Professional Documents
Culture Documents
ಕೊರೊನಾ ಸೋಂಕಿನ ಸಂದರ್ಭದಲ್ಲಿ ಉಪಯುಕ್ತವಾಗಿರುವ ಆಯುರ್ವೇದೀಯ ಔಷಧಿಗಳು 2
ಕೊರೊನಾ ಸೋಂಕಿನ ಸಂದರ್ಭದಲ್ಲಿ ಉಪಯುಕ್ತವಾಗಿರುವ ಆಯುರ್ವೇದೀಯ ಔಷಧಿಗಳು 2
ಕೊರೊನಾ ಸೋಂಕಿನ ಸಂದರ್ಭದಲ್ಲಿ ಉಪಯುಕ್ತವಾಗಿರುವ ಆಯುರ್ವೇದೀಯ ಔಷಧಿಗಳು 2
ಸೋಂಕಿನ ಸಂದರ್ಭದಲ್ಲಿ ಉಪಯುಕ್ತವಾಗಿರುವ
ಆಯುರ್ವೇದೀಯ ಔಷಧಿಗಳು
ಕೊರೊನಾದ ಮೊದಲ ಅಲೆಗಿಂತ ಎರಡನೇ ಅಲೆ ಅತ್ಯಂತ ಗಂಭೀರ ಸ್ವರೂಪದ್ದಾಗಿತ್ತು. ಈಗ
ಮೂರನೆಯ ಅಲೆ ಬರಬಹುದು ಎಂದು ಪ್ರಸಾರ ಮಾಧ್ಯಮಗಳಿಂದ ತಿಳಿದು ಬರುತ್ತಿದೆ. ಕೊರೊನಾದ
ಸೋಂಕಿನ ಸಂದರ್ಭದಲ್ಲಿ ಸರಕಾರವು ಅಧಿಕೃತಗೊಳಿಸಿರುವ ವೈದ್ಯಕೀಯ ಚಿಕಿತ್ಸಾ
ಪದ್ಧತಿಯೊಂದಿಗೆ ಆಯುರ್ವೇದದ ಉಪಚಾರವನ್ನು ಪಡೆದುಕೊಳ್ಳುವುದು
ಪರಿಣಾಮಕಾರಿಯಾಗಿರುತ್ತದೆಯೆಂದು ಅನೇಕ ಜನರು ಅನುಭವಿಸಿದ್ದಾರೆ. ಪ್ರಸ್ತುತ ಲೇಖನದಲ್ಲಿ
ಕೊರೊನಾ ಸಂದರ್ಭದಲ್ಲಿ ಉಪಯುಕ್ತವಾಗಿರುವ ಆಯುರ್ವೇದದ ಔಷಧಗಳ ಮಾಹಿತಿಯನ್ನು
ಪ್ರಾಮುಖ್ಯತೆಗೆ ಅನುಗುಣವಾಗಿ ವಿವರಿಸಲಾಗಿದೆ.
ಇಲ್ಲಿ ನೀಡಿರುವ ಔಷಧಗಳೊಂದಿಗೆ ಸರಕಾರ ಅಧಿಕೃತಗೊಳಿಸಿರುವ ವೈದ್ಯಕೀಯ ಚಿಕಿತ್ಸೆ ಮತ್ತು
ಔಷಧಿಗಳನ್ನು ತಪ್ಪದೇ ತೆಗೆದುಕೊಳ್ಳಬೇಕು. ಇನ್ನಿತರ ಎಲ್ಲ ನಿಯಮಗಳನ್ನು ಪಾಲಿಸಬೇಕು, ಅಲ್ಲದೇ ಸ್ಥಳ,
ಕಾಲ ಮತ್ತು ಪ್ರಕೃತಿಗೆ ಅನುಗುಣವಾಗಿ ಚಿಕಿತ್ಸೆಯಲ್ಲಿ ಬದಲಾವಣೆಯಾಗಬಹುದು. ಆದುದರಿಂದ ಸೂಕ್ತ
ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು.
