Professional Documents
Culture Documents
01. ಗಾಂಧಿ Notes
01. ಗಾಂಧಿ Notes
01. ಗಾಂಧಿ Notes
com
ಜೀವನವನ್ನು ಬಲು ಪ್ರೀತಿಯಿಂದ ತಮ್ಮ ಕತೆಗಳಲ್ಲಿ ಚಿತ್ರಿಸಿದ್ದಾರೆ . ‘ ನೆಲದ ಪ್ರಸ್ತುತ ಕಥೆಯನ್ನು ‘ ಕಣಜ ‘
ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ . ಒಡಲು ‘ , ‘ ಗರ್ಜನೆ ‘ , ‘ ನೆಲದಸಿರಿ ‘ , ‘ ಹರಕೆಯಹಣ ‘ , ‘ ಒಂದು
ಹುಡುಗನಿಗೆ ಬಿದ್ದ ಕನಸು ‘ ಹಾಗೂ ‘ ಕೊಳಲು ಮತ್ತು ಖಡ್ಗ ‘ ಇವರ ಕಥಾ ಸಂಕಲನಗಳು .
‘ ತೋಳಗಳ ‘ ಗರ್ಜನೆ ‘ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ನಡುವೆ ‘ ಕಿರು ಕಾದಂಬರಿ , ಅಕಾಡೆಮಿ
ಬಹುಮಾನ ದೊರೆತಿದೆ . ಬಡ ಕುಟುಂಬದ ರೋಗಿಷ್ಠ ಹುಡುಗನೊಬ್ಬನ ದಾರುಣ ಸ್ಥಿತಿಯ ಮೇಲೆ ಕತೆಯು
ಬೆಳಕು ಚೆಲ್ಲುತ್ತದೆ . ಬಡವರಿಗೆ ಸರಿಯಾಗಿ ಸಿಗದ ವೈದ್ಯಕೀಯ ಸೌಲಭ್ಯಗಳು , ಅದನ್ನು ಪಡೆಯುವಲ್ಲಿ
ಅವರು ಪಡುವ ಪರಿಪಾಟಲನ್ನು ಕತೆ ತೆರೆದಿಡುತ್ತದೆ .
ಪದಕೋಶ :
ವರಾಂಡ – ಮನೆಯ ಮುಂಭಾಗದ ಕೈಸಾಲೆ , ಮೊಗಸಾಲೆ , ಅಂಗಳ ; ಹೋಗ್ಯ – ಹೋಗೋಣ ;
ಮೂಸೆ- ಚಿನ್ನಬೆಳ್ಳಿ ಮುಂತಾದ ಲೋಹಗಳನ್ನು ಕರಗಿಸಲು ಬಳಸುವ ಉಪಕರಣ ; ನರಪೇತಲ- ತೆಳ್ಳನೆ
ಮನುಷ್ಯ ; ಅವ್ಯಕ್ತ- ಕಾಣದ ; ವಸಿ – ಸ್ವಲ್ಪ : ಗೋಗರೆ – ಬೇಡಿಕೊಳ್ಳು ; ಕಾಕತಾಳ – ಒಂದು
ಲೋಕನ್ಯಾಯ , ಅನಿರೀಕ್ಷಿತ ಘಟನೆ ; ಮಿಡ್ವೈಫ್ – ಸೂಲಗಿತ್ತಿ , ನರ್ಸ್ , ಆರೋಗ್ಯ ಸಹಾಯಕಿ ; ಎಕ
– ಚಪ್ಪಲಿ ; ನಾಳಾಕೆ – ನಾಳೆಗೆ ; ಮೊರ ಕಾಳು , ರಾಗಿ ಮೊದಲಾದ ಧಾನ್ಯಗಳನ್ನು ಹಸನು ಮಾಡಲು
ಬಳಸುವ ಸಾಧನ ; ಪುಡಿಗಂಟು – ಚಿಲ್ಲರೆ ಹಣ ; ತೊಂಟೆ – ಕಫ ; ಸರೋತ್ತು – ಮಧ್ಯರಾತ್ರಿ : ಗಿರವಿ –
ಅಡ ( ಒತ್ತೆ ) ಇಡುವುದು ; ಮಂತೆ – ಮತ್ತೆ .
ಹುಡುಗನ ಕಿವಿ ಗಾಂಧೀಜಿಯವ ಕಿವಿಯಂತೆ ಇದ್ದವು , ಅಷ್ಟೆ ಅಲ್ಲದೆ ಆ ಹುಡುಗನ ಹೆಸರು ಕೂಡ ಮಹಾತ್ಮ
ಗಾಂಧೀ ಎಂದು ಕೇಳಿ ಹಾಗೂ ಈ ರೀತಿ ಕಾಕತಾಳೀಯವನ್ನು ಕಂಡು ಅಪರೂಪ ಈ ಘಟನೆಯಿಂದಾಗಿ
ಹಾಗೂ ಆ ಹುಡುಗನು ಧೈರ್ಯವಾಗಿ , ದೃಢ , ನಿಲುವಿನಿಂದ ನುಡಿದು – ನನ್ನ ಹೆಸರು ನಿಜವಾಗಲೂ
ಮಹಾತ್ಮಾಗಾಂದೀ ಎಂಬ ಮಾತನ್ನು ಕೇಳಿ ವೈದ್ಯಾಧಿಕಾರಿ ಬೆಪ್ಪಾಗಿ ಹೋದನು .
