Professional Documents
Culture Documents
10 ICSE Deepawaliya Mahime Lesson Notes (1) - 1
10 ICSE Deepawaliya Mahime Lesson Notes (1) - 1
ಜನಪದ ಕಥೆ
1
5. ಲಕ್ಷ್ಮಿ ದೇವತೆ ರಾಜಾ ಪ್ರತಾಪನ ಸೊಕ್ಕನ್ನು ಇಳಿಸಲು ಏನು ಮಾಡಿದಳು ?
ಉತ್ತರ : ಲಕ್ಷ್ಮಿ ದೇವತೆ ಪ್ರತಾಪನ ಸೊಕ್ಕನ್ನು ಇಳಿಸಲು ನಿರ್ಧರಿಸಿದ ನಂತರ,
ಪ್ರತಾಪನು ಕೆಲವೇ ದಿನಗಳಲ್ಲಿ ಜೂಜಾಡುವುದು ಕಲಿತ. ತನ್ನ ಎಲ್ಲಾ ಸಂಪತ್ತನ್ನು
ಜೂಜಿನಲ್ಲಿ ಸೋತು ನಿರ್ಗತಿಕ ನಾದನು. ಶತ್ರುಗಳು ಅವನ ರಾಜ್ಯದ ಮೇಲೆ ಆಕ್ರಮಣ
ಮಾಡಿದ ಕಾರಣ ರಾಜ್ಯ ಕೈತಪ್ಪಿತು.
2
ಹಾರವನ್ನು ಕಿಟಕಿಯ ಗೂಡಿನಲ್ಲಿ ಇಟ್ಟಿದ್ದಳು. ಅವಳು ನೋಡುನೋಡುತ್ತಿದ್ದಂತೆ, ಒಂದು ಹದ್ದು
ಹಾರಿಬಂದು ಹಾರವನ್ನು ಕಚ್ಚಿಕೊಂಡು ಹೋಯಿತು. ಅದಕ್ಕಾಗಿ ಕೋಲಾಹಲ ಉಂಟಾಗಿದೆ.”
ಎಂದು ಒಬ್ಬ ವ್ಯಕ್ತಿ ಹೇಳಿದನು.
ಈ ವಿಷಯವನ್ನು ಪ್ರತಾಪನಿಂದ ತಿಳಿದ ಸುಮಂಗಳೆ, ಮಹಾರಾಣಿಯ ವಜ್ರದ ಹಾರ
ತಂದುಕೊಟ್ಟರೆ ರಾಜನು ಏನನ್ನು ಉಡುಗೊರೆಯಾಗಿ ಕೊಡುತ್ತಾನೆ ಎಂದು ತಿಳಿದು ಬರಲು
ಕಳುಹಿಸಿದಳು.
3
ಮನೆಯನ್ನು ಹುಡುಕುತ್ತ ನಗರದ ಹೊರಗೆ ಬಂದಳು. ಪ್ರತಾಪನ ಗುಡಿಸಲಿನಲ್ಲಿ ಮಾತ್ರ
ದೀಪ ಬೆಳಗುತ್ತಿತ್ತು. ಅದನ್ನು ಕಂಡು ಸಂತೋಷಗೊಂಡು ಲಕ್ಷ್ಮಿ ದೇವತೆ ಸುಮಂಗಳ
ಗುಡಿಸಲಿಗೆ ಬಂದಳು.
4
“ ದೀಪವನ್ನು ನನ್ನ ಗುಡಿಸಲಿನ ಸುತ್ತಲೂ ಬೆಳಗಿಸಲಿ ”
ಉತ್ತರ : ಈ ವಾಕ್ಯವನ್ನು ಜನಪದ ಕಥೆ “ ದೀಪಾವಳಿಯ ಮಹಿಮೆ ” ಇಂದ
ಆರಿಸಲಾಗಿದೆ. ಈ ಮಾತನ್ನು ರಾಜ್ಯದ ಮಾತನ್ನು ರಾಜ್ಯದ ರಾಜನಿಗೆ ಹೇಳಿದಳು.
ಸುಮಂಗಳ ತನ್ನ ಮಾವ ಮತ್ತು ಗಂಡನೊಂದಿಗೆ ರಾಜನ ಬಳಿ ಹೋಗಿ , ಸೆರಗಿನಲ್ಲಿ
ಕಟ್ಟಿಕೊಂಡಿದ್ದ ವಜ್ರದ ಹಾರವನ್ನು ರಾಜನಿಗೆ ನೀಡಿದಳು. ರಾಜ ಸಂತೋಷಗೊಂಡು
ನಿನಗೇನು ಬೇಕೆಂದು ಸಂಕೋಚ ಪಡದೇ ಕೇಳು ಖಂಡಿತ ಕೊಡುತ್ತೇನೆ ಎಂದಾಗ,
ಸುಮಂಗಳೆ “ ನನಗೆ ಧನಕನಕ ವಾಹನಗಳು ಬೇಡ, ದೀಪಾವಳಿಯ ಹಬ್ಬದ ದಿನ ರಾತ್ರಿ
ಇಡೀ ರಾಜ್ಯದಲ್ಲಿ ಅರಮನೆಯು ಒಳಗೊಂಡಂತೆ ಯಾವ ಮನೆಯಲ್ಲಿಯೂ ದೀಪ
ಹಚ್ಚಬಾರದು. ದೀಪಗಳನ್ನು ಬೆಳಗಿ ಸಬೇಕೆಂದು ಇರುವವರು ನನ್ನ ಗುಡಿಸಲಿನ ಸುತ್ತಲೂ
ಬೆಳಗಿಸಲಿ ”ಎಂದು ಕೋರಿದಳು.
ಪದಗಳ ಅರ್ಥ :
ಹೇರಳ - ವಿಪುಲ ಭಂಡಾರ - ಖಜಾನೆ
ಆಕ್ರಮಣ- ದಾಳಿ ಅಮೂಲ್ಯ- ಬೆಲೆಬಾಳುವ
ಕೋಲಾಹಲ- ಗಲಾಟೆ ಕನಕ- ಬಂಗಾರ, ಚಿನ್ನ
ವಾಗ್ದಾನ - ವಚನ ನೀಡು
****************************************************************************