Download as pptx, pdf, or txt
Download as pptx, pdf, or txt
You are on page 1of 13

ಅಂಡಮಾನ್ ಕನಸು

ಅಂಡಮಾನ್ ಕನಸು

• ಸೇಶನ್ಸ:೦೭
• ಮಾನಸ ಪ್ರಿಯದರ್ಶಿನಿ ಹೆಚ್,ಬಿ ಕನ್ನಡ ಸಹಾಯಕ ಪ್ರಾಧ್ಯಾಪಕರು
• ಸರಕಾರಿ ಪ್ರಥಮ ದರ್ಜೆ ಕಾಲೇಜು,ಸದಲಗಾ.
ಲೇಖನದ ವಿವರಣೆ
• ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರಿಗೆ ಅಂಡಮಾನ್ ಗೆ ಹೋಗುವ ಕನಸು ಬಹಳ ದಿನದಾ
ಆಗಿತ್ತು . ಏಕೆ ಈ ಯೋಚನೆ ಬಂತು ಎಂಬುದರ ಬಗ್ಗೆ ಸ್ವ ತಹ ಅವರ ಅವರಿಗೆ ಅರಿವಿರಲಿಲ್ಲ .
ಪುಣ್ಯ ಕ್ಷೇತ್ರಗಳಿಗೆ, ಪವಿತ್ರತೀರ್ಥಯಾತ್ರಕ್ಷೇತ್ರಗಳಿಗೆ , ಚಾರಿತ್ರಿಕ ಸ್ಥ ಳಗಳಿಗೆ ಪ್ರವಾಸಕ್ಕೆ
ಹೋಗುವುದು ತೇಜಸ್ವಿ ಅವರಿಗೆ ಇಷ್ಟ ವಿರಲಿಲ್ಲ . ಕೆಲವೊಮ್ಮೆ ಅನಿವಾರ್ಯವಾಗಿ ಕೆಲ
ಪ್ರದೇಶಗಳಿಗೆ ಭೇಟಿ ನೀಡಬೇಕಾಗಿತ್ತು .
• ಪರಮಾರ್ಥ ಚಿಂತನೆ , ಮಾನವನಿಗೆ ಬೇಕಾಗಿರುವ ಏಕಾಂತವಾಗಲಿ ,ಗಂಭೀರ
ಪರಿಸರವಾಗಲಿ ಈ ಮೇಲಿನ ಕ್ಷೇತ್ರಗಳಲ್ಲಿ ಇದಿಯೆ? ಎಂಬುದು ಲೇಖಕರ ಪ್ರಶ್ನೆ ಜನರ
ಕಾಟ , ಗಲಭೆ, ಅಶುದ್ಧ ತೆ ಇವುಗಳಿಂದಾಗಿ ಲೇಖಕರಿಗೆ ಈ ಮೇಲಿನ ಕ್ಷೇತ್ರಗಳ ಬಗ್ಗೆ ಆಸಕ್ತಿವ
ಇರಲಿಲ್ಲ ಇವುಗಳನ್ನು ನರಕವೆಂದೆ ಭಾವಿಸಿದ್ದ ರು . ದೈನಂದಿನ ಜಂಜಡಗಳಿಂದ ಬೇಸತ್ತ
ಮಹಾಪುರುಷರು ಪರ್ವತ ತಪ್ಪ ಲುಗಳಿಗೊ ನದಿ ತೀರದ ಏಕಾಂತಗಳಿಗೋ ಹೋಗಿ ಅಲ್ಲಿ
ಜನಗಳಿಗೆ ವೈರಾಗ್ಯ ಭೋದನೆ ಮಾಡುತ್ತಾ ಏಕಾಂತದಲ್ಲಿದ್ದ ಜಾಗಗಳೇ ಕಾಲ ನಂತರದಲ್ಲಿ
ತೀರ್ಥಕ್ಷೇತ್ರಗಳಾಗಿವೆ
• . ಪ್ರಸ್ತು ತದಲ್ಲಿ ಹಿಂದೂ ಧರ್ಮದ ಈ ಕ್ಷೇತ್ರಗಳು ಸದ್ದು ,ಗಂದಲ, ದೊಂಬಿ ಗಳಿಂದ
ತುಂಬಿದ ಕ್ಷೇತ್ರಗಳಾಗಿ ಪರಿವರ್ತನೆಯಾಗಿವೆ ಈ ಕಾರಣದಿಂದ ಲೇಖಕರು ಇಂತಹ
ಸ್ಥ ಳಕ್ಕೆ ಸ್ಥ ಳಗಳಿಗೆ ಹೋಗುವುದಕ್ಕೆ ತಿಲಾಂಜಲಿ ಹಾಡಿದ್ದ ರೂ .ಶುಭ್ರವಾಗಿ , ಮೌನವಾಗಿ
