Download as docx, pdf, or txt
Download as docx, pdf, or txt
You are on page 1of 4

NEW OXFORD SCHOOL - CBSE

Doddathimmasandra, Sarjapura(P), Anekal(T) - 562125


Affiliated to CBSE New Delhi, Affiliation No. 830703

Class:IX Sub:Kannada Marks:5

CASE BASED STUDY


I. ಈ ಕೆಳಗಿನ ಗದ್ಯ ಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ:
ಪಂಡಿತಾ ರಮಾಬಾಯಿ ಸರಸ್ವತಿಯವರು ಮಹಿಳೆಯರ ಸಾಮಾಜಿಕ, ಆರ್ಥಿಕ ಉನ್ನತಿಗಾಗಿ ದುಡಿದವರು. ಇವರ ತಂದೆ ಅ
ನಂತಶಾಸ್ತ್ರಿ ಡೋಂಗ್ರೆ ಮತ್ತು ತಾಯಿ ಲಕ್ಷ್ಮೀಬಾಯಿ ದೇಶ ಪ್ರವಾಸ ಮಾಡುತ್ತಿದ್ದಾಗ ತಲೆದೋರಿದ ಭೀಕರ ಬರಗಾಲದಿಂದ ನಿ
ಧನರಾದರು. ಗಂಡ ಬಿಪಿನ್ ಬಿಹಾರಿ ದಾಸ್ ಕಾಲರಕ್ಕೆ ತುತ್ತಾಗಿಮರಣ ಹೊಂದಿದರು. ನಂತರ ರಮಾಬಾಯಿ ಅವರು ವಿದ್ಯಾ
ಭ್ಯಾಸ ಮುಂದುವರಿಸಿ ಸಮಾಜ ಸೇವೆಗೆ ತನ್ನನ್ನು ಅಣಿಗೊಳಿಸಬೇಕೆಂದು ನಿರ್ಧರಿಸಿ ಪುಣೆಗೆ ಬಂದರು. ಪುಣೆಯಲ್ಲಿ ‘ಆರ್ಯ ಮ
ಹಿಳಾ ಸಮಾಜ’ ಸ್ಥಾಪಿಸಿದರು. ಶಿಕ್ಷಣ ಪಡೆದು ಜ್ಞಾನವನ್ನು ಮತ್ತು ಆತ್ಮಸ್ಥೈರ್ಯವನ್ನು ಗಳಿಸಿ ಸ್ವಾವಲಂಬಿಗಳಾಗಿ ಬದುಕುವಂ
ತೆ ಹೆಣ್ಣು ಮಕ್ಕಳನ್ನು, ಬಾಲ ವಿಧವೆಯರನ್ನು ರಮಾಬಾಯಿ ಪ್ರೋತ್ಸಾಹಿಸಿದರು. ಇದಕ್ಕೆ ಪೂರಕವಾಗುವಂತೆ ‘ಸ್ತ್ರೀ ಧರ್ಮ ನೀ
ತಿ’ಎನ್ನುವ ಪುಸ್ತಕವನ್ನು ಪ್ರಕಟಿಸಿದರು. ಹಂಟರ್ ಆಯೋಗದ ಎದುರು ಹಾಜರಾದ ರಮಾಬಾಯಿ ಭಾರತದಲ್ಲಿ ಮಹಿಳೆಯರಿಗೆ
ಶಿಕ್ಷಣದ ಆವಶ್ಯಕತೆಯ ಕುರಿತು ಸಮರ್ಥವಾದ ರೀತಿಯಲ್ಲಿ ವಾದ ಮಂಡಿಸಿದರು. ಇದು ಇಂಗ್ಲೆಂಡಿನ ರಾಣಿಯ ಗಮನಕ್ಕೆ ಬರು
ವ ಮೂಲಕ ಭಾರತದಲ್ಲಿ ಮಹಿಳೆಯರ ಪಾಲಿಗೆ ಶಿಕ್ಷಣ, ವೈದ್ಯಕೀಯ ಸೇವೆ ಮುಂತಾದ ಸವಲತ್ತುಗಳು ದೊರೆಯುವಂತಾಯಿ
ತು.

