ ಈಚೆ ಕದಲುವುದಿಲ್ಲ . ( ಅಂತೆಯೇ ಚಂದ್ರ ಮತ್ತು

ಕೂಡ.)

ಗಣನೆಯ ಸೌಕರ್ಯಕ್ಕೋಸ್ಕರ ರಾಶಿಚಕ್ರವನ್ನು ಗಣಿತೀಯವಾಗಿ ವ್ಯಾಖ್ಯಿಸಿ ನಿರ್ಧರಿಸಲಾ

ಅಂತೆಯೇ ಪ್ರತಿಯೊಂದು ರಾಶಿಯ ವ್ಯಾಪ್ತಿಯನ್ನು ಕೂಡ ಇದರ ಪ್ರಕಾರ ರಾಶಿಚಕ್ರದ

೧೮. ರಾಶಿಯ ವ್ಯಾಪ್ತಿ ೩೦°. ಆದ್ದರಿಂದ ಸೂರ್ಯ ಎಂಬುದು ರಾಶಿಚಕ್ರದ ಇರುಕಿನೊಳಗೆ

ಸುತ್ತ ಸತತವಾಗಿ ಪರಿಭ್ರಮಿಸುತ್ತಿರುವ ಬೆಳಕಿನ ಉಂಡೆ.

ರಾಶಿಚಕ್ರವನ್ನು ಸಮದ್ವಿಭಾಗಿಸುವ ವೃತ್ತವೇ ಕ್ರಾಂತಿ ವೃತ್ತ .

ವಿರಾಟ್ಪುರುಷ ತನ್ನ ಮುಡಿಯಲ್ಲಿ ಧ್ರುವನಕ್ಷತ್ರವನ್ನು ಧರಿಸಿರುವ ಚಿತ್ರ ಕಲ್ಪಿಸಿಕ

ವಿಷುವದ್ವ ಆತನ ಮೇಖಲೆಯೂ ರಾಶಿಚಕ್ರ ಉತ್ತರೀಯವೂ ಆಗುತ್ತವೆ. ಪುರುಷ ಸೂ

ಶ್ಲೋಕ ನೆನಪಿಗೆ ಬರುತ್ತದೆ:

ತಸ್ಮಾದ್ವರಾಡಜಾಯತ ವಿರಾಜೋ ಅಧಿ ಪೂರುಷಃ

ಸಜಾತೋ ಅತ್ಯರಿಚ್ಯತ ಪಶ್ಚಾದ್ದೂಮಿಮಥೋ ಪುರಃ

ಅವನಿನೊಗೆದುದು ವಿರಾಟ್ ; ಆ ವಿರಾಜನೆ ರೂಪ

ವಿವಿಧತೆಯಿನೆಸೆವನ್ ; ಅವನಧಿಕನೆಲ್ಲ ರ್ಗ೦

ಅವನುದಿಸಿ ಹರಡಿ ಭೂಗೋಲವೆಲ್ಲವ ದಾಟಿ

ಭುವನದೆಲ್ಲೊಡಲುಗಳ ಹೊಕ್ಕು ಮೀರಿಹನು

ಅನುವಾದ : ಡಿವಿಜಿ

ಬಾನಿನಲ್ಲಿ ಹೆಗ್ಗುರುತುಗಳು ಮತ್ತು ಗಡಿಗೆರೆಗಳು

ಇಲ್ಲಿಯವರೆಗೆ ಕಲೆಹಾಕಿರುವ ಪರಿಕಲ್ಪನೆಗಳ ಉಗ್ರಾಣವನ್ನು ಒಮ್ಮೆ ಪರಿಶೀಲ

ಅಗತ್ಯ . ಏಕೆಂದರೆ ಈ ಪರಿಕಲ್ಪನೆಗಳನ್ನು ಆಧರಿಸಿ ನಕ್ಷತ್ರ ಪರಿಚಯಗಳಿಸುವುದು ನನ್ನ ಉದ್ದ

ಖಮಧ್ಯ : ನಾನು ನಿಂತಲ್ಲಿ ನನ್ನ ನೆತ್ತಿ ಮೇಲಿನ ಆಕಾಶಬಿಂದು ಇದು ವೀಕ್ಷಕನ ಸ್


ಆಕಾಶದಲ್ಲಿ ' ನನ್ನ ' ಖಮಧ್ಯ ಗುರುತಿಸಬಹುದೇ ವಿನಾ ಸರ್ವಸಮ್ಮತ ಖಮಧ್ಯ ಅಲ್ಲ (

ಏಕೆಂದರೆ ಅಂಥ ಒಂದು ಬಿಂದುವೇ ಇಲ್ಲ !


೨ ೫
ನಕ್ಷತ್ರ ವೀಕ್ಷಣೆ

ಹಾರಿಜ: ಇದುಕೂಡ ವೀಕ್ಷಕನ ಸ್ಥಾನಾವಲಂಬಿ. ಖಮಧ್ಯದಿಂದ ಹಾರಿಜದ ಪ್ರತಿಯ


O
ಬಿಂದುವಿನಕೋನಾಂತರವೂ ೯೦ . ಖಗೋಳವನ್ನು ಇದುಗೋಚರ ಮತ್ತು ಅಗೋಚರ ಅರ

ವಿಭಾಗಿಸುತ್ತದೆ ( ಚಿತ್ರ ೨).

ಧ್ರುವನಕ್ಷತ್ರ : ಉತ್ತರ ಧ್ರುವಬಿಂದುವಿನ ತೀರ ಸನಿಹದಲ್ಲಿದ್ದು ಈ ಬಿಂದುವನ್ನು ಬ

ಗುರುತಿಸಲು ನೆರವಾಗುವ ಮಂದಪ್ರಕಾಶದ ತಾರೆ . ಖಗೋಳದಲ್ಲಿರುವ ಎರಡು ಸ್ಥಿರ ಬಿಂದುಗಳ


ಪೈಕಿ ಒಂದು. ವೀಕ್ಷಕನ ಸ್ಥಾನಾವಲಂಬಿ ಅಲ್ಲ ( ಚಿತ್ರ ೨, ೪, ೫, ೬), ಇನ್ನೊಂದು ಸ್ಟಿರಬ

ಉತ್ತರ ಗೋಳಾರ್ಧ ನಿವಾಸಿಗಳಾಗಿರುವ ನಮಗೆ ಅಗೋಚರ. ಧ್ರುವನಕ್ಷತ್ರವನ್ನು ವೀಕ್ಷಕನಿಗೆ


ಸೇರಿಸುವ ರೇಖೆಯನ್ನು - ಇದು ಖಗೋಳದ ಅಕ್ಷ - ವಿಸ್ತರಿಸಿದರೆ, ಇದು ಮತ್ತೆ ಖಗೋಳವನ

ಸಂಧಿಸುವ ಬಿಂದುವಿದು : ದಕ್ಷಿಣ ಧ್ರುವ ಬಿಂದು.

ಅಕ್ಷಾಂಶ = ಧ್ರುವನಕ್ಷತ್ರದ ಕೋನೋನ್ನತಿ, ವೀಕ್ಷಕನ ಸ್ಥಾನ ಬದಲಾದಂತೆ ಅಕ್ಷಾಂಶವ

ಇದರೊಂದಿಗೆ ಧ್ರುವ ನಕ್ಷತ್ರದಕೋನೋನ್ನತಿಯೂ ಬದಲಾಗುತ್ತವೆ ( ಚಿತ್ರ ೯ ).

ಯಾಷ್ಟೋತ್ತರ : ಇದು ವೀಕ್ಷಕನ ಸ್ಟಾನಾವಲಂಬಿ, ಹಾರಿಜದಂತೆ. ಇದರ ಮೇಲ

ಪ್ರತಿಯೊಂದು ಬಿಂದುವಿನಿಂದ ಪೂರ್ವ ಮತ್ತು ಪಶ್ಚಿಮ ಬಿಂದುಗಳ ಕೋನಾಂ

ಖಗೋಳವನ್ನು ಇದು ಪೂರ್ವ ಮತ್ತು ಪಶ್ಚಿಮ ಅರ್ಧಗಳಾಗಿ ವಿಭಾಗಿಸುತ್ತ

ಆಕಾಶಕಾಯವೂ ಅದರ ಮೂಡು-ಕಂತು ಚಲನೆವೇಳೆ ಪೂರ್ವಕಾಶದಲ್ಲಿ ಹಾರಿಜದ ಕೆಳಗಿನಿಂ

ಮೇಲೇರಿ ನಡುಬಾನಿನಲ್ಲಿ ಯಾಷ್ಟೋತ್ತರ ದಾಟಿ ಪಶ್ಚಿಮಾಕಾಶದಲ್ಲಿ ಹಾರಿಜದ ಕೆಳಕ್ಕೆ

( ಚಿತ್ರ ೨, ೧೧, ೧೨).

ಉತ್ತರ, ಪೂರ್ವ, ದಕ್ಷಿಣ, ಪಶ್ಚಿಮ : ಹಾರಿಜದ ಮೇಲಿರುವ ದಿಕ್ಸಿಂದುಗಳು. ಇವು ಕೂ

ವೀಕ್ಷಕನ ಸ್ಥಾನಾವಲಂಬಿಗಳು. ಯಾಷ್ಟೋತ್ತರ ಮತ್ತು ಹಾರಿಜ ಉತ್ತರ, ದಕ್ಷಿಣ ಬಿಂದುಗಳಲ್ಲಿಯೂ

ವಿಷುವದ್ಯ ಮತ್ತು ಹಾರಿಜ ಪೂರ್ವ ಪಶ್ಚಿಮ ಬಿಂದುಗಳಲ್ಲಿಯೂ ಸಂಧಿಸುತ್ತವೆ

ವಿಷುವದ್ವ : ಖಗೋಳದಲ್ಲಿ ಅಂಕಿತವಾಗಿರುವ ಒಂದು ಸ್ಥಿರ ವೃತ್ತ , ಇದರಲ್ಲಿಯ

ಪ್ರತಿಯೊಂದು ಬಿಂದುವಿನಿಂದ ಉತ್ತರ ಮತ್ತು ದಕ್ಷಿಣ ಧ್ರುವ ಬಿಂದುಗಳ ಕೋನಾ

೯೦°, ಖಗೋಳವನ್ನು ಇದು ಉತ್ತರ ಮತ್ತು ದಕ್ಷಿಣ ಅರ್ಧಗಳಾಗಿ ಸಮದ್ವ

ವೀಕ್ಷಕನನ್ನು ಧ್ರುವನಕ್ಷತ್ರಕ್ಕೆ ಜೋಡಿಸುವ ಅಕ್ಷ ವಿಷುವದ್ವತ್ತದ ಸಮತಳಕ್ಕೆ ಲಂಬವಾಗಿದ

ಆಕಾಶಕಾಯಗಳ ದೈನಂದಿನ ಪಥಗಳು ಒಂದೋ ವಿಷುವತ್ತ ಇಲ್ಲವೇ ಇದಕ್ಕೆ ಸಮಾಂತರ

ವೃತ್ತಗಳು ( ಚಿತ್ರ ೧೧ , ೧೨).

ಕ್ರಾಂತಿವೃತ್ತ : ಇದು ಕೂಡ ಖಗೋಳದಲ್ಲಿ ಅಂಕಿತವಾಗಿರುವ ಒಂದು ಸ್ಥಿರ ವೃತ್ತ, ಸೂರ್ಯ

ಇದರಲ್ಲಿ ಪಶ್ಚಿಮ -ಪೂರ್ವ ( ಚಿತ್ರದಲ್ಲಿ ಅಪ್ರದಕ್ಷಿಣ) ದಿಶಾಗಾಮಿಯಾಗಿ ( ಮಾರ್ಗಚಲನೆ) ಒಂದ

ವರ್ಷದಲ್ಲಿ ಒಂದು ಸುತ್ತು ಪೂರ್ತಿಗೊಳಿಸುತ್ತದೆ. ವಿಷುವದ್ಯವನ್ನು ಕ್ರಾಂತಿವೃತ್ತ ಎರಡ

ಬಿಂದುಗಳಲ್ಲಿ ಸಂಧಿಸುತ್ತದೆ : ವಸಂತವಿಷುವ, ಶರದ್ವಿಷುವ ( ಚಿತ್ರ ೧೫).


ನಕ್ಷತ್ರ ವೀಕ್ಷಣೆ

ವಿಷುವದ್ರಿಂದುಗಳು, ಅಯನಬಿಂದುಗಳು : ಕ್ರಾಂತಿವೃತ್ತದಲ್ಲಿ ಸೂರ್ಯ ಪಶ

( ಚಿತ್ರದಲ್ಲಿ ಅಪ್ರದಕ್ಷಿಣ) ದಿಶೆಯಲ್ಲಿ ಸರಿಯುವಾಗ, ಅಂದರೆ ಮಾರ್ಗಚಲನೆಯಲ್ಲಿರ

ವಿಷುವದ್ಯವನ್ನು ದಕ್ಷಿಣದಿಂದ ಉತ್ತರಕ್ಕೆ ವಸಂತವಿಷುವದಲ್ಲಿಯೂ ಉತ್ತರದ

ಶರದ್ವಿಷುವದಲ್ಲಿಯೂ ಅಡ್ಡ ಹಾಯುತ್ತದೆ. ಒಟ್ಟಾಗಿ ಇವು ವಿಷ

ವಿಷುವದ್ವತ್ತದಿಂದ ಅತ್ಯುತ್ತರಕ್ಕಿರುವ ಕ್ರಾಂತಿವೃತ್ತಬಿಂದು ಕರ್ಕಾಯನ, ಅ

ಕ್ರಾಂತಿವೃತ್ತ ಬಿಂದು ಮಕರಾಯನ. ಒಟ್ಟಾಗಿ ಇವು ಅಯನ ಬಿಂದುಗಳು. ಈ ನಾಲ್ಕು ಬಿಂ

ಕ್ರಾಂತಿವೃತ್ತವನ್ನು ನಾಲ್ಕು ಪಾದಗಳಾಗಿ ವಿಭಾಗಿಸುತ್ತವೆ- ದಿಗ್ವಿಂ

ವಿಭಾಗಿಸುವಂತೆ , ಯಾವುದೇ ಎರಡು ಆಸನ್ನ , ಬಿಂದುಗಳ ನಡುವಿನ ಕೋನಾಂತ

೧೫).

ದ್ವಾದಶ ರಾಶಿಗಳು :ಮೇಷದಿಂದ ಮೀನದವರೆಗಿನ ೧೨ ನಕ್ಷತ್ರ ಪುಂಜಗಳು, ಕ್ರಾಂತಿವೃತ್ತ

ಒಳಗೊಂಡಿದ್ದು ಇದರ ಉಭಯ ಪಾರ್ಶ್ವಗಳಲ್ಲಿ ಅಡಕವಾಗಿವೆ. ಅಗಲ ಸ್ಕ

ಸೂರ್ಯನ ವಾರ್ಷಿಕ ಪರಿಭ್ರಮಣೆಯ ದಿಶೆಗೆ ಹೊಂದುವಂತೆ ಇವನ್ನು ಪಶ್ಚಿಮ- ಪೂರ್

ಅಪ್ರದಕ್ಷಿಣ) ದಿಶೆಯಲ್ಲಿ ಗುರುತಿಸಿ ಹೆಸರಿಸಿದೆ ( ಚಿತ್ರ ೧೪).

ರಾಶಿಚಕ್ರ : ದ್ವಾದಶ ರಾಶಿಗಳನ್ನು ಒಳಗೊಂಡಿರುವ ೧೮ ಅಗಲದ ಪಟ್ಟಿ

ಸಮದ್ವಿಭಾಜಕವೇ ಕ್ರಾಂತಿವೃತ್ತ ( ಚಿತ್ರ ೧೫).

ಧ್ರುವನಕ್ಷತ್ರದ ಉನ್ನತಿ ಮತ್ತು ವಿಷುವದ್ಭತ್ತದ ವಿನ್ಯಾಸ ವೀಕ್ಷಕನ

ಬದಲಾಗುತ್ತವೆ ನಿಜ. ಆದರೆ ಇದು ಸ್ವತಃ ಇವುಗಳಲ್ಲೇ ಆಗುವ ಯಾವುದೇ ವ್ಯತ

ಎಂಬುದನ್ನು ಗಮನಿಸಬೇಕು. ಉದಾಹರಣೆಗೆ ವಿಧಾನಸೌಧವ , ಚಾಮುಂ

ಕುರಿತಂತೆ ನನ್ನ ಮನಃಪಟಲದಲ್ಲಿ ಮೂಡುವ ಚಿತ್ರಗಳು ನಾನು ಅವನ್ನು ಕುರಿ

ವಿನ್ಯಾಸಗಳಿಂದ ಅಂದರೆ ನನ್ನ ಸ್ಥಾನಪಲ್ಲಟದಿಂದ ವ್ಯತ್ಯಯವಾಗಿಯೇ ಆಗುತ್ತವೆ ನಿಜ.

ವ್ಯತ್ಯಯಗಳಿಗೆ ಕಾರಣ ನಾನು, ನನ್ನ ನಿಲವು. ಅವು ಅಲ್ಲ . ಖಮಧ್ಯ , ಹಾರಿಜ ಮತ್ತು ಯಾಷ್

ಕೇವಲ ನನ್ನ ಕಲ್ಪನೆಯ ಕೂಸುಗಳು. ವ್ಯಕ್ತಿಯಿಂದ ವ್ಯಕ್ತಿಗೆ( ಸ್ಥಳದಿಂದ ಸ್ಥಳಕ್ಕೆ ) ಅವು ಬದಲಾ

ಧ್ರುವಬಿಂದುಗಳು, ವಿಷುವದ್ವತ್ತ, ಕ್ರಾಂತಿವೃತ್ತ ಮತ್ತು ರಾಶಿ ಚಕ್ರ ಹೀಗಲ್ಲ . ಭೂಮ

ಕುರಿತಂತೆ ಇವುಗಳಿಗೆ ಸ್ವತಂತ್ರ ಅಸ್ತಿತ್ವ ಉಂಟು. ಭೂಮಿಯಲ್ಲಿ ವ್ಯಕ್ತಿಯ ನೆಲೆ ಎಲ

ಬದಲಾಗವು. ಉದಾಹರಣೆಗೆ ನಕ್ಷತ್ರ ಚಿತ್ರಗಳು ಭೂಮಿಯಲ್ಲಿಯ ಸರ್ವರಿಗೂ ಒಂದೇ ಆ

ಕಾಣುವುವೇ ಹೊರತು ಲಂಡನ್ನಿನಲ್ಲಿ ನಿಂತವನಿಗೆ ಒಂದು ರೀತಿ, ನ್ಯೂಯಾರ್ಕಿನಲ್ಲಿ ನಿಂ

ಇನ್ನೊಂದು ರೀತಿ, ಮಡಿಕೇರಿಯಲ್ಲಿ ನಿಂತವನಿಗೆ ಬೇರೊಂದು ರೀತಿ ಅಲ್ಲ . ವಿನ್ಯಾಸ

ಬದಲಾಗುತ್ತವೆ.

ಆಕಾಶಪಟ - ಬಾಂದಳದ ಸಂಕ್ಷಿಪ್ತ ಚಿತ್ರ

ಇರುಳು ಕವಿದಿದೆ. ಸಪ್ತರ್ಷಿಮಂಡಲ ಪೂರ್ಣ ವೈಭವದಿಂದ ಕಂಗೊಳಿಸುತ್ತಿದೆ.

ಜೊತೆ ಸಲ್ಲಾಪಸುಖಿ ಆಗಿದ್ದೇನೆ. ಆ ಚಿತ್ರವನ್ನು ಕಾಗದದಲ್ಲಿ ಗುರುತು ಹಾಕಬೇಕ


ನಕ್ಷತ್ರ ವೀಕ್ಷಣೆ


3

ಭೂಮಿ
ಗಗನ ಪೂ + +

==

ಚಿತ್ರ ೧೬ . ಗಗನಪಟವನ್ನು ತಲೆ ಮೇಲೆ, ಪಟ ನಮಗೆ ಕಾಣುವಂತೆ ಕೆಳಮೊಗವಾಗಿ ಹಿಡಿದು, ದಿಶೆಗಳನ್ನ

ಹೊಂದಿಸಬೇಕು. ಭೂಪಟವನ್ನು ನೆಲದ ಮೇಲೆ, ಪಟ ನಮಗೆ ಕಾಣುವಂತೆ ಮೇಲೋಗವಾಗಿ ಇಟ್ಟು ದಿಶೆಗಳನ್

ಹೊಂದಿಸಬೇಕು. ಗಗನಪಟವನ್ನು ಭೂಪಟದಂತೆ, ಅಥವಾ ಭೂಪಟವನ್ನು ಗಗನಪಟದತೆ ಅಳವಡಿಸಲು

ವಾಸ್ತವತೆ- ಪಟ ಹೊಂದಾಣಿಕೆ ತಪ್ಪುತ್ತದೆ.

ಮೊಳೆಯುತ್ತದೆ. ಆಕಾಶದ ಅನಂತ ವಿಸ್ತಾರವನ್ನು ಟಿಪ್ಪಣಿ ಪುಸ್ತಕದ ಚಿಲ್ಲರೆ

ಸಂಕ್ಷೇಪಗೊಳಿಸುವ ಪರಮ ಸಾಹಸ (ಮೂರ್ಖತಾಪ್ರದರ್ಶನ ?) ತೊಡುಗುತ್ತೇನೆ. ಅದು ಗೋಳಾರ್ಧ ,

ಇದು ಆಯತ. ಅದಕ್ಕೆ ಮೂರು ಆಯಾಮಗಳು. ಇದಕ್ಕೆ ಎರಡು ಮಾತ್ರ . ಅದನ್ನು

ಇಳಿಸಲು ಚಿತ್ರಣದ ತಂತ್ರ ಅರಿಯಬೇಡವೇ ? ಗಣಿತದ ಸೂತ್ರ ತಿಳಿಯಬೇಡವೇ ? ಆದರೆ ನಿಸರ್

ಪ್ರತಿಯೊಂದು ವ್ಯಕ್ತಿಯಲ್ಲಿಯೂ ಚಿತ್ರಣ ತಂತ್ರ , ಗಣಿತ ಸೂತ್ರ ಮುಂತಾದ ಶಾಸ್ತ್ರಗಳಿಗೆ ಅತೀತವಾ

ಒಂದು ಸಹಜ ಕೌಶಲ ಅಥವಾ ಆಜನ್ಮ ಪ್ರತಿಭೆ ಹುದುಗಿಸಿಟ್ಟಿದೆ. ಈ ಆದಿ ಚಿತ್ರಕಾರ ಪ್ರಜ್ಞೆ

ನನ್ನನ್ನು ಉದ್ದೀಪನಗೊಳಿಸಿ ನೇರ ಅಭಿವ್ಯಕ್ತಿ ಕ್ರಿಯೆಗೆ ಪ್ರೇರಿಸುತ್ತದೆ.

ಅಲ್ಲಿಯ ಗೋಳಾರ್ಧ ಇಲ್ಲಿಯ ವೃತ್ತ , ಅದರಲ್ಲಿಯ ಸಪ್ತರ್ಷಿಮಂಡಲದ ವಕ್ರತಲ

ಇದರಲ್ಲಿಯ ಏಳು ಚುಕ್ಕಿಗಳ ಸಮತಲ. ಅಲ್ಲಿಯೂ ಇಲ್ಲಿಯೂ ಪುಲಹ, ಕ್ರತು ಧ್ರುವನಕ್ಷತ್ರವನ್ನು

ಗುರಿ ಹಿಡಿದಿವೆ. ಇದು ಅದಲ್ಲ . ಎಂದಿಗೂ ಅಲ್ಲ ನಿಜ. ಆದರೆ ಅದರೆಡೆಗೆ ಏರಲು ಕಟ್ಟಿದ ಮೆಟ್ಟಿಲು,

ಗುರಿಗೆ ಸಾಗುವ ದಾರಿ.

ಕಾಗದದ ಮೇಲಿನ ಚಿತ್ರದಲ್ಲಿ ದಿಗ್ವಿಂದುಗಳನ್ನು ಗುರುತಿಸಬೇಕಷ್ಟೆ , ಈ ಕೆಲಸ ಮಾಡಿ ಮತ್ತೆ

ಮತ್ತೆ ಮೂಲ- ಚಿತ್ರ ಸಂವಾದಿತ್ವದ ಋಜುತ್ವ ಖಾತ್ರಿ ಮಾಡಿಕೊಂಡು ಮನೆಗೆ ಮರಳಿದೆ.

ಕೊಠಡಿಯ ಆಕಾಶಬಂಧ ಸೌಕರ್ಯ ! ಚಿತ್ರ ಹೊರತೆಗೆದೆ. ಈಗ ಮೂಲಕೇವಲ ನೆನಪಿನ

ಅಥವಾ ಕಲ್ಪನೆಯ ವಸ್ತು . ಚಿತ್ರದ ಅಧ್ಯಯನ ಆರಂಭಿಸಿದೆ. ಮರೀಚಿ, ವಸಿಷ್ಟ , ಅರುಂಧತಿ ಹ


೨ ೮
ನಕ್ಷತ್ರ ವೀಕ್ಷಣೆ

' ವಿಜಯಸಾರಥಿ
ಜನವರಿ
/ ಪಾರ್ಥ V ದೀರ್ಘಕಂಠ ' ಮಾರ್ಜಾಲ

ಸಪ್ತರ್ಷಿ ಮಂಡಲ
* T ಕುಂತೀ *
/ ' ಲಘು ಸಪರ್ಷಿ , Kಲಘು ಸಿಂಹ
ಯುಧಿಷ್ಟಿರ /
೧ ) 7 ಕಾಳಭೈರವ
| ಸುಯೋಧನ ಸಿಂಹ
ಮುಸಲೀ
ರಾಸಹಂಸ ಕನ್ಯಾ
YA ಸಹಜ ಕೃಷ್ಣವೇಣಿ

ಏಪ್ರಿಲ್
ರ್ಪಮಂಡಲ ಕಾಳಭೈರವ
ಸಹದೇವ |
2: ಮಿಥುನ ಮಾರ್ಜಾಲಿ
* * ಲಘುಸಪ್ತರ್ಷಿ 0 ಉತ್ತರ ಕಿರೀಟ
ವಿಜಯಸ್ತಾರಥ ? ) ದೀರ್ಘಕಂಠ / ಸುಯೋಧನ ಭೀಮ A

ಪಾರ್ಥಸಿ ವೀಣಾ
ಮಃ • ವೃಷಭ ಕುಂತೀ ಲಾಸಹಂಸ )
ರಾಸೆಹಂಸ
& ಬ್ರೌಪದಿ ಮುಸಲೇ ?

, ಭೀಮ 1
ಜುಲೈ ಸಹದೇವ ಸುಯೋಧನ ,

, ಮುಸಲೀ
ಕೃಷ್ಣವೇಣಿ .. ಕಾಳಭೈರವ ಯುಧಿಷ್ಠಿರ
ಲಘುಸಪ್ತರ್ಷಿ
ನಕುಲ '

- ದೀರ್ಘಕಂ ಕುಂತೀನಿ
ಲಘು ಸಿಂಹ 4 ಪಾರ್ಘ ದೌಪದಿ
ಕನ್ಯಾ - ಸಿಂಹ A ' ಮಾರ್ಜಾಲ ತ್ರಿಕೋಣಿ
ವಿಜಯಸಾರಥಿ ಮೇಷ :

ಮುಸಲೀ
ಅಕ್ಟೋಬರ್
9 ರಾಜಹಂಸ ( ಯುದ್ಧಿ – ಸಾರ್ಥ

ದೀರ್ಘಕಂಠ \
ಲಘುಸಪ್ತರ್ಷಿ
ವೀಣಾ ¢ತ 7 ವಿಜಯಸಾರಥಿ
2 ವೃಷಭ
ಮಾರ್ಜಾಲ
ಮಹಾವಾದ್ದ
| ಭೀಮ ಸಪ್ತರ್ಷಿ ಮಂಡಲ ಮಿಮನ.
ಉರಗದ್ದರ ಉತ್ತರ ಕಿರೀಟ > ಸಹದೇವ

ಚಿತ್ರ ೧೭. ಈ ಚಿತ್ರಗಳನ್ನು ಆಯಾ ತಿಂಗಳು ಉತ್ತರಾಭಿಮುಖವಾಗಿ ಎತ್ತಿ ಹಿಡಿದು ಗಗನದಲ್ಲ

ಪುಂಜಗಳ ಜೊತೆ ಹೊಂದಿಸಬೇಕು,


ನಕ್ಷತ್ರ ವೀಕ್ಷಣೆ

* ಮಿಥುನ
ಜನವರಿ
ಕರ್ಕಟಕ ] , , * * *
ಲಘುಶಾನ42

ಅಜಗರ

- `ಕಂದರ - ದಿಕ್ಕೂಚಿ' | ಮೀನ .


ನೌಕಾಪಟ తిమింగల
\ , ನೌಕಾಪಟ ,

ಏಪ್ರಿಲ್ ಕೃಷ್ಣವೇಣಿ ಸಿಂಹ


ಸಹದೇವ
ಕಂದರ

ಲಘುಶ್ವಾನ
ಉರಗದರ ಅಜಗರ ವಿತಶೃಂಗಿ
ಕಿನ ರ ದಿಕ್ಕೂಚಿ ' v \
ನೌಕಾಪಟ / ನೌಕಾಪ್ರಷ ಮಹಾಶ್ವಾನ|

ಜುಲೈ ರಾಜಹಂಸ
ಭೀಮ
ಗರುಡ
ಉತ್ತರಕಿರೀಟ
ಉರಗಧರ . * ಸಹದೇವ |
ಮಕರ ಧನು \ \ ಸರ್ಪ 4
* ಶೇಟಕ ಕನ್ಯಾ
ತುಲಾ

ಸಿಂಧೂ ದೂರದರ್ಶಿನಿ
ದಕ್ಷಿಣಮೀನ ಅಜಗರ
ವೇಧಿಕಾ ಕಿನ್ನರ

ಅಕ್ಟೋಬರ್ ಮೇಷ ನಕುಲ

తిమింగల
ರೈತರಿಣಿ
ವೈತರಿಣಿ
1
ಅಗ್ನಿಕುಂಡ ಶಿಲ್ಪಶಾಲಾ ಮೀನ ಲN ಮಕರ ಗರುಡ
ಮಹಾವಾಭ ಚಕೋರ
ಕ್ಷಣಮೀನ LIN
ಬಳ ಸರ್ಪ

ಚಿತ್ರ ೧೮. ಈ ಚಿತ್ರಗಳನ್ನು ಆಯಾ ತಿಂಗಳು ದಕ್ಷಿಣಾಭಿಮುಖವಾಗಿ ಎತ್ತಿ ಹಿಡಿದು ಗಗನದಲ್ಲಿ ಗೋಚರಿಸು
ಪುಂಜಗಳ ಜೊತೆ ಹೊಂದಿಸಬೇಕು.
೩೦
ನಕ್ಷತ್ರ ವೀಕ್ಷಣೆ

ಮನಸ್ಸು ಅದರ ಮೇಲೆ ಹರಿಯುತ್ತಿದ್ದಂತೆ ದಿಕ್ಸಿಂದುಗಳತ್ತ ಗಮನ ಸರಿಯಿತು. ಅವ

ವಿಚಿತ್ರವಾಗಿದೆಯಲ್ಲ ! ಇದೇನು ? ಉತ್ತರಕ್ಕೆ ಮುಖ ಮಾಡಿದಾಗ ಬಲಕ್ಕೆ ಪೂರ್ವ, ಎ

ಎಂಬುದು ನಿರಂತರ ಸತ್ಯ ,ಸೂರ್ಯೊದಯದಂತೆ. ಆದರೆ ಚಿತ್ರದಲ್ಲಿ ಅವುತದ್ವಿರುದ

ಪೂರ್ವಕ್ಕೆ ಮುಖ ಮಾಡಿದಾಗ ಬಲಕ್ಕೆ ದಕ್ಷಿಣ, ಎಡಕ್ಕೆ ಉತ್ತರ ಇರಬೇಕು. ಆದರೆ


ವಿಪರ್ಯಯ ಸ್ಥಿತಿ. ಹೀಗಿದ್ದರೂ ಚಿತ್ರದಲ್ಲಿ ನೆಲದಂತೆಯೆ ಉತ್ತರ ದಕ್ಷಿಣ ಮತ್ತು ಪೂರ

ಮಾತ್ರ ಎದುರುಬದಿರಾಗಿವೆ. ಇದು ಹೀಗೇಕೆ ? ( ಚಿತ್ರ ೧೬ ) |

- ಸಂದೇಹ ಬಂದಾಗ ಮೂಲಕ್ಕೆ ಮರಳು ಎಂಬುದು ಅನುಭವೋಕ್ತಿ, ಅಂಗಳಕ್ಕೆ

ಮೂಲ- ಚಿತ್ರಸಂವಾದಿತ್ವ ಮತ್ತೆ ಪರೀಕ್ಷಿಸಿದೆ. ದಿಗ್ವಿಂದುಗಳನ್ನು ಗುರುತ

ಇನ್ನೊಮ್ಮೆ ನೋಡಿದೆ. ಎಲ್ಲವೂ ಸರಿ. ಆದರೂ ಚಿತ್ರ ನನ್ನೆದುರು ವಿಚಿತ್ರ ವ್ಯಾಘಾತ ಪ್ರದ

ಇಂಥ ಸನ್ನಿವೇಶದಲ್ಲಿ ಸ್ವತಂತ್ರ ಮೂಲಭೂತ ಚಿಂತನೆಯೊಂದೇ ಶರಣು. ಈ ಧ

ಚಿಂತಿಸಿದಾಗ ಅನಾವರಣಗೊಂಡ ಸತ್ಯ ಅತ್ಯಂತ ಸರಳ.

ಭೂಪಟ ಹೇಗೆ ಓದುತ್ತೇನೆ ? ನೆಲದ ಮೇಲೆ- ಅಂದರೆ ಕಣ್ಣು ಕೆಳಗೆ ಮೇಲೋಗವಾ

ಆಯಾ ದಿಶೆಗಳು ಹೊಂದುವಂತೆ ಯುಕ್ತವಾಗಿ ತಿರುಗಿಸಿ ದೇಶ ನಗರ ನದಿ ಪರ್ವ

ವಿವರ ಗ್ರಹಿಸುತ್ತೇನೆ. ಕಣ್ಣ ಕೆಳಗಿನ ನೆಲದ ಸಂಕ್ಷಿಪ್ತ ರೂಪ ಭೂಪಟವಾದದ್ದರ

ಇದಕ್ಕೂ ನಡುವೆ ಸಂವಾದಿತ್ವ ಏರ್ಪಡಿಸಲು ಈ ವಿಧಾನ ಸರಿ.

ಹಾಗಾದರೆ ಕಣ್ಣ ಮೇಲಿನ ಬಾನಿನ ಸಂಕ್ಷಿಪ್ತ ರೂಪವಾದ ಆಕಾಶಪಟ ಓದಲು ಸರಿಯ

ವಿಧಾನ ಯಾವುದು? ಪಟವನ್ನು ಕಣ್ಣಾತಲೆ ಮೇಲೆ ಕೆಳಮೊಗವಾಗಿ ನನಗೆ ಕಾಣುವಂ

ಯುಕ್ತವಾಗಿ ತಿರುಗಿಸಿ ಆಕಾಶದಲ್ಲಿಯ ವಿವಿಧ ಪುಂಜಗಳಿಗೂ ಪಟದಲ್ಲಿಯ ಸಂವಾದಿ ಚಿತ್ರಗಳಿಗ

ನಡುವೆ ಸರಿಯಾದ ಹೊಂದಾಣಿಕೆ ಏರ್ಪಡಿಸುವುದು .

ಈ ವಿಧಾನ ಹೊಳೆದೊಡನೆ ಕೈಯ್ಯಲ್ಲಿದ್ದ ಚಿತ್ರವನ್ನು ತಲೆಯ ಮೇಲೆಕೆಳಮೊಗವ

ಸಪ್ತರ್ಷಿಮಂಡಲ ಪುಂಜದ ಜೊತೆ ಹೊಂದಿಸಿದೆ. ಅಗೋ ಕಾಗದದಲ್ಲಿ ಗುರುತಿಸಿದ್ದ ದಿ

ಆಯಾ ದಿಗ್ವಿಂದುಗಳ ಜೊತೆ ಸಲೀಸಾಗಿ ಎರಕಗೊಂಡುವು!

- ಆಕಾಶಗ್ರಂಥ ವಾಸ್ತವತೆ, ಆಕಾಶಪಟ ಇದರ ಸಂಕ್ಷಿಪ್ತರೂಪ, ಗ್ರಂಥ ಓದಬಯಸ

ನೆಲದ ಮೇಲೆ ಅಂಗಾತ ಮಲಗಿ ಪಟವನ್ನು ಕೆಳಮೊಗವಾಗಿ ಎತ್ತಿ ಹಿಡಿಯಬೇಕು. ಬಳಿಕ ದಿಗ್

ಹೊಂದುವಂತೆ ಪಟವನ್ನು ಯುಕ್ತವಾಗಿ ತಿರುಗಿಸಬೇಕು. ಖಗೋಳದಲ್ಲಿಯ ನಿ

ಪಟದಲ್ಲಿಯ ಸದೃಶ ಚಿತ್ರಗಳಿಗೂ ನಡುವೆ ಆಗ ಸಂವಾದಿತ್ವ ಏರ್ಪಡುತ್ತದೆ. ಪಟದಲ್ಲಿ

ವಿವರಗಳು ಗ್ರಂಥ ಓದಲು ಮಾರ್ಗದರ್ಶಿಗಳು ಮಾತ್ರ ಗ್ರಂಥ ಮೊದಲು, ಪಟ ಬಳಿಕ , ಸದಾಕಾಲವೂ

ಎಲ್ಲೆಲ್ಲಿಯೂ .

ಬಾ ಕರ್ತಾರನ ಕಮ್ಮಟಕೆ

ಒಂದು ವರ್ಷ ಪೂರ್ತಿ ಸಂಜೆ ವೇಳೆ ಊರ ಹೊರಗಿನ ಒಂಟಿ ದಿಬ್ಬಕ್ಕೆ ಹೋಗಿ

ಇಳಿಜಾರಿನಲ್ಲಿ ನನ್ನ ದೃಷ್ಟಿ ಹರಿಯಬಿಡುತ್ತೇನೆ. ಅಲ್ಲಿ ಎದ್ದು ಕಾಣುವ ನಕ್ಷತ್ರ


೩೧.
ನಕ್ಷತ್ರ ವೀಕ್ಷಣೆ

ಗ್ರಹ ಚಂದ್ರ ಮುಂತಾದ ವಿಶೇಷ ಅತಿಥಿಗಳನ್ನೂ ಯಥಾವತ್ತಾಗಿ ಚಿತ್ರಿಸುತ್ತೇನೆ. ಸಾಧಾರಣ

ರಾತ್ರಿ ೭ರಿಂದ ೮ ಗಂಟೆಯ ತನಕ ವೀಕ್ಷಣೆಗೈಯುತ್ತೇನೆ. ರಾತ್ರಿಯ ಕಪ್ಪು ಗಾಢವಾದಂತೆ ನಕ

ಹೊಳಪು ಮೊನಚಾಗುತ್ತದೆ. ಪ್ರತಿಯೊಂದು ತಾರೆಯೂ ನನ್ನ ಜೊತೆ ಮೌನಸಂಭಾಷಣೆಗೆ

ತೊಡಗುತ್ತದೆ. "ನೀವಿಲ್ಲದೆ ಈ ಮನದೊಳಗೇನಿದೆ ? ನೀವಿದ್ದರೆ ಹೂವಿದೆ, ಹೊಸ ಜೇನಿದೆ, ಬಾನಿನ

ಕೆಳೆಯಿದೆ, ಗಾನದ ಬೆಳೆಯಿದೆ.... ಅತಿಥಿಗಳ ನೀವೆಲ್ಲರು ಇಲ್ಲಿಗೆ ನೆಲಸಲು ಬಂದವರಲ್ಲ ; ಒಂ


ಗಳಿಗೆ ಆಮೋದಕೆ ಬರುವಿರಿ. ಬಂದರಗಳಿಗೆಯೊಳೇ ಮೈಗರೆವರಿ " ಎಂಬುದಾಗಿ ಮನದಾಳದ ದನಿ

ಗೋಪಾಲಕೃಷ್ಣ ಅಡಿಗರ ನುಡಿಗಳನ್ನು ಪಡಿಮಿಡಿಯುತ್ತದೆ.

ಒಂದು ವರ್ಷ ಮುಗಿಯುವಾಗ ನನ್ನ ಟಿಪ್ಪಣಿ ಥಾನುಗಳು ಗಾತ್ರದಲ್ಲಿ ಸಾಕಷ್ಟು ಹಿಗ್ಗಿರ

ಕಂಡು ಅಚ್ಚರಿ ತಳೆಯುತ್ತೇನೆ, ಸಂತಸ ಪಡುತ್ತೇನೆ. ದೇವರ ಕಾವ್ಯಕ್ಕೆ ಬರೆದ ಅನಂತಾಲ್ಪಭಾಷ್ಯವಿದ

ಇದರಿಂದ ವಿಷಯ ಹೆಕ್ಕಿ ಮತ್ತೆ ಮೂಲಗ್ರಂಥದೊಡನೆ ( = ಆಕಾಶ) ಹೊಂದಿಸಿ ನೋಡಿ ಮುಂದಿನ

ವಿವರಣೆ ನೀಡಿದ್ದೇನೆ. ಇಲ್ಲಿಯ ' ನಾನು' ಈ ಪುಸ್ತಕದ ಲೇಖಕ ಮಾತ್ರ ಅಲ್ಲ , ಪ್ರತಿಯೊಬ್ಬ ವಾಚಕ

ಕೂಡ. ಮೊದಲು ನಕ್ಷತ್ರ ಚಿತ್ರ ನೋಡಬೇಕು, ಬಳಿಕ ಪುಸ್ತಕ ಓದಬೇಕು. ಅದು ಬಿಂಬ , ಇದು

ಪ್ರತಿಬಿಂಬ , ಬಿಂಬ ಮೊದಲು, ಪ್ರತಿಬಿಂಬ ತರುವಾಯ .

ಇಷ್ಟು ಪೂರ್ವಸಿದ್ಧತೆ ಸಹಿತ ಮಗುದೊಮ್ಮೆ ಬಾನನ್ನು ಅವಲೋಕಿಸೋಣ. ಮುಂದ

ಉಪ- ಅಧ್ಯಾಯಗಳಲ್ಲಿ ಅಕ್ಟೋಬರಿನಿಂದ ಸೆಪ್ಟೆಂಬರ್ ತನಕದ ರಾತ್ರಿ ಆಕಾಶ ಕುರಿತ ಸ್ಕೂಲವಿವರಣೆ

ಇದೆ, ಚಿತ್ರ ಸಹಿತ. ಪ್ರತಿರಾತ್ರಿಯೂ ಅಂದಾಜು ೭- ೮ ಗಂಟೆಗೆ ವೀಕ್ಷಣೆ ಮತ್ತು ಅಧ್ಯಯನ. ಒಮ್ಮೆ

ಈ ಕವಾಯತಿ ಅಭ್ಯಾಸವಾಯಿತೋ ಮುಂದೆ ನೀವೇ ನೇರವಾಗಿ ಎಲ್ಲಿ ಯಾವಾಗ ಬೇಕಾದ

ಗಗನಲಿಪಿ ಓದಿ ರಸಾಸ್ವಾದಿಸಬಲ್ಲಿರಿ, ಸೂರ್ಯಚಂದ್ರರನ್ನು ನೋಡಿಆನಂದಿಸುವಷ್ಟೇ ಸುಲ

ಪ್ರತಿಸಲವೂ ವೀಕ್ಷಣೆ ಆರಂಭವಾಗುವುದು ಪೂರ್ವ ಆಕಾಶದ ಸರ್ವೇಕ್ಷಣೆಯಿಂದ ,

ಅಧ್ಯಾಯಗಳ ಆರಂಭದಲ್ಲಿ ಈ ಎರಡು ಸಂಗತಿಗಳು - ಸಂಜೆ ೭-೮ ಗಂಟೆ, ಪೂರ್ವಾಕಾಶ - ಅಧ್ಯಾಹಾರ .

- ಅಕ್ಟೋಬರ್

ಮಂದ ಪ್ರಕಾಶದ ನಾಲ್ಕು ನಕ್ಷತ್ರಗಳು ರಚಿಸುವ ಚೌಕಾಕಾರ ನನ್ನೆದುರು ವಿಜೃಂಭಿಸುತ್ತಿದ

ಆಕಾಶದ ದೈವಿಕ ಗೊಂದಲದಲ್ಲಿ ಈ ತರಹದ ಗಣಿತಾಕೃತಿ ತೀರ ವಿರಳ ದೃಶ್ಯ . ಪುಂಜದ ಹೆಸರು

ನಕುಲ, ಪೂರ್ವಾಭಾದ್ರ ಪ್ರಥಮ ಮತ್ತು ದ್ವಿತೀಯ ತಾರೆಗಳು ಪಶ್ಚಿಮ ಬಾಹುವನ್ನೂ ಉತ್ತ

ಪ್ರಥಮ ಮತ್ತು ದ್ವಿತೀಯ ತಾರೆಗಳು ಪೂರ್ವಬಾಹುವನ್ನೂ ರಚಿಸುತ್ತವೆ.

ನಕುಲದ ಉತ್ತರ ಬಾಹುವಿನ (ಪೂರ್ವಾಭಾದ್ರ ಪ್ರಥಮ -ಉತ್ತಾರಾಭಾದ್ರ ದ್ವಿತೀಯ) ಪೂರ

ಉತ್ತರ ವಿಸ್ತರಣೆ ದೌಪದಿ. ಇದೊಂದು ನಯ ವಕ್ರರೇಖೆ ಮಾತ್ರ .

ದೌಪದಿಯ ಉತ್ತರಕ್ಕೆ ಕುಂತಿಯೂ ಪೂರ್ವಕ್ಕೆ ಪಾರ್ಥವೂ ಇವೆ. ಪಾರ್ಥದ ಆಕಾರ

ಹುಳುವಿನಂತೆ, ಬಾಗಿದ ಬಿಲ್ಲಿನಂತೆ ಅಥವಾ ಹೆಡೆ ಬಿಚ್ಚಿರುವ ಸರ್ಪದಂತೆ. ಇದರಲ್ಲಿಯ

ತಾರೆಗಳು ಪಾರ್ಥ ಪ್ರಥಮ ಮತ್ತು ಸೈಂಧವ.


೩ ೨
ನಕ್ಷತ್ರ ವೀಕ್ಷಣೆ

wwwwwwwwwwwwwwww

w wು

ಚಿತ್ರ ೧೯ . ನಕುಲ, ದೌಪದಿ, ಯುಧಿಷ್ಠಿರ, ಕುಂತೀ

ನಕುಲದ ಪೂರ್ವಕ್ಕೆ ಮೀನರಾಶಿ. ಇದನ್ನು ಸ್ಪಷ್ಟವಾಗಿ ಬೊಟ್ಟು ಹಿಡಿದು ತ

ಕಷ್ಟ , ಇದರ ವಲಯವನ್ನು ಕಾಣಿಸಬಹುದು ಅಷ್ಟೆ . ರೇವತಿ ನಕ್ಷತ್ರ ಈ ರಾಶಿಯಲ್ಲಿದೆ.

ಮೀನದ ಪೂರ್ವಕ್ಕೆ ಮೇಷರಾಶಿ . ಮೂರುಸ್ಪಷ್ಟ ನಕ್ಷತ್ರಗಳು ರಚಿಸುವ ವಿಶಾಲ ಕೋನ

ಒಂದು ಬಾಹುವಿನ ದೀರ್ಘತೆ ಇನ್ನೊಂದರ ಸುಮಾರು ಎರಡರಷ್ಟು

ಪಶ್ಚಿಮಾಭಿಮುಖವಾಗಿದೆ . ಶೃಂಗನಕ್ಷತ್ರ ಅಶ್ವಿನಿ ಪ್ರಥಮ . ಪ್ರಸ್ವ ಬಾಹುವಿನ ತುದಿ ನಕ್ಷತ

ದ್ವಿತೀಯ, ದೀರ್ಘ ಬಾಹುವಿನ ತುದಿ ನಕ್ಷತ್ರ ಭರಣಿ.


- ೩ ೩

ನವೆಂಬರ್

ವೃಷಭರಾಶಿ ಈ ತಿಂಗಳ ವಿಶೇಷಾಕರ್ಷಣೆ. ಸುಮಾರು ಐದು ನಕ್ಷತ್ರಗಳು ರಚಿಸುವ

ಆಕಾರವಿದು. ಇದರಕೋನಶೃಂಗ ಪಶ್ಚಿಮಾಭಿಮುಖವಾಗಿದೆ. ದಕ್ಷಿಣ ಬಾಹುವಿನ ತುದಿ ನಕ್ಷತ್ರದ

ಬಣ್ಣ ಮಾಣಿಕ್ಯಕೆಂಪು. ಇದು ರೋಹಿಣಿ. ಈ ರಾಶಿಯ ಇತರ ಪ್ರಧಾನ ತಾರೆಗಳು ಅಗ್ನಿ, ವೃಷಭ

ತೃತೀಯ ಮತ್ತು ಕೃತ್ತಿಕೆ.

++++

ಚಿತ್ರ ೨೦ . ವಿಜಯಸಾರಥಿ, ವೃಷಭ, ಪಾರ್ಥ


೩ ೪
ನಕ್ಷತ್ರ ವೀಕ್ಷಣೆ

ಇಂದwwwOoUooooooper

:
:
:
::
::

:
t

e
Kannw

ಚಿತ್ರ ೨೧. ಮೀನ, ನಕುಲ ( ಭಾಗಶಃ) ದೌಪದಿ, ಕುಂತೀ , ಪಾರ್ಥ, ತ್ರಿಕೋಣಿ, ಮೇಷ
೩ ೫
ನಕ್ಷತ್ರ ವೀಕ್ಷಣೆ

ಕೃತ್ತಿಕೆಯ ಸ್ಥಾನ ರೋಹಿಣಿಯಿಂದ ತುಸು ಪಶ್ಚಿಮಕ್ಕಿದೆ. ಬೆಳಕಿನ ರೇಣುಗಳ ನಿಬಿಡ

ಒಕ್ಕೂಟವಿದು. ಚಳಿಗಾಲದ ಇರುಳಿನಲ್ಲಿ ಕೋಳಿಮರಿಗಳು ಮುದುಡಿ ಒಟ್ಟಾಗಿ ಸೇರಿರುವ ಚಿತ್ರವನ್

ನೆನಪಿಗೆ ತರುತ್ತದೆ. ಇದರಲ್ಲಿ ಎಷ್ಟು ಬಿಡಿ ನಕ್ಷತ್ರಗಳಿವೆ ? ಅರುಂಧತೀ ದರ್ಶನದಂತೆ ಕೃತ್ತಿಕ

ವಿವಿಕ್ತ ತಾರೆಗಳ ಎಣಿಕೆ ಕೂಡ ದೃಷ್ಟಿಗೊಂದು ಸವಾಲು. ಅಲ್ಲಿಯೇ ಅರ್ಜುನಲಕ್ಷ್ಯವನ್ನು ಕರ್ಣ

••••

M
assans

ಚಿತ್ರ ೨೨, ವೃಷಭ, ಮಹಾವ್ಯಾಧ ( ಭಾಗಶಃ), ಶಶ


೩ ೬
ನಕ್ಷತ್ರ ವೀಕ್ಷಣೆ

ಏಕಾಗ್ರತೆಯಿಂದ ಸಾಂದ್ರೀಕರಿಸುತ್ತೇನೆ. ಕೃತ್ತಿಕೆಯ ಒಕ್ಕೂಟಕ್ರಮೇಣ ಪಟ್ಟು ಬಿಟ

ಶಿಶುಸುಬ್ರಹ್ಮಣ್ಯ ಗಂಗಾಪ್ರವಾಹದಲ್ಲಿ ತೇಲಿ ಹೋಗುತ್ತಿದ್ದಾಗ ಕೃತ್ತಿಕಾದೇವಿಯರ

ಇಳಿದುಬಂದು ಅವನಿಗೆ ಮೊಲೆಊಡಿಸಲು ಮುಂದಾದರು. ಆರು ಮೊಲೆಗಳಿಂ

ಹೀರಲು ಅನುಕೂಲವಾಗುವಂತೆ ಆ ದೇವಶಿಶುವಿಗೆ ಆರು ತಲೆಗಳು ಮೊಳೆತುವು. ಹೀಗ

ಗಾಂಗೇಯ, ಕಾರ್ತಿಕೇಯ, ಷಣ್ಮುಖ, ಷಡಾನನ ( ಆರ್ಮೊರ), ಪಾಪನಾಶಂ ಶಿವನ್

ತೋಡಿರಾಗದ " ಕಾರ್ತಿಕೇಯ ಗಾಂಗೇಯ ಗೌರಿತನಯಾ" ಕೃತಿ ಮನದೊಳಗೆ ಮೃದುವ

ಮಿಡಿಯುತ್ತದೆ. ಯಾವುದು ಸುಂದರ ಆಕಾಶ ದೃಶ್ಯವೋ ಸಂಗೀತ ಶ್ರವಣವೋ ? ಉತ್ತ

ಆದರೆ ಇವುಗಳ ಮೇಳನ ಬಹುಗುಣಿತ ಸುಂದರ ! ಈ ಪೌರಾಣಿಕ ಚಿತ್ರಣದ ಬೆನ್ನೇರಿಹೋ

ನನ್ನ ಕಲ್ಪನಾವಿಲಾಸ, ಅಲ್ಲಿ ಆರು ಬಿಡಿನಕ್ಷತ್ರಗಳನ್ನು ಎಣಿಸುತ್ತೇನೆ. ಇಷ್ಟೇ ಅಲ್ಲ

ಕಾಣುತ್ತದೆ. ಅತಿ ತೀಕ್ಷ್ಮ ದೃಷ್ಟಿಯವರಿಗೆ ಎಂಟನೆಯದುಕೂಡ ಕಾಣಬಹುದು. ಈ ಪೈಕಿ ಕೃತ್ತಿ

ಪ್ರಥಮ (ಅಟ್ಟಾಸ್) ಅತ್ಯುಜ್ಜಲವಾದದ್ದು . ಕೃತ್ತಿಕಾಗುಚ್ಛದಲ್ಲಿ ಸಾಧಾರಣವ

ನಕ್ಷತ್ರಗಳು ಗೋಚರವಾಗುವುದರಿಂದಲೂ ಇದರ ಆಕಾರ ಪುಟ್ಟ ಕುಡುಗೋ

ಸಪ್ತರ್ಷಿಮಂಡಲವನ್ನು ಹೋಲುವುದರಿಂದಲೂ ಇದನ್ನೇ ಸಪ್ತರ್ಷಿಮಂ

ತಿಳಿಯುವುದುಂಟು. ಎರಡರಲ್ಲಿಯೂ ಏಳು ಬಿಡಿ ನಕ್ಷತ್ರಗಳಿವೆ ಏನ್ನುವುದರ ವಿನಾ ಉಭ

ಲಕ್ಷಣ ಬೇರೇನೂ ಇಲ್ಲ . ಸೀತೆ ಮತ್ತು ಬ್ರೌಪದಿ ಬೇರೆ ಬೇರೆ ಜೀವನ ಮೌಲ್ಯಗಳು !

* ಡಿಸೆಂಬರ್

ಹಾರಿಜದ ಕೆಳಗಿನಿಂದ ಒಂದು ಪಟ ಮೇಲೆದ್ದು ಬರುತ್ತದೆ. ಅಗೋಚರ ಸೂತ್ರಧಾ

ನಿಯಂತ್ರಿಸುತ್ತಿರುವ ಚಿತ್ರಕಲಾಪ್ರದರ್ಶನವೋ ಎಂಬಂತೆ ಇದು ತನ್ನ ವಿಶಿಷ್ಟ ಮ

ಜ್ಯಾಮಿತೀಯ ಆಕಾರದಿಂದಲೂ ಸದಸ್ಯ ನಕ್ಷತ್ರಗಳ ಉಜ್ವಲ ಪ್ರಭೆಯಿಂ

ಕಣ್ಮನಸೆಳೆಯುತ್ತಿದೆ. ನಕ್ಷತ್ರಲೋಕದ ಸಕಲ ಸೌಂದರ್ಯವೂ ಈ ವಲ

ಘನೀಭವಿಸಿರುವುದೋ ಎನ್ನುವ ಅಪೂರ್ವ ದೃಶ್ಯ - ಇಲ್ಲಿ ನೆರೆದಿಹುದಯ್ಯ ನಕ್ಷತ

- ಇದೊಂದು ಬೃಹತ್ ತ್ರಾಪಿಜ್ಯ . ಇದರ ಪಶ್ಚಿಮ ಮತ್ತು ಪೂರ್ವ ಬಾಹುಗಳ

ಮತ್ತು ತರುವಾಯ ಮೂಡುವ ಬಾಹುಗಳು) ದಕ್ಷಿಣೋತ್ತರವಾಗಿ ಚಾಚಿಕ

ಸಮಾಂತರವಾಗಿವೆ. ಉತ್ತರ ಮತ್ತು ದಕ್ಷಿಣ ಬಾಹುಗಳು (ಪೂರ್ವಾಭಿಮುಖಿ ಆಗಿರ

ಮತ್ತು ಬಲಕ್ಕೆ ಇರುವ ಬಾಹುಗಳು ) ಒಂದಕ್ಕೊಂದು ಸಮಾಂತರವಾಗಿಲ್ಲ . ನಾಲ್ಕು ಉ

ವರ್ಣಮಯ ನಕ್ಷತ್ರಗಳು ರಚಿಸುವ ಈ ಗಣಿತಾಕೃತಿಯ ಒಳಗೆ ಮೂರುಸಮೋಜ್ಜಲ ತಾರ

ಏಕರೇಖಾಸವಾಗಿ ರಾರಾಜಿಸುತ್ತಿವೆ. ಈ ಪೈಕಿ ನಡುವಿನದು ಉಳಿದೆರಡರ ಜೋ

ಮಧ್ಯಬಿಂದವೂ ಹೌದು. ಇಷ್ಟೊಂದು ಸುಂದರ ಮತ್ತು ಸಮಾಂಗೀಯವಾ

ತ್ರಾಪಿಜ್ಯದ ಕರ್ಣವೇ ಆಗಿರಬಾರದಿತ್ತೇ ಎಂದು ಮನ ಮಿಡಿಯುತ್ತದೆ. ಇದು ನ್ಯೂನಕರ್

ಅಲ್ಲಿಗೆ ಹೋಗಿ ಈ ಊನ ದುರಸ್ತಿಗೈಯಬೇಕೆಂದು ಕನಸು ಕಾಣುತ್ತದೆ. ಆದರೆ ಸಮಾಂಗೀಯತೆ

ಏಕತಾನತೆಯಿಂದ ಅಸಮಾಂಗೀಯತೆಯ ಯಾದೃಚ್ಛಿಕತೆಯೇ ನಿಜಸೌಂದರ್ಯದ ಖನಿ

ಸ್ಪುರಿಸಿ ಮತ್ತೆ ಆಗಸದ ಅಂದ ಆನಂದಗಳಲ್ಲಿ ಲೀನನಾಗುತ್ತೇನೆ. ( ಅಲ್ಲಿಗೆಹೋಗುವುದು ಅಸ


೩ ೭
ನಕ್ಷತ್ರ ವೀಕ್ಷಣೆ

ಅಲ್ಲದೆ ನಮಗೆಗೋಚರಿಸುವ ದೃಶ್ಯ ಕೇವಲ ಪ್ರಾತಿಭಾಸಿಕ ಸತ್ಯ ಎಂಬುದೆಲ್ಲವೂ ತಿಳಿದಿದ್ದರೂ ಆ

ಗಳಿಗೆ ಗಗನ ಸೌಂದರ್ಯ ನನ್ನನ್ನು ಬೇರೆಯೇ ಲೋಕಕ್ಕೆ ಉತ್ತಾರಣೆಗೊಳಿಸಿರುತ್

ಅನುಭವವನ್ನು ನೀವುಸ್ವತಃ ಶ್ರಮವಹಿಸಿ ಗಳಿಸಿದಾಗ ಮಾತ್ರ ಇದರ ಪೂರ್ಣ ಅರಿವುಮೂ


ಅಷ್ಟೆ - ಸಾಹಿತ್ಯ ನಿರೂಪಣೆಯನ್ನು ಮೀರುವ ರಸಾನುಭವವರು.) ( ಪುಟ ೯ )

metnws eware e

wwwwwwww

ಚಿತ್ರ ೨೩ . ಮಹಾವ್ಯಾಧ [ ಭಾಗಶಃ), ವಿಜಯಸಾರಥಿ, ಮಿಥುನ


a es
ನಕ್ಷತ್ರ ವೀಕ್ಷಣೆ

ನಕ್ಷತ್ರ ಪುಂಜದ ಹೆಸರು ಮಹಾವ್ಯಾಧ. ಇದರಲ್ಲಿಯ ಪ್ರಧಾನ ತಾರೆಗಳಿವ

ಉತ್ತರ ಶೃಂಗ ಆದ್ರ್ರಾ, ಪೂರ್ವ- ದಕ್ಷಿಣ ಶೃಂಗ ವ್ಯಾಧಜಂಘಾ, ಪಶ್ಚಿಮ - ದಕ್ಷಿಣ ಶೃಂ

ಪಶ್ಚಿಮ -ಉತ್ತರ ಶೃಂಗ ವ್ಯಾಧಭುಜ, ಆದ್ರ್ರಾ ಕೆಂಪುನಕ್ಷತ್ರ - ರೋಹಿಣಿಯ

ಎಂಬಂತಿದೆ. ತ್ರಾಪಿಜ್ಯದ ಒಳಗಿರುವ ಮೂರು ಏಕರೇಖಾಸ್ಟ ನಕ್ಷತ್ರಗಳಿಗೆ ಒಟ್ಟಾಗಿ ಮ

ಮೇಖಲೆ, ನಡುಪಟ್ಟಿ ಅಥವಾ ಒಡ್ಯಾಣ ಎಂದೂ ಇದರ ನಡುತಾರೆಗೆ ವ್ಯಾಧಮೇ

ಎಂದೂ ಇದರಿಂದ ದಕ್ಷಿಣಕ್ಕೆ (ತ್ರಾಪಿಜ್ಯದ ಒಳಗಡೆ) ಒಸರಿದಂತಿರುವ ಬೆಳಕಿನ ಪಸೆಗೆ ಮಹಾವ್ಯಾಧ

ಕರವಾಲ ಎಂದೂ ಹೆಸರು . ಉತ್ತರ ಬಾಹುವಿನ ( ಅರ್ಧಾ- ವ್ಯಾಧಭುಜ ರೇಖೆ) ಪಕ

coooooooooooooooooooooooooooooooooooooood

nannannanavare

| ಚಿತ್ರ ೨೪, ಅಜಗರ, ಲಘುಶ್ವಾನ, ಮಿಥುನ, ಸಪ್ತರ್ಷಿಮಂಡಲ , ಮಾರ್ಜಾಲ, ಕರ್ಕಟ


- ೩೯
ನಕ್ಷತ್ರ ವೀಕ್ಷಣೆ

ಅಂದರೆ ಉತ್ತರಕ್ಕೆ , ಚೆಲ್ಲಿಕೊಂಡಿರುವ ಬೆಳಕಿನ ನಲುಗುಗಳ ಒಟ್ಟು ಹೆಸರು ಮೃಗಶಿರಾ,

ಕೃತ್ತಿಕೆ-ರೋಹಿಣಿ ರೇಖೆಯ ವಿಸ್ತರಣೆ ಮೇಲಿದೆ. ಆರ್ದಾ- ಲುಬ್ಧಕ-ಪೂರ್ವಶ್ವಾನ ರಚಿಸುವ ಸ

ತ್ರಿಭುಜಕ್ಕೆ ಹೇಮಂತ ತ್ರಿಭುಜವೆಂದು ಹೆಸರು.

- ಮಹಾವ್ಯಾಧದ ಪರಮಸೌಂದರ್ಯವಲ್ಲದಿದ್ದರೆ ಇದರ ಉತ್ತರಕ್ಕೆ (ಪೂರ್ವಾ

ಆಗಿರುವ ನನ್ನ ಎಡಕ್ಕೆ ) ಅಂಕಿತವಾಗಿರುವ ವಿಜಯಸಾರಥಿ ನನ್ನ ಲಕ್ಷ ಮೊದಲು ಸೆಳೆದಿರುತ್ತಿತ್ತು

ಸುದೂರವಾಗಿ ಹರಡಿಕೊಂಡಿರುವ ೮ ಬಿಡಿತಾರೆಗಳನ್ನು ಇದರಲ್ಲಿ ಎಣಿಸಬಹುದು. ಇವನ್ನು ಕಲ್

ಎಳೆಗಳಿಂದಕೋದರೆ ಬೆಳೆದ ಮಾವಿನ ಹಣ್ಣಿನ ಚಿತ್ರ ದೊರೆಯುತ್ತದೆ. ಆದರೆ ಮೊದಲ ನೋಟಕ್ಕೆ

ಇಲ್ಲಿ ಎದ್ದು ಕಾಣುವುದು ಸಲಂಬಕೋನ ತ್ರಾಪಿಜ್ಯ , ( ಮಹಾವ್ಯಾಧದ ಆಕಾರ ಕೂಡ ತ್ರಾಪಿ

ನಿಜ. ಆದರೆ ಇದರಲ್ಲಿ ಲಂಬಕೋನವಿಲ್ಲ .) ತ್ರಾಪಿಜ್ಯವನ್ನು ರಚಿಸುವ ೪ ನಕ್ಷತ್ರಗಳಿವು: ಪಶ್ಚಿಮ

ಉತ್ತರ ಶೃಂಗ ಬ್ರಹ್ಮ ಹೃದಯ , ಪೂರ್ವ-ಉತ್ತರ ಶೃಂಗ ವಿಜಯಸಾರಥಿದ್ವಿತೀಯ, ಪೂರ್ವ- ದಕ್ಷಿಣ

ಶೃಂಗ ವಿಜಯಸಾರಥಿಅಷ್ಟಮ , ಪಶ್ಚಿಮ - ದಕ್ಷಿಣ ಶೃಂಗ ಅಗ್ನಿ , ( ಈ ಕೊನೆಯದು ನಿಜಕ್ಕೂ

ವೃಷಭರಾಶಿಯ ಸದಸ್ಯ .) ಪಶ್ಚಿಮ ಮತ್ತು ಪೂರ್ವ ಬಾಹುಗಳು, ಅಂದರೆ ಬ್ರಹ್ಮ ಹೃದಯ

ಮತ್ತು ವಿಜಯಸಾರಥಿದ್ವಿತೀಯ - ವಿಜಯಸಾರಥಿ ಅಷ್ಟಮ ರೇಖೆಗಳು, ಸಮಾಂತರವ

ವಿಜಯಸಾರಥಿದ್ವಿತೀಯ ಶೃಂಗಕೋನಸರಿಸುಮಾರಾಗಿ ಲಂಬಕೋನವಾಗಿದೆ.

ಜನವರಿ

ಮಹಾವ್ಯಾಧ ಮತ್ತು ವಿಜಯಸಾರಥಿ ಪುಂಜಗಳ ಪೂರ್ವಕ್ಕೆ , ಸಾಧಾರಣವಾಗಿ ಇ

ನಡುವಿನ ವಲಯದಲ್ಲಿ , ಎದ್ದು " ನಾವಿಲ್ಲಿದ್ದೇವೆ' ಎಂದು ಸಾರಿ ಹೇಳುವಂತಿರುವ

ಈಗಿನ ಆಕರ್ಷಣೆ. ಇವನ್ನು ಜೋಡಿಸುವ ರೇಖೆ ದಕ್ಷಿಣ-ಪೂರ್ವದಿಶೆಗೆ - ಪೂರ್

ಆಗಿರುವ ನನ್ನ ಬಲಕ್ಕೆ - ಸಾಗುತ್ತದೆ. ಮಿಥುನ ರಾಶಿಯ ಪೂರ್ವ ಸರಹದ್ದನ್ನು ವ್ಯ

ನಕ್ಷತ್ರಗಳಿವು. ಪುನರ್ವಸು ಪ್ರಥಮ ( ಉತ್ತರ ಕಡೆಗಿನದು, ನನಗೆ ಎಡಗಡೆಯದು), ಪುನ

ದ್ವಿತೀಯ ( ದಕ್ಷಿಣ ಕಡೆಗಿನದು, ನನಗೆ ಬಲಗಡೆಯದು).

ಪುನರ್ವಸು ಪ್ರಥಮ ಮತ್ತು ದ್ವಿತೀಯ ರಚಿಸುವ ರೇಖೆಯಿಂದ ದಕ್ಷಿಣ

ಮಹಾವ್ಯಾಧದ ಪೂರ್ವಕ್ಕೆ ಇನ್ನೆರಡು ನಕ್ಷತ್ರಗಳು ರಚಿಸುವ ಸಮ ಮತ್ತು ಸಮಾಂತರ ರ

ಈ ವಲಯ ಲಘುಶ್ವಾನ ಪುಂಜ. ಇದರ ಎರಡು ನಕ್ಷತ್ರಗಳ ಪೈಕಿ ಪ್ರಕಾಶತರವಾದದ್ದು

ಇದು ಪೂರ್ವಶ್ವಾನ. ಇನ್ನೊಂದು ಇದರ ಪಶ್ಚಿಮಕ್ಕಿರುವುದರಿಂದ ಪಶ್ಚಿಮಶ

ನಕ್ಷತ್ರ, ಪುನರ್ವಸುದ್ವಿತೀಯ, ಪೂರ್ವಶ್ವಾನ, ಪಶ್ಚಿಮಶ್ವಾನ, ಪುನರ್ವಸು

ನಕ್ಷತ್ರಗಳು ಸಮಾಂತರ ಚತುರ್ಭುಜ ರಚಿಸುತ್ತವೆ.

ಮಹಾವ್ಯಾಧದ ಮೇಖಲೆಯನ್ನು ಪೂರ್ವ- ದಕ್ಷಿಣದ ತಗ್ಗಿಗೆ ವಿಸ್ತರಿಸುತ್ತೇನೆ. ಈ ಗೆರೆಯ

ತುಸು ದಕ್ಷಿಣಕ್ಕೆ ನೀಲ ವರ್ಣದ ಮಹೋಜ್ವಲ ನಕ್ಷತ್ರವೊಂದು ನನ್ನ ಕಣ್ಣು ಕೋರ

ಇದು ಲುಬ್ದಕ, ಮಹಾಶ್ವಾನಪುಂಜದ ಪ್ರಥಮ ತಾರೆ. ಪ್ರಕಾಶದ ದೃಷ್ಟಿಯಿಂದ ಸಮಸ್ತ ಗೋಚ

ನಕ್ಷತ್ರಗಳ ಪೈಕಿ ಇದಕ್ಕೆ ಅಗ್ರ ತಾಂಬೂಲ. ( ನಮ್ಮ ಖಾಸಾ ನಕ್ಷತ್ರವಾದ ಸೂರ್ಯನನ


ನಕ್ಷತ್ರ ವೀಕ್ಷಣೆ

ಪಟ್ಟಿಗೆ ಸೇರಿಸಿಲ್ಲ . ಸೇರಿಸಿದ್ದಾದರೆ ಅದು ಅಸಮಬಲರ ನಡುವಿನ ಅನ್ಯಾಯದ ಸ್ಪರ

ಏಕೆಂದರೆ ನಕ್ಷತ್ರಗಳು ಭೂಮಿ-


ಸೂರ್ಯ ಅಂತರದ ಹಲವು ಸಾವಿರ ಕೋಟಿ ಮಡಿ ದೂರಗ

ಹರಡಿಕೊಂಡಿವೆ.ಸೂರ್ಯನನ್ನು ಲುಬ್ಧಕ ಇರುವಲ್ಲಿಗೆ ಒಯ್ದು ಇಟ್ಟಿದ್ದಾದರೆ ಅ

ತಾರೆಯಾಗಿ ತನ್ನ ಇರವನ್ನು ಪ್ರದರ್ಶಿಸಿತೇ ವಿನಾ ಲುಬ್ಧಕದ ಉಜ್ಜಲತೆಯಿಂದ ಕಂಗೊಳಿಸಲ

ಪೂರ್ವಶ್ಯಾನ- ಆದ್ರ್ರಾರೇಖೆಯ ಮಧ್ಯಬಿಂದುವಿನ ಹೆಚ್ಚು ಕಡಿಮೆ ನೇರ

ಭೂಮಿಯಲ್ಲಿಯ ಸಮಸ್ತ ವಜ್ರಗಳ ಸಮಷ್ಟಿ ಕಾಂತಿಯೂ ಲುಬ್ದ ಕಪ್ರಕಾಶಕ್ಕೆ ಸಾಟಿ ಆಗದು

ಲುಬ್ಧಕದಿಂದ ನೇರ ದಕ್ಷಿಣಕ್ಕೆ ದೃಷ್ಟಿ ಹಾಯಿಸುತ್ತೇನೆ. ಅಲ್ಲೊಂದು ಸಮ

ಸಮಪ್ರಕಾಶದ ನಕ್ಷತ್ರ ಕಂಡು ಚಕಿತನಾಗುತ್ತೇನೆ: ಲುಬ್ಧಕದ ದರ್ಪಣ ಪ್ರತಿಬಿಂಬವ

ಸರ್ವಸಮತೆ. ಇದು ಅಗಸ್ಯ , ದೇವನೌಕಾಪುಂಜದ ಪ್ರಥಮ ತಾರೆ. ಪ್ರಕಾಶದ ದೃಷ್ಟಿಯ

ಎರಡನೆಯ ಮಣೆ.