ಪೂ. ವೈದ್ಯ ವಿನಯ ನೀಲಕಂಠ ಭಾವೆಯವರ ಪರಿಚಯ
ಪೂ. ವೈದ್ಯ ವಿನಯ ನೀಲಕಂಠ ಭಾವೆಯವರು ‘ವರಸಯಿಕರ ವೈದ್ಯ ಭಾವೆ’ ಎಂದು ಮಹಾರಾಷ್ಟ್ರ
ಮತ್ತು ಗೋವಾದ ವೈದ್ಯರಲ್ಲಿ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಮಾಲೀಕತ್ವದ ‘ಶ್ರೀ
ಅನಂತಾನಂದ ಔಷಧಾಲಯ’ ಎಂಬ ಆಯುರ್ವೇದದ ಔಷಧ ತಯಾರಿಕೆಯ ಕಂಪನಿಯ
ಮಾಧ್ಯಮದಿಂದ ಅತ್ಯುತ್ತಮ ಔಷಧಿಗಳನ್ನು ತಯಾರಿಸಿ ಅನೇಕ ವರ್ಷಗಳ ವರೆಗೆ ಆಯುರ್ವೇದದ
ಸೇವೆಯನ್ನು ಮಾಡಿದ್ದಾರೆ. ಪೂ. ವೈದ್ಯ ವಿನಯ ಭಾವೆಯವರು ಸನಾತನದ ಸಂತರಾಗಿದ್ದಾರೆ.
ಲೇಖನದ ವಿಷಯದಲ್ಲಿ ಸ್ಪಷ್ಟೀಕರಣ
೧. ಈ ಎಲ್ಲ ಲೇಖನವನ್ನು ಲೋಕಕಲ್ಯಾಣದ ಉದ್ದೇಶದಿಂದ ನೀಡಲಾಗಿದೆ. ಕೊರೊನಾ ಮಹಾಮಾರಿಯ
ಕಾಲದಲ್ಲಿ ಡಾಕ್ಟರ, ವೈದ್ಯರು ಮುಂತಾದವರು ಸಿಗದೇ ಇರುವಾಗ ಜನರ ಪ್ರಾಣ ರಕ್ಷಣೆಯಾಗಬೇಕು
ಎನ್ನುವುದೇ ಇದರ ಹಿಂದಿನ ಉದ್ದೇಶವಾಗಿದೆ. ಜನರಿಗೆ ಡಾಕ್ಟರ ಅಥವಾ ವೈದ್ಯರ ಬಳಿಗೆ ಹೋಗದೇ ತಮ್ಮ
ಮನಸ್ಸಿನಂತೆ ಔಷಧಿಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸುವುದು ಈ ಲೇಖನದ ಉದ್ದೇಶವಲ್ಲ.
೨. ಇಲ್ಲಿ ಔಷಧಿಗಳ ಬೆಲೆಗಳನ್ನು ನೀಡಿರುವ ಕಾರಣವೇನೆಂದರೆ, ಓದುಗರಿಗೆ ತಮ್ಮ ಆರ್ಥಿಕ ನಿಯೋಜನೆ
ಮಾಡಿಕೊಳ್ಳಲು ಸುಲಭವಾಗಬೇಕೆನ್ನುವ ಒಂದೇ ಉದ್ದೇಶವಿದೆ. ಇದರ ಹಿಂದೆ ಯಾವುದೇ ಕಂಪನಿಯ
ಜಾಹೀರಾತು ಮಾಡುವ ಅಥವಾ ಯಾವುದೇ ದೃಷ್ಟಿಯಿಂದ ಆರ್ಥಿಕ ಲಾಭ ಪಡೆಯುವ ಉದ್ದೇಶವಿಲ್ಲ. –
(ಪೂ.) ವೈದ್ಯ ವಿನಯ ನೀಲಕಂಠ ಭಾವೆ, ಮೊರ್ಡೆ, ಸಂಗಮೇಶ್ವರ ತಾಲೂಕು, ರತ್ನಾಗಿರಿ (೪.೫.೨೦೨೧)
೧. ಕೊರೊನಾ ಸೋಂಕಿನಲ್ಲಿ ಉಪಯುಕ್ತವಾಗಿರುವ ಪ್ರಮುಖ ಔಷಧಿಗಳು
೨. ಸಹಾಯಕ ಔಷಧಿಗಳು (ಆ)
೩ ಆ. ಸಹಾಯಕ ಔಷಧಿಗಳು (ಆ)