ಪ್ರಶ್ನೆಗಳು :
1. ರಮಾಬಾಯಿ ಸರಸ್ವತಿಯವರು ಪುಣೆಗೆ ಏಕೆ ಬಂದರು?
________________________________________________________________
_______________________________________________________________
2. ರಮಾಬಾಯಿ ಸರಸ್ವತಿಯವರ ತಂದೆ ತಾಯಿ ಮತ್ತು ಪತಿಯಸಾವಿಗೆ ಕಾರಣವೇನು?
________________________________________________________________
________________________________________________________________
3. ರಮಾಬಾಯಿ ಸರಸ್ವತಿಯವರು ‘ಸ್ತ್ರೀ ಧರ್ಮ ನೀತಿ’ ಎನ್ನುವಪುಸ್ತಕವನ್ನು ಏಕೆ ಪ್ರಕಟಿಸಿದರು.?
________________________________________________________________
_______________________________________________________________
4. ಭಾರತದ ಮಹಿಳೆಯರಿಗೆ ಶಿಕ್ಷಣ, ವೈದ್ಯಕೀಯ ಸೇವೆ ಮುಂತಾದ ಸವಲತ್ತುಗಳು ದೊರೆಯುವಂತಾದುದು ಹೇ
ಗೆ?
________________________________________________________________
_______________________________________________________________

II. ಈ ಕೆಳಗಿನ ಗದ್ಯ ಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ:


ವಿಶ್ವೇಶ್ವರಯ್ಯ ಅವರು ಕ್ರಿಸ್ತ ಶಕ 1860 ಸೆಪ್ಟೆಂಬರ್ 15 ರಂದು ಶ್ರೀನಿವಾಸಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮ ಅವರ
ಎರಡನೆಯ ಮಗನಾಗಿ ಜನಿಸಿದರು. ಇವರ ಪೂರ್ವಜರು ಮೂಲತಃ ಕರ್ನೂಲು ಜಿಲ್ಲೆ ಗಿಡ್ಡಲೂರು ತಾಲೂಕಿನ
`ಮೋಕ್ಷಗೊಂಡಂ’ ಅಗ್ರಹಾರಕ್ಕೆ ಸೇರಿದವರು. ಕಾರಣಾಂತರದಿಂದ ಕರ್ನಾಟಕಕ್ಕೆ ವಲಸೆ ಬಂದು ಚಿಕ್ಕಬಳ್ಳಾಪುರ
ಸಮೀಪದಲ್ಲಿರುವ ಮುದ್ದೇನಹಳ್ಳಿಯಲ್ಲಿ ನೆಲೆಸಿದರು. ವೆಂಕಟಲಕ್ಷ್ಮಮ್ಮ ಅವರಿಗೆ ಮಕ್ಕಳು ಹೆಚ್ಚು ಓದಿ ದೊಡ್ಡ
ವ್ಯಕ್ತಿಗಳಾಗಬೇಕೆಂಬ ಹಂಬಲವಿತ್ತು. ಅದಕ್ಕಾಗಿ ಸಂಸಾರವನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದರು. ಓದಿನಲ್ಲಿ
ಕ್ರಮನಿಷ್ಠರಾಗಿದ್ದ ವಿಶ್ವೇಶ್ವರಯ್ಯ ಅವರು ಜೀವನದಲ್ಲಿ ಉನ್ನತವಾದುದನ್ನು ಸಾಧಿಸಬೇಕೆಂಬ ದೃಢನಿರ್ಧಾರ
ಹೊಂದಿದ್ದರು. ಅದಕ್ಕೆ ತಕ್ಕನಾದ ಪ್ರತಿಭೆ, ಮನೋಸ್ಥೈರ್ಯ ಅವರಲ್ಲಿತ್ತು. ಅಂದಿನ ಮೈಸೂರು ದಿವಾನರಾಗಿದ್ದ ಸಿ.
ರಂಗಚಾರ್ಲುರವರು ನೀಡಿದ ವಿದ್ಯಾರ್ಥಿ ವೇತನ ಸೌಲಭ್ಯವನ್ನು ಬಳಸಿಕೊಂಡು ಪೂನಾದ ಎಂಜಿನಿಯರಿಂಗ್
ಕಾಲೇಜಿನಲ್ಲಿ ಡಿಪ್ಲೊಮಾ ಶಿಕ್ಷಣವನ್ನು ಪ್ರಥಮ ಸ್ಥಾನದಲ್ಲಿ ಪಡೆದು ಜೇಮ್ಸ್ ಬಕ್ರ್ಲಿ ಬಹುಮಾನಕ್ಕೂ ಪಾತ್ರರಾದರು.
ವಿಶ್ವೇಶ್ವರಯ್ಯ ಅವರು ಪುಟಿಯುವ ಚೈತನ್ಯ, ನಾಳೆ ಮಾಡುವುದನ್ನು ಇಂದೇ ಮಾಡು, ಇಂದು ಮಾಡುವುದನ್ನು ಈಗಲೇ
ಮಾಡಬೇಕೆಂಬ ತುಡಿತ ಹೊಂದಿದ್ದರಿಂದ ಅವರು ಉನ್ನತ ಸಾಧನೆ ಮಾಡಲು ಕಾರಣವಾಯಿತು.