ಚಿತ್ರ ೨೫, ಮಹಾವ್ಯಾಧ, ಮಹಾಶ್ವಾನ, ನೌಕಾಪೃಷ್ಟ , ಚಿತ್ರಫಲಕ


೪ ೧
ನಕ್ಷತ್ರ ವೀಕ್ಷಣೆ

ಅಗಸ್ಯವನ್ನು ನೋಡುತ್ತಿರುವಾಗ ನನ್ನ ಅರಿವಿಲ್ಲದೆ ನಾನು ದಕ್ಷಿಣಾಭಿಮುಖಿ ಆಗಿದ್ದೇನ

ಅಲ್ಲಿಂದ ಹಾರಿಜಕ್ಕೆ ಸಮಾಂತರವಾಗಿ ಪಶ್ಚಿಮದ ಸುಮಾರು ಲುಬ್ಧಕ- ಅಗಸ್ಯ ಅಂತರ

ದೂರ ಕಣ್ಣಗೆರೆ ಎಳೆಯುತ್ತೇನೆ. ನನ್ನ ಪುರೋಗಮನ ತಡೆ ಹಿಡಿದು ನಿಲ್ಲಿಸುವ ಒಂಟಿ ನಕ್ಷತ್

ಹೆಸರು ವೈತರಣೀಮುಖ . ಇದು ವೈತರಣಿಪುಂಜದ ಪ್ರಥಮ ತಾರೆ. ಯಮಲೋಕ

( ದಕ್ಷಿಣದಿಗಧಿಪತಿ ಯಮ) ನರಲೋಕದಿಂದ ಪ್ರತ್ಯೇಕಿಸುವ ಪೌರಾಣಿಕ ನದಿ ವೈತರಣಿ. ( ನಗರದ

ಒಳ ಚರಂಡಿ ವ್ಯವಸ್ಥೆಯಲ್ಲಿ ಮುಚ್ಚಳವಿರದ ಆಳುಕಂಡಿ, manhole , ಕಂಡಾಗ ನನಗ

ವೈತರಣಿಮುಖದ ನೆನಪಾಗುತ್ತದೆ!) ಈ ಪುಂಜದ ದ್ವಿತೀಯ ತಾರೆ ವ್ಯಾಧಪೃಷ್ಠದ ಸನಿಹದಲ್ಲಿದ

ಫೆಬ್ರುವರಿ |

ಚಿತ್ರ ೨೬ . ಅಜಗರ, ಕಂದರ, ಸಿಂಹ, ಕನ್ಯಾ , ಹಸ್ಕಾ


ನಕ್ಷತ್ರ ವೀಕ್ಷಣೆ

ಕರ್ಕಟಕ ರಾಶಿ ಉದಯಿಸಿದೆ. ಆದರೆ ಅತ್ಯಂತ ಅಸ್ಪಷ್ಟವಾದ ಇದರ ಚಿತ್ರ ಎಂ

ದೃಷ್ಟಿಗೂ ಗೋಚರವಾಗದು. ಇದು ಮಿಥುನ ರಾಶಿಯ ಪೂರ್ವಕ್ಕಿದೆ. ಪುಷ್ಯ ನಕ್ಷತ

ಸದಸ್ಯ . ಇದನ್ನಾದರೂ ಹೆಕ್ಕಿ ತೋರಿಸುವುದು ಪ್ರಯಾಸ ಕಾರ್ಯ.

* ಮಿಥುನ ರಾಶಿಯಿಂದ ತುಸು ದಕ್ಷಿಣ- ಪೂರ್ವಕ್ಕಿರುವ ಸಿಂಹರಾಶಿಯಲ್ಲ

ಕಾಣಲಾಗದಿದ್ದರೂ ಹಣತೆಯ ವಿಶಿಷ್ಟ ಭಂಗಿಯಂತೂ ಪ್ರಕಟವಾಗುತ್ತದೆ. ಮಘಾದ

ಸಿಂಹ ಸಪ್ತಮ ಮತ್ತು ಸಿಂಹತೃತೀಯ ನಕ್ಷತ್ರಗಳ ಮೂಲಕ ಸಾಗುವ ಎಳೆ,

ಹೊರಗೆರೆಯನ್ನು ನೇಯುತ್ತದೆ. ಹಣತೆಯನ್ನು ಪೂರ್ವ- ದಕ್ಷಿಣ ದಿಶೆಯತ್ತ ಸಮ

ತುಸು ಓರೆಯಾಗಿ ಇಡಲಾಗಿದೆಯೋ ಎಂಬಂಥ ದೃಶ್ಯ . ಇದರ ಬತ್ತಿಕೊಡಿಯಲ್ಲಿ ( ದಕ್ಷಿಣತ

ಮಘಾ ನಕ್ಷತ್ರ ಉಂಟು. ಈ ಜ್ಯೋತಿಯಿಂದ ಸಿಡಿದ ಕಿಡಿಗಳೇ ನಕ್ಷತ್ರಗಳೋ ಎ

ಸುಳಿಯುತ್ತದೆ. ಕಲ್ಪನೆಯನ್ನು ಸ್ವಲ್ಪ ಹರಿಸಿದರೆ ಹಣತೆಯ ಚಿತ್ರದಲ್ಲಿ ಕುಡುಗೋಲ

ಸಿಂಹಕೇಸರ ಕಂಡು ಧನ್ಯರಾಗಬಹುದು. ಸಿಂಹತೃತೀಯದ ಪೂರ್ವಕ್ಕೆ ಹುಬ್

(ಪೂರ್ವಫಾಲ್ಗುಣಿ ) ಇದರ ಪೂರ್ವಕ್ಕೆ ಉತ್ತರಾತಾರೆಯೂ (ಉತ್ತರಫಾಲ್ಗುಣೀ )

ಸಿಂಹರಾಶಿಯ ಪೂರ್ವಕ್ಕೆ ಮೈಚೆಲ್ಲಿ ಕೊಂಡಿರುವ ಅಜಗರ ಪುಂಜದಲ್ಲಿ ಅಶ್ಲೇಷಾ

ಪ್ರಥಮ ) ಉಂಟು.

* ಮಾರ್ಚ್

ಮಹಾವ್ಯಾಧವೀಗ ಯಾಷ್ಟೋತ್ತರ ದಾಟಿ ಪಶ್ಚಿಮಕ್ಕೆ ಹೊರಳಿದೆ. ಲುಬ್ಧಕ- ಅಗಸ್ಯರೇ

ಹೆಚ್ಚು ಕಡಿಮೆ ಉತ್ತರ- ದಕ್ಷಿಣ ನೇರಕ್ಕೆ ಬಂದಿದೆ. ಸಿಂಹರಾಶಿ ಪೂರ್ವಾಕಾಶದ ಚಡ

ಹಂತ ಏರುತ್ತಿದೆ. ಆರು ಅಥವಾ ಏಳು ಬಿಡಿ ನಕ್ಷತ್ರಗಳು ರಚಿಸುವ,

ಸಪ್ತರ್ಷಿಮಂಡಲದ ಮರಿ ಆವೃತ್ತಿಯೋ ಎಂದು ಭಾಸವಾಗುವ ಒಂದು ಚಿತ್ರ ಧ್ರು

ಸನಿಹದಲ್ಲಿ ಕಾಣುತ್ತಿದೆ. ಇದು ಲಘು ಸಪ್ತರ್ಷಿ. ಸಪ್ತರ್ಷಿ ಮಂಡಲದಲ್ಲಿ

ಸ್ಥಾನ ಲಘು ಸಪ್ತರ್ಷಿಯಲ್ಲಿ ಧ್ರುವನಕ್ಷತ್ರಕ್ಕಿದೆ ( ಚಿತ್ರ ೪), ಇದರ ಸುತ್ತ ಎರಡೂ

ಪರಿಭ್ರಮಿಸುವ ದೃಶ್ಯ ಹಿಸ್ ಮಾಸ್ಟರ್ಸ್ ವಾಯ್ಸ್ ಕಂಪನಿಯವರ ಗಾನದೋಸೆಯ (

ರಿಕಾರ್ಡ್) ಕೇಂದ್ರ ವೃತ್ತದಲ್ಲಿರುವ ನಾಯಿ ಮತ್ತು ಕೊಂಬು ಸಹಿತವಾದ ಹಾಡ

ಸುತ್ತ ತಿರುಗುವ ಚಿತ್ರವನ್ನು ನೆನಪಿಗೆ ತರುತ್ತದೆ ( ಚಿತ್ರ ೮), ಅಂಬಿಕಾತನಯದತ್ತರ

ಸಾರ್ಥಕ್ಯವನ್ನು ಬಾನಗಾನ ದೋಸೆಯ ಪರಿಭ್ರಮಣೆಯಲ್ಲಿ ಕಂಡು ಬೆರಗಾಗುತ್ತೇನ

ಸಪ್ತಋಷಿಗಳೇಳೆತ್ತು ತಿರುಗುತಿವೆ ಹಾಕಿ ಧ್ರುವದ ಗಾಣಾ


ಮೇರು ದಂಡದಾ ಇಕ್ಷುರಸವು ಹಿಂಡುತ್ತಲಿಹುದೋ ಜಾಣಾ
ವಿವಿಧವಾಗಿ ಸಂಚರಿಸಿ ಠಾಯಿಯಲ್ಲಿ ಬ್ರಹ್ಮದೇಕತಾನಾ

ಕರೆಯುತಿಹುದು ಸ್ವರಮೇಳಕಾಗಿ ಗ್ರಹಗೋಲ ವಿಶ್ವಗಾನಾ

ಬೆರಗು ? ಅದು ( ಬಾನು) ಸೃಷ್ಟಿ, ಇದು (ಕವನ) ಪ್ರತಿಸೃಷ್ಟಿ – ಈ ಪ್ರತಿಸೃಷ್ಟಿಯಲ್ಲಿ

ಸೌಂದರ್ಯವೇ ಬೆರಗಿನ ಕಾರಣ . ( ಪುಟ ೧೦, ೩೬)


೪ ೩

ಏಪ್ರಿಲ್

ಉತ್ತರ-ಪೂರ್ವ ಆಕಾಶದ ಮೈಯಲ್ಲಿ ಸಾಕಷ್ಟು ಎತ್ತರಕ್ಕೆ ಹಬ್ಬಿರುವ ಸಪ್ತರ್ಷಿಮಂಡ

ವಕ್ರರೇಖೆಯನ್ನು ದಕ್ಷಿಣ-ಪೂರ್ವದ ತಗ್ಗಿಗೆ ಸರಾಗವಾಗಿ ವೃದ್ಧಿಸುತ್ತೇನೆ. ಕಲ್ಪನೆಯ ಕಂಟ

ಕ್ರತುವಿನಲ್ಲಿ ಊರಿ ಕೂತು- ಪುಲಹ- ಪುಲಸ್ಯ - ಅತ್ರಿ - ಆಂಗೀರಸ್ಸು - ವಸಿಷ್ಠ - ಮರೀಚಿ ನೇರ ಮುಕ್ತವಾಗಿ

ಹರಿಯಬಿಟ್ಟು ಮತ್ತೂ ಮುಂದೆ ಇದೇ ಧಾಟಿಯಲ್ಲಿ ಸರಿಯುತ್ತೇನೆ. ಹನುಮಂತಲಾಂಗ

ಈ ರೇಖನದ ವೇಳೆ ಕೆಂಪು- ಹಳದಿ -ನೀಲ ಮಿನುಗಿನ ನಕ್ಷತ್ರ ನನ್ನನ್ನು ತಡೆಹಿಡಿದು ನಿಲ್ಲಿಸುತ್

ಅದು ಇದೀಗ ತಾನೆ ಮೂಡುತ್ತಿದೆ- ನವಜಾತ ವಜ್ರ , ಅದು ಕಣ್ಣ ಮುಚ್ಚಾಲೆ ಆಟವಾಡುತ್ತಿದೆ.

ಕ್ಷಣ ಮಾತ್ರದಲ್ಲಿ ಕಣ್ಣು ಮಿಟುಕಿಸಿ ಹಲವು ಬಣ್ಣದೋಕುಳಿ ಎರಚಿ ಫಕ್ಕನೆ ಇಲ್ಲವಾಗಿ ಮತ್ತೆ

ಕಾಣಿಸಿಕೊಳ್ಳುತ್ತದೆ - ಮಿಂಚುಳ್ಳಿಯಂತೆ :

ಧೃವನಕ್ಷತ್ರದೆಡೆಗೆ

ಕ್ರತು
*
* ಪುಲಹ
ಅಂಗೀರಸ ಅತ್ರಿ
ವಸಿಷ್ಠ .
ಪುಲಸ್ಯ

ಮರೀಚಿ
ಸಪ್ತರ್ಷಿ ಮಂಡಲ

ಸಹದೇವ ಪಂಚಮ
ಸ್ನಾತೀ
ಸಹದೇವ +
* - ಉತ್ತರಾ

ಕನ್ಯಾ ದ್ವಿತೀಯ

ಕನ್ಯಾ

- ಹಸ್ಕಾ *

ಚಿತ್ರ ೨೭. ಧ್ರುವನಕ್ಷತ್ರದಿಂದ ಹಸ್ತಾದ ವರೆಗಿನ ಸುದೀರ್ಘ ವಕ್ರರೇಖೆ


ನಕ್ಷತ್ರ ವೀಕ್ಷಣೆ

ಪವಳದ ಪಥದಲಿ ರಜತರ ರಥದಲಿ

ಹಕ್ಕಿಗಳಿಬ್ಬನಿ ಹಬ್ಬದಲಿ

ಬರವಿನ ರವಿಯ ಶಬಲಚ್ಛವಿಯ

ಕುದುರೆಯೊ ಕಿಳಿರುವ ಕೊಬ್ಬಿನಲಿ

ಮಂಜೇಶ್ವರ

ಈ ವಿಚಿತ್ರ ನಕ್ಷತ್ರದ ಮೈನಾಕಾತಿಥ್ಯ ಬಿಟ್ಟುಕೊಟ್ಟು ಮುಂದೆ ಕ್ಷೀಣ ಪ್ರಕಾಶದ

ನಕ್ಷತ್ರವೊಂದರ ಸಿಂಹಿಕಾ ಪ್ರಕರಣದಿಂದ ಪಾರಾಗಿ ನಾಲ್ಕು ನಕ್ಷತ್ರಗಳು ರಚ

ಲಂಕೆಯಲ್ಲಿ ವಿರಮಿಸುತ್ತೇನೆ.

- ಕೆಂಪು- ಹಳದಿ-ನೀಲ ಮಿನುಗು ಸ್ವಾತಿ ನಕ್ಷತ್ರ . ಇದು ಸಹದೇವ ಪುಂಜದ ಪ್ರಧ

( ಚಿತ್ರ ೨೬ ). ಸ್ವಾತಿಯ ಮುಂದಿನ ಮಂದ ಪ್ರಕಾಶದ ತಾರೆ ಚಿತ್ತಾ . ಮತ್ತೂ ಮುಂದಿನ

ಹಸ್ತಾ ನಕ್ಷತ್ರ . ಇದು ಹಸ್ತಾಪುಂಜವೂ ಹೌದು. ಮಘಾ, ಸ್ವಾತಿ ,

ಕನ್ಯಾರಾಶಿಯನ್ನು ನಿರ್ಧರಿಸುತ್ತದೆ. ಇದರ ಪ್ರಥಮ ತಾರೆ ಚಿತ್ತಾ .

- ಹಸ್ತಾದಿಂದ ದಕ್ಷಿಣಕ್ಕೆ ದೃಷ್ಟಿ ಹಾಯಿಸುತ್ತೇನೆ. ಈಗ ದಕ್ಷಿಣಾಭಿಮುಖಿಯಾ

ನನ್ನ ಬಲಕ್ಕೆ ( ಪಶ್ಚಿಮ ) ಮಹಾವ್ಯಾಧವಿದೆ. ಉತ್ತರ- ದಕ್ಷಿಣವಾಗಿ ಚಾಚಿರುವ ಲುಬ್ಧಕ- ಅಗಸ್ಯರ

ಪಶ್ಚಿಮದ ತಗ್ಗಿಗೆ ಜಾರಿದೆ. ಈ ರೇಖೆಯಿಂದ ಎಡಕ್ಕೆ ( ಪೂರ್ವ) ತೆಂಕುಬಾನಿನ ಇಳಿ

ಸಾಧಾರಣ ಪ್ರಕಾಶದ ನಾಲ್ಕು ನಕ್ಷತ್ರಗಳು ರಚಿಸುವ ದೊಡ್ಡದೊಂದು ಗಾಳಿಪಟ ಕಾ

ಉತ್ತರದ ಎತ್ತರಕ್ಕೆ ನೆಗೆದಿರುವ ಎರಡು ನಕ್ಷತ್ರಗಳು ಇದಕ್ಕೊಂದು ಬಾಲ ಒದಗಿಸಿವೆ. ಗ

ಪೂರ್ವದತ್ತ ತುಸು ಜಾಸ್ತಿ ಎನಿಸುವಂತೆ ಮಾಲಿಕೊಂಡಿದೆ. ಇದನ್ನೇನಾದರೂ

ಕೊಂಚ ತಟ್ಟಿ ನೆಟ್ಟಗೆ ನಿಲ್ಲಿಸಲು ಸಾಧ್ಯವಾಗಿದ್ದರೆ ಎಂದು ಮನಸ್ಸು ಹಂಚಿಕೆ ಹಾಕುತ್ತದ

ಮಂಡಿಗೆ ಮೆಲ್ಲುತ್ತದೆ!)ಹೀಗೆ ನಿಂತ ಅಥವಾ ನಿಲ್ಲಿಸಬಹುದಾದ ಗಾಳಿಪಟದ ಮೇಲುಗಡೆಯ

ಕೆಳಗಡೆಯ (ಉತ್ತರ ಮತ್ತು ದಕ್ಷಿಣ) ಹಾಗೂ ಎಡಗಡೆಯ ಮತ್ತು ಬಲಗಡೆಯ (

ಪಶ್ಚಿಮ ) ನಕ್ಷತ್ರ ಯುನ್ಮಗಳನ್ನು ಜೋಡಿಸುವ ರೇಖೆಗಳು ಶಿಲುಬೆ ಆಕಾರ

ಸದಸ್ಯ ನಕ್ಷತ್ರಗಳು ನೌಕಾಪಟ ಪುಂಜದವು ಎರಡು, ದೇವನೌಕಾಪುಂಜದವು ಎರಡು

ಹೆಸರು ಕೃತಕ ದಕ್ಷಿಣ ಶಿಲುಬೆ.

- ಹಾಗಾದರೆ ನಿಜ ದಕ್ಷಿಣ ಶಿಲುಬೆ ಇದೆಯೆ ? ಅಲ್ಲ ಎಡಕ್ಕೆ (ಪೂರ್ವ) ನೋಟ ಬ

ಇನ್ನೊಂದು ಗಾಳಿಪಟ ಅಧಿಕ ವೈಭವದಿಂದ -ಜೊತೆಯಲ್ಲೇ ಕೊಂಚ, ಆದರೆ ಹೆಚ್ಚಲ್

ಪರಿಹಾಸದಿಂದಕೂಡ ನನ್ನನ್ನು ಮೂಕ ವಿಸ್ಮಯಗೊಳಿಸುತ್ತದೆ: ಮೊದಲು ಕಂಡ ಗಾ

ಅದರ ಬಾಲಚಿತ್ರದ ಉಜ್ಜಲ ಸಂಕ್ಷಿಪ್ತಾಕೃತಿ ಇದು. ಆದರೆ ಇದರ ಬಾಲ ಮಾತ್ರ ಪ

ಚಿಮ್ಮಿದೆ. ನರ್ತಕಿಯರಿಬ್ಬರು ಅಸಮಾಂಗೀಯ ಭಂಗಿ ಪ್ರದರ್ಶಿಸುತ್ತ ನಿಂತಿ

ಗಾಳಿಪಟಗಳು ಅಲ್ಲಿ ಕುಲುಕುಲು ನಗುತ್ತಿವೆ. ಇವುಗಳ ನಾಲ್ಕು ಜೊತ ಬಾಹುಗ

ಸಮಾಂತರವಾಗಿವೆ. ಈ ಎರಡನೆಯದೇ (ಪೂರ್ವ) ನಿಜ ದಕ್ಷಿಣ ಶಿಲುಬೆ. ಇದರ

ನಾಮ ತ್ರಿಶಂಕು. ಇತ್ತ ನೆತ್ತಿಯತ್ತ ಏರಲಾಗದ ಅತ್ತ ಹಾರಿಜದತ್ತ ಜಾರಲಾಗದ ಆದರೂ ಪೂ


೪ ೫.
ನಕ್ಷತ್ರ ವೀಕ್ಷಣೆ

ಪಶ್ಚಿಮ ದೈನಂದಿನ ಪಥ ಸಂಚಲನ ಜೀತವನ್ನು ಸೂತ್ರಬಂಧಿತವಾಗಿ ನಿರ್ವಹಿಸಲೇಬ

ನಕ್ಷತ್ರಪುಂಜದ ಪಾಡು ಬೇರೇನು ತಾನೇ ಆಗಿರಲು ಶಕ್ಯ ? ತ್ರಿಶಂಕು .

ಚಿತ್ರ ೨೮, ಹಸ್ತಾ , ಕನ್ಯಾ , ಅಜಗರ, ಕಿನ್ನರ, ವೃಕ, ತ್ರಿಶಂಕು , ನೌಕಾಪಟ , ಕಂದರ
೪ ೬ .
ನಕ್ಷತ್ರ ವೀಕ್ಷಣೆ

ಆಧುನಿಕ ದಿಕ್ಕೂಚಕೋಪಕರಣಗಳು ಬಳಕೆಗೆ ಬರುವ ಮೊದಲು ಬಡಗು ಕಡಲ ಅಂಬಿಗರಿ

ಚಿರ ಧ್ರುವತಾರೆ, ಸದಾ ತಮ್ಮ ನೆಲೆ ನಿರ್ಧರಿಸುವ ಬಾನ ಹೆಗ್ಗುರುತಾಗಿತ್ತು . ಪ್ರಸ

ಧ್ರುವ ಬಿಂದುವಿನ ಒತ್ತಿಗೆ ಒಂದು ನಕ್ಷತ್ರ ಇರುವುದುಕೇವಲ ಆಕಸ್ಮಿಕ. ದಕ್ಷಿಣ ಧ್ರುವಬಿಂದ

ಕುರಿತಂತೆ ಈ ನೈಸರ್ಗಿಕ ಆಕಸ್ಮಿಕ ಸಂಭವಿಸಿಲ್ಲವಾಗಿ ತೆಂಕು ಕಡಲ ಅಂಬಿಗರು ಪರೋಕ್ಷ

ಅದನ್ನು ಗುರುತಿಸುತ್ತಿದ್ದರು. ತ್ರಿಶಂಕುಪುಂಜದ ಉತ್ತರ ಮತ್ತು ದಕ್ಷಿಣ

ತಾರೆಗಳನ್ನು ಜೋಡಿಸುವ ಗೆರೆಯನ್ನು ಇದರ ಐದು ಪಟ್ಟು ದೂರ ದಕ್ಷಿಣಕ್ಕೆ

ದಕ್ಷಿಣ ಧ್ರುವಬಿಂದು ತಲಪುವುವೆಂಬ ಸಂಗತಿ ಅವರಿಗೆ ಅನುಭವದಿಂದ ತಿಳಿದಿತ್ತು .

ಆದರೆ ಗಭೀರ ಸಾಗರದ ಅಪಾರ ವಿಸ್ತಾರದಲ್ಲಿ ಮತ್ತು ನೀಲವೊಮದ ಅಖಂಡ

ಅನುಭವರಹಿತ ನಾವಿಕರು ಕೃತಕ ದಕ್ಷಿಣ ಶಿಲುಬೆಯನ್ನು ನಿಜ ಶಿಲುಬೆಯೊಂದಿಗಿನ

ಕಾರಣ ನಿಜ ಶಿಲುಬೆ ಎಂದೇ ಭಾವಿಸಿ ಮೇಲಿನ ಪ್ರಯೋಗ ಮಾಡಿ ದಕ್ಷಿಣ ಧ್ರುವಬಿಂ

ಗುರುತಿಸಿದ್ದೇವೆಂದು ಭ್ರಮಿಸಿ ತದನುಗುಣವಾಗಿ ತಮ್ಮ ನೆಲೆಯನ್ನೂ ಯಾನದಿಶ

ನಿರ್ಧರಿಸುತ್ತಿದ್ದರು. ಫಲಿತಾಂಶ ? ಉದ್ದೇಶಿಸಿದ್ದು ಎಲ್ಲಿಗೋ ತಲಪ

ಪಾಡು ತ್ರಿಶಂಕುತ್ವವಲ್ಲದೆ ಬೇರೇನು?

ತ್ರಿಶಂಕುಪುಂಜದ ಗಾಳಿಪಟ ಚಿತ್ರಕ್ಕೆ ಬಾಲವಿರುವುದು ಸರಿಯಷ್ಟೆ. ಪುಂಜದ ಎಡಕ್

ಸಿಡಿದಿರುವ ವಜ್ರಕಾಂತಿಗಳು ಪುಚ್ಛದ ಪ್ರಮುಖ ಘಟಕಗಳು. ಇವುಗಳ ವಲಯಕ್ಕೆ ಕಿನ್ನರ ಪ

ಹೆಸರು. ವಜ್ರಕಾಂತಿಗಳ ಪೈಕಿ ತ್ರಿಶಂಕು ಸಮೀಪದ್ದು (ನನ್ನ ಬಲಗಡೆಯದು) ಕಿನ್ನರ ಪಾರ್

ಪೂರ್ವದ್ದು ( ನನ್ನ ಎಡಗಡೆಯದು) ಕಿನ್ನರ ಪಾದ, ಕಿನ್ನರ ಪಾರ್ಷ್ಠಯನ್ನೂ ಚಿತ

ನನ್ನ ಕಣ್ಣಿಗೆ ಸೇರಿಸುವ ರೇಖೆಗಳ ನಡುವಿನ ಕೋನ ಸುಮಾರು ೫೦°. ಚಿತ್ತಾ ನಕ್ಷತ್ರ

( ಇದನ್ನು ಪೂರ್ವಾಕಾಶದಲ್ಲಿ ನೋಡುವಾಗ ನನ್ನ ಬಲಗಡೆಗೆ) ೫೦°ಕೋನಾಂತರದಲ್

ಇದೆಯೆಂದು ಅರ್ಥ .

ಉಜ್ಜಲತೆಯ ಮಾನಕದಲ್ಲಿ ಲುಬ್ದಕಕ್ಕೆ ಮೊದಲ ಮಣೆಯನ್ನೂ ಅಗಸ್ತ್ರಕ್

ಮಣೆಯನ್ನೂ ಹಾಕಿರುವುದು ಸರಿಯಷ್ಟೆ . ಮೂರನೆಯದನ್ನು ಯಾರಿಗೆ ಕೊಡೋಣ? ಇನ

ಕಿನ್ನರಪಾದಕ್ಕೇ ಇದು ಮೀಸಲು. ಇದರ ಮಣೆ ಮೂರನೆಯದಾದರೂ ಮನೆ ಮೊದಲನೆಯ

ಏಕೆಂದರೆ ಕಿನ್ನರಪಾದದ ತೀರ ಒತ್ತಿಗೆ ಇರುವ ಆದರೆ ಬರಿಗಣ್ಣಿಗೆ ಕಾಣದ ಒಂದು ತಾರೆ

ಸೂರ್ಯನಾದ ಬಳಿಕ ಅತ್ಯಂತ ಸಮೀಪದ ನಕ್ಷತ್ರ. ಎಂದೇ ಇದು ಸಮೀಪತಮ

ಅಗೋಚರವಾದದ್ದರಿಂದ ಇದರ ಮನೆಯಾದ ಕಿನ್ನರಪಾದವನ್ನೇ ನಮ್ಮ ನೆರೆಮನ

ವಾಡಿಕೆ . ಭೂಮಿ-ಸಮೀಪತಮಕಿನ್ನರ ಅಂತರ ಭೂಮಿ-ಸೂರ್ಯ ಅಂತರದ ಸುಮಾರು ೨, ೮೨

ಮಡಿ ದೊಡ್ಡದು. ಮಾನವಮಾನಕಗಳಿಂದ ಆಕಾಶದಲ್ಲಿಯ ನೆರೆಹೊರೆ ಅರಿಯುವ

ಮೊಳಹಾಕಿ ಗೌರೀಶಂಕರದ ಔನ್ನತ್ಯ ಅಳೆಯುವುದಕ್ಕೆ ಸಮಾನವಾಗುತ್ತದೆ !

ಡಿಸೆಂಬರ್ ತಿಂಗಳ ಸಂಜೆ ಆಗಸಕ್ಕೆ ಮೆರುಗಿತ್ತು . ಉಜ್ಜಲ ದಿನಗಳ ಆಗಮನದ ಹರಿಕ

ಮೆರೆದ ಮಹಾವ್ಯಾಧ ಈಗ ಪಡುಬಾನಿನಲ್ಲಿ ಇಳಿಯುತ್ತಿರುವ ನೋಟ ನನ್ನಲ್ಲಿ

ಹೊಮ್ಮಿಸುತ್ತದೆ. ಜೀವನದ ತಾತ್ವಿಕಮೂಲ್ಯ ಚಿಂತನೆಗೆ ಪ್ರೇರಿಸುತ್ತದೆ:ಮೂಡಿದವನು ಏರಲೇಬೇಕು


೪ ೭
ನಕ್ಷತ್ರ ವೀಕ್ಷಣೆ

ಏರಿದವನು ಇಳಿಯಲೇಬೇಕು, ಇಳಿದವನು ಕಂತಲೇಬೇಕು ಎಂಬ ಚಿರಂತನ ಸತ್ಯವನ್ನು

ಪ್ರತೀಕಿಸುವಂತಿದೆ ಮಹಾವ್ಯಾಧ :

ನಭದ ಬಯಲೊಳನಂತ ಮನದ ಗುಹೆಯೊಳನಂತ


ವುಭಯದಾ ನಡುವೆ ಸಾದ್ಯಂತ ಜೀವಕಥೆ

ವಿಭುವೊಬ್ಬನೇ ಗಾಳಿ ಬುಡ್ಡಗಳನೂದುವನು

ಹಬೆಗುಳ್ಳೆಯೋ ಸೃಷ್ಟಿ ಮಂಕುತಿಮ್ಮ

ಮೇ

ಸ್ವಾತಿ ನಕ್ಷತ್ರವೀಗ ಪಳಪಳನೆ ಲಕಲಕಿಸುತ್ತಿಲ್ಲ . ಪೂರ್ವಾಕಾಶದಲ್ಲಿ ಅದರ ಅಂತಸ

ಏರಿದೆಯಾಗಿ ಅಧಿಕ ಗಾಂಭೀರ್ಯದಿಂದ ವರ್ತಿಸುತ್ತಿರುವಂತೆ ಭಾಸವಾಗುತ್ತದೆ. ಈ ತಾ

ಸಹದೇವ ಪುಂಜ. ಇದೊಂದು ಪಂಚಭುಜ, ಸ್ವಾತಿ ನಕ್ಷತ್ರ ಇದರ ಒಂದು ಬಾಹುವ

ದಕ್ಷಿಣಾಭಿಮುಖ ವಿಸ್ತರಣೆಯ ಮೇಲಿದೆ.

ಸಹದೇವದ ಪೂರ್ವಕ್ಕೆ ಇರುವ ಎರಡು ಪುಂಜಗಳ ಪೈಕಿ ಮೊದಲನೆಯದು ಉತ್ತರ ಕಿರೀಟ.

ಆರು ಪುಟ್ಟ ಬೆಳಕಿನ ಕಿಡಿಗಳು ಕಿಕ್ಕಿರಿದು ಸಂದಣಿಸಿ ನೇಯ್ದಿರುವ ಕಮಾನಿನ ಆಕಾರಕ್ಕೆ ಕಲ್ಪನೆ ಮೆತ್ತಿ

ಕಿರೀಟ ಕಾಣುವುದು ಸಾಧ್ಯ . ಇದನ್ನು ಧರಿಸಿರುವ ಶಿರ ಯಾವುದು ? ಇದರ ಮುಂದಕ್ಕೆ (ಪೂರ್

ಇರುವ ಭೀಮ ಪುಂಜ. .

ಸಿಂಹ-ಕನ್ಯಾಪಟ್ಟಿಯನ್ನು ವಿಸ್ತರಿಸಿದರೆ ಅದು ಪೂರ್ವ- ದಕ್ಷಿಣದತ್ತ ಸರಿಯುತ್ತದೆ. ತುಲಾ

ಇದರ ಮೇಲಿದೆ. ತುಲಾವನ್ನು ಬೊಟ್ಟಿಟ್ಟು ತೋರಿಸುವುದು ಕಷ್ಟ . ಸಾಪೇಕ್ಷವಾಗಿ ಅ

ಉಜ್ಜಲತೆಯ ನಾಲ್ಕು ನಕ್ಷತ್ರಗಳು ರಚಿಸುವ ವಜ್ರಾಕೃತಿಯನ್ನು ನಿರಭ್ರನಿಶ್ಚಂದ್ರ ನಿರ

ಗುರುತಿಸಬಹುದು. ಇವುಗಳ ಪೈಕಿ ವಿಶಾಖ ನಕ್ಷತ್ರ ಮುಖ್ಯವಾದದ್ದು .

ಜೂನ್

ಧ್ರುವನಕ್ಷತ್ರ -ಸ್ವಾತೀ ಜೋಡಣೆ ಪಾದವಾಗಿದ್ದು ಪೂರ್ವಕ್ಕೆ ಶೃಂಗವಿರುವ ಸಮಭುಜ

ರಚಿಸಲು ಸ್ಫೂರ್ತಿ ಬಂದಿದೆ. ಕಾರಣ ಈ ಶೃಂಗದ ಮೇಲೆ ನನ್ನ ಲಕ್ಷ್ಯ ಸೆಳೆಯುವ ಒಂದು ನೀಲಮಣಿ

ಥಳಥಳಿಸುತ್ತದೆ. ಇದು ಅಭಿಜಿತ್ , ವೀಣಾ ಪುಂಜದ ಪ್ರಥಮ ತಾರೆ. ಉಜ್ವಲತೆಯ ಮಾನಕದಲ್ಲ

ಐದನೆಯ ಸ್ಥಾನ, ಅಭಿಜಿತ್ ಸ್ವಾತೀ ಧ್ರುವನಕ್ಷತ್ರ ರಚಿಸುವ ಸಮಭುಜ ತ್ರಿಭುಜಕ್ಕೆ ಗ್ರೀಷ್ಮ

ತ್ರಿಭುಜವೆಂದು ಹೆಸರು.

ಆಕಾಶದ ಪೂರ್ವ- ದಕ್ಷಿಣ ವಲಯದಲ್ಲಿ ಎದ್ದು ಕಾಣುವ ಸುಮಾರು ೧೫ ನಕ್ಷತ್ರಗಳ ವಕ

ಚೇಳಿನ ಕಂಕಾಲವನ್ನು ನೆನಪಿಗೆ ತರುತ್ತದೆ. ಇದು ವೃಶ್ಚಿಕರಾಶಿ. ದ್ವಾದಶರಾಶಿಗಳ ಪೈಕಿ ಹೆಸ

ಆಕಾರಕ್ಕೂ ಸಾಮ್ಮ ಪ್ರಕಟವಾಗುವ ಏಕೈಕ ಪುಂಜ. ಮೊದಲು ಮೂಡಿ ಬರುವ ಮೂರು ನಕ್ಷತ

ಅಡ್ಡಸಾಲಿನ (ಉತ್ತರ- ದಕ್ಷಿಣ) ಒಟ್ಟು ಹೆಸರು ಅನೂರಾಧಾ, ಈ ಪೈಕಿ ನಡುವಿನದರಿಂದ ತೊಡ

ಕೆಳಕ್ಕೆ (ಪೂರ್ವ) ಇರುವ ಮೂರನೆಯ ನಕ್ಷತ್ರ ಜೇಷ್ಯಾ, ಇದು ಕೆಂಪಗಿದೆ -ರೋಹಿಣಿ,

ನಕ್ಷತ್ರಗಳ ಜ್ಞಾತಿಯೋ ಎಂಬಂತೆ . ಚೇಳಿನ ಬಾಲದ ಕೊಂಡಿಯಲ್ಲಿಯ ಐದಾರು ನಕ್ಷತ್ರಗಳ ಒ

ಹೆಸರು ಮೂಲಾ.
೪ ೮

ಜುಲೈ

ಕಾರ್ಗಾಲದ ವೈಭವದಲ್ಲಿ ತಾರೆಗಳು ಮಾಯವಾಗಿವೆ. ಮೋಡಸುರಿಸು

ಬಿರುಸಿನಲ್ಲಿ ನಕ್ಷತ್ರ ಹನಿಸುವ ಬೆಳಕಿನೋಕುಳಿ ಇಲ್ಲವಾಗಿದೆ. ಆದರೂ ಆಗ ಈಗ

ತೀರ ವಿರಳವಾಗಿ ಮುಗಿಲು ಚದರಿದಾಗ ಅನಾವರಣಗೊಳ್ಳುವ ಗಗನ ದೃಶ

ಸೌಂದರ್ಯಪೂರಿತವಾಗಿದೆ. ಮಳೆಯಿಂದ ಕೊಳೆ ತೊಳೆದ ಇಳೆ ಸುತ್ತ , ದೂಳು ಹೊಗ

ಮುಸುಕು ಇರದ ಬಾನು ಅತ್ತ , ಇದರ ಚತುವಿಗೆ ಲಗತ್ತಾದ ಅರಿಲುಗಳ ಚಿತ್ತಾಪಹಾ

ಎತ್ತೆತ್ತ - ಇವು ನನ್ನನ್ನೊಂದು ಮಾಯಾಲೋಕಕ್ಕೆ ಒಯ್ಯುತ್ತಿವೆ. ಇಲ್ಲಿಯ ಕ

ನಾನು ಪಟ್ಟ ಎಲ್ಲ ಕಷ್ಟ ಕೋಟಲೆಗಳನ್ನೂ ಪರಿಹರಿಸಿ ನನ್ನಲ್ಲಿ ಧನ್ಯತೆಯ ಭಾವ ದೀಪ್ತಿಸು

ಚಿತ್ರ ೨೯ : ತುಲಾ, ವೃಶ್ಚಿಕ, ವೇದಿಕಾ, ತ್ರಿಕೋಣಿ, ಕಿನ್ನರ, ಶಶ , ಅಜಗರ |


ನಕ್ಷತ್ರ ವೀಕ್ಷಣೆ

ವೃಶ್ಚಿಕರಾಶಿಯ ಚೇಳಿನ ಚಿತ್ರಣ ಸದ್ದಿಲ್ಲದೆ ಪಶ್ಚಿಮದೆಡೆಗೆ ಮುನ್ನುಗ್ಗುತ್ತಿದೆ - ಹಸ್ತಾ

ನಕ್ಷತ್ರವೆಂಬ ಎರೆಯನ್ನು ತನ್ನ ಗ್ರಾಹಕತಂತುಗಳಿಂದ ಇಕ್ಕುಳಹಿಡಿಯಲೋ ಎಂಬಂತೆ.

ಆಕಾಶಕಾಯಗಳ ದೈನಂದಿನ ಪೂರ್ವ- ಪಶ್ಚಿಮ ಉತ್ಸವಪಥಸಂಚಲನವಾಗಲೀ ಸೂರ್ಯ ಚಂದ್ರ

ಕ್ರಮಶಃ ಪಶ್ಚಿಮ-ಪೂರ್ವ ನಿಧಾನ ಪರಿಕ್ರಮಣವಾಗಲೀ ನನಗೆಂದೂ ಸ್ಪಷ್ಟವಾಗಿ ಕಂಡದ್ದೇ

ಉದಾಹರಣೆಗೆ ಬಸವನಹುಳುವಿನ ಬಲುಸೋಮಾರಿತನದ ಸರಿತ ಇಲ್ಲವೆ ಬೆಟ್ಟದಕೊಡಿಯಿಂ

ಕೆಳಕ್ಕೆ ನೋಡುವಾಗ ಪಾತಾಳದ ಹರವಿನಲ್ಲಿ ಅಂಕುಡೊಂಕು ವಂಕಿಯಂತೆ ಕಾಣುವ ಹಾದಿಯ ಮೇಲೆ

ಜಗುಳುವ ಎತ್ತಿನ ಬಂಡಿಯ ಎಳೆತ ಸುವ್ಯಾಖಿತ ಚಲನೆಗಳಾಗಿ ನನಗೆ ವ್ಯಕ್ತವಾಗುತ್ತವೆ. ಅಂದರೆ

ಆಸುಪಾಸಿನ ಸ್ಥಿರ ವಸ್ತುಗಳ ಮುನ್ನೆಲೆಯಲ್ಲಿ ಇವುಗಳ ಸ್ಥಾನಾಂತರಣೆಯನ್ನು ಕಣ್ಣು ಸ್ಪಷ್

ಗುರುತಿಸಬಲ್ಲದು. ಇದೇ ಸಾಮ್ಯವನ್ನು ಆಕಾಶಕ್ಕೆ ಎತ್ತರಿಸಿದಾಗ ಸೋಲುತ್ತೇನೆ. ಅಲ್ಲಿ ಅತಿ ದೂರದ

ನಕ್ಷತ್ರಗಳು ಸಾಪೇಕ್ಷವಾಗಿ ಸ್ಥಿರವಾಗಿರುವ ಚಿತ್ರಗಳನ್ನು ರಚಿಸುತ್ತವೆ. ಒಂದು

ಸ್ಥಾನ ಗುರುತಿಸುತ್ತೇನೆ. ಮುಂದಿನ ಇರುಳು ಅದೇ ಹೊತ್ತಿಗೆ ಮತ್ತೆ ಚಂದ್ರನ ಸ್ಥಾನ ದೃಷ್ಟಿಸುತ್ತೇನ

ಎರಡನೆಯ ಸ್ಥಾನ ಮೊದಲನೆಯ ಸ್ಥಾನಕ್ಕಿಂತ ಸುಮಾರು ೧೨° ಪೂರ್ವಕ್ಕೆ ಇದೆಯೆಂದು ತಿಳಿಯುತ್ತೇನ

ಈ ಸರಿತ ಅವಿಚ್ಛಿನ್ನವಾಗಿ ನಡೆದುದರಿಂದ ಒಂದು ರಾತ್ರಿಯಲ್ಲಿ ಚಂದ್ರ ಸುಮಾ

ಸರಿದಿರಬೇಕೆಂದು ತರ್ಕಿಸಿ ರಾತ್ರಿ ಪೂರ್ತಿ ಚಂದ್ರನನ್ನು ಕಾವಲು ಕಾಯುತ್ತ ಕುಳಿತಿರುತ

ಪೂರ್ವಾಕಾಶದಲ್ಲಿದ್ದ ನೆಲೆಗಿಂತ ಚಂದ್ರ ಮರು ಮುಂಜಾನೆ ವೇಳೆಗೆ ೬ಿಯಷ್ಟ

ಸರಿದಿರುವುದು ನಿಜವಾದರೂ ಈ ಸರಿತದ ಕರಾಮತ್ತು ಮತ್ತು ಹಿಕಮತ್ತು ಮಾತ್ರ ನನ್ನ ಅಲ್ಪ

ನಿಲುಕುವುದೇ ಇಲ್ಲ . ನೆಲದಲ್ಲಿ ನಿಜವಾದದ್ದು ಬಾನಿನಲ್ಲಿ ನಿಜವಲ್ಲ ?

ವೃಶ್ಚಿಕದ ಪೂರ್ವದಕ್ಷಿಣಕ್ಕೆ ಹಲವಾರು ಕ್ಷೀಣ ಆದರೂ ಸ್ಪಷ್ಟ ನಕ್ಷತ್ರಗಳ ಒಕ್ಕೂಟ

ಕಾಣುತ್ತೇನೆ. ಇದರಲ್ಲಿ ಎದ್ದು ಕಾಣುವ ಚಿತ್ರ ಒಳಲೆಯದು ಅಥವಾ ಕುಡುಗೋಲಿನದ

ಸಪ್ತರ್ಷಿಮಂಡಲದ ಸಂಕ್ಷಿಪ್ತಾಕೃತಿಯನ್ನು ಕೂಡ ಇದರಲ್ಲಿ ಕಾಣಬಹುದು. ಇದನ್ನು

ನಕ್ಷತ್ರದ ಕೊಂಡಿಗೆ ತಗಲಹಾಕಿದಂತಿದೆ. ಇಲ್ಲೊಂದು ತಪ್ಪಾಗಿದೆ : ಒಳಲೆ ಕವಿಚಿಕೊಂಡಿ

ಚೆಲ್ಲಿಹೋಗುವ ಭಂಗಿಯಲ್ಲಿದೆ. ಇದು ಧನುರಾಶಿ. ಇದರಲ್ಲಿಯ ಪ್ರಧಾನ ತಾರೆಗಳು ಪೂರ್ವಾ

ಮತ್ತು ಉತ್ತರಾಷಾಢ, ಧನುವಿಗಿಂತ ದಕ್ಷಿಣಕ್ಕೆ ಬೇರೆ ಯಾವ ರಾಶಿಯೂ (ಸೂರ್

ಗೃಹ) ಇರುವುದಿಲ್ಲ .

ಧನುವಿನ ಕೆಳಬಲಕ್ಕೆ (ಪೂರ್ವ- ದಕ್ಷಿಣ) ಏಳೆಂಟು ಬೆಳಕಿನ ಮಣಿಗಳನ್ನು ಕೋದು ಗಚಿಸ

ಮಾಲೆ ಕಾಣುತ್ತದೆ. ಇದು ದಕ್ಷಿಣ ಕಿರೀಟ ಪುಂಜ. ಇದನ್ನು ಸೂಡುವ ಅದೃಷ್ಟಶಾಲಿ ಯಾ

ಪ್ರಾಯಶಃಮೂಲಾ ನಕ್ಷತ್ರ .

ಇನ್ನೂ ಮುಂದಕ್ಕೆ (ಪೂರ್ವ) ಮೂರು ಸಮೀಪ ನಕ್ಷತ್ರಗಳಿಂದಾದ ಗೀಟು ಕಾಣುತ್ತೇನೆ

ಮಹಾವ್ಯಾಧದ ನಡುಪಟ್ಟಿಯ ನೆನಪು ಮಿಂಚುತ್ತದೆ. ಆದರೆ ಮಹಾವ್ಯಾಧ ಈಗ ಗತ ವೈಭವ. ಆ

ಉಜ್ವಲತೆ ಇವುಗಳಿಗಿಲ್ಲ . ಇವುಗಳ ಪೈಕಿ ನಡುವಿನದು (ವ್ಯಾಧಮೇಖಲಾ ಕೇಂದ್ರಕ್ಕೆ

ಸಂವಾದಿಯಾದದ್ದು ) ಶ್ರವಣ, ಉಳಿದೆರಡಕ್ಕಿಂತ ಇದರ ಉಜ್ವಲತೆ ಕೊಂಚ ಜಾಸ್ತಿ . ಈ

ಗರುಡಪುಂಜ .

ಗರುಡಕ್ಕೂ ನಕುಲಕ್ಕೂ ನಡುವೆ ಇರುವ ವಿಚಿತ್ರಾಕೃತಿಯ ಒಟ್ಟು ಹೆಸರು ಧನಿಷ್ಠಾ

ಹೀಚು ಮಾವಿನಕಾಯಿಯ ಇಲ್ಲವೇ ಚಿಪು ಸಹಿತವಾದ ಗೇರು ಬೀಜದ ಆಕಾರ ( ಚಿತ್ರ ೩೦).
೫ ೦
ನಕ್ಷತ್ರ ವೀಕ್ಷಣೆ

ಚಿತ್ರ ೩೦. ಖೇಟಕ, ಮಕರ, ಮಯೂರ, ವೇದಿಕಾ, ವೃಶ್ಚಿಕ ( ಭಾಗಶಃ), ಧನು

ಅಭಿಜಿತ್ , ಶ್ರವಣ , ಧನಿಷ್ಟಾ ರೂಪಿಸುವ ತ್ರಿಭುಜದಲ್ಲಿ ಈ ನಕ್ಷತ್ರಗಳು

ಪಶ್ಚಿಮ , ದಕ್ಷಿಣ ಮತ್ತು ಪೂರ್ವಶೃಂಗಗಳು.


೫ ೧

ಆಗಸ್ಟ್

ಪೂರ್ವ-ಉತ್ತರಾಕಾಶದಲ್ಲಿ T ಆಕಾರದಲ್ಲಿರುವ ( ಆದರೆ ಅಡ್ಡ ಗೀಟಿನ ಉದ್ದ, ಅಂದರೆ

Tಯ ತಲೆ ಕೊಂಬು, ನೀಟಗೇಟಿನ ಉದ್ದದ, ಅಂದರೆ ಬಾಲದ, ಎರಡರಷ್ಟಿದ್ದು T ಆಕಾರಕ್ಕಿಂ

ಹೆಚ್ಚಾಗಿ ಬಡಗಿಯ ಲಂಬಪಟ್ಟಿಯನ್ನು ಹೋಲುವ) ನಾಲ್ಕು ನಕ್ಷತ್ರಗಳ ಗುಂಪು ಕಾಣುತ

ಅಲ್ಲಿಯೇ ಚಿತ್ತೈಕಾಗ್ರತೆ ಸಾಧಿಸಿ ನೋಡುತ್ತೇನೆ. ಇನ್ನೂ ಕೆಲವು ಬೆಳಕಿನ ಹುಡಿಗಳು ಹರಡಿ ಹೋಗಿ

ಶಿಲುಬೆಯ ಆಕಾರ ಪ್ರದರ್ಶಿತವಾಗುತ್ತದೆ. ದಕ್ಷಿಣದ ಶಿಲುಬೆಗೆ (ತ್ರಿಶಂಕು) ಪ್ರತಿಯಾಗಿ ಇದೀಗ

ಉತ್ತರದ ಶಿಲುಬೆ. ಇದು ರಾಜಹಂಸಪುಂಜ. ಇದರ ಪ್ರಧಾನ ತಾರೆ ಹಂಸಾಕ್ಷಿ ,

ಚಿತ್ರ ೩೧, ಮಕರ, ಧನು, ಖೇಟಕ , ಸರ್ಪ, ಗರುಡ, ಧನಿಷ್ಠಾ


೫ ೨
ನಕ್ಷತ್ರ ವೀಕ್ಷಣೆ

ಧನುವಿನ ಪೂರ್ವಕ್ಕೂ ಗರುಡದ ದಕ್ಷಿಣಕ್ಕೂ ಇರುವ ವಲಯ ಮಕರ ರಾಶಿ, ಮಕರ ಎ

ಮೊಸಳೆ, ಈ ರಾಶಿಯ ಪಾಶ್ಚಾತ್ಯನಾಮ Capricornus, ಕೊಂಬಿರುವ ಆಡು ಎಂದರ್

ಅರ್ಥಗಳು ಹೇಗೂ ಇರಲಿ. ಮಕರ ರಾಶಿಯ ಚಿತ್ರ ಮಾತ್ರ ಆಡಿನ ಬದಲು ಶೃಂಗ ಮೀನಿನ ಚಿ

ನೆನಪಿಗೆ ತರುತ್ತದೆ.

ಸೆಪ್ಟೆಂಬರ್

ಮುಂಗಾರಿನ ಮುಗಿಲು ಸಾಕಷ್ಟು ಮಳೆಗರೆದು ಹಿಂಜರಿದಿದೆ. ನೆಲದ ಹಸುರಿಗೆ ಬ

ಎರಕಗೊಂಡು ಉಲ್ಲಾಸ ಸರ್ವತ್ರ ಪಸರಿಸಿದೆ. ತಂಪಾದ ಹವೆ , ಕಾರ್ಯೋತ

ಮೂಡಿಸುವ ಶ್ರಾಯ , ಬಾನು ನೋಡಲು ನೂಕು ನುಗ್ಗಾಟ ಅಥವಾ ಸುಂಕ ವಶೀಲಿ ಇರ

ಸನ್ನಿವೇಶ, ಮಕರ ರಾಶಿಯ ಪೂರ್ವ-ಉತ್ತರಕ್ಕೆ ಹರಡಿರುವ ಅರಿಲುಗಳ ಅರಳು ರಚಿಸು

ಚಿತ್ರಕಲೆ ಕುಂಭರಾಶಿ, ಕುಂಭ ಎಂದರೆ ಗಡಿಗೆ ಅಥವಾ ಕೊಡ. ಇದರ ಚಿತ್ರ ಕೊಡವನ

ಸೂಚಿಸುವುದಿಲ್ಲ . ಬದಲು ಮುಚ್ಚಿದ ಕೈಮರಿಗೆಯನ್ನು ನೆನಪಿಗೆ ತರುತ್ತದೆ. ಪಾತ್ರೆಗೆ

ಆಗಿರುವಲ್ಲಿಯ ನಕ್ಷತ್ರ ಶತಭಿಷ.

ಕುಂಭದ ಎಡಗಡೆ ಕೆಳಕ್ಕೆ (ಉತ್ತರ- ಪೂರ್ವ) ಇರುವ ಚೌಕಾಕಾರ ಪುನಃ "ನಾ

ಬಂದಿದ್ದೇನೆ!"ಎಂದು ನನ್ನನ್ನು ಸ್ವಾಗತಿಸುತ್ತದೆ. ನೆನಪಿನ ದೋಣಿಯಲ್ಲಿ ಹಿಂದಿನ

ಸರಿಯುತ್ತೇನೆ. ಸುಪರಿಚಿತ ನಕುಲವನ್ನು ಕಾಣುತ್ತೇನೆ.

- ಇಳಿದು ಬಾ ತಾಯೆ ಇಳಿದು ಬಾ

ವೃಶ್ಚಿಕದ ಕೊಂಡಿಯಿಂದ (ಮೂಲಾನಕ್ಷತ್ರ ) ಪೂರ್ವಕ್ಕೆ ಹರಡಿರುವ ಹಲವಾರು ಬೆಳ

ಹರಳುಗಳು ಒಟ್ಟಾಗಿ ಕಿರುಚಮಚದ ಆಕೃತಿ ಬಿಂಬಿಸುವುದು ಸರಿಯಷ್ಟ , ಇದು

ದೇವತೆಯೊಬ್ಬಳು ತನ್ನ ಮಗುವಿಗೆ ಈ ಚಮಚದ ಮೂಲಕ ಹಾಲೂಡುತ್ತಿದ್ದಳಂತೆ. ಕೊಂಚ ಹಾಲ

ಒಸರಿ ಬಾನ ಹಲಗೆಯ ಮೇಲೆ ತೆಳುವಾಗಿ ಪಸರಿ ಹೋಯಿತಂತೆ . ಹೀಗೆ ಹರಿದ ಹಾಲಿನ

ಹಾದಿಯಲ್ಲಿರುವ ಕೆಲವು ನಕ್ಷತ್ರ ಪುಂಜಗಳಿವು: ಲಘುಶ್ಚಾನ, ಮಹಾವ್ಯಾಧ

ವಿಜಯಸಾರಥಿ, ಪಾರ್ಥ, ಕುಂತಿ, ದೌಪದಿ, ಯುಧಿಷ್ಕರ, ರಾಜಹಂಸ , ಗರುಡ, ಧನು, ವೃ

ಕಿನ್ನರ, ತ್ರಿಶಂಕು ಇತ್ಯಾದಿ. ದಕ್ಷಿಣದಿಂದ ಉತ್ತರಕ್ಕೆ ವ್ಯಾಪಿಸಿರುವ ಈ ಕ್ಷೀರಪಥದಲ್ಲಿ

ವಿಷ್ಣುಪಾದೋದ್ಭವೆ ದೇವಗಂಗೆಯನ್ನು ಕಂಡಿದೆ. ಉತ್ತರದ ಹಿಮವತ್ಪರ್ವತದೆ

ಅಲ್ಲಿ ಅದು ಭೂಮಿಗೆ ಇಳಿದಿದೆ- ಹರನ ಜಡೆಯಿಂದ, ಹಿಮವತ್ಪರ್ವತದ ಬಣ್ಣವೂ

ಧರ್ಮಮೇಘವೇ ವರ್ಷಿಸುವಂತೆ -

ಸತ್ಯದ ಸತ್ಯವ ಸ್ಪರ್ಶಿಸುವಂತೆ


ಧರಣಿಯ ಕೆಚ್ಚಲು ಹರ್ಷಿಸುವಂತೆ
ಬರಲಿದೆ ಮಳೆ ಉದ್ಘರ್ಷಿಸುವಂತೆ
ಬೇಂದ್ರೆ

ಈ ಮಸಕು ಬೆಳಕಿನ ಹೊನಲಿಗೆ ಆಕಾಶಗಂಗೆ ಎಂದು ಹೆಸರು . ಆಗಸ್ಟ್ -ಸೆಪ್ಟೆಂಬ

ನಿರ್ಮಘ ನಿಶ್ಚಂದ್ರ ರಾತ್ರಿ ಇದನ್ನು ಸ್ಪಷ್ಟವಾಗಿ ಗುರುತಿಸಬಹುದು. ರಾಜಹಂ


೫ ೩
ನಕ್ಷತ್ರ ವೀಕ್ಷಣೆ

ಚಿತ್ರ ೩೨. ಆಕಾಶಗಂಗೆಯ ಪಥ :ಕಿನ್ನರ, ತ್ರಿಶಂಕು , ಮಹಾವ್ಯಾಧ, ವಿಜಯಸಾರಥಿ

ಪುತಿನರ ನುಡಿಗಳಲ್ಲಿ , " ಬೆಳ್ಳಿ ಬೆಳ್ಳಲುಬೆಳುಂದಿಗಳೀ ಮೈಯ ಬೆಳುಪಿದಿರುಮಂಕು. " ವಾಸ್ತವ

ಆಕಾಶಗಂಗೆ ಲಕ್ಷೇಪಲಕ್ಷ ನಕ್ಷತ್ರಗಳ ಸಮುದಾಯ . ನಮ್ಮ ಸೂರ್ಯ ಇದರ ಅಂಚಿನಲ್ಲಿರ

ಒಂದು ಸಾಧಾರಣ ಸದಸ್ಯ ಮಾತ್ರ , ಆಕಾಶಗಂಗೆಯಲ್ಲಿ ಸುಮಾರು ೪x೧೦೧೧ = ೪೦೦ , ೦೦೦,

೦೦೦,೦೦೦ ( ನಲವತ್ತು ಸಾವಿರಕೋಟಿ) ನಕ್ಷತ್ರಗಳಿವೆಯೆಂದು ಅಂದಾಜು. ನಮ್ಮಿಂ

ದೂರಗಳಲ್ಲಿ ಮತ್ತು ವಿವಿಧ ದಿಶೆಗಳಲ್ಲಿ ಹರಡಿಹೋಗಿರುವ ಇವು ಬಿಡಿಯಾಗಿ ನಮಗೆ ಕಾಣವ

ಇವುಗಳ ಸಾಮೂಹಿಕ ಮಂದ ಪ್ರಕಾಶವೇ ಆಕಾಶಗಂಗೆ.

ಬಿಡಿ ನಕ್ಷತ್ರಗಳ ಜೊತೆಗೆ ಆಕಾಶಗಂಗೆಯಲ್ಲಿ ಅಂತರನಾಕ್ಷತ್ರಿಕ ರಜೋರಾಶ

ಜನ್ಮ ಸ್ಥಳಗಳೆಂದು ಭಾವಿಸಲಾಗಿರುವ ನೀಹಾರಿಕೆಗಳು, ಮೃತನಕ್ಷತ್ರಗಳು ಮುಂತಾದವು ಕೂಡ

ಇವೆ. ಇದೊಂದು mixed bag , ಜಾತ್ರೆ ಸ್ಪೆಶಲ್ ! ಆಕಾಶಗಂಗೆಯ ಅಡ್ಡಸಾಗಲು ಬೆಳಕಿಗೆ (ವೇಗ

ಸೆಕೆಂಡಿಗೆ ೩೦೦, ೦೦೦ ಕಿಮೀ ) ೧ ಲಕ್ಷ ವರ್ಷಗಳೇ ಬೇಕಾದೀತು. ಈ ಮಹಾಗಾತ್ರದ ಮಹಾಸ್ವರೂಪ


೫ ೪
ನಕ್ಷತ್ರ ವೀಕ್ಷಣೆ

- ಚಿತ್ರ ೩೩ . ಆಕಾಶಗಂಗೆಯ ಪಥ : ವೃಶ್ಚಿಕ, ಧನು, ಕುಂಭ, ಅಜಗರ, ಕನ್ಯಾ

ತನ್ನ ಸುತ್ತ ತಾನು ಬುಗರಿಯಂತೆ ಆವರ್ತನಶೀಲವಾಗಿದೆ. ಒಂದು ಆವರ್ತನೆಯ ಅ

ಕೋಟಿ ವರ್ಷಗಳು. ಈ ಅವಧಿಗೆ ಬ್ರಹ್ಮಾಂಡ ವರ್ಷ ಎಂದು ಹೆಸರು.

ಚಂದ್ರನ ಮಾಸಿಕ ವರಿಸೆಗಳು

ನಕ್ಷತ್ರ ಚಿತ್ರಗಳಾಗಲೀ ಅವುಗಳ ಸಾಪೇಕ್ಷ ಸ್ಥಾನಗಳಾಗಲೀ ಬದಲಾಗುವುದಿಲ್ಲ ಎಂಬ

ಹಲವು ಕಾಲ ಗಗನವೀಕ್ಷಣೆ ಮಾಡಿ ಚಿತ್ರ ಮತ್ತು ಟಿಪ್ಪಣಿ ದಾಖಲಿಸಿಕೊಂಡಿರುವ ನ

ಆದ್ದರಿಂದ ಖಗೋಳವೆಂದರೆ ಸ್ಥಿರ ನಕ್ಷತ್ರಚಿತ್ರಾಂಕಿತ ಯವನಿಕೆ ಎಂದು ಭಾವಿಸುತ್ತೇನೆ.

ಈ ಪರದೆಗೂ ನನಗೂ ನಡುವೆ ಇರುವ ಆಗಾಧ ಅವಕಾಶವೇ ಆಕಾಶ ರಂಗಸ್ಥಳ. ಈ ರಂಗ

ಆಗ ಈಗ ಸದ್ದು ಗದ್ದಲ ಇಲ್ಲದೆ ಬಂದು, ಪ್ರೇಕ್ಷಕರ ಮಾನಸಿಕ ರಸಸ್ಥಿತಿ ಅಥವಾ

ಲೆಕ್ಕಿಸದೆ ತಮ್ಮ ಕರ್ತವ್ಯವನ್ನು ನಿರ್ವಂಚನೆಯಿಂದ ಪ್ರದರ್ಶಿಸಿ ಕಾಲಸಂದಾಗ ಗಲಭ

ಇಲ್ಲದೆ ನೇಪಥ್ಯಕ್ಕೆ ನಿಷ್ಪಮಿಸುವ ಮತ್ತು ನಿರ್ದೇಶಕನ ಕರೆ ಬಂದಾಗ ಮತ್ತೆ ಮೈದೋರು

ಬಹಳಿಲ್ಲ .

ಇವರ ಪೈಕಿ ಚಂದ್ರನಿಗೆ ಮೊದಲ ಮಣೆ. ಸುಮಾರು ೨೭. ೩ ದಿವಸಗಳ ಅವಧಿಯಲ್ಲಿ ಚ

ನನ್ನ ಸುತ್ತ ಒಂದು ಪರಿಭ್ರಮಣೆ ಮುಗಿಸುತ್ತದೆ. ಇಂದು ರಾತ್ರಿ ಚಂದ್ರನನ್ನು ಯಾವು

– ಉದಾಹರಣೆಗೆ ರೋಹಿಣಿ - ಮುನ್ನೆಲೆಯಲ್ಲಿ ಗುರುತಿಸುತ್ತೇನೆ. ನಾಳೆ ಇದೇ ಹೊತ್


೫ ೫.
ನಕ್ಷತ್ರ ವೀಕ್ಷಣೆ

ಸಾಕಷ್ಟು ಪೂರ್ವಕ್ಕೆ ಸರಿದಿರುತ್ತದೆ. ಮರು ರಾತ್ರಿ ಇನ್ನಷ್ಟು ಪೂರ್ವಕ್ಕೆ ಹೀಗ

೨೭ .೩ ದಿವಸಗಳ ತರುವಾಯ ಅದೇ ರೋಹಿಣಿಯ ಮಗ್ಗುಲಿಗೆ ಪಶ್ಚಿಮದ ಕಡೆಯಿಂದ ಬ

ತಲಪಿರುತ್ತದೆ. ಅಲ್ಲಿಗೆ ಒಂದು ದೇಖಾವೆ ಮುಗಿಯುತ್ತದೆ? ಇಲ್ಲ . ೨೭ .೩ ದಿವಸಗಳ ಈ ಅವಧಿಗೆ

ನಾಕ್ಷಿಕ ಮಾಸ ಎಂದು ಹೆಸರು .

- ಹಾಗಾದರೆ ತಿಂಗಳೆಂದರೇನು? ಅಮಾವಾಸ್ಯೆಯಿಂದ ಮುಂದಿನ ಅಮಾವಾಸ್ಯೆತನಕ ಸಲ್ಲು

ಸುಮಾರು ೨೯ . ೫ ದಿವಸಗಳ ಅವಧಿ. ಈ ಅವಧಿಯಲ್ಲಿ ಚಂದ್ರನ ಕಲೆ - ಬೆಳಗುವ ಭಾಗದ

ವಿಸ್ತೀರ್ಣವನ್ನು ಚಂದ್ರ ಬಿಂಬದ ವಿಸ್ತೀರ್ಣದಿಂದ ಭಾಗಿಸಿದಾಗ ದೊರೆಯುವ ಭಿನ್ನ

ಹನ್ನೊಂದು ವರಿಸೆಗಳನ್ನು ಪ್ರದರ್ಶಿಸಿರುತ್ತದೆ. ಚಂದ್ರನ ವಿನ್ಯಾಸಗಳೂ ಹಾಗೆಯೇ : ಶ

ಬಾಲಚಂದ್ರ , ಅರ್ಧಚಂದ್ರ , ಅರ್ಧಾಧಿಕ ಚಂದ್ರ , ಪೂರ್ಣಚಂದ್ರ , ನ್ಯೂನಪೂರ್ಣಚಂ

ಚಂದ್ರ , ಪೂರ್ಣವೃದ್ಧ ಚಂದ್ರ , ಕ್ಷಯಚಂದ್ರ , ಶೂನ್ಯ ಅಥವಾಕ್ಷಯ ಚಂದ್ರ ಸ್ಥಿತಿಗಳಿಗೆ ಅಮ

ಎಂದು ಹೆಸರು. ಅಂದು ಚಂದ್ರದರ್ಶನ ಇಲ್ಲ . ಪೂರ್ಣಚಂದ್ರ ಸ್ಥಿತಿ ಹುಣ್ಣಿಮೆ , ಅಮಾವಾಸ್ಯ

ಹುಣ್ಣಿಮೆ ತನಕ ಚಂದ್ರನ ಕಲೆ ವೃದ್ಧಿಸುತ್ತದೆ. ಈ ಅವಧಿ ಶುಕ್ಲ ಪಕ್ಷ , ಹುಣ್ಣಿಮೆಯಿಂದ ಅಮ

ತನಕ ಚಂದ್ರನ ಕಲೆ ಕ್ಷಯಿಸುತ್ತದೆ. ಈ ಅವಧಿ ಕೃಷ್ಣ ಪಕ್ಷ .

ಅಮಾವಾಸ್ಯೆ ಸಂದು ಎರಡನೆಯ ಸಂಜೆ. ಪಶ್ಚಿಮಾಕಾಶದ ತೀರ ತಗ್ಗಿನಲ್ಲಿ ಹಾರಿಜದಿಂ

ತುಸುವೇ ಮೇಲಕ್ಕೆ - ಸೂರ್ಯನ ಬೆನ್ನಿಗೇ ಎನ್ನುವಂತೆ - ಬಾಲಚಂದ್ರ ದರ್ಶನವಾಗು

ಚಂದ್ರಬಿಂಬದ ಪಶ್ಚಿಮ ಅಂಚಿಗೆ ಬೆಳಕಿನ ತೆಳು ರೇಖನ, ಈ ಶೃಂಗಗಳು ಧರಿಸಿರುವ ಚಂದ್ರನ

ಪ್ರಕಾಶರಹಿತ ಭಾಗದ ಅಂಚಿನ ನೋಟ, ಹಿನ್ನೆಲೆಯ ರಕ್ತರಾಗಸಿಕ್ಕ ವಿಸ್ತಾರ ವಕ್ರಫಲಕ ಇವು ನನ್ನನ್ನು

ಒಂದು ಕ್ಷಣ ಭಾವಮೂಕನನ್ನಾಗಿಸಿದರೆ ಮರುಕ್ಷಣ ಭಾವದೀಪ್ತನನ್ನಾಗಿಸುತ್ತವೆ. ಮ

ದಿನಗಳಲ್ಲಿ ನಾನು ಗಮನಿಸುವ ಸಂಗತಿಗಳಿವು:

ಆರ್ಧಾಧಿಕ
ಪಾದ
ಜಾಲ ಚೆಂದ

ಭೂಮಿ

ಹುಣ್ಣಿಮೆ

ಅಮಾವಾಸೆ

ಅರ್ಧಾಧಿಕ
).
ರ ಅಂತಿಮ ಪಾದ - ಬಾಲ ಜಚಂದ

ಚಿತ್ರ ೩೪. ಭೂಮಿಯ ಸುತ್ತ ಚಂದ್ರ ಪರಿಭ್ರಮಿಸುವಾಗ ಪ್ರಕಟವಾಗುವ ದೃಶ್ಯಗಳು, ಸೂರ

ನೆಲೆ (ಕಾಣಿಸಿಲ್ಲ) ಚಿತ್ರದ ಬಲ ಪಾರ್ಶ್ವದಲ್ಲಿದೆ.


೫ ೬
ನಕ್ಷತ್ರ ವೀಕ್ಷಣೆ

ಸೂರ್ಯ- ಚಂದ್ರ ಅಂತರ ಪಶ್ಚಿಮ -ಪೂರ್ವ ದಿಶೆಯಲ್ಲಿ ವೃದ್ಧಿಸು

- ಚಂದ್ರನ ಬೆಳಗು ಭಾಗ ಇದೇ ದಿಶೆಯಲ್ಲಿ ವಿಸ್ತರಿಸುತ್ತದೆ.

ಚಂದ್ರೋದಯಾಸ್ತಗಳು ದಿನದಿಂದ ದಿನಕ್ಕೆ ವಿಳಂಬವಾಗುತ್ತವೆ.

೧೫ ದಿವಸ ಸಲ್ಲುವಾಗ ಚಂದ್ರನ ಪೂರ್ಣಬಿಂಬ ಸೂರ್ಯನಿಗೆ ನೇರೆದುರು

ಸೂರ್ಯ ಕಂತುವಾಗ ಚಂದ್ರ ಮೂಡುತ್ತದೆ. ಇದು ಹುಣ್ಣಿಮೆ .

ಚಂದ್ರೋದಯಾಸ್ತಗಳು ದಿನದಿಂದ ದಿನಕ್ಕೆ ತಡವಾಗುತ್ತವೆ.

ಚಂದ್ರನ ಕಪ್ಪು ಭಾಗ ಪಶ್ಚಿಮ-ಪೂರ್ವ ದಿಶೆಯಲ್ಲಿ ವಿಸ್ತರಿಸುತ್ತದ

ಸೂರ್ಯ- ಚಂದ್ರ ಅಂತರ ಇದೇ ದಿಶೆಯಲ್ಲಿ ಕ್ಷೀಣಿಸುತ್ತದೆ.

ಹುಣ್ಣಿಮೆಯಾಗಿ ೧೫ ದಿವಸ ಸಲ್ಲುವಾಗ ಸೂರ್ಯನ ಜೊತೆ ಚಂದ

ಕಂತುತ್ತದೆ. ಇದು ಅಮಾವಾಸ್ಯೆ ,

ಹೀಗೆಸೂರ್ಯನಿಗೆ ಸಾಪೇಕ್ಷವಾಗಿ ಚಂದ್ರ ಕ್ರಮಬದ್ಧವಾಗಿಯೂ ನಿರಂತರವಾಗ

ಸುತ್ತ ಪಶ್ಚಿಮ -ಪೂರ್ವ ದಿಶೆಯಲ್ಲಿ ಸಾಗುತ್ತಿರುವಾಗ (ಇದು ಮಾರ್ಗಚಲನೆ)

ದಿಶೆಯಲ್ಲಿ ವೃದ್ಧಿಸಿಕ್ಷಯಿಸುವ ವಿದ್ಯಮಾನ ಪ್ರದರ್ಶಿಸುತ್ತದೆ. ಸಂಜೆ ಸೂರ್ಯನ

ಹಿಂಬಾಲಿಸುವ ಬಾಲಚಂದ್ರ ಸಂಜೆಯ ತಾರೆ. ಮುಂಜಾನೆ ಸೂರ್ಯನನ್ನು

ಮುಂಬರುವ ಪೂರ್ಣವೃದ್ದ ಚಂದ್ರ " ಮುಂಜಾನೆಯ ತೋರೆ."