ಇರುವ ಇತರ ಧರ್ಮದ ಕ್ಷೇತ್ರಗಳು ಹಿಂದೂ ಧರ್ಮದ ಕ್ಷೇತ್ರಗಳಿಗೆ ಹೋಲಿಸಿದರೆ
ಎಷ್ಟು ಮೇಲು ಎಂಬ ಅಭಿಪ್ರಾಯ ಲೇಖಕರದ್ದಾಗಿದೆ. ವಿದೇಶಿ ವಿನಿಮಯ ಗಳಿಸಲು
ಮತ್ತು ಪ್ರವಾಸ ಉದ್ಯ ಮ ಅಭಿವೃದ್ಧಿಪಡಿಸಲು ನಮ್ಮ ಸರ್ಕಾರಗಳೇ ಅನೇಕ ಕಡೆ ತಾವೇ
ಪ್ರವಾಸ ಕೇಂದ್ರಗಳನ್ನ ತೆರೆದಿದೆ ಆದರೆ ಅವುಗಳು ದುರಾತ್ಮ ರ ಹವ್ಯ ವಹಾರಗಳ
ಅನೈತಿಕತೆಗಳ ಕ್ಷೇತ್ರಗಳಾಗಿ ಮಾರ್ಪಟ್ಟಿರುವುದು ವಿಪರ್ಯಾಸ ಇದರ ಬಗ್ಗೆ ಲೇಖಕರು
ಸಾಕಷ್ಟು ಉದಾಹರಣೆಗಳ ಸಮೇತ ವಿವರಿಸಿದ್ದಾರೆ
• ತೇಜಸ್ವಿಯವರು ಬೇರೆ ಯಾವುದೋ ಸ್ಥ ಳಕ್ಕೆ ಪ್ರವಾಸಕ್ಕೆ ಹೋಗಿದ್ದಾಗ ಅಂಡಮಾನ್ ಗೆ
ಏಕೆ ಪ್ರವಾಸಕ್ಕೆ ಹೋಗಬಾರದು ಎಂಬ ಆಲೋಚನೆ ಬಂದಿತ್ತು ತಮ್ಮ ಸ್ನೇಹಿತರಿಗೂ
ಇದರ ಬಗ್ಗೆ ತಿಳಿಸಿದರು
• ಸಮುದ್ರದಲ್ಲಿ ಉಳಿಯಲು ಒಂದು ಒಳ್ಳೆಯ ಹೋಟೆಲ್ ಸಹ ಇಲ್ಲ , ತುಂಬಾ ಹಿಂದುಳಿದ
ಪ್ರದೇಶ ಎಂಬ ಉತ್ತರ ಬಂತು, ಆಗ ಪುಣ್ಯ ಕ್ಷೇತ್ರದೇವ ದೇವಾಲಯಗಳಿಲ್ಲ ದ
ಜಾಗವಾಗಿದ್ದ ರೆ ನನ್ನಂತಹ ಅಲೆಮಾರಿಗಳಿಗೆ ಅದೇ ಸೂಕ್ತ ಎಂದು ಅಂಡಮಾನ್ ಪ್ರವಾಸಕ್ಕೆ
ಹೋಗುವ ಆಲೋಚನೆಯನ್ನ ಲೇಖಕರು ಮಾಡಿದರು
• ಮಿತ್ರಪ್ರಶಾಂತ್ ಅವರು ತಮ್ಮ ಪಿಹೆಚ್ ಡಿ . ಮುಗಿಸಿ ಕೃಷಿ ವಿಜ್ಞಾನಿಯಾಗಿ ಅಂಡಮಾನ್ ಗೆ
ತೆರಳಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರು. ಇದರಿಂದ ಪ್ರೇರಣೆಗೊಂಡ ತೇಜಸ್ವಿ ಅವರು ಮತ್ತು
ಅವರ ಸ್ನೇಹಿತರು ಅಂಡಮಾನ್ ಗೆ ಪ್ರವಾಸಕ್ಕೆ ತೆರಳುವ ನಿರ್ಧಾರವನ್ನು ಕೈಗೊಂಡರು ,
ಅಂಡಮಾನ್ ಗೆ ತೆರಳುವ ಮೊದಲು ಅಧಿಕಾರಿಗಳಿಗೆ ಪತ್ರಬರೆದು, ಬಯೋಡೇಟಾ
ಪ್ರವಾಸದ ಉದ್ದೇಶಗಳನ್ನೆಲ್ಲಾ ಸವ್ವಿವರವಾಗಿ ವಿವರಿಸಿ ವೀಸಾ ವನ್ನು ಪಡೆಯಬೇಕಾಗಿತ್ತು
ಆನಂತರವೇ ಹಡಗಿನಲ್ಲಿ ಪ್ರಯಾಣಕ್ಕೆ ಟಿಕೆಟ್ ದೊರೆಯುತ್ತಿದ್ದು .