ಪ್ರಶ್ನೆಗಳು:
1. ವಿಶ್ವೇಶ್ವರಯ್ಯರವರ ತಂದೆ, ತಾಯಿಯ ಹೆಸರೇನು?
__________________________________________________________________

______________________________________________________________

2. ವೆಂಕಟಲಕ್ಷ್ಮಮ್ಮರವರು ಮುದೇನಹಳ್ಳಿಯಿಂದ ಚಿಕ್ಕಾಬಳ್ಳಾಪುರಕ್ಕೆ ಸ್ಥಳಾಂತರಗೊಳ್ಳಲು ಕಾರಣವೇನು?


__________________________________________________________________

__________________________________________________________________

3. ವಿಶ್ವೇಶ್ವರಯ್ಯರವರು ಉನ್ನತ ಸಾಧನೆ ಮಾಡಲು ಕಾರಣಗಳಾವುವು?


__________________________________________________________________

__________________________________________________________________

4. ವಿಶ್ವೇಶ್ವರಯ್ಯರವರು ಯಾವ ಬಹುಮಾನ ಪಡೆದಿದ್ದರು?


__________________________________________________________________

__________________________________________________________________

NEW OXFORD SCHOOL - CBSE


Doddathimmasandra, Sarjapura(P), Anekal(T) - 562125
Affiliated to CBSE New Delhi, Affiliation No. 830703