* ಚಂದ್ರನ ಬೆಳಗುಭಾಗ ಸದಾಸೂರ್ಯಾಭಿಮುಖವಾಗಿರುತ್ತದೆ. ಶುಕ್ಲಪಕ್ಷದಲ್ಲ

ಕೃಷ್ಣಪಕ್ಷದಲ್ಲಿ ಪೂರ್ವಬಿಂಬ. ಚಂದ್ರನ ಮಾಸದ ಮತ್ತು ಮಾಸಿಕ ವರಿಸೆಗಳಿವು!

ಅಂದ ಹಾಗೆ ಚಂದ್ರ ಏನು ? ಅದು ಭೂಮಿಯ ಉಪಗ್ರಹ ಮಾತ್ರ .ಸೂರ್

ತೀರ ಅದಕ್ಷವಾಗಿ ಪ್ರತಿಫಲಿಸಿ ಬೆಳಗುವ ಗಗನದರ್ಪಣ. ಆಕಾಶದಲ್ಲಿ ಭೂಮಿಯ ನೆರೆಮನೆ.

ದೇವರಲ್ಲ , ದೇವರ ಒಂದು ಕಣ್ಣು ಅಲ್ಲ , ಅಂದ ಹಾಗೆ ದೇವರ ಇನ್ನೊಂದು ಕಣ

ಅಲ್ಲ – ವಾಸ್ತವವಾಗಿ ದೇವರು ಎಂಬುದು ಮಾನವಸೃಷ್ಟಿ . ಈ ದೇವರಲ್ಲಿ ಮಾನವ ತನ್ನ ಲಂಬಿತ

ಆದರ್ಶ ಪ್ರತಿಬಿಂಬ ಕಂಡು ಭಾವಪರವಶನಾಗುತ್ತಾನೆ. ಭಕ್ತಿ ಪರಾಕಾಷ್ಠೆ ಏದುತ್ತಾ

" ದೈವಿಕ ಶಕ್ತಿಗೆ ಶರಣಾಗುವುದು ಬಹುಮಂದಿಗೆ ಒಂದು ಮನೋದೈಹಿಕ ಆವಶ್ಯಕತೆ/ ವ್ಯ

ಮಾತ್ರ . ಮುಖ್ಯವಾಗಿ, ಅವರು ಒಳ್ಳೆಯ ಸಾಮಾಜಿಕರಾಗಿ ಬಾಳುವುದು ಅಗತ್ಯ .

ಬೈಗಿನ ತಾರೆ ನಸುಕಿನ ನೀರೆ

ಸಂಜೆಯ ತಾರ ಮತ್ತು ಮುಂಜಾನೆಯ ನೀರೆ ಎಂಬ ಜನಜನಿತ ವಿಶೇಷಣಗಳು ಬಹ

ಬಳಕೆಯಲ್ಲಿರುವುದು ಶುಕ್ರನನ್ನು ಕುರಿತು, ಚಂದ್ರನನ್ನು ಕುರಿತು ಅಲ್ಲ . ಶ

ಹಾಗೆ ಒಂದು ಗ್ರಹ : ಸೂರ್ಯನಿಂದ ಬೆಳಕು ಕಾವು ಮುಂತಾದವನ್ನು ಪಡೆಯು


೫ ೭
ನಕ್ಷತ್ರ ವೀಕ್ಷಣೆ

ಸುತ್ತ ಪರಿಭ್ರಮಿಸುತ್ತಿರುವ ಕಾಯ . ಶುಕ್ರನ ಕಕ್ಷೆ ಭೂಮಿಯದಕ್ಕಿಂತ ಕಿರಿಯದು, ಕಕ್ಷಾವೇಗ

ಭೂಮಿಯದಕ್ಕಿಂತ ಹಿರಿಯದು. ಶುಕ್ರಕ್ಕೆ ಉಭಯಲಾಭ, ಭೂಮಿಗೆ ಉಭಯ ನಷ್ಟ . ಹೀಗ

ಒಂದು ವರ್ಷ ಸಲ್ಲುವಾಗ - ಭೂಮಿ ಸೂರ್ಯನ ಸುತ್ತ ಅಥವಾ ನನಗೆ ಕಾಣುವಂತ

ನನ್ನ ಸುತ್ತ ಒಂದು ಪರಿಭ್ರಮಣೆ ಮುಗಿಸುವಾಗ - ಶುಕ್ರ ಭೂಮಿಯನ್ನು ಒಂದು ಸ

ಮುಂದೆ ಹೋಗಿರುತ್ತದೆ. ಭೂನಿವಾಸಿ ಆಗಿರುವ ನನಗೆ ಈ ಚಿತ್ರ ಆಕಾಶದಲ್ಲಿ ಸ್ವಲ್ಪ

ಪ್ರಕಟವಾಗುತ್ತದೆ.

* ಒಂದು ಸಂಜೆ. ಸೂರ್ಯ ಕಂತುತ್ತಿದ್ದಂತೆ , ಯಾವ ನಕ್ಷತ್ರಕ್ಕೂ

ಪ್ರವೇಶಮಾಡಲು ಇನ್ನೂ ಧೈರ್ಯ ಬಂದಿರದಾಗ, ಪಡು ಬಾನಿನ ಕೆಂಪು ಮೈಗೆ ನತ್ತು

ದೃಶ್ಯ ಕಾಣುತ್ತದೆ - ಹೌದು, ಬೆಳಕಿನ ದಪ್ಪ ಕಣ ಅಲ್ಲಿದೆ. ಇದು ಶುಕ್ರ .

* ತುಸು ಹೊತ್ತಿನಲ್ಲೇ ಇದು ಸೂರ್ಯನನ್ನು ಹಿಂಬಾಲಿಸಿ ಹಾರಿಜದ ಕೆಳಕ್ಕೆ

ಹೋಗುತ್ತದೆ - ತುರಾಯಿದಿವಾನನ ಹಿಂದೆ ನಡೆಯುವ ದವಾಲಿಜವಾನನಂತೆ.

* ಸಂಜೆಗಳು ಉರುಳಿದಂತೆ ಶುಕ್ರ ಅಧಿಕ ಉಜ್ವಲತೆಯಿಂದ ಸಾಕಷ್ಟು

ಪಶ್ಚಿಮಾಕಾಶದ ಆಕರ್ಷಣೆಯಾಗಿ ಮೆರೆಯುತ್ತಿರುತ್ತದೆ, ಇರುಳು ೮, ೮-೩೦ರ ತನಕವೂ

ಅವಧಿಯಲ್ಲಿ ಸೂರ್ಯನನ್ನು ಕುರಿತಂತೆ ಶುಕ್ರ ಪೂರ್ವಕ್ಕೆ ಸರಿಯುತ್ತಿರುವುದು - ಮ

* ಇದೇನೂ ಶಾಶ್ವತ ಅಲ್ಲ . ದೀರ್ಘಕಾಲಿಕವೂ ಅಲ್ಲ . ಮುಂದಿನ ಸಂಜೆಗಳಲ

ಶುಕ್ರ ಸೂರ್ಯನ ಜಗಳತೊಡಗುತ್ತದೆ. ( ಅಂದರೆ ಸೂರ್ಯನಿಗೆ ಸಾಪೇಕ್ಷವಾಗಿ ಪೂರ್ವದ

ಪಶ್ಚಿಮಕ್ಕೆ ಸರಿತ - ಇದು ವಕ್ರಚಲನೆ. ಯಾವುದೇ ಸಂಜೆ ನೇಸರು ಕಂತಿದ ಬಿಂದುವಿಗೂ ಶುಕ್ರ

ಗೋಚರಿಸುವ ಎಡೆಗೂ ನಡುವಿನಕೋನ ಅಳೆಯಬೇಕು. ಸಂಜೆಯಿಂದ ಸಂಜೆಗೆ ಈ ಕೋನಕಡಿಮ

ಕಡಿಮೆ . ಅಂದರೆ ಶೂನ್ಯಗಾಮಿ ಆಗುವುದು ತಿಳಿಯುತ್ತದೆ. ಇದು ಸೊನ್ನೆಯೇ ಆದ

ಅಗೋಚರ .) ಒಂದು ಸಂಜೆ ಶುಕ್ರ ಕಾಣೆ - ಹಕ್ಕಿ ಹಾರಿಹೋಗಿದೆ ಗೂಡಿನಿಂದ, ಸೂರ್ಯಪ್ರಕಾಶದ

ಲೀನವಾಗಿ ಹೋದಂಥ ಪರಿಸ್ಥಿತಿ. ಉಪ್ಪಿನ ಗೊಂಬೆಗೆ ಲವಣದ ಕಡಲೊಳು ಉಂಟೇ ಅಸ್ತಿತ್ವ ?

* ಕೆಲವು ದಿನಗಳ ತರುವಾಯ ಇದರ ಬಿಡಾರ ಮೂಡಲಯ್ಯನ ಕೊಡಿ

ವರ್ಗವಾಗಿರುವುದು ಕಾಣುತ್ತೇನೆ. ನೇಸರು ಮೂಡುವ ಮುನ್ನ ಪೂರ್ವಾಕಾಶದಲ್ಲಿ ಶುಕ್ರದ

ಗಗನಸಾಮಾಟ ಸಹಸ್ರಕಿರಣನನ್ನು ಆವಾಹಿಸುವ ಹರಿಕಾರ ಶುಕ್ರ , ಸೂರ್ಯರಂಗ


ಮಾಡುತ್ತಿದ್ದಂತೆ ಶುಕ್ರ ಅಂತರ್ಧಾನ .

* ಮುಂಜಾನೆಗಳು ಉರುಳಿದಂತೆ ಶುಕ್ರ ನಸುಕಿಗಿಂತ ಮುನ್ನ ಸಾಕಷ್ಟು ಹೊತ

ಪ್ರಕಾಶದಿಂದ ಪೂರ್ವಾಕಾಶದಲ್ಲಿ ಬೆಳಕಿನ ಮೊತ್ತವಾಗಿ ಮೆರೆಯುತ್ತಿರುತ್ತದೆ ಪೂರ


೫ರಿಂದಲೇ . ಈ ಅವಧಿಯಲ್ಲಿ ಸೂರ್ಯನನ್ನು ಕುರಿತಂತೆ ಶುಕ್ರ ಪಶ್ಚಿಮಕ್ಕೆ ಸರಿಯುತ್ತಿರ

ಇದು ಕೂಡ ವಕ್ರಚಲನೆಯೇ .

ಇದಾದರೂ ಶಾಶ್ವತ ಅಲ್ಲ , ದೀರ್ಘಕಾಲಿಕವೂ ಅಲ್ಲ . ಮುಂದಿನ ಮುಂಜಾನೆಗಳಲ್ಲಿ

ಶುಕ್ರ , ಸೂರ್ಯನ (ಪೂರ್ವಕ್ಕೆ ) ಜಾರತೊಡಗುತ್ತದೆ. ( ಅಂದರೆ ಸೂರ್ಯನಿಗೆ ಸಾಪೇಕ


೫ ೮
ನಕ್ಷತ್ರ ವೀಕ್ಷಣೆ

ಪಶ್ಚಿಮದಿಂದ ಪೂರ್ವಕ್ಕೆ ಸರಿತ. ಇದು ಮಾರ್ಗಚಲನೆ. ಈ ಮೇಲೆ ವಿವರಿಸಿದ ಪ್ರಯೋಗ

ಪುನರಾವರ್ತಿಸಿದರೆ ಭಾವನೆ ಇನ್ನಷ್ಟು ಸ್ಪುಟವಾಗುವುದು.) ಒಂದು ಮುಂಜಾನೆ ಶ

ಗಿಳಿಯು ಪಂಚರದೊಳಿಲ್ಲ ! ಸೂರ್ಯಪ್ರಕಾಶದಲ್ಲಿ ಪುನಃ ಲೀನವಾಗಿ ಹೋದಂಥ ಪರಿಸ್ಥಿತ

ಶು ೪
ಶು ೨ |

ಶು ೫

ಭೂ

ಚಿತ್ರ ೩೫. ಭೂಮಿಗೆ ಸಾಪೇಕ್ಷವಾಗಿ ಶುಕ್ರನ ಚಲನೆಯನ್ನು ತೋರಿಸುವ ಚಿತ್ರ . ಶುಕ್ರನ ಕಕ್ಷಾವೇಗ ಭ

ಕಕ್ಷಾವೇಗಕ್ಕಿಂತ ಜಾಸ್ತಿ . ಆದ್ದರಿಂದ ವಾಸ್ತವವಾಗಿ ಭೂಮಿಯಲ್ಲಿ ನಿಂತವನಿಗೆ ಪ್ರತಿ ಸಲವೂ ಶುಕ್ರ ಆತನ
ಹಾಕಿ ಮುಂದೆ ಸಾಗುವಂತೆ ಭಾಸವಾಗಬೇಕು. ಆದರೆ ನೆಲದ ಮೇಲಿನ ಈ ಸರಳ ಸಂಗತಿ ಆಕಾಶದ ಅಗಾಧ ವ
ವಿಚಿತ್ರ ವಿನ್ಯಾಸವಾಗಿ ಪ್ರಕಟವಾಗುತ್ತದೆ. ಇದರ ಮರ್ಮವರಿಯಲು ಭೂಮಿ ಸ್ಥಿರವಾಗಿದೆಯ

ಸಾಪೇಕ್ಷವೇಗದಿಂದ ಸೂರ್ಯನನ್ನು ಪರಿಭ್ರಮಿಸುತ್ತಿದೆಯೆಂದೂ ಭಾವಿಸೋಣ. ಆಕಾಶದಲ್ಲಿಯ ಪಶ್ಚಿಮ

ದಿಶಾ( ಮಾರ್ಗ) ಚಲನೆಯನ್ನು ಚಿತ್ರದಲ್ಲಿ ಅಪ್ರದಕ್ಷಿಣ ದಿಶೆಯಿಂದಲೂ ಪೂರ್ವ- ಪಶ್ಚಿಮ ದಿಶಾ( ವಕ್

ಪ್ರದಕ್ಷಿಣ ದಿಶೆಯಿಂದಲೂ ಸೂಚಿಸುವುದು ವಾಡಿಕೆ.

- ಹೀಗೆ ಸೂರ್ಯನಿಗೆ ಸಾಪೇಕ್ಷವಾಗಿ ಶುಕ್ರ ತುಸು ಪಶ್ಚಿಮಕ್ಕೂ ( ವಕ್ರಚಲನೆ

( ಮಾರ್ಗಚಲನೆ) ಆಂದೋಳಿಸುತ್ತಿರುವ ದೃಶ್ಯ ನನಗೆ ಕಾಣುತ್ತದೆ. ಇದು ಸೂರ್

ಸನಿಹದಲ್ಲಿರುವಾಗ ಅಗೋಚರ. ಸೂರ್ಯನಿಂದ ಪೂರ್ವಕ್ಕಿರುವಾಗ ಸಂಜೆಯ ತಾ

ಪಶ್ಚಿಮಕ್ಕಿರುವಾಗ ಮುಂಜಾನೆಯ ನೀರೆ. ಇಂದೂ ಸೂರ್ಯನಿಂದ ಹೆಚ್ಚು ಕೋನದೂರಸ

(ಇದು ನಮಗೆ ಕಾಣುವ ದೃಶ್ಯ ಮಾತ್ರ .)

- ಬುಧ ಕೂಡ ಒಂದು ಗ್ರಹ. ಇದರ ಕಕ್ಷೆ ಶುಕ್ರಕಕ್ಷೆಗಿಂತಲೂ ಸೂರ್ಯಸಮೀಪ ಮ


ಕಕ್ಷಾವೇಗ ಶುಕ್ರದ್ದಕ್ಕಿಂತ ಅಧಿಕ. ಅಂದ ಮೇಲೆಭೂಮಿ, ಬುಧ, ಸೂರ್ಯ ಸಂಬಂಧದಲ
- ೫ ೯
ನಕ್ಷತ್ರ ವೀಕ್ಷಣೆ

ಕಾಣುವಂತೆ ಬುಧದ ವರಿಸೆಗಳು ಶುಕ್ರದ ವರಿಸೆಗಳ ಇನ್ನೊಂದು ರೂಪವಾಗಿರಬೇಕು ?

ಆದರೆ ಇನ್ನೂ ತೀವ್ರವಾಗಿ, ಎಂದೇ ಬುಧವನ್ನು ಸಂಜೆಯ ತಾರೆಯಾಗಿ ಇಲ್ಲವೇ ಮುಂಜಾನೆಯ

ನೀರೆಯಾಗಿ ಗುರುತಿಸುವುದು ಸಾಕಷ್ಟು ಪರಿಶ್ರಮ ಬೇಡುವ ಸಾಹಸ. ಇದು ಸೂರ್ಯನಿಗೆ ಶುಕ್

ಸಮೀಪವಾಗಿದ್ದು ತೀರ ಅಲ್ಪ ಕೋನಾಂತರದಲ್ಲಿ ಆಚೆ ಈಚೆ ( ಪಶ್ಚಿಮ , ಪೂರ್ವ) ಸರಿಯುತ್

ಅಷ್ಟೆ .

ಶುಕ್ರದ ಬಣ್ಣ ಉಜ್ವಲ ಬಿಳಿ. ಆದ್ದರಿಂದ ಬೆಳ್ಳಿ , ಚುಕ್ಕಿ ಎಂಬ ಹೆಸರುಗಳೂ ಇದ


ಬಾನಂಗಣದಲ್ಲಿ ಇದು ಪ್ರದರ್ಶಿಸುವ ರಿಂಗಣ ನೋಡಲು ಅತಿ ಮನೋಹರ. ಇದಕ್ಕೆ ಹೋಲಿಸುವಾಗ

ಮಂಗಳ ತೀರ ಸಪ್ಪೆ ಗ್ರಹ. ಬಣ್ಣವಿಲ್ಲ , ಚುರುಕಿಲ್ಲ , ಬಾನಿನ ಹರವಿನಲ್ಲಿ ಎದ್ದು ಕಾಣುತ್ತಿಲ್ಲ . ಅತಿ

ಕ್ಷುದ್ರ ವ್ಯಕ್ತಿತ್ವ . ಇದರ ಕಂದು ಮಸುಕು ಬಣ್ಣ ಜೇಷ್ಠಾ ನಕ್ಷತ್ರವನ್ನು ನೆನಪಿಗೆ ತರುತ್ತದೆ. ಮಂ

ಕಕ್ಷೆ ಭೂಮಿಯದಕ್ಕಿಂತ ವಿಸ್ತಾರವಾದದ್ದು . ಕಕ್ಷಾವೇಗ ಇನ್ನೂ ನಿಧಾನ. ಆದ್ದರಿಂದ ಇ

ಇದರಿಂದ ಇನ್ನೂ ಹೊರಕ್ಕೆ ಕಕ್ಷೆಗಳಿದ್ದು ಕಕ್ಷಾವೇಗಗಳು ಇನ್ನಷ್ಟು ಕಡಿಮೆ ಆಗಿರುವ ಗುರು ಮತ

ಶನಿ ಗ್ರಹಗಳು ನನಗೆಗೋಚರವಾಗಲು ಸ್ಥಾನಮಿತಿಯಾಗಲೀ , ಅವಧಿಮಿತಿಯಾಗಲೀ ಇರುವುದಿಲ

ಮಂಗಳ, ಗುರು ಮತ್ತು ಶನಿ ಮುಂಜಾನೆಯ ತಾರೆಯರಾಗಬಹುದು, ಆಗದಿರಬಹುದು, ಸಂಜೆಯ

ನೀರೆಯರಾಗಬಹುದು, ಆಗದಿರಬಹುದು, ಅಲ್ಲದೆ ಯಾವ ಹೊತ್ತಿಗೂ ಆಕಾಶದ

ಗೋಚರವಾಗಬಹುದು. ಇವನ್ನೆಲ್ಲ ಗಣನೆಯಿಂದ ಮುನ್ನುಡಿಯುವುದು ಸಾಧ್ಯ . ಒಂದ

ಮಾತ್ರ ಬುಧ , ಶುಕ್ರ , ಮಂಗಳ, ಗುರು ಮತ್ತು ಶನಿ ಎಂಬ ಐದು ಗೋಚರಗ್ರಹಗಳ

ಸೂರ್ಯಚಂದ್ರರಿಗೂ ಸಾಮಾನ್ಯವಾಗಿದೆ! ಇವು ಸದಾ ರಾಶಿಚಕ್ರದ ಮೇಲೆಯೇ ಸಂಚರಿಸುತ್

ಉದಾಹರಣೆಗೆ ಗುರುವನ್ನು ಎಂದೂ ಸಪ್ತರ್ಷಿಮಂಡಲದಲ್ಲಿ ನೋಡಲಾರವು. ಶನಿ ಎ

ತ್ರಿಶಂಕುವಿನ ಹತ್ತಿರ ಸುಳಿಯದು.

ಬರಿಗಣ್ಣಿಗೆ ಗುರುಗ್ರಹ ಶುಕ್ರದ ಅವಳಿಯೋ ಎಂದು ಭಾಸವಾಗುತ್ತದೆ. ಹಾಗಾದರೆ ಇವೆರಡು

ಗ್ರಹಗಳನ್ನು - ಗಗನ ಮಂಡಲದ ವಾಲಿ ಸುಗ್ರೀವರನ್ನು ಪ್ರತ್ಯೇಕಿಸಿ ಗುರುತಿಸುವುದು ಹೇಗೆ?

* ಸಂಜೆ ಪೂರ್ವಾಕಾಶದಲ್ಲಿದ್ದರೆ ಆ ಬೆಳಕಿನ ಹುಂಡು ಖಂಡಿತ ಗುರುವೇ .

* ಮುಂಜಾನೆ ಪಶ್ಚಿಮಾಕಾಶದಲ್ಲಿದ್ದರೆ ಆ ಬೆಳಕಿನ ಗುಂಡು ಖಾತ್ರಿ ಗುರುವೇ .

* ಇರುಳು ಸುಮಾರು ೯ರ ತರುವಾಯ ಮತ್ತು ಮುಂಜಾನೆ ಸುಮಾರು ೪ರ ಮೊ

ಶುಕ್ರ ದರ್ಶನ ಆಗದು.

* ಶುಕ್ರ , ಗುರು ಎರಡೂ ಸಂಜೆಯ ಪಶ್ಚಿಮಾಕಾಶದಲ್ಲಿ ಇಲ್ಲವೇ ಮುಂಜಾನೆಯ

ಪೂರ್ವಾಕಾಶದಲ್ಲಿ ಕಾಣಿಸಿಕೊಂಡಾಗ ಸ್ಥಿರ ನಕ್ಷತ್ರ ಚಿತ್ರಗಳ ಮುನ್ನೆಲೆಯಲ್ಲಿ ಎರಡನ್ನೂ ಕೆಲವ

ದಿನ ಪರ್ಯಂತ ಎಚ್ಚರಿಕೆಯಿಂದ ಗಮನಿಸಬೇಕು. ಯಾವುದು ಸ್ಥಾನಪಲ್ಲಟ ಪ್ರದರ್ಶಿಸುವುದೋ

ಅದು ಶುಕ್ರ .

ಶನಿಯ ಬಣ್ಣ ಶುಕ್ರದ ಬಣ್ಣದಂತೆ ಬಿಳಿ. ಆದರೆ ಗಾತ್ರ ತೀರ ಚಿಕ್ಕದು. ಆದ್ದರಿಂದ ಶನಿ

ಶುಕ್ರಗಳ ನಡುವೆ ಗುರುತು ಹಿಡಿಯುವ ಗೊಂದಲ ತಲೆದೋರದು.


ನಕ್ಷತ್ರ ವೀಕ್ಷಣೆ

ಮಂ ೪

ಮಂ ೩ ಮಂ ೫

ಮ೦ ೬
ಮಂ ೨

ಮಂ ||
ಮಂ ೧೧ ನುಂ ಮಂ ೭

ಚಿತ್ರ ೩೬ . ಮಂಗಳ ಅಥವಾ ಕುಜ ಗ್ರಹದ ಕಕ್ಷಾವೇಗ ಭೂಕಕ್ಷಾವೇಗಕ್ಕಿಂತ ಕಡಿಮೆ. ಹೀಗಾಗಿ ನಮಗೆ.

ಕಾಣುವಂತೆ ಮಂಗಳದ ಸಾಪೇಕ್ಷ ಚಲನೆ ಶುಕ್ರದ ಚಲನೆಯ ವಿರುದ್ಧ ದಿಶೆಯಲ್ಲಿರುತ್ತದೆ. ಅಂದರ

ಪಶ್ಚಿಮ ದಿಶೆಯಲ್ಲಿರುತ್ತದೆ. ಈಗ ಭೂಮಿ ಭೂ ಎಂಬಲ್ಲಿ ಸ್ಥಿರವಾಗಿದೆಯೆಂದೂ ಮಂ

ಸಾಪೇಕ್ಷ ವೇಗದಿಂದ ಪೂರ್ವ- ಪಶ್ಚಿಮ (ಪ್ರದಕ್ಷಿಣ) ದಿಶೆಯಲ್ಲಿ ಚಲಿಸುತ್ತಿದೆಯೆಂದೂ

ಭೂಮಿ-ಸೂರ್ಯ( ನನ್ನ ಮನೆ-ನನ್ನ ದೀಪ) ಸಂಬಂಧದಲ್ಲಿ ಶುಕ್ರ ಮತ್ತು ಬುಧ

ಭೂಮಿ ಕುರಿತಂತೆ ಸೂರ್ಯಾಭಿಮುಖ ಪಾರ್ಶ್ವದಲ್ಲಿಯೂ ಮಂಗಳ, ಗುರು, ಶನಿ

ಸೂರ್ಯವಿಮುಖ ಪಾರ್ಶ್ವದಲ್ಲಿಯೂ ಇವೆ. ಮೊದಲಿನವು ಒಳ ಅಥವಾ ಆಂತರಿಕ ಗ

ಮತ್ತಿನವು ಹೊರ ಅಥವಾ ಬಾಹ್ಯ ಗ್ರಹಗಳು.

ಬೆಂಕಿಗೆರೆ ಗೊಂಡೆತಲೆ ಧೂಮಲೀಲೆ

ಅರಿಲು ದಿಬ್ಬದಮೇಲೆ ನಕ್ಷತ್ರಧ್ಯಾನಮಗ್ನನಾಗಿ ಕುಳಿತಿದ್ದೇನೆ. ನನ್ನ ತಪಸ್ಸಿ

ಬೆಂಕಿಗೆರೆಯೊಂದು ಆಕಾಶದ ಯಾವುದೋ ಮೂಲೆಯಲ್ಲಿ ಹಠಾತ್ತನೆ ತಲೆದೋರ

ಮೂಲೆಗೆ ಸೀಳಿ ಹೋಗುವುದು ಕಂಡು ಚಕಿತನಾಗುತ್ತೇನೆ. ಅದೆಷ್ಟು ಕ್ಷಣಿಕವೆಂ

ಪಾದರಸಚಟುಲ ಮನಸ್ಸು ಹರಿಯುವ ಮೊದಲೇ ಅದರ ಅವತಾರ ಸಮಾಪ್ತವಾಗಿರುತ್


ನಕ್ಷತ್ರ ವೀಕ್ಷಣೆ

ಚಿತ್ರ ೩೭. ಸೌರವ್ಯೂಹದಲ್ಲಿ ಧೂಮಕೇತು ಪಥ

ಜನರ ಮಾತಿನಲ್ಲಿ ಈ ವಿದ್ಯಮಾನ ಬೀಳುವ ನಕ್ಷತ್ರ. ಇದು ಸರಿಯಾದ ವಿವರಣೆ ಅಲ್ಲ .

ಹೊಳೆವುದೆಲ್ಲ ಅರಿಲಲ್ಲ , ಸರಿವುದೆಲ್ಲ ಗ್ರಹವೂ ಅಲ್ಲ . ಒಂದೊಂದು ನಕ್ಷತ್ರವೂ ಒಂದೊಂದ

ಸೂರ್ಯ. ಅಂದಮೇಲೆ ನಕ್ಷತ್ರ ಬೀಳುವುದು ಸೂರ್ಯಸದೃಶ ಕಾಯ ಬೀಳುವ

ಸಮಾನವಾಗುತ್ತದೆ. ಹನ್ನೆರಡು ಲಕ್ಷ ಭೂಮಿಗಳನ್ನು ಕಬಳಿಸಬಲ್ಲ ಸೂರ್ಯ ಅಥವಾ ತ

ಕಾಯ ಬಿದ್ದರೆ ಭೂಮಿ ಉಳಿದಿತೇ ? ಇದರ ಮೇಲಿನ ಪರಮಾಣುಸ್ವರೂಪಿ ನಾನು ಉಳಿದೇನೇ ?

"ಕವಿದು ಹೆಗ್ಗಡಲುಕ್ಕಿ ಮೊಗೆಯುವೊಡೆ ಬಿದಿರಮೆಳೆಯಡ ಬಹುದೇ ?"

- ಆಕಾಶದಲ್ಲಿ ಕಾಣುವ ಚಂದ್ರ , ಸೂರ್ಯ ಗ್ರಹ, ನಕ್ಷತ್ರಗಳಲ್ಲದೆ ಕಾಣದ ಅಸಂಖ

ಕಾಯಗಳೂ ಇವೆ. ಧೂಳಿನ ಕಣಗಳು , ಕಲ್ಲು ಬಂಡೆಗಳು , ಚೂರುಪಾರುಗಳು ಮುಂತಾದ

ಇವುಗಳಲ್ಲಿ ಸೇರಿವೆ. ಇವುಗಳ ಪೈಕಿ ಪಥವಿಚಲನೆಗೊಂಡ ಕೆಲವಾದರೂ ಭೂಮಿಯ ಗುರುತ

ವಲಯದೊಳಕ್ಕೆ ಅತಿಕ್ರಮ ಪ್ರವೇಶ ಮಾಡುವುದು ಅಪರೂಪ ಅಲ್ಲ . ಇಂಥವನ್ನು ಭೂಮಿ, ರಾಕೆಟ್ -


ವೇಗಕ್ಕಿಂತಲೂ ಅಧಿಕ ವೇಗದಿಂದ, ತನ್ನ ತಳದೆಡೆಗೆ ಚೋಷಿಸಿಬಿಡುತ್ತದೆ. ಆಯ ತಪ್ಪಿದ ವಿಮಾನದ

ಅತಿ ರಭಸವಾಗಿ ಧರಾತಳಕ್ಕೆ ಧಾವಿಸುವ ಈ ಆಗುಂತಕ ಕಾಯಗಳಿಗೂ ವಾಯುಮಂಡಲಕ್ಕೂ ನಡ

ಪ್ರಚಂಡ ಘರ್ಷಣೆ ಉಂಟಾಗುತ್ತದೆ. ತತ್ಪರಿಣಾಮವಾಗಿ ಶಾಖ ಸಂಜನಿಸಿ ಅಗ್ನಿ ಪ್ರಜ್ವಲಿಸಿ

ಶೀಘ್ರದಲ್ಲೇ ಕಾಯಗಳು ಉರಿದುರಿದು ಭಸ್ಮಿಭೂತವಾಗಿಹೋಗುತ್ತವೆ. ಇವು ಉರಿಯುತ್ತಿರುವಾಗ


೬ ೨
ನಕ್ಷತ್ರ ವೀಕ್ಷಣೆ

ಬೆಂಕಿಗೆರೆಗಳು ಚೇಳುಬಾಣಗಳೋಪಾದಿಯಲ್ಲಿ ಧಾವಿಸುತ್ತವೆ. ಇವೇ "ಬೀಳುವ ನಕ್ಷತ

" ಬೀಳುವ ನಕ್ಷತ್ರ " ದ ನಿಜ ನಾಮಧೇಯ ಉಿ .

ಉಲ್ಕೆಗಳನ್ನು ಸಾಧಾರಣವಾಗಿ ಪ್ರತಿ ರಾತ್ರಿಯೂ ನೋಡಬಹುದು. ಆದರೆ ಧೂಮ

ಹೀಗಲ್ಲ . ಇದು ಆಕಾಶದ ವಿಶೇಷ ಮತ್ತು ಅಪೂರ್ವ ಅತಿಥಿ . ಜೊತೆಗೆ ಇದರ ಸ್ವರೂ

ಕೊಂಚ ಭಯಕಾರಕ ಕೂಡ, ಗೊಂಡೆಮಂಡೆ ಇದರಿಂದ ಸೂರ್ಯವಿರುದ್ಧ

ಕುಂಚಿಸಿದಂತೆ ಚಾಚಿರುವ ಬಾಲ, ಒಟ್ಟಾರೆ ಪೊರಕೆಯಂಥ ಚಿತ್ರ . ಈ ದೃಶ್ಯ ಎಷ್

ಅಷ್ಟೇ ವಿರಳ ಕೂಡ. ಈ ಕಾರಣದಿಂದಲೇ ಜನ ಧೂಮಕೇತುದರ್ಶನವನ್ನು ಅನ

ಜೊತೆ ತಳಕು ಹಾಕಿರುವುದಾಗಿದೆ.

ವಾಸ್ತವವಾಗಿ ಧೂಮಕೇತುಕೂಡಉಿಯಂತೆ ಒಂದು ಬಾನ ತಿರುಕುಳಿ, ಉಿ ಸ್ಥಳೀ

ಎಂದರೆ ನಮ್ಮ ವಾಯುಮಂಡಲದಲ್ಲಿಯ - ವಿದ್ಯಮಾನ , ಧೂಮಕೇತುವಾದರೋ ಸೌರವ್ಯೂಹದಲ

ಸಂಭವಿಸುವ ಘಟನೆ. ಇದು ಹಿರಿ ಗಾತ್ರದ ಬಂಡೆ ಏನೂ ಅಲ್ಲ . ಸಾಧಾರಣ ಗಾತ್ರದ ಕೊಳ

ಬರ್ಫದ ಗಟ್ಟಿ , ಬರ್ಫದ ಅಂಶವೇ ಜಾಸ್ತಿ . ತಿರುಳಿನಲ್ಲಿ ಪ್ರಾಯಶಃ ಲೋಹ

ಇರಬಹುದು. ಸೂರ್ಯಾಕರ್ಷಣೆಯಿಂದ ಪ್ರಭಾವಿತವಾಗಿ ಅತ್ತ ಸಾಗುವ ಈ ' ಅನ

ಸೂರ್ಯನಿಗೆ ಹೆಚ್ಚು ಹೆಚ್ಚು ಹತ್ತಿರವಾದಂತೆ ಹೆಚ್ಚು ಹೆಚ್ಚು ಸೂರ

ಈಡಾಗುತ್ತದೆ. ಶಾಖಸಂಪರ್ಕದಿಂದ ಇದರ ಒಡಲಿನ ಒಂದಂಶ ಕರಗಿ ಸೂರ್ಯವ

ಧೂಮಲಾಂಗೂಲ ಹಬ್ಬುತ್ತದೆ. ತಲೆ ಗೊಂಡೆಯಂತೆ ಬೆಳಗತೊಡಗುತ್ತದೆ. ಸೂರ

U- ಆಕಾರದ ಪಥದಲ್ಲಿ ಸುತ್ತುವರಿದು ಮತ್ತೆ ಅವ್ಯಕ್ತ ನಿಗೂಢತೆಗೆ ಮರಳುತ್ತದೆ. ದೂರ ದೂರ

ಸಾಗಿದಂತೆ ಬಾಲ ಸಂಕೋಚಿಸುತ್ತದೆ. ಗೊಂಡೆಯ ಗಾತ್ರ ಕುಗ್ಗುತ್ತದೆ. ಒಂದು ದಿನ ಧೂಮ

ಮಾಯವಾಗಿರುತ್ತದೆ.

ಬದುಕಿನ ಕ್ಷಣಭಂಗುರತೆಯ ಪ್ರತೀಕ ಉಿ . ಮಹತ್ತಿನ ಸಾಮೀಪ್ಯ ಹೇಗೆ ಅಲ್ಪತ

ಮಹತ್ಯ ಒದಗಿಸುತ್ತದೆ ಎಂಬುದರ ಪ್ರತೀಕ ಧೂಮಕೇತು.

ಗಣನೆಗೆ ನಿಲುಕಿದ ಆಕಾಶ

ಆಕಾಶದಲ್ಲಿ ನಕ್ಷತ್ರಗಳ ಸಂಖ್ಯೆ ಎಣಿಕೆಗೆ ನಿಲುಕದು , ನಿಜ. ಆದರೆ ನಕ್ಷ

ಮಾನವನಿಗೆ ತಿಳಿದಿದೆ. ಅಸಂಖ್ಯ ಹೈಡೋಜನ್ ಬಾಂಬುಗಳು ನಿರಂತರವಾಗಿ ಅಸ್ಫೋಟ

ಅತಿಕಾಯವದು . ಸೂರ್ಯ ಇಂಥ ಒಂದು ನಕ್ಷತ್ರ . ಇದು ನಮ್ಮ ಖಾಸಾ ತಾರೆ.

- ಸೂರ್ಯನನ್ನು ಪರಿಭ್ರಮಿಸುತ್ತಿರುವ ಗ್ರಹಗಳು ಒಂಬತ್ತು : ಸೂರ್

ಆರೋಹೀದೂರಾನುಸಾರ ಬುಧ, ಶುಕ್ರ , ಭೂಮಿ, ಮಂಗಳ, ಗುರು, ಶನಿ, ಯುರೇನಸ್ , ನೆಪ್ಯ

ಪ್ರೊಟೋ . ಮೊದಲ ಆರು ಗೋಚರ ಗ್ರಹಗಳು. ಕೊನೆಯ ಮೂರರ ಅಸ್ತಿತ್ವ ಪರ

ವಿಧಾನಗಳಿಂದ ಸ್ಥಿರಪಟ್ಟಿದೆ.

ಮಂಗಳ ಮತ್ತು ಗುರು ಕಕ್ಷೆಗಳ ನಡುವೆ ಅಸಂಖ್ಯ ಬಿಡಿಕಾಯಗಳ ಹೊನಲ

ಸುತ್ತ ಹರಿಯುತ್ತಿದೆ. ಇದು ಕ್ಷುದ್ರ ಗ್ರಹಗಳ ಪ್ರವಾಹ.


೬ ೩
ನಕ್ಷತ್ರ ವೀಕ್ಷಣೆ

ಭೂಮಿಯನ್ನು ಸುತ್ತುತ್ತಿರುವ ಚಂದ್ರನನ್ನು ಭೂಮಿಯ ಉಪಗ್ರಹವೆನ್ನುತ್ತೇವೆ. ಮಂ

ಎರಡು ಚಂದ್ರ (ಉಪಗ್ರಹ) ಗಳಿವೆ. ಗುರು, ಶನಿ, ಯುರೇನಸ್ ಮತ್ತು ನೆಮ್ರನ್‌ಗಳಿಗೆ ಉಪಗ್ರಹಗಳೂ

ಬಳೆಗಳೂ ಇವೆ. ಬುಧ ಮತ್ತು ಶುಕ್ರ ಉಪಗ್ರಹರಹಿತ ಗ್ರಹಗಳು.

ಉಿ ಭೂಮಿಯ ವಾಯುಮಂಡಲದಲ್ಲಿ ಜರಗುವ ಆತ್ಮಾಹುತಿ ವಿದ್ಯಮಾನ.

ಧೂಮಕೇತುಸೂರ್ಯನ ಸಾಮ್ರಾಜ್ಯದಲ್ಲಿ - ಸೌರವ್ಯೂಹವೆಂದು ಹೆಸರು - ಘಟಿಸುವ

ಅಪೂರ್ವ ವಿಚಿತ್ರ ವಿದ್ಯಮಾನ.

ಸೂರ್ಯ ಆಕಾಶಗಂಗೆಯಲ್ಲಿರುವ ಒಂದು ಸಾಧಾರಣ ನಕ್ಷತ್ರ.

ಆಕಾಶಗಂಗೆಯಂಥ ನಕ್ಷತ್ರ ಸಮುದಾಯಗಳಿಗೆ ಬ್ರಹ್ಮಾಂಡಗಳೆಂದು ಹೆಸರು . ಆ

ಸ್ಥಳೀಯ ( = ನಮ್ಮ ಸೂರ್ಯ ಇರುವ) ಬ್ರಹ್ಮಾಂಡವೆಂಬ ಹೆಸರೂ ಉಂಟು.

ನಕ್ಷತ್ರಗಳ ಉಗಮಸ್ಥಾನ ನೀಹಾರಿಕೆ. ಒಂದೊಂದು ಬ್ರಹ್ಮಾಂಡದಲ್ಲಿಯೂ

ನೀಹಾರಿಕೆಗಳು ಇರುವುವು.

- ಬ್ರಹ್ಮಾಂಡಗಳ ಸಮುದಾಯವೇ ವಿಶ್ವ

ವರ್ತಮಾನ ( ೨೦೦೨) ಅಂದಾಜು ಪ್ರಕಾರ ಪ್ರರೂಪೀ ಬ್ರಹ್ಮಾಂಡದಲ್ಲಿ ೪x೧೦

ನಕ್ಷತ್ರಗಳಿವೆ. ವಿಶ್ವದಲ್ಲಿ ಸದ್ಯ ತಿಳಿದಿರುವ ಬ್ರಹ್ಮಾಂಡಗಳ ಸಂಖ್ಯೆ ೧೦೧೧ ಆದ್ದರಿಂ

ನಮ್ಮ ಎಣಿಕೆಗೆ ನಿಲುಕಿರುವ ವಿಶ್ವದಲ್ಲಿಯ ನಕ್ಷತ್ರಗಳ ಸಂಖ್ಯೆ ,ಸ್ಕೂಲವಾಗಿ ೪x೧೦೧೧ x೧೦೧೧ –

೪ x ೧೦೨ = ೪೦ ,೦೦೦ , ೦೦೦ , ೦೦೦, ೦೦೦, ೦೦೦, ೦೦೦ , ೦೦೦. ಇನ್ನೂ ಎಣಿಕೆಗೆ ನಿಲುಕದವು

ಎಷ್ಟು ಇವೆಯೋ ! ಇಂತಿದ್ದರೂ ವಿಶ್ವ ಅನಂತವಲ್ಲ .

- ಈ ವಿಶ್ವವನ್ನು ನೋಡುತ್ತ ನಿಬ್ಬೆರಗಾಗಿ ಕುಳಿತಿದ್ದೇನೆ. ಅಕ್ಟೋಬರಿನ ನಟ್ಟಿರುಳು ಗಾಢವಾಗಿದೆ.

ಕುಳಿರ್ಗಾಳಿ ಬಡಕಲು ದೇಹವನ್ನು ಕೊರೆಯುತ್ತಿದೆ. ಆನೆಯ ಬಾಲದರೋಮ ಮುಟ್ಟಿದ ಕುರುಡ

ಸಾಹಸಕ್ಕಿಂತ ದೊಡ್ಡದಲ್ಲ ನನ್ನ ಈ ವರೆಗಿನ ಪ್ರಯತ್ನ ಎಂಬುದರ ಅರಿವು ನನಗಿದೆ. ಎಂದಾದರೊಂದ

ದಿನ ಇಡೀ ಆನೆಯನ್ನು ಅರಿಯುವ ಭಾಗ್ಯ ನನ್ನದಾದೀತೆಂಬ ಭರವಸೆಯ ಭಾವದಿಂದ

ಹಿಂತಿರುಗುತ್ತಿದ್ದೇನೆ. ಒಂಟಿತನದ ಪ್ರಜ್ಞೆ ಖಂಡಿತ ನನ್ನನ್ನು ಕಾಡುತ್ತಿಲ್ಲ . ಏಕೆಂದರೆ ಮ

ಸುತ್ತ ಕಾನು ನಡುವೆ ನಾನು !

- ಮೂವರು ತತ್ತ್ವಶಾಸ್ತ್ರಕೋವಿದರು ದ್ರಾಕ್ಷಾಮದ್ಯದ - ಚೀನೀಯರ ಕಲ್ಪನೆ ಪ್ರಕಾರ ಇದು

ಜೀವಚೈತನ್ಯದ ಪ್ರತೀಕ- ರುಚಿಸವಿಯಲು ಒಟ್ಟಾಗಿ ಬಂದರು. ಮೊದಲು ಕನ್ನೂಶಿಯಸ್ ಅದನ

ಕುಡಿದು " ಹುಳಿ" ಎಂದ. ಬಳಿಕ ಬುದ್ಧ ಸೇವಿಸಿ ದ್ರಾಕ್ಷಾಮದ "ಕಹಿ" ಎಂದು ತೀರ್ಪಿತ್ತ .

ಲವೋ - ತ್ತು ಅದರ ರುಚಿಸವಿದು ಉದ್ಧರಿಸಿದ "ಇದು ಚಿರನೂತನವಾಗಿದೆ!" ನೀಲ್ಡ್ ಬೋರ್


ಉಲ್ಲೇಖಿಸಿರುವ ಈ ಪಾರಂಪರಿಕ ಚೀನೀ ಕತೆಯ ಸಾರಾಮೃತಪಾನಗೈದ ಆನಂದ ನನ್ನದು.
eg

ಬರಿಗಣ್ಣಿಗೆ ಕಾಣುವಂತೆ ಮೊದಲ ೩೦ ಉಜ್ಜಲ ನಕ್ಷತ್ರಗಳು

ಸ್ಥಾನ ನಕ್ಷತ್ರದ ಹೆಸರು ನಕ್ಷತ್ರ ಪುಂಜದ ನಕ್ಷತ್ರದ ದೂರ

ಸಂಖ್ಯೆ ಹೆಸರು ಜ್ಯೋತಿರ್ವಷ್ರಗಳಲ

೧. ಲುಬ್ಧಕ Sirius ಮಹಾಶ್ವಾನ Canis Major ೮. ೭

ಅಗಸ್ಯ Canopus ದೇವನೌಕಾ Carina ೬೫೦

ಕಿನ್ನರಪಾದ Alpha Centauri ಕಿನ್ನರ Centaurus ೪. ೩

8. De , de Arcturus ಸಹದೇವ Bootes

ಅಭಿಜಿತ್ Vega ವೀಣಾ Lyra ೨೭


j
ಬ್ರಹ್ಮ ಹೃದಯ Capella ವಿಜಯಸಾರಥಿ Auriga ೪೫

ವ್ಯಾದಪೃಷ್ಠ Rigel ಮಹಾವ್ಯಾಧ Orion ೯೦೦

೮. ಪೂರ್ವಶ್ಯಾನ Procyon ಲಘುಶ್ವಾನ Canis Minor ೧೧

ವೈತರಣೀಮುಖ Achernar ವೈತರಣೀ Eridanus ೧೧೮

೧೦. ಆದ್ರ್ರಾ Betelgeuse ಮಹಾವ್ಯಾಧ Orion ೫೨೦

೧೧ . ಕಿನ್ನರ ಪಾರ್ಷ್ಠ Agena ಕಿನ್ನರ Centaurus ೪೯೦

೧೨. ಶ್ರವಣ Altair ಗರುಡ Aquila ೧೬

೧೩ . ರೋಹಿಣಿ Aldebaran ವೃಷಭ Taurus ೬೮

೧೪. ತ್ರಿಶಂಕುಶಿರ Acrux ತ್ರಿಶಂಕು CruX ೩೭೦

೧೫ . ಜೇಷ್ಠಾ Antares ವೃಶ್ಚಿಕ Scorpius ೫೨೦

ಕನ್ಯಾ Virgo ೨೨೦


oz. 250 . Spica
೩೫
೧೭ . ಪುನರ್ವಸುದ್ವಿತೀಯ Polux ಮಿಥುನ Gemini

೧೮ . ಮೀನಾಕ್ಷಿ Fomalhaut ಮೀನ Pisces ೨೩

ರಾಜಹಂಸ ೧೬೦೦
೧೯ . ಹಂಸಾಕ್ಷಿ Deneb Cygnus

೨೦ . ತ್ರಿಶಂಕುಪಾದ Beta CruX ತ್ರಿಶಂಕು Crux ೪೯೦

ಮಘಾ Regulus ಸಿಂಹ Leo - ೮೪

೬೮೦
ಮಹಾಶ್ವಾನ ಪಂಚಮ Adhara ಮಹಾಶ್ವಾನ Canis Major
೪೫
ಪುನರ್ವಸು ಪ್ರಥಮ Castor . ಮಿಥುನ Gemini

ವೃಶ್ಚಿಕ Scorpius ೬೧೦


ಮೂಲಾ Shaula
೪೭೦
ವ್ಯಾಧಭುಜ Bellatrix ಮಹಾವ್ಯಾಧ Orion

ವೃಷಭ Taurus ೩೦೦


eon , AlNath

ದೇವನೌಕಾ ದ್ವಿತೀಯ

ದೇವನೌಕಾ Carina ೮೬
Miaplacidus
೨೨೦
೨೮ . ತ್ರಿಶಂಕು ತೃತೀಯ Gamma Crucis ತ್ರಿಶಂಕು CruX
೬ ೫
ನಕ್ಷತ್ರ ವೀಕ್ಷಣೆ
೧೬೦೦
೨೯ . ಮೇಖಲಾ ಕೇಂದ್ರ Anilam ಮಹಾವ್ಯಾಧ Orion
ಬಕ Grus
೩೦. ಬಕ ಪ್ರಥಮ Ainair

ಆಕಾಶದಲ್ಲಿ ದೂರ, ಕಾಲ ಮಾನಕಗಳು

ಖಗೋಳಮಾನ = ಸೂರ್ಯ-ಭೂಮಿ ಸರಾಸರಿ ಅಂತರ

= ೧೪ ,೯೫, ೯೮, ೫೦೦ ಕಿಲೋಮೀಟರುಗಳು

ಜ್ಯೋತಿರ್ವಷ್ರ = ೧ ವರ್ಷದಲ್ಲಿ ಬೆಳಕು ಗಮಿಸುವ ದೂರ


= ೯ . ೪೬೦೭ ಮಿಲಿಯನ್ ಮಿಲಿಯನ್ ಕಿಲೋಮೀಟರುಗಳು

ಬೆಳಕಿನ ವೇಗ = ಸೆಕೆಂಡಿಗೆ ೨,೯೯, ೭೯೨. ೪೧೮ ಕಿಮೀ ಅಥವಾ ಸ್ಕೂಲವಾಗಿ

೩ , ೦೦, ೦೦೦ ಕಿಮೀ

೧ ಮಿಲಿಯನ್ ೧೦, ೦೦, ೦೦೦

ದಿವಸ = ಭೂಮಿ ತನ್ನ ಅಕ್ಷದ ಸುತ್ತ ಒಂದು ಆವರ್ತನೆ ಮುಗಿಸಲು

ತೆಗೆದುಕೊಳ್ಳುವ ಅವಧಿ = ಇರುಳು + ಹಗಲು = ೨೪ ಗಂಟೆಗಳು

೧ ಗಂಟೆ = ೬೦ ಮಿನಿಟುಗಳು = ೩ , ೬೦೦ ಸೆಕೆಂಡುಗಳು

ನಾಕ್ಷಿಕ ಮಾಸ . = ಚಂದ್ರ ಯಾವುದೇ ನಕ್ಷತ್ರ ಕುರಿತು ಭೂಮಿಯ ಸುತ್ತ

ಪರಿಭ್ರಮಣೆ ಮುಗಿಸಲು ತೆಗೆದುಕೊಳ್ಳುವ ಅವಧಿ = ೨೭ .೩ ದಿವಸಗ

ಸೌರಮಾಸ = ರೂಢಿಯಲ್ಲಿ ಮಾಸ ಅಥವಾ ತಿಂಗಳು

= ಸೂರ್ಯನನ್ನು ಕುರಿತು ಚಂದ್ರ ಭೂಮಿಯ ಸುತ್ತ ಒಂದು ಪರಿ

ಮುಗಿಸಲು ತೆಗೆದುಕೊಳ್ಳುವ ಅವಧಿ

= ಸುಮಾರು ೨೯ . ೫ ದಿವಸಗಳು

ವರ್ಷ = ಭೂಮಿ ಸೂರ್ಯನ ಸುತ್ತ ಒಂದು ಪರಿಭ್ರಮಣೆ ಮುಗಿ

ತೆಗೆದುಕೊಳ್ಳವ ಅವಧಿ = ೩೬೫ . ೨೪೨೨ ದಿವಸಗಳು

ನಕ್ಷತ್ರ ಪುಂಜಗಳು

ಭೂಮಿಯ ಮೇಲೈಯನ್ನು ವಿವಿಧ ಪ್ರದೇಶಗಳಾಗಿ ವಿಭಾಗಿಸಿ ಅವುಗಳ ಗಡಿ ನಿರ್

ಮಾಡಿ ಅವುಗಳಿಗೆ ಬೇರೆ ಬೇರೆ ಹೆಸರಿತ್ತಿರುವುದು ಸರಿಯಷ್ಟೆ . ಮಾನವನ ದೃಷ್ಟಿಯಿಂದ

ಮಹತ್ಯದವು. ಅವನ್ನು ಆಧರಿಸಿ ಭೂಪಟ ತಯಾರಿಸುತ್ತಾರೆ. ಇದರ ಅಧ್ಯಯನದಿಂದ ರಾಷ್ಟ

ರಾಜ್ಯ , ನಗರ, ಪರ್ವತ, ನದಿ, ಸಾಗರ ಮುಂತಾದವುಗಳ ನೆಲೆ ವಿತರಣೆ ಇತ್ಯಾದಿ ವಿವರ ತಿಳಿಯುತ್ತದ

ಖಗೋಳದಲ್ಲಿ ಕಾಣುವ ಸ್ಥಿರ ನಕ್ಷತ್ರ ಚಿತ್ರಗಳನ್ನು ಅನಾದಿ ಕಾಲದಿಂದಲೂ

ಗುರುತಿಸುತ್ತ ಬಂದಿದ್ದಾನೆ. ಅಲ್ಲಿಯೂ ಬೇರೆ ಬೇರೆ ' ರಾಷ್ಟ್ರನಗರ' ಮುಂತಾದವನ್ನು

ಅವುಗಳಿಗೆ ಹೆಸರಿತ್ತಿದ್ದಾನೆ. ವರ್ತಮಾನ ಕಾಲದಲ್ಲಿ ಈ ನಾಮಕರಣ ವಿಧಾನವನ್ನು ವೈಜ

ನೇರ್ಪುಗೊಳಿಸಿ ವಿವಿಧ ನಕ್ಷತ್ರ ರಾಜ್ಯಗಳ ಗಡಿನಿರ್ಣಯ ಮಾಡಲಾಗಿದೆ, ಅವುಗಳ


트 트
ನಕ್ಷತ್ರ ವೀಕ್ಷಣೆ

ಹೆಸರುಗಳನ್ನು ಶಿಷ್ಟ್ರೀಕರಿಸಲಾಗಿದೆ. ಖಗೋಳವನ್ನು ೮೮ ನಕ್ಷತ್ರ ರಾಜ್ಯಗಳಾಗಿ ವ

ಆಕಾಶಪಟವನ್ನು ತಯಾರಿಸಲಾಗಿದೆ. ನಕ್ಷತ್ರ ರಾಜ್ಯದ ವೈಜ್ಞಾನಿಕ ಹೆಸರು ನಕ್ಷತ್ರ ಪುಂ

ಪುಂಜ. ಮೇಷಾಧಿ ದ್ವಾದಶ ರಾಶಿಗಳೂ ಮೂಲತಃ ಪುಂಜಗಳೇ . ಆದರೆ ನಮಗೆ ( ವಿಶ್ವಕ್ಕೆ


ಇವು ವಿಶೇಷ ಆತ್ಮೀಯವಾದವು - ಸೂರ್ಯನ ಮಾಸಿಕ ಗೃಹಗಳು, ಎಂದೇ ನಕ್ಷತ್

ವಿಶಿಷ್ಟ ನಾಮಧೇಯ. ಈ ಎಲ್ಲ ಪುಂಜಗಳ ಭಾರತೀಯ ನಾಮಗಳನ್ನೂ ಇವುಗಳ ಅಂತಾರಾಷ್ಟ್ರೀಯ

ಸಮಾನಕಗಳನ್ನೂ ಮುಂದೆ ಕೊಟ್ಟಿದೆ. ( ಹೆಸರುಗಳನ್ನು ಆಕಾರಾದಿಯಾಗ

೧. ಅಗ್ನಿಕುಂಡ Fornax ೨೯ . ದಕ್ಷಿಣ ಕಿರೀಟ Corona Australis


೨. ಅಜಗರ Hydra ೩೦. ದಕ್ಷಿಣ ತ್ರಿಕೋಣಿ

ಅಷ್ಟಕ Octans Triangulum Australe

ಉತ್ತರ ಕಿರೀಟ Corona Borealis ೩೧. ದಕ್ಷಿಣ ಮೀನ Pisces Austrinus

ಉರಗಧರ Ophiuchus ೩೨. D78 , 23 Pyxis



ಏಕಶೃಂಗಿ Monoceros ದೀರ್ಘಕಂಠ Camelopardus

ಕಂದರ Crater ೩೪. ದೂರದರ್ಶಿನಿ Telescopium


೩೫ . ದೇವನೌಕಾ Carina
ಕನ್ಯಾ Virgo
೩೬ . ದೇವವಿಹಗ Apus
ಕಪೋತ Columba

ಕರ್ಕಟಕ Cancer ೩೭ . ದೌಪದಿ Andromeda


೩೮. ಧನಿಷ್ಟಾ Delphinus
ಕಾಳಭೈರವ Canes Venatici

ಕಾಳಿಂಗ Hydrus ೩೯ . ಧನು Sagittarius


6
ಕಿನ್ನರ Centaurus ೪೦ . ನಕುಲ Pegasus
ಲಗಿ.
ಕಿಶೋರ Equuleus ನೌಕಾಪಟ Vela

ಕುಂತೀ Cassiopeia ನೌಕಾಪೃಷ್ಠ Puppis

73025 Aquarius ಪಾರ್ಥ Perseus

೪೪ .
ಕೃಷ್ಣವೇಣಿ Coma Berenices 207 Grus

೧೮ . ೪೫ . ಭೀಮ Hercules
ಖೇಟಕ Scutum Sobiesci
6
ಗರುಡ Aquila ೪೬ . ಮಕರ Capricornus
6
ಚಂಚಲವರ್ಣಿಕಾ Chamaeieon ೪೭ . ಮತೃ Dorado
೨೧. ಚಕೋರPhoenix ೪೮. ಮಯೂರ Pavo
೪೯ . ಮಶಕ Musca
ಚತುಷ್ಕ Norma
೫೦ . ಮಹಾವ್ಯಾಧ Orion
ಚಿತ್ರಫಲಕ Pictor

೨೪ . ಜಾಲ Reticulum ೫೧ . ಮಹಾಶ್ವಾನ Canis Major

58. ೫೨. ಮಾರ್ಜಾಲ Lynx


ತಿಮಿಂಗಲ Cetus
೨೬ . ತುಲಾ Libra ೫೩ . ಮಿಥುನ Gemini

೨೭. ೫೪. ಮೀನ Pisces


ತ್ರಿಕೋಣಿ Triangulum
೫೫. ಮುಸಲೀ Lacerta
೨೮ . ತ್ರಿಶಂಕು Crux
೬ ೭
ನಕ್ಷತ್ರ ವೀಕ್ಷಣೆ

೫೬ . ಮೇಷ Aries ೭೩ . ಶರ Sagitta

೫೭ . ೭೪. ಶಶ Lepus
ಯುಧಿಷ್ಠಿರ Cepheus
೫೮. ರಾಜಹಂಸ Cygnus | ಶಿಲ್ಪಶಾಲಾ Sculptor

೫೯ . ರೇಚಕ Antia ಶೃಗಾಲ Vulpecula


೬೦ .
ಲಘುಶ್ವಾನ Canis Minor ೭೭ . B ,CJ Tucana

೬೧. ಲಘುಸಪ್ತರ್ಷಿ Ursa Minor ೭೮. ಷಷ್ಠಕ Sextans

ಲಘು ಸಿಂಹ Leo Minor ೭೯ . ಸಪ್ತರ್ಷಿಮಂಡಲ Ursa Major

೬೩ . ವಿಜಯಸಾರಥಿ Auriga ೮೦ . ಸರ್ಪ Serpens

೬೪. ವೀಣಾ Lyra ೮೧ . ಸಹದೇವ Bootes

೬೫ . ವೃಕ Lupus ೮೨. ಸಾನು Mensa

೬೬ . ವೃತ್ತಿನೀ Circinus ೮೩ . ಸಿಂಧೂ indus

ವೃಶ್ಚಿಕ Scorpius ೮೪. ಸಿಂಹ Leo

ವೃಷಭ Taurus ೮೫ . ಸುಯೋಧನ DracO


೬೯ . ವೇದಿಕಾ Ara ೮೬ . ಸೂಕ್ಷದರ್ಶಿನಿ Microscopium
೭೦. ವೈತರಣೀ Eridanus ೮೭ . ಹಸ್ನಾ Corvus
೭ . ೮೮.
ವೃಶ್ಚನ Caelum ಹೊರಾಸೂಚೀ Horologium

ಶಫರೀ Volans

ದ್ವಾದಶ ರಾಶಿಗಳು

ರಾಶಿಚಕ್ರದ ನೇರ ಪಶ್ಚಿಮ -ಪೂರ್ವದಿಶೆ

ಮೇಷ Aries - ೭ ತುಲಾ Libra



ವೃಷಭ Taurus ೮ ವೃಶ್ಚಿಕ Scorpius

ಮಿಥುನ Gemini ಧನು Sagittarius

ಕರ್ಕಟಕ Cancer ೧೦ ಮಕರ Capricornus

ಸಿಂಹ Leo ೧೧ . 75025 Aquarius

೬ ಕನ್ಯಾ Virgo ೧೨ ಮೀನ Pisces

೨೭ ನಿತ್ಯ ನಕ್ಷತ್ರಗಳು

ಚಂದ್ರನ ದೈನಂದಿನ ಗೃಹಗಳು - ಪಶ್ಚಿಮಪೂರ್ವ - ದಿಶೆಯಲ್ಲಿ

ಕ್ರಮ ನಕ್ಷತ್ರನಾಮ ಇಂಗ್ಲಿಷ್ ಸಮಾನಾರ್ಥಕ ಪುಂಜ/

ಸಂಖ್ಯೆ
|c
ರಾಶಿನಾಮ
ಅಶ್ವಿನೀ Hamal
೧ ಮೇಷ
ಭರಣಿ 41 Aries
ಡ* ಮೇಷ
ಕೃತ್ತಿಕೆ Alcyone
ವೃಷಭ
ರೋಹಿಣಿ Aldebaran
ವೃಷಭ |

ನಕ್ಷತ್ರ ವೀಕ್ಷಣೆ
ಕೆ
ಮೃಗಶಿರಾ Lambda Orion ಮಹಾವ್ಯಾಧ

ಆದ್ರ್ರಾ Betelgeuse ಮಹಾವ್ಯಾಧ

ಪುನರ್ವಸು Castor and Pollux ಮಿಥುನ

ಪುಷ್ಯ Delta Cancer ಕರ್ಕಾಟಕ
b
ಆಶ್ಲೇಷಾ Epsilon Hydra ಅಜಗರ

ಮಘಾ Regulus ಸಿಂಹ


೧೧. ಹುಬ್ಬ Zosma and Theta Leo 20m

೧೨. ಉತ್ತರಾ 93 Leo and Denebola

(Vindemeatrix ) ಸಿಂಹ

೧೩ . ಹಸ್ತಾ Delta Corvus ಹಸ್ತಾ

ಚಿತ್ತಾ Spica ಸಹದೇವ

ಸ್ವಾತೀ Arcturus ತುಲಾ


ವಿಶಾಖ Zubenel Genubi

ಅನೂರಾಧಾ Akrab

ಜೈಷ್ಟಾ Antares ವೃಶ್ಚಿಕ


ಮೂಲಾ Shaula ವೃಶ್ಚಿಕ
ಪೂರ್ವಾಷಾಢಾ Delta & Epsilon Sagittarius ಧನು

ಉತ್ತರಾಷಾಢಾ Nunki ಧನು

ಶ್ರವಣ Altair ಗರುಡ

ಧನಿಷ್ಕಾ Rotanev ಧನಿಷ್ಕಾ

ಶತಭಿಷ Sadalsud ಕುಂಭ

ಪೂರ್ವಾಭಾದ್ರಾ Markab and Scheat ನಕುಲ

ಉತ್ತರಾಭಾದ್ರಾ Algenib and Alpheratz ನಕುಲ ಮತ

ಬ್ರೌಪದಿ

ರೇವತಿ Epsilion Pisces ಮೀನ

* ಗ್ರಹಗೃಹ ನಿರ್ಣಯ

ಪಂಚಾಂಗ ನೋಡಿ ಗ್ರಹಸ್ಥಾನಗಳನ್ನು ನಿರ್ಣಯಿಸುವುದು ಹೇಗೆ? ಈ ಪ್ರಶ್ನೆಗೆ ಸ

ಉತ್ತರವನ್ನು ಪ್ರಕೃತ ಅನುಬಂಧದಲ್ಲಿ ಕೊಟ್ಟಿದೆ.

ತಿಥಿ , ವಾರ ನಕ್ಷತ್ರ, ಯೋಗ, ಕರಣ ಎಂಬ ಪಂಚ ಅಂಗಗಳ ಸಂಯುಕ್ತವೇ ಪಂಚ

ಮಾನವನಿಗೆ ಕಾಣುವ ಆಕಾಶದ, ತತ್ರಾಪಿ ಸೌರವ್ಯೂಹದ, ಗಣಿತ ಪ್ರತಿಬಿಂಬವಿದು.

ಜಗತ್ತು ವಾಸ್ತವತೆ. ಪಂಚಾಂಗ ಅದಕ್ಕೆ ಬರೆದ ಭಾಷ್ಯ , ಗತಿಶೀಲತೆ ಜಗತ್ತಿನ ಧರ

ಪಂಚಾಂಗದಲ್ಲಿ ಪ್ರತಿಬಿಂಬಿತವಾಗಬೇಕಾದದ್ದು ಅನಿವಾರ್ಯ.

ಅವಾಸ್ತವವಾಗುತ್ತದೆ. ಉದಾಹರಣೆಗೆ ಹಲವು ಸಾವಿರ ವರ್ಷಗಳ ಹಿಂದೆ ಉತ್ತರಾ


ನಕ್ಷತ್ರ ವೀಕ್ಷಣೆ

ಜನವರಿ ೧೪ರಂದೂ ಯುಗಾದಿ ಏಪ್ರಿಲ್ ೧೪ರಂದೂ ಸಂಭವಿಸುತ್ತಿದ್ದುವು. ಆದರೆ ಖಗೋಳದಲ್ಲಿಯ

ಅಸಂಖ್ಯ ವ್ಯತ್ಯಯಗಳ ಪರಿಣಾಮವಾಗಿ ವರ್ತಮಾನ ಕಾಲದಲ್ಲಿ ಈ ತೇದಿಗಳು ಅನುಕ್ರ

ಡಿಸೆಂಬರ್ ೨೧/೨೨ ಮತ್ತು ಮಾರ್ಚ್ ೨೧/ ೨೨ ಆಗಿವೆ. ಡಿಸೆಂಬರ್ ೨೨ರಂದ

ಉತ್ತರಾಭಿಮುಖ ಪರ್ಯಟನೆ ಆರಂಭವಾಗುತ್ತದೆ. ಜನವರಿ ೧೪ರಂದು ಅಲ್ಲ . ಮಾರ್ಚ

ಸೂರ್ಯನ ದೈನಂದಿನ ಪಥ ವಿಷುವದ್ಬವಾಗಿದ್ದು ಹಗಲು ಮತ್ತು ಇರ

ಅವಧಿಯಾಗಿರುತ್ತವೆ - ಏಪ್ರಿಲ್ ೧೪ರಂದು ಅಲ್ಲ . ಈ ವಿದ್ಯಮಾನಗಳನ್ನು ಪ್ರತ್ಯಕ್ಷ ವೀಕ್ಷಣೆಯಿ

ಅರಿಯಬಹುದು. ವಾಸ್ತವತೆ ಹೀಗಿದ್ದರೂ ಹಲವಾರು ಪಂಚಾಂಗಗಳು ಧರ್ಮದ ಅಥವಾ ಪರಂಪರೆಯ

ಹೆಸರಿನಲ್ಲಿ ಪ್ರಾಚೀನ ಗಣಿತ ವಿಧಾನವನ್ನೇ (ಇದು ಸೂರ್ಯಸಿದ್ದಾಂತ) ಅನುಸರಿಸುತ್ತ

ವಿವರಗಳನ್ನು ಪ್ರಕಟಿಸುತ್ತಿವೆ. ಇದು ಶುದ್ಧಾಂಗ ಅವೈಜ್ಞಾನಿಕ, ಅಧಾರ್ಮಿಕ ಕೂ

ನುಡಿಗಳಲ್ಲಿ

ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ ?

ವಿಹಿತವಾಗಿಹುದದರ ಗತಿ ಸೃಷ್ಟಿ ವಿಧಿಯಿಂ

ಅಂದ ಮೇಲೆ ಆಕಾಶದ ಯಥಾವತ್ತು ವಿವರಗಳನ್ನು ಶಾಸ್ತ್ರೀಯವಾಗಿ ಅರಿತು ಚಂದ

ನಕ್ಷತ್ರಗಳನ್ನು ನಿಷ್ಕೃಷ್ಟವಾಗಿ ಗುರುತಿಸಬೇಕೆಂದು ಬಯಸುವವರು ಆಧುನಿಕ ಗಣಿತ ಪ್ರಕ

ಪಂಚಾಂಗ ಅನುಸರಿಸಬೇಕೆಂಬುದು ಸ್ಪಷ್ಟ – ಇದಕ್ಕೆ ದೃಕ್ಸಿದ್ದಾಂತ ಎಂದು ಹೆಸರು. ಉ

ಭಾರತ ಸರ್ಕಾರ ಪ್ರಕಟಿಸುವ ರಾಷ್ಟ್ರೀಯ ಪಂಚಾಂಗ; ವೈಜಯಂತೀ ಪಂಚಾಂಗ (ಸಂಪಾದಕ : ವೈ

ಭೀಮಜೋಯಿಸ, ಅಂಗ್ರಜೆ, ಕೆದಿಲ ಅಂಚೆ, ದಕ್ಷಿಣ ಕನ್ನಡ ಜಿಲ್ಲೆ ೫೭೪ ೨೨೦ ); ಇತ್ಯಾದಿ

ಸೂರ್ಯಸಿದ್ಧಾಂತ ಪ್ರಕಾರ ತಯಾರಿಸಿರುವ ಪಂಚಾಂಗ ಅನುಸರಿಸುವವರಿಗೆ ಆಕಾ

ಚಿತ್ರಣ ಲಭಿಸದು. ಇನ್ನು ನಿಸರ್ಗಾಧೀನ ಧಾರ್ಮಿಕ ವಿಧಿಗಳು ?

- ಪಂಚಾಂಗದ ೫ ಅಂಗಗಳು

೧ ತಿಥಿ, ಇದು ಚಂದ್ರನ ವೃದ್ಧಿ ಕ್ಷಯ ಅನುಸರಿಸಿ ದಿವಸವನ್ನು ಅಂಕಿಸುವ ವಿಧಾನ

ಶುಕ್ಲಪಕ್ಷದಲ್ಲಿ ವೃದ್ಧಿ ಚಂದ್ರ , ತಿಥಿಗಳು ಶುದ್ಧ ಪಾಡ್ಯದಿಂದ (೧) ಹುಣ್ಣಿಮೆಯ ( ೧೫) ತನ

ಹದಿನೈದು. ಕೃಷ್ಣಪಕ್ಷದಲ್ಲಿ ಕ್ಷಯ ಚಂದ್ರ , ತಿಥಿಗಳು ಬಹುಳ ಪಾಡ್ಯದಿಂದ ( ೧೬) ಅಮಾವಾಸ್

(೩೦) ತನಕ ಹದಿನೈದು, ಮೂವತ್ತು ತಿಥಿಗಳು (= ಶುಕ್ಲಪಕ್ಷ +ಕೃಷ್ಣಪಕ್ಷ ) ಸಲ್ಲುವಾಗ ತಿಂಗಳು (= ೨

ಆಸನ್ನ ಅಮಾವಾಸ್ಯೆಗಳ ನಡುವಿನ ಅವಧಿ) ಮುಗಿಯುತ್ತದೆ.

೨ ವಾರ, ಇದೊಂದು ಮಾನವಕೃತ ಕಾಲಮಾನಕ, ೭ ಅನುಕ್ರಮ ದಿವಸಗಳ ಗುಂಪು ಅಥವ

ಸಾಪ್ತಾಹಿಕ ಚಕ್ರ , ಆದಿತ್ಯವಾರದಿಂದ ಶನಿವಾರದ ತನಕ ಇದರ ಒಂದು ಉರುಳಾಟ . ಈ ಚಕ್ರಕ

ಸಂವಾದಿಯಾಗಿ ಆಕಾಶದಲ್ಲಿ ಯಾವ ಗುರುತೂ ಇಲ್ಲ .