• ನಮ್ಮ ದೇಶದ ಒಂದು ಭಾಗವಾದ ಅಂಡಮಾನ್ ಗೆ ತೆರಳುವುದು ಅಷ್ಟು
ಸುಲಭದಾಯಕವಾಗಿರಲಿಲ್ಲ ಅನೇಕ ವಿಧಿ ವಿಧಾನಗಳಿತ್ತು ಫಾರಿನ್ ಗೆ ಹೋಗುವ
ಹಾಗೆ ಎಲ್ಲ ರಿಗೂ ಅನುಭವ ನೀಡಿತ್ತು
• ಪ್ರವಾಸಕ್ಕೆ ತೆರಳುವ ಕೊನೆಯ ದಿನದವರೆಗೂ ಅಂಡಮಾನ್ ಗೆ ತೆರಳುವ ವಿಚಾರ
ಅತ್ಯಂತ "ಟಾಪ್ ಸೀಕ್ರೆಟ್ " ಆಗಿ ಇಡಬೇಕೆಂಬ ಆಲೋಚನೆ ತೇಜಸ್ವಿ ಮತ್ತು ಅವರ
ಸ್ನೇಹಿತರದಾಗಿತ್ತು ಆದರೆ ಅದು ಟಾಪ್ ಸೀಕ್ರೆಟ್ ಆಗಿ ಉಳಿಯಲಿಲ್ಲ , ಎಲ್ಲ ರೂ ತಮಗೆ
ತಿಳಿದಂತಹ ಅನೇಕರಿಗೆ ಇದನ್ನು ಹಂಚಿಕೊಂಡಿದ್ದ ರು. ಅಂಡಮಾನ್ ಗೆ ಹೋಗುವುದರ
ಬಗ್ಗೆ ಊರಿನಲ್ಲಿ ಅನೇಕರು ತಮ್ಮ ದೇ ಆದಂತಹ ಅನೇಕ ಅಭಿಪ್ರಾಯಗಳನ್ನು
ವ್ಯ ಕ್ತಪಡಿಸಿದ್ದ ರು .