ವೈದ್ಯಾಧಿಕಾರಿ , ಹುಡುಗನನ್ನು ನೋಡಿ , ‘ ವಸಿ ಏನೋ ಚೆನ್ನಾಗಿ ನೋಡೋ , ನಿನ್ನ ಹೊಟ್ಟೆ ದಪ್ಪ
ಕೈಕಾಲು ಸಣ್ಣ ಕಿವಿಗಳು ಮಾತ್ರ ಗಾಂಧಿ ಕವಿಗಳು ಇದ್ಯಾಗಿದೆಯಪ್ಪಾ ‘ ಎಂದು ಕುಚೇಷ್ಟೆ ಮಡಿದನು .
ಸುಮಾರು ಎತ್ತರ , ನರಪೇತಲ , ಅಗಲ ಕಿವಿಗಳ ಹೊಟ್ಟೆ ಡುಬ್ಬಣ , ಅವನ ಮುಖದಲ್ಲಿ ಅವ್ಯಕ್ತ ನೋವಿನ
ರೋಷ ಅವನ ಮುಖದ ಮೇಲೆ ಆವರಸಿದ ಹುಡುಗನೊಬ್ಬ ವೈದ್ಯಾಧಿಕಾರಿಗೆ ಅಪರೂಪದ ವ್ಯಕ್ತಿಯಂತೆ
ಕಂಡನು .
ನಿಂಗಮ್ಮನ ಗಂಡ ಆ ಊರಿನ ಸಾಹುಕಾರನ ಬಳಿ ಕೆಲಸಕ್ಕೆ ಇದ್ದ . ಮರ ಹತ್ತಿ ಸೇಂದಿ ಇಳಿಸೋ ಕೆಲ್ಸ
ಮಾಡುತ್ತಿದ್ದ . ಒಮ್ಮೆ ಸೇಂದಿ ಇಳಿಸೋಕೆ ಮರ ಹತ್ತಿದ್ದ ಮರದಿಂದ ಬಿದ್ದು ಪಕ್ಕನೆ ಅವನ ಪ್ರಾಣ ಹೊಡಲು
ಹೋಗಿತ್ತು . ಹೀಗೆ ನಿಂಗಮ್ಮನ ಗಂಡ ಪ್ರಾಣ ಕಳೆದುಕೊಂಡಿದ್ದ .
“ ತಾನು ಸತ್ತರೆ ತನ್ನನ್ನು ಹಲಸಿನ ಮರದ ಬುಡದಲ್ಲಿ ಮಣ್ಣು ಮಾಡಬೇಕೆಂಬುದು ಗಾಂಧೀ ಎಂಬ
ಹುಡುಗನ ಕೊನೆಯ ಆಸೆಯಾಗಿತ್ತು .
ಮಗು ಹುಟ್ಟಿದಾಗ ಗಂಡು ಮಗು , ಅದೆ ಕಿವಿಗಳು ಅಗಲವಾಗಿದ್ದುದನ್ನು ಕಂಡ ತಕ್ಷಣ ಜೋಯಿಸರ ಬಳಿಗೆ
ಓಡಿದ , ಜೋಯಿಸರು ಸಮಯದ ಘಳಿಗೆ ಲೆಕ್ಕ ಹಾಕಿ , ಮಗುವಿನ ಕಿವಿ ಅಗಲವಾಗಿರಿವುದರಿಂದ ಹಾಗೂ
ಶಿವಪುರಕ್ಕೆ ಬಂದಿದ್ದ ಗಾಂಧೀಯು ದರ್ಶನ ಮಾಡಿದ್ದ ಏಕೈಕ ವ್ಯಕ್ತಿ ಆದ್ದರಿಂದ ಕರಿಸಿದ್ದೇಗೌಡ ತನ್ನ
ಮೊಮ್ಮಗನಿಗೆ ‘ ಮಹಾತ್ಮ ಗಾಂಧೀ ‘ ಎಂದು ಹಿಸರಿಟ್ಟರು .
ಅಭ್ಯಾಸ
I. ಸಂದರ್ಭ ಸೂಚಿಸಿ ವಿವರಿಸಿ .
1. ಇದ್ದು ನಾನು ಯಾವ ರಾಜ್ಯ ಆಳಬೇಕು ?
ವಿಶೇಷತೆ : ವಿದ್ಯಾಂವತರ ಬಾಯಿಂದ ಬರುವ ಅದರಲ್ಲೂ ವೈದ್ಯರ ಬಾಯಿಂದ ಬರುವ ಮಾತು ಅವರ
ಗರ್ವವನ್ನು ವ್ಯಕ್ತಪಡಿಸುತ್ತದೆ . ವೈದ್ಯೋ ನಾರಾಯಣೋ ಹರಿಃ ‘ ಎಂಬ ವಾಕ್ಯ ಇಲ್ಲಿ ಮಾಯವಾಗಿದೆ .