೩ ( ನಿತ್ಯ ) ನಕ್ಷತ್ರ . ಮೇಷದಿಂದ ಮೀನದವರೆಗಿನ ೧೨ ನಕ್ಷತ್ರ ರಾಶಿಗಳನ್ನು ಒಳಗೊಂ

೧೮ ಅಗಲದ ಪಟ್ಟಿ ರಾಶಿಚಕ್ರ , ಗಣನೆಯ ಸೌಕರ್ಯಕ್ಕಾಗಿ ಇದನ್ನು ೧೨ ಸಮಭಾಗಗಳಾಗಿ ವಿ

ಆಯಾ ಭಾಗದಲ್ಲಿರುವ ರಾಶಿಯ ಹೆಸರಿನಿಂದ ಅಂಕಿಸಿದೆ. ಪ್ರತಿಯೊಂದು ರಾಶಿಯ ವ್ಯಾಪ


೭೦
ನಕ್ಷತ್ರ ವೀಕ್ಷಣೆ

ಮೀನ ಮೇಷ
ವೃಷಭ , ಮಿಥುನ
ರೇವತಿ - ಅಶ್ವಿನಿ | ಭರಣಿ | ಕೃತ್ತಿಕೆ | ರೋಹಿಣಿ | ಮೃಗಶಿರಾ

- ೩೦°

೩೬೦ + ೧೨). ಹೀಗೆ ಮೇಷಎಂದರೆ ಮೇಷ ರಾಶಿಯನ್ನು ಒಳಗೊಂಡಿರುವ ೩೦° ವ್ಯಾಪ

ಪಶ್ಚಿಮ ಮತ್ತು ಪೂರ್ವ ಗೃಹಗಳು ಅನುಕ್ರಮವಾಗಿ ಮೀನ ಮತ್ತು ವೃಷಭ ರಾಶ

- ಅಶ್ವಿನಿಯಿಂದ ರೇವತಿವರೆಗಿನ ೨೭ ನಕ್ಷತ್ರಗಳು ರಾಶಿಚಕ್ರದ ಮೇಲಿವೆ. ಆದರೆ

ವೃತ್ತದ ನೇರ ಅಲ್ಲ . ಬದಲು, ಡಾಬುವಿನ ಮೇಲೆ ಹರಳುಗಳನ್ನು ಯಾದೃಚ್ಛಿಕವಾಗಿ ಕೂರಿ

ಗಣನೆಯ ಸೌಕರ್ಯಕ್ಕಾಗಿ ರಾಶಿಚಕ್ರವನ್ನು ೨೭ ಸಮಭಾಗಗಳಾಗಿ ವಿಭಾಗಿಸಿ ಆಯಾ ಭಾಗದ

ನಕ್ಷತ್ರದ ಹೆಸರಿನಿಂದ ಅಂಕಿಸಿದೆ. ಈ ವಿಭಾಗದಲ್ಲಿ ಮೀನ-ಮೇಷ ಗಡಿಗೆರೆಯೇ ಮೂ

ಪ್ರತಿಯೊಂದು ನಕ್ಷತ್ರದ ವ್ಯಾಪ್ತಿ ೧೩೦೨೦' (= ೩೬೦ + ೨೭).ಹೀಗೆ, ಅಶ್ವಿನಿ ಎಂದರೆ ಮೀ

ಗಡಿಗೆರೆಯಿಂದ ತೊಡಗಿ ಮೇಷ ರಾಶಿಯಲ್ಲಿ , ಅಂದರೆ ರಾಶಿ ಚಕ್ರದಲ್ಲ

೧೩೦೨೦' ವ್ಯಾಪ್ತಿಯ ಪ್ರದೇಶ. ಇದರಲ್ಲಿ ಅಶ್ವಿನಿ ನಕ್ಷತ್ರವಿದೆ. ಅಶ್ವಿನಿಯ ಪಶ್ಚಿಮಕ್ಕೆ ರೇವತಿಯ

ಪೂರ್ವಕ್ಕೆ ಭರಣಿಯೂ ಇವೆ.

೧೩° ೨೦' ವ್ಯಾಪ್ತಿಯ ಪ್ರದೇಶ ಎನ್ನುವುದೊಂದು ಗಣಿತ ಸೌಕರ್ಯ ಮಾತ್ರ . ಈ ಪ್ರದೇ

ಒಂದೇ ನಕ್ಷತ್ರವಿರಬೇಕೆಂದೇನೂ ಇಲ್ಲ . ಉದಾಹರಣೆಗೆರೋಹಿಣಿ, ಆದ್ರ್ರಾ,

ಒಂಟಿ ನಕ್ಷತ್ರಗಳು, ಅಶ್ವಿನಿ, ಕೃತ್ತಿಕೆ, ಅನೂರಾಧಾ ಮುಂತಾದವು ಹಲವು ನಕ್ಷತ್ರಗ

ಎರಡನೆಯ ಸಂದರ್ಭದಲ್ಲಿ ಆಯಾ ಕೂಟದ ಅತ್ಯುಜ್ಜಲ ತಾರೆಯನ್ನು

ಎನ್ನುವುದುಂಟು. ಆದ್ದರಿಂದ ಕೃತ್ತಿಕಾ ಯೋಗತಾರೆ ಎಂದರೆ ಕೃತ್ತಿಕಾಗುಚ್ಚದ ಸುಮಾರು ೮ ತ

ಪೈಕಿ ಅತ್ಯುಜ್ಜಲ ತಾರೆ ಎಂದರ್ಥ.

ಪ್ರತಿಯೊಂದು ನಕ್ಷತ್ರವನ್ನು ( ಅಂದರೆ ಅದರ ವ್ಯಾಪ್ತಿಯನ್ನು ) ನಾಲ್ಕು ಸಮ

ವಿಭಾಗಿಸಿದೆ. ಇವು ಆ ನಕ್ಷತ್ರದ ಪಾದಗಳು ಪ್ರಥಮದಿಂದ ಚತುರ್ಥದವರೆಗೆ ನಕ್ಷತ್ರಪ

೩೦೨೦' ( = ೧೩೦ ೨೦1 ² ೪).

೯ ಆಸನ್ನ ಪಾದಗಳ ಮೊತ್ತ ೩೦° (= ೩೦ ೨೦1 x ೯ ), ಇದು ರಾಶಿಯ ವ್ಯಾಪ್ತಿಗೆ ಸಮ .

ಎಂದೇ ಮೇಷದ ಘಟಕ ತಾರೆಗಳು ಅಶ್ವಿನಿ (೪ ) ಭರಣಿ ( ೪) ಮತ್ತು ಕೃತ್ತಿಕಾ ಪ್ರಥಮ ಪಾ

ವೃಷಭದ ಘಟಕ ತಾರೆಗಳು ಕೃತ್ತಿಕೆಯ ಕೊನೆಯ ೩ ಪಾದಗಳು ( ೩), ರೋಹಿಣಿ ( ೪) ಮತ

ಮೃಗಶಿರಾದ ಮೊದಲ ೨ ಪಾದಗಳು ( ೨), ಇತ್ಯಾದಿ.


೭೧
ನಕ್ಷತ್ರ ವೀಕ್ಷಣೆ

ರಾಶಿಚಕ್ರದ ಮೇಲೆ ಚಂದ್ರ ಸುಮಾರು ೨೭ ದಿವಸಗಳ ಅವಧಿಯಲ್ಲಿ ಭೂಮಿಯ

ಒಂದು ಪರಿಭ್ರಮಣೆ ಮುಗಿಸುತ್ತದೆ-ಸ್ಕೂಲವಾಗಿ ಒಂದು ನಕ್ಷತ್ರದಲ್ಲಿ ೧ ದಿವಸ.

ದಿವಸ ಚಂದ್ರನ ಮನೆ ಯಾವ ನಕ್ಷತ್ರ ಎನ್ನುವುದನ್ನು ಪಂಚಾಂಗದಲ್ಲಿಯ '

ಶೀರ್ಷಿಕೆಯಡಿಯಲ್ಲಿ ನೋಡಬಹುದು.

ಇಲ್ಲಿ ಕೊಟ್ಟಿರುವ ಉದಾಹರಣೆಯನ್ನು ಈಶ್ವರ ಸಂವತ್ಸರ ( ಇಸವಿ ೨೦೦೨- ೦

" ವೈಜಯಂತೀ ಪಂಚಾಂಗವು"( ಸಂಪಾದಕರು : ಯರ್ಮುಂಜ ಭೀಮಜೋಯಿಸ ಮತ್ತು

ಶಂಕರಜೋಯಿಸ, ಅಂಗರಜೆ, ಕೆದಿಲ ೫೭೪೨೨೦, ದಕ್ಷಿಣ ಕನ್ನಡ ಜಿಲ್ಲೆ) ಪುಸ್ತಕದಿಂದ ಉದ್ದರಿಸಿದೆ.

ದೃಕ್ಸಿದ್ದಾಂತ ಪ್ರಕಾರ ರಚಿತವಾಗಿರುವ ಪಂಚಾಂಗವಿದು: ಅಂದರೆ ವರ್ತಮಾನ

ಪ್ರತಿಬಿಂಬ . ಹೀಗಲ್ಲದೇ ಪಾರಂಪರಿಕ ಅಥವಾ ಧಾರ್ಮಿಕ ಎಂಬ ಕಾರಣಕ್ಕಾಗಿ ದೃಕ್ಸಿದ

ರಚಿತವಾಗಿರದ ಪಂಚಾಂಗವನ್ನು (ಉದಾಹರಣೆಗೆ ಸೂರ್ಯಸಿದ್ಧಾಂತ ಪ್ರಕ

ಪಂಚಾಂಗಗಳಿವೆ;ಸೂರ್ಯ- ದೃಕ್ಸಿದ್ದಾಂತಗಳ ಸಮನ್ವಯದಿಂದ - ಏನು ಹೀಗೆಂದರೆ ?

ಸಂಕರ ವಿಕೃತಿಗಳೂ ಇವೆ; ಇವು ಯಾವುವೂ ವರ್ತಮಾನ ಆಕಾಶದ ಗಣಿತ ಪ್ರತಿಬಿಂಬಗಳಲ್ಲ

ಎಂದೇ ತ್ಯಜಿಸಲ್ಪಡಬೇಕಾದವು) ಅವಲಂಬಿಸುವುದಾದರೆ ನಿಜ ಚಿತ್ರ ಗೋಚರವಾಗದು. ಭಾರ

ಸರ್ಕಾರ ಪ್ರಕಟಿಸುತ್ತಿರುವ ' ರಾಷ್ಟ್ರೀಯ ಪಂಚಾಂಗ' ಸರ್ವಮಾನ್ಯವಾದದ್ದು .

ಇಸವಿ ತಿಂಗಳು ತಾರೀಕು ಪಕ್ಷ ತಿಥಿ ವಾರ ನಕ್ಷತ್ರ ವೈಶಿಷ್ಟ್ಯ .

೨೦೦೨ ಜೂನ್ ೨೧ ಶುಕ್ಷ ೧೧ ಶುಕ್ರ ಸ್ವಾತೀ ದಕ್ಷಿಣಾಯನಾರಂಭ

ಸೆಪ್ಟೆಂಬರ್ ೨೩ ಕೃಷ್ಣ ೨ ಸೋಮ ರೇವತಿ ಶರದ್ವಿಷುವ

ಡಿಸೆಂಬರ್ ೨೨ ಕೃಷ್ಣ ೩ ರವಿ ಪುನರ್ವಸು ಉತ್ತರಾಯಣಾರಂಭ

೨೦೦೩ ಮಾರ್ಚ್ ೨೧ ಕೃಷ್ಣ ೪ ಶುಕ್ರ ಸ್ನಾತೀ ವಸಂತವಿಷುವ

- ಇವುಗಳ ಅರ್ಥವಿದು : ೨೦೦೨ ಜೂನ್ ೨೧ ಶುಕ್ರವಾರ ಶುಕ್ಲಪಕ್ಷದ (ಅಥವಾ ಶುದ್

ಏಕಾದಶಿಯಂದು ಚಂದ್ರನ ನೆಲೆ ಸ್ನಾತೀನಕ್ಷತ್ರ; ಅಂದು ಸೂರ್ಯನ ಉತ್ತರಾಭಿಮ

ಕೈದಾಗಿ ದಕ್ಷಿಣಾಭಿಮುಖ ಚಲನೆ ಆರಂಭವಾಯಿತು. ಸೆಪ್ಟೆಂಬರ್ ೨೩ರಂದು

ವಿಷುವದ್ಯವನ್ನು ಉತ್ತರ ಗೋಳಾರ್ಧದಿಂದ ದಕ್ಷಿಣಗೋಳಾರ್ಧಕ್ಕೆ ದಾಟುತ್ತದೆ( ಶರದ್ವಿಷ


ಡಿಸೆಂಬರ್ ೨೨ರಂದು ಸೂರ್ಯನ ದಕ್ಷಿಣಾಭಿಮುಖ ಚಲನೆ ಕೈದಾಗಿ ಉತ್ತರಾಭಿಮುಖ

ಆರಂಭವಾಗುತ್ತದೆ. ೨೦೦೩ ಮಾರ್ಚ್ ೨೧ರಂದು ಸೂರ್ಯ ವಿಷುವದ್ಯವನ್ನು ದಕ್ಷಿ

ಗೋಳಾರ್ಧದಿಂದ ಉತ್ತರ ಗೋಳಾರ್ಧಕ್ಕೆ ದಾಟುತ್ತದೆ( ವಸಂತ ವಿಷುವ) : ಖಗೋಳದಲ್ಲಿ ಯುಗಾ


( ನಿಜ ಮತ್ತು ಏಕೈಕ ಘಟನೆ).

ಈ ಮೇಲೆ ವಿವರಿಸಿರುವ ಪ್ರಕಾರ ಯಾವ ದಿನ ಬೇಕಾದರೂ ಪಂಚಾಂಗ ಓದಿ ಚಂದ್ರನ

ಸ್ಥಾನ ಅರಿತು ಗಗನದಲ್ಲಿ ಆ ನೆಲೆಯನ್ನು ಗುರುತಿಸಬಹುದು. ಚಂದ್ರನ ಸ್ಥಾನ'ರೋಹಿಣಿ' ಅಥವಾ


'ಜೈಷ್ಣಾ' ಎಂದರೆ ಆಯಾ ನಕ್ಷತ್ರದ ಸನಿಹದಲ್ಲಿ ಚಂದ್ರ ಇದೆ ಎಂದು ಮಾತ್ರ ಅರ್ಥ

ಅಪೇಕ್ಷೆ ಪ್ರಕಾರ ಆಕಾಶ ಇಲ್ಲ , ಇರಬೇಕಾಗಿಯೂ ಇಲ್ಲ !


೭೨
ನಕ್ಷತ್ರ ವೀಕ್ಷಣೆ

- ೪ ಮತ್ತು ೫ ಯೋಗಕರಣ. ಇವು ಧಾರ್ಮಿಕ ವಿಚಾರಗಳಿಗೆ ಅನ್ವಯವಾಗು

ಖಗೋಳವೈಜ್ಞಾನಿಕವಾಗಿ ಇವುಗಳಿಗೆ ಯಾವ ಮಹತ್ಯವೂ ಇಲ್ಲ .

ಗ್ರಹ ಕುಂಡಲಿ, ಪಂಚಾಂಗದ ಪ್ರತಿಯೊಂದು ಪುಟದಲ್ಲಿಯೂ ೧೨ ಮನೆಗಳ ಒ

ಪ್ರಕಟವಾಗಿರುವುದು ಸರಿಯಷ್ಟೆ , ಇವು ಈ ಮುಂದಿನ ಚಿತ್ರದಲ್ಲಿ ಕಾಣಿಸಿರುವ ಕ್ರಮ

ರಾಶಿಗಳನ್ನು ಪ್ರತೀಕಿಸುತ್ತವೆ:

ಮೀನ | ಮೇಷ | ವೃಷಭ | ಮಿಥುನ

ಕುಂಭ ಕರ್ಕಟಕ

೦ ಹುಣ್ಣಿಮೆ

0 ಅಮಾವಾಸ್ಯೆ
ಮಕರ ಸಿಂಹ

ಧನು ವೃಶ್ಚಿಕ | ತುಲಾ ಕನ್ಯಾ

ವಾಸ್ತವವಾಗಿ , ಗ್ರಹಕುಂಡಲಿಯಲ್ಲಿ ಅಥವಾ ಇದರ ವಿಸ್ತ್ರತ ರೂಪವಾದ ಜಾತಕದಲ್

ಜನನ ಕಾಲ ಮತ್ತು ದೇಶ ಕುರಿತು ವಿವರಸಹಿತ ಗ್ರಹಕುಂಡಲಿ) ರಾಶಿನಾಮಗಳನ್ನಾ

ನಿಗಧಿಸಿದ ಸಂಖ್ಯೆಗಳನ್ನಾಗಲೀ ಕಾಣಿಸುವುದಿಲ್ಲ . ಇವು ಅಧ್ಯಾಹಾರ .

- ಪಂಚಾಂಗದಲ್ಲಿ ಪ್ರಕಟವಾಗುವ ಗ್ರಹಕುಂಡಲಿ ಆಯಾ ಪಕ್ಷದಕೊನೆಯಲ್ಲಿ ಸಂಭ

ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನದಂದುಸೂರ್ಯ, ಚಂದ್ರ ಬುಧ, ಶುಕ್ರ , ಕುಜ

ಶನಿ

ಕೇತು

೯ - ೧- ೧೯೯೭

ಗುರುವಾರ

ಅಮಾವಾಸ್ಯೆ
ಗುರು

ಕುಜ
ರವಿ, ಚಂದ್ರ
ರಾಹು
ಬುಧ, ಶುಕ್ರ
೭೩
ನಕ್ಷತ್ರ ವೀಕ್ಷಣೆ

ರಾಹು ಮತ್ತು ಕೇತು ಇರುವ 'ಮನೆ' ಅಥವಾ 'ಗೃಹ' ಗಳನ್ನು (ಮೇಷದಿಂದ ಮೀನದವ

ದ್ವಾದಶರಾಶಿಗಳು) ಕಾಣಿಸುತ್ತದೆ. ಉದಾಹರಣೆ :

ಗ್ರಹಸ್ಪುಟ

ರವಿ ೮ /೨೫/೦೧.
ರಾಹುವಿನ ಗೃಹಸ್ಥಾನಕ್ಕೆ ೬
ಚಂದ್ರ ೮ / ೨೩ / ೧೫ ಕೂಡಿಸಿದರೆ ಕೇತುವಿನ ನೆಲೆ

ಕುಜ ೫ / ೦೭/ ೫೪ ಸ೦ಖ್ಯಾ ವಿವರಗಳ

೮/ ೧೦/ ೧೬ ದೊರೆಯುತ್ತದೆ.
ಬುಧ

ಗುರು ೯ /೦೩/ ೧೪ ೧೧/೦೮/ ೪೯

ಶುಕ್ರ ೮/೦೪/ ೪೩

ಶನಿ ೧೧/ ೦೭/ ೫೮

ರಾಹು ೫/ ೦೮/ ೪೯

ಇದರ ಅರ್ಥ . ಸೂರ್ಯ( ರವಿ) ೮ನೆಯ ಮನೆ ದಾಟಿ ೯ನೆಯ ಮನೆಯಾದ ಧನುರಾಶಿಯಲ್ಲಿ

ಚಂದ್ರ , ಬುಧ, ಮತ್ತು ಶುಕ್ರ ಕೂಡ ಅಲ್ಲೇ ನೆಲಸಿವೆ. ಅಂದರೆ ಸೂರ್ಯನ ಜೊತೆ ಈ ರಾಶಿಯ

ಕಾಯಗಳೂ ಮೂಡುತ್ತವೆ ಮುಂದುವರಿಯುತ್ತವೆ ಮತ್ತು ಕಂತುತ್ತವೆ. ಎಂದೇ ಚಂದ


ಮತ್ತು ಶುಕ್ರ ಅಂದು ಗೋಚರವಾಗವು. ಬೆಳಕಿನ ಕುಂಭದಿಂದ ಹಣತೆಯ ಮಿಣ

ಪ್ರತ್ಯೇಕಿಸಲಾದೀತೇ ?

ಆಕಾಶದಲ್ಲಿ ಮಾರ್ಗಚಲನೆಯ ( ಪಶ್ಚಿಮ -ಪೂರ್ವದಿಶೆ) ಅನುಸಾರ ಮೇಷದಿಂದ


ಮೀನದವರಗಿನ ದ್ವಾದಶ ರಾಶಿಗಳನ್ನು ೩೦° ಅಂತರಗಳಲ್ಲಿ ಗುರುತಿಸಿರುವುದು ಸರಿಯಷ

ಗ್ರಹಕುಂಡಲಿಯಲ್ಲಿ ಸಂವಾದೀ ಮನೆಗಳು ಅಥವಾ ಗೃಹಗಳು ಪ್ರದಕ್ಷಿಣದಿಶೆಯಲ್ಲಿ ಗುರುತ

ಇದು ನಾವು ನಮ್ಮ ಸೌಕರ್ಯಾರ್ಥ ಮಾಡಿಕೊಂಡಿರುವ ಏರ್ಪಾಡು. ಇದರಲ್

ಆಧ್ಯಾತ್ಮಿಕ, ಧಾರ್ಮಿಕ ( ಅಥವಾ ಬೇಕಾದರೆ ರಾಕ್ಷಸೀಕೂಡ!) ಅರ್ಥವನ್ನೂ ಅರಸಿ ತೊಳಲಬೇಕಾ

- ಆದ್ದರಿಂದ ಪ್ರಕೃತ ೯- ೧- ೧೯೯೭ರಂದು, ಗ್ರಹಕುಂಡಲಿಯ ಪ್ರಕಾರ, ಧನುವಿನ ಹಿಂದೆ

( ಪೂರ್ವಕ್ಕೆ ೩೦° ಅಂತರಗಳಲ್ಲಿ ಕ್ರಮವಾಗಿ ಮಕರ , ಕುಂಭ , ಮೀನ, ಮೇಷ, ವೃಷಭ, ಮಿಥುನ,

ಕರ್ಕಟಕ, ಸಿಂಹ, ಕನ್ಯಾ , ತುಲಾ ಮತ್ತು ವೃಶ್ಚಿಕ ಇರಬೇಕು - ಇದು ನಿಜ, ಸೂರ್ಯಾಸ್ತಮ

ವೇಳೆ ಮಿಥುನ ಮೂಡುತ್ತಿರುವುದು; ಇದಕ್ಕಿಂತ ಪೂರ್ವಕ್ಕಿರುವವು ರಾತ್ರಿ ಉರುಳಿದಂತೆ ಮೇಲೆ

ಮೇಲೆ ಬಂದು ಮೂಡುವುವು. ಅಂದರೆ ಮುಂಜಾನೆ ಸೂರ್ಯ ( ಧನುರಾಶಿನಿವ


ಉದಯಿಸುತ್ತಿರುವಾಗ ಮಿಥುನ ಕಂತುತ್ತಿರುವುದು ನಿಜಕ್ಕೂ ಆಕಾಶ ನೋಡುತ್ತ ಈ ವಿವರಣೆ

ಓದಿದರೆ ಚಿತ್ರ ಅಧಿಕ ಸ್ಪುಟವಾಗುತ್ತದೆ. ಆ ಭವ್ಯ ದೃಶ್ಯ ಒಂದು ಕ್ಷಣದಲ್ಲಿ ಬಿತ್ತರಿಸುವ ವೈಭವದ

ಮಹತ್ತ್ವ ಹಾಗಿದೆ. ಪದಗಳಾಗಲೀ (ಕೃತಕ ನಭೋಂಗಣ Planetarium ಕೂಡ) ಚಿತ್ರಗಳಾಗಲೀ

ಆದರೆದುರು ಪೇಲವ ಪ್ರತೀಕಗಳು ಮಾತ್ರ .


೭೪
ನಕ್ಷತ್ರ ವೀಕ್ಷಣೆ

ಪುನಃ ಗ್ರಹಕುಂಡಲಿ ನೋಡೋಣ. ಗುರುಗ್ರಹ ಮಕರ ರಾಶಿಯಲ್ಲಿದೆ. ಅಂದರೆ ಧನು ರಾಶಿಯ

(ಸೂರ್ಯನ) ಪೂರ್ವಕ್ಕಿದೆ. ಆದ್ದರಿಂದ ಗುರುವನ್ನು ಸಂಜೆಯ ಪಶ್ಚಿಮಾಕಾಶದ

ನೋಡಬಹುದು. ಶನಿ ಗ್ರಹ ಮೀನ ರಾಶಿಯಲ್ಲಿದೆ - ಅಂದರೆ ಧನುರಾಶಿಗಿಂತ ೯೦° ಪೂರ್ವ

ಆದ್ದರಿಂದ ಶನಿಯನ್ನು ಈಗ ಯಾವೊತ್ತರದ ( ನೆ ) ಸನಿಹ ಗುರುತಿಸಬಹುದು. ಕುಜ

ಮಂಗಳ ಸೂರ್ಯನಿಗಿಂತ ( ಧನು ) ೯೦° ಮುಂದೆ ( ಪಶ್ಚಿಮ ) ಕನ್ಯಾರಾಶಿಯಲ್ಲಿದೆ. ಆದ

ಮುಂಜಾನೆ ನೇಸರು ಮೂಡುವ ಮುನ್ನ ಮಂಗಳವನ್ನು ಯಾವೊತ್ತರದ ಸನಿಹ ಗುರುತ

ರಾಹು ಮತ್ತು ಕೇತು ಕಾಲ್ಪನಿಕ ಬಿಂದುಗಳು. ಇವುಗಳಿಗೆ ಭೌತ ಅಸ್ತಿತ್ವವಿಲ್ಲ .

೯ - ೧- ೧೯೯೭ ರ ಗ್ರಹಕುಂಡಲಿಯ ಕೆಳಗೆ ಗ್ರಹಸ್ಪುಟವಿದೆ . ಇದರ ಕೆಳಗೆ ರವಿಯಿಂದ ತೊ

ರಾಹುವಿನವರೆಗೆ ೮ ಕಾಯಗಳನ್ನು ಕುರಿತಂತೆ ಕೆಲವು ಸಂಖ್ಯಾವಿವರಗಳನ್ನು ಕೊಟ

ಸಂಖ್ಯಾಶ್ರೇಣಿಯಲ್ಲಿ ಮೂರುಘಟಕಗಳಿವೆ. ಮೊದಲನೆಯ ಘಟಕ ಆಯಾಕಾಯ ಆ ದಿನಾಂಕದ

ಉತ್ತರಿಸಿರುವ ರಾಶಿಗಳ ಸಂಖ್ಯೆಯನ್ನು ಸೂಚಿಸುತ್ತದೆ. ಉದಾಹರಣೆಗೆ ರವಿ, ಚಂದ್ರ

೮ ರಾಶಿಗಳನ್ನು ದಾಟಿವೆ - ಅಂದರೆ ೯ನೆಯ ರಾಶಿಯಲ್ಲಿ ನೆಲಸಿವೆ. ಗ್ರಹಕುಂಡಲ

ಕಾಯಗಳನ್ನು ೯ನೆಯ ರಾಶಿಯಲ್ಲಿ ಗುರುತಿಸಿರುವ ಕಾರಣವಿದು. ಹೀಗೆ ೮ ರಾಶಿಗಳನ

ಅಡ್ಡಹಾಯ್ದಿರುವ ಕಾಯ ೯ನೆಯ ರಾಶಿಯಲ್ಲಿ (ಪ್ರತಿಯೊಂದು ರಾಶಿಯ ವ್ಯಾಪ್ತ

ಮುಂದೆ (ಪೂರ್ವಕ್ಕೆ ಹೋಗಿದೆ ಎಂಬುದನ್ನು ಎರಡನೆಯ ಮತ್ತು ಮೂರನೆಯ

ಮತ್ತು ಕೋನ ಮಿನಿಟುಗಳಲ್ಲಿ ಸೂಚಿಸುತ್ತವೆ: ೧ = ೬೦ = ೩೬೦೦11

- ಆದ್ದರಿಂದ ರವಿ ಈಗ ೯ನೆಯ ( ಧನು ರಾಶಿಯಲ್ಲಿ ೨೫೧' ಮುಂದೆ ( ಪೂರ್

ಚಂದ್ರ ೨೩ ೧೫ ; ಬುಧ ೧೦° ೧೬1 ; ಶುಕ್ರ ೪೦೪೩ '

ಕುಜ ( ಮಂಗಳ) ಕನ್ಯಾರಾಶಿಯಲ್ಲಿ ೫೦ ೭', ಗುರು ಮಕರ ರಾಶಿಯಲ್ಲಿ ೩೧೪' ಮ

ಮೀನರಾಶಿಯಲ್ಲಿ ೭೦ ೫೮' ಪೂರ್ವಕ್ಕೆ ಸರಿದಿವೆ.

ಇಂಥ ಸೂಕ್ಷ್ಮ ವಿವರಗಳು ನಕ್ಷತ್ರ ವೀಕ್ಷಣೆಗೆ ಅಧಿಕ ಉಪಯುಕ್ತ . ಈಗ ಇನ್ನೊ

ಉದಾಹರಣೆ :

ಶನಿ

ಕೇತು

ರವಿ
೨೨- ೨- ೧೯೯೭

ಶನಿವಾರ

ಬುಧ ೦ ಹುಣ್ಣಿಮೆ
ಚಂದ್ರ
ಗುರು

ಕುಜ

ರಾಹು
೭ ೫.
ನಕ್ಷತ್ರ ವೀಕ್ಷಣೆ

ಗ್ರಹಸ್ಪುಟ

ರವಿ ೧೦/೦೯/೩೮

೪ /೦೫/೩೩
ಚಂದ್ರ

ಕುಜ ೫ /೧೦/ ೨೭ ರಾಹುವಿನ ಗೃಹಸ್ಥಾನಕ್ಕೆ

ಬುಧ ೯ / ೨೫/೫೩ ೬ ಕೂಡಿಸಿದರೆ ಕೇತುವಿನ

ಗುರು ೯ / ೧೩/೨೭ . ನೆಲೆ ದೊರೆಯುತ್ತದೆ :

ಶುಕ್ರ ೯ / ೨೯ / ೪೮ ೧೧/ ೦೬/ ೨೯

ಶನಿ ೧೧/ ೧೧/೫೮

ರಾಹು ೫ / ೦೬ / ೨೯

ಸೂರ್ಯ(ರವಿ) ಕುಂಭರಾಶಿಯಲ್ಲಿದೆ. ಆದ್ದರಿಂದಸೂರ್ಯನ ಜೊತೆಕುಂಭವೂ ಕಂತುತ

ಅದೇ ಹೊತ್ತಿಗೆ ಮೀನ, ಮೇಷ, ವೃಷಭ , ಮಿಥುನ ಮತ್ತು ಕರ್ಕಟಕ ರಾಶಿಗಳು ಮೈದೋರ

ತೊಡಗುತ್ತವೆ. ಸಿಂಹರಾಶಿ ಪೂರ್ವ ದಿಗಂತದಲ್ಲಿ ಮೇಲಕ್ಕೆ ತೆವಳಲು ಹವಣಿಸುತ್ತಿರುವುದು

- ಶನಿಯ ಮನೆ ಮೀನ ರಾಶಿಯಾದ್ದರಿಂದ ಇದನ್ನು ಸೂರ್ಯನ ಹಿಂದೆ (ಪೂರ್ವ) ಪಡ

ತಗ್ಗಿನಲ್ಲಿ ಪೇಲವ ಬಿಳಿ ಚುಕ್ಕಿಯಾಗಿ ಹೆಕ್ಕಬಹುದು. ಚಂದ್ರನ ಮನೆ ಸಿಂಹರಾಶಿ . ಸೂರ್ಯ ಕೆಳಕ್ಕೆ

ಇಳಿದಂತೆ ಚಂದ್ರ ಮತ್ತು ಸಿಂಹ ಮೇಲಕ್ಕೆ ಹತ್ತುತ್ತವೆ. ವೀಕ್ಷಕನನ್ನು ಕುರಿತಂತೆ ಸೂರ

ಚಂದ್ರ ಎದುರುಬದಿರಾಗಿವೆ. ಎಂದೇ ಈ ವಿದ್ಯಮಾನ ಹುಣ್ಣಿಮೆ , ಚಂದ್ರಮೂಡಿಸುಮಾರು

ಗಂಟೆ ಸಲ್ಲುವಾಗ ಕನ್ಯಾರಾಶಿಯೂ ಇದರಲ್ಲಿರುವ ಮಂಗಳ ಗ್ರಹವೂ ಉದಯಿಸುತ್ತವೆ. ಕಂದು

ಪೇಲವ ಚುಕ್ಕಿ ಈ ಗ್ರಹ.

ಬುಧ, ಗುರು ಮತ್ತು ಶುಕ್ರ ಮಕರರಾಶಿಯಲ್ಲಿವೆ. ಖಗೋಳದ ದೈನಂದಿನ ಪೂರ್ವ- ಪಶ್ಚಿಮ

ದಿಶಾವರ್ತನೆಯಲ್ಲಿ ಸೂರ್ಯ ಈ ಗ್ರಹಗಳನ್ನು ಬೆನ್ನಟ್ಟಿ ಹೋಗುತ್ತಿರುವ ದೃಶ್ಯ ಪ್ರಕಟ

ಅಂದರೆ ಇವುಸೂರ್ಯನ ಪಶ್ಚಿಮಕ್ಕಿವೆ. ಆದ್ದರಿಂದ ಸೂರ್ಯ ಬಾನಿನಲ್ಲಿರುವಾಗ ಇವ

ಇರದಾಗ? ನಸುಕು ಹರಿಯುವ ಮುನ್ನ ಪೂರ್ವಾಕಾಶದ ತಗ್ಗಿನಲ್ಲಿ ಮಕರರಾಶಿ ಮೂಡು

ಜೊತೆಯಲ್ಲೇ ಬುಧ, ಗುರು, ಶುಕ್ರರನ್ನೂ "ಹೊತ್ತು ತರುತ್ತದೆ - ಹೌದು, ಇಂಥ ದೃಶ್ಯವನ್ನ

ಪ್ರತ್ಯಕ್ಷ ವೀಕ್ಷಿಸುವಾಗ ಈ ಭಾವನೆ ಸ್ಪುರಿಸಿಯೇ ಸ್ಪುರಿಸುತ್ತದೆ. ಬುಧದರ್ಶನ ಬಲು ಕಷ್ಟ

ಸೂರ್ಯನಿಗೆ ತುಸುವೇ ಹಿಂದೆ (ಪೂರ್ವ) ಅಥವಾ ಕೊಂಚ ಮುಂದೆ ( ಪಶ್ಚಿಮ) ಅದು ಇರುವ

ಸಂಜೆಸೂರ್ಯಕಂತಿದ ಬಳಿಕ ಅಲ್ಲೇ ಮೇಲೆ ಅಥವಾ ಮುಂಜಾನೆ ಹೊತ್ತು ಮೂಡುವ ಮೊ

ಅಲ್ಲೇ ಮೇಲೆ ಇದನ್ನು ಗುರುತಿಸಬಹುದು - ಪ್ರಯಾಸಪೂರ್ವಕ. ಹೀಗೆ ಪತ್ತೆ ಹಚ್ಚಿದಾಗ ಇದೇನ

ಅದ್ಭುತ ರಮ್ಯ ದೃಶ್ಯ ಅಲ್ಲ - ಬಾನಿನ ಕೆಂಪು ತಗಡಿಗೆ ಅಂಟಿಕೊಂಡಿರುವ ಬಿಳಿ ಬಣ್ಣದ ಹುಡಿ.

ಗುರು ಮತ್ತು ಶುಕ್ರ ಹೀಗಲ್ಲ - ಸವೋಜ್ಜಲ ಪ್ರಕಾಶದವು, ಬೆಳಕಿನ ಗುಂಡುಗಳಂತೆ

ಇವೆರಡೂ ಸೂರ್ಯೋದಯದ ಮೊದಲು ಪೂರ್ವಾಕಾಶದಲ್ಲಿದ್ದರೆ ಅಥವಾಸೂರ್ಯಾಸ್ತಮ


೭ ೬
ನಕ್ಷತ್ರ ವೀಕ್ಷಣೆ

ಬಳಿಕ ಪಶ್ಚಿಮಾಕಾಶದಲ್ಲಿ ಪ್ರಕಟವಾದರೆ ಇವನ್ನು ವಿಭೇದೀಕರಿಸಲು ಗ್ರಹಸ್ಪುಟದಲ್ಲಿ ಕ

ಮಾಹಿತಿಗಳನ್ನು ಉಪಯೋಗಿಸುವುದು ಅನುಕೂಲ.

೨೨- ೨- ೧೯೯೭ರಂದು ಗುರುವಿನ ನೆಲೆ ೯ / ೧೩/ ೨೭ ಮತ್ತು ಶುಕ್ರದ ನೆಲೆ ೯೨೯ /೪೮. ಆದ್

ಗುರು ಪಶ್ಚಿಮ -ಪೂರ್ವ ದಿಶೆಯಲ್ಲಿ ೯ ಮನೆಗಳನ್ನು ದಾಟಿ ೧೦ನೆಯ ಮನೆಯಲ್

೧೩° ೨೭' ಪೂರ್ವಾಭಿಮುಖವಾಗಿ ಸರಿದಿದೆ; ಶುಕ್ರ ಇದೇ ರೀತಿ ಮಕರ ರಾಶಿಯಲ್

ಪೂರ್ವಾಭಿಮುಖವಾಗಿ ಸರಿದಿದೆ. ಆದ್ದರಿಂದ ಶುಕ್ರ ಪೂರ್ವದಿಗಂತಕ್ಕೆ ಗುರು

ಅಂದಮೇಲೆ ಪೂರ್ವದಿಶೆಗೆ ಮುಖಮಾಡಿ ನಿಂತಿರುವ ನಮಗೆ ಕೆಳಗಿನ ಕಾಯ ಶುಕ್


ಕಾಯ ಗುರು ಎಂಬುದು ಸ್ಪಷ್ಟ .

ಗ್ರಹಣಗಳು

ಸೂರ್ಯ ನಮಗೆ ಬೆಳಕು, ಶಾಖ ಮುಂತಾದ ವಿಕಿರಣ ಪ್ರಕಾರಗಳನ್ನು ಒ

ಸಮೃದ್ಧವಾಗಿ ಮೊಗೆಯುತ್ತಿರುವ ಗಗನದೀಪ. ಇದರ ಸುತ್ತ ಸರಾಸರಿ ೧೪೮, ೮೦೦,೦

ದೂರದಲ್ಲಿ 'ಉರುಳುಸೇವೆ ಸಲ್ಲಿಸುತ್ತಿರುವ ಕಾಯ ನಮ್ಮ ಭೂಮಿ, ಸೂರ್ಯ

ಲಕ್ಷಕ್ಕಿಂತಲೂ ಹೆಚ್ಚು ಭೂಮಿಗಳನ್ನು ತುಂಬಬಹುದು.

ಇನ್ನು ಚಂದ್ರ . ಇದು ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ. ಎಂದರೆ ಭೂಮ

ಉರುಳುಸೇವೆ ಒಪ್ಪಿಸುತ್ತಿರುವ ಪುಟ್ಟ ಕಾಯ . ಇದಕ್ಕೂ ಬೆಳಕು ಬೀಳುವುದು ಸೂರ

ಭೂಮಿ- ಚಂದ್ರ ಸರಾಸರಿ ಅಂತರ ೩೮೪, ೦೦೦ ಕಿಮೀ . ಭೂಮಿಯಲ್ಲಿ ೫೦

ಗಿಡಿಯಬಹುದು.

ಸೂರ್ಯನ ಸುತ್ತ ಭೂಮಿ ಒಂದು ಪರಿಭ್ರಮಣೆಯನ್ನು ೧ ವರ್ಷದ

ಚಂದ್ರನಾದರೋ ಭೂಮಿಯ ಸುತ್ತ ಒಂದು ಪರಿಭ್ರಮಣೆಯನ್ನು ಸುಮಾರು

ಪೂರೈಸುವುದು.

- ಆಕಾಶದಲ್ಲಿ ಸೌರವ್ಯೂಹದಿಂದ ( ಆದ್ದರಿಂದ ಭೂಮಿಯಿಂದಕೂಡ) ದೂ

ಭೂಮಿ- ಚಂದ್ರ ಅಂತರಸಂಬಂಧಗಳನ್ನು ಚಿಕಿತ್ಸಕವಾಗಿ ಅವಲೋಕಿಸಿದರೆ ತಿಳಿಯ

ಸಂಗತಿಗಳಿವು: ಭೂಮಿ ತನ್ನ ಸುತ್ತ ಆವರ್ತಿಸುತ್ತ ಸೂರ್ಯನನ್ನು ಪರಿಭ್

ಜೊತೆಯಲ್ಲೇ , ಚಂದ್ರ ತನ್ನ ಸುತ್ತ ಆವರ್ತಿಸುತ್ತ ಭೂಮಿಯನ್ನು ಪರಿಭ್ರಮಿಸ

ವಾರ್ಷಿಕ ಕಕ್ಷೆ ರಚಿಸುವ ಸಮತಲ (ಭೂಕಕ್ಷಾ ತಲ) ವಿಷುವದ್ಯ ರಚಿಸುವ ಸಮತಲಕ್ಕೆ (ಭೂಮ

ಭೂಕೇಂದ್ರದ ಮೂಲಕ ಲಂಬವಾಗಿ ರಚಿಸಿದ ಸಮತಲ) ಸುಮಾರು ೨೩° ೨೭' ಮಾಲಿ

ಚಾಂದ್ರಕಕ್ಷಾತಲ ( ಚಂದ್ರನ ಮಾಸಿಕ ಕಕ್ಷೆ ವ್ಯಾಖ್ಯಿಸುವ ಸಮತಲ) ಭೂಕಕ್ಷಾತಲಕ್ಕೆ ಸು

೭' ಮಾಲಿಕೊಂಡಿದೆ. ಇವಿಷ್ಟು ವಾಸ್ತವತೆ. ಆದರೆ ಭೂನಿವಾಸಿಗಳಾಗಿರುವ ನಾವುನೋಡ

ಬೇರೆ : ಅದು ಪ್ರಾತಿಭಾಸಿಕ ಸತ್ಯ .

- ಪ್ರಾತಿಭಾಸಿಕ ಚಿತ್ರ ಕಲ್ಪಿಸಿಕೊಳ್ಳಲು ಮತ್ತೆ ಬೆಟ್ಟದ ಕೊಡಿಯಲ್ಲಿ ನಿಂತ


ತೊಡಗಬೇಕು. ಧ್ರುವನಕ್ಷತ್ರವನ್ನು ವೀಕ್ಷಕನಿಗೆ ಜೋಡಿಸುವ ರೇಖೆಗೆ (ಇದು ಖಗ
ನಕ್ಷತ್ರ ವೀಕ್ಷಣೆ

ವೀಕ್ಷಕನ ಮೂಲಕ ಲಂಬವಾಗಿ ಎಳೆದ ಸಮತಲವನ್ನು ಕಲ್ಪಿಸಿಕೊಳ್ಳಬೇಕು. ಈ ಸಮತ

ಖಗೋಳವನ್ನು ಛೇದಿಸುವ ವೃತ್ತವೇ ವಿಷುವದ್ವ ( ಚಿತ್ರ ೧೧). ಬಳಿಕ ಮೇಷ ಮತ್

ತುಲಾಬಿಂದುಗಳನ್ನು ಗುರುತಿಸಬೇಕು. (ಮೀನ-ಮೇಷ ಅಂತೆಯೇ ಕನ್ಯಾ - ತುಲಾ ರಾ

ವಲಯದಲ್ಲಿ .) ಈ ಬಿಂದುಗಳ ಮೂಲಕ ಹೋಗುವ ಮತ್ತು ವೀಕ್ಷಕ ಕೇಂದ್ರವ

ಮಹಾವೃತ್ತವೊಂದನ್ನು ಕಲ್ಪಿಸಿಕೊಳ್ಳಬೇಕು – ಇಂಥ ಎರಡು ಮಹಾವೃತ್ತಗಳು ಸಾ

ಯಾವ ಮಹಾವೃತ್ತದ ನೇರ ಪಶ್ಚಿಮ - ಪೂರ್ವ ದಿಶೆಯಲ್ಲಿ ಸರಿಯುವಾಗ ( ಮಾರ್ಗಚ

ವಿಷುವದ್ಯವನ್ನು - ಅಂತೆಯೇ ಮುಂದೆ ತುಲಾ ಬಿಂದುವಿನಲ್ಲಿ ಉತ್ತರಗೋಳಾರ್ಧದಿ

ದಕ್ಷಿಣಗೋಳಾರ್ಧಕ್ಕೆ ದಾಟುವವೋ - ಆ ಮಹಾವೃತ್ತಕ್ಕೆ ಕ್ರಾಂತಿ ವೃತ್ತವೆಂದು ಹೆಸರು. ಇದು ನಮ

ಭಾಸವಾಗುವಂತೆ, ನಮ್ಮ ಸುತ್ತ ಸೂರ್ಯನ ವಾರ್ಷಿಕ ಕಕ್ಷೆ , ಚಲನದಿಶೆ ಸದಾ ಪಶ್ಚಿಮ

( ಮಾರ್ಗಚಲನೆ ; ಎಂದೂ ವಕ್ರಚಲನೆ ಇಲ್ಲ .)

- ಚಾಂದ್ರಕಕ್ಷಾತಲ ಕ್ರಾಂತಿವೃತ್ತತಲಕ್ಕೆ ಸುಮಾರು ೫° ೭' ಮಾಲಿಕೊಂಡಿದೆ. ಎಂದೇ ಈ

ಉಭಯವೃತ್ತಗಳೂ , ವೀಕ್ಷಕನನ್ನು ಕುರಿತಂತೆ, ಒಂದು ಜೊತೆ ವ್ಯಾಸೀಯ ವಿರುದ್ದ ಬಿಂದುಗಳ

ಛೇದಿಸುತ್ತವೆ. ( ಇಲ್ಲೆಲ್ಲ ವೀಕ್ಷಕನ ನೆಲೆಯೇ ಕೇಂದ್ರ ಎಂಬುದು ನೆನಪಿನಲ್ಲಿರಬೇಕು.) ಕ್ರಾಂತಿವೃತ್ತ

ಚಾಂದ್ರಕಕ್ಷಾಛೇದನಬಿಂದುಗಳಿಗೆ ರಾಹು ಮತ್ತು ಕೇತು ಎಂದು ಹೆಸರು - ಒಟ್

ಪಾತಬಿಂದುಗಳು, ಚಾಂದ್ರಕಕ್ಷೆ ಇತರ ಮಹಾವೃತ್ತಗಳಂತೆ, ಖಗೋಳವನ್ನು ಸಮದ್ವ

ಈ ಗೋಳಾರ್ಧಗಳ ಪೈಕಿ ಒಂದು ಧ್ರುವನಕ್ಷತ್ರವನ್ನು (ಉತ್ತರ ಧ್ರುವವನ್ನು ) ಒಳಗೊಂಡಿರುತ್ತದ

ಈಗ, ಚಾಂದ್ರಕಕ್ಷೆಯ ನೇರ ಪಶ್ಚಿಮ- ಪೂರ್ವ ದಿಶೆಯಲ್ಲಿ - ಇದು ಚಂದ್ರನ ಮಾಸಿಕ ಚಲನ

ದಿಶೆ, ಮಾರ್ಗಚಲನೆ - ಸಾಗುವಾಗ ಕ್ರಾಂತಿವೃತ್ತವನ್ನು ಧ್ರುವನಕ್ಷತ್ರವಿರದ ಗೋಳಾರ್ಧದಿಂದ

ಧ್ರುವನಕ್ಷತ್ರವಿರುವ ಗೋಳಾರ್ಧಕ್ಕೆ ರಾಹುಬಿಂದುವಿನಲ್ಲಿಯೂ , ವಿಪರ್ಯಯವಾಗಿ,

ಬಿಂದುವಿನಲ್ಲಿಯೂ ಅಡ್ಡಹಾಯುತ್ತೇವೆ.(ಕ್ರಾಂತಿ ವೃತ್ತ -ವಿಷುವತ್ತ ಸಂಬಂಧದಲ್ಲಿ ಮೇಷ

ತುಲಾ ಬಿಂದುಗಳು ಹೇಗೋ ಹಾಗೆ ಚಾಂದ್ರಕಕ್ಷೆ -ಕ್ರಾಂತಿ ವೃತ್ತ ಸಂಬಂಧದಲ್ಲಿ ರಾಹು ಮತ್ತು
ಬಿಂದುಗಳು .)

ಕ್ರಾಂತಿವೃತ್ತಸಂಚಾರಿ ಸೂರ್ಯನಿಗೆ ಭೂಮಿಯ ಸುತ್ತಲಿನ ಪರಿಭ್ರಮಣಾವಧಿ ಒಂದು ವ


( ಇದು ಭೂಮಿಯ ವಾಸ್ತವ ಪರಿಭ್ರಮಣೆಯ ಪ್ರತಿಫಲನವೆಂಬುದು ಸ್ಪಷ್ಟ). ಚಾಂದ್ರಕಕ್ಷಾಸಂಚಾ

ಚಂದ್ರನಿಗೆ ಭೂಮಿಯ ಸುತ್ತಲಿನ ಪರಿಭ್ರಮಣಾವಧಿ ಸುಮಾರು ೨೭.೩ ದಿವಸಗಳು. ಗಗನದೀಪ


ಸೂರ್ಯನ ಕಾರಣವಾಗಿ ಭೂಮಿ, ಚಂದ್ರ ಎರಡೂ ಸೂರ್ಯವಿರುದ್ದ ದಿಶೆಗಳಲ್ಲಿ ತಮ್ಮ

ನೆರಳು ( ಛಾಯೆ ) ಗಳನ್ನು ಕೆಡೆಯುವುದು ಸಹಜ. ಇವುಗಳ ಆಕಾರ ಶಂಕುವಿನಂತೆ ಎಂ

ಛಾಯಾಶಂಕುಗಳು.

ನಿರಂತರ ಗತಿಶೀಲವಾಗಿರುವ ಈ ಛಾಯಾಶಂಕುಗಳು ಸಾಧಾರಣವಾಗಿ ಆಕಾಶದಲ್ಲಿ ಎಲ್ಲೂ

ಮರೆಯಾಗಿರುತ್ತವೆ. ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ ಚಂದ್ರನ ಛಾಯಾಶಂಕು ಭೂಮ

ಮೇಲೆ, ಅಂತೆಯೇ ಭೂಮಿಯ ಛಾಯಾಶಂಕು ಚಂದ್ರನ ಮೇಲೆ ಬೀಳುವುದುಂಟು. ಅಂದರೆ

ಮೊದಲನೆಯ ಸಂದರ್ಭದಲ್ಲಿ ಭೂಮಿಯ ಚಾಂದ್ರಛಾಯಾವೃತ ಪ್ರದೇಶಗಳಲ್ಲಿರುವವರಿ


೭ ೮
ನಕ್ಷತ್ರ ವೀಕ್ಷಣೆ

ಸೂರ್ಯದರ್ಶನ ಭಾಗಶಃ ಅಥವಾ ಪೂರ್ತಿ ಕೈದಾಗಿರುತ್ತದೆ; ಅಂತೆಯೇ ಎರಡ

ಭೂಮಿಯ ಚಂದ್ರಾಭಿಮುಖ ಪ್ರದೇಶಗಳಲ್ಲಿರುವವರಿಗೆ ಚಂದ್ರದರ್ಶನ ಭಾಗಶ

ಕೈದಾಗಿರುತ್ತದೆ. ಮೊದಲನೆಯದು ಸೂರ್ಯಗ್ರಹಣ, ಎರಡನೆಯದು ಚಂದ್ರಗ್ರಹಣ.

ಆ ವಿಶೇಷ ಸಂದರ್ಭಗಳು ಯಾವುವು? ಅಥವಾ ಹೇಗೆ ಏರ್ಪಡುತ್ತವೆ? ಸೂರ


ಭೂಮಿ ಏಕ ರೇಖೆ ಅಥವಾ ಇದರ ಸಮೀಪಸ್ಥವಾಗಿರುವಾಗ ಸೂರ್ಯಗ್ರಹಣವೂ

ಭೂಮಿ- ಚಂದ್ರ ಹೀಗೆ ವಿನ್ಯಾಸಗೊಂಡಾಗ ಚಂದ್ರಗ್ರಹಣವೂ ಸಂಭವಿಸು

ಗ್ರಹಣವೆಂಬುದು ನೆರಳು ಬೆಳಕುಗಳ ಹಿಡಿವಾಟ: ನೇಸರು ದೀವಿಗೆ, ಚಂದ್ರ ಮತ

ಚಾಚುವ ಕಾಯಗಳು , ಭೂಮಿಯಲ್ಲಿರುವ ನಾವುನೋಟಕರು ! ಉಮರ್ ಖಯ್

ಕೋರಿ:

ಮೇಗಡೆ ಕೆಳಗಡೆ ಒಳಗಡೆ ಹೊರಗಡೆ

ನೋಡೋ ! ನಡೆದಿದೆ ಜಂಜಾಟ

ಇದು ಅಲ್ಲೊ ಬರಿದೇ ನೆರಳಾಟ:


ಪೆಟ್ಟಿಗೆಯೊಳಗಡೆ ನೇಸರೆ ದೀವಿಗೆ
ಉಡುಪತಿ ಪಿಡಿದಿಹ ತೆರೆಯನು ತಾರೆಗೆ

ಕಾಣೋಮಾಂತ್ರಿಕರಾಟೋಟ!

ಆ ವಿಶೇಷ ಸಂದರ್ಭಗಳಲ್ಲಿ ಸೂರ್ಯ ಮತ್ತು ಚಂದ್ರ ( ೧) ಒಂದೇ ಪಾ

ಅಥವಾ ಅದರ ತೀರ ಸನಿಹದಲ್ಲಿರುತ್ತವೆ - ಇದು ಸೂರ್ಯಗ್ರಹಣ; ಅಥವಾ ( ೨ )

ಪಾತಬಿಂದುವಿನಲ್ಲಿ ಅಥವಾ ಅದರ ತೀರ ಸನಿಹದಲ್ಲಿರುತ್ತವೆ - ಇದು ಚಂದ್ರಗ

ಸಂದರ್ಭದಲ್ಲಿಯೂ ಗ್ರಹಣ ಘಟಿಸದು. ಪಾತಬಿಂದುಗಳ ( ರಾಹು ಮತ್ತು ಕೇತು)

ಇಲ್ಲಿ - ಇವು ಗ್ರಹಣಕಾರಕ ಗರ್ತಗಳಾಗಿರುವುದರಲ್ಲಿ , ಇವುಗಳಿಗೆ ಭೌತ ಅಸ್ತಿತ್ವ ಇಲ್ಲವ

ಇವು ಆ ಅಸ್ತಿತ್ವವಿದೆ ಎಂಬ ಸಾಮೂಹಿಕ ವಿಭ್ರಮೆಯನ್ನು ನಮ್ಮ ಮನೆಗಳಲ್ಲಿ ಮೂಡಿಸುವ

ಯಾವುದೇ ಹಗಲು ನಿಮ್ಮ ಕಣ್ಣಿಗೂ ಸೂರ್ಯ ಬಿಂಬಕ್ಕೂ ನಡುವೆ ರೂಪಾ

ಯುಕ್ತವಾಗಿ ಹಿಡಿದು ಸಂಪೂರ್ಣ ಸೂರ್ಯಗ್ರಹಣವನ್ನು ( ಬೇಕಾದರೆ ಕಂಕಣ

ಗ್ರಹಣಗಳನ್ನು ಕೂಡ) ನೀವುಸೃಷ್ಟಿಸಬಹುದು; ಹೀಗೆಯೇ ಹುಣ್ಣಿಮೆ ಇರುಳು, ಸಂಪೂರ್ಣ

ಪಾರ್ಶ್ವ ಚಂದ್ರಗ್ರಹಣವನ್ನು ಕೂಡ ಏರ್ಪಡಿಸಬಹುದು. (ಕಂಕಣ ಚಂದ್ರಗ

ಸೃಷ್ಟಿಸಬಲ್ಲಿರಿ, ಆದರೆ ನಿಸರ್ಗದಲ್ಲಿ ಇದು ಸಂಭವಿಸದು.) ಇಂಥ ಒಂದೊಂದು ಪ್ರಯ

ರೂಪಾಯಿಯನ್ನು ಹಿಡಿದ ಸ್ಥಾನಕ್ಕೆ ಹೀಗೆ ಭೌತ ಅಸ್ತಿತ್ವವಿಲ್ಲವೋ ಅದೊಂದು ಕೇವಲ

ಬಿಂದುವೋ ಹಾಗೆ ರಾಹು ಮತ್ತು ಕೇತು. ಹೇಗೂ ಇರಲಿ ಗ್ರಹಣವೊಂದು

ವಿದ್ಯಮಾನವಾದ್ದರಿಂದ ಆದಿಮಾನವನ ದಿನಗಳಲ್ಲಿ ಬೆರಗು ಭಯ ಆತಂಕಗಳಿಗೆ

ಗ್ರಹಣ ಕಾರ್ಯಕರ್ತಗಳನ್ನು - ರಾಹು ಮತ್ತು ಕೇತು ಬಿಂದುಗಳನ್ನು

ನಿವಾಸಗಳೆಂದು ನಂಬುವ ಕುರುಡು ನಂಬಿಕೆಗೆ ಹೇತುವಾಯಿತು. ಅಂದ ಹ


ಪಾತಬಿಂದುವಿನಲ್ಲಿ ಸೂರ್ಯ ಮತ್ತು ಚಂದ್ರ ಸಂಗಮಿಸಿದಂತೆ (ಸೂರ

ಭಾಸವಾಗುವಾಗ ಭೂಮಿಯಿಂದ ಅವುಗಳ ನಿಜದೂರಗಳು ಎಷ್ಟು ಗೊತ್ತೇ ? ಭೂ

೧, ೪೮ , ೮೦೦ , ೦೦೦ ಕಿಮೀ ಭೂಮಿ- ಚಂದ್ರ ೩ , ೮೪, ೦೦೦ ಕಿಮೀ (ಒಂದೇ ದಿಶೆಯಲ
೭೯
ನಕ್ಷತ್ರ ವೀಕ್ಷಣೆ

ಚಂದ್ರಗ್ರಹಣದ ವೇಳೆ: ಭೂಮಿ-ಸೂರ್ಯ ೧, ೪೮, ೮೦೦, ೦೦೦ ಕಿಮೀ ಭೂಮಿ- ಚಂದ್ರ ೩ , ೮೪, ೦೦೦

ಕಿಮೀ ( ಎದುರು ಬದಿರಾಗಿ).

ಅಮಾವಾಸ್ಯೆಯಂದು ಭೂಮಿಯಿಂದ ಕಾಣುವಂತೆ ಚಂದ್ರ ಸೂರ್ಯರು ಒ

ದಿಶೆಯಲ್ಲಿರುತ್ತವೆ- ಚಂದ್ರನ ಬೆಳಗು ಭಾಗ ಸೂರ್ಯಾಭಿಮುಖಿಯಾಗಿದ್ದು

ಯಾಗಿರುತ್ತದೆ. ಎಂದೇ ಚಂದ್ರ ದರ್ಶನವಿಲ್ಲ . ಇದರ ಜೊತೆಗೆ ಚಂದ್ರ , ಸೂರ್ಯರು ಭೂ

ಕುರಿತಂತೆ ಒಂದೇ ರೇಖೆಯ ಮೇಲೆಯೂ ಇದ್ದರೆ ಅಂಥ ವಿಶಿಷ್ಟ ಅಮಾವಾಸ್ಯೆಯಲ್ಲಿ ಸೂರ್

ಸಂಭವಿಸುತ್ತದೆ. ಈ ಕಾರಣದಿಂದಲೇ ಸೂರ್ಯಗ್ರಹಣ ಅಮಾವಾಸ್ಯೆಯಂದು

ಘಟಿಸುವುದಾಗಿದೆ . ಹುಣ್ಣಿಮೆಯಂದು ಭೂಮಿಯಿಂದ ಕಾಣುವಂತೆ ಚಂದ್ರ ಸೂರ

ದಿಶೆಗಳಲ್ಲಿರುತ್ತವೆ- ಚಂದ್ರನ ಬೆಳಗು ಭಾಗಸೂರ್ಯ-ಭೂಮಿ ಉಭಯಾಭಿಮುಖಿಯಾಗ

ಎಂದೇ ಪೂರ್ಣಚಂದ್ರ ಬಿಂಬ ದರ್ಶನ. ಇದರ ಜೊತೆಗೆ ಚಂದ್ರ ಸೂರ್ಯರು ಭೂಮಿ ಕು

ಒಂದೇ ರೇಖೆಯ ಮೇಲೆಯೂ ಇದ್ದರೆ ಅಂಥ ವಿಶಿಷ್ಟ ಹುಣ್ಣಿಮೆಯಲ್ಲಿ ಚಂದ್ರಗ

ಸಂಭವಿಸುತ್ತದೆ. ಈ ಕಾರಣದಿಂದಲೇ ಚಂದ್ರಗ್ರಹಣ ಹುಣ್ಣಿಮೆಯಂದು ಮಾತ್ರ ಘಟಿಸುವುದ

ಸಾರಾಂಶ : ಸೂರ್ಯಚಂದ್ರರು ಪಾತಬಿಂದುಗಳಲ್ಲಿರುವಾಗ ಮಾತ್ರ ಗ್ರಹಣವಾಗ

ಅಮಾವಾಸ್ಯೆ (ಸೂರ್ಯಗ್ರಹಣ) ಅಥವಾ ಹುಣ್ಣಿಮೆಯೂ ( ಚಂದ್ರಗ್ರಹಣ) ಹೌದು

ಪ್ರತಿಯೊಂದು ಅಮಾವಾಸ್ಯೆ ಅಥವಾ ಹುಣ್ಣಿಮೆಯಂದು ಗ್ರಹಣವಾಗಬೇಕಾಗಿಲ್ಲ .

ಆಕಾಶನಾಟಕವಾದ ಗ್ರಹಣವನ್ನು ವೀಕ್ಷಿಸಲೇಬೇಕು. ಸೂರ್ಯಗ್ರಹಣವನ್ನು ಬರಿಗಣ

ಮಾತ್ರ ನೋಡಬಾರದು. ಇಂದಿನ ದಿನಗಳಲ್ಲಿ ಸುಲಭ ಬೆಲೆಗೆ ದೊರೆಯುವ ಸೌರಚಷ್ಮಗಳ ಮೂಲಕ

ನೋಡಬೇಕು. ಯಾವ ಗ್ರಹಣದಿಂದಲೂ ಎಂದೂ ಭೂಮಿಗಾಗಲೀ ಬಿಡಿ ವ್ಯಕ್ತಿಗಾಗಲೀ ಏನೂ

ಅಪಾಯವಿಲ್ಲ . ಕುರುಡು ನಂಬಿಕೆಗಳಿಗೆ ವೃಥಾ ಬಲಿ ಆಗುವುದು ವಿವೇಕವಲ್ಲ .

ಕಾಲ

ಕಾಲ ಎಂದರೇನು ?

ಈ ಪ್ರಶ್ನೆಗೆ ನಿಮ್ಮ ಉತ್ತರ ತೀರ ಸರಳ " ಗಡಿಯಾರ ತೋರಿಸುವುದು ಕಾಲ."

" ಹಾಗಾದರೆ ಪ್ರಪಂಚದ ಎಲ್ಲ ಗಡಿಯಾರಗಳನ್ನೂ ನಿಲ್ಲಿಸಿಬಿಡೋಣ, ಆಗ ಕಾಲ ಏನಾದೀತು?"

"ಸೂರ್ಯಮೂಡುವನಲ್ಲ ?"

ನೀವು ತಿಳಿದೋ ತಿಳಿಯದೆಯೋ ಹೇಳಿದ ಈ ಉತ್ತರ ನಿಜವಾದ ಮಾತು . ಸೂರ

ಸರಿತವನ್ನು ಅಳೆಯುವ ಕೆಲಸವನ್ನೇ ಎಲ್ಲ ಗಡಿಯಾರಗಳೂ ಮಾಡುವುದು . ಬೆಳಗಾಯಿತು ಎಂದ

ನೇಸರು ಮೂಡಿತು ಎಂದರ್ಥ. ಮತ್ತೆ ಅದು ಬಾನಿನಲ್ಲಿ ಮೇಲೆ ಏರಿದಂತೆ ನೀವು ಬೇರೆ ಬೇರ

ಚಟುವಟಿಕೆಗಳಲ್ಲಿ ಒಂದಾದ ಮೇಲೊಂದರಂತೆ ನಿರತರಾಗುವಿರಿ . ಸ್ನಾನ, ಉಪಾಹಾರ , ವೃತ್

ತೆರಳುವುದು, ಊಟಕ್ಕೆ ಮರಳುವುದು ಇತ್ಯಾದಿ. ಕತ್ತಲೆ ಕವಿಯಿತು ಎಂದರೆ ನೇಸರು ಕಂತಿತು ಎಂದ

ಊಟ, ಓದು, ಮಾತು ಮುಗಿಯುವಷ್ಟರಲ್ಲೇ ತೂಕಡಿಕೆ ಆರಂಭ. ಮತ್ತೆ ನಿದ್ರೆ .


es o
ನಕ್ಷತ್ರ ವೀಕ್ಷಣೆ

ಮುಂಜಾನೆ ಮುಂದುವರಿದು ನಡುಹಗಲಾಗಿ ಸಂಜೆ ಕವಿದು ಇರುಳು ತನ್ನ ಕರಿ

ಹೊದೆಸಿ ಕರಗಿ ಹೋಗುವ ತನಕ ಪ್ರತಿ ದಿವಸವೂ ಹೆಚ್ಚು ಕಡಿಮೆ ಹಿಂದಿನ ದಿವಸದ ನಕಲು

ನಿಮಗೆ ತಿಳಿದಿದೆ . ಆದ್ದರಿಂದ ನಾಳೆಯೂ ಇದೇ ಕ್ರಮ ಪುನರಾವರ್ತಿಸುವುದೆಂದು ಊಹಿ

ಇಂದು ನಿನ್ನೆಯ ಭೂತಕ್ಕೆ ನಿರ್ಗಮಿಸುತ್ತದೆ ಮತ್ತು ನಾಳೆ ಇಂದಿನ

ಆಗಮಿಸುತ್ತದೆ. ವರ್ತಮಾನದ ಅಸಿಧಾರೆಯ ಮೂಲಕ ಭವಿಷ್ಯ ನಿರಂತರವಾಗಿ ಭೂತ

ಈ ವ್ಯತ್ಯಯಗಳ ಮಾಲೆಯನ್ನು ರೂಢಿಯಲ್ಲಿ "ಕಾಲ ಹರಿಯುತ್ತಿದೆ, ಕಾಲ ಮತ

ಯಾರನ್ನೂ ಕಾಯುವುದಿಲ್ಲ , ಕಾಲವನ್ನು ಎದುರಿಸಿ ಬಾಳಿದವರಿಲ್ಲ , ಕಾಲಕ್ಕೆ

ಗತಿ" ಎಂದು ಮುಂತಾಗಿ ಹೇಳುತ್ತೇವೆ: ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ .

ಕಾಲ ಎಂದರೆ ವ್ಯತ್ಯಯ

ಇಂದು ನಿನ್ನೆಯಂತೆಯೇ ಇದೆ, ನಿಜ. ಆದರೆ ಪೂರ್ತಿ ಹಾಗಿಲ್ಲ . ನಿನ್ನ ಈ ಹೊತ್ತ


ಕಾಯುತ್ತಿತ್ತು . ಇಂದು ಮೋಡ ಕವಿದಿದೆ. ನಿನ್ನೆ ಈ ವೇಳೆಗೆ ನೀವು ಶಾಲೆಯಲ್ಲ

ಮನೆಯಲ್ಲಿರುವಿರಿ. ನಿನ್ನ ಈ ಹೊತ್ತಿಗೆ ಇದ್ದ ಎಷ್ಟೋ ಮಂದಿ ಇಂದು ಸತ್ತು ಇಲ್ಲವಾ


ಇರದಿದ್ದ ಎಷ್ಟೋ ಶಿಶುಗಳು ಇಂದು ಹುಟ್ಟಿಕರೆದಿವೆ. ನಿಮ್ಮ ವಯಸ್ಸಾದರೂ ನಿನ

ಹೆಚ್ಚು ಆಗಿಲ್ಲವೆ? ಆದ್ದರಿಂದ ಕಾಲ ಎಂದರೆ ವ್ಯತ್ಯಯ ಅಥವಾ ಬದಲಾವಣ

ಇಲ್ಲವಾಗಿದ್ದರೆ ಕಾಲವನ್ನು ಅರಿಯುವುದು ಸಾಧ್ಯವಾಗುತ್ತಿರಲಿಲ್ಲ .

ಈಗ ನಿಮಗೊಂದು ಸಂದೇಹಮೂಡುತ್ತದೆ:ಊರಹೊರಗಿನ ಬೆಟ್ಟ ಮತ್ತು ಬಾ

ಅಂಟಿಕೊಂಡಿರುವ ನಕ್ಷತ್ರ ಚಿತ್ರ ಇವುಗಳಲ್ಲಿ ವ್ಯತ್ಯಯವೇ ಕಾಣಿಸದಲ್ಲ ? ಅಷ್


ತಾತ ಮುತ್ತಾತರ ಕಾಲದಿಂದಲೂ ಅವು ಒಂದೇ ರೀತಿ ಇವೆ ಎಂದು ನಿಮಗೆ ತಿಳಿದಿದೆ. ಹಾ

ಕಾಲದ ಪರಿಣಾಮ ಅವುಗಳ ಮೇಲೆ ಇಲ್ಲವೇ ? ಖಂಡಿತ ಇದೆ. ಆದರೆ ಇದನ್ನು ಗುರ

ಲಕ್ಷಾಂತರ ವರ್ಷಗಳೇ ಬೇಕಾಗುತ್ತವೆ. ಇದು ದೀರ್ಘಕಾಲದ ನಿದರ್ಶನ.

- ಬೆಳಕಿನ ಕಿರಣ ಅತಿವೇಗದಿಂದ ಚಲಿಸುವುದು ನಿಮಗೆ ಗೊತ್ತಿದೆ. ೧ ಸೆಕೆಂಡಿನಲ್ಲಿ ಅದ

ಸುಮಾರು ೩ ಲಕ್ಷ ಕಿಲೋಮೀಟರುಗಳಷ್ಟು ದೂರ ಧಾವಿಸಿರುವುದು. ಇದು ಎಷ್ಟು ದೊ

ಎಂಬುದರ ಅಂದಾಜೇ ನಿಮಗಾಗದು. ೧ ಸೆಕೆಂಡನ್ನು ೧೦ ಲಕ್ಷ ಸಮವಿಭಾಗಿಸಿದೆ ಎ

ಊಹಿಸಿಕೊಳ್ಳಿ. ಈ ಒಂದೊಂದು ಸಮವಿಭಾಗಕ್ಕೂ ಮೈಕ್ರೋಸೆಕೆಂಡ್

ಸೆಕೆಂಡಿನಲ್ಲಿ ೧೦ ಲಕ್ಷ ಮೈಕೊಸೆಕೆಂಡುಗಳಿವೆ ಎಂದಾಯಿತು. ಹಾಗಾದರೆ ಬೆಳಕಿನ ಕಿರಣ

ಸೆಕೆಂಡಿನಲ್ಲಿ ತೆರಳಿದ ದೂರ ಎಷ್ಟು ? ಸುಮಾರು ೩೦೦ ಮೀಟರುಗಳಲ್ಲವೇ ? ಈ ಸಂಖ್ಯೆ

ಅರಿವಿನ ಮಿತಿಯಲ್ಲಿದೆ. ಆದರೆ ಇದನ್ನು ಗುರುತಿಸಲು ನೀವು ಮೈಕೊಸೆಕೆಂಡಿನ ಸೂಕ್ಷ್ಮ

ಇಳಿಯಬೇಕಾಯಿತು.

ದೀರ್ಘಕಾಲ

ಸಪ್ತರ್ಷಿಮಂಡಲ ಎಂಬ ನಕ್ಷತ್ರ ಪುಂಜವನ್ನು ನೀವುನೋಡಿ ಗುರುತಿಸಬಲ್ಲಿರಿ ( ಚಿತ್

ಆಕಾಶದ ಉತ್ತರಾರ್ಧದಲ್ಲಿ ಮೂಡಿ ಕಂತುವ ಏಳು ನಕ್ಷತ್ರಗಳ ಸಮೂಹವಿದ

ಉದಯಿಸುತ್ತಿರುವಾಗ ಪ್ರಶ್ನಾರ್ಥಕ ಚಿಹ್ನೆಯಂತೆಯೂ ಮಧ್ಯಾಕಾ


ನಕ್ಷತ್ರ ವೀಕ್ಷಣೆ

ರತ್ನಹಾರದಂತೆಯೂ ಅಸ್ತಮಿಸುತ್ತಿರುವಾಗ ನೇಗಿಲಿನಂತೆಯೂ ಕಾಣುತ್ತದೆ. ಆದರೆ ಗತ ಯುಗ

ಇದರ ಆಕಾರ ಹೀಗೆಯೇ ಇರಲಿಲ್ಲ . ಭವಿಷ್ಯದಲ್ಲಿಯೂ ಅಷ್ಟೆ , ಹೀಗೆಯೇ ಇರುವುದಿಲ್ಲ . ಇದರ

ಒಂದೊಂದು ಸದಸ್ಯ ನಕ್ಷತ್ರವೂ ಬೇರೆ ಬೇರೆ ದಿಶೆಗಳಲ್ಲಿ ಬೇರೆ ಬೇರೆ ವೇಗಗಳಿಂ

ಧಾವಿಸುತ್ತಿರುವುದರಿಂದ ಈ ಬದಲಾವಣೆ ಗೋಚರಿಸುತ್ತದೆ.