• *ಅಂಡಮಾನ್ ಸಮುದ್ರದ ನಡುವೆ ಇರುವ ದ್ವೀಪವಾಗಿರುವುದರಿಂದ ಅಸಾಧ್ಯ ಸಕ್ಕ ಸಖೆ
ಇರುತ್ತದೆ ಎಂದು
• * ನಿಮಗೆ ಏನಪ್ಪಾ ಆರಾಮವಾಗಿದ್ದೀರಿ ಯಾವಾಗ ಬೇಕೆಂದರೆ ಎಲ್ಲಿಗೆ ಬೇಕಾದರೂ ಅಲ್ಲಿಗೆ
ಹೋಗಬಹುದು
• * ಹಡಗಿನಲ್ಲಿ ಹೋಗುತ್ತಿದ್ದೀರಿ ಅದರ ಕಷ್ಟ ನಿಮಗೆ ಮುಂದೆ ಗೊತ್ತಾಗುತ್ತದೆ ಹೋಗಿ ಹೋಗಿ
ಎಂದು
• * ಎಲ್ಲಾ ಬಿಟ್ಟು ಅಲ್ಲಿಗೆ ಯಾಕ್ರೀ ಹೋಗ್ತೀರಾ ಆ ಮುಠ್ಠಾಳ ಮುಂಡೆ ಗಂಡ್ರು ರಿಸರ್ಚ್ ನವರ
ಮಾತನ್ನು ಕೇಳಿ ನಿಮಗೂ ತಲೆ ಕೆಟ್ಟಿದೆ , ಅವರೇನೋ ಹುಳ ಹುಟ್ಟ ಹಿಡಿಯೋದಕ್ಕೆ ಅಲ್ಲಿಗೆ
ಹೋಗಿರುತ್ತಾರೆ ಆದರೆ ನಿಮಗೆ ಏನಾಗಿದೆ ಹೇಳಿ?
• ಹೀಗೆ ಅನೇಕ ಅಭಿಪ್ರಾಯಗಳನ್ನು ವ್ಯ ಕ್ತಪಡಿಸುತ್ತಿದ್ದ ರು . ಇವುಗಳನ್ನು ಕಿವಿಗೆ ಹಾಕಿಕೊಳ್ಳ ದೆ
ಅಂತಿಮವಾಗಿ ಪ್ರವಾಸಕ್ಕೆ ಹೋಗುವ ಆಲೋಚನೆಯನ್ನು ಲೇಖಕರು ಮುಂದುವರಿಸಿದರು,
ತುಂಬಾ ಆಲೋಚನೆ ಮಾಡಿ ಜವಾಬ್ದಾರಿಯಿಂದ ಲೆಕ್ಕಾಚಾರ ಮಾಡಿ ಫೆಬ್ರವರಿ ತಿಂಗಳಿನ
ಮೊದಲ ವಾರ ಅಂಡಮಾನ್ ಪ್ರವಾಸಕ್ಕೆ ತೆರಳುವುದರ ಬಗ್ಗೆ ತಮ್ಮ ಇತರ ಸ್ನೇಹಿತರಿಗೆ
ತಿಳಿಸಿದ್ದ ರೂ ಆದರೆ ಅವರ ಎಲ್ಲಾ ಲೆಕ್ಕಾಚಾರಗಳು ತಲಕೆಳಗಾಗಿತ್ತು ಕಾರಣ ಅವರಿಗೆ
• ಅಂಡಮಾನ್ ಗೆ ತೆರಳಲು 1990ರ ದಶಕದಲ್ಲಿ ಅನೇಕ ತೊಡಕುಗಳಿದ್ದ ವು ಆ ಕಾಲದಲ್ಲಿ
ರಾಜೀವ್ ಗಾಂಧಿ ಅವರು ಅಂಡಮಾನ್ ಗೆ ತೆರಳುತ್ತಿದ್ದ ಕಾರಣ ಇತರರಿಗೆ ವೀಸಾ
ಕೊಡುತ್ತಿರಲಿಲ್ಲ ವಂತೆ ಎಂಬ ಅಭಿಪ್ರಾಯವಿತ್ತು , ಅಂಡಮಾನ್ ನಲ್ಲಿ ಸಿಐಡಿ ಗಳು
ಇರುತ್ತಾರೆ ದೇಶದ ಎಲ್ಲಾ ಕಡೆ ಉಗ್ರಗಾಮಿಗಳು ಚದುರಿರುವುದರಿಂದ ಈ ರೀತಿ
ಕಟ್ಟೆಚ್ಚ ರವನ್ನು ವಹಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು ,