Class:VIII Sub:Kannada Marks:5


CASE BASED STUDY
I. ಈ ಕೆಳಗಿನ ಗದ್ಯ ಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ:
ಪೂಜನೀಯ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಕೃತಿಗಳು ಶ್ರವ್ಯ ಪರಂಪರೆಯಲ್ಲೂ ಉಳಿದು
ಬೆಳೆದುಬಂದಿವೆ. ಸಂಸ್ಕೃತದಲ್ಲಿರುವ ರಾಮಾಯಣ ಮತ್ತು ಮಹಾಭಾರತವನ್ನು ಎಲ್ಲಾ ಭಾಷೆಗಳಲ್ಲೂ ರಚಿಸಿದ್ದಾರೆ.
ವೇದವ್ಯಾಸರು ಸಂಸ್ಕೃತದಲ್ಲಿ ರಚಿಸಿದ ಮಹಾಭಾರತವನ್ನು ಆಧಾರವಾಗಿರಿಸಿಕೊಂಡು ಪಂಪ, ರನ್ನ, ಕುಮಾರವ್ಯಾಸ
ಮೊದಲಾದವರು ಕನ್ನಡದಲ್ಲಿ ಕಾವ್ಯ ರಚಿಸಿದರು. ರಾಮಾಯಣ ಮಹಾಭಾರತ ಕಾವ್ಯಗಳು ಉತ್ತಮಗುಣ,
ಸ್ವಭಾವಗಳನ್ನು ರೂಢಿಸಿಕೊಳ್ಳದ ವ್ಯಕ್ತಿ ಎಷ್ಟೇ ರೂಪ ಲಾವಣ್ಯ, ಸಂಪತ್ತು, ಶೌರ್ಯ, ಸಾಹಸ, ವೀರತನವನ್ನು
ಪಡೆದಿದ್ದರೂ ಸ್ವತಃ ಆತನಿಗಾಗಲಿ, ಆತನ ಹಿರಿಯರಿಗಾಗಲಿ ಯಾವುದೇ ಉಪಯೋಗವಿಲ್ಲ. ಇಂಥವರಿಂದ ಇಡೀ
ವಂಶವನ್ನೇ ನಾಶಮಾಡುತ್ತವೆ ಎಂಬ ಸಂದೇಶವನ್ನು ಸಾರುತ್ತವೆ.
ನಮ್ಮವರೊಳಗಿನ ದ್ವೇಷಾಸೂಯೆಗಳು ನಮ್ಮ ಮನವನ್ನೂ ಮನೆಯನ್ನೂ ನಾಶಪಡಿಸುತ್ತವೆಎಂಬುದಕ್ಕೆ
“ಮಹಾಭಾರತ” ಒಂದು ನಿದರ್ಶನವಾಗಿದೆ ದುರ್ಯೋಧನನ ಹಠದಿಂದ ಕೃಷ್ಣಸಂಧಾನವು ಮುರಿದುಬೀಳುತ್ತದೆ. ಯುದ್ಧ
ಅನಿವಾರ್ಯವಾದಾಗ ಧರ್ಮಪಕ್ಷಪಾತಿಯಾದ ಕೃಷ್ಣನು ಭೇದತಂತ್ರವನ್ನು ಬಳಸಿ ಕರ್ಣನಿಗೆ ಜನ್ಮರಹಸ್ಯವನ್ನು
ತಿಳಿಸುತ್ತಾನೆ. ಸಾಮಾನ್ಯನಿಗೆ ಅತಿಯಾದ ಸಂತೋಷವನ್ನು ನೀಡಬಹುದಾದ ಸಂಗತಿ, ಅಸಾಮಾನ್ಯನೂ ಶೌರ್ಯಕ್ಕೆ,
ದಾನಕ್ಕೆ, ಉದಾತ್ತತೆಗೆ, ಕರುಣೆಗೆ ಹೆಸರಾಗಿದ್ದ ಕರ್ಣನಿಗೆ ಅತೀವವಾದ ಸಂಕಟವನ್ನು ಉಂಟುಮಾಡುತ್ತದೆ. ಅವನ
ಸ್ವಾಮಿನಿಷ್ಠೆಯ ಮುಂದೆ ಶ್ರೀಕೃಷ್ಣನೊಡ್ಡಿದ ಪ್ರಲೋಭನೆ ವ್ಯರ್ಥವಾಗುತ್ತದೆ.

ಪ್ರಶ್ನೆಗಳು :
1. ಮೇಲಿನ ವಾಕ್ಯವೃಂದದಲ್ಲಿ ಇರುವ ಕನ್ನಡ ಕವಿಗಳ ಹೆಸರನ್ನು ಬರೆಯಿರಿ.
________________________________________________________________

________________________________________________________________

2. ಕೃಷ್ಣನು ಕರ್ಣನಿಗೆ ಜನ್ಮರಹಸ್ಯವನ್ನು ಏಕೆ ತಿಳಿಸಿದನು?


________________________________________________________________

________________________________________________________________

3. ಕೃಷ್ಣನ ತಂತ್ರ ಏಕೆ ವ್ಯರ್ಥವಾಯಿತು?


________________________________________________________________

________________________________________________________________

4. ಮಹಾಕಾವ್ಯಗಳು ಯಾವ ಸಂದೇಶವನ್ನು ಸಾರುತ್ತವೆ?


________________________________________________________________

________________________________________________________________
5. ಮೇಲಿನ ವಾಕ್ಯವೃಂದದಲ್ಲಿ ಇರುವ ಯಾವುದಾದರೂ ನಾಲ್ಕು ಆಗಮ ಸಂಧಿಯನ್ನು ಬಿಡಿಸಿ ಬರೆಯಿರಿ.
________________________________________________________________

________________________________________________________________

You might also like