ತಾರೆಗಳ ಬೆಡಗಿನ ನಾಡಿನಿಂದ ಭೂಮಿಯ ಗಟ್ಟಿ ನೆಲಕ್ಕೆ ಇಳಿಯೋಣ. ಇಲ್ಲಿಯ ಪರ್ವತಗಳನ್ನ

' ಶಾಶ್ವತ, ಅಚಲ,ಭೂಧರ' ಮುಂತಾದ ವಿಶೇಷಣಗಳಿಂದ ವರ್ಣಿಸುವುದುಂಟು. ವ್ಯಕ್ತಿಯ ಅನು

ಮಿತಿಯಲ್ಲಿ ಈ ಮಾತು ನಿಜ . ವಸ್ತುಸ್ಥಿತಿ ಮಾತ್ರ ಹೀಗಿಲ್ಲ . ಹಿಮಾಲಯ , ಆಲ್ಸ್ ಮುಂತ

ಮಹಾಪರ್ವತಗಳು ಇಂದಿಗೂ ಬೆಳೆಯುತ್ತಿವೆ! ಬೇರೆ ಎಷ್ಟೋ ಗುಡ್ಡಬೆಟ್ಟಗಳು ತೇದು ಕರಗಿ

ಹೋಗುವುದೂ ಉಂಟು. ಸಾಗರಗಳಾದರೂ ಹಾಗೆಯೇ . ಹಳೆಯವು ಕ್ರಮೇಣ ತೆಟ್ಟೆಯಾಗಿ

ಬಯಲಾಗುತ್ತವೆ. ಇತ್ತ ಕಮರಿ ಕೊರಕಲುಗಳಲ್ಲಿ ನೀರು ತುಂಬಿ ಭೂಕಂಪನಗಳ ಪರಿಣಾಮ

ಅವು ಮತ್ತಷ್ಟು ಬಾಯಿಕಳೆದು ಹೊಸ ಕಡಲುಗಳು ಮೈದಳೆಯುತ್ತವೆ.

ಭೂಮಿಯಲ್ಲಿ ಸತತವಾಗಿ ನಡೆಯುತ್ತಿರುವ ಈ ವಿಧವಾದ ಎಲ್ಲ ಚಟುವಟಿಕೆಗಳಿಗೂ ಒಟ

ಭೂವ್ಯಾಪಾರಗಳೆಂದು ಹೆಸರು. ಗಾಳಿ, ಮಳೆ, ಭೂಕಂಪನ , ಭೂಮಿಯ ನೈಸರ್ಗಿಕ

ಜೀವಿಕ್ರಿಯೆಗಳು ಎಲ್ಲವೂ ಭೂವ್ಯಾಪಾರಗಳಲ್ಲಿ ಸೇರಿವೆ . ಪ್ರತಿಯೊಂದು ಚಟುವಟಿಕೆಯೂ ಅ

ದಿನಚರಿಯನ್ನು ಅದಕ್ಕೆ ವಿಶಿಷ್ಟವಾದ ಭಾಷೆಯಲ್ಲಿ ದಾಖಲಿಸುತ್ತದೆ. ಭೂವ್ಯಾಪಾರಗಳನ್

ಇಂಥ ನೋಂದಣಿಗಳು ಪಳೆಯುಳಿಕೆಗಳಲ್ಲಿ , ವಿವಿಧ ಭೂಸ್ತರಗಳಲ್ಲಿ , ಕಡಲಿನ ಆಳಗಳಲ್ಲಿ ಕಡಿ

ಕೊರಕಲುಗಳ ಸೀಳು ನೋಟಗಳಲ್ಲಿ ನೋಡುವ ಕಣ್ಣಿದ್ದರೆ ಎಲ್ಲೆಲ್ಲಿಯೂ - ವಿಪುಳ

ದೊರೆಯುತ್ತವೆ. ಇವನ್ನೆಲ್ಲ ಕೂಲಂಕಷವಾಗಿ ಅಭ್ಯಸಿಸಿರುವ ವಿಜ್ಞಾನಿಗಳು ಭೂಮಿ

ಅಭಿವರ್ದಿಸಿ ಬಂದಿರುವ ಅವಧಿಯನ್ನು ಹಲವಾರು ಸ್ಪಷ್ಟ ಯುಗಗಳಾಗಿ ವಿಭಾಗಿಸಿರುವ

ಲಕ್ಷ ಕೋಟಿ ವರ್ಷಗಳ ಮಾನಕಗಳಲ್ಲಿ ಉಂಟು. ಕೆಲವು ಉದಾಹರಣೆಗಳನ್ನು ನೋಡಿ:

* ಭೂಮಿಯ ಪ್ರಾಯ ಸುಮಾರು ೫೦೦ ಕೋಟಿ ವರ್ಷಗಳು.

* ಆದಿ ಜೀವಿಗಳು ಮೈದಳೆದದ್ದು ೧೪೫ ಕೋಟಿವರ್ಷಗಳಷ್ಟು ಪ್ರಾಚೀನದಲ್ಲಿ

ಕೀಟಗಳಿಗೆ ೨೦ಕೋಟಿವರ್ಷಗಳ ಇತಿಹಾಸವಿದೆ. ಹಿಮಾಲಯದ ವಯಸ್ಸು ೪ಕೋಟಿ


ವರ್ಷಗಳು. ಮೊದಲಮಾನವ ಅವತರಿಸಿದ್ದು ೧೦ ಲಕ್ಷ ವರ್ಷಗಳ ಹಿಂದೆ .

* ನಾಗರಿಕ ಮಾನವನ ಇತಿಹಾಸದ ವ್ಯಾಪ್ತಿ ಕೇವಲ ೭೦೦೦ ವರ್ಷಗಳು.

ಸೂಕ್ಷ್ಮಕಾಲ

- ನಮ್ಮ ಅನುಭವದಲ್ಲಿ ಕಾಲದ ಬಲು ಚಿಕ್ಕ ಘಟಕವೆಂದರೆ ಸೆಕೆಂಡ್ . ಆದರೆ ಆಧುನ

ವಿಜ್ಞಾನದ ಬಲು ನಾಜೂಕು ಮತ್ತು ಅತಿ ಸಂಕೀರ್ಣ ವೀಕ್ಷಣೆ ಹಾಗೂ ಅಧ್ಯಯನಗಳ ದೃಷ್ಟಿ

- ಇದು ಸಾಕಷ್ಟು ದೊಡ್ಡ ಘಟಕವೆಂದರೆ ನಿಮಗೆ ಆಶ್ಚರ್ಯವಾದೀತು. ಈ ಸೆಕೆಂಡನ್ನ

ಸೂಕ್ಷ್ಮ ವಿಭಾಗಗಳಾಗಿ ಒಡೆದು ಅವುಗಳಿಗೆ ಬೇರೆ ಬೇರೆ ಹೆಸರುಗಳನ್ನು ಕೊಡಲಾಗಿದೆ :


೮ ೨
ನಕ್ಷತ್ರ ವೀಕ್ಷಣೆ

೧ ಸೆಕೆಂಡ್
= ೧, ೦೦೦, ೦೦೦ ಮೈಕ್ರೋಸೆಕೆಂಡುಗಳು

೧ ಮೈಕೊಸೆಕೆಂಡ್ = ೧, ೦೦೦ ನ್ಯಾನೊಸೆಕೆಂಡುಗಳು

೧ ನ್ಯಾನೊಸೆಕೆಂಡ್ = ೧, ೦೦೦ ಪೈಕೊಸೆಕೆಂಡುಗಳು

೧ ಸೆಕೆಂಡ್ = ೧, ೦೦೦, ೦೦೦ , ೦೦೦, ೦೦೦ ( = ೧೦೦ ಲಕ್ಷ ಲಕ್ಷ

ಅಥವಾ ೧ ಶಂಖ ) ಪೈಕೊಸೆಕೆಂಡುಗಳು

ಒಂದು ವರ್ಷದಲ್ಲಿ ೩೧,೫೫೬ ,೯೨೬ ಸೆಕೆಂಡುಗಳು ಇವೆ. ಆದ್ದರಿಂದ ಪೈಕೊಸೆಕೆಂಡ್

ದಾಮಾಶಯ ಸೆಕೆಂಡ್ - ವರ್ಷ ದಾಮಾಶಯದ ೩೦, ೦೦೦ ಪಾಲುಗಳಲ್ಲಿ ಒಂದು ಪಾಲಿ

ಚಿಕ್ಕದು. ಇಂಥ ಸೂಕ್ಷ್ಮಾತಿಸೂಕ್ಷ್ಮ ಕಾಲದ ಪ್ರತ್ಯಕ್ಷ ಉಪಯೋಗ ಏನೆಂಬುದನ್ನ

ಉದಾಹರಣೆಗಳಲ್ಲಿ ವಿವರಿಸಿದೆ :

* ವಿಶ್ವದಲ್ಲಿ ಅತ್ಯಂತ ವೇಗವಾಗಿ ಚಲಿಸುವ ಬೆಳಕು ಒಂದು ನ್ಯಾನೊಸೆಕೆಂಡಿ


ಸೆಂಮೀ ದೂರ ಹಾಯ್ದಿರುತ್ತದೆ.

* ಪರಮಾಣು ಪ್ರಪಂಚದಲ್ಲಿ ವ್ಯವಹರಿಸುವ ವಿಜ್ಞಾನಿ, ಹಲವಾರು ಅತಿಸ

ಒಡನಾಡಿ ಆಗಿರಬೇಕಾಗುವುದು . ಆದರೆ ಈ ಕಣಗಳನ್ನು ಆತ ಪ್ರತ್ಯಕ್ಷವಾಗಿ ಕಾ

ಅನುಭವಿಸಲೂ ಆರ. ಅವು ಅಷ್ಟು ಕಿರಿಯವು. ಅವುಗಳ ಅಸ್ತಿತ್ವ ಅಷ್ಟು ಅಲ್ಪಕಾ

ಇರವು, ರಚನೆ ಮತ್ತು ಗುಣಲಕ್ಷಣಗಳನ್ನು ಪತ್ತೆ ಹಚ್ಚಲು ವಿಜ್ಞಾನಿ ಕೆಲವ

ಪ್ರಯೋಗಗಳನ್ನು ರೂಪಿಸುತ್ತಾನೆ. ಉದಾಹರಣೆಗೆ ಬುದ್ದುದ ಕೋಷ್ಠ ಎಂಬ ಹೆಸರಿನ

ಸಲಕರಣೆಯೊಂದಿದೆ. ಇದು ಸೂಕ್ಷ್ಮಕಣಗಳ ವಿಹಾರರಂಗ. ಇದರೊಳಗೆ ಅವು ಎಡ

ಅತಿವೇಗದಿಂದ ಅನಂತಾಲ್ಪ ಕಾಲ ಧಾವಿಸಿ ಮಾಯವಾದಾಗ ಅವುಗಳ ಜಾಡುಗಳನ್

ಚಿತ್ರೀಕರಿಸಲಾಗುವುದು . ಈ ಚಿತ್ರಗಳ ಅಧ್ಯಯನದಿಂದ, ನುರಿತ ಪತ್ತೇದಾರಿಯ ರೀತಿಯಲ್ಲಿ ,

ವಿಜ್ಞಾನಿ ಈ ಕಣಗಳ ಬಗ್ಗೆ ಮಾಹಿತಿ ಸಂಗ್ರಹಿಸುವನು. ಬುದ್ದುವಕೋಷ್ಠದ ಒಳಗಿನ ಚ

ಅಳತೆಯಲ್ಲಿ ಬಳಕೆ ಆಗುವುದು ಪೈಕೊ - ಮತ್ತು ನ್ಯಾನೊ - ಸೆಕೆಂಡುಗಳು. ಇಂಥ ಪ್ರಯ

ಸಫಲವಾದದ್ದರಿಂದಲೇ ಪರಮಾಣುಶಕ್ತಿ ಪಡೆಯುವ ತಂತ್ರ ಮಾನವನಿಗೆ ಸಿದ್ಧಿಸಿರ

* ಭೂರಿ ಗಾತ್ರದಲ್ಲಿ ವಿದ್ಯುದುತ್ಪಾದನೆ ಮಾಡಿ ವಿಸ್ತಾರ ಪ್ರದೇಶದಲ್ಲಿ ಅದರ ಹರಿವ

ಏಕದರದಲ್ಲಿ ಸದಾ ಕಾದಿರಸಬೇಕಾದದ್ದು ಇಂದಿನ ಪ್ರಮುಖಾವಶ್ಯಕತೆ. ಇದ

ವಿದ್ಯುಜ್ಜನಕಗಳನ್ನು ಏಕಕಾಲದಲ್ಲಿ ಚಾಲೂಗೊಳಿಸಲಾಗುವುದು. ಇವೆಲ್ಲವ

ಮಾಡುತ್ತಿರಬೇಕು. ಸರಳವಾಗಿ ಹೇಳುವುದಾದರೆ ಪ್ರತಿಯೊಂದು ವಿದ್ಯುಜ್ಜನಕದ ಆರ

ಇನ್ನೊಂದರ ಚಕ್ರದೊಡನೆ ಒಂದೇ ವೇಗದಲ್ಲಿ ಆವರ್ತಿಸುತ್ತಿರಬೇಕು- ಸ್ವರಮೇಳನ. ಹೀಗ

ಇವುಗಳ ಬಿಡಿಕೊಡುಗೆ ವಿದ್ಯುತ್ತನ್ನು ಒಗ್ಗೂಡಿಸಿ ಮೊತ್ತವಾಗಿ ಕೈಗಾರಿಕಾ ಕೇಂದ್ರಗಳಿಗೆ

ಮಾಡುವುದು ಸಾಧ್ಯವಾಗದು . ವಿವಿಧ ಕಾರ್ಯನಿರತ ವಿದ್ಯುಜ್ಜನಕಗಳಲ್ಲಿ ಸ್ವರಮೇ

ಅವುಗಳ ಆವರ್ತನ ದರಗಳನ್ನು ಮೈಕೊಸಕೆಂಡಿನ ಸೂಕ್ಷ್ಮ ಪ್ರಪಂಚದಲ್ಲಿ ಅಳೆದ


es a
ನಕ್ಷತ್ರ ವೀಕ್ಷಣೆ

ಮಾಡುವರು. ಇಲ್ಲವಾದರೆ ಯಂತ್ರಗಳಿಗೆ ಹಾನಿ ತಟ್ಟಿತು, ವಿದ್ಯುತ್ತಿನ ಸರಬರಾಜಿನಲ್ಲಿ ಅಸ್ತವ್ಯಸ್

ತಲೆದೋರೀತು, ನಾಗರಿಕತೆಯ ಚಕ್ರಗಳು ನಿಂತುಹೋದಾವು.

* ಆಕಾಶಯಾನ ಇಂದು ವಾಸ್ತವ ಘಟನೆ. ಆ ಪ್ರಯಾಣದ ವೇಗ ಎಷ್ಟು ಗೊತ್ತೇ

ಭೂತಳದಿಂದ ಸೆಕೆಂಡಿಗೆ ೧೧. ೨ ಕಿಮೀಗಿಂತ ಕಡಿಮೆ ಅಲ್ಲದ ವೇಗದಲ್ಲಿ ರಾಕೆಟುಗಳು ಜಿಗಿ

ಮಾತ್ರ ಆಕಾಶಯಾನದಲ್ಲಿ ಭಾಗಿಗಳಾಗಬಲ್ಲವು. ವೇಗವೊಂದೇ ಸಾಲದು, ನೆಗೆತದ ದಿ

ಅಷ್ಟೇ ಮುಖ್ಯ . ಇಲ್ಲವಾದರೆ ಚಂದ್ರನಲ್ಲಿಗೆಹೋಗಬೇಕಾದ ಆಕಾಶನೌಕೆ ದಿಕ್ಕುತಪ್ಪಿ ಬಟ

ಬಾನಿನ ಮಹಾ ಬಿತ್ತರದಲ್ಲಿ ಹೇಳ ಹೆಸರಿಲ್ಲದೇ ನಾಶವಾಗಿ ಹೋದೀತು. ಕುವ ಮುಹೂರ್ತ

ನಿರ್ದಿಷ್ಟ ಜಿಗಿವೇಗದಿಂದ ನಿಷ್ಕೃಷ್ಟ ದಿಶೆಯೆಡೆಗೆ ರಾಕೆಟಿನ ಉಡಾವಣೆ ಸಾಧ್ಯವಾ

ಪೈಕೊ , ನ್ಯಾನೊ - ಮತ್ತು ಮೈಕ್ರೋ - ಸೆಕೆಂಡುಗಳ ನಿಗೂಢಲೋಕದೊಳಗಿನ ವ್ಯವಹಾರ ಸಫಲವಾಗಿರ

ವುದರಿಂದ.

ಘಟನೆಗಳ ನಡುವಿನ ಅವಧಿಯೇ ಕಾಲ

ನಿತ್ಯ ಜೀವನದಲ್ಲಿ ನೀವು ಕಾಲವನ್ನು , ಅಂದರೆ ಕಾಲ ಸಂದುಹೋದದ್ದನ್ನು , ಹ

ತಿಳಿಯುವಿರಿ? ಅದನ್ನು ಅಳೆಯಲು ಅನುಸರಿಸುವ ವಿಧಾನವೇನು ?

- ನಿರಂತರವಾಗಿ ಒಂದೇ ದರದಲ್ಲಿ ಮತ್ತು ಒಂದೇ ದಿಶೆಯಲ್ಲಿ ಹರಿಯುತ್ತಿರ

ಪ್ರವಾಹದಲ್ಲಿ ಕೆಲವು ಗುರುತುಗಳನ್ನು ಮಾಡುವಿರಿ : ನೀವು ಹುಟ್ಟಿದ ಘಟನೆ, ಪ್ರಾಥಮ

ತರಗತಿಯನ್ನು ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದ ಸಾಹಸ, ಬಾನನ್ನು ಸೀಳು

ವಿಮಾನ ಬೆರಗುಗೊಳಿಸಿದ ಮೊದಲ ನೋಟಇಂಥ ಗುರುತುಗಳು . ಒಂದು ಘಟನೆಯಿಂದ ತೊಡಗಿ

ಮುಂದಿನ ಘಟನೆ ತನಕ ಇಂತಿಷ್ಟು ದಿವಸಗಳು ಸಂದು ಹೋದುವು ಎಂದು ಹೇಳುವಿರಿ . ಉದಾಹರಣೆ

ನಮ್ಮ ಸ್ವಾತಂತ್ರ್ಯೋತ್ಸವ ಮುಗಿದು ( ಆಗಸ್ಟ್ ೧೫) ೧೬೩ ದಿವಸಗಳು ಉರುಳಿದ ಬಳಿ

ಗಣರಾಜ್ಯ ದಿನ ( ಜನವರಿ ೨೬ ) ಬರುತ್ತದೆ, ನಿಮ್ಮ ಎರಡು ಒತ್ತೊತ್ತಿನ ಹುಟ್ಟುಹಬ್ಬಗಳ ನಡ

ಸಲ್ಲುವ ಕಾಲ ೧ ವರ್ಷ. ಆದ್ದರಿಂದ ಘಟನೆಗಳ ನಡುವಿನ ಅವಧಿಯೇ ಕಾಲ ಎನ್ನುವವು.

ಕಾಲದ ಈ ರಹಸ್ಯವನ್ನು ಮಾನವ ಯಾವಾಗ ಗ್ರಹಿಸಿದ ಎನ್ನುವುದಕ್ಕೆ ಪುರಾವೆಗಳಿಲ್ಲ . ಹಗಲು

ಇರುಳುಗಳ ನಿರಂತರ ಯಾತ್ರೆ , ಚಂದ್ರನ ವಿಸ್ಮಯಕರ ವರ್ತನೆ, ಋತುಗಳ ಕ್ರಮಬದ್ಧ ಪುನರಾ

ಗ್ರಹಣ ಧೂಮಕೇತುಗಳ ಆಕಸ್ಮಿಕ ಆಗಮನ ಮೊದಲಾದವನ್ನು ಬೆರಗುಗಣ್ಣುಗಳಿಂದನೋಡುತ್ತಿದ್

ಮಾನವನಿಗೆ ಅದೇ ವೇಳೆ ತನ್ನಲ್ಲಿಯೂ ತನ್ನ ಆಸುಪಾಸಿನಲ್ಲಿಯೂ ಅಸಂಖ್ಯಾತ ಬದಲ

ಕಂಡು ಬಂದುವು: ಶಿಶುಗಳ ಜನನ, ಬೆಳೆವಣಿಗೆ, ವೃದ್ಧಾಪ್ಯ , ಮರಣ; ಬೀಜದಿಂದ ಗಿಡ ಮೊಳ

ಬಲಿತು ಮರವಾಗಿ ಕ್ರಮೇಣ ಒಣಗಿ ಸಾಯುವನೋಟ; ವಯಸ್ಕ ಪ್ರಾಣಿಗಳಿಂದ ಮರಿಗಳು ಹುಟ್

ಬೆಳೆದು ದೊಡ್ಡವಾಗಿ ಸಾಯುವ ದೃಶ್ಯ . ಇಲ್ಲೆಲ್ಲ ಅವನು ಕಂಡದ್ದು ಒಂದೇ ದಿಶೆಯ ಬದಲ

ಬೇಸಗೆ → ಮಳೆ – ಚಳಿ > ವಸಂತ

ಶಿಶು → ಕುಮಾರ → ತರುಣ - ವಯಸ್ಕ – ಮುದುಕ + ಸಾವು


೮ ೪
ನಕ್ಷತ್ರ ವೀಕ್ಷಣೆ

ಇದರ ವಿಪರ್ಯಯ ಕ್ರಮವನ್ನು ಅವನು ಕಾಣಲಿಲ್ಲ . ಉದಾಹರಣೆಗೆ

ಸಾವು → ಮುದುಕ + ವಯಸ್ಕ – ತರುಣ → ಕುಮಾರ → ಶಿಶು

ಈ ದಿಶೆಯ ಬದಲಾವಣೆ ಎಲ್ಲಿಯೂ ಗೋಚರಿಸಲಿಲ್ಲ . ಸೂರ್ಯ , ಚಂದ್ರ , ಗ್ರಹ, ನಕ್ಷತ


ಚಲನೆಯಾದರೂ ಒಂದೇ ದಿಶೆಯಲ್ಲಿತ್ತು . ಬೆಟ್ಟದಿಂದ ಜಗುಳಿದ ನೀರಿನ ಸೆಲೆ

ಹೊಳೆ ನದಿಯಾಗಿ ಕಡಲು ಸೇರುತ್ತಿತ್ತೇ ವಿನಾ ಹಿಮ್ಮೊಗವಾಗಿ, ಅಂದರೆ ಕಡಲಿನಿಂದ ಬೆಟ್ಟಕ್ಕೆ,

ಏರುತ್ತಿರಲಿಲ್ಲ .

ಸಹಜವಾಗಿ ಮಾನವ ಇವೆಲ್ಲ ಘಟನೆಗಳಿಗೂ ನಂಟು ಹಾಕಿ ಅವನ್ನು ಬಿಗಿಯಾದ ಗಂಟ

ಕಟ್ಟಿದ. ಆಗಲೇ ಅವನ ಕಾಲ ಪ್ರಜ್ಞೆಯೂ ಮೂಡಿತು ಎನ್ನಬಹುದು. ಆದರೆ ಇದಕ್ಕೊಂದು ವ್ಯವಸ್ಥಿತ

ರೂಪ ನೀಡಿ ಕಾಲಮಾಪನೆಯನ್ನು ಕ್ರಮಬದ್ದಗೊಳಿಸುವ ವೇಳೆಗೆ ಸಾಕಷ್ಟು ಯುಗ

ಹೋಗಿದ್ದುವು.

ಗಡಿಯಾರ

ಘಟನೆಗಳ ನಡುವಿನ ಅವಧಿಯನ್ನು , ಅಂದರೆ ಕಾಲವನ್ನು , ಗುರುತಿಸಲು ( ಅಳೆಯ

ಸಾಧನ ಗಡಿಯಾರ.

ಏಕತಾನದಿಂದ ಮಿಡಿಯುತ್ತಿರುವ, ಹರಿಯುತ್ತಿರುವ, ಕರಗುತ್ತಿರುವ ಅಥವಾ

ಯಾವುದೇ ವಸ್ತು , ಇಲ್ಲವೇ ಉಪಕರಣ ತಾತ್ವಿಕವಾಗಿ ಗಡಿಯಾರವೇ . ಜಲಗಡಿಯ

ಮರಳು ಗಡಿಯಾರ ಅತಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದ್ದ ಗಡಿಯಾರಗಳು. ಎತ್ತರ

ತಗ್ಗಿಗೆ ಹರಿಯುವ ನೀರು ಅಥವಾ ಮರಳು ಇವುಗಳಲ್ಲಿ ಕಾಲದ ಹರಿವನ್ನು ಸೂಚಿಸುತ್ತ

ನೆರಳು ಗಡಿಯಾರ ಸೂರ್ಯನ ಉನ್ನತಿಯನ್ನು ಅಳೆದು ತನ್ಮೂಲಕ ಹಗಲಿನ ವೇಳೆ ಅ

ನೆರವಾಗುವ ಉಪಕರಣ .

ನಿಸರ್ಗ ಅಸಂಖ್ಯಾತ ಗಡಿಯಾರಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿದೆ. ಯ

ಮತ್ತು ತೋರಿಯಮ್ ಎಂಬ ಧಾತುಗಳ ಹೆಸರು ಕೇಳಿರುವಿರಿ: ಪರಮಾಣುಶಕ್ತಿಯನ್

ಉದ್ಯಮದಲ್ಲಿ ಇವು ಪ್ರಮುಖ ಘಟಕಗಳು . ಇವನ್ನು ವಿಕಿರಣಪಟುಧಾತುಗಳೆ

ಯುರೇನಿಯಮ್ಮಿನಗ್ರಾಮ್ ತನ್ನಷ್ಟಕ್ಕೆ ತಾನೇ ಕ್ಷಯಿಸಿ ( ಅಂದರೆ ವಿಕಿರಣವನ್ನು ಹೊರ

ವಾರ್ಷಿಕವಾಗಿ ೧ + ೭ ,೬೦೦, ೦೦೦, ೦೦೦ ಗ್ರಾಮ್ ಸೀಸ ಕೊಡುತ್ತದೆ. ತೋರಿಯಮ್ಮ

೧ + ೧೨೮, ೦೦೦, ೦೦೦ , ೦೦೦ ಗ್ರಾಮ್ . ಆಯಾ ಧಾತುವಿನ ಕ್ಷಯದರ ಸ್ಥಿರವಾಗಿರುತ್ತದೆ. ಬಿಸಿ

ಮಳ, ಹವಾವೈಪರೀತ್ಯಗಳು ಮುಂತಾದ ನೈಸರ್ಗಿಕ ಬಲಗಳಿಂದ ಇದು ಪ್ರಭಾವಿತವಾ

ಗೊತ್ತಿರುವ ತೂಕದ ಒಂದಿಷ್ಟು ಯುರೇನಿಯಮ್ ಅಥವಾತೋರಿಯಮ್ ಕ್ಷಯಿಸಿ ಅದರ

ಅರ್ಧದಷ್ಟಕ್ಕೆ ಇಳಿಯಲು ಎಷ್ಟು ಕಾಲ ಬೇಕು ಎಂಬುದನ್ನು ಗಣಿಸಬಹುದು. ಯು

ಇದು ೪ ,೫೦೦, ೦೦೦ ,೦೦೦ ವರ್ಷಗಳು, ತೋರಿಯಮ್ಮಿಗೆ ೧೬ , ೫೦೦ ,೦೦೦ ,೦೦೦ ವ

ಭೂವಿಜ್ಞಾನಿಗಳು ಪ್ರಾಚೀನ ಶಿಲೆಗಳನ್ನು ಸಂಗ್ರಹಿಸಿ ಅವುಗಳಲ್ಲಿ ಹುದುಗಿರುವ ವಿಕಿರಣಪಟು


೮ ೫
ನಕ್ಷತ್ರ ವೀಕ್ಷಣೆ

ತೂಕವನ್ನೂ ಧಾತು ಕ್ಷಯದ ಪರಿಣಾಮವಾಗಿ ಸಂಚಯನಗೊಂಡಿರುವ ಸೀಸದ ತೂಕವನ್ನೂ

ಕರಾರುವಾಕ್ಕಾಗಿ ಅಳೆದು ಆ ಶಿಲೆಗಳ ವಯಸ್ಸು ನಿರ್ಧರಿಸುತ್ತಾರೆ.

ಇಗರ್ಜಿಯಲ್ಲಿ ತೊನೆದಾಡುತ್ತಿದ್ದ ತೂಗುದೀಪದ ಆಂದೋಳನಕ್ಕೂ ತನ್ನ ನಾಡಿ

ಸಂಬಂಧ ಗುರುತಿಸಿದ ಗೆಲಿಲಿಯೋ ಗೆಲಿಲೀ ( ೧೫೬೪- ೧೬೪೨) ಮುಂದೆ ಲೋಲಕದ ಸೂತ್ರ

ರೂಪಿಸಿದ.

ಹಿರಿದೂರವನ್ನು ಒಮ್ಮೆಗೆ ಅರಿಯಲಾರವು. ಉದಾಹರಣೆಗೆ ಬೆಂಗಳೂರಿನಿಂದ ದೆಹಲಿಗೆ

ದೂರವೆಷ್ಟು ? ಧ್ರುವನಕ್ಷತ್ರಕ್ಕೆ ದೂರವೆಷ್ಟು ? ಇದಕ್ಕಾಗಿ ದೂರವನ್ನು ನಮ್ಮ ಅನುಕೂಲತೆ

ಹಲವಾರು ಸಮಭಾಗಗಳಾಗಿ ವಿಭಾಗಿಸಿ ಇವನ್ನು ಎಣಿಸುತ್ತೇವೆ. ಸೆಂಟಿಮೀಟರ್ , ಕಿಲೋಮೀ

ಜ್ಯೋತಿರ್ವಷ್ರ ಇಂಥ ಸಮಭಾಗಗಳ ಹೆಸರುಗಳು . ಇವು ದೂರಮಾನಕಗಳು.

ದೂರಮಾಪನೆಗೆ ಸೆಂಟಿಮೀಟರ್ , ಮೀಟರ್ ಇತ್ಯಾದಿ ಹೇಗೊ ಹಾಗೆ ಕಾಲಮಾಪನೆಗೆ ಸೆಕೆಂಡ್ ,

ಮಿನಿಟ್ , ದಿವಸ, ವರ್ಷ , ಶತಮಾನ ಮುಂತಾದವು. ಇವು ಕಾಲಮಾನಕಗಳು . ಇವುಗಳ ನೆರವಿ

ಹಗಲು, ಇರುಳು, ಋತು ಬದಲಾವಣೆ, ಗ್ರಹಣ ಮೊದಲಾದ ನೈಸರ್ಗಿಕ ಘಟನೆಗಳ ನಡ

ಅವಧಿಯನ್ನು ಸಮವಿಭಾಗಿಸಿ ಕಾಲವನ್ನು ಅಳೆಯುತ್ತೇವೆ (ಕಳೆಯುತ್ತೇವೆಕೂಡ.)

- ನಿಮ್ಮ ಮನೆಯಲ್ಲಿರುವ ಗೋಡೆಗಡಿಯಾರದ ಕ್ರಿಯೆಯನ್ನು ಕೊಂಚ ಹೊತ್ತು ಗಮನ

ನೋಡಿ, ಅದರ ಲೋಲಕ ಒಂದೇ ಗತಿಯಲ್ಲಿ ಹಂದಾಡುತ್ತ ಕಾಲದ ಹರಿವನ್ನು ಬಿಡಿಬಿಡಿ

ಎಣಿಸುತ್ತದೆ. ಟಿಕ್ - ಟಕ್ - ಟಿಕ್ - ಟಕ್ ಇಷ್ಟು ನಡೆ ಮುಗಿಯುವಾಗ ಮೂರು ಸೆಕೆಂಡ

ಸಂದುವೆಂದು ತಿಳಿಯುವಿರಿ. ಪ್ರತಿಯೊಂದು ಸೆಕೆಂಡಿನ ಅವಧಿಯೂ , ಅಂದರೆ ಟಿಕ್ - ಟಕ್ ಅಂತರ

ಒಂದೇ ಆಗಿರುವಂತೆ ಗಡಿಯಾರದ ಸೂಕ್ಷ್ಮ ಸಂರಚನೆಯನ್ನು ಅಳವಡಿಸಿದೆ. ೬೦ ಸೆಕೆಂಡ್ ಕಳೆದ

ಅಂದರೆ ಲೋಲಕ ೬೦ ಕಂಪನಗಳನ್ನು ಮುಗಿಸಿದಾಗ, ಒಂದು ಮಿನಿಟ್ ಗತಿಸಿತೆಂದು ಭಾವಿಸುವ

ಕ್ರಮೇಣ ಜಾರುವ ದೊಡ್ಡ ಮುಳ್ಳು ಮಿನಿಟಿನ ಸರಿತವನ್ನು ಕಾಣಿಸುತ್ತದೆ. ಹೀಗೆಯೇ ಸಾಗ

ಮಿನಿಟುಗಳು ಕ್ರಮಿಸಿದಾಗ ಚಿಕ್ಕಮುಳ್ಳು ಮೊದಲಿದ್ದ ಸ್ಥಾನದಿಂದ ಒಂದು ಅಂಕೆ

ಹೋಗಿರುವುದು. ೧ ಗಂಟೆ ಮುಗಿದು ಹೋಯಿತೆಂದು ಇದರ ಅರ್ಥ.

- ಚಿಕ್ಕ ಮುಳ್ಳು ೨ ಪೂರ್ತಿ ಪ್ರದಕ್ಷಿಣೆಗಳನ್ನು ಮುಗಿಸಿದಾಗ ೨೪ ಗಂಟೆಗಳು ಗತಿಸಿದು

ಅಲ್ಲಿಗೆ ೧ ದಿವಸ ಸಂದಿತೆಂದೂ ತಿಳಿಯುವಿರಿ . ಇಷ್ಟೇ ಅಲ್ಲ . ಈ ಅವಧಿಯಲ್ಲಿ ಹಗಲು ಇರುಳುಗ


೧ ಆವರ್ತನೆ ಮುಗಿದಿರುವುದೂ ಅನುಭವಕ್ಕೆ ಬರುತ್ತದೆ.

ತಾರೀಕುಪಟ್ಟಿ

ದಿವಸದ ಘಟಕಗಳನ್ನು , ಅಂದರೆ ಗಂಟೆ ಮಿನಿಟು ಸೆಕೆಂಡುಗಳನ್ನು , ಗಡಿಯಾರ

ನಿರ್ಧರಿಸಿ ಅರುಹಬಲ್ಲದು. ಆದರೆ ದಿವಸದ ಗುಣಿತಗಳನ್ನು , ಅಂದರೆ ಅನೇಕ ದಿವಸಗಳ ಗುಂಪನ್ನು

ಪರಿಶೀಲಿಸಬೇಕಾದಾಗ ಗಡಿಯಾರಸೋಲುತ್ತದೆ. ಆಧುನಿಕ ಎಲೆಕ್ಟ್ರಾನಿಕ್ ಗಡಿಯಾರಗಳು ತಾ


ದಿವಸದ ಹೆಸರು, ತಿಂಗಳು ಮತ್ತು ಇಸವಿ ವಿವರಗಳನ್ನು ಕೂಡಪ್ರದರ್ಶಿಸುತ್ತವೆ. ಇದು ಹಾ
೮ ೬
ನಕ್ಷತ್ರ ವೀಕ್ಷಣೆ

ಸಾಂಪ್ರದಾಯಿಕ ಗಡಿಯಾರ ಕುರಿತಂತೆ ಈ ವಿವರ ಪಡೆಯಲು ನಾವು ಬೇರೆ ತೆರನಾದ ಏರ

ಶರಣುಹೋಗಬೇಕು. ತಾರೀಕು ಪಟ್ಟಿ ಅಥವಾ ದಿನಾಂಕಸೂಚಿ ಇಂಥ ಒಂದು ಏರ್ಪಾ

- ನಿಮ್ಮ ಮನೆಯಲ್ಲಿ ಗೋಡೆಗೆ ತಗಲುಹಾಕಿರುವ ತಾರೀಕುಪಟ್ಟಿ ಇದೆಯಷ್ಟೆ . ಅದರಲ್ಲಿ ಏ

ವಿವರಗಳಿವೆ? ಇಸವಿ ಸಂಖ್ಯೆ ಮತ್ತು ತಿಂಗಳ ಹೆಸರು ಮೇಲುಗಡೆ ಸಾಲಾಗಿ ಮುದ್ರಿತವಾ

ಸಾಲಿನ ಅಡಿಯಲ್ಲಿ ನಿರ್ದಿಷ್ಟ ಕ್ರಮಾನುಸಾರ ಹೊಂದಿಸಿರುವ ದಿವಸ- ತಾರೀಕುಕೋ


ಒಂದೊಂದು ತಿಂಗಳಿಗೆ ಒಂದೊಂದು ಹಾಳೆ, ಹನ್ನೆರಡು ಹಾಳೆಗಳನ್ನು ತಿರುವಿಹ

೧೨ ತಿಂಗಳುಗಳು ಉರುಳಿದಾಗ, ೧ ವರ್ಷ ಮುಗಿಯುವುದು , ಮತ್ತೆ ಹೊಸ ತಾರೀಕು

ಉಪಯೋಗಿಸಬೇಕು.

೧ ವರ್ಷದಲ್ಲಿರುವ ದಿವಸಗಳ ಸಂಖ್ಯೆಯನ್ನು ಎಣಿಸಿ ನೋಡಿ. ಪ್ರತಿ ನಾಲ್ಕನೆಯ ವರ್ಷದ

೩೬೬ ದಿವಸಗಳೂ ಉಳಿದ ಮೂರು ವರ್ಷಗಳಲ್ಲಿ ತಲಾ ೩೬೫ ದಿವಸಗಳೂ ಇ

ತಿಳಿಯುತ್ತದೆ. ಉದಾಹರಣೆಗೆ ೨೦೦೦ನೆಯ ಇಸವಿಯಲ್ಲಿ ಎಷ್ಟು ದಿವಸಗಳಿದ್ದುವು? ೩

೨೦೦೧, ೨೦೦೨, ೨೦೦೩ರಲ್ಲಿ ತಲಾ ೩೬೫ ದಿವಸಗಳು. ೨೦೦೪ರಲ್ಲಿ ಮತ್ತೆ ೩೬೬ . .

- ದಿವಸದ ಸರಿತವನ್ನು ಹಗಲು ಇರುಳುಗಳ ನೈಸರ್ಗಿಕ ಉರುಳಾಟದೊಂದಿಗೆ ಸುಲ

ಹೊಂದಿಸಬಲ್ಲಿರಿ. ಹಾಗಾದರೆ ವರ್ಷದ ಹರಿವನ್ನು ಇಂಥ ಯಾವುದಾದರೊಂದು ನೈಸ

ವಿದ್ಯಮಾನದೊಡನೆ ಸಂಬಂಧಿಸಬಹುದೇ ? ಹೌದು. ಋತುಗಳ ಕ್ರಮಬದ್ಧ ಪುನರಾವ

ವರ್ಷ ಮುಗಿದು ಹೊಸ ವರ್ಷ ಬಂದದ್ದನ್ನು ತಿಳಿಯಪಡಿಸುತ್ತದೆ. ಆದರೆ ಇದನ್ನು

ಅನುಭವದಿಂದ ಮಾತ್ರ ಅರಿಯಬಲ್ಲಿರಿ.

ದಿವಸ, ವರ್ಷ

ಭೂಮಿಗೆ ಒಂದೇ ವೇಳೆ ಎರಡು ಬಗೆಯ ಚಲನೆಗಳಿವೆ ಎಂದು ನಿಮಗೆ ಗೊ

ಬುಗುರಿಯಂತೆ ತನ್ನ ಸುತ್ತ ಸುತ್ತುವ ಚಲನೆ. ಇದಕ್ಕೆ ಆವರ್ತನೆ ಎಂದು ಹೆಸರು . ದೇವ

ಸುತ್ತ ಭಕ್ತಪ್ರದಕ್ಷಿಣೆ ಮಾಡುವಂತೆ ಸೂರ್ಯನ ಸುತ್ತ ಸಂಚರಿಸುವ ಚಲನೆ. ಇ

ಎಂದು ಹೆಸರು.

ಆವರ್ತನೆಯ ಪರಿಣಾಮವಾಗಿ ದಿವಸವೂ ( ಹಗಲು ಇರುಳುಗಳ ಒಟ್ಟ

ಪರಿಭ್ರಮಣೆಯ ಪರಿಣಾಮವಾಗಿ ವರ್ಷವೂ ( ಋತುಗಳ ಒಟ್ಟು ಅವಧಿ) ತಲೆದೋರ

ಹೀಗೆ ದಿವಸ ಮತ್ತು ವರ್ಷ ಎಂಬ ಕಾಲಸೂಚಿಗಳು ನಮಗೆ ನೈಸರ್ಗಿಕವ

ಇವನ್ನು ಒದಗಿಸುವ ಗಡಿಯಾರ ಸಾಕ್ಷಾತ್ ಭೂಮಿಯೇ .

ಭೂಮಿ ಸೂರ್ಯನ ಸುತ್ತ ಒಂದು ಪರಿಭ್ರಮಣೆ ಪೂರ್ತಿಗೊಳಿಸುವಷ್ಟರಲ್ಲಿ

ಅರುವತೈದಕ್ಕಿಂತ ಕೊಂಚ ಹೆಚ್ಚು ಆವರ್ತನೆಗಳನ್ನು ತನ್ನ ಸುತ್ತ ಕೂಡ ಮುಗಿಸಿರು


ವರ್ಷದಲ್ಲಿ ೩೬೫ ಪೂರ್ಣ ದಿವಸಗಳಿವೆಯೆಂದು ಹೇಳುತ್ತೇವೆ. ಕರಾರುವಾಕ್ಕಾಗ

೩೬೫. ೨೪೨೨ ದಿವಸಗಳು .


- ೮ ೭
ನಕ್ಷತ್ರ ವೀಕ್ಷಣೆ

ದಿವಸ- ವರ್ಷಸಂಬಂಧ ಬಲುಮಟ್ಟಿಗೆ ಬದಲಾಗುವುದಿಲ್ಲ . ೧ ಶತಮಾನದಲ್ಲಿ

ದೀರ್ಘತೆ ಸರಿಸುಮಾರು ೩೦ ಸೆಕೆಂಡ್‌ಗಳಷ್ಟು ಏರುವುದನ್ನು ಗಮನಿಸಲಾಗಿದೆ. ಇ

ಮೊತ್ತ ನಿಜ . ಆದರೂ ಈ ಕಾರಣಗಳಿಂದ ಭೂಮಿಗೆ ಆದರ್ಶ ಗಡಿಯಾರ ಎಂಬ ಗೌರವ ಮಾತ್ರ

ತಪ್ಪಿಹೋಗಿದೆ.

ಬಾನಗಡಿಯಾರ ಚಂದ್ರ

ನಮಗೆ ತೀರ ಸುಲಭವಾಗಿ ಕಾಣುವ ಆಕಾಶಗಡಿಯಾರವೆಂದರೆ ಚಂದ್ರ , ಹುಣ್ಣಿ

ಹುಣ್ಣಿಮೆ ಅಥವಾ ಅಮಾವಾಸ್ಯೆಯಿಂದ ಅಮಾವಾಸ್ಯೆ ತನಕದ ಅವಧಿಯನ್ನು ಚಂದ್ರನ

ಗುರುತಿಸಬಹುದು. ಸುಮಾರು ೩೦ ದಿವಸಗಳ ಈ ಅವಧಿಗೆ ತಿಂಗಳು ( ಚಂದ್ರ ) ಎಂದೇ ಹೆಸರು

ಅಮಾವಾಸ್ಯೆಯಿಂದ ಮುಂದಿನ ಹುಣ್ಣಿಮೆ ತನಕದ ಸುಮಾರು ೧೫ ದಿವಸಗಳ ಅವಧ

ಶುಕ್ಲಪಕ್ಷವೆಂದೂ ಅಲ್ಲಿಂದ ಮುಂದಿನ ಅಮಾವಾಸ್ಯೆ ತನಕದ ಅಷ್ಟೇ ಅವಧಿಯನ್ನು ಕೃಷ್

ಹೇಳುವೆವು. ಹೀಗೆ ಒಂದು ತಿಂಗಳಲ್ಲಿ ಎರಡು ಪಕ್ಷಗಳುಂಟು. ಒಂದು ಪಕ್ಷದಲ್ಲಿ ಸರಿಸುಮ

ಎರಡು ವಾರಗಳೂ ಒಂದು ವಾರದಲ್ಲಿ ೭ ದಿವಸಗಳೂ ಇವೆ .

ದಿವಸ- ವಾರ- ಪಕ್ಷ - ತಿಂಗಳು ಎಂಬ ಈ ಸುಲಭ ಸಂಬಂಧವೇ ಮಾನವನ ತಿಳಿವಳಿಕೆಗೆ ಮೊದಲು

ಬಂದದ್ದು . ಹನ್ನೆರಡು ತಿಂಗಳುಗಳು ಉರುಳಿದಾಗ ವರ್ಷ ಮುಗಿಯುತ್ತಿತ್ತು . ಅಂದ

ಮತ್ತೆ ಹಿಂದಿನಂತೆ ಮರುಕೊಳಿಸುತ್ತಿದ್ದುವು. ಎಂದೇ ಒಂದು ವರ್ಷಕ್ಕೆ ೧೨ ತಿಂಗಳು ಎಂಬ ಭಾವ

ಮೂಡಿತು.

. ವಾಸ್ತವವಾಗಿ ತಿಂಗಳಿನ ಅವಧಿ ೨೯ . ೫ ದಿವಸಗಳು . ಇದಕ್ಕೆ ಚಾಂದ್ರಮಾಸವೆಂದು ಹೆಸರ

ಪ್ರತ್ಯಕ್ಷ ವೀಕ್ಷಣೆಯಿಂದ ಇದನ್ನು ಅರಿಯಬಹುದು. ಇಂದು ರಾತ್ರಿ ಹುಣ್ಣಿಮೆ ಆಗಿ

೬ ಹುಣ್ಣಿಮೆಗಳು ಮುಗಿಯುವಾಗ ಎಷ್ಟು ದಿವಸಗಳು ಸಂದಿರುವುವು ಎಂಬುದನ್ನು ಎ

೧೭೭ ಎಂದು ತಿಳಿಯುವುದು. ಹೀಗಾಗಿ ೧೨ ಚಾಂದ್ರಮಾಸಗಳು ಉರುಳುವಾಗ ೩೫೪ ದಿವಸಗಳು

ಮಾತ್ರ ಗತಿಸಿರುತ್ತವೆ. ಆದರೆ ಒಂದು ವರ್ಷ (೩೬೫. ೨೪೨೨ ದಿವಸಗಳು) ಪೂರ್ಣವಾಗಲು

ಇನ್ನೂ ಒಂದಷ್ಟು ದೂರಸೂರ್ಯನ ಸುತ್ತ ಗಮಿಸಬೇಕಾಗುತ್ತದೆ. ಕೇವಲ ೧ ವರ್ಷದಲ್ಲಿ

ದಿವಸಗಳಷ್ಟು ಕೊರತೆ ಸಂಭವಿಸಿದರೆ ಐದಾರು ವರ್ಷಗಳಲ್ಲಿ ಇದು ಎಷ್ಟು ದೊಡ್ಡ ಮ

- ಚಂದ್ರನ ಪ್ರಕಾರ ವರ್ಷವನ್ನು ಅಳೆಯುತ್ತ ಹೋದರೆ - ಇದು ಚಾಂದ್ರ ವರ್ಷ - ಋತ

ಹಿಂದೆ ಜಾರುತ್ತವೆ. ಉದಾಹರಣೆಗೆ ಈ ಚಾಂದ್ರವರ್ಷಾರಂಭ ವಸಂತ ಋತುವಿನಿಂದ ಆ

ಭಾವಿಸೋಣ. ಮುಂದಿನ ಚಾಂದ್ರವರ್ಷಾರಂಭ ೩೫೪ ದಿವಸಗಳ ಅನಂತರ ಆಗುವುದರಿಂದ

ಇನ್ನೂ ಚಳಿಗಾಲ ಮುಗಿದಿರುವುದಿಲ್ಲ . ಇದೇ ಧಾಟಿಯಲ್ಲಿ ಐದಾರು ವರ್ಷ ಸಾಗುವಾ

ಚಾಂದ್ರವರ್ಷ ಚಳಿಗಾಲದಿಂದ ತೊಡಗುತ್ತದೆ. ಹೀಗೆ ಋತು- ವರ್ಷ ಸಂಬಂಧ ತಾಳ ತಪ್ಪುವುದರ

ನಾಗರಿಕ ಜೀವನ ತುಂಬ ಇಕ್ಕಟ್ಟಿನಲ್ಲಿ ಸಿಕ್ಕಿಕೊಳ್ಳುವುದು.


es es
ನಕ್ಷತ್ರ ವೀಕ್ಷಣೆ

ಇಂಥ ಕಗ್ಗಂಟುಗಳನ್ನು ಮಾನವ ಈಗ್ಗೆ ಸುಮಾರು ೪೦೦೦ ವರ್ಷಗಳ ಹಿಂದೆ

ಸಾವಿರಾರು ವರ್ಷ ಪರ್ಯಂತ ಚಾಂದ್ರವರ್ಷದ ತೊಂದರೆಗಳಿಂದ ಬವಣೆಪಟ್ಟ

ಬಂದಾಗ ತೀರ' ಸಹಜವಾಗಿ ಅದನ್ನು ಕಳಚಿ ಹಾಕಿ ಸೌರವರ್ಷವನ್ನು ಅಂಗೀಕರಿಸಿ

ಬಾನ ಗಡಿಯಾರ ಸೂರ್ಯ

ಚಂದ್ರನಷ್ಟು ಸುಲಭವಲ್ಲದಿದ್ದರೂ ಎಷ್ಟೋ ಹೆಚ್ಚು ಸ್ಪಷ್ಟವಾಗಿ ಮತ್ತ

ಗೋಚರಿಸುವ ಆಕಾಶಕಾಯ ಸೂರ್ಯ. ಸೂರ್ಯೋದಯದಿಂದ ಅಸ್ತಮಾನದ

( ಹಗಲು), ಮತ್ತೆ ಮುಂದಿನ ಉದಯದ ತನಕ ರಾತ್ರಿ ( ಇರುಳು). ದಿವಸದ ಈ ಎರಡು ವಿಭ

ನಿಮಗೆ ಚೆನ್ನಾಗಿ ತಿಳಿದಿವೆ. ಸೂರ್ಯ ವರ್ತುಲೀಯವಾಗಿ ಆಂದೋಳಿಸುತ್ತಿರುವ ಲ

ಭಾವಿಸೋಣ. ಆಗ ಅದರ ಒಂದು ಕಂಪನದ ವೇಳೆ ಹಗಲೂ ( ಹಾರಿಜದಿಂದ ಮೇಲಕ್ಕೆ

ಅವಧಿ) ಇನ್ನೊಂದು ಕಂಪನದ ವೇಳೆ ಇರುಳೂ ( ಹಾರಿಜದಿಂದ ಕೆಳಕ್ಕೆ ಇರುವ ಅವಧಿ)

ಗಡಿಯಾರದ ಲೋಲಕ ಏಕತಾನದಿಂದ ಕಂಪಿಸುವುದೆಂದು ಅರಿತಿರುವ ನೀವ

ಲೋಲಕದಲ್ಲಿಯೂ ಇದೇ ಗುಣವನ್ನು ನಿರೀಕ್ಷಿಸವುದು ಸಹಜ . ಅಲ್ಲಿಗೆ ವರ್

ಇರುಳು ಒಂದೇ ಅವಧಿಯವಾಗಿರಬೇಕು ಎಂದಾಯಿತು. ಇದು ನಿಜವೇ ?

- ಕರ್ನಾಟಕ ನಿವಾಸಿಯಾದ ನಿಮಗೆ ಫಕ್ಕನೆ ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್

ಜೂನ್ ತಿಂಗಳಿನಲ್ಲಿ ಹಗಲಿನ ಅವಧಿ ಮತ್ತು ಹೊಡೆತ ಇರುಳಿನವುಗಳದ್ದಕ್ಕಿಂತ

ಡಿಸೆಂಬರ್ ತಿಂಗಳಿನಲ್ಲಿ ಪರಿಸ್ಥಿತಿ ತಿರುಗುಮುರುಗು ಎಂದೂ ಅನುಭವದಿಂದ ಅರಿತಿರುವಿರ

ರಾಜಧಾನಿಯಾದ ನವದೆಹಲಿ ಮತ್ತು ಭಾರತದ ಹಿರಿನಗರವಾದ ಚೆನ್ನೈ ಈ ಸ್ಥ

ಸೂರ್ಯೊದಯಾಸ್ತಮಾನಗಳ ಕೆಲವು ವಿವರಗಳನ್ನು ಕೆಳಗಿನ ಪಟ್ಟಿಯಲ್ಲಿ ಕ

ನವದೆಹಲಿ ಚೆನ್ನೈ

ತಾರೀಕು ಉದಯ ಅಸ್ತಮಾನ ಉದಯ ಅಸ್ತಮಾನ |

ಗಂ . ಮಿ ಗಂ . ಮಿ . ಗಂ . ಮಿ ಗಂ . ಮಿ

ಜನವರಿ ೧ ೧ ೧೪ ೧೭ ೩೫೬ ೩೧ ೧೭ ೫೩

ಏಪ್ರಿಲ್೧೬ ೧೨ ೧೮ ೩೯೬ ೦೬ ೧೮ ೨೧

೧೮ ೩೯
ಜುಲೈ೧ ೫ ೨೭ ೧೯ ೨೩ ೫ ೪೬

ಅಕ್ಟೋಬರ್ ೧೬ ೧೪ ೧೮ ೦೭ ೫ ೫೯ ೧೭ ೫೯

ಉತ್ತರ ಅಕ್ಷಾಂಶಗಳಿಗೆಹೋದಂತೆ ಹಗಲು ಇರುಳುಗಳ ನಡುವಿನ ವ್ಯತ್ಯಾಸ ತ

ಉತ್ತರ ಅಕ್ಷಾಂಶ ೬೬°ಗಳಿಗಿಂತ ಹೆಚ್ಚು ಇರುವ ಪ್ರದೇಶಗಳಲ್ಲಿ ಉತ್ತರಾ

ದಿವಸಗಳಂದು ಸೂರ್ಯ ಕಂತುವುದೇ ಇಲ್ಲ ; ಆಗ ಅವರಿಗೆ ಕೊನೆ ಇರದ ಹಗಲು - ದಿವಾ ನಿರ
೮ ೯
ನಕ್ಷತ್ರ ವೀಕ್ಷಣೆ

ದಕ್ಷಿಣಾಯನದ ಕೆಲವು ದಿವಸಗಳಂದು ಸೂರ್ಯಮೂಡುವುದೇ ಇಲ್ಲ . ಆಗ ಅವರಿಗೆ ಕೊ

ಇರದ ಇರುಳು - ನಿಶಾನಿಮೀಷಂ!

ಭೂಮಿಯ ದಕ್ಷಿಣ ಅಕ್ಷಾಂಶಗಳಿಗೆಹೋದರೆ ಅಲ್ಲಿಯೂ ಇದೇ ತೆರನಾದ ವಿದ್ಯಮಾನಗಳನ್

ಕಾಣಬಹುದು.

- ಹೀಗೆ ಯಾವುದೇ ಸ್ಥಳದಲ್ಲಿ ವರ್ಷವಿಡೀ ಅಥವಾ ಯಾವುದೇ ದಿವಸದಲ್ಲಿ

ಒಂದೇ ರೀತಿ ಆಂದೋಳಿಸದಸೂರ್ಯ ಖಂಡಿತ ಆದರ್ಶ ಗಡಿಯಾರವಾಗಲು ಅರ್ಹತೆ ಪ

ಆಕಾಶದ ಈ ಲೋಲಕವನ್ನು ಕಾಲಮಾಪನೆಗಾಗಿ ನಂಬಿದ್ದಾದರೆ ಜನರ ದೈನಂದಿನ ವ್ಯವ

ಕಂಪಕ್ಕೆ ಬಿದ್ದ ಕೋಣದಂತಾದಾವು. ಅಂದ ಮಾತ್ರಕ್ಕೆ ಸೂರ್ಯನನ್ನು ತಿರಸ್ಕರಿಸಿ ಕಾಲಮಾಪ

ಮಾಡುವುದು ಪ್ರಾಯೋಗಿಕವಾಗದು. ನಮ್ಮ ಬದುಕು, ಪ್ರಪಂಚದ ನಡವಳಿಕೆ ಎಲ್

ಸೂರ್ಯನನ್ನೇ ಆಧರಿಸಿ ಸಾಗುತ್ತಿವೆ. ಹಗಲು ಇರುಳುಗಳ ಲಯಬದ್ದ ನರ್ತನ ಮತ್ತು ಋತ

ಕ್ರಮಬದ್ಧ ಪುನರಾವರ್ತನಗಳಿಗೆ ಕಾರಣ ಸೂರ್ಯ. ಆದ್ದರಿಂದ ಈ ಗೊಂದಲದಿಂದ ಪಾ

ಮಾನವನಿಗೆ ಇರುವ ಹಾದಿ ಒಂದೇ : ನೈಸರ್ಗಿಕ ಗಡಿಯಾರವಾದ ಸೂರ್ಯನನ್ನು ಆಧ

ಸೂರ್ಯನ ವಕ್ರವರ್ತನೆಗಳಿಂದ ಪ್ರಭಾವಿತವಾಗದ, ಕೃತಕ ಗಡಿಯಾರವನ್ನು ಬಳಕೆಗೆ ತರು

ಸೂರ್ಯನಿಗೆ ಪೋಣಿಸಿದ ಕಾಲಮಾನಕ

ಸೂರ್ಯ ನಮ್ಮ ಇಚ್ಛೆಯ ಅಥವಾ ಆಜ್ಞೆಯ ಅನುಸಾರ ವರ್ತಿಸುವುದಿಲ್ಲ ! ಆದ್ದರ

ನಮಗೆ ಅನುಕೂಲವಾಗುವ ಸುಲಭ ಮಾನಕವೊಂದನ್ನು ಸೂರ್ಯನಿಗೆ ಪೋಣಿಸಿ ಅದರ ನೆರ

ಕಾಲಮಾಪನೆ ಮಾಡಲು ಖಗೋಳವಿಜ್ಞಾನಿಗಳು ಕೆಲವು ಕ್ರಮಗಳನ್ನು ವಿಧಿಸಿರುವರು.

ಈಗನೋಡೋಣ.

- ಮಧ್ಯರಾತ್ರಿ ಸರಿಯಾಗಿ ದಿವಸ ಆರಂಭವಾಗಿ ಮುಂದಿನ ಮಧ್ಯರಾತ್ರಿಗೆ ಸರಿಯಾಗಿ

ಕೊನೆಗೊಳ್ಳಬೇಕು. ಈ ಅವಧಿಯಲ್ಲಿ ಭೂಮಿ ತನ್ನ ಸುತ್ತ

ಆವರ್ತನೆಯನ್ನು ಮುಗಿಸಿರುವುದು.

ದಿವಸವನ್ನು ೨೪ ಸಮಭಾಗಗಳಾಗಿ ವಿಭಾಗಿಸಬೇಕು. ಈ ಒಂದೊಂ

ವಿಭಾಗಕ್ಕೂ ಗಂಟೆ ಎಂದು ಹೆಸರು.

ಗಂಟೆಯನ್ನು ೬೦ ಸಮಭಾಗಗಳಾಗಿ ವಿಭಾಗಿಸಬೇಕು, ಈ ಒಂದ

ವಿಭಾಗಕ್ಕೂ ಮಿನಿಟ್ ಎಂದು ಹೆಸರು .

ಮಿನಿಟ್‌ನ್ನು ೬೦ ಸಮಭಾಗಗಳಾಗಿ ವಿಭಾಗಿಸಬೇಕು. ಈ ಒಂದ

ವಿಭಾಗಕ್ಕೂ ಸೆಕೆಂಡ್ ಎಂದು ಹೆಸರು.

ಋತುಗಳು ಆವರ್ತನೆ ಒಮ್ಮೆ ಮುಗಿಯುವ ಅವಧಿಗೆ ವರ್ಷವೆಂದು ಹೆಸರು.

ಈ ಅವಧಿಯಲ್ಲಿ ಭೂಮಿ ಸೂರ್ಯನನ್ನು ಒಮ್ಮೆ ಪರಿಭ್ರಮಿಸಿರುವು

೧ ವರ್ಷದಲ್ಲಿ ಸಾಧಾರಣವಾಗಿ ೩೬೫ ದಿವಸಗಳಿರುವುವು.


೯೦
ನಕ್ಷತ್ರ ವೀಕ್ಷಣೆ

ವಾಸ್ತವವಾಗಿ ಒಂದು ವರ್ಷದಲ್ಲಿ ೩೬೫. ೨೪೨೨ ದಿವಸಗಳಿರು

ಹೆಚ್ಚುವರಿ ಅಂಶವಾದ ೧ . ೨೪೨೨ ದಿವಸವನ್ನು ಹೊಂದಿಸಲು ಪ್ರತ

ವರ್ಷ ಸಾಧಾರಣವಾಗಿ ೩೬೬ ದಿವಸಗಳನ್ನು ಒಳಗೊಂಡಿರುವುದ

ವರ್ಷವೆಂದು ಹೆಸರು .

ಶತಮಾನೇತರ ಇಸವಿಗಳ ಪೈಕಿ ಸಂಖ್ಯೆ ೪ರಿಂದ ಭಾಗವಾಗುವವೂ ಶತ

ಇಸವಿಗಳ ಪೈಕಿ ಸಂಖ್ಯೆ ೪೦೦ರಿಂದ ಭಾಗವಾಗುವವೂ ಅಧಿಕ

ಉಳಿದವು ಅಲ್ಲ . ಉದಾಹರಣೆಗೆ ೧೯೮೪ , ೧೯೮೮ , ೧೯೯೨, ೧೯೯೬

ಮುಂತಾದವು ಅಧಿಕ ವರ್ಷಗಳು. ಅಂತೆಯೇ ೧೨೦೦, ೧೬೦೦ , ೨೦೦೦

ಮುಂತಾದವುಕೂಡ. ೧೯೮೫ , ೧೯೮೬, ೧೦೮೭ , ೧೯೮೯ ಮುಂತಾದವು ಮ

೧೮೦೦ , ೧೯೦೦, ೨೧೦೦ , ೨೨೦೦ ಮುಂತಾದವು ಅಧಿಕ ವರ್ಷಗಳಲ್ಲ

ಎಲ್ಲ ಗಡಿಯಾರಗಳೂ ಸೂಚಿಸುವುದು ಅಥವಾ ಅಳತೆ ಮಾಡುವುದು ಸೆಕೆಂಡ್ , ಮಿನಿ

ಮತ್ತು ಗಂಟೆಗಳನ್ನು , ಎಲ್ಲ ತಾರೀಕು ಪಟ್ಟಿಗಳೂ ತೋರಿಸುವುದು ದಿವಸ, ವಾರ,

ವರ್ಷಗಳನ್ನು , ಪೂರ್ಣಾಂಕ ದಿವಸಗಳನ್ನು ( ಅಂದರೆ ೩೬೫ ಅಥವಾ ೩೬

ಮಾನಕವನ್ನು , ಅಂದರೆ ತಾರೀಕುಪಟ್ಟಿಯನ್ನು , ಸೂರ್ಯನಿಗೆ ಪೋಣಿಸಿದ್ದರ

ಪ್ರಪಂಚಾದ್ಯಂತ ಸುವ್ಯವಸ್ಥಿತವಾಗಿದೆ.

ಈಗ ನೀವೇ ಒಂದು ಗಣನೆ ಮಾಡಿನೋಡಿ. ತಾರೀಕು ಪಟ್ಟಿಯ ಅನುಸಾರ ೧೯೦೦

೧ರಿಂದ ೧೯೯೯ ಡಿಸೆಂಬರ್ ೩೧ರತನಕ, ಅಂದರೆ ಇಪ್ಪತ್ತನೆಯ ಶತಮಾನದಲ್ಲಿ , ಇರುವ ದಿವಸಗಳ

ಕೂಡಿಸಿ, ಈ ಮೊತ್ತ ೩೬,೫೨೪ ಆಗುತ್ತದೆ. ಇದೇ ಅವಧಿಯಲ್ಲಿ (೧೦೦ ವರ್ಷಗ

ನಿಜ ದಿವಸಗಳು ೩೬೫. ೨೪೨೨x ೧೦೦ = ೩೬೫೨೪ . ೨೨. ಆದ್ದರಿಂದ ತಾರೀಕು ಪಟ್ಟಿಯ ಅನ

ಪ್ರಸಕ್ತ ಶತಮಾನದ ಅವಧಿಯಲ್ಲಿ ೦. ೨೨ ದಿವಸವನ್ನು ಕಳೆದುಕೊಳ್ಳುವೆವು

ಶತಮಾನ ಪರ್ಯಂತ ಮುಂದುವರಿಸೋಣ. ೧- ೧- ೧೯೦೦ರಿಂದ ೩೧- ೧೨- ೨೨೯೯ರ ತನಕದ

ವರ್ಷಗಳಲ್ಲಿ ತಾರೀಕು ಪಟ್ಟಿಯ ಅನುಸಾರ ಆಗುವ ದಿವಸಗಳು ೧೪೬೦೯೭. ಅದೇ ಅವಧಿಯ

ಭೂಮ್ಯಾವರ್ತನೆಯ ಅನುಸಾರ ಸಲ್ಲುವ ದಿವಸಗಳು ೧೪೬೦೯೬ .೮೮. ಆದ್ದರಿಂದ ತಾರೀಕ

ಪ್ರಕಾರ ೪೦೦ ವರ್ಷಗಳ ಅವಧಿಯಲ್ಲಿ ನಮಗೆ ಲಾಭವಾಗುವ ದಿವಸದ ಅಂಶ ಕೇವಲ ೦.

ಭೂಮಿಯ ಇತಿಹಾಸವನ್ನು ಬರೆಯುವಾಗ ಆಕಾಶದ ಅದ್ಭುತಗಳನ್ನು ಅ

ಪ್ರಾಗೈತಿಹಾಸಿಕ ದಾಖಲೆಗಳನ್ನು ಪರಿಶೀಲಿಸುವಾಗ - ಅರ್ಥಾತ್ ದೀರ

ವ್ಯವಹರಿಸುವಾಗ - ಈ ೦ . ೧೨ ದಿವಸಾಂಶವೂ ಬೃಹದಾಕಾರ ತಳೆದು ತೊಂದರೆಕೊಡುತ್ತದ

ಇದನ್ನು ಅಲಕ್ಷಿಸುವುದರಿಂದ ನಿತ್ಯಜೀವನದಲ್ಲಿ ಏನೂ ಬಾಧಕವಿಲ್ಲ .


ನಕ್ಷತ್ರ ವೀಕ್ಷಣೆ

ಮಧ್ಯರಾತ್ರಿಯನ್ನು ನಿರ್ಣಯಿಸುವುದು ಹೇಗೆ?

ದಿವಸದ ಆರಂಭ ಯಾವುದೇ ಮಧ್ಯರಾತ್ರಿ ಮತ್ತು ಅಂತ್ಯ ಮುಂದಿನ ಮಧ್ಯರಾತ್ರಿ ಎಂದಿರ

ಸರಿಯಷ್ಟೆ. ಆ ವೇಳೆ ಗಡಿಯಾರದ ಎರಡು ಮುಳ್ಳುಗಳೂ ಸರಿಯಾಗಿ ಸಂಖ್ಯ ೧೨ರ ಮೇಲ

ನಿಂತಿರಬೇಕು. ಇದೇನೋ ಸರಿ. ಆದರೆ ಆ ಮುಹೂರ್ತವನ್ನು ನಿರ್ಣಯಿಸುವುದು ಹ

ಪ್ರಪಂಚದ ವಿವಿಧ ವೇಧಶಾಲೆಗಳಲ್ಲಿ ಈ ಕಾರ್ಯಕ್ಕಾಗಿಯೇ ನಿಯೋಜಿತವಾಗಿರುವ

ದೂರದರ್ಶಕಗಳಿವೆ. ಇಂಥ ಒಂದು ದೂರದರ್ಶಕ ಆ ವೇಧಶಾಲೆಯ ನೆತ್ತಿ ಬಿಂದುವನ್ನು ಗುರಿಹಿಡಿದು

ದಿಟ್ಟಿಸುತ್ತಿದ್ದು ತನ್ನ ದೃಷ್ಟಿಕ್ಷೇತ್ರಕ್ಕೆ ಬರುವ ಪ್ರತಿಯೊಂದು ನಕ್ಷತ್ರದ ಮಾಹಿತಿಯನ್ನ

ಮಾಡುತ್ತಿರುವುದು. ನಿರ್ದಿಷ್ಟ ನಕ್ಷತ್ರವೊಂದು ಯಾವ ಗಳಿಗೆಯಲ್ಲಿ ದೂರದರ್

ಬಂತೆಂದು ಇದರಿಂದ ತಿಳಿಯುತ್ತದೆ. ಘಟನೆ ಮತ್ತು ಗಡಿಯಾರ ಸಂಬಂಧವಿದು. ಇತ್ತ ಪ್ರತ್ಯೇಕವ

ಆ ನಕ್ಷತ್ರ ಯಾವ ಗಳಿಗೆಯಲ್ಲಿ ದೂರದರ್ಶಕದ ದೃಷ್ಟಿಕ್ಷೇತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂ

ಗಣನೆಗಳಿಂದ ನಿರ್ಧರಿಸಿರುತ್ತಾರೆ. ಘಟನೆ ಮತ್ತು ಗಣನೆ ಸಂಬಂಧವಿದು. ಗಣನೆ ತಿಳಿಸುವ

ಗಡಿಯಾರವೂ ತೋರಿಸಿದರೆ ಗಡಿಯಾರ ಕಾಲ ಸರಿಯಾಗಿದೆ ಎಂದರ್ಥ. ಹೀಗಲ್ಲವಾದರೆ ಗಡಿ

ಕಾಲವನ್ನು ಗಣನೆ ಕಾಲದೊಂದಿಗೆ ಸಮಶ್ಚರಿಸಿ ( ಹೊಂದಿಸಿ) ಎರಡು ಕಾಲಗಳೂ ಒಂದೇ ಆಗಿರುವಂತೆ

ಮಾಡುತ್ತಾರೆ. ಹೀಗೆ ಹೂಡಲಾದ ಗಡಿಯಾರದ ನೆರವಿನಿಂದ ಮಧ್ಯರಾತ್ರಿಯನ್ನ

ನಿರ್ಣಯಿಸಲಾಗುವುದು. ಈ ಗಡಿಯಾರ ಅಲ್ಲಿಯ ಕಾಲಸೂಚಿ. ಇದನ್ನು ಅವಲಂಬಿಸಿ ಅ

ವ್ಯವಹಾರಗಳನ್ನು ನಡೆಸುವುದು ಸಾಧ್ಯ . ಆದರೆ ಪ್ರತಿಯೊಂದು ಊರೂ ಕೇರಿಯೂ ತನ್ನದೇ

ಕಾಲವನ್ನು ಅನುಸರಿಸಬಹುದಾದಂಥ ಅಂಧ ಸ್ವಾಭಿಮಾನಕ್ಕೆ ಇದು ಎಡೆಮಾಡಿಕೊಡಬಲ್ಲದು. ಈ

ಸಿಕ್ಕನ್ನು ಹೇಗೆ ಬಿಡಿಸಲಾಗಿದೆ ಎಂಬುದನ್ನು ಮುಂದೆ ' ಕಾಲವಲಯಗಳು' ಎಂಬ ಶೀರ್ಷಿ

ವಿವರಿಸಿದೆ .

ರೇಖಾಂಶ ವೃತ್ತಗಳು

ನಾವು ಶಾಲೆಯಲ್ಲಿ ನೋಡಿರುವ ಭೂಗೋಳದ ಮಾದರಿ ಇದೆಯಷ್ಟೆ. ಅದೊಂದು ಗ

( ಚಿತ್ರ ೧೦ ). ಅದನ್ನು ಚೌಕಟ್ಟಿಗೆ ಜೋಡಿಸಿರುವ ಸಲಾಕಿ ಆ ಗೋಳದ ಅಚ್ಚು , ಅದರ

ಗೋಳವನ್ನು ತಿರುಗಿಸಬಹುದು. ಗೋಳವನ್ನು ಅಚ್ಚು ಸಂಧಿಸುವ ಬಿಂದುಗಳಿಗೆ ಮೇರುಗಳೆ

ಹೆಸರು. ಇವನ್ನು ಜೋಡಿಸುವ ರೇಖೆ- ಅಂದರೆ ಗೋಳದ ಒಳಗೆ ಹುದುಗಿರುವ ಅಚ್ಚಿನ ಭಾಗ

ಗೋಳದ ಅಕ್ಷ , ಭೂಗೋಳದ ಈ ಮಾದರಿಗೆ ವಿಶಿಷ್ಟವಾದ ಒಂದು ಬಲೆಯನ್ನು ತೊಡಿಸಿರು

ತೋರುವುದಲ್ಲವೇ ? ಇದನ್ನು ಎಚ್ಚರಿಕೆಯಿಂದ ಗಮನಿಸಿ, ಬಲೆಯ ಎಲ್ಲ ಎಳೆಗಳೂ ವೃತ್ತಗಳು .