• ಇದನ್ನು ಕೇಳಿ ಪ್ರವಾಸ ತುಂಬಾ ಕಷ್ಟ ಸಾಧ್ಯ ಎಂದೆನಿಸಿತ್ತು ಇನ್ನು ಕೆಲವರು
ಅಂಡಮಾನ್ ಪ್ರವಾಸಕ್ಕೆ ಇರುವ ಇನ್ನೊಂದು ತೊಡಕಿನ ಬಗ್ಗೆ ಉಲ್ಲೇಖಿಸಿದ್ದ ರು ನಿಮಗೆ
ಹಡಗಿನ ಟಿಕೆಟ್ ಸಿಕ್ಕಿ ದರೂ ನೀವು ಅಂಡಮಾನ್ ಗೆ ಹೋಗ್ತಿರೆಂದು ತಿಳಿಯಬೇಡಿ ,
ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತಗಳು ಪದೇಪದೇ ಎಳುವುದರಿಂದ
ಹವಾಮಾನ ಇಲಾಖೆ ಆದರ ಬಗ್ಗೆ ವರ್ತಮಾನವನ್ನೇನಾದರೂ ಕೊಟ್ಟ ರೆ ಹಡಗು
ಹೊರಡದೆ ರದ್ದಾಗುತ್ತದೆ ಎಂದು ಹೇಳಿದ್ದ ರು
ಉಪಸಂಹಾರ
• ಭಾರತ ಪಾಕಿಸ್ತಾನ ಯುದ್ಧ ದ ಕಾರಣ ರೈಲು ಸಂಚಾರ ರದ್ದು ಮಾಡಲಾಗುತ್ತದೆ ಎಂಬ
ಸುದ್ದಿ ಇತ್ತು , ಅಂತೆ ಅಂಡಮಾನ್ ತೆರಳುವ ಹಡಗುಗಳ ಸಂಚಾರವು ರದ್ದಾಗುತ್ತದೆ
ಎಂದು ಲೇಖಕರು ಭಾವಿಸಿದ್ದ ರು. ಆದರೆ ಉಭಯ ಪಕ್ಷಗಳ ಮಾತುಕತೆಯಿಂದ
ಯುದ್ಧ ಅಸಂಭವಾಗಿತ್ತು . ಅಂಡಮಾನ್ ಗೆ ತೆರಳಲು ಇದ್ದ ಎಲ್ಲಾ ತೊಡಕುಗಳು
ಬಗೆಹರಿದರು ಸಹ ಸ್ನೇಹಿತರಾದ ಪ್ರಶಾಂತರಿಂದ ತೇಜಸ್ವಿ ಅವರಿಗೆ ಅಂಡಮಾನ್
ಪ್ರವಾಸಕ್ಕೆ ಅಂಡಮಾನ್ ಅಧಿಕಾರಿಗಳಿಂದ ಅನುಮತಿ ಸಿಕ್ಕಿ ದರ ಬಗ್ಗೆ ಯಾವ ಪತ್ರವೂ
ಬಂದಿರಲಿಲ್ಲ .
• ಒಟ್ಟಾರೆಯಾಗಿ ಅಂಡಮಾನ್ ಕನಸುಗಳು ಎಂಬ ಈ ಲೇಖನದಲ್ಲಿ ಪ್ರವಾಸದ ಬಗ್ಗೆ
ತೇಜಸ್ವಿ ಅವರಿಗಿದ್ದ ಅಭಿಪ್ರಾಯಗಳು 1990ರ ದಶಕದಲ್ಲಿ ಅಂಡಮಾನ್ ಪ್ರವಾಸಕ್ಕೆ
ತೆರಳಲು ಇದ್ದ ನೀತಿ ನಿಯಮ, ಅಂಡಮಾನ್ ಪ್ರವಾಸಕ್ಕೆ ತಳಲು ತಮ್ಮ ತಮ್ಮ
ಸ್ನೇಹಿತರೊಡಗೂಡಿ ಹಾಕಿಕೊಂಡ ಯೋಜನೆಗಳು , ಅದರ ಯಶಸ್ಸು ,ಸೋಲುಗಳನ್ನ
ಸವಿಸ್ತಾರವಾಗಿ ತಿಳಿಸಲಾಗಿದೆ ಅಂತಿಮವಾಗಿ ಲೇಖಕರು ಅಂಡಮಾನ್ ಪ್ರವಾಸವನ್ನು
ಮಾಡಿ ಅದರ ವಿಶೇಷ ಅನುಭವಗಳನ್ನ ತಮ್ಮ ಪ್ರವಾಸ ಕಥನದಲ್ಲಿ ಸವಿಸ್ತಾರವಾಗಿ
ಉಲ್ಲೇಖಿಸಿದ್ದಾರೆ.

You might also like