ಇವುಗಳಲ್ಲಿ ಎರಡು ಬಗೆಯವು ಇವೆ : ಒಂದು ಬಗೆಯವು ಮೇರುಗಳ ಮೂಲಕ ಹಾಯುತ್ತವ

ಇವೆಲ್ಲವುಗಳ ಗಾತ್ರ ಒಂದೇ , ಇನ್ನೊಂದು ಬಗೆಯವು ಮೊದಲನೆಯವಕ್ಕೆ ಲಂಬವಾಗ

ಭಿನ್ನಗಾತ್ರಗಳವು. ಮೊದಲನೆಯವಕ್ಕೆ ರೇಖಾಂಶವೃತ್ತಗಳೆಂದೂ ( ಸರಳವಾಗಿ ರೇಖಾಂಶಗಳೆಂದ

ಎರಡನೆಯವಕ್ಕೆ ಅಕ್ಷಾಂಶವೃತ್ತಗಳೆಂದೂ ( ಸರಳವಾಗಿ ಅಕ್ಷಾಂಶಗಳೆಂದೂ ) ಹೆಸರು.


ನಕ್ಷತ್ರ ವೀಕ್ಷಣೆ

ಭೂಗೋಳದ ಚಪ್ಪಟೆ ಚಿತ್ರವೇ ಭೂಪಟ . ರೇಖಾಂಶ ಹಾಗೂ ಅಕ್ಷಾಂಶ ವೃತ್ತಗಳು

ಸುಮಾರಾಗಿ ಪರಸ್ಪರ ಲಂಬವಾಗಿರುವ ಸಮಾಂತರ ಸರಳ ರೇಖೆಗಳ ಎರಡು ಗ

ಮಾರ್ಪಟ್ಟಿವೆ. ದಕ್ಷಿಣದಿಂದ ಉತ್ತರಕ್ಕೆ ಹರಿಯುವ ಒಂದೊಂದು ರೇಖೆಯೂ ರೇಖ

ಊರ್ಧ್ವರೇಖೆಗಳಿವು. ಪಶ್ಚಿಮದಿಂದ ಪೂರ್ವಕ್ಕೆ ಸಾಗುವ ಒಂದೊಂದು ರೇಖ

ಹಾರಿಜರೇಖೆಗಳಿವು.

- ಲಂಡನ್ನಿನ ಪಕ್ಕದಲ್ಲಿರುವ ಗ್ರನಿಚ್ ನಗರದ ( ಅಲ್ಲಿಯ ವೇಧಶಾಲೆಯ )ಮೂಲಕ ಹಾಯು

ರೇಖಾಂಶ ವೃತಾರ್ಧವನ್ನು ಆಧಾರವಾಗಿ ಆಯ್ದು ಅದನ್ನು ೦° ರೇಖಾ

( ಪ್ರಾಚೀನ ಭಾರತದಲ್ಲಿ ಉಜ್ಜಯಿನಿಯನ್ನು ಇದಕ್ಕಾಗಿ ಆಯ್ದಿದ್ದರು. ಇದನ್ನು ಪೂರ್ತಿ

ದೊರೆಯುವ ವೃತ್ತ , ಭೂಗೋಳವನ್ನು ಎರಡು ಸಮಭಾಗಗಳಾಗಿ ವಿಭಾಗಿಸುತ್ತದೆ

ಪೂರ್ವಕ್ಕೆ ಪೂರ್ವ ಗೋಳಾರ್ಧವೂ ಪಶ್ಚಿಮಕ್ಕೆ ಪಶ್ಚಿಮಗೋಳಾರ್ಧವೂ


ಭಾಗವನ್ನೂ ೧೮೦ ರೇಖಾಂಶ ವೃತಾರ್ಧಗಳಿಂದ ಅಷ್ಟೇ ಸಮಭಾಗಗಳಾಗಿ ವಿಭ

ಗ್ರೆನಿಚ್ಚಿನಿಂದ ಪೂರ್ವಕ್ಕೆ ಸಾಗಿದಂತೆ ೧° ಪೂರ್ವ, ೨° ಪೂರ್ವ, ೩° ಪೂ

ರೇಖಾಂಶಗಳನ್ನು ಅನುಕ್ರಮವಾಗಿ ದಾಟಿ ಕೊನೆಗೆ ೧೮೦° ಪೂರ್ವ ರೇಖಾ

ಗ್ರೆನಿಚ್ಚಿನಿಂದ ಪಶ್ಚಿಮಕ್ಕೆ ತೆರಳಿದಂತೆ ೧° ಪಶ್ಚಿಮ , ೨ ಪಶ್ಚಿಮ , ೩° ಪಶ್ಚಿಮ , ಇತ್ಯಾ

ರೇಖಾಂಶಗಳನ್ನು ಅನುಕ್ರಮವಾಗಿ ಹಾಯ್ತು ಅಂತಿಮವಾಗಿ ೧೮೦° ಪಶ್ಚಿಮ

ಐದುವೆವು. ೧೮೦° ಪೂರ್ವ ರೇಖಾಂಶವೂ ೧೮೦° ಪಶ್ಚಿಮ ರೇಖಾಂಶವೂ ಒಂದೇ

ಐಕ್ಯವಾಗುತ್ತವೆ : ಇದು ಗ್ರೆನಿಚ್ ಮೂಲಕ ಸಾಗುವ ೦° ರೇಖಾಂಶ ವೃತಾರ್ಧದ ವ

ಕಾಲವಲಯಗಳು

ಭೂಮಿ ತನ್ನ ಅಕ್ಷದ ಸುತ್ತ ಪಶ್ಚಿಮದಿಂದ ಪೂರ್ವಕ್ಕೆ ಆವರ್ತಿಸುವುದರ

ಸಹಿತವಾಗಿ ಸಮಸ್ತ ಆಕಾಶಕಾಯಗಳ ವಿರುದ್ಧ ದಿಶೆಯಲ್ಲಿ ಮೂಡಿಕಂತುವಂತ

ಆಕಾಶಗೋಳ ಅದರ ಮೈಗೆ ಅಂಟಿಸಿದಂತೆ ಕಾಣುವ ಸಕಲ ಕಾಯಗಳ ಸಹಿತ ಪೂರ್ವದಿಂದ

ಆವರ್ತಿಸುವಂಥ ಅನುಭವ. ಹೀಗಾಗಿ ಸೂರ್ಯ ಯಾವುದೇ ಸ್ಥಳದಲ್ಲಿ ಅದರ ಪಶ್ಚಿಮ

ಯಾವುದೇ ಸ್ಥಳಕ್ಕಿಂತ ಮೊದಲೇ ಮೂಡಿಕಂತುತ್ತದೆ. ಉದಾಹರಣೆಗೆ ಜನವರಿ ೧ರಂದು ಕಲ

ಸೂರ್ಯೊದಯಾಸ್ತಮಾನಗಳು ಅನುಕ್ರಮವಾಗಿ ಪೂರ್ವಾಹ್ನ ೬ ಗಂ ೧೭ ಮಿ ಮ

೫ ಗಂ ೩ ಮಿಗೆ ಸಂಭವಿಸಿದರೆ ಮುಂಬಯಿಯಲ್ಲಿ ಅವು ಅನುಕ್ರಮವಾಗಿ ಪೂರ್ವಾಹ್ನ ೭

ಮಿ ಮತ್ತು ಅಪರಾಹ್ನ ೬ ಗಂ ೧೨ ಮಿಗೆ ಸಂಭವಿಸುವುವು. ಸೂರ್ಯನನ್ನು ಆ

ತಮ್ಮ ಮಧ್ಯರಾತ್ರಿಗಳನ್ನು ನಿರ್ಣಯಿಸಿ ಆ ಪ್ರಕಾರ ತಮ್ಮ ಗಡಿಯಾರಗಳನ್ನು ಹೂ

ಜೀವನ ಗಲಿಬಿಲಿಯಲ್ಲಿ ಮುಳುಗೀತು, ಸಾರಿಗೆ ಸಂಪರ್ಕಗಳು ಸ್ಥಗಿತವಾದಾವು, ವೈಜ್ಞ

ಅಡಿಪಾಯವೇ ಕುಸಿದೀತು. ಇಂಥ ಪರಿಸ್ಥಿತಿ ತಲೆದೋರದಂತೆ ಮಾಡಲು ಭೂಮಿ

ನಿರ್ದಿಷ್ಟ ಕಾಲವಲಯಗಳಾಗಿ ವಿಭಾಗಿಸಿ ಒಂದೊಂದು ವಲಯದೊಳಗಿರ


ಪ್ರದೇಶಗಳಲ್ಲಿಯೂ ಕಾಲ ಗ್ರೆನಿಚ್ ಕಾಲಕ್ಕಿಂತ ಇಂತಿಷ್ಟು ಗಂಟೆ ಮುಂದೆ ( +) ಅಥವಾ
೯ ೩
ನಕ್ಷತ್ರ ವೀಕ್ಷಣೆ

ಇರಬೇಕೆಂದು ಅಂಗೀಕರಿಸಲಾಗಿದೆ. ಸ್ವತಃ ಗ್ರೆನಿಚ್ ಇರುವ ಪ್ರದೇಶ ೦ ಗಂಟೆ ಕಾಲವಲಯದಲ್

ಒಂದೊಂದು ಕಾಲವಲಯದ ಅಗಲ ೧೫° .

ಒಬ್ಬ ಪ್ರಯಾಣಿಕ ಗ್ರೆನಿಚ್‌ನಿಂದ ಹೊರಟು ಪೂರ್ವಾಭಿಮುಖಿಯಾಗಿ ತೆರಳುವ

ಭಾವಿಸೋಣ. ಹೊರಡುವಾಗ ಅವನ ಗಡಿಯಾರ ನಿಖರವಾಗಿ ಗ್ರೆನಿಚ್ ವೇಳೆಯನ್ನ

ತೋರಿಸುತ್ತಿರುವುದು. ಅವನು + ೧ ಗಂಟೆ ಕಾಲವಲಯವನ್ನು ಪ್ರವೇಶಿಸಿದೊಡನೆ (ಿನಿಚ್‌ನ

ಪೂರ್ವಕ್ಕೆ ೭. ೫೫° ಮತ್ತು ೨೨.೫° ರೇಖಾಂಶಗಳ ನಡುವಿನ ಪಟ್ಟಿ ) ಗಡಿಯಾರವನ್ನು

ಎಷ್ಟು ಗಂಟೆ ತೋರಿಸುತ್ತಿದ್ದರೂ , ೧ ಗಂಟೆ ಮುಂದೂಡಬೇಕು. ಹೀಗೆ ಮಾಡಿದಾಗ ಮಾತ್ರ

ಗಡಿಯಾರ ಆ ಪ್ರದೇಶದ ಗಡಿಯಾರದೊಡನೆ ಸಮಶ್ಚರಿ ಆಗುವುದು . ( ಅಂದರೆ ಎರಡೂ ಒಂದ

ಕಾಲವನ್ನು ಸೂಚಿಸುವುವು.) ಅವನು ಮುಂದೆ ಸಾಗಿ + ೨ ಗಂಟೆ ಕಾಲವಲಯದಲ್ಲಿ ( ೨೨. ೫°

೩೭. ೫° ಪೂರ್ವ ರೇಖಾಂಶಗಳ ನಡುವಿನ ಪಟ್ಟಿ ) ಕಾಲಿಟ್ರೊಡನೆ ಗಡಿಯಾರವನ್ನು ಮತ್ತೆ

ಮುಂದಕ್ಕೆ ತಳ್ಳಬೇಕು. ಈಗ ಅವನ ಗಡಿಯಾರ ಗ್ರೆನಿಚ್ ಕಾಲಕ್ಕಿಂತ ೨ ಗಂಟೆ ಮುಂದಿದ್ದು ಸ್ಥಳೀ

ಗಡಿಯಾರದೊಡನೆ ಸಮಶ್ಚರಿ ಆಗುವುದು . ಹೀಗೆ ಮುಂದೆ ಮುಂದೆ ಹೋಗಿ+ ೧೨ ಗಂಟೆ ಕಾಲವಲಯ

( ೧೭೨. ೫° ಮತ್ತು ೧೮೦° ಪೂರ್ವ ರೇಖಾಂಶಗಳ ನಡುವಿನ ಪಟ್ಟಿ ) ತಲಪಿದಾಗ ಅವನ ಗಡಿಯ

ಗ್ರೆನಿಚ್ ಕಾಲಕ್ಕಿಂತ ೧೨ ಗಂಟೆ ಮುಂದಿರುತ್ತದೆ. ಗ್ರೆನಿಚ್‌ನಿಂದ ಹೊರಟು ಪಶ್ಚಿಮಾಭಿಮುಖಿಯ

ತೆರಳುವಾತ ಪ್ರತಿಯೊಂದು ಕಾಲವಲಯವನ್ನೂ ದಾಟುತ್ತಿದ್ದಂತೆ ತನ್ನ ಗಡಿಯಾರವನ

ಗಂಟೆ ಹಿಂದೆ ಹಾಕುತ್ತಿರಬೇಕು. ಅವನು - ೧೨ ಗಂಟೆ ಕಾಲವಲಯ ( ೧೭೨. ೫° ಮತ್ತು ೧೮೦

ಪಶ್ಚಿಮ ರೇಖಾಂಶಗಳ ನಡುವಿನ ಪಟ್ಟಿ ) ತಲಪಿದಾಗ ಅವನ ಗಡಿಯಾರ ಗ್ರೆನಿಚ್ ಕಾಲಕ್ಕಿಂತ ೧೨

ಗಂಟೆ ಹಿಂದಿರುತ್ತದೆ.

ಭೂಗೋಳದ ಮೇಲೆ ಕಾಲವಲಯಗಳ ಚಿತ್ರವನ್ನು ಕಲ್ಪಿಸಿಕೊಂಡರೆ ಅದರಲ್ಲಿ + ೧೨ ಗಂಟೆ

ಕಾಲವಲಯವೂ - ೧೨ ಗಂಟೆ ಕಾಲವಲಯವೂ ಒತ್ತೊತ್ತಾಗಿವೆಯೆಂಬುದು ವೇದ್ಯವಾಗ

ಇವುಗಳ ಗಡಿಗೆರೆ ೧೮೦° ರೇಖಾಂಶ. - ೧೨ ಗಂಟೆ ಕಾಲವಲಯದಿಂದ + ೧೨ ಗಂಟೆ ಕಾಲವಲಯವನ್ನ

ಪ್ರವೇಶಿಸುವಾತ ಈ ಗಡಿಗೆರೆಯನ್ನು ಪಶ್ಚಿಮದಿಂದ ಪೂರ್ವಕ್ಕೆ ಹಾಯುತ್ತಾನೆ, ಅಂದರ

ಕಡೆಯಿಂದ ಜಪಾನ್ ಕಡೆಗೆ ಉತ್ತರಿಸುತ್ತಾನೆ. ಹೀಗೆ ದಾಟುವ ಮುನ್ನ ಇವನ ತಾರೀಕುಪ

ಉದಾಹರಣೆಗೆ, ೧೯೯೭ ಡಿಸೆಂಬರ್ ೩೧ನ್ನು ತೋರಿಸುತ್ತಿದ್ದರೆ ದಾಟಿದೊಡನೆ ಇವನ

ಹರಿದು ೧೯೯೮ ಜನವರಿ ೧ನ್ನು ಹೂಡಬೇಕು. ಆಗ ಮಾತ್ರ ಇವನು ಸ್ಥಳೀಯ ತಾರೀಕು ಪಟ್ಟಿಯ

ಆದ್ದರಿಂದ ನಾಗರಿಕ ಜೀವನದೊಡನೆ , ಹೊಂದಿಕೊಳ್ಳಬಲ್ಲ . ಇಲ್ಲವಾದರೆ ಒಂದು ದಿ

ಹಿಂದುಳಿದಿರುತ್ತಾನೆ. + ೧೨ ಗಂಟೆ ಕಾಲವಲಯದಿಂದ- ೧೨ ಗಂಟೆ ಕಾಲವಲಯವನ್ನು ಪ್ರವೇಶಿಸುವ

೧೮೦° ರೇಖಾಂಶದ ಗಡಿಗೆರೆಯನ್ನು ಪೂರ್ವದಿಂದ ಪಶ್ಚಿಮಕ್ಕೆ ಅಂದರೆ ಜಪಾನ್ ಕಡೆ

ಕಡೆಗೆ, ದಾಟುತ್ತಾನೆ. ಹೀಗೆ ಹಾಯುವ ಮುನ್ನ , ಇವನ ತಾರೀಕು ಪಟ್ಟಿ , ಉದಾಹರಣೆಗೆ, ೧೯೯೮

ಜನವರಿ ೧ನ್ನು ತೋರಿಸುತ್ತಿದ್ದರೆ ದಾಟಿದೊಡನೆ ಇವನು ಅದಕ್ಕೆ ಹಿಂದಿನ ದಿವಸವನ್ನು

೧೯೯೭ ಡಿಸೆಂಬರ್ ೩೧ನ್ನು ಹೂಡಬೇಕು. ಆಗ ಮಾತ್ರ ಇವನು ಆ ಸ್ಥಳದ ವರ್ತಮಾನ ಕಾಲದ

ಬಾಳುವವನಾಗುತ್ತಾನೆ. ಇಲ್ಲವಾದರೆ ಒಂದು ದಿನಾಂಕ ಮುಂದಿರುತ್ತಾನೆ.


ನಕ್ಷತ್ರ ವೀಕ್ಷಣೆ

ಹೀಗೆ ತಾರೀಕುಗಳನ್ನು ಬೇರ್ಪಡಿಸುವ ಗಡಿಗೆರೆಗೆ, ಅಂದರೆ ೧೮೦°

ಅಂತಾರಾಷ್ಟ್ರೀಯ ದಿನಾಂಕ ರೇಖೆ ಎಂಬ ಹೆಸರಿದೆ. ಇದನ್ನು ದಾಟಲು ತೆಗೆದುಕೊಳ

ಪ್ರಾಯಶಃ ೧ ಸೆಕೆಂಡ್‌ಗಿಂತಲೂ ಕಡಿಮೆ . ಆದರೆ ಅಷ್ಟರಲ್ಲಿ ವರ್ತಮಾನ ಭವಿಷ್ಯಕ್ಕೆ

ಇಲ್ಲವೇ ಭೂತಕ್ಕೆ ಕುಸಿದೀತು. ಅಂತಾರಾಷ್ಟ್ರೀಯ ದಿನಾಂಕ ರೇಖೆಯ ಅಧಿಕಭಾಗ ಜ

ಸಮುದ್ರದ ಮೇಲೆ ಕೆಡೆದಿರುವುದೊಂದು ಅನುಕೂಲ. ಹಡಗು ಮತ್ತು ವಿಮಾನಗಳಲ್

ದಾಟುವವರು ಮಾತ್ರ ತಮ್ಮ ತಾರೀಕು ಪಟ್ಟಿಗಳಲ್ಲಿ ಯುಕ್ತ ಬದಲಾವಣೆ ಮಾಡಿ

ಕೆಲವು ಎಡೆಗಳಲ್ಲಿ ಈ ರೇಖೆ ನೆಲವನ್ನು ಹಾಯುತ್ತದೆ ನಿಜ. ಆದರೆ ಅಲ್ಲಿ ಇದನ್ನು

ತಕ್ಕಂತೆ ಡೊಂಕಿಸಿ ಅಲ್ಲಿಯ ಜನರ ದೈನಂದಿನ ವ್ಯವಹಾರಗಳಲ್ಲಿ ಗೊಂದಲ ಉಂಟಾ

ಮಾರ್ಪಡಿಸಲಾಗಿದೆ. ವಾಸ್ತವತೆಗೆ ಅಂದರೆ ಜೀವನಕ್ಕೆ ಹೊಂದುವಂತೆ ಸಿದ್ದಾಂತವಿರ

ಶಿಷ್ಟಕಾಲವೆಂದರೇನು ?

- ಭಾರತ + ೫ ಗಂಟೆ ಮತ್ತು + ೬ ಗಂಟೆ ಕಾಲವಲಯಗಳಲ್ಲಿ ಚಾಚಿಕೊಂಡ

ಕ್ಷಣದಲ್ಲಿ ಗ್ರೆನಿಚ್ ಗಡಿಯಾರ ತೋರಿಸುವ ವೇಳೆಗಿಂತ ಭಾರತದಲ್ಲಿಯ ಗಡಿಯಾರ ತೋರ

ವೇಳೆ ಇಲ್ಲಿಯ ಕಾಲವಲಯ ಪ್ರದೇಶವನ್ನು ಅನುಸರಿಸಿ ೫ ಅಥವಾ ೬ ಗಂಟೆ ಮುಂದೆ ಇ

ಇದರ ಅರ್ಥ. ಆದ್ದರಿಂದ ಗ್ರೆನಿಚ್‌ನಲ್ಲಿ ಮಧ್ಯರಾತ್ರಿ ಆಗಿರುವಾಗ, ಉದ

ಮುಂಬಯಿಯಲ್ಲಿ ಪೂರ್ವಾಹ್ನ ೫ ಗಂಟೆಯೂ ಕಲ್ಕತ್ತದಲ್ಲಿ ಪೂರ್ವಾಷ್ಣ ೬ ಗಂಟೆಯೂ

ಈ ಎರಡೂ ಕಾಲವಲಯಗಳ ಗಡಿಗೆರೆಯ ಮೇಲಿರುವ ಪ್ರದೇಶಗಳಲ್ಲಿ ಇದರಿಂದ ಸಾಕಷ್ಟ

ಗೊಂದಲವೇ ತಲೆದೋರಿತು. ಉದಾಹರಣೆಗೆ ಉತ್ತರಪ್ರದೇಶದ ಅಯೋಧ್ಯೆಯ ಪಶ್ಚಿಮಕ್ಕ


೫ ಗಂಟೆ ಆದಾಗ ಪೂರ್ವಕ್ಕೆ ಕಾಲ ೬ ಗಂಟೆ ಆಗಿರಬೇಕು. ರಾಜಕೀಯವಾಗಿ ಒಂದ

ಒಳಪಟ್ಟಿರುವ ಹಾಗೂ ಭೌಗೋಲಿಕವಾಗಿ ಅಡಕವಾಗಿರುವ ಒಂದು ಪ್ರದೇಶದ

ಪ್ರಚಲಿತವಾಗಿರುವುದು ಅಪೇಕ್ಷಣೀಯ . ಇದರಿಂದ ನಾಗರಿಕ ಜೀವನ ಸುಗಮವಾಗು

ಗಣನೆಗಳಲ್ಲಿ ಏಕತೆ ಬರುವುದು. ಈ ಅಂಶ ಗಮನಿಸಿ ಪ್ರತಿಯೊಂದು ರಾಷ್ಟ್ರವೂ

ಅನುಕೂಲವಾಗುವ ಕಾಲವನ್ನು , ಆದಷ್ಟು ಮಟ್ಟಿಗೆ ಕಾಲವಲಯದ ಪರಿಮಿತಿಯೊಳಗ

ವಿಧಿಸುತ್ತದೆ. ಇದೇ ಆ ರಾಷ್ಟ್ರದ ಶಿಷ್ಟ ಕಾಲ. ಭಾರತೀಯ ಶಿಷ್ಟಕಾಲ ಗ್ರೆನಿಚ್ ಶಿಷ್ಟಕಾಲ

ಗಂ ೩೦ ಮಿ ಮುಂದೆ ಇದೆ : ೫ ಮತ್ತು ೬ರ ಸರಾಸರಿ ೫ . ೫ ಎಂಬುದನ್ನು ಗಮ

ಗ್ರೆನಿಚ್‌ನಲ್ಲಿ ಮಧ್ಯರಾತ್ರಿ ಆದಾಗ ಬೇರೆ ಬೇರೆ ಕೆಲವು ನಗರಗಳಲ್ಲಿ ಶಿಷ್ಟಕಾಲಗ

ಎಂಬುದನ್ನು ಮುಂದಿನ ಯಾದಿಯಲ್ಲಿ ಬರೆದಿದೆ : $


- eeeee
ಆಮ್‌ಸ್ಟರ್‌ಡ್ಯಾಮ್ ಪೂ le ೧ ಗಂ ದೆಹಲಿ - ಪೂ J೫ ಗಂ ೩೦
333
ನ್ಯೂಯಾರ್ಕ್
ಟೋಕಿಯೋ $ ಡ
a
ಮಾಸ್ಕೋ
ಬ್ಯಾಂಗ್ಕಾಕ್ ಎ
le
ಮೆಕ್ಸಿಕೊ ಸಿಟಿ ಅ
ಬ್ಯೂನೋಸ್ ಏರೀಸ್ ಎ
ಹವಾನಾ
ಪ್ಯಾರಿಸ್ - ಪೂ ೧ ಗಂ | ಏ

ಅ ೭ ಗಂ . ಹಾಂಗ್‌ಕಾಂಗ್‌
ಬೊಗೊಟ

ಪೂ = ಪೂರ್ವಾಹ್ನ , ಅ = ಅಪರಾಹ್ನ
೯ ೫
ನಕ್ಷತ್ರ ವೀಕ್ಷಣೆ

ಸಾಕಷ್ಟು ಅಗಲಕ್ಕೆ ( ಪಶ್ಚಿಮ -ಪೂರ್ವ) ಹಬ್ಬಿರುವ ಅಮೆರಿಕ ಸಂಯುಕ್ತ ಸಂಸ್ಥಾನದ ಘಟ

ರಾಜ್ಯಗಳಲ್ಲಿ ಬೇರೆ ಬೇರೆ ಶಿಷ್ಟಕಾಲಗಳು ಬಳಕೆಯಲ್ಲಿವೆ.

ಸುಧಾರಿತ ತಾರೀಕು ಪಟ್ಟಿ

ತಾರೀಕು ಪಟ್ಟಿ ಇಂದು ದೈನಂದಿನ ಆವಶ್ಯಕತೆ. ಕೆಲಸ- ತಾರೀಕು-ಉತ್ಪಾದನೆ- ಸಂಬಳ ಎಲ್ಲವ

ಪರಸ್ಪರ ನಿಕಟವಾಗಿ ಹೆಣೆದುಕೊಂಡಿವೆ. ತಾರೀಕುಪಟ್ಟರಹಿತ ಜೀವನ ಊಹಿಸುವುದೂ ಅಸಾಧ್ಯ

ಆದರೆ ನಮ್ಮ ಈ ನಿಕಟ ಅನುವರ್ತಿಯಲ್ಲಿ ಅತ್ಯಧಿಕ ಕೋಭೆ ಮತ್ತು ಅನವಶ್ಯ ಅವೈಜ್ಞ

ಪೇರಿಕೊಂಡಿವೆ ಎಂದರೆ ನಿಮಗೆ ಆಶ್ಚರ್ಯವಾದೀತು. ಈ ಮುಂದಿನ ಅಂಶಗಳನ್ನು ಗಮನಿಸ

ನಿಮಗೇ ಇದು ತಿಳಿಯುವುದು :

- ² ತಿಂಗಳುಗಳು ಸಮದಿವಸಗಳವಾಗಿಲ್ಲ - ಜನವರಿ ೩೧, ಫೆಬ್ರುವರಿ ೨೮ ( ಅಥವಾ

೨೯ ), ಮಾರ್ಚ್ ೩೧, ಏಪ್ರಿಲ್ ೩೦ ಇತ್ಯಾದಿ.

ಇಸವಿ- ತಿಂಗಳು - ತಾರೀಕು- ದಿವಸ ಇವುಗಳ ನಡುವೆ ಸುಲಭ ಸಂಬಂಧವೇನೂ

ತೋರುತ್ತಿಲ್ಲ . ೧೯೯೭ ಜನವರಿ ೧ ಬುಧವಾರ , ೧೯೯೮ ಜನವರಿ ೧

ಸೋಮವಾರ ಇತ್ಯಾದಿ. ೧೯೬೭ನೆಯ ಇಸವಿ ಜೂನ್ ೨೭ ಯಾವ

ದಿವಸವಾಗುತ್ತದೆಂಬ ಪ್ರಶ್ನೆಗೆ ಒಡನೆ ಉತ್ತರ ಹೇಳುವುದು ಕಷ್ಟ . ರಾಷ್ಟ್ರೀಯ

ಹಬ್ಬಗಳಾದ ಗಣರಾಜ್ಯ ದಿನ ( ಜನವರಿ ೨೬ ), ಸ್ವಾತಂತ್ರ್ಯ ದಿನ ( ಆಗಸ್ಟ್ ೧೫)

ಮತ್ತು ಮಹಾತ್ಮಾಗಾಂಧಿಯವರ ಜನ್ಮದಿನ ( ಅಕ್ಟೋಬರ್ ೨) ಇಂಥಿಂಥ

ದಿವಸಗಳಂದೇ ಪುನರಾವರ್ತಿಸುವುವೆಂದು ಸುಲಭವಾಗಿ ಹೇಳಲಾಗುವುದಿಲ್ಲ .

ಇನ್ನು ಹಬ್ಬ ಹರಿದಿನಗಳ ನಿರ್ಣಯದಲ್ಲಿಯ ದೈವಿಕ ಅರಾಜಕತೆಯಂತ

ಹೇಳತೀರದು.

ಮಧ್ಯರಾತ್ರಿ ನಿರ್ಣಯ, ಕಾಲವಲಯ ಸ್ಥಾಪನೆ, ಅಧಿಕ ವರ್ಷದ ಪರಿಕಲ್ಪನೆ

ಇವನ್ನೆಲ್ಲ ನೀಡಿ ಕಾಲಮಾಪನೆಯನ್ನು ವೈಜ್ಞಾನಿಕವಾಗಿ ಸಾಧಿಸಿರುವ

ಮಾನವ ದಿನಾಂಕಸೂಚಿಯ ವಿಚಾರದಲ್ಲಿ ಏನೂ ಮಾಡಲಾರದವನಾಗಿದ್ದಾ

ಹೀಗಾಗಿ ಪ್ರತಿ ವರ್ಷವೂ ಹೊಸ ತಾರೀಕು ಪಟ್ಟಿಗಳನ್ನು ಪ್ರಪಂಚಾ

ಸಂಖ್ಯೆಯಲ್ಲಿ ಮತ್ತು ಅಪಾರ ವೆಚ್ಚದಲ್ಲಿ ಮುದ್ರಿಸಬೇಕಾಗಿದೆ.

ತಾರೀಕು ಪಟ್ಟಿಯನ್ನು ಸುಧಾರಿಸುವ ದಿಶೆಯಲ್ಲಿ ಚಿಂತನೆಗಳು ಹರಿದೇ ಇವೆ. ಪ್ರಪ

ಸೂಚಿ ಎಂಬುದು ಇವುಗಳಲ್ಲಿ ಅತ್ಯಂತ ಸರಳವಾದದ್ದು . ಅದರ ಮುಖ್ಯಾಂಶಗ

* ೩೬೫ ದಿವಸಗಳ ವರ್ಷವನ್ನು ೯೧ ದಿವಸಗಳ ನಾಲ್ಕು ಸಮಪಾದಗಳಾಗಿ ವಿಭಾಗಿಸ

೯೧+೯೧+ ೯೧ +೯೧+ ೧ = ೩೬೫

* ಅಧಿಕ ವರ್ಷದ ವಿಭಾಗಗಳಾದರೂ ಹೀಗೆಯೇ ಇರಬೇಕು : ೯೧ +೯೧+೯೧+೯


=೩೬೬
೯೬
ನಕ್ಷತ್ರ ವೀಕ್ಷಣೆ

* ಪ್ರತಿಯೊಂದು ಪಾದದಲ್ಲಿಯೂ ಮೂರು ತದ್ವತ್ತು ತಿಂಗಳುಗಳಿರಬೇಕ

೩೧. ೩೦ . ೩೦ ದಿವಸಗಳವಾಗಿರಬೇಕು: ೩೧+೩೦+೩೦ =೯೧

* ಪ್ರತಿಯೊಂದು ಪಾದದ ಮೊದಲ ತಿಂಗಳು ಒಂದನೆಯ ತಾರೀಕು ಆದಿತ್ಯವಾರವ

ಆಗಬೇಕು. ಆಗ ಆ ಪಾದದ ಮೂರನೆಯ ತಿಂಗಳು ೩೦ನೆಯ (ಕೊನೆಯ ) ತಾರೀಕು ಶನಿ


ಆಗುತ್ತದೆ. ಹೀಗಾಗಿ ಮುಂದಿನ ಪಾದದ ಮೊದಲ ತಿಂಗಳ ಒಂದನೆಯ ತಾರೀಕು ಪುನಃ ಆದಿತ್ಯವ

ಆಗುವುದು ಎಂದೇ ಪಾದಗಳೆಲ್ಲವೂ ಪರಸ್ಪರ ದರ್ಪಣ ಪ್ರತಿಬಿಂಬಗಳು.

* ಸಾಧಾರಣ ವರ್ಷಗಳಲ್ಲಿ ಉಳಿಯುವ ಒಂದು ಹೆಚ್ಚಿನ ದಿವಸವನ್ನು ಕೊನೆಯ ಪಾ

ಕೊನೆಯ ತಿಂಗಳಿನ ೩೦ನೆಯ ತಾರೀಕಿನ ( ಶನಿವಾರ) ಮರುದಿವಸ ಲಗತ್ತಿಸಿ ಆ ದಿವಸವನ್ನು

ಪ್ರಪಂಚದಿವಸವೆಂದು ಹೆಸರಿಸಿ ಅಂದು ಸಾರ್ವತ್ರಿಕ ರಜೆ ಘೋಷಿಸಬೇಕು. ಆದ್ದರ

ವರ್ಷದ ಮೊದಲ ತಿಂಗಳ ಒಂದನೆಯ ತಾರೀಕು ಆದಿತ್ಯವಾರವೇ ಆಗುವುದು.

* ಅಧಿಕ ವರ್ಷಗಳಲ್ಲಿ ಉಳಿಯುವ ಇನ್ನೂ ಒಂದು ಹೆಚ್ಚಿನ ದಿವಸವನ್ನು ಎ

ಪಾದದ ಕೊನೆಯ ತಿಂಗಳಿನ ೩೦ನೆಯ ತಾರೀಕಿನ ( ಶನಿವಾರ) ಮರುದಿವಸ ಲಗತ್ತಿಸಿ ಆ ದಿವಸವನ


ಶಾಂತಿ ದಿವಸವೆಂದು ಹೆಸರಿಸಿ ಅಂದು ಸಾರ್ವತ್ರಿಕ ರಜೆ ಘೋಷಿಸಬೇಕು. ಆದ್ದರಿಂದ

ಪಾದದ ಮೊದಲ ತಿಂಗಳ ಒಂದನೆಯ ತಾರೀಕು ಪುನಃ ಆದಿತ್ಯವಾರವೇ ಆಗುವುದು.

* ಈ ತಾರೀಕು ಪಟ್ಟಿಯಲ್ಲಿ ಯಾವುದೇ ಪಾದದ ಯಾವುದೇ ತಿಂಗಳು ಬೇರೆ ಯಾವುದ

ಪಾದದ ಅದೇ ಸ್ನಾನದ ತಿಂಗಳಿನೊಡನೆ ತಾರೀಕು-ದಿವಸ ಸಂಬಂಧದಲ್ಲಿ ಸರ್ವಸಮವಾಗಿರುವು

ಅಷ್ಟೇ ಅಲ್ಲ . ಎಲ್ಲ ವರ್ಷಗಳ ತಾರೀಕು ಪಟ್ಟಿಗಳೂ ಸರ್ವಸಮವಾಗಿರುವುವು.

* ಆದಿತ್ಯವಾರದಿಂದ ಪ್ರಾರಂಭವಾಗುವ ಯಾವುದೇ ಮಾಮೂಲೀ ವರ್ಷಕ

ತಾರೀಕು ಪಟ್ಟಿಯನ್ನು ಲಗತ್ತಿಸಿದರೆ ಈ ಪಲ್ಲಟ ಬಲು ಸಲೀಸಾಗಿ ಜಾರಿಗೆ ಬರುವುದು ( ಸದ್ಯ

ಅವಕಾಶ ಇಸವಿ ೨೦೦೬ರಲ್ಲಿ ಒದಗಲಿದೆ).

ಇಷ್ಟು ಸರಳವಾದ ಹಾಗೂ ವೈಜ್ಞಾನಿಕವಾದ ಪ್ರಪಂಚ ತಾರೀಕು ಪಟ್ಟಿ

ಅಂಗೀಕರಿಸುವುದರಲ್ಲಿ ಅಭ್ಯಂತರವೇನು ಎಂದು ನಿಮಗೆ ಅನ್ನಿಸಬಹುದು. ವೈಜ್ಞಾನಿಕ

ಇಲ್ಲ . ರಾಜಕೀಯ ಹಾಗೂ ಧಾರ್ಮಿಕ ಕಾರಣಗಳು ಮತ್ತು ಪರಂಪರಾಗತವಾದ ಪ

ಅಂಧಾಭಿಮಾನ ಇವೇ ಹಾದಿಯಲ್ಲಿ ಇರುವ ಕಂದಕಗಳು, ಇರುಳು ಕಪು ತೊಳೆಯಲು

ಇದೆ. ಆದರೆ ಮೌಡ್ಯದ ಅಂಧಕಾರ ನಿವಾರಿಸಲು ? ಶತಕೋಟಿಸೂರ್ಯರಿಂದಲೂ ಅ

ಜ್ಞಾನದೀಪವೊಂದೇ ಸಾಧನ : ಅರಿವೇ ಬೆಳಕು. .

- ೨೦೦೬ ಜನವರಿ ೧ ಆದಿತ್ಯವಾರವಾಗುವುದರಿಂದ ಆ ವರ್ಷದ ಮಾಮೂಲೀ

ಪಟ್ಟಿಯನ್ನೂ ಪ್ರಪಂಚ ತಾರೀಕು ಪಟ್ಟಿಯನ್ನೂ ಕೊಟ್ಟಿದೆ ( ಪುಟ ೯೮, ೯೯).

ಕಾಲ ಮತ್ತು ಐನ್‌ಸ್ಟೈನ್

ದೂರ, ಚಲನೆ, ಕಾಲ ಎಂಬ ಪದಗಳನ್ನು ನೀವುನಿತ್ಯವೂ ಬಳಸುತ್ತೀರಿ. ನಿಮ್ಮ ಮ

ಕಚೇರಿಗೆ ದೂರ ೧೦ ಕಿಮೀ ಎಂದೂ ಈ ದೂರವನ್ನು ಗಮಿಸಲು ನಿಮಗೆ ಬೇಕಾಗುವ ಕಾಲ ೧

೧೫ ಮಿ ಎಂದೂ ಭಾವಿಸೋಣ. ಆಗ ನಿಮ್ಮ ನಡಿಗೆಯ , ಅಂದರೆ ಚಲನೆಯ , ಸರಾಸರಿ ವೇ


೯ ೭
ನಕ್ಷತ್ರ ವೀಕ್ಷಣೆ

ಗಂಟೆಗೆ ೮ ಕಿಮೀ ಆಗುವುದೆಂದು ಸುಲಭವಾಗಿ ಹೇಳುವಿರಿ . ಇಂಥ ಎಲ್ಲ ಸಮಸ್ಯೆಗಳನ್ನೂ

ಮಾನಸಿಕವಾಗಿ ಬಿಡಿಸಿ ಉತ್ತರ ಕೊಡಬಲ್ಲಿರಿ. ಈ ಸುಲಭ ಗಣನೆಯ ಹಿಂದೆ ಹುದುಗಿರುವ

ಸೂತ್ರವೇನು ?

ದೂರವನ್ನು s, ವೇಗವನ್ನು V ಮತ್ತು ಕಾಲವನ್ನು t ಅಕ್ಷರಗಳಿಂದ ಸೂಚಿಸೋಣ.

ಮಾನಸಿಕ ಗಣನೆಯ ಹಿನ್ನೆಲೆಯಲ್ಲಿರುವ ಸೂತ್ರವಿದು :

ದೂರ = ವೇಗ • ಕಾಲ

S = vxt

ಇದರ ಅರ್ಥವಿಷ್ಟು : ಯಾವುದೇ ಒಂದನ್ನು ಉಳಿದ ಎರಡರ ನೆರವಿನಿ

ಅಳೆಯಬಹುದು; ದೂರ, ವೇಗ, ಕಾಲ ಪರಸ್ಪರ ಸಂಬಂಧಿತವಾಗಿವೆ . ಇವುಗಳ ಪೈಕಿ ಯಾವುದೇ

ಒಂದು ಇಲ್ಲವಾದರೆ ಉಳಿದ ಎರಡೂ ಇರುವುದಿಲ್ಲ . ಈ ಕಾರಣದಿಂದಲೇ ದೂರ, ವೇ

ಎಂಬ ಗುಣಗಳನ್ನು ( ಅಥವಾ ಭೌತಪರಿಮಾಣಗಳನ್ನು ) ಅನಂತ ಭೌತ ತ್ರಿಕೋಣದ ಶೃಂಗ

ಎನ್ನುವುದುಂಟು. ತ್ರಿಕೋಣಕ್ಕೆ ಮೂರುಶೃಂಗಗಳು ಹೇಗೆ ಆವಶ್ಯಕ, ಒಂದಿಲ್ಲವಾದಾಗ ಉಳಿದೆರಡು

ಹೇಗೆ ನಿರರ್ಥಕ ಎಂಬ ಅಂಶಗಳು ಸ್ವಯಂ ಸ್ಪಷ್ಟ .

ವಿಶಾಲ ವಿಶ್ವವನ್ನು ಕುರಿತು ಪ್ರಸ್ತಾವಿಸುವಾಗ 'ದೂರ' ದ ಬದಲು ' ಆಕಾಶ' ಅಥವಾ

ಪದವನ್ನು ಬಳಸುವುದು ವಾಡಿಕೆ. ಉದಾಹರಣೆಗೆ ಈ ಮುಂದಿನ ವಾಕ್ಯವನ್ನು ಗಮನಿಸಿ :ಸೂರ್ಯನಿಂದ

ಹೊರಟ ಬೆಳಕಿನ ಕಿರಣ ಆಕಾಶ (ದೇಶದಲ್ಲಿ ಧಾವಿಸಿ ಭೂಮಿಯನ್ನು ತಲಪುವುದು ,

ಹಾಗಾದರೆ ಕಾಲಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲವೇ ? ಚಲನೆಯನ್ನಾಗಲೀ ಆಕಾಶವನ್ನಾ

ಅವಲಂಬಿಸದ ಶುದ್ದ ( ಅಂದರೆ ನಿರಪೇಕ್ಷ ) ಗುಣವಾಗಿ ಕಾಲವನ್ನು ತಿಳಿಯುವುದು ಅಥ

ಅಳೆಯುವುದು ಸಾಧ್ಯವಿಲ್ಲವೇ ? ೨೦ನೆಯ ಶತಮಾನದ ಆರಂಭದ ತನಕವೂ ಈ ಪ್ರಶ್ನೆಗಳಿಗೆ ಉತ್ತರ

'ಉಂಟು' ಎಂದಿತ್ತು . ಆದರೆ ಇಂಥ ನಂಬಿಕೆಯನ್ನು ಆಧರಿಸಿ ವಿಜ್ಞಾನದಿಂದ ಲಭಿಸಿದ ಫಲಿತ

ವಾಸ್ತವ ಪರಿಸ್ಥಿತಿಗಳೊಡನೆ ಹೊಂದಲಿಲ್ಲ . ಹೀಗಾಗಿ ನಂಬಿಕೆಯ ಬುಡವೇ ಹಂದಾಡಿತು. ವಾಸ್ತವ

ಪರಿಸ್ಥಿತಿಗಳನ್ನು ಸರಿಯಾಗಿ ಅರ್ಥವಿಸಿ ವಿವರಿಸಬಲ್ಲ ಹೊಸ ಸಿದ್ದಾಂತಗಳು ಅನಿವಾರ

ಈ ಉತ್ಕಟ ಸನ್ನಿವೇಶದಲ್ಲಿ ಬಂದವರೇ ಆಲ್ಬರ್ಟ್ ಐನ್‌ಸ್ಟೈನ್ ( ೧೮೭೯- ೧೯೫೫). ಪ್ರಪಂಚದ


ಸಾರ್ವಕಾಲಿಕ ಮಹಾ ವಿಜ್ಞಾನಿಗಳ ಪೈಕಿ ಒಬ್ಬರಾದ ಇವರು ಸಾಪೇಕ್ಷತಾ ಸಿದ್ಧಾಂತ

ಭೌತವಿಶ್ವಕ್ಕೆ ಹೊಸ ಅರ್ಥ ನೀಡಿದರು , ಆ ತನಕ ಪೇರಿಕೊಂಡು ಬಂದಿದ್ದ ಹಲವಾರ

ಅಸಾಂಗತ್ಯಗಳನ್ನು ನಿವಾರಿಸಿದರು.

ಸಾಪೇಕ್ಷತಾ ಸಿದ್ದಾಂತದ ಪ್ರಕಾರ ನಿರಪೇಕ್ಷ ಕಾಲ ಎಂಬುದೇ ಇಲ್ಲ . ಕಾಲ ಮತ

ಅಖಂಡವಾಗಿ ಒಂದರೊಡನೊಂದು ಬೆಸೆದುಕೊಂಡು ಭೌತವಿಶ್ವವನ್ನು ರೂಪಿಸಿವೆ. ಇದರಲ್ಲಿ

ಸಂಬಂಧವಿರುವ ಭಿನ್ನ ಗುಣಗಳು ಎಂದು ಭಾಸವಾಗುವ ದ್ರವ್ಯರಾಶಿ ( ಅಂದರೆ ವಸ್ತು ) ಮತ್ತು

( ಅಂದರೆ ಕೆಲಸ ಮಾಡಬಲ್ಲ ಗುಣ) ವಾಸ್ತವವಾಗಿ ಸಂಬಂಧಿತವಾಗಿದೆ. E= mc² ಎಂಬ ಸುಪ್ರಸಿದ್ದ

ಸಮೀಕರಣ ಈ ಸಂಬಂಧವನ್ನು ಸೂಚಿಸುವುದು . ಇಲ್ಲಿ E , m ,cಅನುಕ್ರಮವಾಗಿ ಶಕ್ತಿ , ದ್ರವ್ಯರಾಶಿ,


ಬೆಳಕಿನ ವೇಗ, ದ್ರವ್ಯರಾಶಿಯನ್ನು ಶಕ್ತಿಯಾಗಿಯೂ ಶಕ್ತಿಯನ್ನು ( ಪುಟ ೧೦೦ ನೋಡಿ)
ನಕ್ಷತ್ರ ವೀಕ್ಷಣೆ

೨೦೦೬ರ ಮಾಮೂಲಿ ದಿನಾಂಕ ಸೂಚಿ

ಜನವರಿ ಫೆಬ್ರವರಿ ಮಾರ್ಚ್

ಆ ಸೋ ಮಂ ಬು ಗು ಶು ಶ| ಆ ಸೋ ಮಂ ಬು ಗು ಶು ಶ| ಆ ಸೋ ಮಂ ದು ಗು ಶು ಶ|

೧ ೨ ೩ ೪ ೫ ೬ ೭ - ೧ ೨ ೩ ೪ ||

೮ ೯ ೧೦ ೧೧ ೧೨ ೧೩ ೧೪ ೫ ೬ ೭ ೮ ೯ ೧೦ ೧೧ | ೫ ೬ ೭ ೮ ೯ ೧೦ ೧೧ |

೧೫ ೧೬ ೧೭ ೧೮ ೧೯ ೨೦ ೨೦೧೨ ೧೩ ೧೪ ೧೫ ೧೬ ೧೭ ೧೮ ೧೨ ೧೩ ೧೬ ೧೭ ೧

೨೨ ೨೩ ೨೪ ೨೫ ೨೬ ೨೭ ೨೮ [ ೧೯ ೨೦ ೨೧ ೨೨ ೨೩ ೨೪ ೨೫ | ೧೯ ೨೦ ೨೧ ೨೨ ೨೩ ೨೪ ೨೫ |

೨೯ ೩೦ ೩೧ ೨೬ ೨೭ ೨೮ ೨೬ ೨೭ ೨೮ ೨೯ ೩೦ ೩೧

ಏಪ್ರಿಲ್ ಮೇ ಜೂನ್

ಆ ಸೋ ಮಂ ಬು ಗು ಶು ಶ| ಆ ಸೋ ಮಂ ಬು ಗು ಶು ಶ| ಆ ಸೋ ಮಂ ಬು ಗು ಶು ಶ |

೧| ೧ ೨ ೩ ೪ ೫ ೬

೨ ೩ ೪ ೫ ೬ ೭ ೮| ೭ ೮ ೯ ೧೦ ೧೧ ೧೨ ೧೩ ೪ ೫ ೬ ೭ ೮ ೯ ೧೦

೯ ೧೦ ೧೧ ೧೨ ೧೩ ೧೪ ೧೫ [ ೧೪ ೧೫ ೧೬ ೧೭ ೧೮ ೧೯ ೨೦ ೧೧ ೧೨ ೧೩ ೧೪ ೧೫ ೧೬ ೧೭

[ ೧೬ ೧೭ ೧೮ ೧೯ ೨೦ ೨೧ ೨೨೨೧ ೨೨ ೨೩ ೨೪ ೨೫ ೨೬ ೨೭ ೧೮ ೧೯ ೨೦ ೨೧ ೨೨ ೨೩ ೨೪

೨೩ ೨೪ ೨೫ ೨೬ ೨೭ ೨೮ ೨೯ | ೨೮ ೨೯ ೩೦ ೩೧ ೨೫ ೨೬ ೨೭ ೨೮ ೨೯ ೩೦

ಜುಲೈ ಆಗಸ್ಟ್ ಸೆಪ್ಟೆಂಬರ್

ಆ ಸೋ ಮಂ ಬು ಗು ಶು ಶ| ಆ ಸೋ ಮಂ ಬು ಗು ಶು ಶ| ಆ ಸೋ ಮಂ ಬು ಗು ಶು ಶಕ್ತಿ

೩೦ ೩೧ ೧) ೧ ೨ ೩ ೪ ೫

೨ ೩ ೪ ೫ ೬ ೭ ೮| ೬ ೭ ೮ ೯ ೧೦ ೧೧ ೧೨ ೩ ೪ ೫ ೬ ೭ ೮ ೯

೯ ೧೦ ೧೧ ೧೨ ೧೩ ೧೪ ೧೫ | ೧೩ ೧೪ ೧೫ ೧೬ ೧೭ ೧೮ ೧೯ ೧೦ ೧೧ ೧೨ ೧೩ ೧೪ ೧೫ ೧೬

೧೬ ೧೭ ೧೮ ೧೯ ೨೦ ೨೧ ೨೨೨೦ ೨೧ ೨೨ ೨೩ ೨೪ ೨೫ ೨೬ ೧೭ ೧೮ ೧೯ ೨೦ ೨೧ ೨೨ ೨೩ |
೨೩ ೨೪ ೨೫ ೨೬ ೨೭ ೨೮ ೨೯೨೭ ೨೮ ೨೯ ೩೦ ೩೧ | ೨೪ ೨೫ ೨೬ ೨೭ ೨೮ ೨೯ ೩೦ ]

ಅಕ್ಟೋಬರ್ - ನವೆಂಬರ್ ಡಿಸೆಂಬರ್

ಆ ಸೋ ಮಂ ಬು ಗು ಶು ಶ| ಆ ಸೋ ಮಂ ಬು ಗು ಶು ಶ| ಆ ಸೋ ಮಂ ಬು ಗು ಶು ಶ|
9
೧ ೨ ೩ ೪ ೫ ೬ ೭ ೧ ೨ ೩ ೪೩೧
| ೩ ೪ ೫ ೬ ೭ ೮ ೯
೮ ೯ ೧೦ ೧೧ ೧೨ ೧೩ ೧೪ ೫ ೬ ೭ ೮ ೯ ೧೦ ೧೧
[ ೧೦ ೧೧ ೧೨ ೧೩ ೧೪ ೧೫ ೧೬
೧೫ ೧೬ ೧೭ ೧೮ ೧೯ ೨೦ ೨೧ [ ೧೨ ೧೩ ೧೪ ೧೫ ೧೬ ೧೭ ೧೮
೧೭ ೧೮ ೧೯ ೨೦ ೨೧ ೨೨ ೨೩
೨೨ ೨೩ ೨೪ ೨೫ ೨೬ ೨೭ ೨೮ ೧೯ ೨೦ ೨೧ ೨೨ ೨೩ ೨೪ ೨೫ | ೧೭ ೧೮

೨೯ ೩೦ ೩೧ ೨೬ ೨೭ ೨೮ ೨೯ ೩೦ [ ೨೪ ೨೫ ೨೬ ೨೭ ೨೮ ೨೯ ೩೦
೯ ೯
ನಕ್ಷತ್ರ ವೀಕ್ಷಣೆ

೨೦೦೬ರ ಪ್ರಪಂಚ ದಿನಾಂಕ ಸೂಚಿ

ಜನವರಿ ಫೆಬ್ರುವರಿ ಮಾರ್ಚ್

ಆ ಸೊ ಮಂ ಬು ಗು ಶು ಶ| ಆ ಸೊ ಮಂ ಬು ಗು ಶು ಶ| ಆ ಸೋ ಮಂ ಬು ಗು ಶು ಶ।

೧ ೨ ೩ ೪ ೫ ೬ ೭ || ೧ ೨ ೩ ೪|

೮ ೯ ೧೦ ೧೧ ೧೨ ೧೩ ೧೪ | ೪ ೬ ೭ ೮ ೯ ೧೦ ೧೧ | ೩ ೪ ೫ ೬ ೭ ೮ ೯

೧೫ ೧೬ ೧೭ ೧೮ ೧೯ ೨೦ ೨೧೧೨ ೧೩ ೧೪ ೧೫ ೧೬ ೧೭ ೧೮ ೧೦ ೧೧ ೧೨ ೧೩ ೧೪ ೧೫ ೧೬

೨೨ ೨೩ ೨೪ ೨೫ ೨೬ ೨೭ ೨೮ ೧೯ ೨೦ ೨೧ ೨೨ ೨೩ ೨೪ ೨೫ | ೧೭ ೧೮ ೧೯ ೨೦ ೨೧ ೨೨ ೨೩

೨೯ ೩೦ ೩೧ ೨೬ ೨೭ ೨೮ ೨೯ ೩೦ [ ೨೪ ೨೫ ೨೬ ೨೭ ೨೮ ೨೯ ೩೦

విటీలో ಮೇ ಜೂನ್

ಆ ಸೋ ಮಂ ಬು ಗು ಶು ಶ| ಆ ಸೋ ಮಂ ಬು ಗು ಶು ಶ| ಆ ಸೋ ಮಂ ಬು ಗು ಶು ಶ|

೧ ೨ ೩ ೪ ೫ ೬ ೭ ೧ ೨ ೩ ೪|

೮ ೯ ೧೦ ೧೧ ೧೨ ೧೩ ೧೪ ೫ ೬ ೭ ೮ ೯ ೧೦ ೧೧ | ೩ ೪ ೫ ೬ ೭ ೮ ೯|

೧೫ ೧೬ ೧೭ ೧೮ ೧೯ ೨೦ ೨೧ ೧೨ ೧೩ ೧೪ ೧೫ ೧೬ ೧೭ ೧೮ ೧೦ ೧೧ ೧೨ ೧೩ ೧೪ ೧೫ ೧೬|

೨೨ ೨೩ ೨೪ ೨೫ ೨೬ ೨೭ ೨೮ ೧೯ ೨೦ ೨೧ ೨೨ ೨೩ ೨೪ ೨೫ | ೧೭ ೧೮ ೧೯ ೨೦ ೨೧ ೨೨ ೨೩

೨೯ ೩೦ ೩೧. ೨೬ ೨೭ ೨೮ ೨೯ ೩೦ [ ೨೪ ೨೫ ೨೬ ೨೭ ೨೮ ೨೯ ೩೦

ಜುಲೈ ಆಗಸ್ಟ್ | ಸೆಪ್ಟೆಂಬರ್

ಆ ಸೋ ಮಂ ಬು ಗು ಶು ಶ| ಆ ಸೋ ಮಂ ಬು ಗು ಶು ಶ| ಆ ಸೋ ಮಂ ಬು ಗು ಶು ಶ

೧ ೨ ೩ ೪ ೫ ೬ ೭] ೧ ೨ ೩ ೪| |

೮ ೯ ೧೦ ೧೧ ೧೨ ೧೩ ೧೪ ೫ ೬ ೭ ೮ ೯ ೧೦ ೧೧ ೩ ೪ ೫ ೬ ೭ ೮ ೯

೧೫ ೧೬ ೧೭ ೧೮ ೧೯ ೨೦ ೨೧೧೨ ೧೩ ೧೪ ೧೫ ೧೬ ೧೭ ೧೮ ೧೦ ೧೧ ೧೨ ೧೩ ೧೪ ೧೫ ೧೬

೨೨ ೨೩ ೨೪ ೨೫ ೨೬ ೨೭ ೨೮ | ೧೯ ೨೦ ೨೧ ೨೨ ೨೩ ೨೪ ೨೫ [ ೧೭ ೧೮ ೧೯ ೨೦ ೨೧ ೨೨ ೨೩
೨೯ ೩೦ ೩೧ [ ೨೬ ೨೭ ೨೮ ೨೯ ೩೦ [ ೨೪ ೨೫ ೨೬ ೨೭ ೨೮ ೨೯ ೩೦

ಅಕ್ಟೋಬರ್ ನವೆಂಬರ್
ಡಿಸೆಂಬರ್

ಆ ಸೋ ಮಂ ಬು ಗು ಶು ಶ| ಆ ಸೋ ಮಂ ಬು ಗು ಶು ಶ| ಆ ಸೋ ಮಂ ಬು ಗು ಶು ಶ
೧ ೨ ೩ ೪ ೫ ೬ ೭
೧ ೨ ೩ ೪|

೮ ೯ ೧೦ ೧೧ ೧೨ ೧೩ ೧೪ | ೫ ೬ ೭ ೮ ೯ ೧೦ ೧೧ | ೩ ೪ ೫ ೬ ೭ ೮ ೯

೧೫ ೧೬ ೧೭ ೧೮ ೧೯ ೨೦ ೨೧೧೨ ೧೩ ೧೪ ೧೫ ೧೬ ೧೭ ೧೮ ] ೧೦ ೧೧ ೧೨ ೧೩ ೧೪ ೧೫ ೧೬

೨೨ ೨೩ ೨೪ ೨೫ ೨೬ ೨೭ ೨೮ ೧೯ ೨೦ ೨೧ ೨೨ ೨೩ ೨೪ ೨೫ | ೧೭ ೧೮ ೧೯ ೨೦ ೨೧ ೨೨ ೨೩
೨೯ ೩೦ ೩೧ . ( ೨೬ ೨೭ ೨೮ ೨೯ ೩೦ ೨೪ ೨೫ ೨೬ ೨೭ ೨೮ ೨೯ ೩೦

ಎಲ್ಲ ವರ್ಷಗಳಲ್ಲಿಯೂ ' ಪ್ರಪಂಚ ದಿವಸ' ಡಿಸೆಂಬರ್ ೩೦ರ ಮರುದಿನ ಬರುತ್ತದೆ.

ಅಧಿಕ ವರ್ಷಗಳಲ್ಲಿ ಮಾತ್ರ ' ಶಾಂತಿ ದಿವಸ' ಜೂನ್ ೩೦ರ ಮರುದಿನ ಬರುತ್ತದೆ.

' ಪ್ರಪಂಚ ದಿವಸ' ಹಾಗೂ ' ಶಾಂತಿ ದಿವಸ' ಪ್ರಪಂಚಾದ್ಯಂತ ಸಾರ್ವತ್ರಿಕ ರಜಾ ದಿನಗಳು .
ನಕ್ಷತ್ರ ವೀಕ್ಷಣೆ

ದ್ರವ್ಯರಾಶಿಯಾಗಿಯೂ ಮಾರ್ಪಡಿಸಿ ಅಳೆದು ತಿಳಿಯಬಹುದು ಎಂದು ಇದರ ಅರ

ವಿಶ್ವದಲ್ಲಿ ಯಾವುದೇ ವಸ್ತು ಅಥವಾ ಶಕ್ತಿ ಐದಬಹುದಾದ ಗರಿಷ್ಠ ವೇಗವೆಂದರೆ

ಇದು ಸೆಕೆಂಡಿಗೆಮೂರುಲಕ್ಷ ಕಿಲೋಮೀಟರುಗಳು. ಈ ಐನ್‌ಸ್ಟೈನ್ ಪರಿಮಿತಿಯನ್ನು ಮೀರ

ವಸ್ತುವಾಗಲೀ ಶಕ್ತಿಯಾಗಲೀ ಭೌತವಿಶ್ವದಲ್ಲಿಲ್ಲ . ಮಹಾವೇಗದಿಂದ - ಬೆಳಕಿ

ಹೋಲಿಸಬಹುದಾದ ವೇಗದಿಂದ ಚಲಿಸುವಾಗ ಕಾಲಪ್ರವಾಹ ಮಂದವಾ

ಮಹಾಗುರುತ್ವಾಕರ್ಷಣೀಯ ವಲಯಗಳ, ಅಂದರೆ ಸೂರ್ಯನಿಗೆ ಸಮಾನವಾದ

ಸನಿಹದಲ್ಲಿ ಬೆಳಕು ಹಾಯುವಾಗ ಅದು ಬಾಗುತ್ತದೆ. ಆದ್ದರಿಂದ ಇಹಲೋಕದ

ಮೇಲಿನ) ವ್ಯವಹಾರಗಳನ್ನು ಬಿಟ್ಟು ವಿಶಾಲವಿಶ್ವದಲ್ಲಿ ನಕ್ಷತ್ರಗಳ ಆಡುಂ

ವೇಗಕ್ಕೆ ಸನ್ನಿಹಿತವಾಗುವ ವೇಗಗಳಿಂದ ಧಾವಿಸುವುದು ಸಾಧ್ಯವಾದರೆ ಆಗ ಕಾಲರಾಯ ನಮ

ಸೋಲುವುದು ಖರೆ. ( ಅಂದಹಾಗೆ ಮಾನವ ಇಂದು , ೨೦೦೩ , ತಲಪಿರುವ ಅತ್ಯಂತ ಹ

ವೇಗವೆಂದರೆ ಸೆಕೆಂಡಿಗೆ ಸುಮಾರು ೧೫ ಕಿಮೀ ಮಾತ್ರ ).

- ದ್ರವ್ಯ ( matter ) ಮತ್ತು ದೇಶ ( Space) ಇವುಗಳ ನಡುವಿನ ಅವಿಭಾಜ್ಯ ಸಂಬ

ಈ ಹೇಳಿಕೆ ಸೂಚಿಸುತ್ತದೆ:" ದ್ರವ್ಯಕ್ಕೆ ಹೇಗೆ ಚಲಿಸಬೇಕೆಂದು ದೇಶ ಹೇಳುತ್ತದೆ. ಆಕ

ವಕ್ರವಾಗಬೇಕೆಂದು ದ್ರವ್ಯ ವಿಧಿಸುತ್ತದೆ. ಇನ್ನು " ದೇಶ-ಕಾಲ ಸಾತತ್ಯವೇ ವಿಶ್

ಕಾಲಬಾಣ

ಕಾಲಬಾಣದ ಚಲನೆ ಒಂದೇ ದಿಶೆಯದು, ಒಂದೇ ಗತಿಯದು. ನಮ್ಮ ದೇಹದಲ್ಲಿ ಮ

ಸುತ್ತಮುತ್ತಲಲ್ಲಿ ನಡೆಯುವ ಎಲ್ಲ ಘಟನೆಗಳೂ ಇದನ್ನು ಸಮರ್ಥಿಸುತ್ತವೆ. ಆದರೆ ಮಾ

ಊಹಾಪೋಹಗಳಿಗೆ ಮಿತಿ ಇಲ್ಲ . ಕಾಲದಿಶೆಯನ್ನು ಹಿಮ್ಮೊಗಗೊಳಿಸಲು ಸಾಧ್ಯವ

ಭೂತಕಾಲದ ಗರ್ಭವನ್ನು ಹೊಕ್ಕು, ಒಂದಿಗೇ ತಾರುಣ್ಯವನ್ನು ಗಳಿಸಿ ಈ ಲೋಕದ ಸಂತೋ

ಸಮೃದ್ದಿಗಳನ್ನು ಮಗುದೊಮ್ಮೆ ಅನುಭವಿಸಲಾದೀತೇ ? ಪುರಾಣ ಪುರುಷ ಯಯ

ಪಡೆದಿದ್ದನಂತೆ. ಇನ್ನು ದೇವತೆಗಳು ಅಜರಾಮರರು. ವಾಸ್ತವ ಜಗತ್ತಿನಲ್ಲಿ ಇವು ಎ

ಸಾಧ್ಯವಾಗವು.

ಸಾಪೇಕ್ಷತಾ ಸಿದ್ಧಾಂತ ಆಧರಿಸಿ ವಿಜ್ಞಾನಿಗಳು ಕೆಲವು ಆಕರ್ಷಕ ನೂತ

ಮಂಡಿಸಿದ್ದಾರೆ. ಬೆಳಕಿನ ವೇಗವನ್ನು ಸಮೀಪಿಸಿದಂತೆ ಕಾಲದ ಚಲನೆ ಮಂದವಾಗು

ನೀವು ಪುಷ್ಪಕವಿಮಾನವೇರಿ ಆಕಾಶದ ಅತ್ಯಾಕರ್ಷಕ ಮತ್ತು ಪ್ರಕಾಶತಮ ನಕ್ಷತ್

ಸಾಕ್ಷಾತ್ ಬೆಳಕಿನ ವೇಗದಿಂದಲೇ ಪ್ರಯಾಣ ಹೊರಟಿರೆಂದು ಭಾವಿಸಿ, ಆ ನಕ್ಷತ್ರ ತಲಪಲು ಒ

ಭೂವರ್ಷಗಳ ಕಾಲ ನೀವು ಧಾವಿಸುತ್ತಿರಬೇಕಾಗುವುದು. ಲುಬ್ದಕವನ್ನು ತಲಪಿದೊಡನೆ

ನೀವುಭೂಮಿಗೆ ಅದೇ ವೇಗದಿಂದ ಜಿಗಿದು ಮತ್ತೆ ಒಂಬತ್ತು ಭೂವರ್ಷಸಲ್ಲುವಾಗ

ವಸುಂಧರೆ ತಲಪುವಿರಿ, ಭೂನಿವಾಸಿಗಳಿಗೆ ಈ ಅವಧಿಯಲ್ಲಿ ಹದಿನೆಂಟು ವರ್ಷ

ಹೋಗಿದ್ದರೂ ನಿಮಗೆ ಮಾತ್ರ ಕೇವಲ ಒಂದು ಹಗಲು ಸಂದ ಅನುಭವವಾಗಿರುತ್ತದ

ಕಾಲ ಎಂದರೇನು?
ನಕ್ಷತ್ರ ವೀಕ್ಷಣೆ

ಹಿಂದೊಮ್ಮೆ ಕೃತಯುಗದಲ್ಲಿ ರೈವತನೆಂಬ ಋಷಿ ತನ್ನ ಸುಕುಮಾರಿ ರೇವತಿಗೆ ವರಾನ್ವೇಷಣ

ಮಾಡಲು ಹೊರಟ. ಅಲ್ಲಿ ಇಲ್ಲಿ ಅರಸುವುದೇಕೆ, ಸಾಕ್ಷಾತ್ ವಿಶ್ವಕರ್ತೃ ಬ್ರಹ್ಮನನ್ನೇ ಈಕೆಗೆ ಆತ

ವಿಧಿಸಿರುವ ಪತಿ ಯಾರೆಂದು ಕೇಳಿಬಿಡೋಣ - ಹೀಗೆ ಯೋಚಿಸಿದ ರೈವತ ಅತಿ ವೇಗದಿಂದ

ಬ್ರಹ್ಮಲೋಕಕ್ಕೆ ರೇವತಿ ಸಮೇತ ತೆರಳಿ ಬ್ರಹ್ಮನೆದುರು ತನ್ನ ಸಮಸ್ಯೆ ಇಟ್ಟ .

- "ಭೂಮಿಯಲ್ಲಿರುವ ಎಲ್ಲ ಮಹಾಪುರುಷರ ಹೆಸರು ಹೇಳು. ನಾನು ನೆನಪು ಮಾಡಿಕೊಳ

ಎಂದ ಬ್ರಹ್ಮ .

ರೈವತ ಹೇಳಿದ ಹೆಸರುಗಳನ್ನು ಕೇಳಿ ಆತ ನಕ್ಕು , " ಅವರೆಲ್ಲ ನೀನು ಭೂಮಿಯಿಂದ ಹ

ಇದ್ದವರು ನಿಜ. ಆದರೆ ಇಲ್ಲಿ ನೀನಿರುವ ಒಂದೊಂದು ಕ್ಷಣದಲ್ಲಿಯೂ ಭೂನಿವಾಸಿಗಳಿಗೆ ಲಕ್

ವರ್ಷಗಳೇ ಸಂದುಹೋಗುತ್ತವೆ. ಆದ್ದರಿಂದ ಆ ಪುರುಷರು ಯಾರೂ ಈಗ ಅಲ್ಲಿಲ್ಲ . ನೀನೀಗ

ಮರಳು, ಭೂಮಿಯನ್ನು ತಲಪುವಾಗ ಅಲ್ಲಿ ದ್ವಾಪರಯುಗ ನಡೆಯುತ್ತಿರುವುದು. ಬಲರ

ಎಂಬವನಿಗೆ ನಿನ್ನ ಮಗಳನ್ನು ಕೊಟ್ಟು ಮದುವೆಮಾಡು" ಎಂದ.

ಸಹಸ್ರಯುಗ ಪರ್ಯಂತಮಹರ್ಯಹ್ಮಣೋವಿದುಃ

ರಾತ್ರಿಂ ಯುಗ ಸಹಸ್ರಾಂತಾಂ ತೇs ಹೋರಾತ್ರವಿದೋಜನಾಃ

ಗಿತಾ ೮ - ೧೭

ಯುಗಗಳಾವರ್ತಿಸಿರೆಯೊಂದು ಸಾಸಿರಬಾರಿ

ಪರಬ್ರಹ್ಮಮಾನದಲ್ಲದು ಒಂದೇ ಹಗಲು

ಅಂತೆ ಸಾವಿರ ಯುಗ ತಿರುಗಿದರೆ ರಾತ್ರಿ

ಇದನರಿತರರಿಯುವರು ಹಗಲಿರುಳ ತಿರುಳ

ವಿಜಯನೀ ೮- ೧೭

ವಿಶ್ವಕಾಲವೇ ಬೇರೆ, ಭೂಕಾಲವೇ ಬೇರೆ. ಹಾಗಾದರೆ ಕಾಲ ಎಂದರೇನು?

ಇನ್ನು ಬೆಳಕಿನ ವೇಗವನ್ನು ಮೀರಿ ನೀವು ಜಿಗಿದುದಾದರೆ ನಿಜಕ್ಕೂ ಭೂತಕಾಲದ

ತೆರಳಬಲ್ಲಿರಿ. ಗಾಂಧಿ ಅಜ್ಜಯ್ಯನೆದುರು 'ವೈಷ್ಣವ ಜನತೋ ' ಎಂದು ಹಾಡಿ, ಗೌತಮಬುದ್ದನೆದುರು

' ಬುದ್ಧಂ ಶರಣಂ ಗಚ್ಛಾಮಿ' ಎಂದು ನುತಿಸಿ , ವೇದಕಾಲದ ಋಷಿಗಳ ಆಶೀರ್ವಾದ ಪ

ಕೊನೆಯಿಲ್ಲದೆ, ಹೊಗುತ್ತಿರಬಹುದು. ಎಂದೇ ಮುಂದಿನ ಕಗ್ಗ :

ಬೆಳಕಿನ ವೇಗಕ್ಕಿಂತಲು ರಭಸದಿ


ಓಡುವ ಪೋಕರಿ ಹುಡುಗಿ ಉಷಾ

ಐನ್‌ಸ್ಟೈನರ ರಿಲೇಟಿವಿಟಿ ಕ್ರಮದಲ್ಲಿ


ಜಿಗಿಯುತ ಇಳಿದಳು ಕಳೆದ ನಿಶಾ!

ಹಾಗಾದರೆ ಕಾಲ ಎಂದರೇನು ?

ಈಗ್ಗೆ ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಒಬ್ಬ ಋಷಿ ಈ ಪ್ರಶ್ನೆ ಎತ್ತಿದ. ಅವನೇ

ಮುಂದುವರಿದು ವಿವರಣೆ ನೀಡಿದ , " ತಿಳಿದವನಿಗೆ ಇದರ ಉತ್ತರ ವಿವರಿಸುವುದು ಅನಗತ್ಯ ,

ತಿಳಿಯದವನಿಗೆ ಅಸಾಧ್ಯ ."


೧೦೨ ನಕ್ಷತ್ರ ವೀಕ್ಷಣೆ

ತನ್ನಾಸ್ತಿಕಿಮಪಿ ಪತ್ಯು : ಪ್ರಕಲ್ಪಿತಂ ಯನ್ನ ನಿಹತಿ ಹಿನ್ಯಾ


ಅನವರತ ಗಮನಶೀಲಸ್ಯ ಕಾಲಪಥಿಕಸ್ಯ ಪಾಥೇಯ

ವಕ್ರೋಕ್ತಿಜೀವಿತ
ಅನವರತ ಗತಿಶೀಲನಾಗಿರುವ ಕಾಲನೆಂಬ ಪಥಿಕನಿಗೆ
ಪಾಥೇಯ ಕಟ್ಟಿಕೊಡಲು ನಿಯತಿ ಎಂಬ ಗೃಹಿಣಿ
ಉಪಯೋಗಿಸದ ವಸ್ತುವೇ ಇಲ್ಲ . ಪಾವೆಂ

ದಿವಸಗಳ ಸಾಪ್ತಾಹಿಕ ಚಕ್ರ

ಆದಿತ್ಯವಾರದಿಂದ ಶನಿವಾರದ ತನಕ ಸಲ್ಲುವ ಸಪ್ತಾಹದಲ್ಲಿ ಏಳು ಬೇರೆ ಬೇ

ದಿವಸಗಳು ಒಂದು ನಿರ್ದಿಷ್ಟ ಅನುಕ್ರಮದಲ್ಲಿ ಬರುವುದು ಸರಿಯಷ್ಟೆ ,ಸೂರ್

ಬುಧ, ಗುರು , ಶುಕ್ರ , ಶನಿ ಎಂಬ ಏಳು ಆಕಾಶಕಾಯಗಳ ಹೆಸರುಗಳಿಂದ ಇವು

ಇದೇ ಕ್ರಮದಲ್ಲಿ .

ಈ ವ್ಯವಸ್ಥೆ ಕುರಿತಂತೆ ಮೂರು ಪ್ರಶ್ನೆಗಳು ಏಳುತ್ತವೆ:

- ೧. ಯಾವುದೇ ದಿವಸಕ್ಕೂ ಅದರ ಹೆಸರಿಗೆ ಕಾರಣವಾಗಿರುವ ಆಕಾಶಕಾಯಕ್ಕೂ

ಸ್ಪಷ್ಟವಾಗಿ ಗುರುತಿಸಬಹುದಾದ ಅಥವಾ ಅಳತೆಮಾಡಬಹುದಾದ ಏನಾದರೂ ಸಂಬಂಧ ಉ

ಇಂದು ಆದಿತ್ಯವಾರವೆನ್ನುವಾಗ ನಮ್ಮ ಸುತ್ತಲಿನ ನೈಸರ್ಗಿಕ ಘಟನೆಗಳನ್ನು ಪರಿಶೀಲಿಸಿ


ಸ್ಥಿರೀಕರಿಸುವುದು ಸಾಧ್ಯವೇ ? ಉದಾಹರಣೆಗೆ ಹಗಲು, ಗ್ರಹಣ , ಚೈತ್ರ ಬಹುಳ ಸಪ್ತ

ಮುಂತಾದವನ್ನು ಹೀಗೆ ಗುರುತಿಸಬಹುದು.

೨. ದಿವಸಗಳ ಅನುಕ್ರಮ ಕುರಿತದ್ದು . ಅವು ಈಗ ಪ್ರಚಲಿತವಿರುವಂತೆ ಆದಿತ

ಶನಿವಾರದ ತನಕ ಒಂದೇ ಧಾಟಿಯಲ್ಲಿ ಮೆರವಣಿಗೆ ಸಾಗುವುದರ ಕಾರಣವೇನು? ಬೇರೆ

ಸಾಧ್ಯವಿಲ್ಲವೇ ?

೩. ಏಳು ದಿವಸಗಳ ಸಾಪ್ತಾಹಿಕ ಚಕ್ರವೇ ಏಕೆ ? ಏಳಕ್ಕಿಂತ ಸುಲಭವಾದ ಐದು,

ಹದಿನೈದು ಮೊದಲಾದ ಸಂಖ್ಯೆಗಳನ್ನು ಆಯದಿದ್ದುದರ ಕಾರಣವೇನು?

ಈ ಪ್ರಶ್ನೆಗಳಿಗೆ ಉತ್ತರ ಅರಸಲು ನಾವು ಪ್ರಾಚೀನ ನಾಗರಿಕತೆಯ ಮುನ್ನಡೆಯತ್ತ ಲಕ್ಷ್ಮ

ಹರಿಸಬೇಕು.

ಗಗನದೃಶ್ಯಗಳನ್ನು ಅವಲೋಕಿಸಿದ ಪ್ರಾಚೀನ ಮಾನವ ಮೊದಲು ಭಯವಿಸ್ಮಿತನಾದ. ಮು

ಕುತೂಹಲ ತಳೆದ, ಅನ್ವೇಷಕ ಪ್ರವೃತ್ತಿಯಿಂದ ಅವನ್ನು ವೀಕ್ಷಿಸಿದ. ಅವನಿಗೆ ಕಂಡನ

ಚಂದ್ರ ಅವನ ಗಡಿಯಾರ; ೧೨ ಅಮಾವಾಸ್ಯೆ ಅಥವಾ ಹುಣ್ಣಿಮೆ ಸಂದಾಗ ಭೂಮಿಯಲ್ಲಿ

ಒಂದು ಚಕ್ರ ಪೂರ್ತಿಗೊಂಡು ಮುಂದಿನದು ಆರಂಭವಾಗುತ್ತಿತ್ತು; ಅದೇ ವೇ


ಸ್ಥಿರ ನಕ್ಷತ್ರ ಚಿತ್ರಗಳು ಹಿಂದಿನ ವಿನ್ಯಾಸವನ್ನೇ ತಳೆಯುತ್ತಿದ್ದುವು. ಹೀಗೆ ಸಂಖ್ಯೆ ೧೨ಕ್ಕೆ

ಬಂತು .

ಎರಡು ಕ್ರಮಾಗತ ಅಮಾವಾಸ್ಯೆಗಳ ನಡುವಿನ ಅವಧಿ ಸುಮಾರು ೩೦ ದಿವಸಗ

ತಿಂಗಳು. ತಿಂಗಳಿಗೆ ಎರಡು ಪಕ್ಷಗಳು : ಅಮಾವಾಸ್ಯೆಯಿಂದ ಹುಣ್ಣಿಮೆ ತನಕ ಶುಕ್ಲ


೧೦೩
ನಕ್ಷತ್ರ ವೀಕ್ಷಣೆ

ಹುಣ್ಣಿಮೆಯಿಂದ ಅಮಾವಾಸ್ಯೆ ತನಕ ಕೃಷ್ಣ ಪಕ್ಷ . ಪಕ್ಷದ ಅವಧಿ ಸುಮಾರು ೧೫

ಒಂದು ವರ್ಷದಲ್ಲಿ ೨೪ ಪಕ್ಷಗಳಿದ್ದುದರಿಂದ ಈ ಸಂಖ್ಯೆಗೂ ಮಹತ್ತ್ವ ಒದಗಿತ

ವರ್ಷ, ತಿಂಗಳು ಮತ್ತು ಪಕ್ಷ ಎಂಬ ನೈಸರ್ಗಿಕ ಕಾಲಮಾನಕಗಳು ಈ ತೆರನ

ಬಂದುವು. ಆದರೆ ಇವು ವರ್ಷವನ್ನು ನಿಖರವಾಗಿ ಆಳೆಯುವುದಿಲ್ಲ ಎಂಬ ಸಂಗತಿ ಬೇಗನೆ

ಪ್ರಕಟವಾಯಿತು. ಏಕೆಂದರೆ ಚಾಂದ್ರವರ್ಷದ ಅವಧಿ ೩೫೪ ದಿವಸಗಳು , ಋತುಚಕ್ರದ

೩೬೫ ದಿವಸಗಳು. ಚಂದ್ರನನ್ನು ಅವಲಂಬಿಸಿ ವರ್ಷವನ್ನು ಗಣಿಸಿದಾಗ ಕೆಲವೇ ವ

ಋತುಗಳಿಗೂ ಮಾಸಗಳಿಗೂ ನಡುವೆ ತಾಳ ತಪ್ಪಿ ಜನಜೀವನದಲ್ಲಿ ಗೊಂದಲ ಹಣಿಕಿತ

ಕೊರೆಯನ್ನು ಅಧಿಕಮಾಸ ಕ್ಷಯಮಾಸ ಮುಂತಾಗಿ ತೇಪೆಹಾಕಿ ಸರಿಪಡಿಸಲಾಯಿತಾದ

ಮತ್ತು ಪಕ್ಷ ಪದಗಳು ಮೂಲ ಅರ್ಥಗಳಲ್ಲಿಯೇ ಉಳಿದುಕೊಂಡವು.

ಸೂರ್ಯೋದಯದಿಂದ ಮುಂದಿನಸೂರ್ಯೋದಯದ ತನಕ ಸಲ್ಲುವ ಅವಧಿಯ

ನಾಗರಿಕತೆ ಅಭಿವರ್ಧಿಸಿದಂತೆ ಧಾರ್ಮಿಕಾಚರಣೆ, ಕೃಷಿಕಾರ್ಯ, ವಾಣಿಜ್ಯ , ವ್ಯವಹಾರ

ಹಲವು ಹನ್ನೊಂದು ಚಟುವಟಿಕೆಗಳಿಗೆ ಅನುಕೂಲವಾಗುವಂತೆ ದಿವಸಗಳ ನಿರ್ದಿ

ಪರಿಗಣಿಸುವುದು ಅಗತ್ಯವಾಯಿತು. ಉದಾಹರಣೆಗೆ ಪ್ರಾಚೀನ ಈಜಿಪ್ಟಿನಲ್ಲಿ ಹತ್ತು ದಿ

ದಾಶಮಿಕವಾರ ( ದಶಾಹ) ಬಳಕೆಯಲ್ಲಿತ್ತು . ವೈದಿಕರು ಅಮಾವಾಸ್ಯೆ , ಪೌರ್ಣಮ

ಕೆಲವುತಿಥಿಗಳನ್ನು ಅನಧ್ಯಯನ ದಿನಗಳಂದು ಅಂಗೀಕರಿಸಿ ವಿಶ್ರಾಂತಿ ಪಡೆಯುತ್ತಿದ್

ಪಾಕ್ಷಿಕವಾರ , ಹೀಗೆ ಕೆಲಸದ ದಿನಗಳು, ರಜಾ ದಿನಗಳು ಮತ್ತೆ ಕೆಲಸದ ದಿನಗಳು ಎಂಬ ಸ್ಕೂಲ

ಚಕ್ರ ರೂಢಿಗೆ ಬಂತು. ಅಂದರೆ ಮಾನವ ತನ್ನ ಕೆಲಸದ ಅವಧಿಯನ್ನು ನಿಗದಿಗೊಳಿಸುವು

ಅಗತ್ಯವಾಯಿತು. ವೈದಿಕರ ಪಾಕ್ಷಿಕವಾರವಾಗಲೀ ಈಜಿಪ್ಟಿನವರ ದಶಾಹವಾಗಲೀ ಆತನಿಗೆ ತು

ದೀರ್ಘವೆನ್ನಿಸಿರಬೇಕು. ಹೀಗೆ ನೂತನ ವಾರವೊಂದರ ಪ್ರವರ್ತನೆಗೆ ಕಾಲ ಪಕ್ವವಾಯಿತು.

ಕ್ರಿಸ್ತಪೂರ್ವ ೮ನೆಯ ಶತಮಾನದಲ್ಲಿ ಬ್ಯಾಬಿಲೋನಿಯಾದಲ್ಲಿದ್ದ ಕಾಲ್ಮೀಯನ

ಶ್ಯಾಸ್ತ್ರಜ್ಞರು ೭ ದಿವಸಗಳ ವಾರವನ್ನೂ ೨೪ ಗಂಟೆಗಳ ದಿವಸವನ್ನೂ ಬಳಕೆಗೆ ತಂದ ಮೊದಲಿಗರು.

ಪಕ್ಷಾರ್ಧದ ಅವಧಿ ಸುಮಾರು ೭ ದಿವಸಗಳಾಗಿದ್ದುದೂ ಆಕಾಶದಲ್ಲ

ಗೋಚರವಾದುದೂ ಯೋಗಾಯೋಗ, ಸ್ಥಿರನಕ್ಷತ್ರ ಚಿತ್ರಗಳ ಮುನ್ನಲೆಯಲ್ಲಿ ಬುಧ, ಶುಕ್ರ , ಕುಜ

ಗುರು, ಶನಿ ಎಂಬ ೫ ಗ್ರಹಗಳನ್ನೂ ಸೂರ್ಯ , ಚಂದ್ರ ಎಂಬ ೨ ಗಗನ ದೀಪಗಳನ್ನೂ ಅವರು

ಗುರುತಿಸಿದರು . ಈ ೭ ಕಾಯಗಳ ಅಧಿಪತಿಗಳು ದೇವರುಗಳಂದೂ ಇವರು ಮಾನವನ

ಭೂತವರ್ತಮಾನ ಭವಿಷ್ಯತ್ತುಗಳನ್ನು ನಿರ್ಣಯಿಸಬಲ್ಲ ಸರ್ವಶಕ್ತರೆಂದೂ

ಅಂದ ಮೇಲೆ ಈ ದೇವರುಗಳನ್ನು ಪೂಜಿಸುವುದು ಮಾನವನ ಕರ್ತವ್ಯ . ಹೀಗೆ ಅವರು ೭ ದ

ವಾರಚಕ್ರ (ಸಪ್ತಾಹ) ತೊಡಗಿ ಒಂದೊಂದು ದಿವಸಕ್ಕೆ ಒಂದೊಂದು ಕಾಯದ ಹೆಸರಿಟ್

ಆದಿತ್ಯವಾರದ ಅಧಿಪತಿ ಸೂರ್ಯ, ಸೋಮವಾರದ ಅಧಿಪತಿ ಚಂದ್ರ ಇತ್ಯಾದಿ.

ಆದ್ದರಿಂದ ಒಂದನೆಯ ಪ್ರಶ್ನೆಗೆ ಉತ್ತರವಿದು: ಯಾವುದೇ ದಿವಸಕ್ಕೂ ಅದರ ಹೆಸರಿಗ

ಕಾರಣವಾಗಿರುವ ಆಕಾಶಕಾಯಕ್ಕೂ ನಡುವೆ ಸ್ಪಷ್ಟವಾಗಿ ಗುರುತಿಸಬಹುದಾದ ಅಥ

ಮಾಡಬಹುದಾದ ಯಾವ ಸಂಬಂಧವೂ ಇಲ್ಲ . ಇದೊಂದು ಪೂರ್ತಿ ಮಾನವಕಲ್ಪಿತ ಭಾವನ


ನಕ್ಷತ್ರ ವೀಕ್ಷಣೆ

ಸಂಬಂಧ, ಇಂದು ಗುರುವಾರ ಎಂದಾಗ ಆಕಾಶದಲ್ಲಿ ಅದನ್ನು ಸಮರ್ಥಿಸುವ ಯಾವ ಘ

ಕಾಣಸಿಗದು. ಬಾನಿನಲ್ಲಿ ದಿವಸದ ಹೆಸರು ಪ್ರಕಟವಾಗುವುದಿಲ್ಲ .

ಹೆಸರುಗಳ ಸರಣಿಯಲ್ಲಿ ನಿರ್ದಿಷ್ಟ ಕ್ರಮ ಉಂಟೆಂಬುದು ನಮಗೆ ತಿಳಿದಿದೆ

ಹಿಂದಿನ ದಿವಸವೆಂದೂ ಸೋಮವಾರವಾಗದು, ಅದು ಮಂಗಳವಾರವೇ ; ಮರ

ಶುಕ್ರವಾರವಾಗದು, ಅದು ಗುರುವಾರವೇ . ಇದೇ ಕ್ರಮ ಏಕೆ? ಇದು ಏಕೈಕವೇ ? ಗಣಿತ

ಅಲ್ಲ ಎಂದು. ವಾಸ್ತವವಾಗಿ ಆದಿತ್ಯವಾರದಿಂದ ಶನಿವಾರದ ತನಕದ ೭ ದಿವಸಗಳನ್ನು ೭೨೦ ವ

ಸರಣಿಗಳಲ್ಲಿ ಅಳವಡಿಸಬಹುದು. ಆ ಪೈಕಿ ಈಗ ಚಾಲ್ತಿಯಲ್ಲಿರುವ ಅಳವಡಿಕೆ ಅಥವ

ಒಂದು ಮಾತ್ರ . ಇದನ್ನೇ ಕಾಯನರು ಆಯ್ತುದೇಕೆ?

ಈ ಪ್ರಶ್ನೆಗೆ ಉತ್ತರ ಪಡೆಯಲು ಖುದ್ದು ಆಕಾಶವನ್ನೇ ಹಲವು ದಶಕಪರ್ಯಂತ ವೀಕ್ಷಿಸ

ಅಪೇಕ್ಷಣೀಯ . ಅಂದಿನ ಕಾಲ್ಮೀಯನರಿಗೆ ಯಾವ ದೃಶ್ಯ ಕಂಡಿತೋ ಇಂದಿನ ನಮಗೂ ಅದೇ

ಕಾಣುತ್ತದೆ. ಸ್ಥಿರ ನಕ್ಷತ್ರ ಚಿತ್ರಗಳ ಪರದೆಯ ಮುಂಗಡೆ ಏಳು ಕಾಯಗಳು ಭೂಮಿಯನ್ನು ಪ

ಪೂರ್ವದಿಶೆಯಲ್ಲಿ ಪರಿಭ್ರಮಿಸುತ್ತಿರುವಂತೆ ಭಾಸವಾಗುತ್ತದೆ. ಪರಿಭ್ರಮಣ

ಅವರೋಹೀ ಕ್ರಮದಲ್ಲಿ ಅಳವಡಿಸಿದರೆ ಈ ಮುಂದಿನಂತಿರುವುದು :

೨೯ . ೫ ವರ್ಷ ಶನಿಯ ಅವಧಿ

೧೧ . ೮೬ ವರ್ಷ ಗುರುವಿನ ಅವಧಿ

೧ . ೮೮ ವರ್ಷ ಕುಜನ ಅವಧಿ

ವರ್ಷ ಸೂರ್ಯನ ಅವಧಿ

೦ .೬೨ ವರ್ಷ ಶುಕ್ರನ ಅವಧಿ

೧ . ೨೪ ವರ್ಷ ಬುಧನ ಅವಧಿ

೦. ೦೭ ವರ್ಷ ಚಂದ್ರನ ಅವಧಿ

ಈ ಅವಧಿಗಳಿಗೂ ಭೂಮಿಯಿಂದ ಕಾಯಗಳಿಗಿರುವ ದೂರಗಳಿಗೂ ನಡುವೆ ಏನ

ಸಂಬಂಧವಿರಬಹುದೇ ? ಇದೆ. ನಾವು ನೇರ ಹಾದಿಯಲ್ಲಿ ಅತಿವೇಗವಾಗಿ ಪಯಣಿಸುತ

ದೂರದ ವಸ್ತುಗಳು ಕಡಿಮೆ ವೇಗದಿಂದಲೂ ಹತ್ತಿರದ ವಸ್ತುಗಳು ಜಾಸ್ತಿ ವೇಗದಿಂದಲೂ ಎದುರು

ದಿಶೆಯಲ್ಲಿ ಸರಿದಂತೆ ಭಾಸವಾಗುವುದು ಸರಿಯಷ್ಟೆ . ಆದ್ದರಿಂದ ಕಡಿಮೆ ವೇಗ

ಇವೆಯೆಂದೂ ಜಾಸ್ತಿ ವೇಗದವು ಹತ್ತಿರ ಇವೆಯೆಂದೂ ತರ್ಕಿಸುವುದು ಸಾಧುವಾಗಿದೆ. ಈ ತರ್

ಭೂಮಿ ಎಂಬ ವಾಹನಾರೂಢರಾದ ನಾವು ನಮಗೆ ಕಾಣುವ ಆಕಾಶಕ್ಕೆ ಅನ್ವಯಿಸಿದರೆ ದೊರ

ಫಲಿತಾಂಶ ಏನು ? ನಮ್ಮಿಂದ ಶನಿ ಅತಿ ದೂರದಲ್ಲಿದೆ; ಅಲ್ಲಿಂದ ಅವರೋಹ

ಅನುಕ್ರಮವಾಗಿ ಗುರು , ಕುಜ , ಸೂರ್ಯ, ಶುಕ್ರ , ಬುಧ ಮತ್ತು ಚಂದ್ರ ಇವೆ. ಕಾ

ಸೂಕ್ಷ್ಮವನ್ನು ಗ್ರಹಿಸಿದ್ದ ಗಣಿತನಿಶಿತಮತಿಗಳಾಗಿದ್ದರು.

ಒಂದು ವರ್ಷದಲ್ಲಿ ಸುಮಾರಾಗಿ ೨೪ ಪಕ್ಷಗಳಿವೆಯೆಂದು ಹಿಂದೆ ಹೇಳಿದೆ

ಸಂಖ್ಯೆಯಿಂದ ಸ್ಫೂರ್ತಿ ಪಡೆದ ಅವರು ಎರಡು ಅನುಕ್ರಮ ಸೂರ್ಯೊದ

ಅವಧಿಯಾದ ದಿವಸವನ್ನು ಗಣನೆಯ ಸೌಕರ್ಯಕ್ಕಾಗಿ ೨೪ ಸಮಭಾಗಗಳಾಗಿ


ನಕ್ಷತ್ರ ವೀಕ್ಷಣೆ ೧೦ ೫

ಇವೇ ೨೪ ಗಂಟೆಗಳು. ಈ ವಿಭಾಗೀಕರಣವೂ ಪೂರ್ತಿ ಮಾನವಕಲ್ಪಿತ, ಬಾನಿನಲ್ಲಿ ಗಂಟೆಯ

ನೇರವಾಗಿ ಪ್ರಕಟಿಸುವ ಗಡಿಯಾರ ಇಲ್ಲ .

ದಿವಸದ ಒಂದೊಂದು ಗಂಟೆಗೆ ಅತಿ ದೂರದ ಶನಿಯಿಂದ ಅತಿ ಸಮೀಪದ ಚಂದ್ರನವರೆಗ

೭ ದೇವರುಗಳನ್ನು ಅದೇ ಕ್ರಮದಲ್ಲಿ ಅದ್ದಿ ಪತಿಗಳೆಂದು ನೇಮಿಸಲಾಯ

ಸೂರ್ಯೋದಯವಾಗುವಾಗಿನ ಗಂಟೆಯ ಅಧಿಪತಿಯ ಹೆಸರನ್ನೇ ಆ ದಿವಸಕ್ಕೂ ಇಡಲಾಯಿತ

ಉದಾಹರಣೆಗೆ ಇಂದು ಸೂರ್ಯೋದಯವಾಗುವಾಗಿನ ಗಂಟೆಯ ಅಧಿಪತಿ ಸೂರ್ಯನೇ

ಆದ್ದರಿಂದ ಇಂದು ಸೂರ್ಯವಾರ ಅಥವಾ ಭಾನುವಾರ, ಇಂದಿನ ಗಂಟೆಗಳ ಅಧಿಪತಿಗಳ

ಮುಂದಿನಂತಿರುವರು : ಒಂದನೆಯದು ಸೂರ್ಯ, ಎರಡನೆಯದು ಶುಕ್ರ , ಮೂರನೆಯದ

ನಾಲ್ಕನೆಯದು ಚಂದ್ರ , ಐದನೆಯದು ಶನಿ, ಆರನೆಯದು ಗುರು, ಏಳನೆಯದು ಕುಜ, ಎಂಟನೆಯ

ಅಂತೆಯೇ ಹದಿನೈದನೆಯದು ಮತ್ತು ಇಪ್ಪತ್ತೆರಡನೆಯದು ಪುನಃ ಸೂರ್ಯ, ಇಪ್ಪತ್ತಮೂರ

ಶುಕ್ರ ಮತ್ತು ಇಪ್ಪತ್ತನಾಲ್ಕನೆಯದು ಬುಧ. ಆದ್ದರಿಂದ ಇಪ್ಪತೈದನೆಯದು ಚಂದ್ರ

ಇಪ್ಪತೈದನೆಯ ಗಂಟೆ ಎಂಬುದು ನಾಳಿನ ಒಂದನೆಯ ಗಂಟೆ. ಹೀಗೆ ನಾಳಿನ ಒಂದನೆಯ ಗಂಟೆಯ
ಅಧಿಪತಿ ಚಂದ್ರ ಆಗುತ್ತದೆ. ಆದ್ದರಿಂದ ನಾಳ ಚಂದ್ರವಾರ ಅಥವಾಸೋಮವಾರ, ಭಾನುವಾ

ಮರುದಿನಸೋಮವಾರ ಬರುವುದರ ಕಾರಣವಿದು. ಇದೇ ರೀತಿ ಮುಂದುವರಿದರೆ ಏಳು ದಿವಸಗಳ

ಒಂದು ಚಕ್ರವನ್ನು ಈಗ ಚಾಲ್ತಿಯಲ್ಲಿರುವ ಕ್ರಮದಲ್ಲಿ ಪೂರ್ತಿಗೊಳಿಸಿ ಪುನಃ ಆದಿತ್ಯವ


ಮರಳಿರುತ್ತೇವೆ.

ಆದ್ದರಿಂದ ಎರಡನೆಯ ಪ್ರಶ್ನೆಗೆ ಉತ್ತರವಿದು: ದಿವಸಗಳ ಅನುಕ್ರಮ ಈಗ ಪ್ರಚಲಿತವಿರುವ

ಆದಿತ್ಯವಾರದಿಂದ ಶನಿವಾರದ ತನಕ ಅದೇ ಧಾಟಿಯಲ್ಲಿ ಮೆರವಣಿಗೆ ಸಾಗುವುದರ ಹಿಂದೆ

ವೈಜ್ಞಾನಿಕ ಚಿಂತನೆ ಉಂಟು. ಈ ಚಿಂತನೆ ಆಕಾಶಕಾಯಗಳ ದೂರ ಅಥವಾ ಅವಧಿಗಳಿ

ಪ್ರಭಾವಿತವಾಗಿದೆ. ಕಾಯಗಳ ದೂರ ಅಥವಾ ಅವಧಿಗಳು ನಿರ್ದಿಷ್ಟ ಕ್ರಮದಲ್ಲಿಯೇ ಇರುವುದರಿಂದ

ದಿವಸಗಳ ಅನುಕ್ರಮ ಈಗಿರುವಂತೆ ರೂಢಿಗೆ ಬಂದಿದೆ. ಆದರೆ ಆಯಾ ಕಾಯಕ್ಕೆ ಅದರ ಹೆ

ಹೊತ್ತಿರುವ ದಿವಸದ ಮೇಲೆ ಯಾವ ಪ್ರಭಾವವೂ ಇರುವುದಿಲ್ಲ ,

ವಾಸ್ತವವಾಗಿ ದಿವಸದ ಹೆಸರಿಗೂ ವ್ಯಕ್ತಿಗೆ ಸಂಭವಿಸಬಹುದಾದ ಶುಭಾಶುಭಗಳಿಗೂ ನಡುವೆ

ಯಾವ ಸಂಬಂಧವೂ ಇಲ್ಲ . ದಿವಸದ ಗಳಿಗೆಗೂ ಉದ್ದಿಷ್ಟಕಾರ್ಯಕ್ಕೆ ಒದಗಬಹುದಾದ

ಜಯಾಪಜಯಗಳಿಗೂ ನಡುವ ಯಾವ ಸಂಬಂಧವೂ ಇಲ್ಲ. ಇಸವಿ ಸಂಖ್ಯೆ ಅಥವಾ ಸಂವತ್ಸ

ನಾಮಕ್ಕೂ ಸಂವತ್ಸರ ಫಲಕ್ಕೂ ನಡುವೆ ಯಾವ ಸಂಬಂಧವೂ ಇಲ್ಲ . ರಾಹುಕಾಲ, ಭರಣಿ ಕೃತಿಕೆ,

ಶೂನ್ಯ ಮಾಸ , ಗ್ರಹಣ ಮಹೂರ್ತ ಮುಂತಾದವುಗಳ ಸುತ್ತ ಹೆಣೆದು ಕೊಂಡಿರುವ ಅಳು

ಅಂಜಿಕೆಗಳಿಗೆ ಯಾವ ಭೌತ ಅಥವಾ ಖಗೋಳವೈಜ್ಞಾನಿಕ ಆಧಾರವೂ ಇಲ್ಲ . ವ್ಯಕ್ತಿಯ

ಹಿತಾಹಿತಗಳನ್ನಾಗಲಿ ಭವಿಷ್ಯ ಜೀವನವನ್ನಾಗಲಿ ಪ್ರಭಾವಿಸುವ ಅಥವಾ ನಿಯಂತ್ರಿಸುವ ಯಾವ

ಅತಿಮಾನವ ಶಕ್ತಿಯೂ ಇಲ್ಲ . ನಾವು ನಮ್ಮ ಸೌಕರ್ಯಕ್ಕೋಸ್ಕರ ನಿರ್ಮಿಸಿರುವ ಕಾಲಗಣನೆ

ಖುದ್ದು ನಾವೇ ಹೆದರುವ ಅಗತ್ಯ ಖಂಡಿತ ಇಲ್ಲ . ದೇವರು ಕೂಡ ಅಷ್ಟೆ :ಕೇವಲ ಮಾನವ ಕಲ್ಪನೆ.

ಈಗ್ಗೆ ಸುಮಾರು ೨೮೦೦ ವರ್ಷಗಳ ಹಿಂದೆ ಕಾಲ್ಮೀಯನ್ನರು ಪ್ರವರ್ತಿಸಿದ ನಿಷ್ಕಷ್ಟ, ವೀಕ್ಷಣೆ,

ವೈಜ್ಞಾನಿಕ ವಿಶ್ಲೇಷಣೆ, ನಿಗಮಿಸಿದ ತತ್ರ್ಯ ಮತ್ತು ವಿಧಿಸಿದ ಸೂತ್ರ ನಮ್ಮನ್ನು ಬೆರಗುಗೊಳಿಸುವ


೧೦೬
ನಕ್ಷತ್ರ ವೀಕ್ಷಣೆ

ಇವುಗಳಿಗೆ ತೀರ ವೈದೃಶ್ಯವಾಗಿ ನಮ್ಮಲ್ಲಿ ಅನೇಕ ಮಂದಿ ಆಧುನಿಕ ವಿಜ್ಞ


ಖಾಸಗಿ ಬದುಕಿನಲ್ಲಿಯೂ ಸಾರ್ವಜನಿಕ ರಂಗದಲ್ಲಿಯೂ ವರ್ತಿಸುವ ಪರಿ ಗಮನಿಸ

ಪುರಂದರದಾಸರ ಮಾತಿನಲ್ಲಿ ಹೇಳುವುದಾದರೆ , " ನಗೆಯು ಬರುತಿದೆ ಎನಗೆ, ನಗೆಯು ಬರ

ಭೂಮಿಯ ಆಕಾರ

ವೇದೋಕ್ತಸಂಗತಿ

A Concise History of Science in India ಗ್ರಂಥದಲ್ಲಿ ಎಸ್ . ಎನ್ . ಸೇನ್ ಬರೆದಿದ್ದಾ

"ಭೂಮಿಯ ಗೋಳಾಕಾರತ್ವದ ಬಗ್ಗೆ ವೇದಕಾಲದ ಹಿಂದೂಗಳ ಕಲ್ಪನೆ ಏನಿತ್ತೆಂದು ಖಚಿತವ

ಹೇಳುವುದು ಕಠಿಣ.'ಭೂಮಿ ವಾಯುಮಂಡಲದಲ್ಲಿ ಮುಕ್ತವಾಗಿ ತೇಲುತ್ತದೆ. ನೇಸರು ಮ

ಮುನ್ನ ನಸುಕು ಹರಿಯುತ್ತದೆ' ಎಂದು ಮುಂತಾಗಿ ಋಗೈದದಲ್ಲಿ (ಕ್ರಿ . ಪೂ . ಸು ೧೫೦೦

ಪ್ರಾಸಂಗಿಕ ವರ್ಣನೆಗಳಿಂದ ಅವರಿಗೆಗೋಳಾಕಾರತ್ವದ ಹೊಳಹು ಮಿನುಗಿತ್ತೆಂದು ಊಹಿಸ

ಈ ಊಹೆಗೆ ಆಧಾರವಾಗಿ ಏನಾದರೂ ಪ್ರಾಯೋಗಿಕ ಸಮರ್ಥನೆ ಇತ್ತೇ

ತಿಳಿದಿಲ್ಲ .

ಗ್ರೀಕ್ ಮೊದಲಿಗರು

- ಗ್ರೀಕ್ ತತ್ವಜ್ಞಾನಿ ಮೈಲೇಟಸಿನ ತೇಲ್ಸ್ (ಕ್ರಿಪೂ ೬೨೪- ೫೪೬) ಕುಂಚಿಸಿರುವ ಚಿತ್ರ

"ಭೂಮಿ ಉಬ್ಬು ತಗ್ಗುಗಳಿಂದ ಕೂಡಿರುವ ಅತಿ ವಿಸ್ತಾರ ಫಲಕ. ಇದು ನಕ್ಷತ್

ಗೋಳಾರ್ಧದಿಂದ ಆವೃತವಾಗಿ ಈ ಒಟ್ಟು ರಚನೆ ಅಸೀಮ ಜಲಸಾಗರದಲ್ಲಿ ತೇಲುತ್ತಿದೆ

ತೇಲ್ಸ್ನ ಶಿಷ್ಯ ಅನಾಕ್ಸಿಮ್ಯಾಂಡರ್‌, ಕ್ರಿಪೂ ೬೧೦- ಸು ೫೪೬ , ವಿವರಿಸಿದ ಪ

ಸುತ್ತುವರಿದಿರುವ ಆಕಾಶ ಕಣ್ಣಿಗೆ ಕಾಣುವಗೋಳಾರ್ಧ ಮಾತ್ರವೇ ಅಲ್ಲ , ಕಾಣದ ಅರ್ಧವೂ

ಪೂರ್ಣಗೋಳವಾಗಿದೆ. ಇದು ಧ್ರುವನಕ್ಷತ್ರದ ಸುತ್ತ ಆವರ್ತಿಸುತ್ತಿದೆ".

ನೆಲದ ಮೇಲೆ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಪಯಣಿಸಿದಂತೆ ನಕ್ಷತ್ರ ಚಿತ್ರಗಳ ನೆಲೆ

ಕಂಡುಬರುವ ವ್ಯತ್ಯಾಸಗಳನ್ನು ಈತ ಗಮನಿಸಿದ್ದ. ಉದಾಹರಣೆಗೆ ಉತ್ತರಾಭಿಮ

ಧ್ರುವನಕ್ಷತ್ರ ವೀಕ್ಷಕನ ಖಮಧ್ಯದ( ನೆತ್ತಿ ಬಿಂದು) ಸನಿಹಕ್ಕೆ ಸರಿಯುತ್ತದೆ. ಭೂಮಿ ದಕ್ಷಿಣ

ಉತ್ತರಕ್ಕೆ ವಕ್ರವಾಗಿರುವುದರಿಂದ ಹೀಗಾಗುವುದೆಂದು ವಿವರಿಸಿದ. ಪಶ್ಚಿಮದಿಂದ ಪೂರ

ವಕ್ರವಾಗಿರಬಹುದೆಂಬ ಭಾವನೆ ಈತನಿಗೆ ಸುಳಿದಂತಿಲ್ಲ . ಏಕೆಂದರೆ ಈತನ ಭೂಮಿ

ಸಿಲಿಂಡರ್!

ಗೋಳಾಕಾರದ ಕಲ್ಪನೆ

ಭೂಮಿಯ ಆಕಾರ ಸಿಲಿಂಡರಿನಿಂದ ಗೋಳಕ್ಕೆ ಬಡ್ತಿ ಪಡೆಯಲು ಕ್ರಿಪೂಸು ೫೮೨- ಸು

ಅವಧಿಯಲ್ಲಿ ಬಾಳಿದ ಗ್ರೀಕ್ ತತ್ತ್ವಜ್ಞಾನಿ ಪೈತಾಗೊರಸ್ ರಂಗಪ್ರವೇಶಿಸುವ

ಕಾಯಬೇಕಾಯಿತು. ಇವನು ತೇಲ್ಸ್ ಮತ್ತು ಅನಾಕ್ಸಿಮ್ಯಾಂಡರ್‌ ಇಬ್ಬರ ಜೊ

ಗೈದು ಅವರಿಂದ ಸ್ಫೂರ್ತಿ ಪಡೆದಿರಬಹುದು.


೧೦೭
ನಕ್ಷತ್ರ ವೀಕ್ಷಣೆ

* ಕೆಲವು ದಿವಸ ಪರ್ಯಂತ 'ಸಂಜೆಯ ತಾರೆ' ಯಾಗಿ ಕಂಗೊಳಿಸುವ ಶುಕ್ರ , ಮುಂದೆ

ಕಾಲಾನಂತರ ' ಮುಂಜಾನೆಯ ನೀರೆ' ಯಾಗಿ ಮೆರೆಯುವ ವಿಚಿತ್ರವಿದ್ಯಮಾನ ( ಚಿತ್ರ ೩೫) ಗಮನಿಸಿದ

ಪೈತಾಗೊರಸ್ ಇವೆರಡು ' ತಾರೆ' ಗಳೂ ಒಂದೇ ' ತಾರೆ' ಯ ಎರಡು ದರ್ಶನಗಳೆಂದು

ಭೂಮಿ ಗೋಳಾಕಾರವಾಗಿರುವುದರಿಂದ ಇದು ಸಾಧ್ಯವೆಂಬುದು ಅವನ ತರ್ಕ . ಇಂದು

ತಿಳಿದಿದೆ ಸಾಯಂಕಾಲದ ಮತ್ತು ಮುಂಜಾನೆಯ ತಾರೆಗಳು ಒಂದೇ ಕಾಯ ನಿಜ, ಆದರೆ ಅದ

ನಕ್ಷತ್ರವಲ್ಲ , ಗ್ರಹ. ಹೆಸರು ಶುಕ್ರ .

- ಭೂಮಿ ಗೋಳಾಕಾರವಾಗಿದೆ ಎಂಬ ವಾದವನ್ನು ಮೊದಲು ಮಂಡಿಸಿದಾತ ಪೈತಾಗೊರಸ್

ಆದರೆ ಪ್ರಾಯೋಗಿಕ ಸಮರ್ಥನೆ ?

ಪ್ರಾಚೀನ ಕೊಪರ್ನಿಕಸ್

ಇಷ್ಟಾಗುವಾಗ ಜ್ಯಾಮಿತಿ ಸಾಕಷ್ಟು ಪ್ರವರ್ಧಿಸಿತು. ಬೆಟ್ಟ ಹತ್ತದೆ ಅದರ ಎತ್ತರ ಗಣಿಸ

ಅಂತೆಯೇ ಚಂದ್ರ , ಸೂರ್ಯ, ಗ್ರಹಗಳಿಗೆ ಹೋಗದೆ(?) ಅವುಗಳ ದೂರ ನಿರ್ಧರಿಸುವ

ತಿಳಿಯಿತು. ಇಂಥ ಪರಿಸರದಲ್ಲಿ ಅರಳಿದವ ಗ್ರೀಕ್ ತತ್ತ್ವಜ್ಞಾನಿ ಅರಿಸ್ಟಾರ್ಕಸ್ (ಕ್ರಿಪೂ

೨೫೦).

ಚಂದ್ರ , ಸೂರ್ಯ ಮತ್ತು ಗ್ರಹಗಳ ಬಗೆಬಗೆಯ ಚಲನೆಗಳ ವರಿಸೆಗಳನ್ನು ವಿವರಿಸ

ಸೃಷ್ಟಿಸಲಾದ ಗಣಿತ ಸಿದ್ದಾಂತ ಆಗ ಸಾಕಷ್ಟು ಸಿಕ್ಕುಗಳಲ್ಲಿ ಜಡೆಗಟ್ಟಿ ವಾಸ್ತವತೆಯನ

ಜಟಿಲತೆಯಿಂದ ವಿಜೃಂಭಿಸುತ್ತಿತ್ತು ! ವೇದಿಕೆಯೇ ಆಧಾರರಹಿತವಾಗಿದ್ದುದು ಇದ

ಸ್ಥಿರವಾಗಿ ಕೇಂದ್ರದಲ್ಲಿ ನೆಲಸಿದೆ, ಇದರ ಸುತ್ತ ಕಾಯಗಳು ಪರಿಭ್ರಮಿಸುತ್ತಿವೆ, ಈ ಚಲನೆಗಳನ್

ವಿವರಿಸುವುದು ಗಣಿತದ ಧೈಯ - ಇದು ಅಂದಿನ ವಾದ ರೀತಿ. "ವ್ಯಕ್ತಿ ಯಾರೆಂದು ಹೇಳು. ಈಗ

ನಿಯಮ ಏನು ಎಂದು ಹೇಳುತ್ತೇನೆ" ಎಂಬ ಸರ್ವಾಧಿಕಾರ ನೀತಿ.

ಇದು ಸರಿ ಅಲ್ಲ . ಬದಲು ಸೂರ್ಯ ಸ್ಥಿರವಾಗಿ ಕೇಂದ್ರದಲ್ಲಿ ನೆಲಸಿದ್ದು ಕಾಯಗಳೆಲ

ಇದರ ಸುತ್ತ ಪರಿಭ್ರಮಿಸುತ್ತಿವೆಯೆಂದು ಅಂಗೀಕರಿಸಿದರೆ ಈ ಸಿಕ್ಕುಗಳು ತಂತಾನೇ ಬಿಡಿಸಿಕೊ

ಚಿತ್ರ ಸ್ಪುಟವಾಗುವುದೆಂದು ಅರಿಸ್ಸಾರ್ಕಸ್ ವಾದಿಸಿವೆ. ಸೂರ್ಯಕೇಂದ್ರವಾದದ ಪ

ಪ್ರವರ್ತಕನಾದ ಈತನನ್ನು ಪ್ರಾಚೀನ ಕೊಪರ್ನಿಕಸ್ ಎಂದು ಹೇಳುವುದುಂಟು. ಆದರೆ

ಪಕ್ವವಾಗಿರಲಿಲ್ಲ . (ಕೊಪರ್ನಿಕಸನ, ಕ್ರಿ ಶ ೧೪೭೩ - ೧೫೪೩ , ಕಾಲದಲ್ಲಿಯೂ ಅಷ್ಟೆ ) ಹೀಗಾಗಿ

ಅರಿಸ್ಟಾರ್ಕಸನ ವಾದ ಇತಿಹಾಸದ ಮೊಡಕು ಮೂಲೆಗಳಲ್ಲಿ ಮರೆಯಾಯಿತು.

- ಸೂರ್ಯ, ಚಂದ್ರ ಯಾವುದು ಹತ್ತಿರ ? ಬರಿಗಣ್ಣಿಗೆ ಎರಡೂ ಒಂದೇ ದೂರದಲ್ಲಿ ಇರುವಂ

ಕಾಣುತ್ತವೆ. ಅರಿಸ್ಟಾರ್ಕಸ್ ವಾದಿಸಿದ, "ಸೂರ್ಯಪ್ರಕಾಶವನ್ನು ಪ್ರತಿಫಲಿಸಿ ಚಂದ

ಚಂದ್ರನ ಕಲೆ ಅರ್ಧವಾಗಿರುವಾಗ ನೆರಳು ಮತ್ತು ಬೆಳಕು ಭಾಗಗಳನ್ನು ಬೇರ್ಪಡಿಸ

ಕೇಂದ್ರದಮೂಲಕ ಹಾಯುವುದರಿಂದ ಭೂಮಿ-ಸೂರ್ಯರೇಖೆ ಚಂದ್ರನಲ್ಲಿ ೯೦° ರಚಿಸುತ್ತದ

ಸೂರ್ಯ, ಚಂದ್ರರ ನಡುವಿನಕೋನಾಂತರವನ್ನು (x ) ವಾಸ್ತವ ವೀಕ್ಷಣೆಯಿಂದ ಅಳೆದು

ದೂರಗಳ ನಿಷ್ಪತ್ತಿಯನ್ನು ಗಣಿಸಬಹುದು."


೧೦ ೮
ನಕ್ಷತ್ರ ವೀಕ್ಷಣೆ

ಈ ವಾದ ಸರಿ. ಆದರೆ ಅರಿಸ್ಸಾರ್ಕಸನ ಕರಡು (ಕುರುಡು ಕೂಡ) ಉಪಕರಣ

ಬೆಲೆ ನಿಜ ಬೆಲೆಗಿಂತ ಸುಮಾರು ೩° ಕಡಿಮೆ ಇತ್ತು . ನಿಜ ಬೆಲೆ ೮೯° ೫೦'. ಹೀಗಾಗಿ ಚಂ
ಸೂರ್ಯ ೨೦ ಮಡಿ ದೂರದಲ್ಲಿದೆಯೆಂದೂ , ಈ ಕಾರಣದಿಂದ, ಸೂರ್ಯವ್ಯಾಸ

೨೦ ಮಡಿ ಅಥವಾ ಭೂವ್ಯಾಸದ ಸುಮಾರು ೭ ಮಡಿ ದೊಡ್ಡದಿದೆಯೆಂದೂ ತಿಳಿಯಿ

ಪ್ರಯೋಗಲಭ್ಯ ಪುರಾವೆ

ಇಲ್ಲಿಯ ತನಕ ಹೆಚ್ಚು ಕಡಿಮೆ ಸಿದ್ದಾಂತಕುಶಲಿಗಳ, ತರ್ಕಪಂಡಿತರ ಮತ್ತು

ಆಡುಂಬೊಲವಾಗಿದ್ದ ಗ್ರೀಕ್ ವಿಜ್ಞಾನ ಆರ್ಕಿಮಿಡೀಸನ (ಕ್ರಿಪೂಸು ೨೮೭


ಆಗಮನದೊಂದಿಗೆ ತನ್ನ ಸುರಕ್ಷಿತ ' ಮಡಿ' ಕ್ಷೇತ್ರವನ್ನು ಪ್ರಯೋಗ ಪರಿಣತಮತಿಗಳ

ವ್ಯವಹಾರಗಳಿಗೆ ತೆರೆದುಕೊಟ್ಟಿತು. ಆದರೆ ಸ್ವತಃ ಆರ್ಕಿಮಿಡೀಸ್ ಖಗೋಳವಿಜ್ಞಾನಕ್ಕ


ಕಿ
ಕೊಡುಗೆ ಸಲ್ಲಿಸಿರುವನೋ ಇಲ್ಲವೋ ತಿಳಿಯದು.

ಇವನು ಕಟ್ಟಿದ ಪಂಚಾಂಗದ ಮೇಲೆ ನಿಂತು ಭೂಮಿಯ ಗೋಳಾಕಾರತ್ವಕ್ಕೆ

ಪ್ರಮಾಣ ನೀಡಿದವ ಇವನ ಮಿತ್ರ ಎರಟೋಸ್ಟನೀಸ್ (ಕ್ರಿಪೂಸು ೨೭೬ - ಸು ೧೯೬). ಈತ ಪ್ರಾಯ

ಖಗೋಳವಿಜ್ಞಾನಿ, ಗಣಿತಪಾರಂಗತ. ಕಾರ್ಯಕ್ಷೇತ್ರ ಅಲೆಕ್ಸಾಂಡ್ರಿಯಾ. ಇಲ್

ಕಿಮೀ ಸಾಧಾರಣ ನೇರ ದಕ್ಷಿಣಕ್ಕೆ ಸೀಯೇನ್ ( ಆಧುನಿಕ ಆಸ್ವಾನ್) ಇದೆ. ಇವೆರಡು ನಗರಗ

ಸಂಬಂಧಿಸಿದಂತೆ ಒಂದು ವಿಶೇಷ ವಿದ್ಯಮಾನ ಇವನ ಗಮನಕ್ಕೆ ಬಂದಿತು. ಸೀಯೇನಿ

ಲಂಬವಾಗಿ ನೆಟ್ಟ ಸರಳಿಗೆ ಕರ್ಕಸಂಕಾತ್ರಿಯ (ಜೂನ್ ೨೨) ಮಧ್ಯಾಹ್ನ ನೆರಳೇ ಇ

ಅಲೆಕ್ಸಾಂಡ್ರಿಯಾದಲ್ಲಿಯ ಸದೃಶ ಸರಳಿಗೆ ನೆರಳಿತ್ತು . ಸೂರ್ಯ

ಖಮಧ್ಯದಲ್ಲಿದ್ದು ಅಲೆಕ್ಸಾಂಡ್ರಿಯಾದ ಖಮಧ್ಯದಲ್ಲಿರದಿದ್ದರೆ ಮಾತ್ರ ಇದು ಸಾಧ್ಯ .

ಸೂರ್ಯನಿಂದ ಬರುವ ಕಿರಣಗಳೆಲ್ಲವೂ ಸಮಾಂತರವೆಂದು ತಿಳಿದಿತ್ತು . ಅಂದ

ಮಟ್ಟಸ ಅಥವಾ ಚಪ್ಪಟೆ ಆಗಿರುವುದಾದ ಪಕ್ಷ ನೆಲಕ್ಕೆ ಲಂಬವಾಗಿ ಬೇರೆ ಬೇರೆ ಎಡೆಗಳಲ್ಲಿ ನ

ಸಮ ಉದ್ದದ ಸರಳುಗಳು ನಿರ್ದಿಷ್ಟ ಕ್ಷಣದಲ್ಲಿ ಸಮ ಉದ್ದದ ನೆರಳುಗಳನ್ನೇ ಕೆಡ

ಸ್ಪಷ್ಟ . ವಾಸ್ತವ ಪರಿಸ್ಥಿತಿ ತದ್ವಿರುದ್ದ : ಸೀಯೇನಿನಲ್ಲಿ ನೆರಳಿಲ್ಲ , ಅಲೆಕ್ಸಾಂಡ್ರಿಯಾದಲ್

ಭೂಮಿಯ ವಕ್ರತೆಯೇ ಇದರ ಕಾರಣವೆಂದು ಎರಟೋಸ್ಟನೀಸ್ ತರ್ಕಿಸಿದ.

ಅವನೆಸಗಿದ ಪ್ರಯೋಗ ಅತಿ ಸರಳ, ಕರ್ಕಸಂಕ್ರಾಂತಿಯ ಮಧ್ಯಾಹ್ನ ಅಲೆಕ್ಸಾಂಡ್

ಸೂರ್ಯನ ಖಮಧ್ಯದೂರ ಅಳದ . ಇದು ೭೦ , ಸೀಯೇನ್- ಅಲೆಕ್ಸಾಂಡ

ತಿಳಿದಿದ್ದುದರಿಂದ, ಭೂಮಿಯನ್ನು ಗೋಳವೆಂದು ಭಾವಿಸಿ, ಈ ಗೋಳದ ಪರಿಧಿ ಗಣಿಸಿದ.

ದೊರೆತ ಬೆಲೆ ಸುಮಾರು ೪೧ , ೧೪೦ ಕಿಮೀ . ಇಂದಿನ ಖಚಿತ ಬೆಲೆಗೆ (ಸುಮಾರು ೪೦, ೦೦೦ ಕ

ಇದು ಸನ್ನಿಹಿತವಾಗಿದೆ ಎಂಬುದು ಗಮನಾರ್ಹ.

ಈ ಪ್ರಯೋಗ ಯಶಸ್ವಿ ಆಗಬೇಕಾದರೆ ಉಭಯ ಸ್ಥಳಗಳೂ ಒಂದೇ ಯಾಷ್ಟೋತ್

ಮೇಲಿರಬೇಕು. ಸೀಯೇನ್ ಮತ್ತು ಅಲೆಕ್ಸಾಂಡ್ರಿಯಾ ಹೀಗಿರುವುದೊಂದ


ನಕ್ಷತ್ರ ವೀಕ್ಷಣೆ

ಎರಟೋಸ್ಟನೀಸನ ಸರಳಪ್ರಯೋಗ ಅನಾವರಣಗೊಳಿಸಿದ ಜಟಿಲದೃಶ್ಯ ಅಂದಿನವರ

ಸಾಮಾನ್ಯ ಪ್ರಜ್ಞೆಗೆ ( ಪೂರ್ವಗ್ರಹ ಸಮುಚ್ಚಯ ?) ಸವಾಲಾಗಿತ್ತು . ಅವರ ಜ್

ಗಾತ್ರದೊಂದಿಗೆ ಹೋಲಿಸಿದಾಗ ಭೂಮಿಯೊಂದು ಮಹಾದೈತ್ಯಕಾಯವಾಗಿ ಎದುರು

ಈತನ ಪ್ರಯೋಗದಲ್ಲೇ ಏನೋ ದೋಷನುಸುಳಿದೆ ಎಂದು ತೀರ್ಮಾನಿಸಿ ವಿದ್ವಜ್ಜನ ಈ "ಪ್ರ

ಬೆಲೆಯನ್ನು ತಿರಸ್ಕರಿಸಿದರು. ನಿಜ, ಸಾಗರದೊಳಗೆ ತಿಮಿಂಗಿಲ ಕ್ರಿಮಿ ಆಗಿರುವುದಕ್ಕಿಂತಕೂಪದೊಳ

ಮಂಡೂಕ ಮಹಾರಾಜನಾಗಿರುವುದೇ ಲೇಸು!

- ವಿದ್ವನ್ಮಣಿಗಳ ಅಸಾಮಾನ್ಯ ಪ್ರಜ್ಞೆಗೆ (= ಆತ್ಮಪ್ರತಿಷ್ಟೆ ?) ಪಥ್ಯವಾಗುವ ಬೆಲೆ ನೀಡಿದವ

ತತ್ತ್ವಜ್ಞಾನಿ ಪಾಸಿಡೋನೀಯಸ್ (ಕ್ರಿಪೂಸು ೧೩೫ - ಸು ೫೦). ಇವನು ಎರಟೋಸ್ಟನೀಸ

ಪ್ರಯೋಗವನ್ನು ಪುನರಾವರ್ತಿಸಿದ. ಆದರೆಸೂರ್ಯನ ಬದಲು ಅಗಸ್ಯ ನಕ್ಷತ್ರ ಇವ

ಸಮೀಪದ ಸೂರ್ಯನಿಗಿಂತ ಸುದೂರದ ನಕ್ಷತ್ರದ ಆಯ್ಕೆ ತಾತ್ವಿಕವಾಗಿ ಒಂದು ಸುಧಾರಣೆ

ಆದರೆ ಗಣನೆಯಲ್ಲಿ ತಪ್ಪು ಹಣಿಕಿತ್ತು . ಹೀಗಾಗಿ ಭೂಪರಿಧಿಗೆ ದೊರೆತ ಬೆಲೆ ಕೇವಲ

ಕಿಮೀ . ಪುಟ್ಟ ನೆಲ , ಗಟ್ಟಿ ಕುಳ - ಇದು ಮಾನವನಿಗೆ ಸಮಾಧಾನ ತಂದ ಕಲ್ಪನೆ.

ತಪ್ಪು ಬೆಲೆ ಕೊಟ್ಟ ಒಪ್ಪು ಫಲ

ಮುಂದಿನ ಹಲವು ಶತಮಾನಪರ್ಯಂತ ಈ ತಪ್ಪು ಬೆಲೆ ವೈಜ್ಞಾನಿಕ ಚಿಂ

ಪ್ರಭಾವಿಸಿತು. ಉದಾಹರಣೆಗೆ ಕ್ರಿಸ್ಟೋಫರ್ ಕೊಲಂಬಸ್ (ಕ್ರಿಶ ೧೪೫೧- ೧೫೦೬) ಕೈಗೊಂ

ಮಹಾಸಾಗರೋತ್ತರಣ, ಸ್ಪೇನಿನಿಂದ ಹೊರಟು ಕಡಲಿನಲ್ಲಿ ತೇಲಿ ಏಷ್ಯ ಖಂಡ ತಲಪುವುದು ಹೇಗೆ?

ಪೂರ್ವಾಭಿಮುಖವಾಗಿ ಹೋಗುವುದಾದರೆ ಆಫ್ರಿಕಾಖಂಡ ಬಳಸಿ ಸಾಗಬೇಕು. ಹೀ

ಪಶ್ಚಿಮಾಭಿಮುಖವಾಗಿ ಯಾನಿಸಿದುದಾದರೆ, ಭೂಮಿ ಹೇಗೂ ಗೋಳವಾಗಿರುವುದರಿಂದ, ಕ

ಕೆಲವೇ ಸಾವಿರ ಕಿಲೋಮೀಟರ್‌ ಗಮಿಸುವಾಗ ಏಷ್ಯಖಂಡದ ಪೂರ್ವಕರಾವಳಿ ತಲಪಬಹುದೆಂಬ

ಅವನ ಎಣಿಕೆ, ಕೋಲಂಬಸ್ ಏನಾದರೂ ಭೂಪರಿಧಿಗೆ ಪಾಸಿಡೋನೀಯಸನ ಕಿರಿಯ ( ಮತ್ತು

ಬೆಲೆ ಆಯದೇ ಎರಟೋಸ್ಟನೀಸನ ಹಿರಿಯ ( ಮತ್ತು ಒಪ್ಪು ) ಬೆಲೆ ಆಯ್ದಿದ್ದರೆ ನಾಗರ

ಗಾಲಿ ಎತ್ತ ಹೇಗೆಉರುಳಿರುತ್ತಿತ್ತೋ ! ಅಂತೂ ನಾಗರಿಕತೆಯ ಗಾಲಿ ಕೊಲಂಬಸ್ ಹಾಕಿದ ಜಾಡಿನಲ್

ಉರುಳಿತು. ಅಮೆರಿಕಾ ಖಂಡ ಆವಿಷ್ಕರಿಸಿತು. ಮುಂದೆ ಬಂದವ ಫ್ರೆಂಚ್ ಖಗೋಳವಿಜ್ಞಾನಿ

ರೀಶ್ ( ೧೬೩೦-೯೬). ದೂರದ ಫ್ರೆಂಚ್ ಗಯಾನಾಕ್ಕೆ (ಅಮೆರಿಕ ಖಂಡ) ಅನ್ವೇಷಕನಾಗಿ ಹೋದ


ಅಲ್ಲಿಯ ಕೈಯಿನ್ ನಗರ ಇವನ ನೆಲೆ. ಇದು ಸಮಭಾಜಕದ ಸಮೀಪವಿದೆ. ಪ್ಯಾರಿಸ್ ಗರಿಯಾರ

ಕಾಲಕ್ಕೆ ಹೋಲಿಸಿದಾಗ ಕೈಯಿನ್ ಗಡಿಯಾರದ ಕಾಲ ದಿವಸವೊಂದರ ೨. ೫ ಮಿನಿಟುಗ

ಕಳೆದುಕೊಳ್ಳುತ್ತಿದ್ದುದು ಇವನ ಗಮನಕ್ಕೆ ಬಂದಿತು. ಅಂದರೆ ಕೈಮೀನಿನಲ್

ಆಂದೋಳನಗತಿ ಪ್ಯಾರಿಸಿನಲ್ಲಿಯದಕ್ಕಿಂತ ನಿಧಾನವೆಂದಾಯಿತು.

- ಈ ವಿಪರ್ಯಾಸಕ್ಕೆ ಸಮರ್ಪಕ ವ್ಯಾಖ್ಯಾನವಿತ್ತವ ಇಂಗ್ಲೆಂಡಿನ ಐಸಾಕ್ ನ್ಯೂಟನ್

೧೭೨೭ ).ಲೋಲಕದ ಆಂದೋಳನ ಗತಿ ಭೂಗುರುತ್ವಕ್ಕೆ ಪ್ರತಿಲೋಮ ವರ್ಗಮೂಲಾನುಪಾತದಲ್ಲಿದೆ

t = 2Tv Ig . ಇಲ್ಲಿ 1 ಕಾಲ , ( ಲೋಲಕದ ದೀರ್ಘತೆ, 9 ಭೂಗುರುತ್ವ . ಹೀಗಾಗಿ ಆ ಎರಡು


ನಕ್ಷತ್ರ ವೀಕ್ಷಣೆ

ಸ್ಥಳಗಳ ಪೈಕಿ ಕೈಮೀನಿನಲ್ಲಿಯ ಭೂಗುರುತ್ವ ಪ್ಯಾರಿಸಿನಲ್ಲಿ ಯದಕ್ಕಿಂತ ಅಧಿಕ , ಎಂದೇ

ಕಾಲ ಪ್ಯಾರಿಸ್ ಕಾಲಕ್ಕಿಂತ ನಿಧಾನ ಎಂದು ಆತ ತರ್ಕಿಸಿದ. ರಾಶಿಯೂ ( m) ಗುರುತ್ವವೂ


ಅನುಲೋಮ ಸಂಬಂಧಿಗಳಾಗಿರುವುದರಿಂದ -

g = Gm = p2

ಇಲ್ಲಿ G ವಿಶ್ವ ಗುರುತ್ವಾಕರ್ಷಣ ನಿಯತಾಂಕ, ಭೂತ್ರಿಜ್ಯ -ಕೈಮೀನ್ ಪ್ರದ

ಭೂರಾಶಿ ಮತ್ತು ಪ್ಯಾರಿಸ್ ಪ್ರದೇಶದಲ್ಲಿ ಕಡಿಮೆ ಭೂರಾಶಿ ಪೇರಿಕೊಂಡಿವೆ ಎಂ

ಅನುಗತವಾಯಿತು. ಅಂದರೆ ಕೈಯಿನ್ ಪ್ರದೇಶದಲ್ಲಿಯ ತ್ರಿಜ್ಯ ಪ್ಯಾರ

ಪ್ರದೇಶದಲ್ಲಿಯದಕ್ಕಿಂತ ಅಧಿಕ ಎಂದಾಯಿತು. ಈಗ, ಕೈಯಿನ್ ಸಮಭಾಜಕ ವಲಯದಲ್ಲಿ

ಪ್ಯಾರಿಸ್ ಉತ್ತರ ಅಕ್ಷಾಂಶ ವಲಯದಲ್ಲಿಯೂ ಇವೆ ಎಂಬುದನ್ನು ಪರಿಗಣಿಸಿದ

ಪರಿಪೂರ್ಣ ಗೋಳವಾಗಿಲ್ಲ , ಸಮಭಾಜಕವಲಯದಲ್ಲಿ ಹೆಚ್ಚು ಉಬ್ಬ

ಧ್ರುವವಲಯಗಳಿಗೆ ಹೋದಂತೆ ಚಪ್ಪಟೆ ಆಗುವುದೆಂದು ತರ್ಕಿಸುವುದು ಸುಲಭ. ಭೂಮ

ಆವರ್ತನ ಚಲನೆಯ ಪರಿಣಾಮವಾಗಿ ಆವರ್ತನಾಕ್ಷದಕೊನೆಗಳಾದ ಧ್ರುವ ಪ್ರದೇಶ

ಚಪ್ಪಟೆ ಆಗಿದ್ದು ಸಮಭಾಜಕ ಪ್ರದೇಶದಲ್ಲಿ ಉಬ್ಬಿಕೊಂಡಿರುವುದು ನಿರೀಕ್ಷಿತವೇ .

ಮುಂದೆ ೧೭೩೫ರಲ್ಲಿ ಪೆರುವಿನಲ್ಲಿಯೂ (ಸಮಭಾಜಕದ ಸನಿಹದಲ್ಲಿ

ಲಾಪ್ಪಾಂಡಿನಲ್ಲಿಯೂ (ಸ್ವೀಡನ್ನಿನ ಉತ್ತರಕ್ಕಿರುವ ಸ್ಥಳ) ನಡೆಸಿದ ಪ್ರಯೋಗಗಳು ನ್

ವಿವರಣೆಯನ್ನು ಸ್ಥಿರೀಕರಿಸಿದುವು. ಧ್ರುವಗಳಲ್ಲಿ ಚಪ್ಪಟೆಯಾಗಿ ಸಮಭಾಜಕ ವಲಯದಲ್ಲ

ಭೂಮಿಯ ಆಕಾರಕ್ಕೆ ಗಣಿತ ಪರಿಭಾಷೆಯಲ್ಲಿ ಪ್ರಸ್ವಾಕ್ಷ ದೀರ್ಘವೃತ್ತಕಲ್ಪವ

ಮರಸೇಬು ಆಕಾರದ ಭೂಮಿ

ಆಕಾಶಯುಗ ಆರಂಭವಾದ ಬಳಿಕ, ೧೯೫೭, ಭೂಮಿಯ ಆಕಾರ ವಿಶೇಷಸೂಕ್ಷ್ಮ ತ

ಒಳಗಾಯಿತು. ಭೂಮಿಯಿಂದ ವಿವಿಧ ಎತ್ತರಗಳಲ್ಲಿ ಮತ್ತು ವಿವಿಧ ಕಕ್ಷೆಗಳಲ್ಲಿ

ನಿಯೋಜಿಸಿದ ಉಪಗ್ರಹಗಳು ಭೂಮಿಯ ಗುರುತ್ವ ವಿತರಣೆಯ ಸೂಕ್ಷ್ಮ ಮತ್ತು ವ

ಒದಗಿಸಿವೆ. ಇದನ್ನು ಆಧರಿಸಿ ಭೂಮಿಯ ಖಚಿತ ಆಕಾರವನ್ನು ನಿರ್ಧರಿಸಲಾಗಿದೆ. ಇ


ಭೂಮಿಗೆ ಪರಿಪೂರ್ಣ ಪ್ರಸ್ವಾಕ್ಷ ದೀರ್ಘವೃತ್ತ ಕಲ್ಪಾಕಾರ ಕೂಡ ಇಲ್ಲ

ಉಬ್ಬಿಕೊಂಡು ಮರಸೇಬಿನ ಆಕಾರ ಪಡೆದಿದೆ. ಸಮಭಾಜಕೀಯ ತ್ರಿಜ್ಯದ ದೀರ್ಘತೆ

ಕಿಮೀ . ಧ್ರುವೀಯ ತ್ರಿಜ್ಯದ ದೀರ್ಘತೆ ೬೩೫೯ ಕಿ. ಮೀ . ಸಮಭಾಜಕದ ದೀರ್ಘತೆ ೪೦


ಕಿಮೀ . ಗ್ರೆನಿಚ್ ಮೂಲಕ ಸಾಗುವ ಪ್ರಧಾನ ರೇಖಾಂಶವೃತ್ತದ ದೀರ್ಘತೆ ೪೦, ೦೦೯ ಕಿ
೧೧೧

ವಿಶ್ವ ವಿಹಾರ

" ದೇವಸ್ಯ ಪಶ್ಯ ಕಾವ್ಯಂ ನಮಮಾರ ನಜೀರ್ಯತೀ " - ಋಗ್ನೆದದ ಈ ಸೂಕ್ತಿಯ ಪ್ರಕ

ವಿಶ್ವ ಎಂಬುದು ದೇವರ ಕಾವ್ಯ . ಇದಕ್ಕೆ ಜೀರ್ಣವಿಲ್ಲ ಮರಣವೂ ಇಲ್ಲ . ಇದನ್ನು ನೋಡು

ಮಾನವನ ಕರ್ತವ್ಯ (ಕಡವ ಶಂಭು ಶರ್ಮ).

ಆ ದೇವರು ಯಾರು? ಶ್ವೇತಾಶ್ವತರ ಉಪನಿಷತ್ ವಿವರಿಸುತ್ತದೆ :

"ಸ ವಿಶ್ವಕೃದ್ವಿಶ್ವವಿದಾತ್ಮಯೋನಿರ್ಜ್ : ಕಾಲಕಾರೋ ಗುಣೀ ಸರ್ವವಿದ್ಯ : 1 ಪ್ರ

ಕ್ಷೇತ್ರಜ್ಞಪತಿರ್ಗುಣೇಶಃ ಸಂಸಾರಮೋಕ್ಷಸ್ಥಿತಿಬಂಧಹೇತುಃll " ಅವನು ಸಂಸಾರ

ವಿಶ್ವವನ್ನು ಅರಿತವನು. ಅವನು ತನ್ನಿಂದ ತಾನೇ ಬಂದವನು , ಸರ್ವಜ್ಞನು, ಕಾಲ

ಗುಣೀ , ಸರ್ವವಿದ್ಯೆಗಳನ್ನು ತಿಳಿದವನು, ಪ್ರಕೃತಿ ಮತ್ತು ಪುರುಷರಿಗೆ ಒಡೆಯನು,

ಸಂಸಾರದಿಂದ ನಮ್ಮನ್ನು ಪಾರುಮಾಡುವವನು (ಸೋಮನಾಥಾನಂದ).

" ಈಗ ನಮ್ಮಿಂದ ಮರೆಯಾಗಿರುವ ಸಂಗತಿಗಳು , ಮನುಕುಲ ಸಾಕಷ್ಟು ದೀರ್ಘಕ

ಸಂಶೋಧನೆಗಳ ಫಲವಾಗಿ, ಬೆಳಕು ಕಾಣುವ ದಿನ ಬಂದೇ ಬರುತ್ತದೆ. ಆಕಾಶದಂಥ ಊಹಾತೀತ

ಅಗಾಧ ವ್ಯಾಪ್ತಿಯನ್ನು ಅನ್ವೇಷಿಸಲು ಒಂದು ತಲೆಮಾರಿನ ಆಯುಷ್ಯವನ್ನು ಪೂರ್ತಿ ಮೀಸಲಿಟ್

ಸಾಲದು. ಇಂತಿದ್ದರೂ ಆಕಾಶದ ಬಗೆಗಿನ ಜ್ಞಾನ ಉತ್ತರೋತ್ತರ ಯುಗಗಳ ದೀರ್ಘಾವಧಿಗಳಲ್ಲಿ

ಕ್ರಮೇಣ ಅನಾವರಣಗೊಳ್ಳಲಿದೆ. ನಮ್ಮ ಕುಲಸಂಜಾತರಾಗಿ ಬರಲಿರುವ ಮುಂದಿನ ಯಾವುದೋ

ಪೀಳಿಗೆಯ ಜನರು , ತಮಗೆ ಅಷ್ಟು ಸುಲಭವಾಗಿಯೂ ಸುಂದರವಾಗಿಯೂ ಮನವರಿಕೆಯಾಗಿರು

ಸಂಗತಿಗಳು, ತಮ್ಮ ಪೂರ್ವಜರಾದ ನಮಗೆ ತಿಳಿದೇ ಇರಲಿಲ್ಲವಲ್ಲ ಎಂದು ಅಚ್ಚರಿಪಡುವ ಕಾಲ

ಬಂದೇ ಬರುತ್ತದೆ. ಅನೇಕ ಆವಿಷ್ಕಾರಗಳು ಭವಿಷ್ಯಯುಗಗಳಿಗಾಗಿ ಕಾಯ್ದಿರಿಸಲ್ಪಟ್ಟಿವೆ. ಆದ

ವೇಳೆಗೆ ನಮ್ಮ ಬಗೆಗಿನ ನೆನಪು ಮಾಸಿ ಹೋಗಿರುತ್ತದೆ. ಪ್ರತಿಯೊಂದು ಯುಗದಲ್ಲಿಯೂ ಅನ್ವೇ

ನೂತನ ವಿಷಯ ಒದಗದಿದ್ದರೆ ಈ ವಿಶ್ವವೊಂದು ಅಲ್ಪ ಮತ್ತು ರಿಕ್ಕಯಂತ್ರವಾಗಿರು

ನಿಸರ್ಗವೆಂದೂ ತನ್ನ ನಿಗೂಢ ರಹಸ್ಯಗಳನ್ನು ಒಮ್ಮೆಗೇ ಆಗಲಿ ಎಲ್ಲರಿಗೂ

ಬಿಟ್ಟುಕೊಡುವುದಿಲ್ಲ . ಕ್ರಿಸ್ತಶಕ ಒಂದನೆಯ ಶತಮಾನದಲ್ಲಿ ಬಾಳಿದ ರೋಮನ್ ರಾ

ಮತ್ತು ತತ್ತ್ವಶಾಸ್ತ್ರವಿದ ಸೆನೆಕಾ ಎಂಬಾತ ವಿಶ್ವವೈಚಿತ್ರವನ್ನು ವರ್ಣಿಸಿರುವ ಪರಿ ಇದು

ಎಡ್ಗರ್ ಅಲನ್ ಪೋ ( ೧೯ನೆಯ ಶತಮಾನ) ಪ್ರಕಾರ, "ಕತ್ತಲೆಯ ಮೊತ್ತವನ್ನು ದಿಟ್ಟಿಸುತ

ನಿಂತೆ ನಾ ಕಾತರತೆ ಭೀತಿ ವಿಸ್ಮಯಗಳಿಂದ ಸಂದೇಹಿಸುತ ಎಂದೂ ಯಾರೂ ಕಂಡಿರದ ಕನಸುಗಳ

ಕಾನೆಂಬ ಭ್ರಮೆಯಿಂದ !!"

ಆಲ್ಬಟ್ ಐನ್‌ಸ್ಟೈನ್ ( ೨೦ನೆಯ ಶತಮಾನ) ಬರೆದಿದ್ದಾರೆ, "ಕಲ್ಪನಾಲೋಕದಲ್ಲೊಂದು

ನಿಗೂಢ ಕತೆ ಇದೆ. ಇದು ನಮಗೆ ಅಗತ್ಯವಾಗುವ ಎಲ್ಲ ಸುಳುಹುಗಳನ್ನೂ ಒದಗಿಸಿ ಸದ್ಯದ

ಪರಿಸ್ಥಿತಿ ಕುರಿತಂತೆ ನಮ್ಮದೇ ಸಿದ್ದಾಂತ ರೂಪಿಸುವಂತೆ ನಮ್ಮನ್ನು ಒತ್ತಾಯಿಸುತ್ತದ

ವಸ್ತುವನ್ನು ನಾವು ಎಚ್ಚರಿಕೆಯಿಂದ ಅನುಸರಿಸಿದ್ದಾದರೆ ಲೇಖಕ ಪುಸ್ತಕದ ಕೊನೆಯಲ್ಲಿ ಇ

ಪೂರ್ಣ ಪರಿಹಾರವನ್ನು ಅನಾವರಣಗೈಯುವ ಅದೇ ಮೊದಲು ನಾವೇ ಅದ


ನಕ್ಷತ್ರ ವೀಕ್ಷಣೆ

ಕಂಡುಕೊಂಡಿರುತ್ತೇವೆ. ಇನ್ನು ಈ ಪರಿಹಾರವಾದರೂ ಅಗ್ಗ ನಿಗೂಢಗಳಿ

ಪರಿಹಾರಗಳಂತಲ್ಲ : ಇದು ನಮ್ಮನ್ನು ಹತಾಶೆಗೊಳಿಸದು; ಅಲ್ಲದೇ ಇದನ್ನು ನ

ನಿರೀಕ್ಷಿಸುತ್ತೇವೋ ಆ ಕ್ಷಣದಲ್ಲೇ ಇದು ಪ್ರತ್ಯಕ್ಷವೂ ಆಗುವುದು. ಇಂಥ ಪುಸ್ತಕದ ಒಬ್ಬ ವಾಚ

ನಾವು ನಿಸರ್ಗ ಗ್ರಂಥದ ನಿಗೂಢಗಳಿಗೆ ಪರಿಹಾರಶೋಧಿಸಲು ತಮ್ಮ ಉತ್ತರೋತ್ತರ ಪೀಳಿಗೆಗಳಲ

ಶ್ರಮಿಸುತ್ತಿರುವ ವಿಜ್ಞಾನಿಗಳ ಜೊತೆಹೋಲಿಸಬಹುದೇ ?" ಹಾಗಾದರೆ ವಿಜ್ಞಾನ ಎಂ

ಪುಟ ೨೩ರಲ್ಲಿ ವ್ಯಾಖ್ಯೆ ಬರೆದಿದೆ. ಮಾನವಮತಿ- ನಿಸರ್ಗ ಅಂತರಕ್ರಿಯೆಯ ಫಲ ವಿಜ್ಞಾನ

ಅಸಂಖ್ಯ ವಿಭಾಗಗಳ ಪೈಕಿ ( ಭೌತವಿಜ್ಞಾನ, ರಸಾಯನವಿಜ್ಞಾನ, ಪ್ರಾಣಿವಿಜ್ಞ

ಖಗೋಳವಿಜ್ಞಾನವನ್ನು ವಿಜ್ಞಾನಗಳ ಮಾತೃ ಎಂದೂ ಗಣಿತವನ್ನು ವಿಜ್ಞಾನಗ

ಎಂದೂ ಧ್ವನಿಪೂರ್ಣವಾಗಿ ಹೇಳುವುದುಂಟು. ಅಂತಿಮ ಅಮೂರ್ತ ಹಂತದಲ

ಭಾಷೆಯೂ ಗಣಿತವೇ .

ಖಗೋಳವಿಜ್ಞಾನಿ ಕಾರ್ಲ್ ಸಗಾನ್ ( ೧೯೩೪ -೯೬ ) ವಿಶ್ವವನ್ನು ವರ್ಣಿಸ

ಒಂದು ನೆಲೆ ನಿಜ. ಇದು ಏಕೈಕ ನೆಲೆ ಏನೂ ಖಂಡಿತ ಅಲ್ಲ . ಕೊನೆಗೆ ಇದೊಂದು ಪ್ರರೂಪ

(typical) ನೆಲೆಕೂಡಅಲ್ಲ . ಯಾವುದೇ ಗ್ರಹ, ನಕ್ಷತ್ರ, ಅಥವಾ ಬ್ರಹ್ಮಾಂಡ ಈ ಅರ್ಹತ

ಏಕೆಂದರೆ ವಿಶ್ವ ಬಹುತೇಕ ಶೂನ್ಯ. ಒಂದೇ ಒಂದು ಪ್ರರೂಪೀ ನೆಲೆ ಎಲ್ಲಿದೆ ಗ

ಅಂತರಬ್ರಹ್ಮಾಂಡೀಯ ಆಕಾಶದ ಚಿರಂತನ ರಾತ್ರಿ ದಟ್ಟಿಸಿರುವ ವಿಶಾಲ ಶೀತಲ

ಶೂನ್ಯದಲ್ಲಿ . ಅದೆಂಥ ವಿಚಿತ್ರ ಮತ್ತು ಬಂಜರು ಸ್ಥಳ ಎಂದರೆ , ಅದರೊಂದಿಗೆ ಹೋಲ

ಗ್ರಹನಕ್ಷತ್ರ ಬ್ರಹ್ಮಾಂಡಗಳು ನಮಗೆ ಹತಾಶ ತರುವಮಟ್ಟಿಗೆ ವಿರಳ ಮತ್ತು

ಭಾಸವಾಗುತ್ತವೆ. ನಮ್ಮನ್ನೇನಾದರೂ ವಿಶ್ವದೊಳಕ್ಕೆ ಯಾದೃಚ್ಛಿಕವಾಗಿ (ra

ಎಸೆದುಬಿಟ್ಟಿದ್ದಾದರೆ ನಾವು ಯಾವುದೇ ಗ್ರಹದ ಮೇಲೆ ಅಥವಾ ಸನಿಹದಲ್ಲಿ ಬೀಳ


( probability ) ಎಷ್ಟು ? ಅದು ಬಿಲಿಯನ್ ಟ್ರಿಲಿಯನ್ ಟ್ರಿಲಿಯನ್ನಿನಲ್ಲಿ (= ೧೦

೧, ೦೦೦, ೦೦೦, ೦೦೦ , ೦೦೦ , ೦೦೦ , ೦೦೦, ೦೦೦ , ೦೦೦, ೦೦೦ , ೦೦೦ , ೦೦೦) ಒಂದಕ್ಕಿಂತ

ಕಡಿಮೆ . "

ಇವೆಲ್ಲ ಅನುಭಾವ ಮತ್ತು ಅನುಭವವಾಣಿಗಳಿಂದ ಅನುಗತವಾಗುವ ಸಂಗತಿಗಳಿವ

* ವಿಶ್ವ ನಿರಂತರ ನಿಗೂಢಗಳ ಚಿರಂತನಸ್ರೋತಸ್ಸು - 'ಕಾಲದಿಂದ ಮಾಸದಾ ವಿಚಿತ್

* ಇಲ್ಲಿಯ ' ನಿಗೂಢತೆ' ಎಂಬುದು ಕೇವಲ ನಮ್ಮ ಅಜ್ಞತೆಯ ಪ್ರಕಟಿತ ರೂಪ. ವಿಶ್ವದಲ್ಲಿ

ನಿಗೂಢವಾದದ್ದು ಏನೂ ಇಲ್ಲವೆಂಬುದೇ ಬಲು ದೊಡ್ಡ ನಿಗೂಢ.

* ಮಾನವನ ಸೀಮಿತ ದೃಷ್ಟಿಯಿಂದ ಒಂದು ಯುಗದಲ್ಲಿ ನಿಗೂಢವೆನಿಸಿದ್ದು ಮುಂ


ಯುಗದಲ್ಲಿ ಸುಪರಿಚಿತ ವಿದ್ಯಮಾನವಾಗಿರುತ್ತದೆ. ಆದರೆ ಅದೇ ವೇಳೆನೂತನ ನಿಗೂಢಗಳು ನಿದ

ತಿಳಿದದ್ದು ( ಜಗವೆಲ್ಲ ನಿದ್ರಿಸುತ್ತಿದ್ದಾಗ) ಆತನನ್ನು ಸ್ಪರ್ಧೆಗೆ ಎಳೆದೇ ಎಳೆಯ


ಸವಾಲು ಏನಿದೆ ನಿನ್ನಹವಾಲು ?' ಎನ್ನುವುದೊ ವಿಶ್ವ ಎಂಬಂತೆ.
ನಕ್ಷತ್ರ ವೀಕ್ಷಣೆ ೧೧೩

* ಯಾವ ಕಾಲದಲ್ಲೇ ಆಗಲಿ ಮಾನವ ಒಪ್ಪಿಸುವ ಈ "ಅಹವಾಲು" ವಿಶ್ವದ ಎಂದೂ

ಬಗೆಹರಿಯದ ಮತ್ತು ಬಗೆಹರಿಸಲಾಗದ ಹಿರಿ ಒಗಟಿಗೆ ಆ ಗಳಿಗೆ ಒದಗಿಸಿದ ತಾತ್ಕಾಲಿಕ ಒಡಪು

ಮಾತ್ರ . "ಶಿವಲೋಕಕ್ಕೆ ಸರಿ ಬೇರೆ ಲೋಕವಿಲ್ಲ ! ಶಿವಮಂತ್ರಕ್ಕೆ ಸರಿ ಬೇರೆ ಮಂತ್ರವಿಲ್ಲ ! ಜಗಕ್ಕೆ

ಇಕ್ಕಿದೆ ಮುಂಡಿಗೆಯ ! ಎತ್ತಿಕೊಳ್ಳಿ, ಕೂಡಲ ಸಂಗಯ್ಯನೊಬ್ಬನೇ ದೈವವೆಂದು

" ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ . ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವ

ಅಂದರೆ, ಮೊದಲು ಇಲ್ಲಿ ಸಲ್ಲುವ" ಭೌತನಿಯಮಗಳನ್ನು ವೀಕ್ಷಣೆ ಪ್ರಯೋಗ ತರ್ಕ

ಅಂತರ್ಬೋಧೆ ಮಾರ್ಗದಲ್ಲಿ ಅನ್ವೇಷಿಸುವುದು ; ಬಳಿಕ ಈ ನಿಯಮಗಳು " ಅಲ್ಲಿಯೂ ಸಲ

ಎಂಬ ಭರವಸೆಯಿಂದ ( ಪುಟ ೨೩ , ಅಭಿಗೃಹೀತ ೩ : " ಭಗವಂತ ಕಪಟದೂತನಾಡುವುದಿಲ್ಲ ).

ಖಗೋಳಕಾಯಗಳಿಗೆ ಇವನ್ನು ಅನ್ವಯಿಸಿ ಜ್ಞಾನದಿಗಂತದ ವಿಸ್ತಾರ – ಇದು ವಿಜ್ಞಾನದ

ಹೀಗೆ ಅನಾದಿಕಾಲದಿಂದ - ಅಂದರೆ ಆದಿಮಾನವ " ಇತಿಹಾಸ ದೃಷ್ಟಿಗಸ್ಪಷ್ಟ ಪ್ರಾಚೀನ

ಬೆರಗುಗಣ್ಣಿನಿಂದ ಗಗನವೈಭವ ನೋಡಿ ಹೆದರಲು ಮತ್ತು ಪ್ರಯೋಗಿಸಿ ವಿವರವ

ಕಲಿತಂದಿನಿಂದ, ಖಗೋಳವಿಜ್ಞಾನ ನಡೆದು ಬಂದ ಹಾದಿಯಲ್ಲಿ ಕೆಲವು ಮುಖ್ಯ ಮಜಲ

* ಅಂದಾಜು ೧೫ , ೦೦೦ , ೦೦೦, ೦೦೦ ವರ್ಷಗಳ ಹಿಂದೆ, ಆಗ ಮೂಲಕಣಗಳ ನಿಬಿಡ

ಮುದ್ದೆಯಾಗಿದ್ದ ಇಂದಿನ ವಿಶ್ವ - ಅಂದು ಇದರ ಹೆಸರು ಪರಮಾದಿ ಪರಮಾಣು ಅಥವಾ

ವಿಶ್ವ - ಮಹಾಸ್ಫೋಟನೆಗೆ ಈಡಾಯಿತು. ಈ ಆದಿ ( ದುರ್ ) ಘಟನೆಗೆ ಮಹಾಬಾಜಣೆ ( Big Bang)

ಎಂದು ಹೆಸರು. ಆದಿವಿಶ್ಚ ಎಲ್ಲಿ ಹೇಗೆ ನೆಲಸಿತ್ತು , ಇದನ್ನು ಹಾಗೆ ನೆಲೆಗೊಳಿಸಿದವರು ಯ

ಏಕೆ , ಇದಕ್ಕಿಂತ ಮೊದಲು ಏನಿತ್ತು - ಇಂಥ ಪುಂಖಾನುಪುಂಖ ಪ್ರಶ್ನೆಗಳಿಗೆ

ವಿನಯಪೂರ್ವಕವಾಗಿ ನೀಡುವ ಉತ್ತರ, " ಇಂದು , ೨೦೦೩ , ಏನೂ ಖಚಿತ ಉತ್ತರ ಗೊತ್

ಸೆನೆಕಾ ಹೇಳಿರುವಂತೆ ಅಜ್ಞಾತ ಭವಿಷ್ಯದ ಎಂದೋ ಒಂದು ದಿನ ಉತ್ತರಗಳು ಒದಗಬಹ

ಈ ದೃಷ್ಟಿಯಾಗಲೀ ವಿವೇಕವಾಗಲೀ ಇರದ ಧರ್ಮಾಂಧರು ಈ ಎಲ್ಲ ಪ್ರಶ್ನೆಗಳಿಗೆ " ಭಗವಂ

ಎಂದು ಉತ್ತರಿಸಿ, ಆದ್ದರಿಂದ ವಿಜ್ಞಾನಕ್ಕಿಂತ ಧರ್ಮಶ್ರೇಷ್ಠತರವೆಂದು ಭ್ರಮಿ

ವರ್ತಮಾನ ಮುಖವಾಣಿಗಳಾಗಿರುವ ತಾವೇ ವಿಜ್ಞಾನ ವಿಚಾರಗಳಲ್ಲಿಯೂ ಅಂತಿಮ

ನೀಡತಕ್ಕವರು ಎಂದು ಘೋಷಿಸಿ ತದನುಸಾರ ಜನರ ವಿದುಳ ಮಾರ್ಜನ (brainwash)

ಮಾಡುತ್ತಿರುವುದೊಂದು ವಿಪರ್ಯಾಸ! ನಿಜ, ತಿಳಿದಿಲ್ಲವೆಂದು ತಿಳಿದಾತ ತಿಳಿದಾತ

ತಿಳಿದಾತ ತಿಳಿದಾತನಲ್ಲ !

* ಕ್ರಿಸ್ತಪೂರ್ವ ೪ನೆಯ ಶತಮಾನ, ಭೂಕೇಂದ್ರವಾದದ ಮೊದಲ ಚಿಂತನೆಗಳು ಘನಿ

ಕ್ರಿಸ್ತಶಕ ೨ನೆಯ ಶತಮಾನದಲ್ಲಿ ಟಾಲೆಮಿ ಸಿದ್ಧಾಂತವೆಂಬ ವಿಶ್ವವ್ಯಾಖ್ಯಾನವಾಗಿ ಮೈದಳೆದ

ಕೇಂದ್ರದಲ್ಲಿ ಭೂಮಿ ನಿಶ್ಚಲವಾಗಿ ನಿಂತಿದೆ; ಇದನ್ನು ಸುತ್ತುವರಿದು ವಿವಿಧ ಭೂಕೇಂದ್ರಿಯ

ಪಾರಕಗೊಳಗಳಿವೆ ಒಂದೊಂದು ಗೋಳ ಒಂದು ಆಕಾಶಕಾಯಕ್ಕೆ , ಆರೋಹೀ ದೂರನು

ಇವು(ನೋಡಿ ಪುಟ ೧೦೨, 'ದಿವಸಗಳ ಸಾಪ್ತಾಹಿಕ ಚಕ್ರ ) ಚಂದ್ರ , ಬುಧ, ಶುಕ್ರ , ಸೂರ್ಯ

ಗುರು , ಶನಿ ಮತ್ತು ನಾಕೃತಿಕಗೋಳಗಳು .


೧೧೪
ನಕ್ಷತ್ರ ವೀಕ್ಷಣೆ

* ಕ್ರಿಸ್ತಶಕ ೧೫- ೧೬ ನೆಯ ಶತಮಾನ , ಟಾಲೆಮಿ (ಭೂಕೇಂದ್ರ ) ಸಿದ್ದಾಂತ ತಪ

ವಾಸ್ತವತೆಯ ಯಥಾ ವಿವರಣೆ ಅಲ್ಲ - ಎಂದು ವೈಜ್ಞಾನಿಕವಾಗಿ ನಿರ್ಧಾ

ಸೂರ್ಯಕೇಂದ್ರಸಿದ್ದಾಂತ
ಕೋಪರ್ನಿಕಸ್
( ವಾದ) ಆಗ ರಂಗಪ್ರವೇಶಿಸಿತು : ಕೇಂದ್ರ

ಸೂರ್ಯಸ್ಟಿರವಾಗಿದ್ದು ಬುಧ, ಶುಕ್ರ , ಭೂಮಿ, ಕುಜ, ಗುರು, ಶನಿ, ಗ್ರಹಗಳು

ದೂರಾನುಸಾರ ಸೂರ್ಯನನ್ನು ಪರಿಭ್ರಮಿಸುತ್ತಿವೆ ಎಂಬ ವಿವರಣೆ ಇದು.

* ೧೬- ೧೭ ನೆಯ ಶತಮಾನ. ಗ್ರಹಚಲನ ನಿಯಮಗಳನ್ನು ಆವಿಷ್ಕರಿಸಲಾ

ಯೋಹನ್ ಕೆಪ್ಲರ್‌ ( ೧೫೭೧- ೧೬೩೦) ಆವಿಷ್ಕತವಾದ್ದರಿಂದ ಇವನ್ನು ಕೆಪ್ಪರ

ನಿಯಮಗಳೆಂದು ಹೇಳುತ್ತೇವೆ; ಗ್ರಹಚಲನೆಗಳನ್ನು ನಿಯಂತ್ರಿಸುವ ಬಲಕೇಂದ್ರ

ಇವು ವೀಕ್ಷಣೆ- ಗಣಿತರೀತ್ಯ ಸಾಧಿಸಿದುವು; ನಿಯಮಗಳ ಲಕ್ಷಣಗಳನ್ನು ನಿರೂಪಿಸಿದುವು.

* ೧೭- ೧೮ ನೆಯ ಶತಮಾನ. ಕೆಪ್ಪರ್‌ ಗ್ರಹಚಲನ ನಿಯಮಗಳಿಗೇನು ಕಾರಣ! ಈ

ಐಸಾಕ್ ನ್ಯೂಟನ್ ( ೧೬೪೨- ೧೭೨೭ ) " ಗುರುತ್ವಾಕರ್ಷಣೆ " ಎಂದು ಉತ್ತರ

ವಿಶ್ವಗುರುತ್ವಾಕರ್ಷಣ ನಿಯಮವನ್ನು ಆವಿಷ್ಕರಿಸಿದ, ಹಾಗೂ ಇದನ್ನು ಗಣಿತ

ನಿರೂಪಿಸಿದ .

* ೨೦ನೆಯ ಶತಮಾನ, ದೇಶ-ಕಾಲ ಸಾತತ್ಯವನ್ನು ಆಲ್ಬರ್ಟ್ ಐನ್‌ಸ್ಟೈನ್( ೧೮೭೯ -

ಸಾಧಿಸಿ ವಿಶ್ವಕ್ಕೆ ನೂತನ ಆಯಾಮವಿತ್ತರು. ಅರ್ಥಾತ್ ಮಾನವನ ಸೀಮಿತ ಇಂದ್ರಿಯಸ

ಅಸೀಮಿತ ಗಣಿತವಿಸ್ತರಣಾವಕಾಶ ಒದಗಿಸಿದರು . ಈಗ( ೨೦೦೩) ತಿಳಿದಿರುವಂತೆ, ರಾಶಿ - ಶಕ್ತಿ ಅಥವ

ದೇಶ-ಕಾಲ ಎಂಬ ದೈತತ್ವ ನಮ್ಮ ಸೀಮಿತ ಪರಿಗ್ರಹಣ ಸಾಮರ್ಥ್ಯದ ಪಲ, ವಿಶ್ವದ ನಿಜ ಗು

ವಿಶ್ವ ಎಂದರೆ ದೇಶ-ಕಾಲ ಸಾತತ್ಯ ; ರಾಶಿ- ಶಕ್ತಿ ಅಖಂಡತೆ ದೇಶದಲ್ಲಿ ಗುರುತ್ವಾಕರ್ಷಣ

ಕಾರಣವಾಗುತ್ತದೆ; ಅಂತಿಮವಾಗಿ ರಾಶಿ -ಗುರುತ್ವಾಕರ್ಷಣೆಯೇ ವಿಶ್ವ , ರಾಶ


ಗುರುತ್ವಾಕರ್ಷಣೆ, ವಿಲೋಮವಾಗಿ, ಗುರುತ್ವಾಕರ್ಷಣೆ ಇರುವಲ್ಲಿ ರಾಶಿ. ನಿಜ, "ಜ

ಮುಂಡಿಗೆಯ ! ಎತ್ತಿಕೊಳ್ಳಿ."

- ದೇಶ-ಕಾಲದಲ್ಲಿ ನಗಣ್ಯನಾಗಿರುವ ಮಾನವನಿಗೆ ಪರಮಗಣ್ಯವಾಗಿರುವ ಮಿದು

ಈ ಮಿದುಳು ದೇಶ-ಕಾಲ ಸಾತತ್ಯವನ್ನು ಅರಿತು ವಿವರಿಸಲು ಮಾಡುವ ಪ್ರಯತ್ನ ಅ

ರಸಾನಂದದಾಯಕ. ಇದರ ಮೊದಲ ಹೆಜ್ಜೆ ನಕ್ಷತ್ರ ವೀಕ್ಷಣೆ - ಸಾಂತ ಅನಂತವನ್ನ

ಮೂಕವಿಸ್ಮಿತವಾಗುವ ವಿದ್ಯಮಾನ. ಶೇಕ್‌ಸ್ಪಿಯರ್ ಕವಿ ಬರೆದಿದ್ದಾನೆ:

ನಿನ್ನ ಕಂಗಳ ಚೆಲುವ ನಾ ಕುಂಚಿಸಿದುದಾದರೆ


ನವ ಸಂಖ್ಯೆಗಳಲಿ ನಿನ್ನೆಲ್ಲ ಬಿನ್ನಾಣಗಳನೆಣಿಸಿದುದಾದರೆ

ಬರಲಿಹ ಯುಗ ಪೇಳದಿರದು: "ಒರದಿಹನೀ ಕವಿ ಹುಸಿಯ

ಇಂಥ ದಿವ್ಯದೀಪ್ತಿಯೆಂದೂ ಬೆಳಗಲಿಲ್ಲ ಮೊಗಗಳನೀ ಬುವಿಯ !"


೧೧೫,

ವಿಷಯ - ಪುಟಸೂಚಿ

ಆರ್ಕಿಮಿಡೀಸ್ Archimedes ೬ , ೧೦೮


ಅಂತರ್ಬೋಧೆ intuition ೧೧೩
ಅಂತಾರಾಷ್ಟ್ರೀಯ ದಿನಾಂಕ ರೇಖೆInternational ಅಗ್ನಯ- ದಕ್ಷಿಣ- ಪೂರ್ವ Southeast ೧೪ , ೧೫
ಆದ್ರ್ರಾ Betelgeuse ೩೮, ೬೪ , ೬೮
date -line ೯೩
ಆಯಾಮ dimension ೨೭
ಅಂಬಿಕಾತನಯದತ್ತ = ಬೇಂದ್ರೆ ೧೭, ೪೨
ಆವರ್ತನೆ rotation ೧೧೦
ಅಕ್ಷ axis ೭೬
ಅಕಾಂಶ latitude ೧೨ , ೧೬, ೨೫ , ೮೮, ೮೯ , ೯೧ , ೯೨ ಆಶ್ಲೇಷಾ Epsilon Hydra ೪೨ , ೬೮
ಆಸನ್ನ adjacent ೭೦
ಅಗಸ್ಯ Canopus ೪೦, ೪೧ ,೬೪

ಅಗ್ನಿ AINath ೩೯ , ೬೪ ಈಶಾನ್ಯ = ಉತ್ತರ- ಪೂರ್ವ northeast ೧೪, ೧೫


ಈಶೋಪನಿಷತ್ ೨೧
ಅಗ್ನಿಕುಂಡ *Fornax ೬೬
ಉಜ್ವಲ bright ೪೬
ಅಜಗರ * Hydra ೪೧ , ೪೨, ೪೮, ೬೬ ,೬೮

ಅಟ್ಟಾಸ್ Atlas ೩೬ ಉಜ್ಜಲತಾಂಕ magnitude


ಉಜ್ಜಲತೆ brightness ೪೬
ಅತ್ರಿ Megrez ೫
ಉತ್ತರ ಕಿರೀಟ * Corona Borealis ೪೭ ,೬೬
eqar QF 2300 , gibbous moon 238
ಉತ್ತರ ಧ್ರುವ North Pole ೧೨
ಅಧಿಕವರ್ಷ leap year ೯೦

ಅಧೋಬಿಂದು hadir ೩ ಉತ್ತರಾ=ಉತ್ತರಫಾಲ್ಕುಣೀ 93 Leo and

Denebola (Vindemeatrix ) ೪೨ , ೬೮
ಅನಾಕ್ಸಿಮ್ಯಾಂಡರ್ Anaximander ೧೦೬
ಅನುಲೋಮ direct ಉತ್ತರಾಭಾದ್ರಾ Algenib and Alpheratz ೬೮
ಉತ್ತರಾಯಣಾರಂಭ ೬೮, ೬೯ , ೭೧
ಅನೂರಾಧಾ Akrab ೪೭ , ೬೮

ಅಭಿಗೃಹೀತ assumption, postulate ೨೩ ಉತ್ತರಾಷಾಢಾ Nunki ೪೯ ,೬೮


ಅಭಿಜಿತ್ Vega ೪೭ , ೫೦ ,೬೪ ಉಪಗ್ರಹ satellite
ಉರಗಧರ * Ophiuchus ೬೬
ಅಮಾವಾಸ್ಯೆ new moon ೫೫
ಅಯನಬಿಂದುಗಳು solstices ೨೨ , ೨೬ ಉಲ್ಕಾಪತನ fall of a meteor ೬೨

ಅರಿಸ್ಟಾಟಲ್ Aristotle eves, 20T meteorite

ಅರಿಸ್ಟಾರ್ಕಸ್ Aristarchus ೧೦೭ eves, meteor & 9, za

ಅರುಂಧತಿ Alcor ೫ , ೬ ಉಷ್ಣ = ಶಾಖ = ಕಾವು heat

ಅಲ್ಪವೃತ್ತ small circle ಉಷ್ಣತೆ= ತಾಪ= ಬಿಸಿ temperature

ಅಶ್ವಿನೀ Hamal ೬೭ ಊರ್ಧ್ವ Vertical ೧೩

ಅಷ್ಟಕ * Octans ೬೬ ಋತು season ೮೬ , ೯೦

ಆಂಗೀರಸ್ಸು Alioth ೫ ಎರಟೋಸ್ಟನೀಸ್ Eratosthenes ೧೦೮, ೧೦೯

ಆಂದೋಳನ oscillation ೮೫ | ಏಕಮಾನ = ಏಕಕ unit ೧೭

ಆಕಾಶ = ದೇಶ space ಏಕಶೃಂಗಿ * Monoceros ೬೬

ಆಕಾಶಗಂಗೆ =ಕ್ಷೀರಪಥ= ಬಾನೊರೆ= ಐನ್‌ಸ್ಟೈನ್, ಆಲ್ಬರ್ಟ್ Einstein , Albert ೨೩ ,

ಸ್ಥಳೀಯ ಬ್ರಹ್ಮಾಂಡ ೯೬ , ೯೭

Milky Way = local galaxy ೫೨- ೫೪ ಕಂಕಣಗ್ರಹಣ annular eclipse ೭೮

ಆಕಾಶ ಗೋಳ= ಖಗೋಳ= ನಭೋಂಗಣ ಕಂತು = ಅಸ್ತಮಿಸು set


ಆಕಾಶಯುಗ space age ೧೧೦ ಕಂದರ “ Crater ೪೧ , ೬೬
೧೧೬
ನಕ್ಷತ್ರ ವೀಕ್ಷಣೆ
ಕಂಪನ vibration ೮೫
ಕೃಷ್ಣಪಕ್ಷ * dark fortnight
ಕಂಸ arc ೧೭
ಕೃಷ್ಣವೇಣಿ * Coma Berencies ೬೬
ಕರ್ಕಟಕ * Cancer ೪೨, ೬೬ , ೬೮ .
ಕೇತು descending node ೭೪, ೭೫ , ೭೭
ಕರ್ಕವೃತ್ತ Tropic of Cancer ೧೬ , ೧೮ ಕೊಪರ್ನಿಕಸ್ , ನಿಕೊಲಾಸ್

ಕರ್ಕಸಂಕ್ರಾಂತಿ ೧೦೮
Copernicus, Nicolaus 002
ಕರ್ಕಾಯನ summer solstice ೨೨
ಕೊಲಂಬಸ್ , ಕ್ರಿಸ್ಟೋಫರ್
ಕಕ್ಷಾವೇಗ orbital velocity ೫೯
Columbus, Christopher ೧೦೯
ಕಕ್ಷೆ orbit ೨೦ , ೫೭ ಕೋನೋನ್ನತಿ angular elevation ೧೧ , ೧೨
ಕರ್ಣ diagonal
ಖಗೋಳ = ಆಕಾಶಗೋಳcelestial sphere ೨
ಕನ್ಯಾ * Virgo ೪೧, ೪೩ , ೪೪ ,೬೪, ೬೬ ಖಗೋಳಮಾನ astronomical unit ೬೫
ಕನ್ನೂಶಿಯಸ್ Confucius ೬೩
ಖಮಧ್ಯ = ನೆತ್ತಿಬಿಂದು zenith ೨, ೨೪
ಕಪೋತ* Columba ೬೬
ಖೇಟಕ * Scutum Sobiesci ೫೦ , ೫೧ , ೬೬
ಕರಣ ೬೮, ೭೦ ಗಗನಪಟ = ಆಕಾಶಪಟ sky chart ೨೬- ೨೯
ಕ್ರತು Dubhe ೫ ಗಡಿಯಾರ clock ೮೪
ಕ್ಷಯ ಚಂದ್ರ Waning moon ೫೬
ಗರುಡ * Aquila ರ್೪ , ೫೧ , ೬೪, ೬೬ , ೬೮
ಕಾಲ time ೭೯ , ೮೩ , ೯೬ , ೯೭ ಗ್ರಹ ಕುಂಡಲಿ ೭೧ , ೭೨
ಕಾಲಮಾನಕ ೮೯ ಗ್ರಹಣಗಳು eclipses ೭೬
ಕಾಲವಲಯ time zone ೯೧, ೯೨ ? ಗ್ರಹಸ್ಪುಟ ೭೩ - ೭೫

ಕಾಲ್ಮೀಯನರು Chaldeans ೧೦೩ - ೧೦೫ ಗಾಂಧಿ, ಮಹಾತ್ಮ ೧೦೧


ಕಾಳಭೈರವ * Canes Venatici ೬೬ ಗೀತಾ ೧೦೧
ಕಾಳಿಂಗ * Hydrus ೬೬ ಗ್ರೀಷ್ಮ ತ್ರಿಭುಜ autumn triangle ೪೭
ಕ್ರಾಂತಿವೃತ್ತ ecliptic ೧೯ , ೨೧ , ೨೪, ೨೫ ಗುರು Jupiter ೫೯

ಕ್ರಾಂತಿವೃತ್ತದ ಬಾಗು obliquity of the ecliptic೨೧, ಗುರುತ್ವ gravity ೧೧೦

- ೨೨, ೭೬ ಗುರುತ್ವಾಕರ್ಷಣೆ gravitation

ಕಿನ್ನರ * Centaurus ೪೬ , ೪೮, ೫೨, ೬೪, ೬೬ ಗೆಲಿಲಿಯೋ ಗೆಲಿಲೀ Galileo Galilei ೮೫

ಕಿನ್ನರಪಾದ Alpha Centauri ೪೬ , ೬೪ ಗ್ರೆನಿಚ್ Greenwich ೯೨, ೯೩ , ೧೧೦


ಕಿನ್ನರ ಪಾರ್ಷ್ಠ Agena ೪೬ , ೬೪ ಗೋಪಾಲಕೃಷ್ಣ ಅಡಿಗ ೩೧

ಕಿಶೋರ* Equuleus ೬೬ ಗೋಳಾರ್ಧ hemisphere


ಕ್ಷಿತಿಜ = ಹಾರಿಜ = ದಿಗಂತ horizon ಗೌತಮಬುದ್ದ ೧೦೧

ಕ್ಷಿತಿಜೀಯ horizontal ಘಟಕ component ೭೦

ಕುಂತೀ * Cassiopeia ೭- ೧೦ , ೩೧, ೩೨, ೩೪ , ಘಟನೆ event ೯೧

೫೨, ೬೬ 230250 JEJEJ * Chamaeleon &

ಕುಂಭ * Aquarius ೫೨ , ೬೬ , ೬೮ ಚಂದ್ರ moom ೫೭, ೮೭

ಕುವೆಂಪು ೭ ಚಂದ್ರ ಗ್ರಹಣ lunar eclipse ೭೮


ಕ್ಷುದ್ರಗ್ರಹಗಳು asteroids, minor planets ೬೨ ಚಂದ್ರನ ಕಲೆ moon's phase ೫೫

ಕೃತಕನಭೋಂಗಣ = ತಾರಾಲಯplanetarium೭೩ ಚಕೋರ* Phoenix ೬೬

ಕೃತಕ ದಕ್ಷಿಣ ಶಿಲುಬೆ ೪೪ , ೪೬ ಚತುಷ್ಕ * Norma ೬೬


ಕೃತ್ತಿಕೆ Pleiades, Alcyone ೩೩, ೩೪, ೩೬, ೬೭ ಚಾಂದ್ರಕಕ್ಷಾತಲ plane of the lunar orbit ೭೬
೧೧೭
ನಕ್ಷತ್ರ ವೀಕ್ಷಣೆ

ಚಾಂದ್ರಕಕ್ಷೆಯ ಬಾಗು inclination of the lunar ದಿಗಂತ = ಹಾರಿಜ horizon .

- orbit ೭೬ ದಿನಾಂಕಸೂಚಿ calendar ೯೮, ೯೯

ಚಾಂದ್ರಮಾಸ lunar month ೮೭ ದಿವಸ ( ಆವರ್ತನಾವಧಿ) day (period of

ಚಿತ್ರಫಲಕ * Pictor ೪೦ , ೬೬ _ rotation) ೬೫, ೮೬ , ೧೦೩


ಚಿತ್ಸಾ Spica ೪೩ , ೪೪ , ೪೬ , ೬೪, ೬೮ ದಿಶೆ direction ೧೫ ||

ಛಾಯಾಶಂಕು umbra ೭೭ ದ್ವಿಭಾಜಕ- ಸಮದ್ವಿಭಾಜಕ bisector ೯

ಜಮದಗ್ನಿ Beta Cassiopeia ೮ ದೀರ್ಘ ಕಂಠ * Camelopardus ೯ , ೬೬ ,

ಜಾಲ * Reticulum ೬೬ ದೀರ್ಘ ಕಾಲ macrotime ೮೧

ಜೇಷ್ಠಾ Antares ೪೭ , ೬೪, ೬೮ | ದೀರ್ಘತೆ = ಉದ್ದ length

ಜ್ಯೋತಿರ್ವಷ್ರ light-year ೫೩ , ೬೪, ೬೫ ದೀರ್ಘಾಕ್ಷದೀರ್ಘ ವೃತ್ತಕಲ್ಪ prolate sphero

ಡಿವಿಜಿ = ಮಂಕುತಿಮ್ಮ ೨೧ , ೨೪ ದೂರದರ್ಶಕ telescope ೯೧

ತಾರೀಕುಪಟ್ಟಿ = ದಿನಸೂಚಿ calendar ೮೫ , ೮೬ ದೂರದರ್ಶಿನಿ * Telescotrium ೬೬

ತ್ರಾಪಿಜ್ಯ = ಸಮಲಂಬ trapezium ೩೯ ದೃಕ್ಷಿಸಿದ್ದಾಂತ ದೇವನೌಕ Carina ೪೦ , ೪೪, ೬೪,

ತಿಂಗಳು month ೫೫, ೮೭ ೬೬


ತಿಥಿ ೬೮, ೬೯ ದೇವನೌಕಾದ್ವೀತಿಯ Miaplacidus ೬೪
ತಿಮಿಂಗಿಲ * Cetus ೩೫, ೬೬ ದೇವರು ೫೬
ತ್ರಿಕೋಣಿ * Triangulum ೩೪, ೪೮, ೬೬ . ದೇವವಿಹಗ * Apus ೬೬
ತ್ರಿಜ್ಯ radius ದೈನಂದಿನ ಪಥ diurnal path ೧೬
ತ್ರಿಶಂಕು * ದಕ್ಷಿಣ ಶಿಲುಬೆ CruX = Southern ದೊಡ್ಡಕರಡಿ = ಸಪ್ತರ್ಷಿಮಂಡಲ
Cross ೪೪, ೫೨, ೬೪, ೬೬ ದೌಪದಿ * Andromeda ೩೧,೩೨, ೫೨, ೬೬ , ೬೮

ತ್ರಿಶಂಕು ತೃತೀಯ Gamma Crucis ೬೪ ಧನಿಷ್ಠಾ * Delphinus ( Rotanev ) ೪೯ - ೫೨, ೬೬ ,


ತ್ರಿಶಂಕು ಪಾದ Beta Crucis ೬೪ ೬೮
ತ್ರಿಶಂಕುಶಿರ Acrux ೬೪ ಧನು * Sagittarius ೬೬

ತುಲಾ * Libra ೪೭ , ೪೮, ೬೬ , ೬೮ ಧಾತು element ೮೪


ತುಲಾಬಿಂದು ಶರದ್ವಿಷುವautumnal equinox ೭೭ ಧ್ರುವ celestial pole

ದಕ್ಷಿಣ ಕಿರೀಟ * Corona Australis ೪೯ , ೬೬ ಧ್ರುವ ನಕ್ಷತ್ರ pole star ೫ , ೭- ೧೧, ೨೫


ದಕ್ಷಿಣ ತ್ರಿಕೋಣಿ* Triangulum Australe೬೬ ದ್ರುವನಕ್ಷತ್ರಕೋನೋನ್ನತಿ = ವೀಕ್ಷಕನ ಅಕಾ

ದಕ್ಷಿಣ ಧ್ರುವ South Pole ೪೬ - ೧೧, ೧೨

ದಕ್ಷಿಣ ಮೀನ * Pisces Austrinus ೬೬ ಧ್ರುವಸೂಚಕ = ಪುಲಹ = ಕ್ರತುರೇಖೆ ೭, ೯


ದಕ್ಷಿಣ ಶಿಲುಬೆ = ತ್ರಿಶಂಕು Southern Cross, Crux ಧೂಮಕೇತು comet ೬೧-೬೩
೪೪
ನಕ್ಷತ್ರ star ೧ , ೬೪
ದಕ್ಷಿಣಾಯನಾರಂಭ ೭೧ ನಕ್ಷತ್ರ ಪುಂಜ star constellation ೬೫ |
ದರ rate ೮೪ ನಕುಲ * Pegasus ೩೧, ೩೨, ೫೨, ೬೬ , ೬೮
ದಶಾಹ ten- day Week ೧೦೩ ನಸುಕಿನ ನೀರೆ morning star ೫೬ -೬೦
ದ್ವಾದಶರಾಶಿಗಳು twelve Zodiacal ನಾಕ್ಷತ್ರಿಕ ಮಾಸ sidereal month ೫೫ , ೬೫
_ constellations ೨೦ , ೨೩ , ೬೭
ನಿತ್ಯ ನಕ್ಷತ್ರಗಳು ೬೭- ೬೯
ದಿಕ್ಕು , ದಿಗ್ವಿಂದು cardinal point ೧೫, ೨೫, ೩೦ ನಿರಪೇಕ್ಷಕಾಲ absolute time ೯೭
ದಿಕ್ಕೂಚಿ * Pyxis ೬೬ ನೀಹಾರಿಕೆ nebula ೫೩
ನಕ್ಷತ್ರ ವೀಕ್ಷಣೆ
ನ್ಯೂಟನ್, ಐಸಾಕ್ Newton , Isaac೧೦೧ , ೧೧೦ ಬ್ರಹ್ಮಾಂಡ ವರ್ಷ Cosmic/galactic

ನೆತ್ತಿಬಿಂದು = ಖಮಧ್ಯ zenith


2002300 , crescent moon 2828
ನೈರುತ್ಯ = ದಕ್ಷಿಣ= ಪಶ್ಚಿಮ southwest ೧೪ , ೧೫ ಬುದ್ಗುದಕೋಷ್ಠ bubble chamber ೮೨

ನೌಕಾಪಟ * Vela ೪೪ , ೬೬
ಬುಧ Mercury ೫೮
ನೌಕಾಪೃಷ್ಠ * Puppis ೪೦ , ೬೬
ಬುದ್ದ , ಗೌತಮ ೬೩
ಪಂಚಾಂಗ almariac ೬೮, ೬೯
ಬೆಳಕಿನ ವೇಗ velocity of light ೫೩ , ೬೫ , ೯೭
ಪಕ್ಷ fortnight ೮೭ ಬೇಂದ್ರೆ = ಅಂಬಿಕಾತನಯದತ್ತ ೫೨
ಪರಿಭ್ರಮಣೆ revolution ೧೪, ೩೦ ಬೈಗಿನ ತಾರೆ evening star ೫೬-೬೦
ಪಾಕ್ಷಿಕವಾರ ೧೦೩ ಬೋರ್ , ನೀಲ್ Bohr, Niels ೬೩
ಪಾತಬಿಂದು node ೭೭- ೭೯ ಭರಣಿ 41 Aries ೬೭

ಪಾರ್ಥ * Perseus ೩೧, ೩೩, ೩೪, ೫೨, ೬೬ ಭೀಮ * Hercules ೪೭, ೬೬


ಪಾದ quarter ೧೪
ಭೀಮಜೋಯಿಸ, ಯರ್ಮುಂಜ ೬೯ , ೭೧
ಪಾಪನಾಶಂ ಶಿವನ್ ೩೬ ಭೂಕಕ್ಷಾತಲ plane of the earth's orbit ೭೬
ಪಾವೆಂ ( ಪಾ . ವೆಂ . ಆಚಾರ್ಯ) ೧೦೨ ಭೂಕೇಂದ್ರವಾದ geocentric hypothesis ೧೧
ಪಾರ್ಶ್ವ ಗ್ರಹಣ partial eclipse ಭೂಪರಿಧಿ circumference of the earth ೧೦೯

ಪುಂಜ = ನಕ್ಷತ್ರ ಪುಂಜ ಭೂಮಿ earth ೧೦೬


- constellation = star constellation ೨೪ , ೬೪ ಮಂಕುತಿಮ್ಮ = ಡಿವಿಜಿ ೮ , ೪೭ , ೬೯
ಪುತಿನ ( ಪು . ತಿ. ನರಸಿಂಹಾಚಾರ್ ) ೫೩ ಮಂಗಳ = ಅಂಗಾರಕ = ಕುಜ Mars ೫೯ , ೬೦
ಪುನರ್ವಸು Castor and Pollux ೩೯ , ೬೮ ಮಂಜೇಶ್ವರಗೋವಿಂದ ಪೈ ೪೪
ಪುನರ್ವಸುದ್ವಿತೀಯ Pollux ೬೪ ಮಕರ * Capricornus ೫೦, ೫೧, ೬೬
ಪುನರ್ವಸುಪ್ರಥಮ Castor ೬೪ ಮಕರ ವೃತ್ತ Tropic of Capricorn ೧೬ , ೧೮
ಪುರುಷಸೂಕ್ತ ೨೪ ಮಕರಾಯನ winter solstice ೨೦

ಪುಲಸ್ತ್ರ Phecda ೫ ಮಘಾ Regulus 42, 44, 64 , 68


ಪುಲಹ Merak ೫ ಮತೃ * Dorado ೬೬ .
ಪುಷ್ಯ Delta Cancer ೪೨ , ೬೮ ಮಧ್ಯರಾತ್ರಿ midnight ೯೧

ಪೂರ್ಣ ಗ್ರಹಣ total eclipse ಮಯೂರ * Pavo ೫೦, ೬೬

ಪೂರ್ವಶ್ಯಾನ Procyon ೪೦ , ೬೪ ಮರೀಚಿ Alkaid or Benetnasch ೫

ಪೂರ್ವಾಭಾದ್ರಾ Markab and Scheat೬೮ ಮಶಕ * Musca ೬೬

ಪೂರ್ವಾಷಾಢಾ Delta ಮಹಾವ್ಯಾಧ * Orion ೩೭-೪೦, ೫೧, ೬೪,

- and Epsilon Sagittarius ೪೯ , ೬೮ | ೬೫, ೬೮

ಪೈತಾಗೊರಸ್ Pythagoras ೧೦೬ , ೧೦೭ ಮಹಾವೃತ್ತ great circle


ಬಕ * Grus ೬೫, ೬೬ ಮಹಾಶ್ವಾನ * Canis Major ೩೯ , ೪೦ , ೬೪, ೬೬

ಬಕ ಪ್ರಥಮ Alnair ೬೫ ಮಹಾಶ್ವಾನ ಪಂಚಮ Adhara ೬೪

ಬಲ force ಮಾರ್ಗಚಲನೆ direct motion ೨೧, ೫೭

ಬಲರಾಮ ೧೦೧ ಮಾರ್ಜಾಲ * Lynx ೩೭, ೬೬

ಬ್ರಹ್ಮ ೧೦೧ ಮಿಥುನ * Gemini ೩೭, ೩೯ , ೫೨, ೬೪ , ೬೬ -೬೮

ಬ್ರಹ್ಮಹೃದಯ Capella ೩೯ , ೬೪ ಮಿನಿಟ್ minute ೮೯


ಮೀನ * Pisces ೩೪, ೬೪, ೬೬೬೮
ಬ್ರಹ್ಮಾಂಡ galaxy ೬೩
ನಕ್ಷತ್ರ ವೀಕ್ಷಣೆ

ಲೋಲಕ pendulum ೧೦೯


ಮೀನಾಕ್ಷಿ Femalhaut ೬೪
ಮುನ್ನೆಲೆ foreground ೧೯ ವಕ್ರಚಲನೆ retrograde motion ೨೧, ೫೭

ಮುಸಲೀ * Lacerta ೬೬ ವಕ್ರೋಕ್ತಿ ಜೀವಿತ ೧೦೨

ಮುಳುಗು sink ವಸಂತವಿಷುವ = ಮೇಷಬಿಂದು vernal equinox

ಮೂಡು=ಉದಯಿಸು rise - ೨೧, ೨೨, ೭೧

ಮೂಲಾ Shaula ೪೭ , ೪೯ , ೬೪, ೬೮ ವರ್ಷ year ೬೫, ೮೬


ಮೃಗಶಿರಾ Lambda Orion ೩೯ , ೬೮ ವಸಿಷ್ಠ Mizar ೫

ಮೇಖಲಾಕೇಂದ್ರ ಸInilam ೯೫ ವೃಶ್ಚನ * Caelum ೬೭


ಮೇರು terrestrial pole ೧೦, ೧೨ ವಾಯವ್ಯ = ಉತ್ತರಪಶ್ಚಿಮ northwest ೧೪ , ೧೫
ಮೇಷ* Aries ೩೨, ೬೬, ೬೭ ವಾರ = ಸಪ್ತಾಹ week ೬೮, ೬೯
ಮೇಷಬಿಂದು = ವಸಂತವಿಷುವ vernal equinox ವ್ಯಾಘಾತ = ವೈರುದ್ಧ = Contradiction ೩೦
- ೭೭ ವ್ಯಾಧಜಂಘಾ Saiph ೩೮
ಮೈಲೇಟೆಸ್ಸಿನ ತೇಲ್ಸ್ Thales of Miletus ೧೦೬ ವ್ಯಾದಪೃಷ್ಠ Rigel ೩೮, ೬೪

ಮೋಕ್ಷ end of an eclipse ವ್ಯಾಧಭುಜ Bellatrix ೩೮, ೬೪

ಯಾದೃಚ್ಛಿಕತೆ randomness ೯ ವ್ಯಾಸೀಯ ವಿರುದ್ದ diametrically opposite ೨೧

ಯಾಷ್ಟೋತ್ತರ meridian ೩ , ೨೫ ವಿಕರ್ಣ diagonal

ಯುಗಾದಿ ೬೮, ೭೧ ವಿಕಿರಣಪಟು radioactive ೪೮

ಯುಧಿಷ್ಠಿರ * Cepheus ೩೨ , ೫೨, ೬೬ ವಿಜಯಸಾರಥಿ * Auriga ೩೩ , ೩೬ , ೫೨ , ೬೪,೬೭


ಯೋಗ೬೮, ೭೦ ವಿಜಯಿನಿ ೧೦೧
ರಾಜಹಂಸ * Cygnus ೫೧ ೫೨, ೬೪, ೬೭ ವಿಜ್ಞಾನ science ೨೩

ರಾಶಿ = ದ್ರವ್ಯರಾಶಿ mass ೯೭ ವಿದ್ಯುಜ್ಜನಕ dynamo ೮೩


ರಾಶಿ = ನಕ್ಷತ್ರ ರಾಶಿ zodiacal constellation ವಿಪರ್ಯ ಯ reverse ೨೨
- ೨೪, ೬೭. ವಿರೋಧಾಭಾಸ paradox
ರಾಶಿಚಕ್ರ zodiac ೨೦ , ೨೪ , ೨೬ , ೬೭, ೭೦ ವಿಶ್ವ universe ೬೩ , ೧೦೦
ರಾಷ್ಟ್ರೀಯ ಪಂಚಾಂಗ ೭೧ ವಿಶ್ವಗುರುತ್ವಾಕರ್ಷಣ ನಿಯತಾಂಕ
ರಾಹು ascending node ೭೪, ೭೫, ೭೭ G constant of universal gravitation
ರೀಶ್ , ಜೀನ್ Richer , Jean ೧೦೯ ವಿಶ್ವಗುರುತ್ವಾಕರ್ಷಣ ನಿಯಮ law of universal
ರೇಖಾಂಶ longitude ೯೧, ೯೨ gravitation
ರೇಚಕ * Antlia ೬೭
ವಿಶಾಖ Zuben el Genubi ೪೭ , ೬೮

ರೇವತಿ Epsilon Pisces ೬೮, ೧೦೦, ೧೦೧ ವಿಷುವದ್ರಿಂದುಗಳು equinoxes ೨೧ , ೨೬


ರೈವತ ೧೦೦ , ೧೦೧
ವಿಷುವತ್ತ celestial equator
ರೋಹಿಣಿ Aldebaran ೩೩ , ೬೪, ೬೭ - ೧೪ - ೧೬ , ೧೮, ೧೯ , ೨೧ , ೨೫
ಲಂಬಕೋನright angle ೩೯ ವೀಕ್ಷಕ observer
ಲಘುಶ್ವಾನ * Canis Minor ೩೯ , ೫೨, ೬೪, ೬೭ ವೀಣಾ * Lyra ೪೭ , ೬೪, ೬೭

ಲಘುಸಪ್ತರ್ಷಿ * Ursa Minor ೫, ೧೦ , ೬೭ ವೃಕ * Circinus


ಲಘುಸಿಂಹ * Leo Minor ೬೭ ವೃತ್ತಿನೀ * Lupus ೬೭
ಲವೋತ್ತು Lao Tsu ೬೩
@ ja 230T), waxing moon 22
ಲುಕ Sirius ೩೯ , ೪೦ , ೪೬ , ೬೪
ವೃಶ್ಚಿಕ * Scorpius ೪೭- ೪೬ , ೫೨, ೬೪, ೬೬, ೬೮
ನಕ್ಷತ್ರ ವೀಕ್ಷಣೆ
ವೃಷಭ * Taurus ೩೩, ೫೨ , ೬೪, ೬೭
celestial equator ೧೪ , ೧೫ ||
ವೇದಿಕಾ * Ara ೪೮ , ೫೦, ೬೭ ಸಮಾಂಗೀಯತೆ = ಸಮಮಿತಿ symmetry ೯
ವೇಧಶಾಲೆ observatory ೯೧ .
ಸಮಾಂತರ ಚತುರ್ಭುಜ parallelogram ೩
ವೈಜಯಂತೀ ಪಂಚಾಂಗ ೬೯ , ೭೧ ಸಮೀಪತಮ ಕಿನ್ನರ Proxima Centauri ೪೬
ವೈತರಣೀ * Eridanus ೩೫, ೬೪, ೬೭ ಸಹದೇವ * Bootes ೪೭ , ೬೪, ೬೬ , ೬೮
ವೈತರಣೀಮುಖ Achernar ೪೧ , ೬೪
ಸಾನು * Mensa ೬೭,೬೮

ವೈರುದ್ಧ = ವ್ಯಾಘಾತ contradiction ಸಾಪ್ತಾಹಿಕ = ವಾರ week ೧೦೨


ಶಂಕರ ಜೋಯಿಸ, ಯರ್ಮುಂಜ ೭೧
ಸಾಪೇಕ್ಷತಾ ಸಿದ್ಧಾಂತ Relativity theory ೯೭
ಶಕ್ತಿ energy ೯೭ ಸ್ವಾತೀ Arcturus ೪೪ , ೪೭ , ೬೪, ೬೮
ಶತಭಿಷ Sadalsud ೬೮ ಸಿಂಧೂ *Indus ೬೭
ಶನಿ Saturn ೯೩ ಸಿಂಹ * Leo ೪೧, ೪೨ , ೬೪, ೬೭ , ೬೮
ಶಫರೀ * Volans ೬೭ ಸುಧಾರಿತ ತಾರೀಕುಪಟ್ಟಿ ೯೫
ಶರ * Sagitta ೬೭ ಸುಯೋಧನ * Draco ೬೭
ಶರದ್ವಿಷುವ = ತುಲಾಬಿಂದು ಸೂಕ್ಷ್ಮಕಾಲ microtime ೮೨
autumnal equinox ೨೧, ೨೨, ೭೧ ಸೂಕ್ಷ್ಮದರ್ಶಿನಿ * Microscopium ೬೭
ಶತ * Lepus ೩೫ , ೪೮, ೬೭ ಸೂರ್ಯ sun ೧೭, ೫೩ , ೮೮, ೮೯
ಶ್ರವಣ Altair ೪೯ , ೫೦ , ೬೪ , ೬೮ . ಸೂರ್ಯಕೇಂದ್ರವಾದ

ಶಿಲ್ಪಶಾಲಾ * Sculptor ೬೭ . heliocentric hypothesis 002

ಶಿಷ್ಟಕಾಲ standard time ೯೪ ಸೂರ್ಯ ಗ್ರಹಣ solar eclipse ೭೮

ಶುಕ್ರ Venus ೫೬ -೬೦ ಸೂರ್ಯಸಿದ್ಧಾಂತ ೬೯ , ೭೧


ಶುಕ್ಲಪಕ್ಷ bright fortnight ೫೫ | ಸೇನ್ ಎಸ್ . ಎನ್ . ೧೦೬

ಶೈನ * Tucana ೬೭ ಸೈಂಧವ Algol ೩೧

ಶೃಂಗ vertex ಸೌರಮಾಸ solar month ೬೫

ಶೃಗಾಲ * Vulpecula ೬೭ ಸೌರವ್ಯೂಹ solar system ೬೧- ೬೩ , ೭೬

ಷಷ್ಠಕ * Sextansze ಹಂಸಾಕ್ಷಿ Deneb ೫೧ , ೬೪

ಸಂಕ್ರಮಿಸು = ದಾಟು = ಉತ್ತರಿಸು transit ಹಸ್ಕಾ * Corvus ೪೧ , ೪೩ , ೪೪, ೬೭,

ಸಂರಚನೆ mechanism ೮೫ ಪ್ರಸ್ವಾಕ್ಷದೀರ್ಘ ವೃತ್ತ ಕಲ್ಪoblate sphero

ಸಂವಾದಿತ್ವ Correspondence ೩೦ ಹಾರಿಜ = ಕ್ಷಿತಿಜ = ದಿಗಂತ horizon ೨, ೩ , ೨೫

ಸಪ್ತರ್ಷಿಮಂಡಲ * Ursa Major ಹುಣ್ಣಿಮೆ = ಪೌರ್ಣಮಿ full moon ೫೫

- ೫ - ೭ , ೯ , ೧೦, ೩೭, ೪೩ , ೪೬ , ೬೭ ಹುಬ್ಬಾ - ಪೂರ್ವಫಾಲ್ಕುಣೀ

ಸರ್ಪ * Serpens ೫೧, ೬೭ Zosma and Theta Leo « I, eS

ಹೇಮಂತ ತ್ರಿಭುಜ * winter triangle ೩೯


ಸಪ್ತಾಹ = ವಾರ week ೧೦೩
ಹೊರಾಸೂಚೀ * Horologium ೬೭
ಸ್ತಬ್ಬ stationary
ಸ್ಪರ್ಶ Contact , touch . cಬೆಳಕಿನ ಸ್ಥಿರ ವೇಗ E = me

ಸಮಶ್ಚರಿಸು synchronize ೯೧ ಶಕ್ತಿ = ರಾಶಿ ಸಮತಾ ಸಮೀಕರಣ ೯೭


* ಇವು ೮೮ ನಕ್ಷತ್ರ ಪುಂಜಗಳು
ಸಮಭಾಜಕ = ಭೂಮಧ್ಯವೃತ್ತ
terrestrial equator 000 (ನೋಡಿ ಪುಟ ೬೬ , ೬೭)

ಸಮಭಾಜಕ = ವಿಷುವತ್ತ
ಪ್ರತಿಗಳಿಗೆ ಸಂಪರ್ಕಿಸಿ

ವಿಜಯಲಕ್ಷ್ಮಿ ಪ್ರಕಾಶನ

ನಂ . 281 , 13ನೇ ಮೇನ್, ಸರಸ್ವತಿ ಪುರಂ , ಮೈಸೂರು - 9 Ph : 340932

1. ಅಂತರಿಕ್ಷ ಸಂಶೋಧನೆ ಡಾ . ಪ್ರದೀಪ್ ಕುಮಾರ್ ಹೆಬ್ರಿ ... 75

2. ಕನಸುಗಳ ಜಗತ್ತು ಕೈವಾರಗೋಪಿನಾಥ್ ... 50

3. ವಿಜ್ಞಾನ ಪ್ರಪಂಚದ ಆಯಾಮಗಳು ಕೈವಾರಗೋಪಿನಾಥ್

4. ಬ್ರಹ್ಮಾಂಡ ಡಾ . ಪ್ರದೀಪ್ ಕುಮಾರ್ ಹೆಬ್ರಿ

5. ಜೀವವಿಜ್ಞಾನದ ಮಹಾನ್ ವಿಜ್ಞಾನಿಗಳು ಕೈವಾರಗೋಪಿನಾಥ್

6. ಕಡಲ ಕಿನಾರೆಯ ಜೀವ ವೈವಿಧ್ಯ ಡಾ . ಎಸ್ . ಎನ್ . ಹೆಗಡೆ

7. ನಮ್ಮ ಆಹಾರ ಮತ್ತು ಆರೋಗ್ಯ ಕ್ಯಾತನಹಳ್ಳಿ ಬಸವರಾಜು

8. ಅಡಿಗೆ ಮನೆಯಲ್ಲಿ ವಿಜ್ಞಾನ ಪಿ. ಎಸ್ . ಬಾಲಕೃಷ್ಣನ್

9. ವೈಜ್ಞಾನಿಕ ಕುತೂಹಲಗಳು ಕ್ಯಾತನಹಳ್ಳಿ ಬಸವರಾಜು

10. ನೊಬೆಲ್ ಪಾರಿತೋಷಿಕ ಪುರಸ್ಕೃತ ತಂದೆ- ಮಗಜೋಡಿಗಳು ಡಾ . ಪಿ. ವೆಂಕಟರಾಮಯ್ಯ

11 . ಭೂವಿಕಾಸ ಡಾ . ಸಿ. ಬಿ. ಪ್ರಭುದೇವಸ್ವಾಮಿ

12 . ಯಂತ್ರಮಾನವರ ಬಲೆಯಲ್ಲಿ ಕೈವಾರ ಗೋಪಿನಾಥ್ ... 65


13 . ಲಿಯೋ ಸಿಲಾರ್ಡ್ ಪರಮಾಣು ಬಾಂಬ್ ಜನಕ ಡಾ. ಪಿ. ವೆಂಕಟರಾಮಯ್ಯ

14 . ಜೈವಿಕ ತಂತ್ರಜ್ಞಾನ ಡಾ. ಎಸ್ .ಎನ್ . ಹೆಗಡೆ ಮತ್ತು ಡಾ. ಟಿ. ಎಂ. ರಾಮಕೃಷ್ಣ ... 30

15. ಅನುವಂಶೀಯತೆಯ ಅಧ್ಯಯನದ ಒಂದು ಶತಮಾನ ಡಾ . ಎಸ್ . ಎನ್ . ಹೆಗಡೆ .. .100


16 . ರಾಮಾಯಣ ( ಮಕ್ಕಳಿಗಾಗಿ)
ಡಾ . ಪ್ರದೀಪ್ ಕುಮಾರ್ ಹೆಬ್ರಿ ...

17 . ಪರಮಾಣು ಮತ್ತು ವಿದ್ಯುತ್ ಒಂದು ಅದ್ಭುತ ಕಾಲ್ಯಾಚರಣೆ ಸಂತೋಷ್‌ಕುಮಾರ ಮಹೆಂದಳೆ

18. ಹಾವುಗಳು ಜೀವನಕ್ರಮ ಮತ್ತು ಉಪಯೋಗ ಡಾ . ಎಸ್ . ಎನ್ . ಹೆಗಡೆ

19 . ಸುಭಾಷಿತ ಸೌರಭ ಹೆಚ್. ವಿ. ನಾಗರಾಜರಾವ್

20. ಜೀವವಿಜ್ಞಾನದ ಕೆಲವು ಅನ್ವೇಷಣೆಗಳು ಡಾ . ಎಸ್ . ಎನ್ . ಹೆಗಡೆ

21 . ವೈದ್ಯಕೀಯ ಜಗತ್ತಿನ ವೈಚಿತ್ರಗಳು ಕೈವಾರ ಗೋಪಿನಾಥ್

22 . ಅತಿವಾಹಕಗಳು ಸುನೀಲ್ ಕುಮಾರ್

23. ನೀತಿ ದ್ವಿಷಷ್ಟಿಕಾ ಡಾ . ಹೆಚ್ . ವಿ. ನಾಗರಾಜರಾವ್ ...


24. ಜೀನ್ ತಂತ್ರಜ್ಞಾನ
ಎಂ. ಮಹೇಶ್ ಮಧುವನಹಳ್ಳಿ ...
25 . ಆಲ್ಬರ್ಟ್ ಐನ್‌ಸ್ಟೈನ್ ಮತ್ತು ಸಾಪೇಕ್ಷತಾ ಸಿದ್ಧಾಂತ ಡಾ . ಪಿ. ವೆಂಕಟರಾಮಯ್ಯ

26. ನಕ್ಷತ್ರ ವೀಕ್ಷಣೆ ಜಿ. ಟಿ. ನಾರಾಯಣರಾವ್


27. ಪರಮಾಣುಶಕ್ತಿ
ಕೈವಾರ ಗೋಪಿನಾಥ್
ಜಿ. ಟಿ . ನಾರಾಯಣರಾಯರ ಲಭ್ಯ ಕೃತಿಗಳು

೧ - ೧ - ೨೦೦೩

೧. ಆಲ್ಬರ್ಟ್ ಐನ್‌ಸ್ಟೈನ್: ಮಾನವೀಯಮುಕ ( ಅನುವಾದ). .


09. 0
೨. ಉಲ್ಲೇಖನೀಯ ಐನ್‌ಸ್ಟೈನ್ ( ಅನುವಾದ)

* ಋಷಿವಾಕ್ಯ ವಿಜ್ಞಾನಕಲೆ

ಎನ್‌ಸಿಸಿ ದಿನಗಳು ೫೫

ಐನ್‌ಸ್ಟೈನ್ ಬಾಳಿದರಿಲ್ಲಿ ೫೫

ಕೃಷ್ಣ ವಿವರಗಳು ( Black Hole)

ಕೊಡಗಿನ ಸುಮಗಳು

ಕೊಪರ್ನಿಕಸ್ ಕ್ರಾಂತಿ ೩೦

೧೫ .
೯. ಚಂದ್ರಶೇಖರ್ ಪರಿಮಿತಿ

೧೦ . ಜಾತಕ ಮತ್ತು ಭವಿಷ್ಯ

೧೧ . ಧೂಮಕೇತು
೪ರಿ
೧೨. ನಕ್ಷತ್ರವೀಕ್ಷಣೆ
೫೦೦
೧೩ . ನವಕರ್ನಾಟಕ ವಿಜ್ಞಾನ ಪದವಿವರಣ ಕೋಶ ( ಪ್ರಸಂ)

೧೪ . ಫರ್ಮಾ ಯಕ್ಷ ಪ್ರಶ್ನೆ ಮತ್ತು ಇತರ ವಿಜ್ಞಾನ ಲೇಖನಗಳು

೧೫ . ಬಾನಬಯಲಾಟ ಗ್ರಹಣ
೨೮
೧೬ . ರಾಮಾನುಜನ್ ಬಾಳಿದರಿಲ್ಲಿ
೩೫.
೧೭. ವಿಜ್ಞಾನ ಸಪ್ತರ್ಷಿಗಳು

೧೮. ವಿಶ್ವದ ಕಥೆ

೧೯ . ವೈಜ್ಞಾನಿಕ ಮನೋಧರ್ಮ

೨೦. ಶ್ರುತಗಾನ

೨೧ . ಸಪ್ತಸಾಗರದಾಚೆಯೆಲ್ಲೋ
೩೦
೨೨. ಸವಾಲನ್ನು ಎದುರಿಸುವ ಛಲ

೨೩ . ಸುಬ್ರಹ್ಮಣ್ಯನ್ ಚಂದ್ರಶೇಖರ್

೨೪. ಸೂಪರ್ನೋವಾ

೨೫ . ಸೂರ್ಯನ ಸಾಮ್ರಾಜ್ಯ

೨೬ . Crossing the Dateline

92 . Scientific Temper

೨೮. With the Great Minds

ಪ್ರತಿಗಳಿಗೆ ಸಂಪರ್ಕಿಸಿ

ಅತ್ರಿ ಬುಕ್ ಸೆಂಟರ್

ಶರಾವತಿ ಕಟ್ಟಡ, ಬಲ್ಮಠ, ಮಂಗಳೂರು ೫೭೫೦೦೧

ದೂರವಾಣಿ : ೦೮೨೪ - ೪೨೫೧೬೧, ೪೯೨೩೯೭


" ಗಗನವನು ನೋಡುಮೈನೀಲಿಗಟ್ಟುವವರೆಗೆ
ಎಂದು ಉದ್ಗರಿಸಿದರು ಕವಿ ಕುವೆಂಪು, ಗಗನವನ್ನ
ನೋಡಬೇಕು ಏಕೆ ? ಅದು ಅಲ್ಲಿ ಇರುವುದರಿಂದ !
ಅದು ನಮಗೆ ಎಟುಕದಿರುವುದರಿಂದ ! ಅದ
ಬೃಹಶ್ನೆಯಾಗಿ ನಮ್ಮನ್ನು ಸದಾ ಕಾಡುವುದರಿಂದ!
" ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ
ಜೀವನ ?" ಆಗಿರುವುದರಿಂದ ! ಕಾರನ್ ಬೈಕ್ಷನ್
ನುಡಿಗಳಲ್ಲಿ "ಸಿರಿವಂತರು ಮತ್ತು ಬಡ
ಬೀಗವಿಕ್ಕಿರುವ ಎರಡು ಸಂದೂಕಗಳು - ಒಂದರ

ಕೀಲಿ ಇನ್ನೊಂದರೊಳಗೆ!" "ಸಿರಿವಂತ ' ಪದ ಆಕಾಶವನ್ನೂ " ಬಡವ "


ವ್ಯಕ್ತಿಯನ್ನೂ ಪ್ರತೀಕಿಸಲಿ . ಈಗ ಮಗುದೊಮ್ಮೆ ಮೇಲಿನ ಸೂತ್ರವಾ
ಅಭ್ಯಸಿಸಿದರೆ ಇನ್ನೂ ಒಂದು ಉತ್ತರ ಲಭಿಸುತ್ತದೆ.

- ಇದು ಬಲು ಸುಲಭದ ಕೆಲಸ : ಆಗಸ ನೋಡಲು ನೂಕು ನುಗ್ಗಲು ಇಲ್ಲ ,


ಸುಂಕ ಪರವಾನಿಗೆಯೂ ಬೇಡ. ಆದರೂ ನಾವು ಬಾನ ತರೆ( ಪರದೆಯತ್ತ ಕಣ್
ತರೆಯುವುದು ತೀರ ವಿರಳ ಸಂದರ್ಭಗಳಲ್ಲಿ ಮಾತ್ರ . ಪ್ರಾಯಶಃ ಗ್ರಹಣ
ಘಟಿಸುವಾಗ , ಧೂಮಕೇತುಗೋಚರಿಸಿದಾಗ, ಆ ಲೋಕದ ಬಗ್ಗೆ ಏನೋ ಒಂದು
ರೋಮಾಂಚಕ (ಬಹುತೇಕ ಕಾಲ್ಪನಿಕ) ಚಿತ್ರ ಪ್ರಸಾರವಾದಾಗ, ಅಲ್ಲಿಂದ ಏನೋ
ಆಪತ್ತು ನಮ್ಮ ಮೇಲೆ ಕಡೆಯಲಿದೆ ಎಂಬ ಭಯಾನಕ ಸುದ್ದಿ ಹಬ್ಬಿದಾಗ, ಇತ್

ಈ ನಿಷ್ಕ್ರಿಯತ ನಿರಾಸಕ್ತಿ ನಿರ್ಮೊಹಗಳ ಕಾರಣವೇನು ? ಬಹುಶಃ ಇಲ್ಲಿಯ


ಬದುಕಿನಲ್ಲಿ ನಮಗೆ ಎದುರಾಗುವ ದಂದುಗಗಳು ಮತ್ತು ಸಂಪತ್ತು

ದವಲತ್ತು ಮುಂತಾದ ಐಹಿಕ ಯಶೋಮಾನಕಗಳ ಸಂಪಾದನೆಗಾಗಿ ನಾವು ನಿತ್ಯ


ನಿರಂತರ ನಟಿಸ (ಅಭಿನಯಿಸಬೇಕಾದ ಕೃತಕ ಪಾತ್ರಗಳು, ದೂರದರ್ಶನ ಮತ್
ತಾರಾಲಯ ( planetarium ) ಮುಂತಾದ “ ಜ್ಞಾನಮಾತ್ರೆಗಳು ಅಥವಾ capsu
lated knowledge pills ಮುಂತಾದವು ಒದಗಿಸುತ್ತಿರುವ ಮಿಥಾಜ್ಞ
ನಿಸರ್ಗದೂರತ್ವ = ಜ್ಞಾನಶತ್ರುತ್ವ ! ಇವೆಲ್ಲ ಐಹಿಕ ಅನಿವಾರ್ಯತೆಗಳನ್ನೂ
ಪ್ರಲೋಭನೆಗಳನ್ನೂ ಮೀರಿ ನಾವೇನಾದರೂ ನಕ್ಷತ್ರ ಲೋಕಾನ್ವೇಷಣೆಯೆ
' ಅನಾರ್ಥಿಕ' ಪ್ರಕ್ರಿಯೆಯಲ್ಲಿ ನಮ್ಮನ್ನು ತೊಡಗಿಸಿಕೊಂಡದ್ದೇ ಆದರ
ಬಾನು ಚಿರಂತನ ಮಿತ್ರನಾಗಿ, ಸದಾ ಪ್ರಸ್ತುತ ಮಾರ್ಗದರ್ಶಿಯಾಗಿ ಮತ್ತ

ಉತ್ಸಾಹದ ಬುಗ್ಗೆಯಾಗಿಸಹಚರಿ ಆಗಿರುತ್ತದೆ.

ನಕ್ಷತ್ರ ವೀಕ್ಷಣೆ ಇಂಥ ಒಂದು ಪ್ರಾಥಮಿಕ ಮಾರ್ಗದರ್ಶಿ .


ಮಡಿಕೇರಿಯ ಜಿ . ಟಿ. ನಾರಾಯಣರಾವ್ ( ೧೯೨೬) ಗಣಿತ, ಖಗೋಳ
ವಿಜ್ಞಾನ, ಎಂ . ಎ. ಪದವೀಧರರಾಗಿ ( ೧೯೪೭) ಅದೇ ವಿಷಯದಲ್ಲಿ ಕಾಲೇಜು
ಉಪನ್ಯಾಸಕರಾಗಿದ್ದರು ( ೧೯೪೭-೬೯ ), ಮೈಸೂರು ವಿಶ್ವವಿದ್ಯಾನಿಲಯದ ಕ
ವಿಶ್ವಕೋಶದಲ್ಲಿ ವಿಜ್ಞಾನ ಸಂಪಾದಕರಾಗಿದ್ದು ( ೧೯೬೯ - ೮೬ ) ಈಗ ನಿವೃ

ಜೀವನದಲ್ಲಿ ಕನ್ನಡ ವಿಜ್ಞಾನ ವಾಹ್ಮಯ ಕರ್ತೃಗಳಾಗಿ ಪ್ರವೃತ್ತರಾಗಿದ್ದಾರೆ.

You might also like